ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನಿತ್ಯ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಏನು ಪ್ರಪಂಚಾರ್ಥ..?
Audio :
Download : Link
Facebook Comments Box
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನಿತ್ಯ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಏನು ಪ್ರಪಂಚಾರ್ಥ..?
Audio :
Download : Link
October 23, 2010 at 12:30 PM
ಏನು ಜೀವನದರ್ಥ? ಏನು ಪ್ರಪ೦ಚಾರ್ಥ? !
ಏನು ಜೀವಪ್ರಪ೦ಚಗಳ ಸ೦ಬ೦ಧ? ||
ಕಾಣದಿಲ್ಲಿರ್ಪುದೇನಾನುಮು೦ಟೆ? ಅದೇನು? |
ಜ್ಞಾನ ಪ್ರಮಾಣವೇ೦? – ಮ೦ಕುತಿಮ್ಮ ||
October 23, 2010 at 12:41 PM
ಹೊಸತನವೇ ಬಾಳು; ಹಳಸಿಕೆಯಲ್ಲ, ಸಾವು ಬಿಡು |
ರಸವು ನವನವತೆಯಿ೦ದನುದಿನವು ಹೊಮ್ಮಿ ||
ಹಸನೊ೦ದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |
ಪಸರುತಿರೆ ಬಾಳ್ ಚೆಲುವು – ಮ೦ಕುತಿಮ್ಮ ||
October 23, 2010 at 12:47 PM
ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |
ಅರ್ಥವಹುದದು ನಿನಗೆ ಪೂರ್ಣದರ್ಶನದಿ೦ ||
ನರ್ತಿಪನು ಜಡಜೀವರೂಪ೦ಗಳಲಿ ಬೊಮ್ಮ |
ಪೂರ್ತಿಯಿದನರಿಯೆ ಸೊಗ – ಮ೦ಕುತಿಮ್ಮ ||
October 28, 2010 at 3:26 PM
ನಿಮಿಗೆ ಕಗ್ಗಗಳು ಕೈಗೆಟಕುವ೦ತಿದೆ ಅಲ್ಲವೆ?
October 28, 2010 at 9:26 PM
ಬದುಕಿನ ಕಗ್ಗಂಟುಗಳನ್ನು ಬಿಡಿಸಿಕೊಡುವ ಕಗ್ಗಗಳು…!
October 28, 2010 at 10:38 PM
ಎರಡು ಕಗ್ಗಗಳು ಗುರುಗಳು ಈ ಪ್ರವಚನದಲ್ಲಿ ಹೇಳಿದ್ದಾರೆ. ಕಗ್ಗ ಎಲ್ಲರಿಗೂ ಕೈಗೆಡುಕುವ ಸಿಹಿದ್ರಾಕ್ಷಿಯ೦ತೆ. ಕಗ್ಗದ ಬಗ್ಗೆ ಒಮ್ಮೆ ಹೀಗೆ ನೆನಸಿಕೊ೦ಡದ್ದು ನೆನಪಯಾಯಿತು, ಈ ಲಿ೦ಕಲ್ಲಿ ಇದೆ. ಪರಮಾತ್ಮನ ಲಿ೦ಕ್ ಎಲ್ಲೆಲ್ಲೂ ಇದೆ, ಕನೆಕ್ಟ್ ಮಾಡಿಕೊ೦ಡು ಚಾರ್ಜ್ ಮಾಡಿಕೊಳ್ಳಬೇಕು.
http://hareraama.in/blog/hidiyuvale-mahalakshmi/
.
ಶ್ರೀ ಗುರುಭ್ಯೋ ನಮಃ
October 23, 2010 at 1:36 PM
ಅನುದಿನವು ನವದಿನವು ನವತಾರುಣ್ಯವು ನವವಸ೦ತನುದಯ..
ಅನುದಿನವು ಜನ್ಮ ದಿನ..
ಸೂರ್ಯಗಣಪತ್ಯ೦ಬಿಕಾಶಿವವಿಷ್ಣು ಆಶೀರ್ವದಿಸಿರುವ ದಿವ್ಯಪ್ರಭೆ ನಾ.. ನೀ ಅದು ಇದು ಕ೦ಡದ್ದು ಕಾಣದ್ದು..
ಕಾಲ ನೀ ಪೂರ್ತನೊ ಸ್ಪೂರ್ತನೊ, ಜನ್ಮವನ೦ತ ನೀಡಿರುವೆ, ಕಾರುಣ್ಯ ತು೦ಬಿಕೊ೦ಡು ಶ್ರಮವಿಲ್ಲದೆ ಸಾವಿಲ್ಲದೆ ಕ್ರಮಿಸುತ್ತಿರುವ ನಿನ್ನ ಹೆಜ್ಜೆಗೆ ಜೊತೆಯಾಗುವೆ, ನಾ ಬರುವೆ, ನಾರಾಯಣನ ಕರೆತರುವೆ, ನಡೆಯುವ ಅನ೦ತ ಕಾಲ ಒ೦ದಾಗಿ, ಚೆ೦ದಾಗಿ.
.
ಧರಣಿಯ ಮಣ್ಣಿನ ಕಣದೊಳು ಮಾಸಿದ ಕಾಲ ಮ೦ದಿನ ಕಾಲಗಳ ಕುರುವಿಹಿದು.. ಕಾಲಕರುಣಾಕರನ ನಡೆಯ ಗುರುತಿಹುದು.. ಆಚೆ ಈಚೆ ಬದಿಯಲ್ಲಿ ನಾ ಮತ್ತು ನಾರಾಯಣನ ಕಾಲ ಗುರುತಿಹುದು, ನಾವಿರುವೆವು ಒಟ್ಟಿಗೆ, ನಿಮ್ಮ ಹಾಗೆ ನಿರ್ಲಿಪ್ತ ಆನ೦ದಗತಿಯ ಹೆಜ್ಜೆಗಳಿಗೆ ಪ್ರಕೃತಿಯಿ೦ದ ನಾದ ತಾಳ ಪಡೆದು ಬೆಸೆದಿರುವ ನನ್ನ ಹೆಜ್ಜೆಯ ಸಪ್ಪಳ ಕಾಲಕ್ರಮೇಣ ಕರಗಿರುವುದು, ಆಪ್ತರಾಗಿರುವೆವು ನಾವು, ಪ್ರಾಪ್ತವಾಗಿಹಿದು ನಮಗೆ ಆ ಒ೦ದು, ಹಿ೦ದು ಮು೦ದಿಲ್ಲಿದ ಆಚೆ ಈಚೆಯಿಲ್ಲದ ಒ೦ದೇ ಒ೦ದು.
.
ನಾನಾನ್ಯಾರಣ್ಣ? ನಾನಾನಾರಯಣಾಣ್ಣ.
ಸದ್ಗುರುವೆ ಈ ಅಕ್ಷರ ಎ೦ಬ ಮಾಯೆ ಸಾಕು, ಅನುಭವಕ್ಕೆ ಬರುವ ಹಾಗೆ ಹರಸು ಕರುಣಿಸು.
.
ಶ್ರೀ ಗುರುಭ್ಯೋ ನಮಃ
October 28, 2010 at 3:03 PM
ಹರೇ ರಾಮ
October 28, 2010 at 3:59 PM
ಪ್ರವೃತ್ತಿ ಮಾರ್ಗ , ನಿವೃತ್ತಿ ಮಾರ್ಗ ಇದರಲ್ಲಿ ಯಾವ ಮಾರ್ಗ ಸೂಕ್ತ? ಒ೦ದಕ್ಕೊ೦ದು ವಿರೋಧವಾಗಿದೆ..ಎರಡನ್ನೂ ಸಮನ್ವಯಗೊಳಿಸುವುದು ಹೇಗೆ?
ನಾವು ಮಾಡಿದ ಕರ್ಮಾನುಸಾರ ಆತ್ಮದಲ್ಲಿ ಗುರುತಾಗುತ್ತದೆ..ಚಿತ್ರಗುಪ್ತ ಓದುತ್ತಾ ಎಲ್ಲಿ ಸೂಕ್ತವೋ ಅಲ್ಲಿಗೆ ಕಳಿಸುತ್ತಾನೆ..
ನಮ್ಮೊಳಗಿನ ಜೀವಾತ್ಮದಲ್ಲಿ ಎ೦ತೆ೦ತಹ ಗುರುತಾಗಿದೆ ಎ೦ದು ನಮಗೇ ನೋಡಲು ಸಾಧ್ಯವೆ?
October 28, 2010 at 9:31 PM
ಜಾತಕವೆಂದರೆ ಅದುವೇ…!
ನಾವು ಭುವಿಗೆ ಬರುವಾಗ ನಮ್ಮ ಆತ್ಮದಲ್ಲಿದ್ದ ಪಾಪ-ಪುಣ್ಯಗಳ ಗುರುತುಗಳ ಸೂಚಿ..!
ಅದರ ಫಲವಾಗಿ ಬದುಕಿನಲ್ಲಿ ಬರಲಿರುವ ಕಷ್ಟ-ಸುಖಗಳ ಸೂಚಿ…!
‘ ಪದವೀ ಪೂರ್ವಪುಣ್ಯಾನಾಂ ಲಿಖ್ಯತೇ ಜನ್ಮಪತ್ರಿಕಾ ‘
October 29, 2010 at 9:38 AM
ಹರೇ ರಾಮ…
ಈ ಪ್ರವಚನಗಳ download linkನ್ನು ಕೂಡ ಕೊಟ್ಟರೆ ಚೆನ್ನಾಗಿತ್ತು.
November 17, 2010 at 12:54 AM
ಹರೇ ರಾಮ,
ಸಣ್ಣದಾದ ಬೀಜ ಮೊಳಕೆ ಒಡೆದು ಬೃಹತ್ ವೃಕ್ಷವಾಗಿ ಅವಕಾಶದ ಆಕಾಶವನ್ನೆಲ್ಲ ವ್ಯಾಪಿಸುವಂತೆ
ಈಪ್ರಪಂಚದ ಅರ್ಥವೆಂಬ ಬೀಜ ಹೆಮ್ಮರವಾಗಿದೆ ಜನಮಾನಸವನ್ನಾವರಿಸಿದುದ ಕಂಡೆ….
ಸ್ವರದ ಸಹಕಾರವಿಲ್ಲದಿದ್ದರೂ, ಸ್ವತಃ ಬಹಳ ಯಾತನೆಯನ್ನನುಭವಿಸುತ್ತಾ ಪತಿತೋದ್ಧಾರಕ್ಕಾಗಿ ಅನುಗ್ರಹಿಸಿದ
ಈ ಪ್ರವಚನದಲಿ ಜಗದೊಳಿತಿಗಾಗಿ ಹಾಲಾಹಲವನ್ನು ಕುಡಿದ ನೀಲಕಂಠನನ್ನೇ ಕಂಡೆ….
ಹಗಲು ರಾತ್ರೆಗಳೆನ್ನದೆ, ವಿಶ್ರಾಂತಿ, ಭೌತಿಕ ದೇಹದಾರೋಗ್ಯವನ್ನೂ ಲೆಕ್ಕಿಸಿದೆ ತನುವ ದಂಡಿಸುತ
ಶಿಷ್ಯರ- ಗೋ- ಭಕ್ತರ ಪೊರೆವ ದೀಕ್ಷೆಯನೇ ತೊಟ್ಟಿರುವ ಓ ಗುರುವೇ ಈ ಋಣವನೆಂತು ತೀರಿಸಲಿ ?
ಕಣ್ಣೀರಿಡುತ ಕಾಡಿ ಬೇಡುವೆವು ಶ್ರೀರಾಮೇಶ್ವರರ ಸುಖ ಶಾಂತಿ ನೆಮ್ಮದಿಯಾರೋಗ್ಯವ ನೀಡಿ
ಜಗದೊಳಿತ ಬಯಸುವೀ ಶ್ರೀ ಗುರುವರಗೆ ಅಭಯಾನುಗ್ರಹಿಸಿ ಸಹಕರಿಸಿ ನಿಮ್ಮೀಕಾರ್ಯದಲಿ.
November 17, 2010 at 7:34 AM
Touching.
Absolutely agree…
We cannot take everything for granted, need to understand the time, effort, thoughts, blood gone in for all these activities which is not for individual, not for individual family, not for individual religion, but for Vasudaiva Kutumakam concept…
.
Shri Gurubhyo Namaha
November 17, 2010 at 10:43 AM
ಮನ ಮುಟ್ಟುವಂತಿತ್ತು. ಗುರುಗಳು ಹೆಚ್ಚು ಕಮ್ಮಿ ಇದೇ ಸ್ಥಿತಿಯಲ್ಲಿ ಬೆಂಗಳೂರಿಗರಿಗೆ ಪ್ರವಚನಾಮೃತ ಅನುಗ್ರಹಿಸಿದ್ದಾರೆ. ನಾವು ಬೇರೇನಲ್ಲದಿದ್ದರೂ ಅವರು ತೋರಿಸಿದ ಮಾರ್ಗದಲ್ಲಿ ಹೋಗೋ ಪ್ರಯತ್ನ ಮಾಡಿದರೆ ಸ್ವಲ್ಪವಾದರೂ ಗುರುಗಳ ಋಣ ತೀರೀತು.
September 17, 2011 at 8:48 AM
“ಹೃದಯ ಮುಖ್ಯ, ಭಾವ ಮುಖ್ಯ, ಗ೦ಟಲು ಮುಖ್ಯ ಅಲ್ಲ..
ಯಾವುದನ್ನೇ ಆದರು ಒಳಹೊಕ್ಕು ಅರ್ಥಮಾಡಿಕೊಳ್ಳಬೇಕು, ತಿರುಳವರೆಗೆ ಹೋಗಬೇಕು, ತಿರುಳು ಸವಿಬೇಕು..
ಹಾಗೆ ಒ೦ದು ವ್ಯಕ್ತಿ, ಅವನ ಬಟ್ಟೆ ನೋಡಿದರೆ ಸಾಕಾ? ಚರ್ಮದ ಬಣ್ಣ ನೋಡಿದರೆ – ಚ೦ದ ನೋಡಿದರೆ ಸಾಕಾ?
ಸಾಲದು, ಒಳಗೆ ಇಳಿಬೇಕು, ಅವನ ಮನಸ್ಸು ಹೇಗಿದೆ? ಅವನ ಆತ್ಮ ಹೇಗಿದೆ? ಅಲ್ಲಿವರೆಗೂ ಹೋದಾಗ, ನಮಗೆ ವ್ಯಕ್ತಿಯ ಪೂರ್ಣ ದರ್ಶನವಾಗುತ್ತದೆ.. ನಿಜವಾದ ಅರ್ಥ ಸಿಗುತ್ತದೆ..
ಹಾಗೆ, ನಾವು ಯಾವ ಜಗತ್ತಿನಲ್ಲಿ ಇದೆವೋ, ಆ ಜಗತ್ತಿನ ತಿರುಳೇನು.. ಏನೀದರ ಮರ್ಮ, ಅರ್ಥಮಾಡಿಕೊಳ್ಳೊ ಪ್ರಯತ್ನ ಮಾಡಬೇಕು..”
.
ಶ್ರೀ ಗುರುಭ್ಯೋ ನಮಃ