ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀಸಂಸ್ಥಾನಗೋಕರ್ಣ - ಶ್ರೀರಾಮಚಂದ್ರಾಪುರಮಠ
|| ಹರೇರಾಮ ||
ಋತುರಾಜ ವಸಂತನ ವಿಲಾಸ…!
ಚಿಗುರು ಚೆಲುವಿನ ಚೈತ್ರಮಾಸ…!
ಬೆಳದಿಂಗಳು ಬೆಳೆಯುವ ಶುಕ್ಲಪಕ್ಷ…!
ಇಂದು ನವಮೀ…!
ಅಂತಿಂಥಾ ನವಮಿಯಲ್ಲ…ಶ್ರೀರಾಮನವಮೀ…!
ಸ್ವಯಂ ನಾರಾಯಣನೇ ನರನಾದ ದಿನ…!
ದೊರೆಯ ರೂಪದಲ್ಲಿ ಧರೆಗಿಳಿದ ದೇವರು ಧರೆಯಿಂದ ಸ್ವರ್ಗಕ್ಕೆ ಸೇತುವೆ ಕಟ್ಟಲಾರಂಭಿಸಿದ ದಿನ…!
ಪ್ರಭು ಬರುವುದು ಯುಗಕ್ಕೊಮ್ಮೆ…!
ಈ ದಿನ ಬರುವುದು ವರುಷಕ್ಕೊಮ್ಮೆ…!
ನಿನ್ನೆ ಇರದ, ನಾಳೆ ಬರದ ಈ ದಿನವನ್ನು ಸಾರ್ಥಕಪಡಿಸೋಣ…
ಕಣ್ಮನಗಳನ್ನು ಕದಲದಂತೆ ಕರುಣಾಮೂರ್ತಿಯ ಶ್ರೀಚರಣದಲ್ಲಿರಿಸೋಣ…
|| ಹರೇರಾಮ ||