ವಿಶ್ವವ್ಯಾಪಿಯಾದ, ವಿರಾಟ್ ಗೋರಕ್ಷಾಮಹಾಭಿಯಾನದ ಮೂಲಪ್ರೇರಣೆಯು ತನ್ನ ಮೂಲವನ್ನು ಸೇರಿದೆ..
ಮೊದಲು ನಮ್ಮಲ್ಲಿ,ಅಮೇಲೆ ಮಠದಲ್ಲಿ,ಮತ್ತೆ ರಾಜ್ಯದಲ್ಲಿ,ಈಗ ರಾಷ್ಟ್ರದಲ್ಲಿಯೇ ಮಹತ್ ಪರಿವರ್ತನೆಯೊಂದನ್ನು ಮಾತಿಲ್ಲದೇ ತಂದ
ಮಹಾಮೌನಸಾನ್ನಿಧ್ಯ ಚಿರಮೌನವನ್ನು ತಾಳಿದೆ..
ನಮ್ಮ ಮಠದ ಅವಿಭಾಜ್ಯ ಭಾಗವಾಗಿ, ಅನಂತಭಾಗ್ಯವಾಗಿ, ಗೋರಾಷ್ಟ್ರದ ಅನಭಿಷಿಕ್ತಸಮ್ರಾಟನಾಗಿ ಗೋವುಗಳನ್ನು,ಗೋಪ್ರೇಮಿಗಳ
ಹೃದಯಗಳನ್ನು ಆಳಿ,ಬಾಳಿ,ಬೆಳಗಿ,ಕೊನೆಗಿಂದು ಬೆಳಕಿನಲ್ಲಿ ಬೆಳಕಾಗಿ ಉಳಿದಿದೆ..
ಹೊರಗಣ್ಣಿಗೆ ಮರೆಯಾದ ಮಹಾನಂದಿಗಾಗಿ ಕಣ್ಣೀರು ಸುರಿಸೋಣವೇ..?
ಒಳಗಣ್ಣು ತೆರೆದು ನೋಡಿ,ಆ ಮಹಾಚೇತನದಿಂದ ಪ್ರೇರಿತರಾಗಿ, ನೊಂದ ಗೋವುಗಳ ಕಣ್ಣೀರು ಒರೆಸೋಣವೇ..!?
Facebook Comments Box
June 26, 2011 at 12:52 PM
ಹರೆ ರಾಮ ಸ೦ಸ್ಥಾನಮ್
ಚಿರಸ್ಥಾಯೀ ಭಾಷ್ಪಾ೦ಜಲಿ..
ಪ್ರಣಾಮಗಳು
ಮೋಹನ ಭಾಸ್ಕರ
June 26, 2011 at 2:22 PM
ಹರೇರಾಮ..
ನಮಿಸುವ ಸಾವಿರ ಕೈಗಳಿಗಿಂತ ದುಡಿಯುವ ಒಂದು ಕೈಯೇ ಮೇಲು.
ಕೈಲಾಸವಾಸಿ ಮಹಾಚೇತನ ಮಹಾನಂದಿಯನ್ನು ಸ್ಮರಿಸಿ, ನೊಂದ ಗೋವುಗಳು ನಂದಿತರಾಗುವಂತೆ ಮಾಡೋಣ..
June 26, 2011 at 8:58 PM
ಒಪ್ಪಿದೆ.
June 26, 2011 at 9:41 PM
ಮಹಾನಂದಿ ಕಣ್ಮರೆಯಾಗಿದ್ದು ಮನಸ್ಸಿಗೆ ತುಂಬಾ ಬೇಸರವಾಯಿತು
June 26, 2011 at 10:49 PM
ಹರೇ ರಾಮ.. ಶ್ರೀಚರಣಗಳಲ್ಲಿ ಅನಂತ ಪ್ರಣಾಮಗಳು.
‘ಇನ್ನೊಂದಿಲ್ಲ ಈ ಮಹಾನಂದಿಯಂತೆ’- ಅಂದಿಗೂ ಇಂದಿಗೂ ಎಂದೆಂದಿಗೂ..
ಶ್ರೀಮಠದ ಹಿರಿಮೆ-ಗರಿಮೆಯ ಪ್ರತೀಕ; ಶಿವನ ವಾಹನ ಮಹಾನಂದಿಗೆ ಇದೀಗ ಶಿವನ ಸಾಯುಜ್ಯ!
ಗೋರಕ್ಷಾ ಅಭಿಯಾನಕ್ಕೆ ಈ ದಿವ್ಯ ಚೇತನ ಚಿರಂತನ ಸ್ಫೂರ್ತಿಯ ಸೆಲೆಯಾಗಲಿ..
June 26, 2011 at 11:03 PM
ರಾಮ.. ರಾಮಾ …
ಎಂದೂ ನಂದದ ನಂದಾ ದೀಪಕ್ಕೆ ನಾಂಯಾಗಿದ್ದ ನಂದಿ…
ಅನ್ವರ್ಥ ನಾಮದಿಂದಲೂ ನೀ ” ಮಹಾನಂದಿ”..
ಕದವ ತಟ್ಟಿದೆ..ಕೆದೆಯ ತುಂಬಿದೆ..ಎದೆಯ ಬತ್ತಿಸಿ
ಸೇರಿದೆ ನೀನಿಂದು ನೀ ನಂಬಿ ಬಂದಿದ್ದ…ಶ್ರೀ ಶ್ರೀ ಪಾದಾರವಿಂದ
ಮುಕ್ತಿ ಸಾಮ್ರಾಜ್ಯದೊಡೆಯ , ನಿನಗಿದೊ ನಮ್ಮೆಲ್ಲರ ಕಡೆಯ ನಮನ…
June 27, 2011 at 4:34 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಮಹಾನಂದಿಗೆ ಶ್ರದ್ದೆಯ ನಮನಗಳು… ಹೊರಗಣ್ಣಿಗೆ ಮರೆಯಾದ ಮಹಾನಂದಿಗಾಗಿ, ಗೋವಿನೊಂದಿಗೆ ಗೋವಾಗಿ ಕಣ್ಣೀರು ಸುರಿಸೋಣ… ಗೋವುಗಳ ಕಣ್ಣೀರು ಒರೆಸೋಣ… ಆ ಮೂಲಕ ಬುದ್ದಿ ಜೀವಿಗಳ ಹೃದಯ ಕರಗಲಿ… ಭಾರತವು ಇಂದು ಎದುರಿಸುತ್ತಿರುವ ಪ್ರಧಾನ ಸಮಸ್ಯೆಯಾದ “ಹೃದಯ ಜೀವಿಗಳ ಕೊರತೆ” ಆದಷ್ಟು ಬೇಗ ನೀಗುವಂತಾಗಲಿ…
June 27, 2011 at 10:32 AM
ಸ್ಪೂರ್ತಿಯ ಸೆಲೆಯಾಗಿ ಈ ಭೂಮಿಯಲ್ಲಿ ಅವತರಿಸಿ ಕಣ್ಮರೆಯಾಗಿದ್ದು
ಚಂದ್ರಮೌಳೇಶ್ವರನ ಸನ್ನಿದಿಯಿಂದ ತಿರುಗಿ ಪರಮೇಶ್ವರನ ಸನ್ನಿದಾನಕ್ಕೆ ತೆರಳಿದ ಮಹಾನಂದಿಗಿದೋ ನಮನ ……….
June 27, 2011 at 12:20 PM
ಹರೇರಾಮ್,
ನಮನ ವಿರಲಿ ಮಹಾನ೦ದಿಗೇ
ನಮ್ಮ ಮನ ವಿರಲಿ ನ೦ದಿನಿಯರ ರಕ್ಷಣೆಗೆ
June 27, 2011 at 4:08 PM
ಹರೇರಾಮ….
June 27, 2011 at 7:33 PM
mahanandige kooti koti namanagalu…
June 27, 2011 at 7:45 PM
ಬೇಸರ ತ೦ದಿದೆ.
June 27, 2011 at 7:47 PM
ಬೇಸರ ತ೦ದಿದೆ.
June 28, 2011 at 8:42 AM
ಹರೇ ರಾಮ
ಮಹಾ ನ೦ದಿಯ ಆತ್ಮಕ್ಕೆ ನಮನಗಳು
June 28, 2011 at 11:52 AM
ನಮ್ಮಿಂದ ಮರೆಯಾಗಿ ಮಹೇಶ್ವರನ ಪಾದ ಸೇರಿ ಚಿರಾಯುವಾಗಿರುವ ಮಹಾತ್ಮ ಮಹಾನಂದಿಗಿದೋ ನಮನಗಳು.
June 28, 2011 at 11:52 AM
ಕೆಲವು ಜೀವಗಳು..ಅದ(ವ)ರೆಡೆಗಿನ ಭಾವಗಳು.. ಆತ್ಮದಷ್ಟೇ ಪ್ರಿಯವೆನಿಸುತ್ತದೆ.
ಆ ನಿರ್ವಾಜ್ಯ ಮೌನ ಪ್ರೇಮ ಆತ್ಮದಂತೆ ಶಾಶ್ವತವೂ ಕೂಡ..
ಗೋಶಾಲೆಯ ಆತ್ಮಸ್ವರೂಪಿ ಮಹಾನಂದಿಯ ಚಿರಮೌನ ಗೋಪ್ರೇಮಿಗಳ ಹೃದಯದ ಭಾವವಾಗಿ
ಗೋರಕ್ಷಣೆಯ ಮಹಾಕಾರ್ಯಕ್ಕೆ ಸ್ಪೂರ್ತಿಯಾಗಲಿ…ಚಿರಶ್ರಧ್ಹಾಂಜಲಿಯಾಗಲಿ
ಹರೇ ರಾಮ.
June 29, 2011 at 8:35 PM
ಆ ನಿರ್ಲಿಪ್ತ ನೋಟದ ಗಾಂಭೀರ್ಯ..
ಎಲ್ಲ ಮೆಟ್ಟಿ ನಿಂತಂಥ ದಿಟ್ಟ ನಿಲುವು..
ತನ್ನ ತಾನರಿತು ಇಡುತ್ತಿದ್ದಂತಿದ್ದ ಧೀರ ನಡಿಗೆ..
ವೈರಾಗ್ಯವೆ ಮೈವೆತ್ತ ಸ್ನಿಗ್ಧ ತಪಸ್ವಿಯ ಚೆಲುವು..
ಅಚ್ಚಳಿಯದೆ ಉಳಿದಿದೆ ಎದೆಯಲಿ!
ಹರೇ ರಾಮ…
June 30, 2011 at 7:48 PM
Oh Namo Narayanaya..
.
Shri Gurubhyo Namaha
July 6, 2011 at 9:46 PM
ಸಂಭವಾಮಿ ಯುಗೇ ಯುಗೇ,…….
ಮತ್ತೊಮ್ಮೆ ಬಾರದಿರನೇ
ನಮ್ಮ ನಲುಮೆಯ ಮಹಾನಂದಿ,
July 11, 2011 at 3:25 PM
ಬರಲಿ…ಬರಲಿ….
July 16, 2011 at 10:48 PM
ಒಂದು ನೂರಾಗಿ ಬರಲಿ ; ಸಂತತಿ ಸಾವಿರವಾಗಲಿ ; ಕಾಮಧೇನುವಿಗಾಗಿ ನಿರಂತರ ಕಾತರದಿಂದ ನೋಡುವ
ಹರೇ ರಾಮ