|| ಹರೇ ರಾಮ ||
ಸಾವು ಸರ್ವರಿಗೂ ಸಮಾನ.
ಆದರೆ ಸಾವಿನ ಆಚರಣೆಯಲ್ಲಿ ಮಾತ್ರ ಬಹುವಾಗಿ ಭಿನ್ನತೆಗಳಿವೆ!
ಗೃಹಸ್ಥನೊಬ್ಬನ ದೇಹಾಂತವಾದರೆ ಪಾರ್ಥಿವ ಶರೀರಕ್ಕೆ ದಹನ ಸಂಸ್ಕಾರ ಮಾಡುತ್ತಾರೆ. ಆದರೆ ಸನ್ಯಾಸಿ ತ್ಯಜಿಸಿದ ಶರೀರವನ್ನು ಭೂಮಿಯೊಳಗಿಟ್ಟು ವೃಂದಾವನ ಕಟ್ಟುತ್ತಾರೆ.
ಭೋಗಿಯೊಬ್ಬ ಸತ್ತರೆ ಸೂತಕವನ್ನು ಆಚರಿಸುತ್ತಾರೆ, ಆದರೆ ಯೋಗಿಯ ದೇಹಾಂತದಲ್ಲಿ ಸೂತಕ ಆಚರಣೆ ನಿಷಿದ್ಧ.
ಭೋಗಿಯ ಶರೀರ ಅಪವಿತ್ರವೆನಿಸುತ್ತದೆ, ಮುಟ್ಟಿದರೆ ಮೈಲಿಗೆಯೆಂದು ಭಾವಿಸುವ ಸಂಪ್ರದಾಯವಿದೆ. ಯೋಗಿಯ ಶರೀರವೋ, ಪರಮ ಪವಿತ್ರ. ದರ್ಶನ ಸ್ಪರ್ಶನಗಳಿಂದ ಪಾಪ ಪರಿಹಾರ.
ಸಾಮಾನ್ಯರು ಗತಿಸಿದರೆ ಆದಷ್ಟು ಬೇಗನೆ ಸ್ಮಶಾನಕ್ಕೆ ಕೊಂಡೊಯ್ದು ದಹಿಸುವುದಲ್ಲದೆ, ಅಸ್ಥಿ-ಭಸ್ಮಗಳಂಥಹ ಅವಶೇಷಗಳನ್ನು ಕೂಡ ಪುಣ್ಯ ತೀರ್ಥಗಳಲ್ಲಿ ವಿಸರ್ಜಿಸಿ ಗುರುತೇ ಇಲ್ಲದಂತೆ ಮಾಡುತ್ತಾರೆ.ಆದರೆ ಯೋಗಿಯ ಶರೀರವನ್ನಾದರೋ ಆಶ್ರಮದಿಂದ ಅನತಿದೂರದಲ್ಲಿಯೇ ವೃಂದಾವನದಲ್ಲಿರಿಸಿ ಅಜರಾಮರಗೊಳಿಸುತ್ತಾರೆ.
ಏನಿದರ ಮರ್ಮ? ಯಾಕೀ ತಾರತಮ್ಯ? ಚಿಂತಿಸೋಣ…
ಬದುಕಿನುದ್ದಕ್ಕೂ ಪರೋಪಕಾರ ಮಾಡುತ್ತಲೇ ಇರುವವರು ಜಗತ್ತಿನಲ್ಲಿ ಹಲವರು ಸಿಗಬಹುದು.
ಸಾವಿನಲ್ಲೂ ಪರೋಪಕಾರವನ್ನು ಮಾಡುವವರು ಕೆಲವರು ಮಾತ್ರ ಸಿಕ್ಕಿಯಾರು.
ಆದರೆ ಸಾವಿನ ನಂತರವೂ ಜೀವ ಕೋಟಿಗಳ ಕಲ್ಯಾಣವನ್ನು ಸಾಧಿಸುತ್ತಲೇ ಇರುವವರು ಅತ್ಯಂತ ವಿರಳ.
ಇವರೇ ಸಂತರು – ದೈವಸ್ವರೂಪಿಗಳು.
ಸಂತರ ಶರೀರ ದೇವಾಲಯಕ್ಕೆ ಸಮಾನ.
ಗಾಳಿ ಎಲ್ಲೆಡೆ ಇದ್ದರೂ ಪಂಖ (Fan) ಇರುವಲ್ಲಿ ವಿಶೇಷವಾಗಿ ಪ್ರಕಟವಾಗುವಂತೆ…
ತಂತಿಗಳಲ್ಲಿ ವಿದ್ಯುತ್ ಹರಿಯುತ್ತಿದ್ದರೂ ವಿದ್ಯುದ್ದೀಪದೊಳಗಿನಿಂದ ಮಾತ್ರವೇ ಅದುಬೆಳಗಿ ಬರುವಂತೆ…
ಪರಮಾತ್ಮನೆಲ್ಲೆಡೆ ಇದ್ದರೂ ಅನುಗ್ರಹವೀಯಲು ಮಾಧ್ಯಮವಾಗಿ ಮಾಡಿಕೊಳ್ಳುವುದು ಸಂತರ ಶರೀರವನ್ನೇ..!
ತಿಳಿಯಾದ, ತೆರೆಯಿಲ್ಲದ ಸರೋವರದಲ್ಲಿ ಸೂರ್ಯನ ಪ್ರತಿಬಿಂಬ ಸ್ಪಷ್ಟವಾಗಿ ಮೂಡುವುದೇ ಹೊರತು – ಕಲುಷಿತವಾದ ಉಲ್ಲೋಲಕಲ್ಲೋಲವಾದ ಜಲರಾಶಿಯಲ್ಲಿ ಅಲ್ಲ, ಅಲ್ಲವೇ?
ಸಂತರ ಶರೀರವೆಂಬುದು ಮಹಾಯೋಗಾಲಯವಿದ್ದಂತೆ.
ಅದೆಷ್ಟು ಮಹಾ ಸಾಧನೆಗಳು..!!
ಅದೆಷ್ಟು ಮಹಾ ದರ್ಶನಗಳು..!!
ಅದೆಷ್ಟು ದಿವ್ಯ ಶಕ್ತಿಗಳು ಆ ದಿವ್ಯ ಮಂಗಲ ವಿಗ್ರಹದಲ್ಲಿ ಹರಿದಾಡುತ್ತವೆ..!!!?
ಸುಟ್ಟುಬಿಡಬಹುದೇ ಇಂತಹಾ ಶರೀರವನ್ನು..?!!
ಸೃಷ್ಟಿಯ ಎರಡು ನಿಯಮಗಳನ್ನು ನೆನಪಿಸಿಕೊಳ್ಳೋಣ,
1. ಯಾವುದೇ ವಸ್ತುವಿನ ಸಾಮೀಪ್ಯ – ಸಂಪರ್ಕಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ.
ಹಿಮಾಚಲದ ಹತ್ತಿರ ಹೋಗುತ್ತಿದ್ದಂತೆಯೇ ಚಳಿ ಎನಿಸುವ ಹಾಗೆ…
೨. ಸಂಪರ್ಕವೇರ್ಪಡುತ್ತಿದ್ದಂತೆಯೇ ಶಕ್ತಿಯು ಹೆಚ್ಚು ಇರುವಲ್ಲಿಂದ ಕಡಿಮೆ ಇರುವಲ್ಲಿಗೆ ಹರಿಯುತ್ತದೆ.
ಹೆಚ್ಚು ರೇತಕ(Voltage)ವಿದ್ಯುತ್ ಕಡಿಮೆ ರೇತಕದ ಎಡೆಗೆ ಹರಿದಂತೆ
ಇದು ನಿಜವೇ ಆಗಿದ್ದಲ್ಲಿ, ಸಂತರಿಗೆ ಸಹಜವೆನಿಸಿದ ಪರಮಾತ್ಮಸಮಾಗಮದ ಪ್ರಭಾವ ಆ ಶರೀರದ ಮೇಲೆ ಎಷ್ಟಾಗಿರಹುದೆಂದು ಅಳೆಯಲು ಸಾಧ್ಯವೇ…?
ಸಿಂಧುವಿನಲ್ಲಿ ಒಂದಾಗುವ ಬಿಂದುವಿನಂತೆ ಸಂತ ಭಗವಂತನಲ್ಲಿ ಒಂದಾಗಿ ಆನಂದಿಸುವಾಗ ಅದೆಂಥ ಮಹಾ ಶಕ್ತಿಯು ಭಗವಂತನಿಂದ ಸಂತನೆಡೆಗೆ ಹರಿದಿರಬಹುದೆಂದು ಊಹಿಸಲು ಸಾಧ್ಯವೇ..!!?
ಇಂತಹ ಶರೀವನ್ನು ಕಾಪಿಟ್ಟುಕೊಳ್ಳಬೇಡವೇ..?
ಮೃತ್ಯುವಿನಲ್ಲಿಯೇ ಅಮೃತತ್ತ್ವವನ್ನು ಕಂಡುಕೊಳ್ಳುವಂತಹ ಸಂತನ ಶರೀರವು ಅಜರಾಮರಗೊಳ್ಳುವ ಸ್ಥಾನವೇ ವೃಂದಾವನ.
’ವೃಂದ’ವೆಂದರೆ ಸಮೂಹ. ’ಅವನ’ ಎಂದರೆ ರಕ್ಷಣೆ.
ಸಂತನೊಬ್ಬ ಸಾವಿನ ನಂತರವೂ ಭಕ್ತ ಸಮೂಹವನ್ನು ಶರೀರ ಮಾತ್ರದಿಂದಲೇ ಪೊರೆಯುವ ಸ್ಥಾನ – ಅದುವೇ ವೃಂದಾವನ.
ಬದುಕು ಪರಿಪೂರ್ಣವೆನಿಸಬೇಕಾದರೆ, ಸಾರ್ಥಕವೆನಿಸಬೇಕಾದರೆ ಕಣ್ಣು ಕೊಟ್ಟವನನ್ನು -ಭಗವಂತನನ್ನು- ಕಾಣಬೇಕು.
ಅದು ಸಾಧ್ಯವಾಗದಿದ್ದರೆ…???
ಭಗವಂತನನ್ನು ಕಂಡ ಸಂತರನ್ನು ಕಾಣಬೇಕು.
ಸಂತ ಭಗವಂತನನ್ನು ಸೇರಿದ ಮೇಲೆ…?
ಆತ ಭುವಿಯಲ್ಲಿ ಬಿಟ್ಟು ಹೋಗುವ ಪಾರ್ಥಿವ ಶರೀರವೇ ಆ ಕಾರ್ಯವನ್ನು ಮುಂದುವರೆಸುತ್ತದೆ. ಭಗವಂತನ ಪ್ರಭಾವ ಸಂತನಮೇಲೆ, ಸಂತನ ಪ್ರಭಾವ ಆತ ಧರಿಸಿದ ಶರೀರದಮೇಲೆ, ಸಂಪರ್ಕ -ಸಾನ್ನಿಧ್ಯ ಮಾತ್ರದಿಂದಲೇ ಆ ಶರೀರದ ಪ್ರಭಾವ ನಮ್ಮಂಥವರಮೇಲೆ ಆಗಿ ಮಾನವತೆಯಿಂದ ಮಾಧವತೆಗೆ ನಮ್ಮನ್ನು ಏರಿಸಿ ಬಿಡುವುದಲ್ಲವೇ !!?
ಸಂತನೊಬ್ಬ ಭೂಮಿಗೆ ಬರುವಾಗ ಅಥವಾ ಭೂಮಿಯನ್ನು ಬಿಟ್ಟು ಹೋಗುವಾಗ ಕಾಲ ದೇಶಗಳಮೇಲೆ ಬೀರುವ ಪರಿಣಾಮ ಅಗಾಧವಾದದ್ದು!
ಆದುದರಿಂದಲೇ ಸಂತನ ಜನ್ಮ ಭೂಮಿ ತೀರ್ಥಕ್ಷೇತ್ರವೆನಿಸುತ್ತದೆ. ಅಂಥವರ ಜನ್ಮದಿನವನ್ನು “ಜಯಂತಿ” ಎಂದು ನಾವು ಆಚರಿಸುತ್ತೇವೆ.
ಸಂತ ಚೇತನ ವಿಶ್ವ ಚೇತನದಲ್ಲಿ ವಿಲೀನವಾದ ದಿನ – ಅದು ’ಅಮೃತ ತಿಥಿ’, ಅದನ್ನೇ “ಆರಾಧನೆ” ಎಂದು ಆಚರಿಸುತ್ತೇವೆ. ಸಾಮಾನ್ಯರ ವಿಷಯದಲ್ಲಿ ವ್ಯವಹರಿಸುವಂತೆ ’ಮೃತ ತಿಥಿ’ಯಲ್ಲ.
ಶ್ರಾದ್ಧ ಮಾಡುವುದು ಗತಿಸಿದವನ ಶ್ರೇಯಸ್ಸಿಗಾಗಿ, ಆದರೆ ಆರಾಧನೆ ಹಾಗಲ್ಲ, ನಮ್ಮ ಶ್ರೇಯಸ್ಸಿಗಾಗಿ. ಸಂತರು ಆಪ್ತ ಕಾಮರು, ಪೂರ್ಣತೃಪ್ತರು. ಅಂಥಹವರಿಗೆ ನಾವು ಕೊಡಲು ಏನಿದೆ?
ಅಂತರಂಗದ ಕಣ್ಣು ತೆರೆದು ಸಂತರ ಪ್ರಭಾವವಿರುವ ಕಾಲ-ದೇಶಗಳನ್ನು ಹುಡುಕೋಣ….
ಹೃದಯದ ಬಾಗಿಲು ತೆಗೆದು ಸಂತರ ಸತ್ಯ, ಸತ್ವ ಸಾಗರದಿಂದ ಮೊಗೆಮೊಗೆದು ತುಂಬಿಕೊಳ್ಳೋಣ..
(ನಿನ್ನೆ ತಾನೇ ನೆರವೇರಿದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಹನ್ನೊಂದನೇ ವಾರ್ಷಿಕ ಆರಾಧನೆಯ ಸಂದರ್ಭದ ಲೇಖನ)
November 26, 2009 at 9:15 AM
ಹರೇ ರಾಮ..
November 26, 2009 at 9:15 AM
ನಾವೂ ಪೂರ್ಣತೃಪ್ತರಾಗುವುದು ಹೇಗೆ?
November 28, 2009 at 12:42 AM
ನಮ್ಮಾತ್ಮದೊಡನೆ ಮುಖಾಮುಖಿಯಾದಾಗ..!!
November 26, 2009 at 9:24 AM
ಆರಾಧನೆಗೆ ಯಾರು ಯಾಕೆ ಅರ್ಹರು ಎಂಬುದನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು .ನನ್ನ ಅಂತರಂಗದ ಕಣ್ಣನ್ನು ತೆರಯಲಾರಿರ ????
November 30, 2009 at 8:10 AM
ಅಂತರಂಗದ ಕಣ್ಣು ಸ್ವಲ್ಪವೂ ತೆರೆಯದಿದ್ದರೆ ಈ ಕಾಮೆಂಟ್ ಬರಲು ಸಾಧ್ಯವೇ ಇಲ್ಲ..
November 26, 2009 at 10:53 AM
Fantastic. Santha Jyothi Adbhutha. Girinagaradalliruva Ramashramada Shiva Linga naa kandiruva adbhuthagalalondu (Alankaravilladiruvaga).
November 30, 2009 at 8:11 AM
ಮಧುವರ್ಣದ ನರ್ಮದಾಬಾಣಲಿಂಗ..!!
November 26, 2009 at 11:38 AM
Here rama
” Guruvina gulamanaguva tanaka doreyadanna mukuti “,antharangada kannu
terasida prabhu namma yeduralle eruvaga bere kade hudukabeke ? bagilinalli
nintha jyothiyannu hrudayadolage hege sadaa erisikolluvadu gurugale
November 28, 2009 at 12:43 AM
ಅದನ್ನು ಅತಿಶಯವಾಗಿ ಪ್ರೀತಿಸು..
November 26, 2009 at 12:02 PM
hare rama,
Guruve, manase vrundavana ennuttaralla, hagandare enu…!!!!???
November 30, 2009 at 9:16 AM
ನಾವು ಒಬ್ಬರಲ್ಲ..ಅದೆಷ್ಟು ಶಕ್ತಿಗಳು-ಸಂಗತಿಗಳು ಸೇರಿ ನಮ್ಮ ಶರೀರ ನಿರ್ಮಾಣವಾಗುತ್ತದೆ..! ನಮ್ಮ ಶರೀರವೇ ಒಂದು ‘ವೃಂದ'(ಸಮೂಹ)..ಈ ವೃಂದವನ್ನು ಅವನ(ರಕ್ಷಣೆ) ಮಾಡುವ ಹೊಣೆಗಾರಿಕೆಯುಳ್ಳ ಮನಸ್ಸಿಗೆ ‘ವೃಂದಾವನ’ವೆಂದರೆ ಅದು ಉಚಿತವೇ ಆಗಿದೆ..
November 30, 2009 at 10:27 AM
Fantastic explanation/interpretation! ತು೦ಬಾ ಸ೦ತೋಶ ಈ ಎಲ್ಲಾ ಗುರು-ಶಿಷ್ಯರ ಸ೦ಭಾಷಣೆಗಳನ್ನ ಓದುವಾಗ!
December 2, 2009 at 12:27 PM
aadare Guruve ee honegarike manassige yake tiliuvudilla…??!! Bhakthiye deepavagi arivu moodisaballade???!!!!! dhyana endare enu..? manassinolage deva smarane usirinante prayatnavillade nadeyuttiddare adu dhyanada ondu reetiye….???
November 26, 2009 at 12:51 PM
hare rama
November 28, 2009 at 12:40 AM
Hareraama..
November 26, 2009 at 1:27 PM
This blog has come out really good.. really really good. A very rare topic.. rare presentation skills.. This should reach larger audience, should be translated atleast to Sanskrit, English, Hindi. Not sure how much beauty it may lose after translation. I am sure that the concerned team will have some plans on translation; it is just that I am over excited. (What happened to translator, it was a pleasure typing in Kasturi Kannada. Many of us are unable to use it I guess)
December 7, 2009 at 11:33 AM
Rightly said. This needs to reach a larger audiance.
November 26, 2009 at 3:37 PM
Gurugale, “Maha Darshana” andare yenu?
November 28, 2009 at 12:38 AM
ಬರಿಗಣ್ಣಿಗೆ ಕಂಡಿದ್ದು ದರ್ಶನ..
ಒಳಗಣ್ಣಿಗೆ ಕಂಡಿದ್ದು ಮಹಾದರ್ಶನ..!!
November 28, 2009 at 12:39 AM
ಕಾಣುವ ವಸ್ತು ಮಹತ್ತಾದಾಗ..ದರ್ಶನ ಆಳಕ್ಕಿಳಿದಾಗ..
November 26, 2009 at 3:56 PM
ಸಂಸ್ಥಾನ,
ಈ ಲೇಖನದ ಬಗ್ಗೆ, ನಂಗಳ ಭಾಷೆಲೆ ಹೇಳಕ್ಕು ಅಂದ್ರೆ ……HATS-OFF 🙂
November 27, 2009 at 1:59 PM
ತಮ್ಮ, ಅದು ನಿಂಗ್ಳಭಾಷೆನೂ ಅಲ್ಲ !!
November 28, 2009 at 12:36 AM
ಭಾವದ ಭಾಷೆ..!!
November 26, 2009 at 10:38 PM
ಅಬ್ಬಾ..ಎಷ್ಟೊ೦ದು ಒಳ್ಳೇ ಚಿ೦ತನೆ…ಹೊಸ ವಿಚಾರ …ಆತ್ಮಜ್ನಾನ ಪ್ರದಾನೇನ ತಸ್ಮೈ ಶ್ರೀ ಗುರುವೇ ನಮಃ…
November 26, 2009 at 10:43 PM
ಗುರುದೇವ..ವ್ರು೦ದಾವನದೊಳಗಿರುವ ಸ೦ತರ ಪವಿತ್ರ ದೇಹ ಪ೦ಚ ಭೂತದಲ್ಲಿ ವಿಲೀನ ವಾಗುವುದಿಲ್ಲವೆ??
ಪಚತ್ವ ವಾಗುವುದು ನಮ್ಮ೦ತಹ ಜನಸಾಮಾನ್ಯರು ಮಾತ್ರವೆ??.
November 28, 2009 at 12:35 AM
ಯಾವುದು ಎಲ್ಲಿಂದ ಬಂತೋ ಅದು ಅಲ್ಲಿಯೇ ಹೋಗಿ ಸೇರಿದರೆ ಅದುವೇ ಮುಕ್ತಿ..ಮರಣದ ನಂತರ ದೇಹದಲ್ಲಿನ ಪಂಚಭೂತಗಳು ಪಂಚ ಮಹಾಭೂತಗಳಲ್ಲಿ ವಿಲೀನಗೊಳ್ಳುವುದು ಎಲ್ಲರಲ್ಲಿಯೂ ನಡೆಯುವ ವಿಷಯ..
ಆದರೆ ಸಂತನಲ್ಲಿ ಒಂದಂಶ ಹೆಚ್ಚು..ಆತ್ಮ ಪರಮಾತ್ಮನಲ್ಲಿ ವಿಲೀನಗೊಳ್ಳುವುದು..!!
November 27, 2009 at 2:02 PM
ಗುರುಗಳೇ, ಪ್ರಣತೋsಸ್ಮಿ |
ಜೆನ ತಮ್ಮ ಜಯಂತಿ ಆಚರಣೆಯ ಹೆಚ್ಚುಗಾರಿಕೆಯಲ್ಲಿ ” ಗೀತಾಜಯಂತಿ, ಶಂಕರಜಯಂತಿ,ಕೃಷ್ಣಜಯಂತಿ,ನೃಸಿಂಹ ಜಯಂತ್ಯುತ್ಸವಗಳನ್ನು ಮರೆತೇ ಬಿಟ್ಟದ್ದ. ಇದ್ರ ಕಡೆಗೆ ಒಂದು ಹರಿತ ಉಪನ್ಯಾಸ ಇಲ್ಲಿ ಹರಿದು ಬರಲಿ ಎಂಬ ಅರಿಕೆ.
ಮತ್ತೆ. ಗುರುಗಳೇ, ಜಯಂತಿ ಮತ್ತು ವರ್ಧಂತಿ ಆಚರಣೆಯಲ್ಲಿ ಭೇದ ಎಂಥ ?
November 30, 2009 at 9:20 AM
‘ವರ್ಧಂತಿ’ಯನ್ನು ಬದುಕಿದ್ದಾಗ ಆಚರಿಸುತ್ತಾರೆ..ಬದುಕಿನ ನಂತರ ಆಚರಿಸುವುದು ‘ಜಯಂತಿ’
November 30, 2009 at 9:24 AM
‘ಜಯ’ವೆಂದರೆ ಸರ್ವೋತ್ಕರ್ಷ..ಬದುಕು ಪೂರ್ಣಗೊಂಡು ವ್ಯಕ್ತಿ ಮುಕ್ತಿಯಲ್ಲಿ ನೆಲೆ ನಿಂತ ಮೇಲೆ ಆಚರಿಸುವುದು ‘ಜಯಂತಿ’..
ಇನ್ನೂ ‘ವೃದ್ಧಿ’ ಇದ್ದಾರೆ ಅರ್ಥಾತ್ ಬದುಕು ಇನ್ನೂ ಶೇಷ ಇದ್ದರೆ ‘ವರ್ಧಂತಿ’..
November 27, 2009 at 10:27 PM
samsthana Hare rama
Eternal truth which needs to reach a very wide audience. The body of a saint is like the string which partakes the fragrance of flowers.
Egyptians considered their kings gods.Is it the reason that they preserved the bodies in the pyramids?
sharadakka
November 28, 2009 at 12:26 AM
Seems like that..
November 28, 2009 at 12:04 PM
hare raama samstanam
1. santarante badukidavarannu gurutisuvadu hege? anubhava vedyave athavaa innenaadaru daari ideye
pranamagalu, mohana bhaskar hegde
November 28, 2009 at 6:56 PM
ಗುರುಗಳೇ, ದಯವಿಟ್ಟು ತಿಳಿಸಿ.
೧. ಸ೦ತ ಆಗಲು ಸನ್ಯಾಸಿಯೇ ಆಗಬೇಕೇ೦ದು ಇಲ್ಲ ಅಲ್ಲವೇ?
೨. ಒಬ್ಬ ವ್ಯಕ್ತಿ ಸ್ವ-ಇಚ್ಛೆ-ಯಿ೦ದ ಸ್ವಪ್ರಯತ್ನದಿ೦ದ ಸ೦ತ ಆಗುತ್ತಾನಾ ಅಥವಾ ಕಾಲ, ಪ್ರಕೃತಿ, ವಿಧಿ ನಿಯಮಕನುಗುಣವಾಗಿ ಕಾಲ೦ತರದಲ್ಲಿ ಸ೦ತ ಆಗುತ್ತಾನಾ?
೩. ಸ೦ತ ಆಗಲು ಯಾರು ಪ್ರಯತ್ನ ಮಾಡಬೇಕು? ಪ್ರಯತ್ನ ಮಾಡುವವನ ಮನಸ್ತಿತಿ ಹೇಗಿರಬೇಕು? ಪ್ರಾರ೦ಭ ಹೇಗೇ ಮಾಡಬೇಕು?
November 30, 2009 at 9:40 AM
೧,ಮತ್ತೆಲ್ಲವನ್ನೂ ಮೀರಿದ ಪ್ರೀತಿ ಆತ್ಮದಲ್ಲಿ ಎಂದು ಉಂಟಾದರೆ ಅಂದೇ ಸಂತನೆನಿಸುತ್ತಾನೆ..ಸನ್ಯಾಸವೆಂದರೆ ದೊಡ್ದದಕ್ಕಾಗಿ ಸಣ್ಣದನ್ನು ತ್ಯಾಗ ಮಾಡುವುದು..ಅದು ದೊಡ್ಡದು ಸಿಗುವಾಗ ತಾನೇ ಆಗುವ ಪ್ರಕ್ರಿಯೆ..
೨,ತನ್ನಿಚ್ಛೆಯಿಲ್ಲದೆ ಏನೂ ಆಗಲು ಸಾಧ್ಯವಿಲ್ಲ..ಹಾಗೆ ನೋಡಿದರೆ ಇಚ್ಛೆ ತೀವ್ರಗೊಂಡಾಗ ಅದಕ್ಕೇ ಸಾಧನೆ ಎಂಬ ಹೆಸರು ಬರುತ್ತದೆ..ನಾವು ಬಯಸಿದ್ದಕ್ಕೆಲ್ಲಾ ಭಗವಂತ ‘ತಥಾಸ್ತು’ ಎಂದೇ ಹೇಳುತ್ತಿರುತ್ತಾನೆ..ಆದರೆ ಇಚ್ಚೆಗಳ ಉದ್ದ ಸರದಿಯ ಸಾಲಿನಲ್ಲಿ ಅದು ಪೂರ್ಣಗೊಳ್ಳುವಾಗ ಕೆಲವೊಮ್ಮೆ ನಮಗೆ ಬೇಡವಾಗಿರುತ್ತದೆ..ಅಷ್ಟೇ..!!
೩,ಪ್ರತಿಯೊಂದು ಜೀವಕ್ಕೂ ಸಂತನಾಗುವ ಅಧಿಕಾರವಿದೆ..ಪ್ರಾರಂಭ ಬಯಕೆಯಿಂದ..ಬಯಕೆಯೊಂದು ಮನದಲ್ಲಿ ಹುಟ್ಟಿಕೊಂಡರೆ ತತ್ಕ್ಷಣವೇ ಅದಕ್ಕೇ ತಕ್ಕಂತೆ ಪ್ರಕೃತಿಯಲ್ಲಿ ಬದಲಾವಣೆಗಳು ಏರ್ಪಡಲು ಪ್ರಾರಂಭವಾಗುತ್ತವೆ..ಅದುವೇ ಸಾಧನೆ..
December 2, 2009 at 12:36 PM
“Ellavannu meerida preeti” endare enu Guruve??? Preeti swarthada innondu mukhave?? Devarannu prretisuvudu kooda devara preeti padeyuva swarthadindale allave???
November 30, 2009 at 10:33 AM
ಶ್ರಾದ್ಧ ಮಾಡುವುದು ‘ಹೋದವರ’ ಉದ್ಧಾರಕ್ಕಾಗಿ. ಆರಾಧನೆ ಮಾಡುವುದು ‘ಇದ್ದವರ’ ಉದ್ಧಾರಕ್ಕಾಗಿ… ಎ೦ಥಾ ಮನೋಜ್ನ ವಿವರಣೆ!! ನಮ್ಮ ಸ೦ಸ್ಕೃತಿಯ ಗ೦ಧ-ಗಾಳಿಯೇ ಇಲ್ಲದ ನಮ್ಮ ಪೀಳಿಗೆಯವರ ಕಣ್ಣು ತೆರೆಸುತ್ತಿರುವುದಕ್ಕೆ ಗುರುಗಳಿಗೆ ಧನ್ಯವಾದಗಳು.
December 1, 2009 at 2:24 AM
ಸ೦ತನ ಶಾ೦ತ ರೂಪ, ಸಾಕಾರದ ಶಿಕರವೇ? ನಿರಾಕಾರದ ವ್ಯಕ್ತವೇ?
ಸ೦ತ – ಪ್ರಕೃತಿಯ ಮುದ್ದಿನ ಶಿಶುವೇ? ಪುರುಷನ ಗರ್ವವೇ?
ಕಿರಿಯನೇ? ಹಿರಿಯನೇ? ರುದ್ರನೇ? ಭುಜ೦ಗಶಯನ ನಾರಾಯಣನೇ?
December 5, 2009 at 2:56 PM
Gottillada sumaaru vishayagalu gottadavu.
December 7, 2009 at 11:37 AM
Hare Raama gurugale, Can you write some more on this subject please? For instance, Santa/Sanyasi aagalu yenu niyama nishtegalu eruttave, how his body gets pure?, etc.
December 12, 2009 at 10:14 PM
ಭಗವಂತನನ್ನು ಕಂಡ ಸಂತರನ್ನು ಕಾಣಬೇಕು.edu engoge edigu…
December 16, 2009 at 11:33 AM
ಶ್ರಾದ್ಧ ಮಾಡುವುದು ಗತಿಸಿದವನ ಶ್ರೇಯಸ್ಸಿಗಾಗಿ ,Matthu namma ಶ್ರೇಯಸ್ಸಿಗಾಗಿ Allave Gurugale?
September 9, 2011 at 7:57 AM
“ಬದುಕಿನುದ್ದಕ್ಕೂ ಪರೋಪಕಾರ ಮಾಡುತ್ತಲೇ ಇರುವವರು ಜಗತ್ತಿನಲ್ಲಿ ಹಲವರು ಸಿಗಬಹುದು.
ಸಾವಿನಲ್ಲೂ ಪರೋಪಕಾರವನ್ನು ಮಾಡುವವರು ಕೆಲವರು ಮಾತ್ರ ಸಿಕ್ಕಿಯಾರು.
ಆದರೆ ಸಾವಿನ ನಂತರವೂ ಜೀವ ಕೋಟಿಗಳ ಕಲ್ಯಾಣವನ್ನು ಸಾಧಿಸುತ್ತಲೇ ಇರುವವರು ಅತ್ಯಂತ ವಿರಳ.
ಇವರೇ ಸಂತರು – ದೈವಸ್ವರೂಪಿಗಳು.”
.
.
ಅತ್ಯಂತ ಅತ್ಯಂತ ಅತ್ಯಂತ ವಿರಳ
.
ಶ್ರೀ ಗುರುಭ್ಯೋ ನಮಃ
March 24, 2013 at 3:03 PM
Hare raama….