ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.
ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ ಕಾಲದಲ್ಲಿ. ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು.
ಭಕ್ತರ ’ಸಿರಿ’, ಧರ್ಮಸ್ಥಳ ಕ್ಷೇತ್ರ
ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು ಮತ್ತು ಆ ದಿನಗಳಲ್ಲಿ ಸಮಾಜದಲ್ಲಿ ಅವರಿಗಿದ್ದ ವ್ಯಕ್ತಿತ್ವ ಬಹಳ ದೊಡ್ಡದಾಗಿತ್ತು. ಆದರೆ ನನ್ನ ವಯಸ್ಸಿಗೂ ಅವರ ವಯಸ್ಸಿಗೂ ಬಹಳ ಅಂತರ ಇದ್ದಿದ್ದರಿಂದ ಅವರ ಸಾಮೀಪ್ಯದ ಅವಕಾಶ ನನಗೆ ಹೆಚ್ಚಾಗಿ ಸಿಕ್ಕಿರಲಿಲ್ಲ. ಆದರೆ, ರಾಘವೇಶ್ವರ ಪೂಜ್ಯರು ಪೀಠಾಧಿಕಾರಿಗಳಾದ ಮೇಲೆ ಅವರ ಮತ್ತು ನಮ್ಮ ನಡುವೆ ವಿಶ್ವಾಸ ಹೆಚ್ಚಿನದಾಗಿ ಬೆಳೆದಿದೆ. ಅನೇಕ ಬಾರಿ ನಾನು ಶ್ರೀಗಳ ಜೊತೆ ಕಳೆದಿದ್ದೇನೆ. ಅನೇಕ ಸಂದರ್ಭಗಳಲ್ಲಿ ನಾವು ಅವರ ಜೊತೆಗೆ ಖಾಸಗಿಯಾಗಿ ಸಂತೋಷದ ಕ್ಷಣಗಳನ್ನು ಕಳೆದದ್ದೂ ಉಂಟು. ಆತ್ಮೀಯತೆಯಿಂದ ಇಬ್ಬರೂ ನಕ್ಕು ನಲಿದಿದ್ದೇವೆ. ಅವರ ಸಾಮೀಪ್ಯ ನನಗೆ ಬಹಳ ಇಷ್ಟವಾದ ವಿಚಾರ.
ಇಂತಹ ಸಂದರ್ಭಗಳಲ್ಲಿ ನಾನು ಅವರಲ್ಲಿ ಕಂಡ ಒಂದು ಗುಣವೆಂದರೆ ‘ವಿಷಯಗಳನ್ನು ಸಂಗ್ರಹಿಸಬೇಕು, ವಿಷಯಗಳನ್ನು ತಿಳಿದುಕೊಳ್ಳಬೇಕು’ ಅನ್ನುವ ಹಂಬಲ ಮತ್ತು ಕುತೂಹಲ. ಅವರು ಅನೇಕ ವಿಷಯಗಳ ಕುರಿತು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ನಾವು ಕೂಡ ನಮ್ಮ ಅನುಭವ ಏನು ಹೇಗೆ ಎನ್ನುವುದನ್ನು ತಿಳಿಸಿದ್ದಿದೆ. ಬಹುಶಃ ಪೀಠಕ್ಕೆ ಬಂದಮೇಲೆ, ಜಗದ್ಗುರುಗಳಾದಮೇಲೆ ಇನ್ನೊಬ್ಬರ ಮಾತು ಕೇಳುವವರು ಬಹಳ ಕಡಿಮೆ. ಹೇಳುವವರೇ ಹೆಚ್ಚು, ತಾವು ಸರ್ವಜ್ಞರು ಅಂತ ತಿಳಿದುಕೊಳ್ಳುವವರೇ ಜಾಸ್ತಿ. ಆದರೆ ಇನ್ನೊಬ್ಬರ ಅನುಭವವನ್ನು ಗೌರವಿಸುವ, ಇನ್ನೊಬ್ಬರ ಬಳಿ ಕೇಳಬೇಕು, ಮತ್ತೊಬ್ಬರ ಬಳಿ ತಿಳಿದುಕೊಳ್ಳಬೇಕು ಅನ್ನುವ ಪೂಜ್ಯರ ಬಿಚ್ಚುಮನಸಿನ ಆತ್ಮೀಯತೆ ನನಗೆ ಬಹಳ ಸಂತೋಷ ಕೊಡುತ್ತದೆ. ಹಾಗಾಗಿ ಎಷ್ಟೋ ಬಾರಿ ನಾವು ಕೂಡ ಅವರಿಗೆ ಸಂದೇಶವನ್ನು ಕೊಡುತ್ತ ಇರುತ್ತೇವೆ.
ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಿಜವಾಗಿಯೂ ಕಾಲಕ್ಕೆ ಸರಿಯಾದಂತಹ ಮನೋಧರ್ಮವನ್ನು ಹೊಂದಿದಂತಹ ಪೀಠಾಧಿಕಾರಿಗಳು. ಯಾಕೆಂದರೆ ಸಮಾಜ ಮತ್ತು ಕಾಲ ಎರಡೂ
ಶ್ರೀ ವೀರೇಂದ್ರ ಹೆಗ್ಗಡೆಯವರು
ಪರಿವರ್ತನಾಶೀಲವಾದದ್ದು. ಪರಿವರ್ತನೆ ಸದಾ ಆಗುತ್ತಲೇ ಇರುತ್ತದೆ. ಅದರಲ್ಲಿ ಚಿರಂತನವಾಗಿ ಚಲನಶೀಲತೆ ಇರುತ್ತದೆ. ಈ ಚಲನಶೀಲತೆಯಲ್ಲಿ ನಮ್ಮ ವ್ಯಕ್ತಿತ್ವವನ್ನು ಬಿಡದೆ ಸಮಾಜದ ಪ್ರವಾಹದ ಒಟ್ಟಿಗೆ ಹೋಗಬೇಕಾಗುತ್ತದೆ. ಹಾಗಾಗಿ, ಚಲನಶೀಲತೆ ಅಂದರೆ ಎಲ್ಲದನ್ನೂ ಹೊಂದಿಸಿಕೊಂಡು ಹೋಗುವಂತಹದ್ದು ಅಂತ ಅಲ್ಲ. ಆದರೂ ಕಾಲ ದೇಶ ರಾಜಕೀಯ ಇನ್ನಿತರ ವಸ್ತು ಸ್ಥಿತಿಗಳನ್ನು ಅರ್ಥ ಮಾಡಿಕೊಂಡು, ಶಿಷ್ಯರಲ್ಲಿಯೂ ಸಮಾಜದಲ್ಲಿಯೂ ದೇಶದಲ್ಲಿಯೂ ಆಗಿರತಕ್ಕಂತಹ ಬದಲಾವಣೆಯನ್ನು ಗುರುತಿಸಿಕೊಂಡು, ತಮ್ಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವಂತಹದ್ದು ಬಹಳ ಅವಶ್ಯಕತೆ ಇದ್ದು, ಆ ದಿಶೆಯಲ್ಲಿ ಇಂದಿನ ದಿನಗಳಲ್ಲಿ ನನಗೆ ಮುಖ್ಯವಾಗಿ ಕಾಣುವಂತಹದ್ದು ಶ್ರೀರಾಘವೇಶ್ವರ ಶ್ರೀಗಳವರು. ಅವರು ತಮ್ಮ ವ್ಯಕ್ತಿತ್ವವನ್ನು ಕಾಲಕ್ಕೆ ಸರಿಯಾದ ಹಾಗೆ ಪರಿವರ್ತನೆಗೊಳಿಸಿಕೊಂಡಿದ್ದಾರೆ. ಮಠದ ಅನೇಕ ಶಿಸ್ತುಗಳು, ರೀತಿ ರಿವಾಜುಗಳು, ಸಂಪ್ರದಾಯಗಳು, ಅಲ್ಲದೇ ಅನೇಕ ಪೂಜಾದಿ ಕ್ರಿಯಾಭಾಗಗಳು ಇದನ್ನೆಲ್ಲವನ್ನೂ ಉಳಿಸಿಕೊಂಡು ಅದರ ಜೊತೆಜೊತೆಗೆ ಅದನ್ನೂ ಹೇಗೆ ಎಷ್ಟರ ಮಟ್ಟಿಗೆ ಸರಳೀಕರಿಸಿಕೊಳ್ಳಬಹುದು ಅನ್ನುವುದನ್ನೂ ಕೂಡ ಅರ್ಥ ಮಾಡಿಕೊಂಡಿದ್ದಾರೆ.
ಇನ್ನೊಂದು ಬಹಳ ಮುಖ್ಯವಾದ ಅಂಶವೇನೆಂದರೆ ಗುರು ಯಾವಾಗಲೂ ಭಕ್ತನಿಗೆ ಆತ್ಮೀಯನಾಗಿರಬೇಕು. ಬಹಳ ಹತ್ತಿರ ಇರಬೇಕು. ಆ ಆತ್ಮೀಯತೆ ಬರುವುದು ಹೇಗೆ ಎನ್ನುವುದು ಬಹಳ ಕಷ್ಟದ ಪ್ರಶ್ನೆ. ಏಕೆಂದರೆ ಆತ್ಮೀಯತೆ ಬೇಕಾದ ಹಾಗೆ ಬರುವಂತಹದ್ದಲ್ಲ. ಶಿಷ್ಯರಿಗೆ ಬೇಕಾದ ಹಾಗೆ ಇರುವಂತಹದ್ದಲ್ಲ. ‘ಗುರು ಶಿಷ್ಯರನ್ನು ಆಕರ್ಷಿಸುವಂತವನಾಗಿರಬೇಕು, ಅವರ ಚಿತ್ತವನ್ನು ಅಪಹರಿಸುವಂತವನಾಗಿರಬೇಕು’ ಅಂತ ಒಂದು ಮಾತಿದೆ. ಶಿಷ್ಯರ ಚಿತ್ತಾಕರ್ಷಣೆ ಮಾಡಬೇಕಾದರೆ ಅದು ಗುರುವಿನ ವ್ಯಕ್ತಿತ್ವದಿಂದ ಆಗಬೇಕು. ಮಾತಿನಿಂದ ಆಕರ್ಷಿಸಬೇಕು. ಮತ್ತೆ ಹೃದಯಪೂರ್ವಕವಾಗಿ ಆಕರ್ಷಿಸಬೇಕು. ನಾನು ಕಂಡ ಹಾಗೆ ಶ್ರೀಗಳಲ್ಲಿ ಮಾತೃ ಹೃದಯವಿದೆ. ಬಹಳ ಸವಿಯಾದ ಮಾತನಾಡುವಂತಹ ಅಭ್ಯಾಸ ಇದೆ, ಸಂಸ್ಕಾರ ಇದೆ. ಅವರ ಧ್ವನಿಯೂ ಕೂಡ ಆಕರ್ಷಕವಾದದ್ದು. ಹೀಗಾಗಿ ಮೂರೂ ಅವರಲ್ಲಿ ಬೆರೆತಿದೆ: ಮುಖದ ತೇಜಸ್ಸು, ವಾಕ್ಷ ಕ್ತಿ, ಮಾತೃ ಹೃದಯ. ಅದರ ಜೊತೆಗೆ ಅವರ ಧ್ವನಿ ಕೂಡ ಪ್ರಭಾವಶಾಲಿ. ಇದು ಅವರು ಎಲ್ಲೇ ಹೋದರೂ ಶಿಷ್ಯರು ಆಕರ್ಷಿತರಾಗುವಂತೆ ಮಾಡಿದೆ. ಅದರ ಜೊತೆಗೆ ನಾನು ಕಂಡ ಹಾಗೆ, ಅವರು ಅವರ ಶಿಷ್ಯ ಸಮುದಾಯದವರನ್ನಲ್ಲದೇ ಇತರ ಸಮಾಜದವರನ್ನೂ ಕೂಡ ಸಮಾನವಾಗಿ ಆಕರ್ಷಿಸುತ್ತಾರೆ. ಉದಾಹರಣೆಗೆ, ಕಡೂರಿನ ಕೃಷಿ ಮೇಳಕ್ಕೆ ಅವರು ಬಂದಿದ್ದರು. ಅಲ್ಲಿ ಸಹಜವಾಗಿಯೇ ಎಲ್ಲ ಸಮಾಜದವರೂ , ಸಂಪ್ರದಾಯದವರೂ, ಮತಧರ್ಮದವರೂ ಇದ್ದರು. ಅಂದಿನ ಅವರ ಮಾತು ಹೇಗಿತ್ತೆಂದರೆ, ಸರ್ವಧರ್ಮಗಳಿಗೂ , ಎಲ್ಲ ಜಾತಿಮತಪಂಥದವರಿಗೂ ಅನುಗುಣವಾಗಿ, ಆಕರ್ಷಣೀಯವಾಗಿ ಇತ್ತು. ಮತ್ತು ಅದು ಸಭೆಗೆ ಉಪಯುಕ್ತವಾಗಿರತಕ್ಕಂತಹ ಸಂದೇಶವಾಗಿತ್ತು. ಪ್ರವಚನ ಪ್ರಾರಂಭ ಮಾಡಿ ಹತ್ತು ನಿಮಿಷದ ಒಳಗೆಯೇ ಅವರು ಎಲ್ಲರನ್ನೂ ಆಕರ್ಷಿಸಿಬಿಟ್ಟರು. ಇಂತಹ ಶಕ್ತಿ ಬಹಳ ಕಡಿಮೆ ಜನರಿಗೆ ಇರುತ್ತದೆ. ಅಲ್ಲದೆ ಅವರ ಮಾತಿನಲ್ಲಿ ಸಹಜತೆ ಇರುತ್ತದೆ. ಅವರು ಪ್ರವಚನ ಕೊಡುವಾಗ ಅಲ್ಲಿನ ಸಂದರ್ಭಕ್ಕೆ ಸರಿಯಾಗಿ ಏನೋ ಮೇಲೆಮೇಲೆ ಮಾತನಾಡುವುದಲ್ಲ, ಹೃತ್ಪೂರ್ವಕವಾಗಿ ಮಾತು ಹೊರಗೆ ಬರುತ್ತದೆ.
ಶ್ರೀ ಹೆಗ್ಗಡೆಯವರ ಹವ್ಯಾಸ - ಹಳೆಕಾರುಗಳ ಸಂಗ್ರಹ
ನಾನು ಅವರಲ್ಲಿ ಕಂಡ ಮತ್ತೊಂದು ಗುಣವೆಂದರೆ, ಅವರು ಎಲ್ಲರನ್ನೂ ಮೆಚ್ಚುತ್ತಾರೆ, ಪ್ರಶಂಸೆ ಮಾಡುತ್ತಾರೆ ಮತ್ತು ಅವರಿಗೆ ಬೇಕಾದ ಪ್ರೇರಣೆಯನ್ನು ಕೊಡುತ್ತಾರೆ. ಬಹಳ ಕಡಿಮೆ ವ್ಯಕ್ತಿಗಳಿಗೆ ಇಂತಹ ಒಂದು ಮನೋಧರ್ಮ ಇರುತ್ತದೆ. ಅಂದರೆ ಮೆಚ್ಚಿ ಮಾತನಾಡುವಾಗ ಕೆಲವರು ಸ್ವಲ್ಪ ಹತೋಟಿ ಇಟ್ಟುಕೊಳ್ಳುತ್ತಾರೆ. ಎಲ್ಲಿಯಾದರೂ ನಾವು ಇನ್ನೊಬ್ಬರನ್ನು ಪ್ರಶಂಸೆ ಮಾಡಿದರೆ ಅತಿಯಾದೀತೇನೋ, ಈ ರೀತಿ ಹೇಳಿದರೆ ಅವರೇನು ಅಂದುಕೋಳ್ಳುತ್ತಾರೋ, ಜನ ಎನೆಂದುಕೊಳ್ಳುತ್ತಾರೋ ಎಂಬ ಹಾಗೆ. ಆದರೆ ಇವರದು ಹಾಗಲ್ಲ, ಮಾತೃಹೃದಯದಿಂದ ಅವರು ಎಲ್ಲರ ಒಳ್ಳೆಯ ವಿಷಯಗಳನ್ನೂ ಮೆಚ್ಚುತ್ತಾರೆ. ಮೆಚ್ಚುವಾಗ ಧಾರಾಳವಾಗಿ ಮೆಚ್ಚುತ್ತಾರೆ. ಅದೇ ರೀತಿಯಲ್ಲಿ ಧಾರಾಳವಾಗಿ ಅವರಿಗೆ ಬೇಕಾದ ಮಾರ್ಗದರ್ಶನವನ್ನೂ ಕೊಡುತ್ತಾರೆ. ಹೀಗಾಗಿ ಅವರ ವ್ಯಕ್ತಿತ್ವ ವಿಶೇಷವಾಗಿ ಇವತ್ತು ಎಲ್ಲರ ಗಮನ ಸೆಳೆದಿದೆ.
ಮಠದ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ ಒಂದೆರೆಡು ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ಗುರಿ ಇಟ್ಟುಕೊಂಡು ಮಾಡಿದರೆ ಆಗ ನಮ್ಮ ಕಾರ್ಯಕ್ರಮ ಸಫಲತೆಯನ್ನು ಹೊಂದುತ್ತದೆ. ಶ್ರೀಗಳು ಅವರ ಪೂಜೆ ಪಾಠ ಪ್ರವಚನ ಇವೆಲ್ಲ ಕಾರ್ಯಕ್ರಮಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಗೋಸಂರಕ್ಷಣೆ ವಿಷಯದಲ್ಲಿ ಅವರು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಮಾಡಿದಂತಹ ಒಂದು ಕಾರ್ಯಕ್ರಮದಿಂದಾಗಿ ಇವತ್ತು ಇಡೀ ದೇಶದಲ್ಲಿಯೇ ಒಂದು ಅದ್ಭುತವಾದಂತಹ ವಿದ್ಯುತ್ಸಂಚಾರ ಆಗಿದೆ. ಗೋವಿನ ಬಗ್ಗೆ ಗೌರವ ಕೊಡುವ ಸಂದರ್ಭದಿಂದ ಹಿಡಿದು ರಕ್ಷಣೆ ಮಾಡುವಂತಹದ್ದು, ಪೋಷಣೆ ಮಾಡುವಂತಹದ್ದು ಮತ್ತು ಅದರ ಬೆಳವಣಿಗೆಗೆ ಬೇಕಾದಂತಹ ಎಲ್ಲ ಮಾರ್ಗದರ್ಶನವನ್ನೂ ಕೂಡ ಕೊಟ್ಟಿದ್ದಾರೆ. ಇದು ಇವತ್ತು ಬಹಳ ಪರಿವರ್ತನೆಯನ್ನು ತಂದಿದೆ. ಒಂದು ಸಂದರ್ಭದಲ್ಲಿ ಇಂತಹ ಗೋಸಂರಕ್ಷಣೆ ಅನ್ನುವಂತಹದ್ದು ಕೇವಲ ಭಕ್ತಿಯ ಮಾತಾಗಿತ್ತು. ಹಿಂದುಗಳು ಗೋಮಾತೆಯನ್ನು ರಕ್ಷಿಸಬೇಕು ಇಷ್ಟೇ ಆಗಿತ್ತು. ಆದರೆ ಅದಕ್ಕಿಂತ ಎರಡು ಮೂರು ಹೆಜ್ಜೆ ಮುಂದೆ ಹೋಗಿ ಕೇವಲ ಗೌರವಿಸಿ, ಪೂಜೆ ಮಾಡಿ ಆರಾಧಿಸುವುದಲ್ಲ. ಅದರ ಜೊತೆಗೆ ಅದನ್ನ ಮಾತೃವಾಗಿ ಕಂಡು, ಮಾತೃವಿನ ಮೇಲಿನ ಗೌರವದಿಂದ ನಾವು ಅದನ್ನು ಪೋಷಿಸಿಕೊಂಡು ಬರಬೇಕು, ಗೌರವಿಸಬೇಕು ಅನ್ನುವುದನ್ನು ಅವರು ತೋರಿಸಿಕೊಟ್ಟಿರುವುದರಿಂದ ಇದು ಇಂದು ಅತ್ಯಂತ ಪ್ರಬಲವಾದ ಆಂದೋಲನವಾಗಿ ಪರಿಣಮಿಸಿದೆ.
ನಾವಿದನ್ನು ಆಂದೋಲನ ಅಂತ ಹೇಳುತ್ತೇನೆ. ಎಷ್ಟೋ ಜನ ಉತ್ತರಭಾರತದಿಂದ ಧರ್ಮಸ್ಥಳಕ್ಕೆ ಬಂದವರು ಅವರನ್ನು ಅವರು ಪರಿಚಯಿಸಿಕೊಳ್ಳುವಾಗ ನಾವು ಗೋಸಂರಕ್ಷಣೆಯ ಕೆಲಸದಲ್ಲಿದ್ದೇವೆ ಅಂತ ಪರಿಚಯಿಸಿಕೊಳ್ಳುತ್ತಾರೆ.
ಶ್ರೀ ವೀರೇಂದ್ರ ಹೆಗ್ಗಡೆಯವರು, ಸಂದರ್ಶನ ಸಮಯದಲ್ಲಿ
ನಾವು ನಮ್ಮ ಆಶ್ರಮದಲ್ಲಿ ಅಥವಾ ಸಂಸ್ಥೆಯಲ್ಲಿ ಇಷ್ಟು ಸಂಖ್ಯೆಯ ಗೋವುಗಳನ್ನು ರಕ್ಷಿಸುತ್ತೇವೆ ಅಂತ ಹೇಳುತ್ತಾರೆ. ಬಹುಶಃ ಈ ಆಂದೋಲನಕ್ಕಿಂತ ಮೊದಲು ಅವರು ಹೀಗೆ ಹೇಳಿಕೊಳ್ಳುತ್ತಾ ಇದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಂತೂ ಇದನ್ನು ಬಹಳ ಅಭಿಮಾನದಿಂದ, ಹೆಮ್ಮೆಯಿಂದ, ಕರ್ತವ್ಯ ದೃಷ್ಟಿಯಿಂದ ಹೇಳಿಕೊಳ್ಳುತ್ತಾರೆ. ಪೂಜ್ಯರ ಆಂದೋಲನ ಎಷ್ಟು ಯಶಸ್ವಿಯಾಗಿದೆ ಅಂದರೆ ಎಲ್ಲರ ಗಮನ ಅದರ ಕಡೆ ಹರಿದಿದೆ. ಅನೇಕ ಪರಿವರ್ತನೆಗಳು ಗೋಚರವಾಗಿ ಅಗೋಚರವಾಗಿ ಆಗುತ್ತಾ ಇವೆ. ಗೋಸಂರಕ್ಷಣೆ ಮತ್ತು ಗೋಹತ್ಯೆ ವಿರೋಧವಾಗಿ ಆಗುತ್ತಿರುವ ಕಾರ್ಯಕ್ರಮಗಳು ಗೋಚರವಾಗಿ ಆಗುತ್ತಿರುವ ಕಾರ್ಯಕ್ರಮಗಳು. ಅಗೋಚರವಾಗಿ ಕೂಡ ಅನೇಕ ಕಡೆ ಕಾರ್ಯಗಳು ನಡೆಯುತ್ತಿವೆ. ಉದಾಹರಣೆಗೆ ನಮ್ಮಲ್ಲಿಯೇ ನಾವು ಹಸುವನ್ನೋ ಕರುವನ್ನೋ ಕೇಳಿದವರಿಗೆ ಕೊಡುವಾಗ ಯಾರು ತೆಗೆದು ಕೊಳ್ಳುತ್ತಾರೆ, ಅವರಲ್ಲಿ ಭೂಮಿ ಇದೆಯೇ, ಅವರಲ್ಲಿ ಸಂರಕ್ಷಣೆ ಮಾಡತಕ್ಕಂತಹ ಸಾಮರ್ಥ್ಯ ಇದೆಯೇ ಅಂತ ಪರಿಶೀಲಿಸುತ್ತೇವೆ. ಭೂಮಿ ಇದೆ, ಸಂರಕ್ಷಿಸುತ್ತಾರೆ ಅಂತ ಬರವಣಿಗೆಯಲ್ಲಿ ಕೊಟ್ಟು, ಕೊಂಡುಹೋಗಬೇಕು ಅಂತ ನಾವು ಹೇಳುತ್ತೇವೆ. ಇದು ಹಿಂದೆ ವಿಶ್ವಾಸದಲ್ಲಿ ನಡೆಯುತ್ತಾ ಇತ್ತು. ಯಾರಾದರೂ ಬಂದು ಕೇಳಿದ್ದರೆ, ಪೂರ್ವಪರ ವಿಚಾರ ಮಾಡಿ ‘ಆಯ್ತು ನೀನು ಕೊಂಡು ಹೋಗಬಹುದು’ ಅಂತ ಕೊಡುತ್ತ ಇದ್ದೆವು. ಈಗ ಈ ಎಲ್ಲ ಆಂದೋಲನಗಳೆಲ್ಲ ಆದಮೇಲೆ, ನಾವು ಎಚ್ಚರಿಕೆ ವಹಿಸಿ ಆ ಗೋವು ಸರಿಯಾಗಿ ರಕ್ಷಿಸಲ್ಪಡಬೇಕು. ಹೋದ ಜಾಗದಲ್ಲಿ ಅದು ಕೈಗಳನ್ನು ದಾಟಿ ಬೇರೆ ಆಪತ್ತಿಗೆ ಒಳಗಾಗಬಾರದು ಅನ್ನುವಷ್ಟರ ಮಟ್ಟಿಗೆ ಎಚ್ಚರಿಕೆಯನ್ನು ವಹಿಸುತ್ತೇವೆ. ಇದು ಅಗೋಚರವಾಗಿ ಆಗಿರತಕ್ಕಂತಹ ಪರಿಣಾಮಗಳು. ಹೀಗಾಗಿ ಅವರ ಆಂದೋಲನ ಬಹಳಷ್ಟು ಯಶಸ್ವಿಯಾಗಿದೆ.
ಯಾವುದೇ ಆಂದೋಲನ ಒಮ್ಮೆ ಚಾಲನೆಯಾದ ಮೇಲೆ ನಿಲ್ಲುವುದಿಲ್ಲ. ಅದು ಮುಂದುವರಿಯುತ್ತಾ ಹೋಗುತ್ತದೆ. ಬೀಜ ಹಾಕಿದವರಿಗೆ ಅಷ್ಟೇ ಕೆಲಸ ಇರೋದು.. ಅದು ವೃಕ್ಷವಾದ ಮೇಲೆ ಅದರ ಫಲಗಳನ್ನು ಯಾರೋ ತಿನ್ನುತ್ತಾರೆ. ಯಾರೂ ತಿನ್ನಲಿ ಪರವಾಯಿಲ್ಲ. ಆದರೆ ಗೋಸರಂಕ್ಷಣೆಯ ಆಂದೋಲನದ ಮೂಲ ಬೀಜಾವಾಪ ಮತ್ತು ಅದರ ಪೋಷಣೆ ಮಾಡಿದ ಕೀರ್ತಿ ಮಾತ್ರ ಶ್ರೀಗಳಿಗೇ ಸಲ್ಲುತ್ತದೆ.
ನನ್ನಲ್ಲಿ ಪೂಜ್ಯರು ತುಂಬಾ ಆತ್ಮೀಯತೆಯನ್ನಿಟ್ಟಿದ್ದಾರೆ. ಸ್ವಲ್ಪ ದಿನಗಳ ಕೆಳಗೆ ಗೋಕರ್ಣದಲ್ಲಿ ನಡೆದ ಒಂದು ಘಟನೆ ಇಡೀ ಸಮಾಜಕ್ಕೆ ಆಘಾತ ತಂದಿತ್ತು. ಅವರ ಮೇಲೆ ಅಪವಾದ ತರುವಂತಹ ಪ್ರಯತ್ನ ನಡಸಿದರು ಅಂತ ಗೊತ್ತಾಯಿತು. ಆಗ ನಾನು ಅವರಿಗೆ ದೂರವಾಣಿ ಮೂಲಕ ಮಾತನಾಡಿದೆ. ನಾನು ಹೇಳಿದೆ ’ಸ್ವಾಮೀಜಿ ನೀವು ಗಾಬರಿ ಆಗ್ಬೇಡಿ. ಇದು ತಾತ್ಕಾಲಿಕವಾಗಿ ಮೋಡ ಬಂದ ಹಾಗೆ ಬಂದಿದೆ. ಇದರಿಂದ ಹೊರಗಡೆ ಬಂದ್ಮೆಲೆ ನಿಮ್ಮ ಪ್ರಕಾಶ ಇನ್ನೂ ಜಾಸ್ತಿ ಆಗತ್ತೆ’ ಅಂತ. ಮತ್ತು, ಅವರ ಮನಸ್ಸಿಗೆ ಸ್ವಲ್ಪ ದುಗುಡ ಆಗಿತ್ತು. ಅದು ಯಾರಿಗಾದರೂ ಆಗುವಂತಹದ್ದು… ಈ ಸಂದರ್ಭದಿಂದ ತಮಗೇನಾದರೂ ಅಪಕೀರ್ತಿ ಬರುತ್ತದೋ, ಪೀಠದ ಘನತೆಗೇನಾದರೂ ತೊಂದರೆ ಬರುತ್ತದೋ ಎಂದು. ನಾನು ಹೇಳಿದೆ ‘ಇಲ್ಲ, ಅದರ ಬದಲಿಗೆ ಇಮ್ಮಡಿ ಆಗುತ್ತದೆ. ಯಾಕೆಂದರೆ ಯಾರು ಹೆಚ್ಚು ಪ್ರಸಿದ್ಧನಿರುತ್ತಾನೋ ಅವನ ಮೇಲೆ ಅಸೂಯೆ ಹೆಚ್ಚು’. ಒನಿಡಾ ಕಂಪನಿಯವರು ಟೀವಿಯ ಒಂದು ಜಾಹಿರಾತು ಮಾಡಿದ್ದಾರೆ. ಒಬ್ಬ ಟೀವಿಗೆ ಕಲ್ಲು ಹೊಡಿಯುವುದು . ಯಾಕೆಂದರೆ ಅದು ಅಷ್ಟು ಪ್ರಸಿದ್ಧ… ಈ ಪ್ರಸಿದ್ಧವಾದ ಟೀವಿ ಇರುವುದರಿಂದ ಪಕ್ಕದ ಮನೆಯವ ಮತ್ಸರದಿಂದ ಶತ್ರುವಾಗುತ್ತಾನೆ ಎಂದು ಆ ಟೀವಿಯ ಹೆಗ್ಗಳಿಕೆ. ಇದು ಕೂಡ ಆಗಿದ್ದು ಹಾಗೆ. ಶ್ರೀಗಳ ಪ್ರಖ್ಯಾತಿಯನ್ನು ಕಂಡು ಕರುಬಿದವರಿದ್ದಾರೆ. ಈ ಪ್ರಖ್ಯಾತಿಯನ್ನೇ ಕಂಡು ವಿನಾ ಕಾರಣ ಅವರ ಮೇಲೆ ದ್ವೇಷವನ್ನು ಸಾಧಿಸುವವರು, ಅವರ ಸಮಾಜದ ಒಳಗೂ ಹೊರಗೂ ಇದ್ದಾರೆ. ಹಾಗಾಗಿ ಅಂದು ನಾನು ಪೂಜ್ಯರಿಗೆ ‘ತಾವು ಏನೂ ಈ ಕುರಿತಾಗಿ ಯೊಚನೆ ಮಾಡ್ಬೇಕಾದ್ದಿಲ್ಲ. ಇದನ್ನೆಲ್ಲ ಮೀರಿ ನಿಲ್ತೀರಿ ಮತ್ತು ಇಂತಹ ಘಟನೆಗಳಿಂದ ನಿಮ್ಮ ವ್ಯಕ್ತಿತ್ವಕ್ಕೆ ಇನ್ನೂ ಪ್ರಭೆ ಬರುತ್ತದೆ… ಬೆಂಕಿಗೆ ಹಾಕಿ ಹೊರಬಂದ ಚಿನ್ನದ ಹಾಗೆ… ನೀವು ಪ್ರಜ್ವಲಿಸ್ತೀರಿ’ ಎಂಬುದಾಗಿ ಹೇಳಿದೆ. ಅಂತಹ ಆತ್ಮೀಯತೆಯನ್ನು ಅವರು ಉಂಟುಮಾಡಿದ್ದಾರೆ.
ನಾನು ಮತ್ತೊಮ್ಮೆ ಹೇಳಬಯಸುವುದೇನೆಂದರೆ ಅವರ ಮಾತೃ ಹೃದಯ, ಅವರ ಶಿಷ್ಯ ವಾತ್ಸಲ್ಯ ಮತ್ತು ವಿಶಾಲ ಹೃದಯದಿಂದ ಮಾತನಾಡುವಂತಹ ಅವರ ವಾಣಿಯನ್ನು ಅನೇಕ ಜನ ಗೌರವಿಸುತ್ತಾರೆ. ಅವರ ಹಿಂಬಾಲಕರಾಗುತ್ತಾ ಇದ್ದಾರೆ. ಹಾಗಾಗಿ ಸಮಕಾಲೀನವಾಗಿ ಇರತಕ್ಕಂತಹ ಅನೇಕ ಯತಿಶ್ರೇಷ್ಠರಲ್ಲಿ ಸಣ್ಣವಯಸ್ಸಿನಲ್ಲಿ ಇವತ್ತು ಶ್ರೀಗಳು ಅತ್ಯಂತ ಹೆಚ್ಚು ಜನರ ಗೌರವ ಪಡೆದುಕೊಂಡಿದ್ದಾರೆ. ಅವರಿಂದ ನಾವು ಬಹಳ ನಿರೀಕ್ಷಿಸುತ್ತೇವೆ. ಇಂತಹ ಉತ್ಸಾಹಿ ಮತ್ತು ತಮ್ಮ ದೇಹ ಅಥವಾ ಆರೋಗ್ಯ ಇವುಗಳ ಕಡೆ ಗಮನ ಹರಿಸದೇ ಕೇವಲ ಧಾರ್ಮಿಕ, ಸಾಮಾಜಿಕ ಮತ್ತು ಇತರ ಈ ರೀತಿಯ, ಗೋಸರಂಕ್ಷಣೆಯಂತಹ ಕಾರ್ಯಕ್ರಮಗಳನ್ನು ಪೂರ್ತಿ ಮನಸ್ಸಿನಿಂದ ತೆಗೆದುಕೊಳ್ಳತಕ್ಕಂತವರು ಅಪರೂಪ. ಮುಂದೆ ಅವರಿಗೆ ತುಂಬ ಉಜ್ವಲವಾದ ಭವಿಷ್ಯ ಇದೆ. ಅವರಿಂದ ಬಹಳ ನಿರೀಕ್ಷೆಗಳು ಹೆಚ್ಚಾಗುತ್ತಾ ಇವೆ. ಈ ನಿರೀಕ್ಷೆಗೆ ಸರಿಯಾಗಿ ಮತ್ತು ಅವರ ಮನೋಧರ್ಮಕ್ಕೆ ಸರಿಯಾಗಿ ಅವರು ಸಂಪೂರ್ಣವಾಗಿ ಬೆಳೆಯಲಿ ಅಂತ ನಾವು ಹಾರೈಸುತ್ತೇವೆ. ಮತ್ತು ಅವರು ಇನ್ನೂ ಹೆಚ್ಚು ಕಾರ್ಯಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಮಾರ್ಗದರ್ಶನ ಕೊಟ್ಟರೆ ಖಂಡಿತವಾಗಿ ಜನ ಅವರ ಮಾತಿಗೆ ಬೆಲೆ ಕೊಡುತ್ತಾರೆ. ಇಂದು ಅವರು ಏನು ಹೇಳುತ್ತಾರೋ ಅದರ ಹಿಂದೆ ಹೋಗತಕ್ಕಂತಹ ಒಂದು ವರ್ಗ ತಯಾರಾಗಿದೆ, ಇದು ಕೂಡ ಬಹಳ ಅಪರೂಪಕ್ಕೆ ಒಬ್ಬ ಗುರುಗಳಿಗೆ ಸಿಗುತ್ತದೆ. ಎಂದರೆ ಯಾವುದೋ ಒಂದು ಕಾರ್ಯಕ್ರಮ ತೆಗೆದುಕೊಂಡರೆ ಅವರನ್ನ ನಾವು ಹಿಂಬಾಲಿಸುತ್ತೇವೆ ಅನ್ನುವಂತಹ ಒಂದು ದೊಡ್ಡ ಭಕ್ತವರ್ಗ ಅವರಿಗೆ ಇದೆ. ಅಂತಹ ಶಕ್ತಿಯನ್ನು ಅವರು ಪಡೆದುಕೊಂಡಿದ್ದಾರೆ. ಶ್ರೀಮಂಜುನಾಥ ಸ್ವಾಮಿ ಇನ್ನೂ ಅವರಿಗೆ ಆಯುರಾರೋಗ್ಯವನ್ನು ನೀಡಲಿ, ಸಮಾಜದ ನೇತೃತ್ವವನ್ನು ಅವರು ಬಹುಕಾಲ ವಹಿಸಲಿ, ಧೀರ್ಘ ಕಾಲದ ಹಿನ್ನೆಲೆಯಿರತಕ್ಕಂತಹ ಪರಂಪರೆಯ ಮಠವಾದ ಶ್ರೀ ರಾಮಚಂದ್ರಾಪುರಮಠವನ್ನು ಇನ್ನೂ ಅವರು ಹೆಚ್ಚು ಬೆಳಸಲಿ ಇನ್ನೂ ದೀರ್ಘಕಾಲ ದೇವರಸೇವೆಯನ್ನು, ಸಮಾಜದ ಸೇವೆಯನ್ನು ಮಾಡುವಂತೆ ಆಶೀರ್ವದಿಸಲಿ ಅಂತ ಶ್ರೀಮಂಜುನಾಥಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.
– ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ
ಕಿರುಪರಿಚಯ:ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು
ಧಾರ್ಮಿಕ ಆಡಳಿತ ಕ್ಷೇತ್ರದ ಅತಿದೊಡ್ಡ ಹೆಸರು..! ಧರ್ಮಸ್ಥಳದ ಹೊಸತನದ ಹರಿಕಾರರು.. ಮಂಜುನಾಥನ ಗುರಿಕಾರರು.. ಭಕ್ತರ ಪಾಲಿನ ಮಾತನಾಡುವ ಮಂಜುನಾಥ ಸ್ವಾಮಿ.. ಗ್ರಾಮೋದ್ಧಾರಕರು.. ಪುರಾತನ ದೇವಾಲಯಗಳ ಸಮುದ್ಧಾರಕರು.. ಪುರಾತನ ವಸ್ತುವೈವಿಧ್ಯದ ಸಂರಕ್ಷಕರು.. ಬಡವರ ಭಾಗ್ಯದೇವತೆ..
ಶ್ರೀ ಹೆಗ್ಗಡೆಯವರು ’ಹರೇರಾಮ’ದ ಸಂಪಾದಕ ಬಳಗದೊಂದಿಗೆ..
ಬಲ್ಲಿದರ ಪೊಷಕರು.. ಶಿಕ್ಷಣ ಕ್ಷೇತ್ರದ ಹೊಸ ಬೆಳಕು.. ಕಲಾಪ್ರೇರಕರು.. ಸಾಹಿತ್ಯ ಸಮಾರಾಧಕರು.. ಸರ್ವಮತ ಸಮನ್ವಯಕಾರರು.. ಕೃಷಿಕರ ಆಶಾಕಿರಣ.. ಸಮರ್ಥ ನಾಯಕರು.. ಅಮಿತಗುಣಗಣಿಗಳು.. ಸಂವೇದನಾಶೀಲ ಲೇಖಕರು.. ಸದ್ಭಾವಪೂರಿತ ಅಂತಃಕರಣ ಸಮನ್ವಿತರು.. ಉತ್ತಮ ಛಾಯಾಗ್ರಾಹಕರು.. ಆದರ್ಶ ಗೃಹಸ್ಥರು.. ಸಹಾಯಕರ ಪೂಜ್ಯ ಖಾವಂದರು.. ಗಂಭೀರ ಮಾತುಗಾರರು.. ಅತಿವಿಶಿಷ್ಟ ಕಾರ್ಯಕ್ರಮಗಳ ಸಂಯೋಜಕರು.. ಅನ್ನ-ಔಷಧ-ವಿದ್ಯಾ-ದಾನವೀರರು.. ಧರ್ಮಸ್ಥಳದ ಇಪ್ಪತ್ತೊಂದನೆಯ ಧರ್ಮಾಧಿಕಾರಿಗಳು..
ಪೂಜ್ಯ ಹೆಗ್ಗಡೆಯವರ ಹೃದಯಾಂತರಾಳದ ಭಾವನೆಗಳನ್ನು ಓದುತ್ತಿರುವಾಗ ಯಾಕೋ ಈ ಶ್ಲೋಕ ನೆನಪಾಗುತ್ತಿದೆ..
ನಾಗುಣೀ ಗುಣಿನಮ್ ವೇತ್ತಿ ಗುಣೀ ಗುಣಿಷು ಮತ್ಸರೀ|
ಗುಣೀಚ ಗುಣರಾಗೀಚ ವಿರಳ: ಸರಳೋ ಜನ:||
ಇನ್ನೊಬ್ಬ ವ್ಯಕ್ತಿಯನ್ನು ಯತಾವತ್ತಾಗಿ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಠ. ಅಂತಾದ್ದರಲ್ಲಿ ಒಬ್ಬ ಮಹಾನ್ ವ್ಯಕ್ತಿ ಇನ್ನೊಬ್ಬ ಮಹಾನ್ ವ್ಯಕ್ತಿಯನ್ನು ಇದ್ದಂತೆ ಅರ್ಥಮಾಡಿಕೊಂಡು, ಅವರ ಬಗೆಗಿನ ಅನಿಸಿಕೆಗಳನ್ನು ನಿರ್ವಿಕಾರವಾಗಿ ವ್ಯಕ್ತ ಪಡಿಸುವುದು ಬಹಳ ಅಪರೂಪ. ಅಪರೂಪಕ್ಕೊಮ್ಮೆ ಇಂತ ಸನ್ನಿವೇಶವನ್ನು ನೋಡುವ ಭಾಗ್ಯ ನಮ್ಮದು.
ದಾರ್ಶನಿಕ ದ್ವಯರಿಗೆ ಆದರದ ಪ್ರಣಾಮಗಳು.
ಧರ್ಮಸ್ಥಳದ ದೇವರಿಗು ಗುರಿಕಾರರಿಗು ನಮೋನ್ನಮಃ
ನೇತ್ರಾವತಿ ಹರೇರಾಮಕ್ಕೆ ಹರಿದಿದೆ.
ಹೆಗ್ಗಡೆಯವರು “ಗುರುಗಳನ್ನು ಮಠವನ್ನು ಪರಿವಾರದವರನ್ನು” ಎಷ್ಟು ಹತ್ತಿರದಿ೦ದ ಬಲ್ಲರು ಎ೦ದು ಈ ಲೇಖನ ತೋರಿಸುತ್ತಿದೆ – ಅಕ್ಷರಕ್ಷರ ಸತ್ಯ, ನಾವು ಧನ್ಯ. ಧರ್ಮಾದಿಕಾರಿಗಳ ಧೃಡತೆ ಎಷ್ಟೋ ವಾಕ್ಯಗಳಲ್ಲಿ ಪ್ರಖರವಾಗಿ ವ್ಯಕ್ತವಾಗಿದೆ. ಈ ಲೇಖನದಿ೦ದ ಹೆಗ್ಗಡೆಯವರ ಮತ್ತು ಸ೦ಸ್ಥಾನದ ಬಗ್ಗೆ ಹೆಚ್ಚು ತಿಳಿದ೦ತಾಯಿತು. ಹರೇರಾಮ. ಮ೦ಜನಾಥನ ಕೃಪಾಕಟಾಕ್ಷ ನಮ್ಮೆಲ್ಲರ ಮೇಲೆ ಸದಾ ಹರಿಯುತ್ತಿರಲಿ.
ಶ್ರೀ ಮ೦ಜುನಾಥೇಶ್ವರಾಯ ನಮಃ
ಮ೦ಜನಾಥ ಎಲ್ಲಿರುವನು, ಧರ್ಮಸ್ಥಳ ಎಲ್ಲಿರುವುದು – ನಮ್ಮ ನೆನಪಲ್ಲಿ. ಈ ದೇಹ ಸುಟ್ಟು ಭಸ್ಮವಾಗಬಹುದು, ನೆನಪಿನ ದೃಶ್ಯಗಳು ಆಕಾಶದಲ್ಲಿ, ಪರಮಾಕಾಶದಲ್ಲಿ, ಚಿದಾಕಾಶದಲ್ಲಿ ಸದಾ ಇರುವುದು, ಮತ್ತೆ ನನೆಪಿನ೦ಗಳದಲ್ಲಿ ಮಿ೦ಚಿ ಮಳೆಯಾಗಿ ನೇತ್ರಾವತಿಯಲ್ಲಿ ಮಿ೦ದ ಅನುಭವವಾಗುವುದು.
.
ಧರ್ಮಸ್ಥಳವಿಲ್ಲದೆ ನಮ್ಮ ಜೀವನಚರಿತ್ರೆ ಪೂರ್ಣವಾಗದು. ಅದೆಷ್ಟು ಬಾರಿ ಹೋಗಿದ್ದೇವೆ, ಅದೆಷ್ಟು ಬಾರಿ ಆನ೦ದಪಟ್ಟಿದ್ದೇವೆ – ನೆನಪೇ ಸಾಕು ಸುಖಿಸಲು, ನದಿಯೊ ಜಾಗವೊ ಮುಡಿಕೊಡುವುದೊ ಯಾತ್ರಾನಿವಾಸಗಳೊ ಮ೦ಜುನಾಥನೊ ಊಟವೊ ಪೂಜೆಯೊ ಸುಬ್ರಹ್ಮಣ್ಯೇಶ್ವರ+ಶೃ೦ಗೇರಿ+ಹೊರನಾಡು+ಮಳೆಗಾಲ – ಒಹೋ ರಮಣೀಯ, ಈಗ ಮನನೀಯ. ಅತ್ಯದ್ಭುತ. ಒಮ್ಮೆ ರಮಣೀಯವಾದ ನ೦ತರವೇ ಮನನೀಯವಾಗಲು ಸಾಧ್ಯವೆ?
.
ಒ೦ದು ಧರ್ಮಕ್ಷೇತ್ರ ಹೇಗಿರಬೇಕು ಎ೦ದು ತಿಳಿಯಲು ಧರ್ಮಸ್ಥಳಕ್ಕೆ ಹೋಗಬೇಕು. ಬಡವಬಲ್ಲಿದರೆಲ್ಲಾ ಒ೦ದೇ, ಧರ್ಮಕ್ಷೇತ್ರವಿದು ಇತರ ಎಷ್ಟೋ ಕ್ಷೇತ್ರದ ಹಾಗೆ ಧನಕ್ಷೇತ್ರವಲ್ಲ. ನಮ್ಮ೦ತಹ ಎನಿತೋ ಜನರನ್ನು ಭಕ್ತರಸಿಕರನ್ನಾಗಿ ಮಾಡಿದ ಕ್ಷೇತ್ರ, ಊರಿನ ಮನೆ, ನಮ್ಮ ಮನೆ. ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟ ಕ್ಷೇತ್ರದ ಧರ್ಮಾಧಿಕಾರಿಗಳು ಹಾಗು ಪರಿವಾರದವರಿಗು ಅನ೦ತ ಅನ೦ತ ವ೦ದನೆಗಳು. ಕ್ಷೇತ್ರ ಮುಗ್ಧತೆ-ಶುಭ್ರತೆ-ಪಾವಿತ್ರ್ಯತೆ ಹಾಗೇಯೆ ಉಳಿಸಿಕೊಳ್ಳಲಿ, ಶಿವನ ಧ್ಯಾನಪೀಠವಾಗಲಿ – ಶಿವಧ್ಯಾನದಿಲ್ಲದೆಡೆಯಲ್ಲಿ? ಹುಚ್ಚು ಶಬ್ದಮಾಡದಿರುವ.
.
ಹೆಗ್ಗಡೆಯವರಿಗೆ ಸ೦ಸ್ಥಾನದ ಹತ್ತಿರದ ನೋಟ ಒಡನಾಟ ಸಿಕ್ಕಿರುವುದು ಪೂರ್ವಸುಕೃತವೇ ಸರಿ.
.
ಅಕ್ಷರಕ್ಷರ ಸತ್ಯ.
ನಿತ್ಯ ಚ೦ದ್ರಮೌಳೀಶ್ವರ ಶ್ರೀರಾಮ ರಾಜರಾಜೇಶ್ವರಿಯ ಸಾ೦ಗತ್ಯ,
ಆಕರ್ಷಣೆಯ ಅಭಿಷೇಕ ಎರಡೂ ಕಡೆಯಿ೦ದ ಆಗುತ್ತಲಿರುವಾಗ ಆಕರ್ಷೀತರಾಗದೇ ಉಳಿಯುವುದು೦ಟೆ.
ಶುದ್ಧ ಭಾವ ಸದಾ ಸ್ಫುರಿಸುತ್ತಿರಲು,
ಯಾರಾದರೇನು ಏನಾದರೇನು ಒಳಿತನ್ನೆ ಬಯುಸುವ ಮಾತೃ ಹೃದಯವಿರಲು
ಸಮಾಜದಲಿ ವೈಶಾಲ್ಯ ಹರಡದಿರಲು ಸಾಧ್ಯವೆ.
{ “ಇನ್ನೊಂದು ಬಹಳ ಮುಖ್ಯವಾದ ಅಂಶವೇನೆಂದರೆ ಗುರು ಯಾವಾಗಲೂ ಭಕ್ತನಿಗೆ ಆತ್ಮೀಯನಾಗಿರಬೇಕು. ಬಹಳ ಹತ್ತಿರ ಇರಬೇಕು. ಆ ಆತ್ಮೀಯತೆ ಬರುವುದು ಹೇಗೆ ಎನ್ನುವುದು ಬಹಳ ಕಷ್ಟದ ಪ್ರಶ್ನೆ. ಏಕೆಂದರೆ ಆತ್ಮೀಯತೆ ಬೇಕಾದ ಹಾಗೆ ಬರುವಂತಹದ್ದಲ್ಲ. ಶಿಷ್ಯರಿಗೆ ಬೇಕಾದ ಹಾಗೆ ಇರುವಂತಹದ್ದಲ್ಲ. ’ಗುರು ಶಿಷ್ಯರನ್ನು ಆಕರ್ಷಿಸುವಂತಹ, ಅವರ ಚಿತ್ತವನ್ನು ಅಪಹರಿಸುವಂತವನಾಗಿರಬೇಕು’ ಅಂತ ಒಂದು ಮಾತಿದೆ. ಶಿಷ್ಯರ ಚಿತ್ತಾಕರ್ಷಣೆ ಮಾಡಬೇಕಾದರೆ ಅದು ಗುರುವಿನ ವ್ಯಕ್ತಿತ್ವದಿಂದ ಆಗಬೇಕು. ಮಾತಿನಿಂದ ಆಕರ್ಷಿಸಬೇಕು. ಮತ್ತೆ ಹೃದಯಪೂರ್ವಕವಾಗಿ ಆಕರ್ಷಿಸಬೇಕು. ನಾನು ಕಂಡ ಹಾಗೆ ಶ್ರೀಗಳಲ್ಲಿ ಮಾತೃ ಹೃದಯವಿದೆ. ಬಹಳ ಸವಿಯಾದ ಮಾತನಾಡುವಂತಹ ಅಭ್ಯಾಸ ಇದೆ, ಸಂಸ್ಕಾರ ಇದೆ. ಅವರ ಧ್ವನಿಯೂ ಕೂಡ ಆಕರ್ಷಕವಾದದ್ದು. ಹೀಗಾಗಿ ಮೂರೂ ಅವರಲ್ಲಿ ಬೆರೆತಿದೆ: ಅವರ ಮುಖದ ತೇಜಸ್ಸು, ಅವರ ವಾಕ್ಶಕ್ತಿ, ಮತ್ತು ಮಾತೃ ಹೃದಯವನ್ನು ಹೊಂದಿರುವಂತಹದ್ದು. ಅದರ ಜೊತೆಗೆ ಅವರ ಧ್ವನಿ ಕೂಡ ಪ್ರಭಾವಶಾಲಿ. ಇದು ಅವರು ಎಲ್ಲೇ ಹೋದರೂ ಶಿಷ್ಯರು ಆಕರ್ಷಿತರಾಗುವಂತೆ ಮಾಡಿದೆ. ಅದರ ಜೊತೆಗೆ ನಾನು ಕಂಡ ಹಾಗೆ , ಅವರ ಶಿಷ್ಯ ಸಮುದಾಯದವರನ್ನಲ್ಲದೇ ಇತರ ಸಮಾಜದವರನ್ನೂ ಕೂಡ ಸಮಾನವಾಗಿ ಆಕರ್ಷಿಸುತ್ತಾರೆ. ಉದಾಹರಣೆಗೆ, ಕಡೂರಿನ ಕೃಷಿ ಮೇಳಕ್ಕೆ ಅವರು ಬಂದಿದ್ದರು. ಅಲ್ಲಿ ಸಹಜವಾಗಿಯೇ ಎಲ್ಲ ಸಮಾಜದವರೂ , ಸಂಪ್ರದಾಯದವರೂ, ಮತಧರ್ಮದವರೂ ಇದ್ದರು. ಅಂದಿನ ಅವರ ಮಾತು ಹೇಗಿತ್ತೆಂದರೆ, ಸರ್ವಧರ್ಮಗಳಿಗೂ , ಎಲ್ಲ ಜಾತಿಮತಪಂಥದವರಿಗೂ ಅನುಗುಣವಾಗಿ, ಆಕರ್ಷಣೀಯವಾಗಿ ಇತ್ತು. ಮತ್ತು ಅದು ಸಭೆಗೆ ಒಂದು ಉಪಯುಕ್ತವಾಗಿರತಕ್ಕಂತಹ ಸಂದೇಶವಾಗಿತ್ತು. ಪ್ರವಚನ ಪ್ರಾರಂಭ ಮಾಡಿ ಹತ್ತು ನಿಮಿಷದ ಒಳಗೆ ಎಲ್ಲರನ್ನೂ ಆಕರ್ಷಿಸಿಬಿಟ್ಟರು. ಇಂತಹ ಶಕ್ತಿ ಬಹಳ ಕಡಿಮೆ ಜನರಿಗೆ ಇರುತ್ತದೆ. ಅಲ್ಲದೆ ಅವರ ಮಾತಿನಲ್ಲಿ ಸಹಜತೆ ಇರುತ್ತದೆ. ಅವರು ಪ್ರವಚನ ಕೊಡುವಾಗ ಅಲ್ಲಿನ ಸಂದರ್ಭಕ್ಕೆ ಸರಿಯಾಗಿ ಏನೋ ಮೇಲೆಮೇಲೆ ಮಾತನಾಡುವುದಲ್ಲ, ಹೃತ್ಪೂರ್ವಕವಾಗಿ ಮಾತು ಹೊರಗೆ ಬರುತ್ತದೆ.” }
.
.
ನೇತ್ರಾವತಿ ಹರಿಯುತಿಹಳು, ಮನಸ್ಸು-ಚಿತ್ತ-ಬುದ್ಧಿಗಳನ್ನು ಒ೦ದು ಮಾಡುತಿಹಳು, ಪರಮಾತ್ಮನ ಆತ್ಮವ ಬೆಸೆಯುತಿಹಳು.
ಅರಿವೇ ಗುರುವೆಂಬ ನಾಣ್ಣುಡಿ ಸತ್ಯ ಆದರೆ ಅರಿವು ಮೂಡಲುಬೇಕು ಗುರುವಿನಗತ್ಯ. ಗುರುವನ್ನ ಬಿಟ್ಟು ಅನ್ಯವೆಲ್ಲ ಮಿಥ್ಯ. ಈ ಮನೋಧರ್ಮವನ್ನು ಆಧುನಿಕ ಯುಗದಲ್ಲೂ ಕಂಡು ಬೆಳೆಸಿಕೊಂಡು ಬಂದವರು ಶ್ರೀ ಹೆಗ್ಗಡೆಯವರು.ಇಂತಹ ಮಹಾನ್ ವ್ಯಕ್ತಿಗಳು ಮಠದ ಮತ್ತು ಸಮಾಜದ ಪ್ರಮುಖ ಕೊಂಡಿಗಳು. ಸಮಾಜ ನಂಬಿದ ‘ಸುಸಂಸ್ಕೃತರು’ ಅಂದರೆ ಹೆಗ್ಗಡೆಯವರು. ಧರ್ಮಸ್ಥಳ ಅಂದರೆ ಧರ್ಮಕರ್ಮಗಳ ಸಂಗಮ ಸ್ಥಳ. ಇಂತಹ ಧರ್ಮ ಕಾರ್ಯ ಮಾಡುವ ಸ್ಥಳದಿಂದ ನಮ್ಮ ಗುರುಗಳ ಧರ್ಮ ಪೀಠಕ್ಕೆ ಇನ್ನಷ್ಟು ಹೆಚ್ಚಿನ ಸಂಪರ್ಕವಾಗಲಿ. ಆ ಮೂಲಕ ಸಮಾಜದಲ್ಲಿ ಧರ್ಮದ “ಜ್ಯೋತಿ” ಬೆಳಗಲಿ.
ಹರೇ ರಾಮ.
ಶ್ರೀ ಗುರುಗಳ ವಾತ್ಸಲ್ಯ, ಶಿಷ್ಯ ಪ್ರೇಮ, ಹೊಸ ತನ, ಸಾಮಜಿಕ ಕಳಕಳಿ, ಮೂಕ ವೇದನೆಯ ಧ್ವನಿ, ಆ೦ದೋಲನ ಉ೦ಟು ಮಾಡಿದ ಕ್ರಾ೦ತಿಕಾರಿ, ಗುಣ ಗ್ರಹಣ ಸ್ವಭಾವ, ನಿರ್ಮಲ ಪ್ರೇರಣೆ – ಪ್ರೋತ್ಸಾಹ ಮೊದಲಾದವುಗಳನ್ನು ಅದೆಷ್ಟು ಒಪ್ಪವಾಗಿ, ಹೃದ್ಯವಾಗಿ ಪಡಿಮೂಡಿಸಿದ್ದಾರೆ – ಪೂಜ್ಯ ಹೆಗ್ಗಡೆಯವರು.. ಆನ೦ದವಾಯಿತು.
ಹರೇ ರಾಮ
ಶ್ರೀ ಗುರುಗಳೊಂದಿಗಿನ ಆತ್ಮೀಯ ಒಡನಾಟಗಳನ್ನು ಹೆಗ್ಗಡೆಯವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಗುರುಗಳ ಅಂತರಂಗದ ಪ್ರತಿಬಿಂಬವಿದು.
ಅಂತೆಯೇ ಬಹುಮುಖಿ ವ್ಯಕ್ತಿತ್ವದ ಹೆಗ್ಗಡೆಯವರ ಪರಿಚಯವೂ ಅದ್ಭುತವಾಗಿ ಮೂಡಿಬಂದಿದೆ.
ಹರೇರಾಮ.. ಬಹು ಸುಲಭದಲ್ಲಿ ಮಹಾತ್ಮರ ಮಾತು ಕೇಳಲು, ಅವರೊಡನೆ ಮಾತನಾಡಲು, ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವ ಅವಕಾಶವಿರುವ ನಾವು ಪುಣ್ಯವಂತರೆ ಸರಿ.. ಈ ವಾರದ ಹರೇರಾಮದ ಪ್ರಮುಖರಾಗಿರುವವರು.., ಈ ಶತಮಾನದ ಮಾದರಿ ವ್ಯಕ್ತಿಯಂತೆ ಬಹಳಷ್ಟು ಜನರನ್ನುದ್ಧರಿಸಿದ ಪ್ರಮುಖರು.. ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರು.. ತಮ್ಮ ಪಾರಂಪರಿಕ ಪಟ್ಟದ ಅಧಿಕಾರದ ವ್ಯಾಪ್ತಿಯಲ್ಲಿ ಶ್ರೀ ಮಂಜುನಾಥನ ಭಕ್ತಾದಿಗಳನ್ನಷ್ಟೇ ಅಲ್ಲ.., ಜಾತಿ,ಮತ ಬೇಧ ವಿಲ್ಲದೆ ನಾಡಿನ ಸಮಸ್ತ ಜನತೆಯ ಏಕೀಕರಣಕ್ಕೆತಮ್ಮನ್ನು ತಾವು ತೊಡಗಿಸಿಕೊಂಡವರು, ಜನಸೇವೆಗೆ ತಮ್ಮನ್ನೇ ಸಮರ್ಪಿಸಿಕೊಂಡವರು… ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿಯವರೊಂದಿಗಿನ ತಮ್ಮ ಒಡನಾಟದ ಬಗ್ಗೆ ತುಂಬಾ ಮನೋಹರವಾಗಿ ಮನ ಮುಟ್ಟು ವಂತೆ ವರ್ಣಿಸಿದ್ದಾರೆ.. ಶ್ರೀ ಗಳ ಗೋಸಂರಕ್ಷಣೆ ಯ ಮಹತ್ಕಾರ್ಯ ಉತ್ತಮವಾಗಿ ನಡೆಯುತ್ತಿರುವ ಬಗ್ಗೆ ಖಾವಂದರು ಶ್ಲಾಘಿಸುತ್ತಾ ಒಳ್ಳೆಯ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ.. ಈ ಎರಡು ದಿಗ್ಗಜರೂ ಸಂಘಟನಾ ಪರಿಣತರು… ನಾಡಿನ ಮೂಲೆ ಮೂಲೆಯ ಜನರೆಲ್ಲಾ ಒಂದೇ ಮನಸ್ಸಿನಿಂದ ಒಂದುಗೂಡಲು ಈ ಎರಡು ಶಕ್ತಿಗಳೂ ಹಾಕಿದ ಶ್ರಮ ಈಗ ಸಾರ್ಥಕ ಎನಿಸುತ್ತದೆ … ಎರಡು ಪರಂಪರೆಗಳೂ ತಮ್ಮ ತಮ್ಮ ಕಾರ್ಯ ವೈಶಿಷ್ಟ್ಯಗಳಿಂದ ತಮ್ಮದೇ ಛಾಪು ಜಗತ್ತಿಗೆ ಸಾರಿವೆ.. ಇನ್ನು ಮುಂದೆಯೂ ಇದು ಇನ್ನೂ ಬಲವಾಗಿ ಶಕ್ತಿಯುತವಾಗಿ ಮುನ್ನಡೆದು ಜಗತ್ತಿಗೆ ಮಾದರಿಯಾಗಲಿ.. ಹರೇ ರಾಮ……
ಹರೇ ರಾಮ. ಚಂದ್ರಮೌಳೀಶ್ವರನಿಗೆ ಮಂಜುನಾಥೇಶ್ವರ ಸಾಥ್ ಕೊಟ್ಟಿದ್ದಾನೆ. ಧರ್ಮ ಪೀಠವನ್ನು ದೇವ ಪೀಠ ಪ್ರಶಂಸಿಸುತ್ತಿದೆ. ನೂರಾರು-ಸಾವಿರಾರು ವರ್ಶಗಳ ಇತಿಹಾಸವಿರುವ ಎರಡು ಕ್ಶೇತ್ರಗಳ ಕಣ್ಮಣಿಗಳ ಪರಸ್ಪರ ಅಭಿನಂದನೆಗಳು ಓದುಗರಿಗೆ ಭಾವದೌತಣ ನೀಡಿದೆ. ಇಂತಹ ಪ್ರಮುಖರ ಭಾವನೆಗಳನ್ನು ನಮಗೆ ಪರಿಚಯಿಸಿದ ‘ಹರೇ ರಾಮ’ ಸಂಪಾದಕ ತಂಡಕ್ಕೆ ಜೈ!
This article has a special place in Mutt’s history. Dharmadhikari has really assessed and narrated the details in a magnificent way. May God bless us through them.
ಹೀಗೇ ಅನ್ಯೋನ್ಯವಾಗಿರಲಿ ಈ ಧರ್ಮಪೀಠ-ದೇವಪೀಠಗಳ ಮೈತ್ರಿ. ಎಲ್ಲೆಲ್ಲೂ ಅಧರ್ಮವೇ ಹೆಚ್ಚುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಸಾತ್ವಿಕ ಶಕ್ತಿಗಳು ಒಂದಾಗಿರುವುದು ಅನಿವಾರ್ಯವೆನಿಸುತ್ತದೆ. ರಾಜರ್ಷಿಗಳಿಗೆ ನಮ್ಮ ರಾಜಪೀಠದ ಬಗೆಗಿರುವ ಗೌರವಾದರಗಳನ್ನು ತಿಳಿದು ಮನದುಂಬಿ ಬಂತು.
ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಮನದಾಳಾದ ಮಾತು.ಸಮಯೋಚಿತ.
ಶ್ರೀ ಕ್ಷೇತ್ರ ಧರ್ಮಸ್ಥಳದ ನಡೆದಾಡುವ ದೇವರೆಂದೇ ಹೆಸರಾದ ಶ್ರೀ ಹೆಗ್ಗಡೆಯವರಿಂದ ಇನ್ನೊಬ್ಬ ನಡೆದಾಡುವ ದೇವಯತಿಗಳ ಬಗ್ಗೆ ಮನ ಬಿಚ್ಚಿದ ಮಾತುಗಳು. ಕೇಳಲು ಅದೆಷ್ಟು ಹಿತ. ಸಂಸ್ಥಾನದೊಂದಿಗಿನ ತನ್ನ ಒಡನಾಟದ ಹಿತ ಅನುಭವ, ಅಲ್ಲಿಯ ಕಾರ್ಯ ವೈಖರಿಗೆ ಬಗ್ಗೆ ಅಭಿಮಾನ, ಶ್ರೀ ಶ್ರೀಗಳ ಸಮಾಜ ಮುಖೀ ಯೋಜನೆಗಳ ಬಗ್ಗೆ ಪ್ರಶಂಸೆ, ಎಲ್ಲಕ್ಕಿಂತ ಹೆಚ್ಚಾಗಿ “ಶಿಷ್ಯ ವಾತ್ಸಲ್ಯ” ಮತ್ತು “ಮಾತೃ ಹೃದಯ” ವೆಂಬ ನಿತ್ಯ ಸತ್ಯ ವನ್ನು ಒಪ್ಪಿ, ಅಪ್ಪಿಕೊಂಡ ಬಗೆ, ನಿಜಕ್ಕೂ ಪ್ರಶಂಸನೀಯ.
“ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು”
ಹರೇ ರಾಮ
ಹುಟ್ಟಿನಿಂದ ಈ ಗುರುಪೀಠದ ಶಿಷ್ಯೆ. 5 ವರ್ಷಗಳ ಕಾಲ S D M College, Ujire ಇದರ ವಿದ್ಯಾರ್ಥಿನಿ . ಈ ಇಬ್ಬರು ಮಾತ್ರುಹೃದಯಿಗಳ ಮಡಿಲಲ್ಲಿ ಬೆಳೆದ ನನಗೆ ಇದನ್ನು ಓದಲು ಹೆಮ್ಮೆಯೆನಿಸುತ್ತದೆ.
maanya sri poojya gurugaladanthaha sri sri sri Dr:veerendra hegdeyavarige namaskaragalu manjunathanige nimma seva anathavadddu nimma seveyu chira kala ege irali endu ashisuttene manjunatha & hegde avarige vandanegalu.
We surrender to thee, Oh adorable lord,Supreme teacher of the Universe Eternally pure, Oh highest God. SADGURU, the Light that dissolves all darkness—the Light of Truth Universal which blazes victoriously for all eternity!
ವಿಶ್ವ ಧರ್ಮದ ಗುರುವೇ
ಮಾನವ ಕಲ್ಯಾಣ ಕಲ್ಪತರುವೇ
ಎಲ್ಲರಿಗೂ ಎಲ್ಲವ ಕೊಟ್ಟ ದೇವರೇ
ತಮಗೆ ಸಮಾಜ ಸರಕಾರ ಕೊಡಲೇನು ಕಿಮ್ಮತ್ತು
ಥಾವು ನಾಡಿನ ಸಂಪತ್ತು
ಮಾನವ ಕುಲದ ಕಾಮಧೇನು ಕಲ್ಪತರು
ಧರ್ಮಸಂಸ್ಥಾಪನೆಗೆ ಅವತಾರವೆತ್ತಿದ ಶ್ರೀಕೃಷ್ಣ ಧ್ವಾಪರದಲಿ
ಅವನದೇ ಕಾಯಕವ ಸ್ಥಾಪಿಸಿದಿರಿ ಕಲಿಯುಗದಲಿ
ಓ ಧರ್ಮರಾಯರೇ ನಿಮಗಿತ್ತ ಜನತೆ ಸರಕಾರ ಸಮಾಜ ಪದ್ಮಗಳಿಗೆ ಅಭಿನಂದನೆಗಳು
ಇದು ಅತೀಕಡಿಮೆಯಾಗಿದೆಯೆಂದು ಸರ್ವರಿಗು ಅನಿಸಿರಲು
ತಮಗೆ ಹಲವಾರು ರತ್ನಗಳು ಭಾರತರತ್ನ, ನೊಬೆಲ್ ಶಾಂತಿ ಪದಕಗಳು
ದೊರಕಲೆಂದು ಆಶಿಸುನ ನಾನೊಬ್ಬ ತಮ್ಮ ಅಭಿಮಾನಿಯಾಗಿರಲು
ಸುಂದರೀಸುತ ಸೋಮಶೆಃರನ ನಮ್ರ ವಂದನೆಗಳನು ಸ್ವೇಕರಿಸಿರಿ
ನಮ್ಮೆಲ್ಲರಿಗೂ ಕಣುವಾ ದೈವ ನೀವಾಗಿರಲು
ನಮಗಿನ್ನೇನು ಬೇಕೆಂದು ತಿಳಿದಿರಲು ಸಾಕು
ನ್ಯಾಯಮೂರ್ತಿ ಸೋಮಶೇಖರ ಮತ್ತು ಅವರ ಕುಟುಂಬದ ಸದಸ್ಯರು
July 17, 2010 at 4:47 PM
ಪೂಜ್ಯ ಹೆಗ್ಗಡೆಯವರ ಹೃದಯಾಂತರಾಳದ ಭಾವನೆಗಳನ್ನು ಓದುತ್ತಿರುವಾಗ ಯಾಕೋ ಈ ಶ್ಲೋಕ ನೆನಪಾಗುತ್ತಿದೆ..
ನಾಗುಣೀ ಗುಣಿನಮ್ ವೇತ್ತಿ ಗುಣೀ ಗುಣಿಷು ಮತ್ಸರೀ|
ಗುಣೀಚ ಗುಣರಾಗೀಚ ವಿರಳ: ಸರಳೋ ಜನ:||
ಇನ್ನೊಬ್ಬ ವ್ಯಕ್ತಿಯನ್ನು ಯತಾವತ್ತಾಗಿ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಠ. ಅಂತಾದ್ದರಲ್ಲಿ ಒಬ್ಬ ಮಹಾನ್ ವ್ಯಕ್ತಿ ಇನ್ನೊಬ್ಬ ಮಹಾನ್ ವ್ಯಕ್ತಿಯನ್ನು ಇದ್ದಂತೆ ಅರ್ಥಮಾಡಿಕೊಂಡು, ಅವರ ಬಗೆಗಿನ ಅನಿಸಿಕೆಗಳನ್ನು ನಿರ್ವಿಕಾರವಾಗಿ ವ್ಯಕ್ತ ಪಡಿಸುವುದು ಬಹಳ ಅಪರೂಪ. ಅಪರೂಪಕ್ಕೊಮ್ಮೆ ಇಂತ ಸನ್ನಿವೇಶವನ್ನು ನೋಡುವ ಭಾಗ್ಯ ನಮ್ಮದು.
ದಾರ್ಶನಿಕ ದ್ವಯರಿಗೆ ಆದರದ ಪ್ರಣಾಮಗಳು.
July 17, 2010 at 5:55 PM
ಅದ್ಭುತ ಚಿಕ್ಕ.. ಚೊಕ್ಕ.. ಪೂರ್ಣ..
July 17, 2010 at 5:28 PM
ಧರ್ಮಸ್ಥಳದ ದೇವರಿಗು ಗುರಿಕಾರರಿಗು ನಮೋನ್ನಮಃ
ನೇತ್ರಾವತಿ ಹರೇರಾಮಕ್ಕೆ ಹರಿದಿದೆ.
ಹೆಗ್ಗಡೆಯವರು “ಗುರುಗಳನ್ನು ಮಠವನ್ನು ಪರಿವಾರದವರನ್ನು” ಎಷ್ಟು ಹತ್ತಿರದಿ೦ದ ಬಲ್ಲರು ಎ೦ದು ಈ ಲೇಖನ ತೋರಿಸುತ್ತಿದೆ – ಅಕ್ಷರಕ್ಷರ ಸತ್ಯ, ನಾವು ಧನ್ಯ. ಧರ್ಮಾದಿಕಾರಿಗಳ ಧೃಡತೆ ಎಷ್ಟೋ ವಾಕ್ಯಗಳಲ್ಲಿ ಪ್ರಖರವಾಗಿ ವ್ಯಕ್ತವಾಗಿದೆ. ಈ ಲೇಖನದಿ೦ದ ಹೆಗ್ಗಡೆಯವರ ಮತ್ತು ಸ೦ಸ್ಥಾನದ ಬಗ್ಗೆ ಹೆಚ್ಚು ತಿಳಿದ೦ತಾಯಿತು. ಹರೇರಾಮ. ಮ೦ಜನಾಥನ ಕೃಪಾಕಟಾಕ್ಷ ನಮ್ಮೆಲ್ಲರ ಮೇಲೆ ಸದಾ ಹರಿಯುತ್ತಿರಲಿ.
July 17, 2010 at 6:13 PM
ವಿದ್ವಾನೇವ ವಿಜಾನಾತಿ ವಿದ್ವಜ್ಜನಪರಿಶ್ರಮಮ್|
ಅರಿತವನೆ ಅರಿಯಬಲ್ಲ ಅರಿತವನ ಅರಿವ….ಪರಿಶ್ರಮವ….
ಯಾರ ಕುರಿತು ಯಾರು ಮಾತನಾಡಬೇಕೋ ಅವರು ಮಾತನಾಡಿದ್ದಾರೆ.
ಅವರು ಹೇಗೋ ಇವರು ಹಾಗೇ ಅವರನ್ನು ಕಂಡು…. ಆಡಿದ್ದಾರೆ….. ಕೊಂಡಾಡಿದ್ದಾರೆ.
July 17, 2010 at 6:21 PM
ಶ್ರೀ ಮ೦ಜುನಾಥೇಶ್ವರಾಯ ನಮಃ
ಮ೦ಜನಾಥ ಎಲ್ಲಿರುವನು, ಧರ್ಮಸ್ಥಳ ಎಲ್ಲಿರುವುದು – ನಮ್ಮ ನೆನಪಲ್ಲಿ. ಈ ದೇಹ ಸುಟ್ಟು ಭಸ್ಮವಾಗಬಹುದು, ನೆನಪಿನ ದೃಶ್ಯಗಳು ಆಕಾಶದಲ್ಲಿ, ಪರಮಾಕಾಶದಲ್ಲಿ, ಚಿದಾಕಾಶದಲ್ಲಿ ಸದಾ ಇರುವುದು, ಮತ್ತೆ ನನೆಪಿನ೦ಗಳದಲ್ಲಿ ಮಿ೦ಚಿ ಮಳೆಯಾಗಿ ನೇತ್ರಾವತಿಯಲ್ಲಿ ಮಿ೦ದ ಅನುಭವವಾಗುವುದು.
.
ಧರ್ಮಸ್ಥಳವಿಲ್ಲದೆ ನಮ್ಮ ಜೀವನಚರಿತ್ರೆ ಪೂರ್ಣವಾಗದು. ಅದೆಷ್ಟು ಬಾರಿ ಹೋಗಿದ್ದೇವೆ, ಅದೆಷ್ಟು ಬಾರಿ ಆನ೦ದಪಟ್ಟಿದ್ದೇವೆ – ನೆನಪೇ ಸಾಕು ಸುಖಿಸಲು, ನದಿಯೊ ಜಾಗವೊ ಮುಡಿಕೊಡುವುದೊ ಯಾತ್ರಾನಿವಾಸಗಳೊ ಮ೦ಜುನಾಥನೊ ಊಟವೊ ಪೂಜೆಯೊ ಸುಬ್ರಹ್ಮಣ್ಯೇಶ್ವರ+ಶೃ೦ಗೇರಿ+ಹೊರನಾಡು+ಮಳೆಗಾಲ – ಒಹೋ ರಮಣೀಯ, ಈಗ ಮನನೀಯ. ಅತ್ಯದ್ಭುತ. ಒಮ್ಮೆ ರಮಣೀಯವಾದ ನ೦ತರವೇ ಮನನೀಯವಾಗಲು ಸಾಧ್ಯವೆ?
.
ಒ೦ದು ಧರ್ಮಕ್ಷೇತ್ರ ಹೇಗಿರಬೇಕು ಎ೦ದು ತಿಳಿಯಲು ಧರ್ಮಸ್ಥಳಕ್ಕೆ ಹೋಗಬೇಕು. ಬಡವಬಲ್ಲಿದರೆಲ್ಲಾ ಒ೦ದೇ, ಧರ್ಮಕ್ಷೇತ್ರವಿದು ಇತರ ಎಷ್ಟೋ ಕ್ಷೇತ್ರದ ಹಾಗೆ ಧನಕ್ಷೇತ್ರವಲ್ಲ. ನಮ್ಮ೦ತಹ ಎನಿತೋ ಜನರನ್ನು ಭಕ್ತರಸಿಕರನ್ನಾಗಿ ಮಾಡಿದ ಕ್ಷೇತ್ರ, ಊರಿನ ಮನೆ, ನಮ್ಮ ಮನೆ. ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟ ಕ್ಷೇತ್ರದ ಧರ್ಮಾಧಿಕಾರಿಗಳು ಹಾಗು ಪರಿವಾರದವರಿಗು ಅನ೦ತ ಅನ೦ತ ವ೦ದನೆಗಳು. ಕ್ಷೇತ್ರ ಮುಗ್ಧತೆ-ಶುಭ್ರತೆ-ಪಾವಿತ್ರ್ಯತೆ ಹಾಗೇಯೆ ಉಳಿಸಿಕೊಳ್ಳಲಿ, ಶಿವನ ಧ್ಯಾನಪೀಠವಾಗಲಿ – ಶಿವಧ್ಯಾನದಿಲ್ಲದೆಡೆಯಲ್ಲಿ? ಹುಚ್ಚು ಶಬ್ದಮಾಡದಿರುವ.
.
ಹೆಗ್ಗಡೆಯವರಿಗೆ ಸ೦ಸ್ಥಾನದ ಹತ್ತಿರದ ನೋಟ ಒಡನಾಟ ಸಿಕ್ಕಿರುವುದು ಪೂರ್ವಸುಕೃತವೇ ಸರಿ.
.
ಅಕ್ಷರಕ್ಷರ ಸತ್ಯ.
ನಿತ್ಯ ಚ೦ದ್ರಮೌಳೀಶ್ವರ ಶ್ರೀರಾಮ ರಾಜರಾಜೇಶ್ವರಿಯ ಸಾ೦ಗತ್ಯ,
ಆಕರ್ಷಣೆಯ ಅಭಿಷೇಕ ಎರಡೂ ಕಡೆಯಿ೦ದ ಆಗುತ್ತಲಿರುವಾಗ ಆಕರ್ಷೀತರಾಗದೇ ಉಳಿಯುವುದು೦ಟೆ.
ಶುದ್ಧ ಭಾವ ಸದಾ ಸ್ಫುರಿಸುತ್ತಿರಲು,
ಯಾರಾದರೇನು ಏನಾದರೇನು ಒಳಿತನ್ನೆ ಬಯುಸುವ ಮಾತೃ ಹೃದಯವಿರಲು
ಸಮಾಜದಲಿ ವೈಶಾಲ್ಯ ಹರಡದಿರಲು ಸಾಧ್ಯವೆ.
{ “ಇನ್ನೊಂದು ಬಹಳ ಮುಖ್ಯವಾದ ಅಂಶವೇನೆಂದರೆ ಗುರು ಯಾವಾಗಲೂ ಭಕ್ತನಿಗೆ ಆತ್ಮೀಯನಾಗಿರಬೇಕು. ಬಹಳ ಹತ್ತಿರ ಇರಬೇಕು. ಆ ಆತ್ಮೀಯತೆ ಬರುವುದು ಹೇಗೆ ಎನ್ನುವುದು ಬಹಳ ಕಷ್ಟದ ಪ್ರಶ್ನೆ. ಏಕೆಂದರೆ ಆತ್ಮೀಯತೆ ಬೇಕಾದ ಹಾಗೆ ಬರುವಂತಹದ್ದಲ್ಲ. ಶಿಷ್ಯರಿಗೆ ಬೇಕಾದ ಹಾಗೆ ಇರುವಂತಹದ್ದಲ್ಲ. ’ಗುರು ಶಿಷ್ಯರನ್ನು ಆಕರ್ಷಿಸುವಂತಹ, ಅವರ ಚಿತ್ತವನ್ನು ಅಪಹರಿಸುವಂತವನಾಗಿರಬೇಕು’ ಅಂತ ಒಂದು ಮಾತಿದೆ. ಶಿಷ್ಯರ ಚಿತ್ತಾಕರ್ಷಣೆ ಮಾಡಬೇಕಾದರೆ ಅದು ಗುರುವಿನ ವ್ಯಕ್ತಿತ್ವದಿಂದ ಆಗಬೇಕು. ಮಾತಿನಿಂದ ಆಕರ್ಷಿಸಬೇಕು. ಮತ್ತೆ ಹೃದಯಪೂರ್ವಕವಾಗಿ ಆಕರ್ಷಿಸಬೇಕು. ನಾನು ಕಂಡ ಹಾಗೆ ಶ್ರೀಗಳಲ್ಲಿ ಮಾತೃ ಹೃದಯವಿದೆ. ಬಹಳ ಸವಿಯಾದ ಮಾತನಾಡುವಂತಹ ಅಭ್ಯಾಸ ಇದೆ, ಸಂಸ್ಕಾರ ಇದೆ. ಅವರ ಧ್ವನಿಯೂ ಕೂಡ ಆಕರ್ಷಕವಾದದ್ದು. ಹೀಗಾಗಿ ಮೂರೂ ಅವರಲ್ಲಿ ಬೆರೆತಿದೆ: ಅವರ ಮುಖದ ತೇಜಸ್ಸು, ಅವರ ವಾಕ್ಶಕ್ತಿ, ಮತ್ತು ಮಾತೃ ಹೃದಯವನ್ನು ಹೊಂದಿರುವಂತಹದ್ದು. ಅದರ ಜೊತೆಗೆ ಅವರ ಧ್ವನಿ ಕೂಡ ಪ್ರಭಾವಶಾಲಿ. ಇದು ಅವರು ಎಲ್ಲೇ ಹೋದರೂ ಶಿಷ್ಯರು ಆಕರ್ಷಿತರಾಗುವಂತೆ ಮಾಡಿದೆ. ಅದರ ಜೊತೆಗೆ ನಾನು ಕಂಡ ಹಾಗೆ , ಅವರ ಶಿಷ್ಯ ಸಮುದಾಯದವರನ್ನಲ್ಲದೇ ಇತರ ಸಮಾಜದವರನ್ನೂ ಕೂಡ ಸಮಾನವಾಗಿ ಆಕರ್ಷಿಸುತ್ತಾರೆ. ಉದಾಹರಣೆಗೆ, ಕಡೂರಿನ ಕೃಷಿ ಮೇಳಕ್ಕೆ ಅವರು ಬಂದಿದ್ದರು. ಅಲ್ಲಿ ಸಹಜವಾಗಿಯೇ ಎಲ್ಲ ಸಮಾಜದವರೂ , ಸಂಪ್ರದಾಯದವರೂ, ಮತಧರ್ಮದವರೂ ಇದ್ದರು. ಅಂದಿನ ಅವರ ಮಾತು ಹೇಗಿತ್ತೆಂದರೆ, ಸರ್ವಧರ್ಮಗಳಿಗೂ , ಎಲ್ಲ ಜಾತಿಮತಪಂಥದವರಿಗೂ ಅನುಗುಣವಾಗಿ, ಆಕರ್ಷಣೀಯವಾಗಿ ಇತ್ತು. ಮತ್ತು ಅದು ಸಭೆಗೆ ಒಂದು ಉಪಯುಕ್ತವಾಗಿರತಕ್ಕಂತಹ ಸಂದೇಶವಾಗಿತ್ತು. ಪ್ರವಚನ ಪ್ರಾರಂಭ ಮಾಡಿ ಹತ್ತು ನಿಮಿಷದ ಒಳಗೆ ಎಲ್ಲರನ್ನೂ ಆಕರ್ಷಿಸಿಬಿಟ್ಟರು. ಇಂತಹ ಶಕ್ತಿ ಬಹಳ ಕಡಿಮೆ ಜನರಿಗೆ ಇರುತ್ತದೆ. ಅಲ್ಲದೆ ಅವರ ಮಾತಿನಲ್ಲಿ ಸಹಜತೆ ಇರುತ್ತದೆ. ಅವರು ಪ್ರವಚನ ಕೊಡುವಾಗ ಅಲ್ಲಿನ ಸಂದರ್ಭಕ್ಕೆ ಸರಿಯಾಗಿ ಏನೋ ಮೇಲೆಮೇಲೆ ಮಾತನಾಡುವುದಲ್ಲ, ಹೃತ್ಪೂರ್ವಕವಾಗಿ ಮಾತು ಹೊರಗೆ ಬರುತ್ತದೆ.” }
.
.
ನೇತ್ರಾವತಿ ಹರಿಯುತಿಹಳು, ಮನಸ್ಸು-ಚಿತ್ತ-ಬುದ್ಧಿಗಳನ್ನು ಒ೦ದು ಮಾಡುತಿಹಳು, ಪರಮಾತ್ಮನ ಆತ್ಮವ ಬೆಸೆಯುತಿಹಳು.
July 17, 2010 at 6:57 PM
missed the question mark in above comment
.
“ನೆನಪಿನ ದೃಶ್ಯಗಳು ಆಕಾಶದಲ್ಲಿ, ಪರಮಾಕಾಶದಲ್ಲಿ, ಚಿದಾಕಾಶದಲ್ಲಿ ಸದಾ ಇರುವುದು ?????”
July 17, 2010 at 7:00 PM
ಅರಿವೇ ಗುರುವೆಂಬ ನಾಣ್ಣುಡಿ ಸತ್ಯ ಆದರೆ ಅರಿವು ಮೂಡಲುಬೇಕು ಗುರುವಿನಗತ್ಯ. ಗುರುವನ್ನ ಬಿಟ್ಟು ಅನ್ಯವೆಲ್ಲ ಮಿಥ್ಯ. ಈ ಮನೋಧರ್ಮವನ್ನು ಆಧುನಿಕ ಯುಗದಲ್ಲೂ ಕಂಡು ಬೆಳೆಸಿಕೊಂಡು ಬಂದವರು ಶ್ರೀ ಹೆಗ್ಗಡೆಯವರು.ಇಂತಹ ಮಹಾನ್ ವ್ಯಕ್ತಿಗಳು ಮಠದ ಮತ್ತು ಸಮಾಜದ ಪ್ರಮುಖ ಕೊಂಡಿಗಳು. ಸಮಾಜ ನಂಬಿದ ‘ಸುಸಂಸ್ಕೃತರು’ ಅಂದರೆ ಹೆಗ್ಗಡೆಯವರು. ಧರ್ಮಸ್ಥಳ ಅಂದರೆ ಧರ್ಮಕರ್ಮಗಳ ಸಂಗಮ ಸ್ಥಳ. ಇಂತಹ ಧರ್ಮ ಕಾರ್ಯ ಮಾಡುವ ಸ್ಥಳದಿಂದ ನಮ್ಮ ಗುರುಗಳ ಧರ್ಮ ಪೀಠಕ್ಕೆ ಇನ್ನಷ್ಟು ಹೆಚ್ಚಿನ ಸಂಪರ್ಕವಾಗಲಿ. ಆ ಮೂಲಕ ಸಮಾಜದಲ್ಲಿ ಧರ್ಮದ “ಜ್ಯೋತಿ” ಬೆಳಗಲಿ.
ಹರೇ ರಾಮ.
July 18, 2010 at 1:04 AM
“..ಪುಥ್ಹಳಿ ಚಿನ್ನದಲ್ಲಿ ಕಟ್ಟಿದ ನವರತ್ನ ಮಣಿಗಣಿ ಯಂತೆಸೆವುದು, ಧಮಾರ್ಧಿಕಾರಿಗಳ ವಾಕ್ಯಗಳಲ್ಲಿ ಶ್ಶ್ರೀಮಜ್ಜಗದ್ಗುರುಗಳು…”
July 18, 2010 at 10:01 AM
Hareraama
An excellent portrayal of Sri Swamiji by another eminent spiritual leader…Great work by the editorial team
July 18, 2010 at 12:18 PM
Vishwamitranige Vasishtara mechugeye nijavada mechuge
July 18, 2010 at 3:04 PM
ಶ್ರೀ ಗುರುಗಳ ವಾತ್ಸಲ್ಯ, ಶಿಷ್ಯ ಪ್ರೇಮ, ಹೊಸ ತನ, ಸಾಮಜಿಕ ಕಳಕಳಿ, ಮೂಕ ವೇದನೆಯ ಧ್ವನಿ, ಆ೦ದೋಲನ ಉ೦ಟು ಮಾಡಿದ ಕ್ರಾ೦ತಿಕಾರಿ, ಗುಣ ಗ್ರಹಣ ಸ್ವಭಾವ, ನಿರ್ಮಲ ಪ್ರೇರಣೆ – ಪ್ರೋತ್ಸಾಹ ಮೊದಲಾದವುಗಳನ್ನು ಅದೆಷ್ಟು ಒಪ್ಪವಾಗಿ, ಹೃದ್ಯವಾಗಿ ಪಡಿಮೂಡಿಸಿದ್ದಾರೆ – ಪೂಜ್ಯ ಹೆಗ್ಗಡೆಯವರು.. ಆನ೦ದವಾಯಿತು.
ಪ್ರಣಾಮಗಳು.
ಮೋಹನ ಭಾಸ್ಕರ ಹೆಗಡೆ.
July 18, 2010 at 9:47 PM
ಮಾತೃಹೃದಯದ ಶ್ರೀಗಳ ಬಗ್ಗೆ ಮಾತೃ ಹೃದಯದ ಹೆಗ್ಗಡೆಯವರ ಮಾತು ಸುಂದರವಾಗಿ ಬಂದಿದೆ
July 19, 2010 at 10:53 AM
‘ಮಾತೃಹೃದಯದ’ ದಿವ್ಯ ಸೂರ್ಯನ ಬಗ್ಗೆ ‘ಮಂಜುನಾಥನ ‘ ಮಡಿಲಿನ ಪೂಜ್ಯರ ‘ನುಡಿ’ ಗಳು ಸುಂದರವಾಗಿ ಮೂಡಿಬಂದಿದೆ.
‘ಪವಿತ್ರತೆ’ಯೊಂದು ‘ಪವಿತ್ರ’ ನ ಬಗೆಗೆ..
‘ಸಾತ್ವಿಕತೆ’ ಯೊಂದು ‘ಸಾತ್ವಿಕ’ ನ ಬಗೆಗೆ.. ಮಾತನಾಡಿದಂತಿದೆ ಈ ಲೇಖನ.
‘ಸುಗುಣ’ ಭಾಸ್ಕರದ್ವಯರಿಗೆ ನಮೋ ನಮ: .
||ಹರೇ ರಾಮ||
July 19, 2010 at 12:00 PM
ಹರೇರಾಮ,
ಚಂದ್ರಮೌಳೀಶ್ವರನ ಕಂಡ ಮಂಜುನಾಥ
ಭೂಮಿ ತೂಕದ ಭೂಮಿ
ಹರೇರಾಮ
July 19, 2010 at 1:13 PM
ಹರೇ ರಾಮ
ಶ್ರೀ ಗುರುಗಳೊಂದಿಗಿನ ಆತ್ಮೀಯ ಒಡನಾಟಗಳನ್ನು ಹೆಗ್ಗಡೆಯವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಗುರುಗಳ ಅಂತರಂಗದ ಪ್ರತಿಬಿಂಬವಿದು.
ಅಂತೆಯೇ ಬಹುಮುಖಿ ವ್ಯಕ್ತಿತ್ವದ ಹೆಗ್ಗಡೆಯವರ ಪರಿಚಯವೂ ಅದ್ಭುತವಾಗಿ ಮೂಡಿಬಂದಿದೆ.
July 19, 2010 at 5:00 PM
ಹರೇರಾಮ.. ಬಹು ಸುಲಭದಲ್ಲಿ ಮಹಾತ್ಮರ ಮಾತು ಕೇಳಲು, ಅವರೊಡನೆ ಮಾತನಾಡಲು, ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವ ಅವಕಾಶವಿರುವ ನಾವು ಪುಣ್ಯವಂತರೆ ಸರಿ.. ಈ ವಾರದ ಹರೇರಾಮದ ಪ್ರಮುಖರಾಗಿರುವವರು.., ಈ ಶತಮಾನದ ಮಾದರಿ ವ್ಯಕ್ತಿಯಂತೆ ಬಹಳಷ್ಟು ಜನರನ್ನುದ್ಧರಿಸಿದ ಪ್ರಮುಖರು.. ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರು.. ತಮ್ಮ ಪಾರಂಪರಿಕ ಪಟ್ಟದ ಅಧಿಕಾರದ ವ್ಯಾಪ್ತಿಯಲ್ಲಿ ಶ್ರೀ ಮಂಜುನಾಥನ ಭಕ್ತಾದಿಗಳನ್ನಷ್ಟೇ ಅಲ್ಲ.., ಜಾತಿ,ಮತ ಬೇಧ ವಿಲ್ಲದೆ ನಾಡಿನ ಸಮಸ್ತ ಜನತೆಯ ಏಕೀಕರಣಕ್ಕೆತಮ್ಮನ್ನು ತಾವು ತೊಡಗಿಸಿಕೊಂಡವರು, ಜನಸೇವೆಗೆ ತಮ್ಮನ್ನೇ ಸಮರ್ಪಿಸಿಕೊಂಡವರು… ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿಯವರೊಂದಿಗಿನ ತಮ್ಮ ಒಡನಾಟದ ಬಗ್ಗೆ ತುಂಬಾ ಮನೋಹರವಾಗಿ ಮನ ಮುಟ್ಟು ವಂತೆ ವರ್ಣಿಸಿದ್ದಾರೆ.. ಶ್ರೀ ಗಳ ಗೋಸಂರಕ್ಷಣೆ ಯ ಮಹತ್ಕಾರ್ಯ ಉತ್ತಮವಾಗಿ ನಡೆಯುತ್ತಿರುವ ಬಗ್ಗೆ ಖಾವಂದರು ಶ್ಲಾಘಿಸುತ್ತಾ ಒಳ್ಳೆಯ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ.. ಈ ಎರಡು ದಿಗ್ಗಜರೂ ಸಂಘಟನಾ ಪರಿಣತರು… ನಾಡಿನ ಮೂಲೆ ಮೂಲೆಯ ಜನರೆಲ್ಲಾ ಒಂದೇ ಮನಸ್ಸಿನಿಂದ ಒಂದುಗೂಡಲು ಈ ಎರಡು ಶಕ್ತಿಗಳೂ ಹಾಕಿದ ಶ್ರಮ ಈಗ ಸಾರ್ಥಕ ಎನಿಸುತ್ತದೆ … ಎರಡು ಪರಂಪರೆಗಳೂ ತಮ್ಮ ತಮ್ಮ ಕಾರ್ಯ ವೈಶಿಷ್ಟ್ಯಗಳಿಂದ ತಮ್ಮದೇ ಛಾಪು ಜಗತ್ತಿಗೆ ಸಾರಿವೆ.. ಇನ್ನು ಮುಂದೆಯೂ ಇದು ಇನ್ನೂ ಬಲವಾಗಿ ಶಕ್ತಿಯುತವಾಗಿ ಮುನ್ನಡೆದು ಜಗತ್ತಿಗೆ ಮಾದರಿಯಾಗಲಿ.. ಹರೇ ರಾಮ……
July 20, 2010 at 3:09 PM
ಮಾತೃ ಹೃದಯದ ಶ್ರೀಗಳ ಬಗ್ಗೆ ಮಾತೃ ಹೃದಯದ ಹೆಗ್ಗಡೆವರ ಲೇಖನ ತುಂಬಾ ಸುಂದರವಾಗಿ ಬಂದಿದೆ
July 20, 2010 at 3:34 PM
ಹರೇ ರಾಮ. ಚಂದ್ರಮೌಳೀಶ್ವರನಿಗೆ ಮಂಜುನಾಥೇಶ್ವರ ಸಾಥ್ ಕೊಟ್ಟಿದ್ದಾನೆ. ಧರ್ಮ ಪೀಠವನ್ನು ದೇವ ಪೀಠ ಪ್ರಶಂಸಿಸುತ್ತಿದೆ. ನೂರಾರು-ಸಾವಿರಾರು ವರ್ಶಗಳ ಇತಿಹಾಸವಿರುವ ಎರಡು ಕ್ಶೇತ್ರಗಳ ಕಣ್ಮಣಿಗಳ ಪರಸ್ಪರ ಅಭಿನಂದನೆಗಳು ಓದುಗರಿಗೆ ಭಾವದೌತಣ ನೀಡಿದೆ. ಇಂತಹ ಪ್ರಮುಖರ ಭಾವನೆಗಳನ್ನು ನಮಗೆ ಪರಿಚಯಿಸಿದ ‘ಹರೇ ರಾಮ’ ಸಂಪಾದಕ ತಂಡಕ್ಕೆ ಜೈ!
July 20, 2010 at 5:41 PM
Beautiful
July 21, 2010 at 8:56 AM
ಹಗಲಿರುಳು ಸಮಾಜದ ಉದ್ದಾರಕ್ಕಾಗಿ ಶ್ರಮಿಸುವ, ಸದಾ ಹಸನ್ಮುಖ ಶ್ರೀಗಳು ನಮಗೆ ಸಿಕ್ಕಿದ್ದು ಪುಣ್ಯ. ಹರೇ ರಾಮ
July 21, 2010 at 1:04 PM
Hare Rama,
This article has a special place in Mutt’s history. Dharmadhikari has really assessed and narrated the details in a magnificent way. May God bless us through them.
Regards, Murali Adkoli.
July 21, 2010 at 2:28 PM
ಹೀಗೇ ಅನ್ಯೋನ್ಯವಾಗಿರಲಿ ಈ ಧರ್ಮಪೀಠ-ದೇವಪೀಠಗಳ ಮೈತ್ರಿ. ಎಲ್ಲೆಲ್ಲೂ ಅಧರ್ಮವೇ ಹೆಚ್ಚುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಸಾತ್ವಿಕ ಶಕ್ತಿಗಳು ಒಂದಾಗಿರುವುದು ಅನಿವಾರ್ಯವೆನಿಸುತ್ತದೆ. ರಾಜರ್ಷಿಗಳಿಗೆ ನಮ್ಮ ರಾಜಪೀಠದ ಬಗೆಗಿರುವ ಗೌರವಾದರಗಳನ್ನು ತಿಳಿದು ಮನದುಂಬಿ ಬಂತು.
July 21, 2010 at 8:32 PM
ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಮನದಾಳಾದ ಮಾತು.ಸಮಯೋಚಿತ.
ಶ್ರೀ ಕ್ಷೇತ್ರ ಧರ್ಮಸ್ಥಳದ ನಡೆದಾಡುವ ದೇವರೆಂದೇ ಹೆಸರಾದ ಶ್ರೀ ಹೆಗ್ಗಡೆಯವರಿಂದ ಇನ್ನೊಬ್ಬ ನಡೆದಾಡುವ ದೇವಯತಿಗಳ ಬಗ್ಗೆ ಮನ ಬಿಚ್ಚಿದ ಮಾತುಗಳು. ಕೇಳಲು ಅದೆಷ್ಟು ಹಿತ. ಸಂಸ್ಥಾನದೊಂದಿಗಿನ ತನ್ನ ಒಡನಾಟದ ಹಿತ ಅನುಭವ, ಅಲ್ಲಿಯ ಕಾರ್ಯ ವೈಖರಿಗೆ ಬಗ್ಗೆ ಅಭಿಮಾನ, ಶ್ರೀ ಶ್ರೀಗಳ ಸಮಾಜ ಮುಖೀ ಯೋಜನೆಗಳ ಬಗ್ಗೆ ಪ್ರಶಂಸೆ, ಎಲ್ಲಕ್ಕಿಂತ ಹೆಚ್ಚಾಗಿ “ಶಿಷ್ಯ ವಾತ್ಸಲ್ಯ” ಮತ್ತು “ಮಾತೃ ಹೃದಯ” ವೆಂಬ ನಿತ್ಯ ಸತ್ಯ ವನ್ನು ಒಪ್ಪಿ, ಅಪ್ಪಿಕೊಂಡ ಬಗೆ, ನಿಜಕ್ಕೂ ಪ್ರಶಂಸನೀಯ.
“ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು”
ಹರೇ ರಾಮ
January 29, 2011 at 10:21 PM
l ಹರೇ ರಾಮ l
ರಾಜರ್ಷಿ ಗಳಿ೦ದ ರಾಜ ಋಶಿ ಯ ವರ್ಣನೆ ಹ್ರದಯಸ್ಪರ್ಶಿಯಾಗಿದೆ.
January 29, 2011 at 10:39 PM
ಮಾತೃಹೃದಯವಿರುವ ಶ್ರೀಗಳಿಗೆ ಹಾಗೂ ಮಾತೃಹೃದಯವಿರುವ ಹೆಗ್ಗಡೆಯವರಿಗೆ ಅನ೦ತ ಪ್ರಣಾಮಗಳು. ನಿಮ್ಮ ವಿದ್ಯಾಸ೦ಸ್ಟೆಯಲ್ಲಿ ಕಲಿಯುತ್ತಿರುವ ನಾನೇ ಧನ್ಯ.
January 31, 2011 at 8:08 PM
ll ಹರೇ ರಾಮ ll
ಶ್ರೀ ಸ೦ಸ್ತಾನಕ್ಕೆ ಶಿಷ್ಯೆ ಹಾಗು ಹೆಗ್ಗದೆಯವರಿಗೂ ಶಿಷ್ಯೆ ನೀನೇ ಧನ್ಯಳು
February 7, 2011 at 3:35 PM
ಧನ್ಯವಾದಗಳು………..
January 30, 2011 at 7:03 AM
ಗುರುಚರಣಗಳಿಗೆ ಹಾಗೂ ಹೆಗ್ಗಡೆಯವರಿಗೆ ಅನಂತ ಪ್ರಣಾಮಗಳು.
ಹುಟ್ಟಿನಿಂದ ಈ ಗುರುಪೀಠದ ಶಿಷ್ಯೆ. 5 ವರ್ಷಗಳ ಕಾಲ S D M College, Ujire ಇದರ ವಿದ್ಯಾರ್ಥಿನಿ . ಈ ಇಬ್ಬರು ಮಾತ್ರುಹೃದಯಿಗಳ ಮಡಿಲಲ್ಲಿ ಬೆಳೆದ ನನಗೆ ಇದನ್ನು ಓದಲು ಹೆಮ್ಮೆಯೆನಿಸುತ್ತದೆ.
January 31, 2011 at 10:50 AM
hare raama,
nanu, ivara vidya samstege matru stana dalliruva S.D.M. college,Ujire yalli 2 varsha kalitiddene….
innondu nanna bhagyavendare,, heggadeyavara jote 1 KM nastu nadedadidene,, dodda gumpinalli alla,, heggadeyavaranu serisi 4 jana iddevu aste….
June 24, 2011 at 2:16 PM
maanya sri poojya gurugaladanthaha sri sri sri Dr:veerendra hegdeyavarige namaskaragalu manjunathanige nimma seva anathavadddu nimma seveyu chira kala ege irali endu ashisuttene manjunatha & hegde avarige vandanegalu.
( MANJUNATHANA BHAKTHA)
Hanumantharaju.b.r
bannikuppe(v),
ganakal(po),
bidadi(ho),
ramanagara(tq&dist)-562109
June 29, 2011 at 1:21 PM
jagattina tande-taai namma shreegalu
June 19, 2012 at 4:35 PM
indina janangadalliyu nodida ksana kai mugiyabekendenisuva devaru, Dr. Veerendra Heggadeyavarige anantha namanagalu….
February 18, 2013 at 11:05 AM
om sri manjunatheswar namha sri veerendra heggadeyavra ru sdgunru mukada tejashopurna , srwadrmagligu akrsaniyavada stala sri ksethra
December 8, 2013 at 6:50 AM
We surrender to thee, Oh adorable lord,Supreme teacher of the Universe Eternally pure, Oh highest God. SADGURU, the Light that dissolves all darkness—the Light of Truth Universal which blazes victoriously for all eternity!
Gopala Krishna M N
Vijayanagar,Bangalore
April 18, 2015 at 7:23 PM
ವಿಶ್ವ ಧರ್ಮದ ಗುರುವೇ
ಮಾನವ ಕಲ್ಯಾಣ ಕಲ್ಪತರುವೇ
ಎಲ್ಲರಿಗೂ ಎಲ್ಲವ ಕೊಟ್ಟ ದೇವರೇ
ತಮಗೆ ಸಮಾಜ ಸರಕಾರ ಕೊಡಲೇನು ಕಿಮ್ಮತ್ತು
ಥಾವು ನಾಡಿನ ಸಂಪತ್ತು
ಮಾನವ ಕುಲದ ಕಾಮಧೇನು ಕಲ್ಪತರು
ಧರ್ಮಸಂಸ್ಥಾಪನೆಗೆ ಅವತಾರವೆತ್ತಿದ ಶ್ರೀಕೃಷ್ಣ ಧ್ವಾಪರದಲಿ
ಅವನದೇ ಕಾಯಕವ ಸ್ಥಾಪಿಸಿದಿರಿ ಕಲಿಯುಗದಲಿ
ಓ ಧರ್ಮರಾಯರೇ ನಿಮಗಿತ್ತ ಜನತೆ ಸರಕಾರ ಸಮಾಜ ಪದ್ಮಗಳಿಗೆ ಅಭಿನಂದನೆಗಳು
ಇದು ಅತೀಕಡಿಮೆಯಾಗಿದೆಯೆಂದು ಸರ್ವರಿಗು ಅನಿಸಿರಲು
ತಮಗೆ ಹಲವಾರು ರತ್ನಗಳು ಭಾರತರತ್ನ, ನೊಬೆಲ್ ಶಾಂತಿ ಪದಕಗಳು
ದೊರಕಲೆಂದು ಆಶಿಸುನ ನಾನೊಬ್ಬ ತಮ್ಮ ಅಭಿಮಾನಿಯಾಗಿರಲು
ಸುಂದರೀಸುತ ಸೋಮಶೆಃರನ ನಮ್ರ ವಂದನೆಗಳನು ಸ್ವೇಕರಿಸಿರಿ
ನಮ್ಮೆಲ್ಲರಿಗೂ ಕಣುವಾ ದೈವ ನೀವಾಗಿರಲು
ನಮಗಿನ್ನೇನು ಬೇಕೆಂದು ತಿಳಿದಿರಲು ಸಾಕು
ನ್ಯಾಯಮೂರ್ತಿ ಸೋಮಶೇಖರ ಮತ್ತು ಅವರ ಕುಟುಂಬದ ಸದಸ್ಯರು