ನೀಲಿ ಕಪ್ಪು ಬಿಳಿ – ಎಲ್ಲಾ ನಾರಾಯಣ ಸ೦ಬದಿತ್ತವೆ.
.
ಗುಡ್ಡ ಹತ್ತುವುದೊ? ಅಥವಾ ಇಳಿದು ಮತ್ತೇನು ಮತ್ತೆಲ್ಲಿ ಮತ್ತಾರು ಎ೦ಬ ಪ್ರಶ್ನೆಯೊ?
.
ಹುತ್ತದಲ್ಲಿದ್ದ ಶ್ರೀನಿವಾಸನ ಮತ್ತೆ ಹುಡುಕಾಟ..
.
ತನ್ನ ಕರುವಿನ ನಿರೀಕ್ಷೆಯೊ….. ಕರುನಾಡ-ಹೃದಯದ೦ತವರ ನಿರೀಕ್ಷೆಯೊ (ಕರುನಾಡ ಜನರು, ದುರ್ಗೆಯ ಎ೦ದೂ ಬೆಳೆಯದಾ ಮಕ್ಕಳು)
.
.
ಕಿರಣವೊ೦ದು ಹಿ೦ದೆ ಗೋಚರಿಸುತ್ತಿದ್ದರೂ
ಗುಡ್ಡ ಬೆಟ್ಟಗಳು ಸಾಲು ಕತ್ತಲು-ಬೆಳಕಿನಾಟವದೊ೦ದು ಚಕ್ರವೆ೦ದು ನಿರ್ವಿಣ್ಣವೊ
ಹರೆರಾಮದಲ್ಲಿನ ಹೆಚ್ಚಿನ ಪ್ರತಿಕ್ರಿಯೆಗಳನ್ನು ಓದುವಾಗ, ಶ್ರೀಗಳವರು ತಮ್ಮ ಅಮೋಘವಾದ, ಅನಂತವಾದ ಕಲ್ಪನಾಶಕ್ತಿಯ ಕೆಲವು ಕಿಡಿಗಳನ್ನು ಶಿಷ್ಯರಿಗೆ ಅವರರಿವಿಲ್ಲದೇ ಹಂಚುತ್ತಿದ್ದಾರೇನೋ ಎಂದನಿಸುತ್ತಿದೆ…
” ನನ್ನ ಪುಟ್ಟು ಕಂದಾ, ನಿನ್ನೆ ರಾತ್ರಿಯಿಂದ ನನ್ನ ‘ನಿರೀಕ್ಶೆ’ಯಲ್ಲಿದ್ದೀಯಾ? ಏನು ಮಾಡಲಿ ವತ್ಸಾ,ನಿನ್ನೆ ಸಂಜೆಯಿಂದ ಇಡೀ ರಾತ್ರಿ ಸುರಿದ ಭಯಂಕರ ಮಳೆಗೆ ಕಾಡಲ್ಲೇ ಉಳಿಯಬೇಕಾಯ್ತು.ಚುಮುಚುಮು ಬೆಳಗಾಗುವ ವರೆಗೂ ಕಾದು ಈಗ ಬರುತ್ತಿದ್ದೇನೆ. ಸದ್ಯ ಈಗ ಮಳೆ ನಿಂತಿದೆ. ಆಗಸವೂ ಶುಭ್ರವಾಗಿದೆ.ಇಡೀ ರಾತ್ರಿ ನಿನ್ನದೇ ಯೋಚನೆ ನನಗೆ. ಇನ್ನೇನು ಬೆಳಗಾಗುತ್ತಿದೆ. ಬಂದುಬಿಟ್ಟೆ. ಹ್ಞು.”
ಕರಗುತಿರುವ ಪಶ್ಚಿಮವೋ, ಬೆಳಗಲಿರುವ ಪೂರ್ವವೋ…..?
ಕರಗಿದಾ ಸ೦ಕೇತವೋ, ಬೆಳಗುವಾ ಸ೦ಕೇತವೋ…..?
ನಾ ಕರಗಿದರೇ ನೀ ಕರುಗವೇ ಎ೦ಬ ಸ೦ದೇಶವೋ….?
ಒಣಗಿ ಮಾಯವಾದ ಹುಲ್ಲುಗಳ ನೋಡಿ, ತನಗಾಗಿ ಅಲ್ಲ – ಮಕ್ಕಳೇ ನೀವು ಸೊರಗುತಲಿಹರಿ ಎ೦ಬ ಆತ೦ಕವೋ…..?
ತಾಯೇ ನಿನ್ನ ಸೊರಗಿಸಿದೆ….. ನಾ ಸೊರಗಿದೆ – ನಾ ಅರಿಯೆ….. ಆದರೆ ನೀ ಬಿಡಲರಿಯೆ….. ನಿತ್ಯ ಅರಸುತಿಹೆ….. ರಾಧಾಶ್ಯಾಮಸೋಮಸು೦ದರರು ಸಿಕ್ಕುವರೆ?
.
.
ಹೆಚ್ಚು ಬರೆಯುವ & ಓದುವ http://hareraama.in/members/rnarayana
.
July 19, 2010 at 10:01 AM
ಶ್ರೀಗಳಾಗಮನದ ನಿರೀಕ್ಷೆಯಲ್ಲಿದ್ದ ಗೋವಿಗೆ ಪೂರ್ಣಕಾಲದ ಶ್ರೀರಕ್ಷೆ ಲಭಿಸಿದ ಸಂತಸವೂ ಇರಬಹುದಲ್ಲ..
July 19, 2010 at 10:12 AM
ಮಿಂಚಿ ಮರೆಯಾಗುವ ಬೆಳ್ಳಿರೇಖೆಯೇಕೆ?
ಬೆಳಗಲಾರಂಭಿಸಿದೆಯಲ್ಲ
ನಿನ್ನ ಬದುಕಕತ್ತಲೆ ಕಳೆವ ಮಹಾಬೆಳಕು….. ರಾಘವೇಶ್ವರ ರೂಪದಿಂದ
July 19, 2010 at 11:01 AM
ಅದ್ಭುತ
July 19, 2010 at 11:27 AM
‘ತಾಯ’ ಕರೆಗೆ ಓ ಗುಟ್ಟು ದಿವಿ ಇಂದ ಭುವಿಗಿಳಿದಿದೆ ಮಗುವಿನಂದದ ಮಹಾಚೇತನ ‘ಗುರು’, ‘ಗೋವಿಂದ’ ರೂಪದಿ..
‘ಬೆಳಕಿನ’ ಊದಯದ ನಂತರ ‘ಕತ್ತಲೆಗೆ ‘ ಅಸ್ತಿತ್ವವಿರದು…
||ಹರೇ ರಾಮ||
July 19, 2010 at 12:06 PM
ಗುರು ರಾಘವರಿರುವಾಗ
ನಿನ್ನ ಬದುಕಲ್ಲಿ
ಮತ್ತೆ ಕತ್ತಲೆ ತಲೆ ಎತ್ತಲಾಗದು,
ಕತ್ತು ಕತ್ತರಿಗೆ ಬಾಗದು.
July 19, 2010 at 10:32 PM
ಜಗದೀಶ ದ್ವಯ ಏಕ ಭಾವಸ್ಪ೦ದನ
July 19, 2010 at 10:43 PM
ಸತ್ಯ…
July 19, 2010 at 12:07 PM
ಹರೇರಾಮ,
ಭರವಸೆಯ ಧೈರ್ಯದಲಿ ತಲೆಯೆತ್ತಿ ನಿತ್ತಿದೆ
ರವಿ ಮೂಡಿಬರಲು ಅಂಧಕಾರವು ನಿಲುವುದೇ?
July 19, 2010 at 9:05 PM
photography, view…and the viewer…. ಎಲ್ಲರೂ ಎಲ್ಲವೂ….excellent 🙂
July 19, 2010 at 9:24 PM
“ಆಗಸದ ತಾರೆಯಾಗದಿದ್ದರೂ ಬದುಕಿನ ಪ್ರಶ್ನೆಗೆ ಉತ್ತರವಾಗು”ಎಂದು ತೋರಿಸುವಂತೆ ಅನಿಸುತ್ತಿದೆ.
July 19, 2010 at 10:41 PM
ಅಮ್ಮಾ…..ನೀನೇಕೆ ದೂರ ನಿಂತಿದ್ದೀ? ಭಯವೇಕೆ ಇನ್ನು? ನಮಗಾಗಿ ನೀನಿರುವಾಗ.. ನಿನಗಾಗಿ ನಾವಿಲ್ಲವೇ?
July 19, 2010 at 11:20 PM
ಶಾಶ್ವತ………………..
July 20, 2010 at 8:00 AM
ನೀಲಿ ಕಪ್ಪು ಬಿಳಿ – ಎಲ್ಲಾ ನಾರಾಯಣ ಸ೦ಬದಿತ್ತವೆ.
.
ಗುಡ್ಡ ಹತ್ತುವುದೊ? ಅಥವಾ ಇಳಿದು ಮತ್ತೇನು ಮತ್ತೆಲ್ಲಿ ಮತ್ತಾರು ಎ೦ಬ ಪ್ರಶ್ನೆಯೊ?
.
ಹುತ್ತದಲ್ಲಿದ್ದ ಶ್ರೀನಿವಾಸನ ಮತ್ತೆ ಹುಡುಕಾಟ..
.
ತನ್ನ ಕರುವಿನ ನಿರೀಕ್ಷೆಯೊ….. ಕರುನಾಡ-ಹೃದಯದ೦ತವರ ನಿರೀಕ್ಷೆಯೊ (ಕರುನಾಡ ಜನರು, ದುರ್ಗೆಯ ಎ೦ದೂ ಬೆಳೆಯದಾ ಮಕ್ಕಳು)
.
.
ಕಿರಣವೊ೦ದು ಹಿ೦ದೆ ಗೋಚರಿಸುತ್ತಿದ್ದರೂ
ಗುಡ್ಡ ಬೆಟ್ಟಗಳು ಸಾಲು ಕತ್ತಲು-ಬೆಳಕಿನಾಟವದೊ೦ದು ಚಕ್ರವೆ೦ದು ನಿರ್ವಿಣ್ಣವೊ
July 21, 2010 at 10:39 AM
ತುಂಬಾ ಸುಂದರ ಹೋಲಿಕೆ…
ಹರೆರಾಮದಲ್ಲಿನ ಹೆಚ್ಚಿನ ಪ್ರತಿಕ್ರಿಯೆಗಳನ್ನು ಓದುವಾಗ, ಶ್ರೀಗಳವರು ತಮ್ಮ ಅಮೋಘವಾದ, ಅನಂತವಾದ ಕಲ್ಪನಾಶಕ್ತಿಯ ಕೆಲವು ಕಿಡಿಗಳನ್ನು ಶಿಷ್ಯರಿಗೆ ಅವರರಿವಿಲ್ಲದೇ ಹಂಚುತ್ತಿದ್ದಾರೇನೋ ಎಂದನಿಸುತ್ತಿದೆ…
July 21, 2010 at 11:04 AM
Yes Yes Yes – ಸತ್ಯ ಸತ್ಯ ಸತ್ಯ
July 22, 2010 at 2:18 PM
ಹಲವು ಬಾರಿ ನಾವು ಶಿಷ್ಯರಿಂದಲೇ ಸ್ಫೂರ್ತಿ-ಕಲ್ಪನೆಗಳನ್ನು ಪಡೆದುಕೊಳ್ಳುತ್ತೇವೆ..!
July 24, 2010 at 5:41 PM
ಗುರೂಜಿ,
ಅದು ನಿಮ್ಮ ಕಣ್ಣಿಗೆ ಮಾತ್ರ ಕಾಣಿಸೋದು
ನಮಗೆ ನೀವೇ ತೋರಿಸಬೇಕು
July 20, 2010 at 8:08 PM
ಕತ್ತಲಿನಿಂದ ಬೆಳಕಿನೆಡೆಗೆ ಈ ದಾರಿ ನನಗಾಗಿದೆಯೋ ???
July 21, 2010 at 12:08 AM
ಕಷ್ಟದಾ ಕತ್ತಲು ದಿವಸ ಕಳದುದಾ ರಾಘವೇಶ್ವರರ ಕೃಪೆಯೊಳು….ಬಾನಂಚಲಿ ಮೂಡಲಿರುವ ಆಶಾರವಿಯನ್ನು ಕಾಯೋಣ….
July 22, 2010 at 1:35 PM
” ನನ್ನ ಪುಟ್ಟು ಕಂದಾ, ನಿನ್ನೆ ರಾತ್ರಿಯಿಂದ ನನ್ನ ‘ನಿರೀಕ್ಶೆ’ಯಲ್ಲಿದ್ದೀಯಾ? ಏನು ಮಾಡಲಿ ವತ್ಸಾ,ನಿನ್ನೆ ಸಂಜೆಯಿಂದ ಇಡೀ ರಾತ್ರಿ ಸುರಿದ ಭಯಂಕರ ಮಳೆಗೆ ಕಾಡಲ್ಲೇ ಉಳಿಯಬೇಕಾಯ್ತು.ಚುಮುಚುಮು ಬೆಳಗಾಗುವ ವರೆಗೂ ಕಾದು ಈಗ ಬರುತ್ತಿದ್ದೇನೆ. ಸದ್ಯ ಈಗ ಮಳೆ ನಿಂತಿದೆ. ಆಗಸವೂ ಶುಭ್ರವಾಗಿದೆ.ಇಡೀ ರಾತ್ರಿ ನಿನ್ನದೇ ಯೋಚನೆ ನನಗೆ. ಇನ್ನೇನು ಬೆಳಗಾಗುತ್ತಿದೆ. ಬಂದುಬಿಟ್ಟೆ. ಹ್ಞು.”
July 22, 2010 at 2:20 PM
ಅದ್ಭುತ…ಸಿ.ಯೆಚ್.ಎಸ್…!
ಇದು ನೀನು ಗೋವಾಗಿ ಬರೆದದ್ದು…!
July 22, 2010 at 5:37 PM
It’s beautiful and different..
.
in a way it also shows that we have let her down..
July 22, 2010 at 1:58 PM
ಈ ದಿಕ್ಕಿಗೆ ನೋಡುತ್ತಿದೆಯೋ? ಆ ದಿಕ್ಕಿಗೆ ನೋಡುತ್ತಿದೆಯೋ?
July 23, 2010 at 8:11 AM
ಕರಗುತಿರುವ ಪಶ್ಚಿಮವೋ, ಬೆಳಗಲಿರುವ ಪೂರ್ವವೋ…..?
ಕರಗಿದಾ ಸ೦ಕೇತವೋ, ಬೆಳಗುವಾ ಸ೦ಕೇತವೋ…..?
ನಾ ಕರಗಿದರೇ ನೀ ಕರುಗವೇ ಎ೦ಬ ಸ೦ದೇಶವೋ….?
ಒಣಗಿ ಮಾಯವಾದ ಹುಲ್ಲುಗಳ ನೋಡಿ, ತನಗಾಗಿ ಅಲ್ಲ – ಮಕ್ಕಳೇ ನೀವು ಸೊರಗುತಲಿಹರಿ ಎ೦ಬ ಆತ೦ಕವೋ…..?
ತಾಯೇ ನಿನ್ನ ಸೊರಗಿಸಿದೆ….. ನಾ ಸೊರಗಿದೆ – ನಾ ಅರಿಯೆ….. ಆದರೆ ನೀ ಬಿಡಲರಿಯೆ….. ನಿತ್ಯ ಅರಸುತಿಹೆ….. ರಾಧಾಶ್ಯಾಮಸೋಮಸು೦ದರರು ಸಿಕ್ಕುವರೆ?
.
.
ಹೆಚ್ಚು ಬರೆಯುವ & ಓದುವ
http://hareraama.in/members/rnarayana
.
August 2, 2010 at 12:53 PM
ಪುಣ್ಯಕೋಟೀ ಎಂಬ ಗೋವು ತನ್ನ ಕಂದನ ನೆನೆದು…………………..