ಇಷ್ಟೋ ಅಷ್ಟೋ ಈಶ್ವರನಿಗೆ ಸಮರ್ಪಿಸಿ, ‘ನಾನೊಬ್ಬ ಮಹಾದಾನಿ’ ಎಂದು ಗರ್ವಪಡಬೇಡ..
ಏಕೆಂದರೆ ನಿನ್ನಲ್ಲಿರುವುದಷ್ಟೂ ಈಶ್ವರನದೇ ಆಗಿದೆ..
ತೋಟದ ಆಳು ಮಾಲೀಕನಿಗೆ ತೋಟದಿಂದ ನಾಲ್ಕು ಎಳನೀರು ಕಿತ್ತುಕೊಟ್ಟು, ಕೊಟ್ಟೆನೆಂದು ಬೀಗಲುಂಟೇ?
ತೋಟದಲ್ಲಿ ಬೆಳೆದುದೆಲ್ಲವನ್ನೂ ಕೊಟ್ಟು ವಿನಯದಿಂದ ತಲೆಬಾಗಬೇಕಾದುದಲ್ಲವೇ ಕರ್ತವ್ಯ ?
‘ಮೆರೆಯದಿರು ನಾ ಮಹಾದಾನಿಯೆಂದು
ಮರೆಯದಿರು ನೀ ಮಾಲಿ, ಅವನೇ ಮಾಲೀಕನೆಂದು’
॥ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ ॥
Facebook Comments Box
June 11, 2011 at 1:31 PM
🙂
June 11, 2011 at 10:19 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಇಷ್ಟೊಂದು ಸುಂದರವಾದ ತೋಟದಲ್ಲಿ ಇಷ್ಟು ಒಳ್ಳೆಯ ಕೆಲಸವನ್ನು ಮಾಲಿಕನು ವಹಿಸಿ ಕೊಟ್ಟಿರುವಾಗ… ರಾಮ… ರಾಮ…ರಾಮ…
June 12, 2011 at 7:24 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಮಾನವನ ಜೀವನವೇ ಒಂದು ಸುಂದರವಾದ ತೋಟ, ಸದ್ಗುಣಗಳೇ ಬೆಳೆಯಬೇಕಾದ ಬೆಳೆಗಳು”
June 11, 2011 at 11:36 PM
Koti Pranamagalu Gurudeva. Nija Maliya Kelasa Madi Trupti Honduva Hambala. Anugraha Sada Erali.
June 12, 2011 at 1:26 AM
ಹರೇರಾಮ.
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯಲು
ಬಿಡದಿಹ ಮಾಯೆಯಿದ ಬಗೆಹರಿಪ ಬೆಳಕ ತೋರಿ
ಸಲಹು ಕಿಂಕರನ ಶರಣು ಶಂಕರನೇ….!!
June 12, 2011 at 10:40 AM
Raamabana………
June 12, 2011 at 2:15 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಿಜ… ಈ ಒಂದು ರಾಮಬಾಣವು ಎಂದೆಂದೂ ‘ಅಹಂ’ ನ್ನು ದಮನಿಸುತ್ತಿದ್ದರೆ ಸಾಕು…
June 12, 2011 at 7:14 PM
Very true… ಯಾವಾಗಲೂ ನೆನಪಿರಬೇಕಾದ ಮಾತು… ಆದರೆ ಬೇಗ ಮರೆತು ಹೋಗುವ ವಿಷಯ.
June 12, 2011 at 10:59 PM
ಹರೇ ರಾಮ
ಗುರುಚರಣಗಳಿಗೆ ಅನ೦ತ ಕೋಟಿ ಪ್ರಣಾಮಗಳು. ಕಣ್ ತೆರೆಸಿದಿರಿ ಗುರುವೇ……..
June 13, 2011 at 10:43 AM
ಹರೇ ರಾಮ
ಅತ್ಫ್ಯಂತ ಗಹನವಾದ ವಿಚಾರವ ಅತ್ಫ್ಯಂತ ಸುಲಭದ ರೀತಿಲಿ ತಿಳಿಸುವ ಶ್ಫ್ರೀ ಸಂಸ್ಫ್ಥಾನವ ಎಷ್ಫ್ಟು ಪ್ಫ್ರಣಾಂಗಳ ಸಲ್ಫ್ಲಿಸಿದರುದೆ ಕಡಿಮೆಯೇ
ಮರುವಳ ನಾರಾಯಣ್
June 13, 2011 at 2:29 PM
ಹರೇ ರಾಮ
” ನೀನಿತ್ತಿಹ ಬಾಳ್ ನಿನ್ನ ಅರ್ಚನೆಗೆ ”
ಮನಸು ಕೊಡು ಗುರುವೆ ,ಹೇ ದೇವಾ
June 13, 2011 at 2:30 PM
ಹರೇರಾಮ್,
ನಾ ನಿನ್ನ ದಾಸನಯ್ಯಾ,
June 13, 2011 at 6:02 PM
ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೆ॥
ಹರಿಯ ಕರುಣೆಯೊಳಗಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೋ…..
ಹರೇ ರಾಮ…
June 13, 2011 at 7:19 PM
ಹರೇರಾಮ ಸಂಸ್ಥಾನ.
[|| ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ|| ]
ಇದು ನಾವು ಯಾವ ಕೆಲಸ ಮಾಡುವಾಗಲೂ ನೆನಪಿನಲ್ಲಿಡಬೇಕಾದ ವಾಕ್ಯ!!!
ಎಲ್ಲವೂ ಭಗವಂತನ ಕೊಡುಗೆಯೇ! ನಾವು ಕಾಣುವ, ಕಾಣದ, ಅರಿತ, ಅರಿಯದ ಎಲ್ಲವೂ!!!
ನಮ್ಮ ಸುತ್ತಲೂ ನಮಗೆ ಭಗವಂತನ ಸೇವೆಗೆ ಪೂಜೆ ಮಾತ್ರ ಅಲ್ಲದೆ ಇರುವ ಬೇರೆ ಬೇರೆ ಅವಕಾಶಗಳನ್ನು ನಾವು ಏಕೆ ಗುರುತಿಸಿಕೊಳ್ಳುವುದಿಲ್ಲ?
ಬೇರೆ ಏನೂ ಈಶ ಸೇವೆ ಮಾಡದಿದ್ದರೂ, ಯಾರ ಅನುಗ್ರಹದಿಂದ ನಾವು ಸುಭಿಕ್ಷರಾಗಿದ್ದೇವಾ ( ಎಂದರೆ ನಮ್ಮ ಕುಲದೇವರಿಗೆ, ದೈವಕ್ಕೆ, ಪೀಠಕ್ಕೆ) ಈ ದೇವ ಕಾರ್ಯಗಳನ್ನು ಮಾಡಬೇಕಾದಲ್ಲಿ ಏಕೆ ಮಾಡದೆ ಇರುತ್ತೇವೆ? ಒಂದು ವೇಳೆ ಮಾಡಿದರೆ ಅಷ್ಟು ಮಾಡಿದೆ ಎಂಬ ಅಹಂ ನಮ್ಮಲ್ಲಿರುತ್ತದೆ ಅಲ್ಲವೇ?
ನಮ್ಮ ಸುತ್ತಲಿರುವ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವ ಭಗವಂತನ ಪ್ರಿಯ ಕೆಲಸಗಳನ್ನು ನೋಡಲು, ಮಾಡಲು ನಮಗೆ ಅಂತಹಾ ಅಂತಃ ದೃಷ್ಟಿ ಕೊಡಿ ಸಂಸ್ಥಾನ.
ಧನ್ಯವಾದ ಸಂಸ್ಥಾನ.
ಹರೇರಾಮ.
June 14, 2011 at 8:53 AM
ನಾನೇನೂ ಅಲ್ಲದಿರುವಾಗ, ನಾನೇ ಅವನಾಗಿರುವಾಗ – ಅವನೇ ನಾನಾಗಿರುವಾಗ, ನಾನೆಂಬ ನನಗಾದ ಸಂತೋಷ, ದುಃಖ, ಕಷ್ಟ, ಸುಖ, ಆನಂದ, ನೋವು, ನಲಿವು, ಹಸಿವು, ತೃಪ್ತಿ, ಧನ್ಯತೆ, ನೆಮ್ಮದಿ ಎಲ್ಲವೂ ಅವನೆಂಬ ನನಗೆ, ತನ್ಮೂಲಕ ನಾನೆಂಬ ಅವನಿಗೇ ಅರ್ಪಿತ.
|| ಹರೇ ರಾಮ ||
June 14, 2011 at 12:53 PM
ಹರೇ ರಾಮ
June 14, 2011 at 4:49 PM
ಗುರುವಿಗಾಗಿ ಮಾಡಿದ ಅಲ್ಪ ಸ್ವಲ್ಪ ಸೇವೆಯನ್ನು, ತಾನು ಗುರುವಿಗೇ ಮಾಡಿದ ಉಪಕಾರವೇನೋ ಅಥವಾ ನಾನೇನಾದರೂ ಕಳಕೊಂಡೆನೋ ಎಂದು ನಮ್ಮ ಮರ್ಕಟ ಮನ ಕೆಲವೊಂದು (ಕೆಟ್ಟ)ಘಳಿಗೆ ಭ್ರಮಿಸುವುದುಂಟು. ಈ ಸೂಕ್ಷ್ಮ ಅಹಂ-ಗೆ ಚಾಟಿಯೇಟಂತಿದೆ ಈ ಶ್ರೀಮುಖ.
ನಮ್ಮ ತನು,ಮನ,ಧನವೆಲ್ಲ ಗುರುವೇ ಕೊಟ್ಟಿದ್ದು, ಅದು ಗುರುವಿಗೇ ಸೇರಿದ್ದು ಎಂಬ ಸತ್ಯವನ್ನರಿತು ಗುರುಸೇವೆಯನ್ನು ಮಾಡಿದರೆ ಯಾವ ವಿರೋಧಾಭಾಸವೂ ಮನದಲ್ಲಿ ಸುಳಿಯಲಾರದು, ಕಳೆದುಕೊಂಡ ಭಾವವೂ ಬರಲಾರದು. ಬದಲಿಗೆ ಸಾರ್ಥಕ್ಯದ ಗಳಿಕೆಯ ಮೌನ ಆನಂದವೊಂದೇ ಉಳಿದೀತು.
June 14, 2011 at 5:28 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು …
ನಿಜ… ಕಬ್ಬು ನುರಿಸಿಕೊಳ್ಳದೆ ಬೆಲ್ಲವಾಗದು… ಇಂಥ ಚಾಟಿ ಏಟು ನಮ್ಮ ಜೀವನವನ್ನು ಸುಂದರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ…
June 16, 2011 at 2:06 PM
Superb!! This is a great lesson to all who measure themselves and want to be recognised for what they give; be it Money or be it the work done for a cause. After all, the wealth is given by the lord and the lord is the one who makes one work for a cause.
–Shri Gurubhyo Namaha
June 17, 2011 at 6:29 AM
Hareraama Gurugalle,
Your thoughts are our insperatioನ್.
June 17, 2011 at 4:42 PM
tumba chennagide
June 23, 2011 at 12:11 PM
hare rama.
June 25, 2011 at 9:24 PM
ಹರೇ ರಾಮ
ಯೋಚನೆಗೂ ನಿಲುಕದ ಸಂದೇಶ.
ಈಶನ ತೋಟದಲ್ಲಿ ಮಾಲಿಯಾಗಲು ಗುರುಕೃಪೇ ಇರಬೇಕು