ಶ್ರೀ ರಾಮಚಂದ್ರಾಪುರ ಮಠ
ಶ್ರೀ ಕ್ಷೇತ್ರ ಗೋಕರ್ಣದ ಸುಂದರ ಕಡಲ ಕಿನಾರೆಯಲ್ಲಿ, ಸನಾತನ ಧರ್ಮ ಪುನರುತ್ಥಾನದ ಅವತಾರ ಪುರುಷ ಆದಿ ಶಂಕರರಿಂದ ಸ್ಥಾಪಿತ ಪ್ರಮುಖ ಪೀಠ ಶ್ರೀ ರಾಮಚಂದ್ರಾಪುರ ಮಠ. ಅವರ ಕರಕಮಲದಿಂದಲೇ ಪೀಠ ಪರಂಪರೆಗೆ ಅನುಗ್ರಹಿತವಾದದ್ದು ಚಂದ್ರಮೌಳೀಸ್ವರ ಲಿಂಗ, ಸೀತಾ-ಲಕ್ಷ್ಮಣ ಸಹಿತ ಶ್ರೀರಾಮಚಂದ್ರ ವಿಗ್ರಹಗಳು. ಅವುಗಳ ಆರಾಧನೆ, ಉಪಾಸನೆ ಅನುಷ್ಟಾನವಾಗಿ ಈ ವರೆಗಿನ 36 ಪೀಠಾಧಿಪತಿಗಳಿಂದ ನಡೆಯುತ್ತಾ ಬಂದಿರುವುದು ವಿಶೇಷ.
ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಚಿತ್ರದ ಮೇಲೆ ಕ್ಲಿಕಿಸಿ
