ಹರೇರಾಮ ಓದುಗರೇ..
ರಾಮಚಂದ್ರಾಪುರ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಈ-ಸಮ್ಮುಖದಲ್ಲಿ ಬರೆಯುವ ಅವಕಾಶಕ್ಕಾಗಿ ಸಾಷ್ಟಾಂಗ ವಂದಿಸುತ್ತೇನೆ.
ಶ್ರೀ ಶಿಷ್ಯರ ಅಂಕಣವಾಗಿರುವ ಸಮ್ಮುಖದಲ್ಲಿ ಆರಂಭಿಕ ಲೇಖವನವಾಗಿ ನಿಮ್ಮೆದುರು ಇಡುತ್ತಿದ್ದೇನೆ.
ಸುಮಾರು ಹದಿನೈದು ಶತಮಾನಗಳಷ್ಟು ಹಿಂದೆ ಶ್ರೀ ಆದಿ ಶಂಕರಾಚಾರ್ಯರು ಅವತರಿಸಿದಾಗ..
ಭಾರತದ ಉದ್ದಗಲಕ್ಕೂ ಅಧರ್ಮ ತಾಂಡವವಾಡುತ್ತಿತ್ತು.
ಯವನ, ಮ್ಲೇಚ್ಛ ಧರ್ಮಗಳ ಆಗಮನದಿಂದಾಗಿ ಸುಂದರ ಸನಾತನ ಸಮಾಜ ನಲುಗಿ ಹೋಗುತ್ತಿತ್ತು..
ವೇದ ಪುರಾಣಗಳ ಉಚ್ಛ ಸಂಸ್ಕೃತ ಕಾವ್ಯಗಳಿಂದಾಗಿ ಪಾಲಿ/ ಪ್ರಾಕೃತದ ದೇಶವಾಸಿಗಳಿಗೆ ಕಬ್ಬಿಣದ ಕಡಲೆಯಾಗಿರುತ್ತಿತ್ತು..
ಬೌದ್ಧಧರ್ಮದ ಸರಳ ತತ್ವಗಳಿಂದಾಗಿ ಜನರ ಒಲವು ಸನಾತನತೆಗೆ ಧಕ್ಕೆಯುಂಟಾಗುತ್ತಿತ್ತು..
ಶ್ರೀ ಕೃಷ್ಣನ ಭಗವದ್ಗೀತೆಯ ಮಾತಿನಂತೆ,
{ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ |
ಭಾರತದಲ್ಲಿ ಅದೆಂದು ಧರ್ಮದ ಚ್ಯುತಿ ಉಂಟಾಗುವುದೋ, ಆ ದಿನ ನಾನು(ಭಗವಂತ) ಅವತರಿಸುತ್ತೇನೆ. }
ಅದೇ ಪ್ರಕಾರವಾಗಿ, ಶಂಕರಾಚಾರ್ಯರ ಅವತಾರವಾಯಿತು.
ಭಾರತದ ಉದ್ದಗಲಕ್ಕೂ ಅವರ ಸಂಚಾರವಾಯಿತು..
ವಿಚಾರವಾದಿಗಳಾದ ಪಂಡಿತರುಗಳನ್ನು, ಋಷಿ ಮುನಿಗಳನ್ನು – ಚರ್ಚೆಯ ಮುಖಾಂತರ ಬುದ್ಧಿಗೆ ಇನ್ನೂ ಹೊಳಪನ್ನು ಕೊಟ್ಟರು..
ತನ್ಮೂಲಕ ಸನಾತನತೆಯ ಬಗೆಗೆ ಅರಿವನ್ನು ಹೆಚ್ಚಿಸಿದರು..
ಬೇರೆ ಧರ್ಮಗಳ ಪ್ರಾಬಲ್ಯ ಇರುವಲ್ಲಿ ಸನಾತನತೆಯ ಪುನಶ್ಚೇತನಗೊಳಿಸಿದರು..
ಕಾಡು, ಏಕಾಂತದಲ್ಲಿ ಮಾತ್ರಾ ಉಳಿದಿದ್ದ ಸನ್ಯಾಸವನ್ನು ಸಮಾಜದ ಮಧ್ಯದಲ್ಲೇ ನೆಟ್ಟು, ಯತಿಗಳೆಂದರೆ ಧರ್ಮಕೇಂದ್ರಬಿಂದುವಾಗಿಸಿದರು, ಅಂತಹ ವಿನೂತನ ಪ್ರಯತ್ನದಿಂದಾಗಿ ನಾಡಿನಲ್ಲಿ ಅರಳಿದ ಪ್ರಥಮ ಯತಿಗಳಾದರು..!
ಸಣ್ಣ ಪ್ರಾಯದಲ್ಲೇ ಅತಿ ದೊಡ್ಡ ಕಾರ್ಯದಿಂದ ಲೋಕೋತ್ತರ ಹೆಸರಾದರು..!
ಇದು ಇಪ್ಪತ್ತೊಂದನೆಯ ಶತಮಾನ..
ಸನಾತನತೆಗೆ ಮತ್ತೊಮ್ಮೆ ಘಾಸಿಯಾಗಿರುವ ಸಮಯ..
ಯವನ, ಮ್ಲೇಚ್ಛರ ಪ್ರಾಬಲ್ಯದಿಂದಾಗಿ ಪವಿತ್ರ ಗೋಮಾತೆಯ ಪ್ರಾಣಹಾನಿಯಾಗುವ ಸಂಭವವೆದುರಾಗಿದೆ..
ವೇದ, ಪುರಾಣ, ರಾಮಾಯಣಗಳ ಅರ್ಥವನ್ನು ಸರಳಗನ್ನಡದಲ್ಲಿ ವಿವರಿಸಬೇಕಾದ ಅನಿವಾರ್ಯತೆಯಿದೆ..
ಇದೇ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠವು ಸಮಾಜದ ಮುಂದೆ ನಿಂತಿದೆ..
ಭರತವರ್ಷದ ಧರ್ಮದ ಮೂಲವೇ ಗೋವು, ಗೋವಿನ ರಕ್ಷಣೆಯೇ ಧರ್ಮರಕ್ಷಣೆಯ ಪ್ರಥಮ ಕಾರ್ಯ – ಎಂಬ ಶುದ್ಧ ತತ್ವವನ್ನು ಲೋಕಕ್ಕೆ ಸಾರುತ್ತ ಭಾರತದ ಮೂಲೆ-ಮೂಲೆಗಳಿಗೆ ಸಂಚರಿಸಿದರು.
ವಿಚಾರವಾದಿಗಳನ್ನು, ರಾಷ್ಟ್ರವಾದಿಗಳನ್ನು ಒಂದೇ ಸೂರಿನಡಿ ಒಗ್ಗೂಡಿಸಿ, ರಾಷ್ಟ್ರದ ಚಿಂತನೆಯ ಕಿಚ್ಚನ್ನು ಬೆಳಗಿಸಿದರು..
ವಿಶ್ವಮಂಗಳ ಗೋ ಗ್ರಾಮಯಾತ್ರೆಯಂತಹ ವಿನೂತನ ಚಿಂತನೆಯೊಂದಿಗೆ ಆಧುನಿಕ ಸಮಾಜಕ್ಕೆ ಧರ್ಮನಾಯಕರಾದರು.
ಕೇವಲ ಧರ್ಮವೊಂದಕ್ಕೇ ಸೀಮಿತವಾಗಿರಿಸದೇ, ಸಂಸ್ಕೃತಿ, ವೇದ,ಗುರುಕುಲ, ಆಚರಣೆಗಳು, ಮುಷ್ಟಿಭಿಕ್ಷೆಯಂತಹ ಸಮಾಜವನ್ನು ಹೊಂದಾಣಿಕೆಯೊಂದಿಗೆ ಮುನ್ನಡೆಸುವ ಕಾರ್ಯದಲ್ಲಿ ದೊಡ್ಡದಾದ ಆಯಾಮವನ್ನು ಕೊಟ್ಟರು.
ಶಿಷ್ಯರೆಲ್ಲಿಯೋ, ಗುರುಗಳೂ ಅಲ್ಲೇ! “ನೆನೆದವರ ಮನದಲ್ಲಿ” ಎಂಬಂತೆ ಶ್ರೀಗಳ ವ್ಯಾಪ್ತಿ ವೆಬ್ ಮೂಲಕವೂ ಹರಿದಾಡುವಂತಿದೆ.
ಕಂಪ್ಯೂಟರ್ ಉದ್ಯೋಗದೊಂದಿಗೆ ಅಂತರ್ಜಾಲದಲ್ಲಿರುವ ತುರ್ತಿನಲ್ಲಿರುವ ಅದೆಷ್ಟೋ ಶಿಷ್ಯರನ್ನು ಸಂಪರ್ಕದಲ್ಲಿಡಲು ತಾವೂ ಅಂತರ್ಜಾಲವನ್ನು ತಮ್ಮದಾಗಿಸಿಕೊಂಡರು.
ಆರ್ಕುಟ್, ಫೇಸ್-ಬುಕ್ ನಂತಹ ಸಾಮಾಜಿಕ ಸಂಪರ್ಕ ಸೇತುವಿಗೆ ಪರ್ಯಾಯವಾಗಿ ಹರೇರಾಮದಲ್ಲೊಂದು ಸಂಪರ್ಕ (ರಾಮ)ಸೇತುವನ್ನು ನಿರ್ಮಿಸಿ ತನ್ಮೂಲಕ ಸಮಾಜದ ’Un touched’ ಶಿಷ್ಯರನ್ನು ಆಶೀರ್ವದಿಸಿ, ಎಚ್ಚರಿಸುವಂತ ಮಹತ್ಕಾರ್ಯ ಮಹದಾಕಾಂಕ್ಷೆಯನ್ನು ಹೊಂದಿದ್ದಾರೆ..
ಕಂಪ್ಯೂಟರ್ ಕ್ಷೇತ್ರದಲ್ಲಿ ಲೀಲಾಜಾಲವಾಗಿ ಹರಿದಾಡಬಹುದಾದ ಆಧುನಿಕ ಯುಗದ ಪ್ರಥಮ ಯತಿಗಳಾಗಿ ನಮ್ಮ ಮುಂದೆ ಇದ್ದಾರೆ!
ತರುಣ ಉತ್ಸಾಹ ಮತ್ತು ಶ್ರದ್ಧೆಯೇ ಇದಕ್ಕೆಲ್ಲವೂ ಕಾರಣ- ಎಂದು ಬೇರೆ ಹೇಳಬೇಕಾಗಿಲ್ಲ.
ನಮಗಾಗಿ ನಮ್ಮಬಳಿ ಬಂದಿರುವ ಶ್ರೀಗಳ ಸಂಪೂರ್ಣ ಆಶೀರ್ವಾದ ಪಡೆಯೋಣ. ಶಿಷ್ಯರೆಲ್ಲರೂ ಹರೇರಾಮದಲ್ಲಿ ಜೊತೆಯಾಗೋಣ.
ಕರಾರಾಧ್ಯ ಶ್ರೀ ರಾಮದೇವರ ಅನುಗ್ರಹ, ಶ್ರೀ ಗುರುಗಳ ಸದಾಶೀರ್ವಾದ ನಮ್ಮೆಲ್ಲರ ಮೇಲೆ ಸದಾಕಾಲ ಇರಲಿ, ಎಂಬ ಆಶಯದೊಂದಿಗೆ ಈ ಬರಹಕ್ಕೆ ವಿರಾಮ ನೀಡುತ್ತಿದ್ದೇನೆ.
ಹರೇ ರಾಮ..
ಸದಾಶಿಷ್ಯ,
~
ಮಹೇಶ ಎಳ್ಯಡ್ಕ
ವ್ಯಕ್ತಿ ಪರಿಚಯ:
ಚಿ| ಮಹೇಶ ಎಳ್ಯಡ್ಕ – ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಎಳ್ಯಡ್ಕದವರು.
ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದಾರೆ.
ಶ್ರೀ ಗುರುಗಳ, ಶ್ರೀಮಠದ ಕಾರ್ಯಯೋಜನೆಗಳ ಬಗೆಗೆ ಒಲವು ಹೊಂದಿರುವ ಇವರು ಬೆಂಗಳೂರಿನ ಯುವ ಬಳಗ “ಅವಲಂಬನ” ಇತ್ಯಾದಿ ಸಂಘಗಳಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ.ವಿಳಾಸ: ಎಳ್ಯಡ್ಕ ಮನೆ, ಪಾಲ್ತಾಡಿ ಗ್ರಾಮ,
ಪುತ್ತೂರು ತಾಲೂಕು, ದ.ಕ
ಸಂಪರ್ಕ: 09448472292
ಈಮೈಲ್: e.mahesha@gmail.com
~
ಸಂಪಾದಕ
June 28, 2010 at 2:13 PM
ಹರೇ ರಾಮ…
ಶ್ರೀ ಸಮ್ಮುಖದಲ್ಲಿ ಮಹೇಶನ ಮನದಾಳದ ಮಾತುಗಳು ತುಂಬಾ ಚಂದದಲ್ಲಿ ಹೊರ ಬಂದಿದೆ… ಭಗವಂತನ ಅವತಾರದಂತೆ ಆವಿರ್ಭವಿಸಿದ ಶ್ರೀ ಶಂಕರಾಚಾರ್ಯ ಭಗವತ್ಪಾದರು.., ದೇಶದೆಲ್ಲೆಡೆ ಸುತ್ತಿ, ಅಲ್ಲಲ್ಲಿ ಹರಡಿ ಹೋಗಿದ್ದ ಜನರನ್ನು, ಜನರ ಮನಸ್ಸನ್ನು ಒಂದುಗೂಡಿಸಿದರು.. ತಮ್ಮ ಗುರುಗಳ ಆದೇಶದಂತೆ ಹಲವಾರು ಗ್ರಂಥಗಳಿಗೆ ಭಾಷ್ಯವನ್ನು ರಚಿಸಿ ಎಲ್ಲರಿಗೂ ಸುಲಭದಲ್ಲಿ ಅಭ್ಯಸಿಸುವಂತೆ ಮಾಡಿದರು… ಸಮಾಜದಲ್ಲಿ ಯತಿಗಳು ತಮ್ಮ ಆಶೀರ್ವಾದ ಬಲ, ಯೋಗ ಬಲ, ಮನೋಬಲಗಳಿಂದ ಸಮಾಜದ ಏಳಿಗೆಗೆ ಕಾರಣೀಭೂತರಾಗಬಹುದೆಂದು ಮಾದರಿಯಾಗಿ ತೋರಿಸಿ ಕೊಟ್ಟವರು.. ಇದೇ ಪರಂಪರೆಯಲ್ಲಿ ಬಂದಂಥಹ ಈಗಿನ ಯತಿವರ್ಯರು, ಅಂಥದೇ ಹರಿದು ಹಂಚಿದ ಸಮಾಜದ ಒಗ್ಗೂಡುವಿಕೆಗೆ ಅವಿರತ ಶ್ರಮದಲ್ಲಿದ್ದಾರೆ.. ವಿಶ್ವಮಾತೆ ಗೋವನ್ನು ರಕ್ಷಿಸಿ ಆ ಮೂಲಕ ಧರ್ಮರಕ್ಷಣೆಯ ಹಾದಿಯಲ್ಲಿದ್ದಾರೆ.. ತಮ್ಮ ಭಕ್ತರೊಂದಿಗೆ ನಿರಂತರ ಸಂಪರ್ಕಕ್ಕಾಗಿ ಇ- ಮಾದ್ಯಮದ ಬಳಕೆ ಕೂಡಾ ಸಮಯೋಚಿತವೇ ಆಗಿದೆ.. ಇದು ನಿರಂತರವಾಗಲಿ…
June 28, 2010 at 2:22 PM
ಸ್ವಾಗತ. ಹೆಚ್ಚಾಗಲಿ, ವಿಭಿನ್ನವಾಗಲಿ.
ವ್ಯಕ್ತಿಯನ್ನು ಚಿಗುರಿಸಿ, ಸಮಾಜವನ್ನು ಅರಳಿಸಿ, ಪರಿಮಳವ ವಿಶ್ವಕ್ಕೇ ಪಸರಿಸಲಿ
.
—————————————————————————————
“ಕಾಡು, ಏಕಾಂತದಲ್ಲಿ ಮಾತ್ರಾ ಉಳಿದಿದ್ದ ಸನ್ಯಾಸವನ್ನು ಸಮಾಜದ ಮಧ್ಯದಲ್ಲೇ ನೆಟ್ಟು, ಯತಿಗಳೆಂದರೆ ಧರ್ಮಕೇಂದ್ರಬಿಂದುವಾಗಿಸಿದರು”
—————————————————————————————
June 28, 2010 at 3:38 PM
ಸಮ್ಮುಖ – ಸಮ್ಯಕ್ ಲೇಖನದಿಂದ ಪ್ರಾರಂಭವಾಗಿದೆ.
ನಮ್ಮ ದೇಶದಲ್ಲಿ ಮೊದಲಿನಿಂದಲೂ ಮಠಗಳು ಸಮಾಜಮುಖಿಯಾಗಿ, ಸರ್ವರ ಅಭಿವೃದ್ಧಿಗೆ ಶ್ರಮಿಸುತ್ತಲೇ ಬಂದಿವೆ.
ಸಾಮಾನ್ಯ ಮನುಷ್ಯನ ಜೀವನದಲ್ಲಿ ಕಾಣುವ ಏಳು ಬೀಳುಗಳು, ದುಖಃ ಸಂಕಟಗಳು ಮುಂತಾದ ಎಲ್ಲಾ ಜಂಜಾಟಗಳಿಗೆ ಪರಿಹಾರ ಸೂಚಿಸುತ್ತಾ, ಆಧ್ಯಾತ್ಮ ಸ್ತರದಲ್ಲಿ ದೈವಭಕ್ತಿಯನ್ನೂ ತಿಳಿಹೇಳುತ್ತಲಿದ್ದವು. ಅಂತಹ ಮಠಗಳು ಹಿಂದಿಗಿಂತಲೂ ಇಂದು ಅತ್ಯಂತ ಅವಶ್ಯಕವೆನಿಸಿವೆ.
ಇದೇ ದಿಕ್ಕಿನಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಮಾಡುತ್ತಿರುವ ಕೆಲಸಗಳು ಅಪಾರ…
ಇದು ಅಧುನಿಕ ತಂತ್ರಜ್ಞಾನದಿಂದ ಕೂಡಿದ ಯುಗ. ಇಂದಿನ ಯುಗದಲ್ಲಿ ಅಂತರ್ಜಾಲದ ಮುಖಾಂತರ ಜಗತ್ತಿನ ಯಾವುದೇ ಭಾಗಕ್ಕೂ ಅತ್ಯಂತ ಸುಲಭದಲ್ಲಿ ತಲುಪಬಹುದು. ಹಾಗಾದರೆ ಈ ರೀತಿಯ ವ್ಯವಸ್ಥೆಯನ್ನು ಒಳ್ಳೆಯ ವಿಚಾರಗಳನ್ನು ಜಗತ್ತಿನಾದ್ಯಂತ ತಿಳಿಸುವಲ್ಲಿ ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದಲ್ಲವೇ?
ಶ್ರೀಗಳು ತಮ್ಮ ಅಂತರ್ಜಾಲ ತಾಣವಾದ “ಹರೇರಾಮ”ದ ಮೂಲಕ ಉತ್ತಮ ವಿಚಾರಗಳನ್ನು ದೇಶದ ಜನತೆಗೆ ನೀಡುತ್ತಿದ್ದಾರೆ. ಸಮಾಜದ ಅನೇಕ ವ್ಯಕ್ತಿಗಳನ್ನು ಈ ಮೂಲಕ ತಲುಪುವಲ್ಲಿ ಯಶಸ್ವಿಯಗುತ್ತಿರುವುದು ಭಾಸವಾಗುತ್ತಿದೆ. “ಹರೇರಾಮ”ದಲ್ಲಿ ಬರುವ ಪ್ರತಿಕ್ರಿಯೆಗಳೇ ಇದಕ್ಕೆ ಸಾಕ್ಷಿ.
ನಮ್ಮ ಭಾರತ ಹಿಂದೆ ಜಗತ್ತಿಗೇ ಮಾರ್ಗದರ್ಶಕನ ರೂಪದಲ್ಲಿ ಇತ್ತು. ಶ್ರೀಗಳು ಮಾಡುತ್ತಿರುವ ಈ ರೀತಿಯ ಯೋಜನೆಗಳನ್ನು ಗಮನಿಸಿದರೆ ಆ ಕಾಲ ಮತ್ತೆ ಬರುವುದರಲ್ಲಿ ಸಂಶಯವಿಲ್ಲ.
June 28, 2010 at 5:04 PM
Well said…
Let us all unite togethr for the noble cause and make our Mata and community prouder.
Regards,
Sukhesh Krishna
June 28, 2010 at 5:20 PM
Well said…
Let us all unite together for the noble cause and make our Mata and community prouder.
Regards,
Sukhesh Krishna
June 28, 2010 at 5:52 PM
Harerama
A good start…Let Sammukha weave the web of Dharma through Sri ‘s presence all over the world
June 28, 2010 at 9:41 PM
ಹರೇ ರಾಮ
ಶ್ರೀ ಗುರುಗಳ ಶಿಷ್ಯವರ್ಗಕ್ಕೊಂದು ಅಪೂರ್ವ ಅವಕಾಶವೀಯುತ್ತಿರುವ “ಸಮ್ಮುಖ”ಕ್ಕೆ ಸದಾಶಿಷ್ಯನ ಸ್ವಗತದ ಸ್ವಾಗತ!
ಆದಿಶಂಕರಾಚಾರ್ಯರು ಅಂದು ಮಾಡಿದ ಮಂಗಲಕಾರ್ಯವನ್ನು ಉಲ್ಲೇಖಿಸುತ್ತಾ ಪ್ರಸ್ತುತ ನಮ್ಮ ಗುರುಗಳಿಂದಾಗುತ್ತಿರುವ ಸತ್ಕಾರ್ಯಗಳನ್ನು ನವಿರಾಗಿ ವಿವರಿಸಿದ್ದೀರಿ.
ಅಂದು ಶಂಕರಾಚಾರ್ಯರು ಧರ್ಮದ ಮಹತ್ವವನ್ನು ಸಾರಿ ಸನಾತನತೆಯನ್ನು ಪಸರಿಸಿದರು ; ಇಂದು ಶ್ರೀ ಗುರುಗಳು ಧರ್ಮದ ಇನ್ನೊಂದು ರೂಪವಾದ ಗೋಮಾತೆಯ ಮಹತ್ವವನ್ನು ಲೋಕಾದ್ಯಂತ ಸಾರಿ ಅದೇ ಪಥದಲ್ಲಿ ಸಾಗುತ್ತಿದ್ದಾರೆ – ಅದ್ಭುತ ಹೋಲಿಕೆ.
ಅಂತರ್ಜಾಲದ ಮೂಲಕ ಮನೆ ಮನೆಯನ್ನು ತಲುಪಿ ಹರಸುತ್ತಿರುವ ಗುರುಗಳ ಈ ಕೈಂಕರ್ಯ ನಿಜಕ್ಕೂ ಶ್ಲಾಘನೀಯ.
ಈ (ಇ-)ಸಮ್ಮುಖದ ಸದವಕಾಶ ಸರ್ವರಿಗೂ ಸಿಗಲಿ.
ಹರೇ ರಾಮ.
June 28, 2010 at 9:56 PM
ಶುಭಾರಂಭ…!
ಈ ರೀತಿಯ ಸಾತ್ವಿಕ ಸ್ವಗತಗಳು ಸಮಾಜಗತವಾಗಲೇ ಬೇಕು…
ಸಮ್ಮುಖ ಈ ನಿಟ್ಟಿನಲ್ಲಿ ವೇದಿಕೆಯಾಗಲಿ…
June 29, 2010 at 11:15 AM
“ಸ್ವಗತ” ತುಂಬಾ ಚೆನ್ನಾಗಿ ಬಂದಿದೆ ಮಹೇಶ.
June 29, 2010 at 1:31 PM
ಚೆನ್ನಾಗಿ ಬಂದಿದೆ ಮಹೇಶ.
ಪ್ರತಿಶಿಷ್ಯನಿಗೆ ಸಂಸ್ಥಾನ ದೊರಕಿಸಿಕೊಟ್ಟ ವಿಷಿಷ್ಟ ಅವಕಾಶವಿದು.
ಬರೆಯೋಣ; ಬೆರೆಯೋಣ
June 30, 2010 at 11:25 PM
ನಿಮ್ಮ ಬರಹಕ್ಕಾಗಿ ಕಾಯುತ್ತಿದ್ದೇವೆ …..!
July 1, 2010 at 11:26 AM
ನಿಮ್ಮ ಬರಹವನ್ನು ಮಠದ ಮಾಸಪತ್ರಿಕೆಯಲ್ಲ್ಲಿ ಓದಿದ್ದೇವೆ. ಹರೇರಾಮದಲ್ಲಿ ಹೆಚ್ಚು ಹೆಚ್ಚು ಬರೆಯಬೇಕಾಗಿ ಕೇಳಿಕೊಳ್ಳುತಿದ್ದೇವೆ
July 1, 2010 at 2:33 PM
ಕಾಯುತ್ತಿರುವವರಲ್ಲಿ ನಾನೂ ಒಬ್ಬ…
June 29, 2010 at 2:01 PM
ಸುಂದರ ಬರಹ.
ಅಂತರಜಾಲದ ಮೂಲಕ ಸಂತರ ಸದ್ವಿಚಾರಧಾರೆ ನಾಡಿನ ನಾಡಿಯ ವ್ಯಾಪಿಸಲಿ.
ಕೈ ಜೋಡಿಸೋಣ, ಧ್ವನಿಗೂಡಿಸೋಣ.
June 29, 2010 at 6:21 PM
Dharmada ala, ethara ariyadiruvude Mathantharakke karanave?
June 30, 2010 at 8:35 PM
ಹರೇ ರಾಮಾ
ಮಹೇಶಣ್ಣ ಅದ್ಬುತ್ ಲೇಖನ
June 30, 2010 at 8:47 PM
ಶ್ರೀ ಚರಣಗಳಿಗೆ ಸಾಷ್ಟಾಂಗ ವಂದಿಸುತ್ತಾ, ಒಂದೆರಡು ಅನಿಸಿಕೆಗಳು.
ಇಂದು ನಮ್ಮಲ್ಲಿ ಗೋವುಗಳ ಬಗ್ಗೆ ಜಾಗೃತಿ ಮೂಡಿದ್ದರೆ ಅದಕ್ಕೆ ಶ್ರೀ ಶ್ರೀ ರಾಘವೇಶ್ವರ ಸ್ವಾಮಿಗಳ ಆಂದೋಲನವೇ ಕಾರಣ.
ವೇದ, ಪುರಾಣಗಳ ಕಾಲದಿಂದಲೂ, ಒಳ್ಳೆಯ ಕಾರ್ಯಗಳಿಗೆ ವಿಘ್ನ ತಂದೊಡ್ಡಿ ಸಂತೋಷ ಪಡುವ ರಾಕ್ಷಸ ಪ್ರವೃತ್ತಿಯವರು ಇದ್ದರು. ಈಗ ಅದನ್ನು ಕೆಲವು ಬುದ್ಧಿ ಜೀವಿಗಳೆಂದು ತಮ್ಮನ್ನು ತಾವೇ ಹೇಳಿಕೊಳ್ಳುವವರು ಮಾಡುತ್ತ ಇರುವುದು ಸರ್ವ ವಿದಿತ. ಹಿಂದೂ ಧರ್ಮವನ್ನು ಹೀಯಾಳಿಸುವುದು ಇವರ ಮೊದಲನೇ ಅಜೆಂಡಾ.
ಶ್ರೀ ಶ್ರೀ ಗಳ ತೇಜೋವಧೆ ಇವರ ಇನ್ನೊಂದು ಅಜೆಂಡಾ.
ಇವೆಲ್ಲವನ್ನೂ ಹಿಮ್ಮೆಟ್ಟಿಸಲು ನಮ್ಮೊಳಗೆ ಸಂಘಟನೆ ಇಂದಿನ ಅವಶ್ಯಕತೆ.
ಶಿಷ್ಯರೊಂದಿಗೆ ಉತ್ತಮ ರೀತಿಯ ಬಾಂಧವ್ಯವನ್ನು ಬೆಳೆಸಿಕೊಂಡು, ಸದಾ ಮಾರ್ಗದರ್ಶನವನ್ನು ನೀಡುವ ಶ್ರೀ ಶ್ರೀ ಗಳ ಅನುಗ್ರಹ ನಮ್ಮೆಲ್ಲ ಮೇಲೆ ಇರಲಿ. ಅವರ ಗುರಿ ತಲುಪಲು ನಾವೆಲ್ಲ ಕೈ ಜೋಡಿಸೋಣ, ಅವರ ಕನಿಸನ ರಾಷ್ಟ್ರ ನಿರ್ಮಾಣದಲ್ಲಿ ನಮ್ಮೆಲ್ಲರ ಶಕ್ತಿಯನ್ನು ವಿನಿಯೋಗಿಸೋಣ
ಹರೇ ರಾಮ
June 30, 2010 at 11:22 PM
ಸ್ವಯಂ ಘೋಷಿತ ಬುದ್ದಿಜೀವಿಗಳಾದ ಕೆಲವರು ಗೋ ಹತ್ಯಾ ನಿಷೇದ ವನ್ನು ವಿರೋಧಿಸುವ ಬರದಲ್ಲಿ ಆಡಿದ ಮಾತುಗಳನ್ನು ಕೇಳಿದಾಗ ನನಗನ್ನಿಸಿದ್ದು ….ಮುದಿಯಾಗಿದೆ ಎಂಬ ಕಾರಣಕ್ಕೆ ಅದು ಬದುಕಲು ಯೋಗ್ಯ ವಲ್ಲದ್ದು ಅಂತಾದರೆ …..ಈ ಸ್ವಯಂ ಘೋಷಿತ ಬುದ್ದಿ [ಅಲ್ಲಲ್ಲ ..ಲದ್ದಿ ….!]ಜೀವಿಗಳಿಗೂ ಮುದಿತನ ಬಂದೇಬರುತ್ತೆ ತಾನೇ …? ಆಗ ಅವರ ಮಕ್ಕಳು ಇವರದೇ ನಿರ್ಧಾರ ತೆಗೆದುಕೊಂಡರೆ ….?
July 1, 2010 at 2:16 PM
Adbhutha
——————————————-
“ಸ್ವಯಂ ಘೋಷಿತ ಬುದ್ದಿಜೀವಿಗಳಾದ ಕೆಲವರು…”
——————————————-
July 1, 2010 at 11:37 PM
ಇವತ್ತು ವಿ ವಿ ಕ್ಯಾಂಪಸ್ನಲ್ಲಿ ದನದ ಮಾಂಸ ತಿಂತಾರೆ ….ನಾಳೆ ಯಾರೋ ಒಬ್ಬ [ ದುರ್]ಬುದ್ದಿಜೀವಿ ಹೇಳ್ತಾನೆ ….ಎಪ್ಪತ್ತು ವರುಷದವರ ಮಾಂಸ ಭಾರೀ ಟೇಸ್ಟು ಕಣ್ರೀ … ಅಂತ ..ಪಾಪ ನಮ್ಮ ಹೈಕಳು ಅನಂತಮೂರ್ತಿಯೇ ಬೇಕು ಅಂದ್ರೆ ….?
July 1, 2010 at 1:17 PM
ಲೇಖನ ತುಂಬಾ ಚಂದ ಬೈಂದು ಮಹೇಶಣ್ಣಾ… ಮನ್ಸಿಗೆ ಮುಟ್ಟುವಂಗಿದ್ದು….
July 1, 2010 at 2:18 PM
Madhu, request you to write more. Your writings are good.
July 1, 2010 at 3:38 PM
ಹರೇ ರಾಮ….ಶ್ರೀ ಗುರುಗಳಿಗೆ ನಮನಗಳು.ಹರೇರಾಮ ಅಂತರ್ಜಾಲದಲ್ಲಿ ಹೆಚ್ಚು ಹೆಚ್ಚು ಜನ ಸದಸ್ಯರಾಗಬೇಕು.ಸಮ್ಮುಖ ಜ್ಞಾನಾರ್ಜನೆಗೆ ಒಳ್ಳೆಯ ವೇದಿಕೆ.
July 5, 2010 at 6:22 PM
ಹರೇ ರಾಮ
ತುಂಬಾ ಚೆನ್ನಾಗಿ ಬಂದಿದೆ ಮಾತ್ರವಲ್ಲ ಅತಿ ಸೂಕ್ತವಾದ ಹೋಲಿಕೆ. ಒಂದು ಒಳ್ಳೆಯ ಕೆಲಸಕ್ಕೆ ಅಭಿನಂದನೆಗಳು.
ಪ್ರನಾಮಗಳೊಂದಿಗೆ
ಪ್ರಸನ್ನ.
July 18, 2010 at 11:45 AM
Vishwamitranige Vasishtana Hogalikeye Nijavada hogalike,Idu hage