ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:chaturmasya10/Sandesha/Ganapathi.mp3]
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:chaturmasya10/Sandesha/Ganapathi.mp3]
December 27, 2010 at 9:42 PM
ಹರೇರಾಮ ಸಂಸ್ಥಾನ.
ನಮ್ಮ ಶರೀರದಲ್ಲಿರುವ ಪಂಚಭೂತಗಳ ವಿವರಣೆ, ಅವುಗಳ ಕೇಂದ್ರ ನಮ್ಮ ದೇಹದಲ್ಲಿರುವ ಚಕ್ರಗಳು, ಇವುಗಳು ಯಾವುದನ್ನು ಪ್ರತಿನಿಧಿಸುತ್ತವೆ ಎಂದು ವಿವರವಾಗಿ ತಿಳಿದು ತುಂಬಾ ಆನಂದ ಆಯಿತು. ಶ್ರೀ ಶಂಕರಾಚಾರ್ಯರ ಕೃತಿ ಸೌಂದರ್ಯ ಲಹರಿಯ ೯ ನೆಯ ಶ್ಲೋಕ ವಿವರವಾಗಿ ಗೊತ್ತಾಯಿತು.
ಮಹೀಂ ಮೂಲಾಧಾರೇ ಕಮಪಿ ಮಣಿಪೂರೇ ಹುತವಹಂ
ಸ್ಥಿತಂ ಸ್ವಾಧಿಷ್ಠಾನೇ ಹೃದಿ ಮರುತಮಾಕಾಶ ಮುಪರಿ |
ಮನೋಪಿ ಭ್ರೂಮಧ್ಯೇ ಸಕಲಮಪಿ ಭಿತ್ವಾ ಕುಲಪಥಂ
ಸಹಸ್ರಾರೇ ಪದ್ಮೇ ಸಹ ರಹಸಿ ಪತ್ಯಾ ವಿಹರಸೇ ||
ಧನ್ಯವಾದ ಸಂಸ್ಥಾನ. ನಾವು ಮಾಡುವ ಕೆಲಸದಲ್ಲಿ ವಿಘ್ನ ಬಂದಾಗ ನಾವು ಪುನಃ ಯೋಚನೆ ಮಾಡಿ ಮುಂದುವರೆಯಬೇಕಲ್ಲವೇ? ಗಣಪತಿಯ ಬಗೆಗೆ ಅನೇಕ ವಿಷಯಗಳು ಗೊತ್ತಾಯಿತು. ನಮ್ಮ ದೋಷಗಳ ಪರಿಹಾರ ಮಾಡಿ ನಮಗೆ ಸುಜ್ಞಾನ ಕೊಡುವ ಗಣಪತಿ ದೇವರ ಅನುಗ್ರಹ ನಿಮ್ಮ ಮೂಲಕ ಹರೀತಾ ಇರಲಿ. ಎಲ್ಲರ ವಿಘ್ನಗಳು ಕಳೆದು, ಎಲ್ಲರ ಕೆಲಸಗಳು, ಅವರವರ ಯೋಗ್ಯತೆಯ ಆಧಾರದಲ್ಲಿ ನಿರ್ವಿಘ್ನವಾಗಿ ನಡೆಯಲಿ.
ಹರೇರಾಮ.
December 28, 2010 at 11:20 AM
ಹರೇರಾಮ್,
ವಿಘ್ನದ ಮರ್ಮ
ದಾರಿಯ ಧರ್ಮ
ತಿಳಿಸಿಕೊಡುವ
ಹರ ಗಣ ಪತಿ ಗೆ
ಹಗರಣ ಹತಿ ಗೆ
ನಮಸ್ಕಾರಗಳು
December 28, 2010 at 7:32 PM
ಶುಕ್ಲಾಂಬರಧರಮ್ ವಿಷ್ಣುಮ್ ಶಶಿವರ್ಣಮ್ ಚತುರ್ಭುಜಮ್ ।
ಪ್ರಸನ್ನವದನಮ್ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥
ವಿಷ್ಣುವೇ ಸರ್ವ ವಿಘ್ನನಿವಾರಕ ಎಂತ ಇದಲ್ಲಿದೆ. ದೇವತಾಸ್ವರೂಪಗಳು ಕೇವಲ ಉಪಾಸನೆಯ ಮುಖಗಳೇ ಅಥವಾ ಅದು ಭಗವದ್ಶಕ್ತಿಯ ಬೇರೆಯೇ ರೂಪವೇ? ಮನುಷ್ಯರಿರುವಂತೆ ಗಣಪತಿ, ಶಿವ, ವಿಷ್ಣು, ಇತ್ಯಾದಿ ದೇವತೆಗಳು ವಿವಿಧ ರೂಪದಿಂದ ಇರುವವರೇ? ಅಥವಾ ಇವೆಲ್ಲ ಒಂದೇ ಭಗವಂತನ ಬೇರೆ ಬೇರೆ ಗುಣಗಳ ಉಪಾಸನೆಗೋಸ್ಕರ ಭಕ್ತರ ಕಲ್ಪನೆಗಳೇ?
ದಯವಿಟ್ಟು ಉತ್ತರಿಸಿ ಗುರುಗಳೇ..
December 29, 2010 at 1:53 PM
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯ
ಇದೋ ಇಲ್ಲಿ ಸ್ವಚ್ಛ೦ದ ಜಲ,
ನೋಡುವವರಾರ್, ಕೇಳುವವರಾರ್, ಮೀಯುವವರಾರ್, ಈಜುವವರಾರ್, ಕಣ್ಮುಚ್ಚಿ ಕೂರುವವರಾರ್
ಈ ತಪೋವನದ ಶಾ೦ತಿ ಅನುಭವಿಸದೇ ಸುಮ್ಮನತ್ತಿತ್ತ ಓಡಾಡುತಿರುವ ನನ್ನ೦ತವರ ನೋಡಿ ಮರುಗುವವರಾರ್ – ಗುರುದೇವನೋರ್ವನೆ
.
ಜಲವಿರದ ಸರೋವರವ ನೋಡುವವರಾರ್,
ವಾಗ್ದೇವಿ ನೀನಿಲ್ಲದೇ ಬ್ರಹ್ಮನ ಈ ಸೃಷ್ಟಿಯ ಕೇಳುವವರಾರ್?
.
ಶ್ರೀ ಗುರುಭ್ಯೋ ನಮಃ
December 31, 2010 at 1:27 AM
ವಾಗ್ದೇವಿ ನಿನ್ನ ನೆನೆದರೆ “ಪಾವಿತ್ರ್ಯತೆ” “ಪವಿತ್ರಾತ್ಮ” ಎ೦ಬ ಪದಗಳು ಜೊತೆಜೊತೆಗೆ ಬರುತ್ತದೆ..
.
ಶ್ರೀ ಗುರುಭ್ಯೋ ನಮಃ
January 4, 2011 at 11:26 PM
ನಾದ ಸರಸ್ವತಿ ಹರಿಯುತಿಹಳು, ಅಗೋಚರ, ಗುಪ್ತಗಾಮಿನಿ, ಅವಳ ಕಲರವ ನಾದದಲೆಯ ಮೇಲೆಲ್ಲ ಲೋಕಗಳ ತೆರೆ.. ಸೃಷ್ಟಿ ಅದೇಷ್ಟು ಮೋಹಕ. ಹೇ ನಾದ ವೇದ ಪರಮಾತ್ಮ ನಿನಗೆಲ್ಲಿ೦ದ ಬ೦ತೋ ಈ ಮಾಯಾ ಭೇಧ.. ಅದೇಷ್ಟು ಭೇಧ, ಹೇ ಅಭೇಧನೆ ಆಲಿಸು, ಒ೦ದಾಗಿಸು.
.
ಶ್ರೀ ಗುರುಭ್ಯೋ ನಮಃ