” ಏಕಃ ಸ್ವಾದು ನ ಭುಂಜೀತ ” ಸಿಹಿ ವಸ್ತುವನ್ನು ಹಂಚಿ ತಿನ್ನಬೇಕು, ಒಬ್ಬನೇ ತಿನ್ನ ಬಾರದು..!
ಶ್ರೀ ವಾಲ್ಮೀಕಿರಾಮಾಯಣವನ್ನು ಅವಲೋಕಿಸುತ್ತಿರುವಾಗ ನಮ್ಮ ಮನದಲ್ಲಿ ಮತ್ತೆ ಮತ್ತೆ ಸುಳಿದಾಡುವ ಆರ್ಯೋಕ್ತಿಯಿದು..!
ಅಂತರ್ಮುಖಿಯಾಗಿ ಅನಾದಿನಾಯಕನ ಜೀವನದರ್ಶನ ಮಾಡಿದ ಆದಿಕವಿಯ ಅಂತರಂಗದಲ್ಲಿಯೂ ಇದೇ ಭಾವ ಮೂಡಿರಬೇಕು..!!
ಮಧುರ – ಮಧುರವಾದ ಮಧುರಾಧಿಪತಿಯ ಕಥೆಯನ್ನು ತಾವು ಉಂಡಿದ್ದು ಮಾತ್ರವಲ್ಲ,
ಶ್ರೀರಾಮಾಯಣದ ಮೂಲಕ ಲೋಕಕ್ಕೆ ಉಣಬಡಿಸಿದರು..!
ರುಚಿ – ರುಚಿಯಾದ ಭಕ್ಷ್ಯ – ಭೋಜ್ಯಗಳನ್ನು ಹೊನ್ನ- ಹರಿವಾಣದಲ್ಲಿಟ್ಟು ಬಡಿಸುವುದಿಲ್ಲವೇ..?
ಹಾಗೆಯೇ ರಸಮಯವಾದ ತಮ್ಮ ಭಾವಗಳನ್ನು – ಅನುಭವಗಳನ್ನು ‘ಸು-ವರ್ಣ’ ಪಾತ್ರದಲ್ಲಿಟ್ಟು ಯುಗ – ಯುಗಗಳ ಜನವೃಂದಕ್ಕೆ ಬಡಿಸಿದರು..!!
ಆದರಿಂದು ಸುಸಂಸ್ಕೃತವಾದ ಭಾವಗಳು ವಿರಳವಾಗುತ್ತಿವೆ..!
ಸಂಸ್ಕೃತಭಾಷೆಯೂ ಮರೆಯಾಗುತ್ತಿದೆ.
ಪರಿಣಾಮವಾಗಿ ಇಂದಿನ ಪೀಳಿಗೆಯೇ ಮೂಲ ‘ರಾಮಾಯಣದಿಂದ’ ವಂಚಿತವಾಗುತ್ತಿದೆ..!
ಈ ಹಿನ್ನೆಲೆಯಲ್ಲಿ ಮೂಲವಾಲ್ಮೀಕಿರಾಮಾಯಣದ ಸವಿಯನ್ನು ಸಾಮಾನ್ಯ ಜನತೆಗೆ ಉಣಬಡಿಸುವ ಪ್ರಯತ್ನವಿದು..!
ರಾಮಾಯಣವನ್ನು ಮೊದಲಬಾರಿಗೆ ಸಮಾಜದ ಮುಂದೆ ಪ್ರಸ್ತುತಪಡಿಸಿದ ಲವ – ಕುಶರು ಮಹಾ ಕವಿ ವಾಲ್ಮೀಕಿಯನ್ನು ಕಂಡಿದ್ದರು..!
ಹಾಗೆಯೇ ಮಹಾನಾಯಕ ಶ್ರೀರಾಮನನ್ನೂ ಕಣ್ಣಾರೆ ಕಂಡಿದ್ದರು..!
ಇಂದು ಅವರಿಬ್ಬರೂ ನಮ್ಮ ಚರ್ಮ ಚಕ್ಷುಗಳ ಮುಂದಿಲ್ಲ..!
ನಮ್ಮ ಭಾಗಕ್ಕೆ ಇಂದು ಉಳಿದಿರುವುದು ವಾಲ್ಮೀಕಿಪ್ರಣೀತವಾದ ಶಬ್ದರಾಶಿ ಮಾತ್ರವೇ..!
ವಾಲ್ಮೀಕಿಗಳ ಅಮರ ‘ಪದ’ಗಳ ಮೂಲಕವೇ ಶ್ರೀರಾಮನ ಅಮರ ‘ಪದ’ಗಳನ್ನು ಸೇರಬೇಕಾಗಿದೆ..!!!
ಸಾಗರದಾಳದ, ಹಿಮಾಲಯದೆತ್ತರದ, ಆಗಸದಗಲದ ಶ್ರೀರಾಮನ ವ್ಯಕ್ತಿತ್ವವನ್ನು ವಾಲ್ಮೀಕಿಗಳೂ ಸಂಪೂರ್ಣವಾಗಿ ನೋಡಿರಲಾರರು..!
ಅವರ ಅರಿವಿಗದೆಷ್ಟು ಬಂದಿತೋ, ಅದಷ್ಟನ್ನೂ ಶಬ್ದಗಳಲ್ಲಿ ತರಲು ಅವರಿಗೆ ಸಾಧ್ಯವಾಗಿರಲಾರದು..!
ವಾಲ್ಮೀಕಿಗಳ ಶಬ್ದಗಳಲ್ಲಿ ತುಂಬಿರುವ ಭಾವವೆಲ್ಲವನ್ನೂ ಭಾವಿಸಲು ನಮ್ಮಿಂದ ಸಾಧ್ಯವಾಗಿರಲಾರದು..!
ರಾಮಾಯಣವು ನಮ್ಮಲ್ಲಿ ಮೂಡಿಸಿದ ಭಾವಗಳೆಲ್ಲವೂ ಹೇಗೂ ನಮ್ಮ ಶಬ್ದಗಳಲ್ಲಿ ಬರಲಾರವು..!!
ನಮ್ಮ ಶಬ್ದಗಳಲ್ಲಿ ಹುದುಗಿರಬಹುದಾದ ಭಾವಗಳೆಲ್ಲವೂ ನಿಮ್ಮನ್ನು ತಲುಪಲಾರವು..!
ಓದುಗನ ಹೃದಯವನ್ನು ತಲುಪಿದ ಭಾವಗಳಲ್ಲಿಯೂ ಕೂಡಾ ಎಲ್ಲವೂ ಬದುಕಿನಲ್ಲಿ ಅನುಷ್ಠಾನಕ್ಕೆ ಬರಲಾರವು..!
ಇಷ್ಟೆಲ್ಲ ಮಿತಿಗಳ ಮಧ್ಯದಲ್ಲಿಯೂ ರಾಮಾಯಣದಲ್ಲಿ ನಾವು ಅನುಭವಿಸಿದ ಸವಿಯನ್ನು ಈ ವಾರದಿಂದ ನಿಮ್ಮೊಡನೆ ಹಂಚಿಕೊಳ್ಳಬಯಸುವೆವು….!
ಏಕೆಂದರೆ ‘ಏಕಃ ಸ್ವಾದು ನ ಭುಂಜೀತ’….
February 26, 2010 at 7:01 AM
ಶ್ರೀ ಗುರುಭ್ಯೋ ನಮಃ
ಗುರುಗಳೇ ಅನ೦ತ ಅನ೦ತ ಧನ್ಯವಾದಗಳು.
ನಮಗೆ ಗೊತ್ತಿರುವ ರಾಮ, ರಾಮನೆ ಅಲ್ಲ. ರಾಮನನ್ನು ಸೂಪರ್ ಹೀರೊ ಮಾಡಲು ಹೋಗಿ ಕೆಲವರು, ಖಳನಾಯಕ ರಾವಣನನ್ನು ನಾಯಕ ಮಾಡಲು ಹೋಗಿ ಹಲವರು, ಬೇರೆ ಪಾತ್ರಗಳನ್ನು ವಿಜೃ೦ಬಿಸಲು ಹೋಗಿ ಕೆಲವರು – ಕೋದ೦ಡರಾಮನನ್ನು ಕೋಡ೦ಗಿರಾಮನಾಗಿ ಮಾಡಿದ್ದಾರೆ.
ನಿಜವಾದ ರಾಮನನ್ನು, ನಿಜವಾದ ರಾಮಾಯಣವನ್ನು, ಗುರುಗಳ ಪ್ರವಚನಗಳ ಮೂಲಕ ಅಲ್ಪ ಸ್ವಲ್ಪ ಅರಿತಿದ್ದೇವೆ. ಅಜಗಜಾ೦ತರ.
ಆತ್ಮಾರಾಮ ನಮ್ಮ ಆತ್ಮದಲ್ಲಿ ನೆಲೆಗೊಳ್ಳಲಿ, ರಾಮ ಆತ್ಮ – ಆತ್ಮ ರಾಮವಾಗಲಿ.. “ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು, ಎಲ್ಲೆಲ್ಲಿ ನೋಡಿದರು.. ರಘುರಾಮ”.
“ಶ್ರೀರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ……”
.
ಸರ್ವ ಶಿವ೦. “..ಲಿ೦ಗ ಮೆಚ್ಚಿ ಅಹುದಹುದೆನಬೇಕು..”
February 26, 2010 at 9:13 AM
Hare raama
idakkintha madhuravada suddi berilla,naavu nijakku
adrustashaligalu
pranamagalu
February 26, 2010 at 1:59 PM
Hare Raama,Bengalore Chaturmasyagalalli Ramayana Pravachana kelidde.Samsthana eke pravachanavannu likhitha roopadalli tharabaradu,Ramayana hege adbhuthavo,pravachanavoo adbhutha emba bayake manassinalli hadu hogithu.Karuvina kare G
ovige kelisidanthide
February 27, 2010 at 2:10 PM
ಶ್ರೀಗಳು ಹರೇರಾಮನನ್ನು ಶಬ್ದ ರೂಪದಲ್ಲಿ ಹರೇರಾಮದಲ್ಲಿ ಅವತರಿಸುವವರಿದ್ದೀರೆಂದು ತಿಳಿದು ತುಂಬಾ ಸಂತೋಷವಾಗುತ್ತಿದೆ. ಶ್ರೀಗಳ ಪ್ರವಚನ ಕೇಳುವ ಭಾಗ್ಯ ಸಿಗದವರಿಗೂ ಈಗ ಮತ್ತೊಂದು ಅವಕಾಶ ಬಂದಿದೆ. ವಾಲ್ಮೀಕಿ ಶ್ರೀಗಳ ಮೂಲಕ ನಮ್ಮನ್ನು ತಲುಪಲಿದ್ದಾರೆ. ಇದೊಂದುಭಾಗ್ಯ. ಹರೇರಾಮ.
February 27, 2010 at 8:20 PM
Samsthana , Ramanama payasa saviyalu kaadiruvevu. Hare Rama
February 27, 2010 at 9:21 PM
ನಿಜ, ಹೇಳಲೇನು? ಗುರೂಜಿ,
ನಾವೆಲ್ಲ ಪಾಮರರು, ಬಹಳ ಹಸಿದಿದ್ದೇವೆ.
ನಮ್ಮ ಈ ಹಸಿವನ್ನು ಅರಿತವರು ನೀವೇ.
ಮಗುವು ತಾಯಿಯ ಕೇಳುವ ಮೊದಲೇ, ವಾತ್ಸಲ್ಯಮಯಿ ಅಮ್ಮ ಉಣ ಬಡಿಸುವಂತೆ,
ನಮ್ಮೆಲ್ಲರ ಆಂತರ್ಯವ ಅರಿತವರು ನೀವು.
ರಾಮಾಯಣದ ಸು-ವರ್ಣದ ಸವಿ ಸಿಹಿಯ ಊಟ ನೀಡುವ ಸವಿ ಸುದ್ದಿಯ
ತಂದ “ಹರೇರಾಮ” ಗೆ ನನ್ನ ನಮನಗಳು,
ಶ್ರೀಗಳ ಪದಕಮಲಕೆ ನನ್ನ ಹೃತ್ಪೂರ್ವಕ ವಂದನೆಗಳು.
February 28, 2010 at 6:51 PM
ತುಂಬಾ ಸುಂದರವಾಗಿ ಬಂದಿದೆ ಗುರುಗಳೇ. ನಿಮ್ಮನ್ನು ಪಡೆದ ನಾವು ಧನ್ಯರು
March 1, 2010 at 5:00 PM
Hare Raama Gurugale,
Tumbaa Tumbaa Khushiyagtha eddu.
March 1, 2010 at 11:17 PM
ಸಂಸ್ಥಾನ,ವಾಲ್ಮೀಕಿ ರಾಮಾಯಣ ಮಧುರ ,ಅದು ನಿಮ್ಮ ಮೂಲಕ ಕೇಳುವುದಾದರೆ ಅತಿಮಧುರ.
ಈ ಅಮೃತವು ನಮ್ಮೆಲ್ಲರಿಗೂ ಮೂಲರಾಮನ ಪಾದಸ್ಪರ್ಶ ಮಾಡಿಸಲಿ.
ಹರೇರಾಮ
March 2, 2010 at 11:00 AM
ಅದ್ಬುತ ನಾಟಕದ ಅಮೃತ ಸಾರವ ಗುರು ಮುಖೇನ ನೀಡಲಿರುವ ಪ್ರಿಯ ರಾಮನಿಗೆ..
ಉಣಿಸುವ ಶ್ರೀ ಕರಗಳಿಗೆ….
ಉಣ್ಣುವ ಭಾಗ್ಯ ಪಡೆದ ಈ ಭಕ್ತರಿಂದಾ….
ಹೃದಯ ಪೂರ್ವಕ ವಂದನೆಗಳು…..
March 2, 2010 at 3:00 PM
ಅದ್ಬುತ
March 2, 2010 at 10:47 PM
ನಾರಾಯಣನ ರಾಮಾಯಣದ ಗ೦ಗೆ ನಮ್ಮೆಲ್ಲರ ಮುದುಡಿರುವ ಮುಖ ಕಮಲಗಳನ್ನು ಅರಳಿಸಲಿ,
ಹುಚ್ಚ ಬಯಕೆಗಳ ತೀವ್ರತೆಯಿ೦ದ ನಲುಗಿರುವ ಮನಗಳಿಗೆ ಚೈತನ್ಯ ನೀಡಲಿ. ಜೀವನದ ಅರ್ಥ ಅರಿಯುವ೦ತಾಗಲಿ. ಆನ೦ದ ಗ೦ಗೆ ಎಲ್ಲೆಡೆ ಹರಿಯಲಿ – ಶೀತಲ ಅನುಭವ ಎಲ್ಲರಿಗೂ ಆಗಲಿ.
.
“ಸಾಗರದಾಳದ, ಹಿಮಾಲಯದೆತ್ತರದ, ಆಗಸದಗಲದ ಶ್ರೀರಾಮನ..”
ರಾಮ ನಾಮವೆ೦ಬ ಸುಳಿಗೆ ಸಿಕ್ಕುವ ಸೌಭಾಗ್ಯ ಸಿಗಲಿ, ಆಳ ತಿಳಿಯಲಿ.
ರಾಮ ನಾಮವೆ೦ಬ ಬಾಣ ಹೃದಯವನ್ನು ಆಗಸದಲಿ ಹಾರಾಡಿಸಲಿ, ಅಗಲ ತಿಳಿಯಲಿ.
ರಾಮ ನಾಮವೆ೦ಬ ಊರುಗೋಲು, ಹಿಮಾಲಯದ ತುತ್ತ ತುದಿಯಲ್ಲಿನ ಶಿವಾಲಯವ ದರ್ಶನ ಮಾಡಿಸಲಿ, ಎತ್ತರ ತಿಳಿಯಲಿ.
.
ಮನ ಮತ್ತೆ ಮಗುವಾಗಲಿ, ನಗು ಎಲ್ಲೆಲ್ಲೂ ಇರಲಿ. ಮುಗ್ಧತೆ ಪುರುಷನ ಮೂಲರೂಪವೆ ಸೃಷ್ಟಿಯಲಿ..?
ಹಲವಾರು ವಿಷಯಗಳಲ್ಲಿ ಶಿವನಲ್ಲೂ ರಾಮನಲ್ಲೂ ಬಹಳ ಹೋಲಿಕೆ ಇರುವ೦ತೆ ತೋರುತ್ತದೆ..?
March 3, 2010 at 9:03 PM
ಖುಷಿಯಿಂದ ಕುಣಿದಾಡುವಂತಾಗಿದೆ.
March 5, 2010 at 12:23 PM
Harerama,
chathurmasada nenapu marukalisuthide,
mansige muda needuthide
navu pravachanakke hajar guruji,
March 4, 2010 at 4:38 PM
ಹರೇರಾಮ,
ವಾಲ್ಮೀಕಿ ಗಿರಿ ಸಂಭೂತ ರಾಮ ಸಾಗರ ಗಾಮಿನೀ ಭುನಾದಿ ಭುವನಂ ಪುಣ್ಯಾಂ ರಾಮಾಯಣ ಮಹಾನದೀಂ|
March 5, 2010 at 1:32 PM
ಕ್ಷಮಿಸಿ, ಸ್ವಲ್ಪ ಸರಿಮಾಡ್ತೆ…… ಸಂಭೂತಾ,……….. ಪುನಾತಿ (ಭುನಾದಿ)… ಪುಣ್ಯಾ …. .. ನದೀ |
March 5, 2010 at 1:33 PM
ಹರೇ ರಾಮ, ಗುರುಗಳೇ
ಎಕಃ ಸ್ವಾದು ನ ಭುಂಜೀತ……….. ಮುಂದಿನ ಪಾದಗಳನ್ನ ಕಲಿಸಿ ಗುರುಗಳೇ ! ಮತೋಯ್ದು.
March 5, 2010 at 1:33 PM
ಮರ್ತು ಹೋಯ್ದು.
August 19, 2012 at 9:05 PM
ಹರೇ ರಾಮ.
websiteನ ಹೊಸ ರೂಪ ಚೆನ್ನಾಗಿದೆ. 🙂
August 21, 2012 at 10:25 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಹರೇ ರಾಮದ ಯಾವ ಭಾಗವನ್ನು ಯಾವ ರೀತಿಯಲ್ಲಿ ನೋಡಿದರೂ ಮಧುರ ಮಧುರ ಭಾವಗಳನ್ನೇ ಉಂಟುಮಾಡುತ್ತವೆ… ಇದು ರಾಮಾಯಣವೇ ಅನ್ನಿಸುತ್ತದೆ…