ಹೃದಯಬಂಧು,
ಸಪ್ರೇಮ ನಾರಾಯಣ ಸ್ಮರಣೆಗಳು..
ಬಹಳ ದಿನಗಳಿಂದಲೇ ಬರಯಬೇಕೆ೦ದಿದ್ದೆವು.. ನಮ್ಮ ಬದುಕನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆ೦ದಿದ್ದೆವು.. ಆದರೆ ಕಾಲದ ಅನುಮತಿ ಸಿಕ್ಕಿರಲಿಲ್ಲ..ಇಂದು ಸಿಕ್ಕಿದೆ..!
ನಿನ್ನೆ ನಮ್ಮ ಪ್ರಭುವಿಗೆ ಸಾಮ್ರಾಜ್ಯ ಪಟ್ಟಾಭಿಷೇಕ..! ಕಳೆದ ೫೩೭ ದಿನಗಳಿಂದ ಶ್ರೀರಾಮನ ಸನ್ನಿಧಿಯಲ್ಲಿ ಪ್ರತಿನಿತ್ಯವೂ ಉಪಾಸನೆಯ ರೂಪದಲ್ಲಿ ಶ್ರೀ ವಾಲ್ಮೀಕಿ ರಾಮಾಯಣದ ಒಂದೊಂದೇ ಅಧ್ಯಾಯವನ್ನು ಅವಲೋಕಿಸುತ್ತಿದ್ದೆವು..ನೆನ್ನೆ ಅದು ಪರಿಸಮಾಪ್ತಿಗೊಂಡಿತು..
ಪರಿಸಮಾಪ್ತಿಯ ಸಮಯದಲ್ಲಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕವನ್ನು ನೆರವೇರಿಸುವ ಸಂಪ್ರದಾಯವಿದೆ..ನೆನ್ನೆ ಆ ಸುಮುಹೂರ್ತ..!
ಪಟ್ಟಾಭಿಷೇಕ ಕಾರ್ಯಕ್ರಮವೊಂದು ವಿಶಿಷ್ಟ ಅನುಭವ.. ತ್ರೇತಾಯುಗವನ್ನು ಮರಳಿ ಕರೆಯುವ ಕಾರ್ಯಕ್ರಮವದು..! ಭಾರತವರ್ಷದ ಎಲ್ಲ ಪುಣ್ಯನದಿಗಳಿಂದ ..ಸರೋವರಗಳಿಂದ ..ಸಾಗರಗಳಿಂದ .. ಪಾವನ ಜಲ ಸಂಗ್ರಹಿಸಿ ಭೂಮಂಡಲದ ಇತಿಹಾಸದ ಸರ್ವಶ್ರೇಷ್ಠ ದೊರೆಗೆ ಅಭಿಷೇಕ ಮಾಡುವಾಗ ಭಾರತವೇ ಒಂದಾದಂತೆ..! ಮತ್ತೊಮ್ಮೆ ರಾಮರಾಜ್ಯದ ಉದಯವಾದಂತೆ..! ಕೊನೆಯಲ್ಲಿ ಪಟ್ಟಾಭಿಷಿಕ್ತ ಶ್ರೀ ರಾಮಚಂದ್ರನಿಗೆ ಪಟ್ಟ-ಕಾಣಿಕೆ ಸಮರ್ಪಣೆ ಮಾಡುವಾಗ ಆತ್ಮನಿವೇದನೆ ಮಾಡಿದಂತೆ..!!
ಇದೋ..ಆ ಕಣ್ಣಿನಿಂದ ನೋಡಲಾಗದವರಿಗೆ E- ಕಣ್ಣಿನಿಂದ ನೋಡಲೆಂದು ಕೆಲವು ಅಮರಚಿತ್ರಗಳು..!!
December 28, 2009 at 11:01 AM
he gurudeva;
eenu kaarunya tamage.. e shishyara mele…
ellelli iruva namagella…. allalle sambramavannu kaanisuttiddiri…
krutajnaragiddeve…
hare raama, mohana
December 28, 2009 at 3:14 PM
ಗುರುದೇವಾ….ರಾಮಸಾಮ್ರಾಜ್ಯ ಪಟ್ಟಾಭಿಷೇಕ ನೋಡಿ ಧನ್ಯಳಾದೆ….ಕ್ರುತಜ್ನತೆಗಳು..
December 28, 2009 at 6:00 PM
Dhanyam manye aatmaanam !!
December 28, 2009 at 7:11 PM
Dhanyaladevu Guruve…
Ramarajya kai alateyalle iruva bhava thantu Gurudevara dhyana mudre…
Hare rama…
December 29, 2009 at 12:21 AM
ಪರಮಾತ್ಮ ಸ್ವರೂಪರಾದ ಗುರುಗಳಿಂದ ಪರಮಾತ್ಮನಿಗೆ ಸಾಮ್ರಾಜ್ಯ ಪಟ್ಟಾಭಿಷೇಕ. ನೋಡಲು ೨ ಕಣ್ಣುಗಳೂ ಸಾಲದು.
December 29, 2009 at 10:41 AM
Dhanya………………………….
December 29, 2009 at 5:46 PM
ಆ ಕಣ್ಣಿದ್ದೂ ಕಾಣದವರಿಗೆ ಈ ಕಣ್ಣನ್ನು ಅಳವಡಿಸಿ ದೃಷ್ಟಿ ನೀಡಿ ತೋರಿಸಿದ ಮನಃಪಟಲದಲ್ಲಿ ಸೆರೆ ಹಿಡಿದು ಇಡುವಂತಃ ಚಿತ್ರಗಳು ಆಹಾ !ಅವರ್ಣನೀಯ ,ಅದ್ಭುತ !.ಯಾವ ಪುಣ್ಯ ಹಸ್ತಗಳು ಶ್ರೀಗಂಗೆಯಿಂದ ಶ್ರೀರಾಮನನ್ನುಮೀಯಿಸಿ,
ಪಟ್ಟಾಭಿಷೇಕ ಮಾಡಿಸಿ ಕ್ಷೀರ ,ದಧಿ, ಘೃತಗಳನ್ನೂ ನೀಡಿ ತೃಪ್ತಿ ಗೊಳಿಸಿ ಚಾಮರ ಸೇವೆಯನ್ನರ್ಪಿಸಿ ಹಬ್ಬ ಕಾಣಿಕೆ ನೀಡಿ ಧನ್ಯವವಾಯಿತೋ ಅದೇ ಪುಣ್ಯ ಹಸ್ತಗಳು ಸದಾ ಎಲ್ಲರನ್ನು ಹರಸುತ್ತಿರಲಿ ಎಂದು ಬೇಡುವೆವು ಆ ದೇವನನ್ನು .
ಶಾಮು.
January 1, 2010 at 11:24 AM
ನಾವೆ ಧನ್ಯರು
January 3, 2010 at 8:21 PM
ಶ್ರೀರಾಮನ ಉದಯ ನಮ್ಮೊಳಗೂ ಆಗಲಿ.