ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀಸಂಸ್ಥಾನಗೋಕರ್ಣ - ಶ್ರೀರಾಮಚಂದ್ರಾಪುರಮಠ
ಹೃದಯಬಂಧು,
ಸಪ್ರೇಮ ಭಗವತ್ ಸ್ಮರಣೆಗಳು..
ವಿಶ್ವಮಂಗಳ ಗೋಗ್ರಾಮಯಾತ್ರೆ ರಾಜಸ್ಥಾನದಲ್ಲಿ ಸಂಪನ್ನಗೊಳ್ಳುತ್ತಿದೆ..ನಿನ್ನೆ ಕಿಶನ್ ಗಢದ ಕಾರ್ಯಕ್ರಮದಲ್ಲಿ ನಮಗೊಂದು ಅಚ್ಚರಿ ಕಾದಿತ್ತು..
ವೇದಿಕೆಯ ಮೇಲೆ ಸಂತರೊಬ್ಬರು ಉಪಸ್ಥಿತರಿದ್ದರು..ಅವರು ವಯಸ್ಸೆಷ್ಟು ಗೊತ್ತೇ..?
ಆರಾಮವಾಗಿ ಓಡಾಡುತ್ತಾರೆ..ಚೆನ್ನಾಗಿ ಮಾತನಾಡುತ್ತಾರೆ..ಹಲ್ಲು-ಕೂದಲು ಎಲ್ಲವೂ ಸರಿಯಾಗಿವೆ..!!
ಪ್ರವಚನದ ಮಧ್ಯೆ ಬ್ರಿಟಿಷರ ಕಾಲ ಮತ್ತು ಈಗಿನ ಕಾಲವನ್ನು ತುಲನೆ ಮಾಡುತ್ತಾ ಆಗ ಜನಜೀವನ ಇಂದಿನಷ್ಟು ಹಾಳಾಗಿರಲಿಲ್ಲವೆಂದು ಅವರು ಹೇಳುವಾಗ ಮನಸ್ಸು ತುಂಬಿ ಬಂತು..!!
ಇದು ಅವರ ಕಿರುಪರಿಚಯ..
ಮಹಾಂತ ಕಮಲನಾಥಜೀರವರು
೧೮೯೬ರಲ್ಲಿ ಭಾದ್ರಪದ ಶುಕ್ಲ ಏಕಾದಶಿ ( ಪರಿವರ್ತನೀಯ ಏಕಾದಶಿ)ಯಂದು ಗುಜರಾತ್ ನಲ್ಲಿ ಜನಿಸಿದರು..
ಮಹಾಂತರು ಸುಮಾರು ೫೦೦೦ ರೋಗಿಗಳಿಗೆ ಔಷಧಿ ನೀಡಿದ್ದು,ಕ್ಯಾನ್ಸರ್, ಬಿಪಿ ಇತ್ಯಾದಿ ರೋಗಗಳನ್ನು ಗುಣಪಡಿಸಿರುತ್ತಾರೆ..
ಮಹಾಂತರಿಂದ ಹಲವಾರು ಗಣ್ಯರು ಚಿಕಿತ್ಸೆ ಪಡೆದಿದ್ದು,
ಮಾಜಿ ಪ್ರಧಾನಿ ದಿ||ಚಂದ್ರ ಶೇಖರ್ ಮುಂತಾದವರು ತಮ್ಮ ಕ್ಯಾನ್ಸರ್ ಖಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುತ್ತಾರೆ..
ರುದ್ರಾಕ್ಷಿ, ತುಳಸಿ,ಗೋಮೂತ್ರ,ಗೊಕ್ಷೀರವನ್ನು ಮುಖ್ಯವಾಗಿ ಕ್ಯಾನ್ಸರ್ ಖಾಯಿಲೆ ಗುಣಪಡಿಸಲು ಉಪಯೋಗಿಸುತ್ತಾರೆ..
Adress:
Mahaanta kamal naathaji maharaaj,
kamalnaatha aashram,
village: Grahankar
Post : Bhindosi
Tq: Tijaara
Dist : Alwaar
State : Rajasthan
Ph.+91 9414961335