ಹರೇ ರಾಮ

Official website of Shrimadjagadguru Shankaraachaarya
Shri Shri Raghaveshwara bharathi swamiji

Jagadguru shankaracharya mahasamsthanam
shri samsthana gokarna shriramachandrapuramath


CATEGORIES

SEARCH

NEWSLETTER

ಮಹಿಳೋದಯ

ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿ ಅವರ ಆರ್ಥಿಕ ಗುಣಮಟ್ಟವನ್ನು  ಹೆಚ್ಚಿಸಬಲ್ಲ ಯೋಜನೆ ‘ಮಹಿಳೋದಯ’. ನಿರುದ್ಯೊಗ ನಮ್ಮ ದೇಶದ ದೊಡ್ಡ ಸಮಸ್ಯೆ. ಆಗಬೇಕಾದ ಕೆಲಸಗಳು ಬಹಳ ಇವೆ; ಕೆಲಸ ಬೇಕೆಂಬ ಹಂಬಲನವುಳ್ಳವರೂ ಅನೇಕರಿದ್ದಾರೆ. ಹೀಗಿದ್ದರೂ ನಿರಿದ್ಯೋಗ ಸಮಸ್ಯೆ ಇಂದಿನ ಸಮಾಜವನ್ನು ಕಾಡುತ್ತಿರುವುದು ಒಂದು ದೊಡ್ಡ ವಿಪರಾಸ್ಯವೇ ಸರಿ. ಯೋಗ್ಯ ರೀತಿಯಲ್ಲಿ ನಮ್ಮ ಸಂಪಲ್ಮೂಲಗಳು ಬಳಕೆಯಾಗದಿರುವುದೇ ನಿರುದ್ಯೋಗದ ಮೂಲ. ಈ ಸಮಸ್ಯೆಯನ್ನು ಇಲ್ಲವಾಗಿಸಿ ಗ್ರಾಮೀಣ ಭಾಗಗಳಲ್ಲಿಯೂ ಕೃಷಿಯೊಂದಿಗೆ ಹೊಂದಿಕೊಳ್ಳಬಹುದಾದ, ಮನೆಯಲ್ಲಿಯೇ ನಿರ್ವಹಿಸಬಹುದಾದ ಚಿಕ್ಕ ಚಿಕ್ಕ ಉದ್ಯೋಗಳಲ್ಲಿ ಶ್ರೀಮಠದಿಂದ ತೊಡಗಿಸಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ ವಿವಿಧ ರೀತಿಯ ಉತ್ಪನ್ನಗಳ ತಯಾರಿಕೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಕುಂಕುಮ ತಯಾರಿಕೆ, ಹಪ್ಪಳ, ಸಂಡಿಗೆ ಇತ್ಯಾದಿಗಳನ್ನು ಸಿದ್ದಪಡಿಸಿ, ಅವುಗಳ ಮಾರಾಟಕ್ಕೆ  ಅವರೇ ಸ್ಥಾಪಿಸಿದ ಸಹಕಾರಿ ಮಳಿಗೆಗಳನ್ನು ಬಳಸಿಕೊಳ್ಳಲಾಗುವುದು. ಈ ರೀತಿಯ ವ್ಯವಸ್ಥೆಯನ್ನು ಈಗಾಗಲೇ ಕಾಸರಗೋಡಿನ ‘ಬದಿಯಡ್ಕ’ದಲ್ಲಿ ಸ್ಥಾಪಿಸಲಾಗಿದೆ.

ಛಾಯಾಚಿತ್ರಗಳು:

Powered By Indic IME