ಬದುಕು ಸಮೃದ್ಧವಾಗಬೇಕು..
ಬದುಕು ಸಾರ್ಥಕವೂ ಆಗಬೇಕು..
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..
ಇದು ಅಯೋಧ್ಯೆಯ ಅರ್ಥ ನೀತಿ..
ಇದುವೇ ಭಾರತೀಯರ ಆದರ್ಶಬದುಕಿನ ಅರ್ಥನೀತಿ..
ನಾರಾಯಣನಿಲ್ಲದಲ್ಲಿ ಲಕ್ಷ್ಮಿ ಇರುವುದೆಂತು..?
ಸಾರ್ಥಕತೆಯಿಲ್ಲದಲ್ಲಿ ಸಮೃದ್ಧಿ ಉಳಿಯುವುದೆಂತು..?
ಆಕೆ ಭಾಗ್ಯದ ಲಕ್ಷ್ಮಿಯೇ ಆದರೆ ಸರಿಯಾದ ದಾರಿಯಲ್ಲಿಯೇ ಬರುತ್ತಾಳೆ..ಸರಿಯಾದ ದಾರಿಯಲ್ಲಿಯೇ ಹೋಗುತ್ತಾಳೆ..!
“ಸನ್ಮಾರ್ಗದಲ್ಲಿ ಬರಲಿಲ್ಲ..ಸತ್ಕಾರ್ಯಕ್ಕೆ ವಿನಿಯೋಗವಾಗಲಿಲ್ಲ..ಆದರೂ ಲಕ್ಷ್ಮಿಯಿದ್ದಾಳೆ” ಎಂದರೆ ಅದು ಖಂಡಿತವಾಗಿಯೂ ಲಕ್ಷ್ಮಿಯಲ್ಲ..! ಲಕ್ಷ್ಮಿಯ ರೂಪದಲ್ಲಿ ನಮ್ಮೊಡನಿದ್ದು ನಮ್ಮ ಪತನಕ್ಕೆ ಹೊಂಚು ಹಾಕುತ್ತಿರುವ ಅಲಕ್ಷ್ಮಿಯದು..ನಮ್ಮ ಪೂರ್ವಪಾಪದ ಕನಕಮೃಗ ರೂಪವದು..!!
ಲಕ್ಷ್ಮಿಯ ಲಾಸ್ಯದಲ್ಲಿ ಪದವಿನ್ಯಾಸವೆರಡು ಬಗೆ..
ಸಂಗ್ರಹವೊಂದು ಪದವಾದರೆ ಸದ್ವಿನಿಯೋಗವಿನ್ನೊಂದು ಪದ..
ಸಂಗ್ರಹವು ಲಕ್ಷ್ಮಿಯ ಪದವಾದರೆ ಸದ್ವಿನಿಯೋಗವು ನಾರಾಯಣಪದ..
ವ್ಯಕ್ತಿಯು ದುಡಿದು ಸಂಪಾದಿಸಬೇಕು..ಅದು ಲಕ್ಷ್ಮಿಯ ಲಾಸ್ಯ..!
ವ್ಯಕ್ತಿಯು ದುಡಿದದ್ದನ್ನು ಕುಟುಂಬಕ್ಕೆ ಸಮರ್ಪಿಸಬೇಕು..ಅದು ನಾರಾಯಣನರ್ತನ…!!
ವ್ಯಕ್ತಿಗಳ ದುಡಿಮೆಯಿಂದ ಕುಟುಂಬವು ಸಮೃದ್ಧವಾದರೆ ಅದು ಲಕ್ಷ್ಮಿಯ ಲಾಸ್ಯ..
ಕುಟುಂಬವು ತನ್ನ ಸಮೃದ್ಧಿಯಲ್ಲಿ ಒಂದು ಪಾಲನ್ನು ನಾಡಿಗೆ ನೀಡಿದರೆ ಅದು ನಾರಾಯಣ ನರ್ತನ..
ವ್ಯಕ್ತಿಯ ದುಡಿಮೆಯಲ್ಲಿ ಶಿಶುವಾಗಿ ಜನ್ಮತಾಳುವ ಲಕ್ಷ್ಮಿಯು ಕುಮಾರಿಯಾಗಿ ಕುಟುಂಬದಲ್ಲಿ ಬೆಳೆಯುತ್ತಾಳೆ..ಪ್ರೌಢೆಯಾಗಿ ನಾಡನ್ನೇ ವ್ಯಾಪಿಸುತ್ತಾಳೆ..
“ನಾನು” ಎಂಬಲ್ಲಿ ಜನಿಸಿ, “ನಾವು” ಎಂಬಲ್ಲಿ ಬೆಳೆದು, “ನಾಡು” ಎಂಬಲ್ಲಿ ವಿಶ್ವರೂಪಿಣಿಯಾಗಿ ವ್ಯಾಪಿಸಬೇಕು ಆಕೆ..ಅದು ಅರ್ಥನೀತಿ..ಇದಕ್ಕೆ ಕರವೆಂದು ಹೆಸರು..
ದುಡಿಯುವ, ನೀಡುವ ಕೋಟಿ ಕರಗಳು ಸೇರಿ ಒಂದು ರಾಜ್ಯವನ್ನು ನಡೆಸುವುದನ್ನಲ್ಲವೇ “ಕರ” ವೆಂದು ಕರೆಯುವುದು..?
ಲಕ್ಷ್ಮಿಯ ಲೋಕಮಂಗಲಕರವಾದ “ಕರ”ವದು..
ಈ ಹರಿವಿನಲ್ಲಿ ಎಲ್ಲಿಯೂ ತಡೆಯಿಲ್ಲದಂತೆ, ಲಕ್ಷ್ಮಿಯು ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವಾಗ ಎಲ್ಲಿಯೂ, ಯಾರಿಗೂ ನೋವಾಗದಂತೆ ನೋಡಿಕೊಳ್ಳಬೇಕಾದದ್ದು ’ರಾಜ್ಯಭಾರಧಾರಿ’ಗಳ ಕರ್ತವ್ಯ..
ಅಯೋಧ್ಯೆಯ ಅಮಾತ್ಯರ ಅರ್ಥನೀತಿ ಈ ಬಗೆಯದು..ಅಮಾತ್ಯರು ಅಯೋಧ್ಯೆಯ ಕೋಶದಲ್ಲಿ “ಧನ”ವೆಂಬ ಲಕ್ಷ್ಮಿಯು ಸದಾ ತುಂಬಿ ಹರಿಯುತ್ತಿರುವಂತೆ ನೋಡಿಕೊಂಡರು..ಆದರೆ ಅದು ಪ್ರಜೆಗಳ ಮನೆ-ಮನಗಳಲ್ಲಿ “ಆನಂದ” ವೆಂಬ ನಾರಾಯಣನನ್ನು ಬರಿದು ಮಾಡಿಯಲ್ಲ..!!
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||
ಅದೂ (ಪರಮಾತ್ಮನು) ಪೂರ್ಣ, ಇದೂ (ಜಗತ್ತು) ಪೂರ್ಣ, ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಹೊಮ್ಮಿತು..ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಬಂದ ಮೇಲೆಯೂ ಪೂರ್ಣವು (ಪರಮಾತ್ಮನು) ಪೂರ್ಣವಾಗಿಯೇ ಉಳಿಯಿತು…!! ಇದು ಪರಮಾರ್ಥನೀತಿ..
ಅದು (ಅಯೋಧ್ಯೆಯ ಪ್ರಜೆಗಳು) ಪೂರ್ಣ, ಇದು(ಅಯೋಧ್ಯೆಯ ಕೋಶವೂ)ಪೂರ್ಣ, ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಕೋಶವು) ಹೊರಹೊಮ್ಮಿತು..ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಸಮೃದ್ಧವಾದ ಕೋಶವು) ಹೊರಹೊಮ್ಮಿದ ಮೇಲೆಯೂ ಪೂರ್ಣವು(ಪ್ರಜಾವರ್ಗ) ಪೂರ್ಣವಾಗಿಯೇ ಉಳಿಯಿತು…!! ಇದು ಅರ್ಥನೀತಿ..!
“ಬ್ರಹ್ಮಕ್ಷತ್ರಮಹಿಂಸಂತಃ ತೇ ಕೋಶಂ ಸಮಪೂರಯನ್”
( ಕರಭಾರವನ್ನು ಹೇರಿ ಬ್ರಹ್ಮ-ಕ್ಷತ್ರಗಳನ್ನು ಪೀಡಿಸದೆಯೇ ಅವರು ಕೋಶವನ್ನು ತುಂಬಿದರು..)
ಮೇಲ್ನೋಟಕ್ಕೆ ಇದು ತಾರತಮ್ಯವೆಂದೆನಿಸುತ್ತದೆಯಲ್ಲವೇ..? ..
ಮಾನವಶರೀರದ ಅಂಗವಾದ ಕರದಲ್ಲಿ ತಾರತಮ್ಯವಿರುವುದೇನೋ ಸರಿ..
ರಾಜ್ಯಾಡಳಿತದ ಅಂಗವಾದ ಕರದಲ್ಲಿಯೂ ತಾರತಮ್ಯ ಮಾಡುವುದೇ..?
ಹೌದು,
ತಾರತಮ್ಯವೇ ಹೌದು..
ಆದರೆ ನಾವೆಂದುಕೊಂಡಂತೆ ಅಲ್ಲ..
ಮತ್ತುಳಿದವರು ತಮ್ಮ ಬದುಕಿನ ಒಂದಂಶವನ್ನು ನಾಡಿಗೆ ನೀಡಿದರೆ ಬ್ರಹ್ಮ-ಕ್ಷತ್ರವರ್ಗಗಳು ಸಂಪೂರ್ಣವಾಗಿ ತಮ್ಮ ಬದುಕನ್ನೇ ಸಮರ್ಪಿಸುತ್ತಿದ್ದವು….
ಸಮಾಜಕ್ಕಾಗಿಯೇ ಬದುಕುವ ವರ್ಗವೊಂದು- ಅದು ಬ್ರಹ್ಮವರ್ಗ..
ಸಮಾಜಕ್ಕಾಗಿಯೇ ಸಾವನ್ನಪ್ಪುವ ವರ್ಗವಿನ್ನೊಂದು- ಅದು ಕ್ಷತ್ರವರ್ಗ..
ಸಮಾಜದ ಅಂತರಂಗವನ್ನು ಅರಿವು-ಆನಂದಗಳಿಂದ ತುಂಬುವುದು ಬ್ರಹ್ಮವರ್ಗ..
ಬಹಿರಂಗದಲ್ಲಿ ಬಂದೆರಗುವ ಆಪತ್ತುಗಳಿಂದ ಸಮಾಜವನ್ನು ರಕ್ಷಿಸುವುದು ಕ್ಷತ್ರವರ್ಗ..
ಆನೆ ಕೊಟ್ಟವರಿಂದ ಅಡಕೆ ಕೇಳುವುದೇ..?
ಹಸುವನ್ನೇ ಸಮರ್ಪಿಸಿದವನಲ್ಲಿ ಹಗ್ಗಕ್ಕಾಗಿ ಗುದ್ದಾಡುವುದೆಂತು..?
ಆದುದರಿಂದಲೇ ಅಯೋಧ್ಯೆಯಲ್ಲಿ, ಸಮಾಜಕ್ಕೆ ಸರ್ವಾಪ೯ಣೆ ಮಾಡಿಕೊಂಡ ಈ ಎರಡು ವರ್ಗಗಳ ಮೇಲೆ ಬಹುವಾದ “ಕರಭಾರ”ವಿರಲಿಲ್ಲ..!
ವೃದ್ಧಿಯೆಂಬ ಅರ್ಥದಲ್ಲಿರುವ ‘ಬೃಹಿ-ಮಹಿ’ಗಳೆಂಬ ಜೋಡಿಧಾತುಗಳಿಂದ ನಿರ್ಮಿತವಾಗಿದೆ ಬ್ರಹ್ಮಶಬ್ದ..
ಬ್ರಹ್ಮವೆಂದರೆ ವೃದ್ಧಿ..
ಯಾವುದು ‘ಬೃಹತ್’ ಆಗಿ, ‘ಮಹತ್’ ಆಗಿ, ವಿರಾಟ್ ವಿಶ್ವವಾಗಿ ಬೆಳೆದುನಿಂತಿತೋ ಆ ಪರಮಾತ್ಮನಿಗೇ ಬ್ರಹ್ಮವೆಂದು ಹೆಸರು..
ಯಾರು ಅರಿವು-ಆನಂದಗಳ ರಾಶಿಯೇ ಆದ ಆ “ಬ್ರಹ್ಮ”ವನ್ನು ತಾವು ತಮ್ಮೊಳಗೇ ಕಂಡುಕೊಂಡು, ಸರ್ವಸಮಾಜಕ್ಕೆ ಪಸರಿಸಲು ತಮ್ಮ ಆಯುಸ್ಸಿನ ಸರ್ವಸ್ವವನ್ನೂ ಧಾರೆಯೆರೆದರೋ ಆ ಬಗೆಯ ಜನರಿಗೆ ’ಬ್ರಹ್ಮವರ್ಗ’ವೆಂದೇ ಹೆಸರು ಬಂದಿತು..!
ಅವರು ತಮ್ಮ ಬಹುಮೂಲ್ಯವಾದ ಆಯುಸ್ಸನ್ನೇ-ತಪಸ್ಸನ್ನೇ ಕರವಾಗಿ ನಾಡಿಗೆ ನೀಡುತ್ತಿದ್ದರು..
ಅವರ ಬದುಕೇ ನಾಡಿಗೆ ನೀಡಿದ ಕರ.. ಮಂಗಲಕರ..!
ಕ್ಷತವೆಂದರೆ ಆಘಾತ..ಸಮಾಜಕ್ಕೊದಗಿ ಬರುವ ಆಘಾತಗಳನ್ನು ಯಾರು ತಾವು ಸ್ವೀಕರಿಸಿ, ಸಮಾಜವನ್ನುಳಿಸುವರೋ ಆ ಬಗೆಯ ಜನರಿಗೆ “ಕ್ಷತ್ರವರ್ಗ’ ವೆಂದೇ ಹೆಸರು ಬಂದಿತು..
ಇವರು ತಮ್ಮ ಅಮೂಲ್ಯವಾದ ಜೀವವನ್ನೇ ಕರವಾಗಿ ತೆರುವವರು..!
ಸಾವು-ನೋವುಗಳನ್ನು ತಾವುಂಡು ಸಮಾಜವನ್ನು ನಲಿವಿನಲ್ಲಿಡುವ ಅಭಿನವವಿಷಕಂಠರು..!
ಸಮಾಜಪುರುಷನಿಗೆ ಕವಚವಿದ್ದಂತೆ..
ಸಮಾಜವೆಂಬ ತೋಟಕ್ಕೆ ಬೇಲಿಯಿದ್ದಂತೆ..
ಸಮಾಜವೆಂಬ ನೇತ್ರಕ್ಕೆ ರೆಪ್ಪೆಯಿದ್ದಂತೆ..
ಹುಟ್ಟಿದ ಪ್ರತಿಯೊಂದು ಜೀವವೂ ಬಯಸುವುದಾದರೂ ಏನನ್ನು..?
ಒಳಿತಾಗಬೇಕು..
ಕೆಡುಕಾಗಬಾರದು..
ಸಮಾಜಕ್ಕೆ ಒಳಿತಾಗುವಂತೆ ಮಾಡುವುದು ಬ್ರಹ್ಮವರ್ಗದ ಕರ್ತವ್ಯ..
ಕೆಡುಕಾಗದಂತೆ ನೋಡಿಕೊಳ್ಳುವುದು ಕ್ಷತ್ರದ ಕರ್ತವ್ಯ..
ಅಲಭ್ಯವಾದುದರ ಲಾಭವು ’ಯೋಗ’
ಅದು ಬ್ರಹ್ಮವರ್ಗದ ಹೊಣೆ..
ಲಬ್ಧವಾದುದರ ರಕ್ಷಣೆಯು ‘ಕ್ಷೇಮ’
ಅದು ಕ್ಷತ್ರವರ್ಗದ ಹೊಣೆ..
ಸಮಾಜದ “ಯೋಗಕ್ಷೇಮ”ದ ಹೊಣೆ ಹೊತ್ತ ಈ ವರ್ಗಗಳಿಂದ ಧನದ ರೂಪದಲ್ಲಿ ಕರದ ನಿರೀಕ್ಷೆಯಿರಲಿಲ್ಲ..
ಸಮಾಜವನ್ನು ಬೆಳೆಸುವುದೇ ‘ಬ್ರಹ್ಮವರ್ಗ’ಕ್ಕೆ ಕರವಾಗಿತ್ತು..
ಸಮಾಜವನ್ನು ಉಳಿಸುವುದೇ ’ಕ್ಷತ್ರವರ್ಗ”ಕ್ಕೆ ಕರವಾಗಿತ್ತು..
ಹೀಗೆ ಬ್ರಹ್ಮವರ್ಗವು ಆತ್ಮವನ್ನಿತ್ತು, ಕ್ಷತ್ರವರ್ಗವು ಜೀವವನ್ನೇ ತೆತ್ತು, ಮತ್ತುಳಿದ ಪ್ರಜೆಗಳು ಕರಗಳನ್ನೊಪ್ಪಿಸಿ ಅಯೋಧ್ಯೆಯ ಕೋಶ ತುಂಬಿತು..ಶೋಕ ತೊಲಗಿತು..!!
December 30, 2010 at 8:34 AM
“ಏಕಃ ಸ್ವಾದು ನ ಭು೦ಜೀತ..!”
Hareraama.in site should reach to others. Otherwise we don’t have right to read the blogs of Hareraama.in site I feel.
.
Hareraama,
After reading the first paragraph of this article, I am writing this..
“ಏಕಃ ಸ್ವಾದು ನ ಭು೦ಜೀತ..!”
http://hareraama.in/blog/%e0%b2%8f%e0%b2%95%e0%b2%83-%e0%b2%b8%e0%b3%8d%e0%b2%b5%e0%b2%be%e0%b2%a6%e0%b3%81-%e0%b2%a8-%e0%b2%ad%e0%b3%81%e0%b2%82%e0%b2%9c%e0%b2%bf%e0%b2%a4/
.
Hareraama.in site should reach to others.
Simple way is to print the top Raama and Rajya blogs with information about hareraama website and distribute to people. Let the prints also include information about Indian breed cows and products. These prints can be distributed to places where spiritual, religious and other relevant gatherings happens. Also, it can be places like Temples, own shops, own Hotels, own Offices, own factories, nearby houses, own houses, friends, relatives, others.
.
Hareraama.in printed T shirts, stickers on body and gaadi..
.
Put up hoardings in all important internal/external meetings, and relevant public gatherings. Put up advertisements in newspapers, weekly magazines, relevant other internal/external publications.
.
“ಏಕಃ ಸ್ವಾದು ನ ಭು೦ಜೀತ..!”
.
Shri Gurubhyo Namaha
December 30, 2010 at 8:48 AM
There is a reason for me to stress on this (keep stressing on this). These kind of writings, pravachana, information sharing is unique and there is a great need for world to know and get familiar. In the era of Television and internet – where people are spending maximum of their time, it is very important to make people aware about this website. I know that people may NOT dive into Hareraam.in website and become active member on the moment they come to know about the site, but, if they have seen the website, and if any specific blog / pravachana struck their mind – it is enough – in a long way it helps the world, nature.
.
Shri Gurubhyo Namaha
December 30, 2010 at 11:57 PM
By putting on T- Shirt, body, gaadi- airport…. I hope your are not comparing Samthana with ART Of…. money making! Let the interested come to Samthana
December 31, 2010 at 1:07 AM
Uncomparable.
Unbeatable.
Samsthana is uncomparable and unbeatable – I can bet on this.
Let us not get into any comparison for that matter..
.
In short only intent is to spread the happiness.
Only concern is Hareraama.in site is not reaching many other interested folks, people are not aware, this is what I think by observing the registered members. There are lots of interested people and groups who can really get benefitted and can see enlightenment in life.
.
Let us not miscalculate, underestimate the spiritual strength that our mother soil has.. It is just that some ignite is required, and I strongly believe Hareraama.in blogs and pravachana has that power. ಶಿವನನ್ನು ಶಿವನಾಗಿ ಕೂಡುವ, ವಿಷ್ಣುವನ್ನು ವಿಷ್ಣುವಾಗಿ ಅಪ್ಪುವ, ದುರ್ಗೆಯ ಮಾಯೆಯನ್ನೆಲ್ಲ ಕಣ್ಣುಗಳಲ್ಲಿ ಹುದುಗಿಸಿಕೊ೦ಡು ಪುರುಷಸಿ೦ಹನ೦ತೆ ವಿಜೃ೦ಬಿಸುವ೦ತವರು ತಯಾರಾಗಲಿ ರಾಮನ ಆಶೀರ್ವಾದದಿ೦ದ..
.
ಆದಿ ಗುರು ಶ೦ಕರಾಚಾರ್ಯ ವಿಶ್ವರೂಪಿಯಾಗಿ ವಿಶ್ವಗುರುವಾಗಿ ಗೋಚರಿಸುತ್ತಿರುವಾಗ, ಹೊಸದೊ೦ದು ಲೋಕವನ್ನೆ (ಸರಿಯಾದ ಮತ್ತು ನಿಜವಾದ ಲೋಕ) ಸ೦ಸ್ಥಾನ ಪರಿಚಯಿಸುತ್ತಿರುವಾಗ ಸಮಸ್ತ ವಿಶ್ವವನ್ನೆ ಕೈಬೀಸಿ ಕರಿಯುವ (ಕೈ ಎಳೆದು ಕರೆತರುವ ಅಗತ್ಯ ಇಲ್ಲ)..
ಅನ್ನಪೂರ್ಣೆ ಜ್ಞಾನವನ್ನು ಹಸಿದವರಿಗೆಲ್ಲ ಹ೦ಚುತ್ತಿರುವಾಗ ಇಡೀ ವಿಶ್ವವನ್ನೆ ಕೈಬೀಸಿ ಕರೆಯುವ ಶಿವನನ್ನು ಸೇರಿಸಿ..
.
ಶ್ರೀ ಗುರುಭ್ಯೋ ನಮಃ
January 1, 2011 at 4:22 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ರಾಘವೆಂದ್ರಣ್ಣ,
ಇನ್ನು ತಡ ಮಾಡಬಾರದು. ಜಗನ್ಮಾತೆಯ ಸೇವೆಗೆ ಇಂದೇ ತೊಡಗಬೇಕು. ಗೂಗಲ್ ನಲ್ಲಿ ಸರ್ಚ್ ಮಾಡುವಾಗ ( ಸಾಮಾನ್ಯ ಪದಗಳಾದ “ಆನಂದ”, “ನೆಮ್ಮದಿ”, “ಶಾಂತಿ”, “ಅದ್ವೈತ”, “ರಾಮ”, “ಶಂಕರಾಚಾರ್ಯ”, “ರಾಘವೇಶ್ವರ ಭಾರತಿ”, “ಆರ್ಟ್ ಆಫ್ ಲಿವಿಂಗ್”, “ಧ್ಯಾನ”, ಪ್ರವಚನ ……. ಇನ್ನು ಹಲವು ಪದಗಳನ್ನು ಸೇರಿಸಬಹುದು. ) ಹರೇರಾಮ.ಇನ್ ಬರುವಂತೆ ಮಾಡಬಹುದೇ.
January 3, 2011 at 8:44 PM
ಹರೇರಾಮ,
ಖ೦ಡಿತ, ಸಲಹೆಗಳನ್ನು ಸ೦ಗ್ರಹಿಸುವ, ಕೆಲಸಕ್ಕೆ ತೊಡುಗುವ..
.
ಶ್ರೀ ಗುರುಭ್ಯೋ ನಮಃ
January 2, 2011 at 7:14 PM
Hare Raama,
Raghavendra Narayanarige nanna namaskaragalu.
Gurugala, Raama blog nalli baruva ellavannu “Dharma Bharati” yemba namma mattad maasa patrikeyalli print aagi mane-mana vannu talpta iddu. Halligalalli, ee maasa patrikeya mulaka ellaru gurugalu bareyuva ‘Raamayan’ vannu odutta idda.
January 3, 2011 at 8:50 PM
Yes, I have seen this in Dharmabharathi monthly magazine.
I think it would be good to provide one page update about monthly updates of Hareraama.in site in Dharmabharathi.. Content can be one liner about each blog from Gurugalu/Shishyaru/Bhandugalu, Pravachanas, Srimukha, Sammukha, others.
.
Shri Gurubhyo Namaha
January 3, 2011 at 10:24 PM
Modalu, nanna namaskaragalu.
Hareraama.
January 3, 2011 at 11:26 PM
Hare Raama,
neevu doddavru, aashirvaada maadi.
I think, it would be better if we try to promote hareraama.in website itself in more broader way.
December 30, 2010 at 8:53 AM
Why there is no section for “Cows” / “Indian Breed Cows” in hareraama.in site?
I understand that hareraama.in site is official website of Guruji, but, cows are not irrelevant, cows are very much part of Guruji I believe.
.
We need to have section about “Cows” in hareraama.in site, otherwise the site is incomplete I declare.
.
Shri Gurubhyo Namaha
December 30, 2010 at 7:10 PM
HARE RAAMA …
It is must…
Shri Gurubhyo Namaha
December 31, 2010 at 11:42 PM
ಹರೇ ರಾಮ !
ಬಹಳ ಸ್ವಾಗತಾರ್ಹ ಚಿಂತನೆ.
ಪ್ರಚಾರ ಯೋಗ್ಯವೂ ಅತ್ಯಗತ್ಯವೂ ಇರುವ ಸಾತ್ವಿಕ ಸಾಹಿತ್ಯ ರಾಶಿ ಕರಗಿ ಹೊಳೆ ಹೊಳೆಯಾಗಿ ಹರಿಯುತ್ತಿದೆ ಇಲ್ಲಿ
ಅರಣ್ಯ ರೋದನದ ತೊರೆಯಾಗದೆ ಅದಾಗಲಿ ನಾಡಿನ ಜನರ ಪಾಪವ ತೊಳೆವ ಪುಣ್ಯ ಗಂಗೆ…
ಸಂಸ್ಥಾನದ ಅನುಗ್ರಹ…ಒಂದಷ್ಟು ಜನರಾದರೂ ಈ ಚಿಂತನೆ ಅನುಸರಿಸಿದರೆ “ಇ” ಶ್ರಮ ಸಾರ್ಥಕ.
December 30, 2010 at 10:12 AM
ಹರೇರಾಮ್,
ಅರ್ಥಪೂರ್ಣವಾದ ಆರ್ಥದಿ೦ದ
ಜೀವನವಾಗುವುದು ಸಾರ್ಥಕಾನ೦ದ
ಗುರುವಿನಿ೦ದ ಸಿಗುವನು ಗೋವಿ೦ದ
ಅದಿರುವುದೇ ಗೋ ವಿ೦ದ
ಇಲ್ಲವಾದರೆ go ಎ೦ದ
ಗುರುಬ್ಯೋನಮಃ
December 30, 2010 at 2:12 PM
ಇಂದೂ ಅಂದಿನಂತೇ ಆದರೆ???
December 30, 2010 at 6:57 PM
ರಾಮರಾಜ್ಯದ ಆರ್ಥಿಕ ನೀತಿ ಈಗ ಅಳವಡಿಸಲು ಯಾರಿದ್ದಾರೆ! ಕರವನ್ನೇ ಆಹಾರ ಮಾಡಿಕೊಂಡ ಬ್ರಷ್ಟ ರಾಜ್ಯಪಾಲಕರ ನಡುವೆ ಆ ಅರ್ಥಿಕ ನೀತಿ ಎಂದು ಬರುವುದೋ? ವರ್ಗೀಯ ಕಲಹವನ್ನೆ ಕಾಯುತ್ತಿರುವವರ ಮುಂದೆ ಬ್ರಹ್ಮ/ಕ್ಷತ್ರ ವರ್ಗದವರನ್ನು ಕಾಣುವುದೆಂತು.
ಇನ್ನಾದರು ಇಂತಹ ಅರ್ಥಿಕನೀತಿಯನ್ನು ಅರ್ಥಶಾಸ್ತ್ರಜ್ಞರು ಅಳವಡಿಸಿ ಉಪಯೋಗಿಸಿದರೆ ಅರ್ಥಿಕತೆಯಲ್ಲಿ ಸಾರ್ಥಕತೆ ಆಗಬಹುದೇನೋ..
December 30, 2010 at 10:30 PM
ಹರೆರಾಮ-ಆರ್ಥಿಕತೆ ಮತ್ತು ಸಾರ್ಥಕತೆ ಯಲ್ಲಿ ಬ್ರಹ್ಮವರ್ಗ ಮತ್ತು ಕ್ಷ್ತತ್ರವರ್ಗ ಹೆಗೆ?.ಇದರಲ್ಲಿ ಯಾರು ಬ್ರಹ್ಮವರ್ಗ ಯಾರು ಕ್ಷತ್ರವರ್ಗ.
December 30, 2010 at 10:56 PM
ಹರೇ ರಾಮ್, ಕುಟು೦ಬದಲ್ಲಿ, ಸಮಾಜದಲ್ಲಿ ಎಲ್ಲರೂ “ಬ್ರಹ್ಮ ಕ್ಹತ್ರ ವರ್ಗ ದವರಾದರೆ ಆ ಅಯೋಧ್ಯೆ ಆ ರಾಮ ರಾಜ್ಯ ಸಾಕಾರವಾಗದೇ!
ಶ್ರೀ ಗುರುಭ್ಯೋ ನಮಃ
December 31, 2010 at 11:14 AM
ಈಗ ಹೀಗಾಗಲು ಸಾದ್ಯವೆ ಸಂಸ್ಥಾನ?
ವಾಲ್ಮೀಕಿ ಎಷ್ಟು ಮಹಾನ್ ಎಂದು ಪ್ರತೀ ಬಾರಿಯೂ ಅನ್ನಿಸುತ್ತದೆ. ಇಂಥಾ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು.
December 31, 2010 at 11:27 PM
ಹರೇ ರಾಮ !
ಅಬ್ಬಬ್ಬಾ ! ಎಂತಹ ಕರ ವ್ಯವಸ್ಥೆ !! ಅದೆಷ್ಟು ಸೊಗಸಾದ ಅರ್ಥಪೂರ್ಣ “ಅರ್ಥ”ಸಂಗ್ರಹ ವಿಧಾನ ,
ಇಂದಿನ ಕೊಳಕು ವಸೂಲಿ… ಅಲ್ಲ…ಸುಲಿಗೆಗಿಂತ ಅದೆಷ್ಟು ವಿಭಿನ್ನವಾದ ಚಿಂತನೆ ?
ಬಿಡಿ… ಅಂತಹ ಸಂಸ್ಕಾರ ವಿದ್ದ ಸಮಾಜದ ಅತ್ಯುನ್ನತ ಸಂಸ್ಕಾರವಂಥ ರಾಜರಿಗೆ ಅದು ಭೂಷಣ ಮತ್ತು ಸಾಧ್ಯ.
ಅಂದಿಗೆ ಅದು ಸುಖ….ಇಂದಿಗೆ ಇದು ಸುಖ..???
ಸಂಸ್ಥಾನದ ಅನುಗ್ರಹ…ಒಂದಷ್ಟು ಜನರಾದರೂ ಈ ಚಿಂತನೆ ಅನುಸರಿಸಿದರೆ ಶ್ರಮ ಸಾರ್ಥಕ.
January 1, 2011 at 7:42 AM
ಎಲ್ಲಿ ಪ್ರಾಮಾಣಿಕ ದುಡಿಮೆಯಿರುತ್ತದೋ, ಅಲ್ಲಿ ಲಕ್ಷ್ಮಿ ಬರಲೇಬೇಕಲ್ಲವೇ ಗುರುವೇ..?
ಯಾರಿಗೆ ದುಡಿಮೆಯ ಬೆಲೆ ಗೊತ್ತಿರುತ್ತದೋ, ಅವರು ನಾರಾಯಣನ ಲೀಲೆಯನ್ನೂ ಬಲ್ಲರು ಅಲ್ಲವೇ..?
ಮನೆಗೆ ಬಂದ ಮಗಳನ್ನು ಅಪ್ಪ-ಅಮ್ಮ ತವರಿನಲ್ಲಿಯೇ ಇಟ್ಟುಕೊಳ್ಳುವುದಿಲ್ಲ, ಬದಲಿಗೆ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ..!
ಇಲ್ಲದಿದ್ದರೆ ಅಳಿಯ ಬರುತ್ತಾನೆ ಕರೆದೊಯ್ಯಲು…!
ಲಕ್ಶ್ಮಿ ಬರುವಾಗ ಸುಮ್ಮನೆ ಬರಳು..ನಮ್ಮ ಮನಸನ್ನು ಮೋಹಿಸುತ್ತಾ ಬರುತ್ತಾಳೆ..ಮಾಯೆಯ ಬಲೆಯನ್ನು ಹೆಣೆಯುತ್ತಾ ಬರುತ್ತಾಳೆ..!
ನನಗನ್ನಿಸುವುದು, ಯಾರಿಗೆ ಆ ತಾಯಿಯ ಬಗ್ಗೆ ಗೌರವವಿರುತ್ತದೋ ಅವರು ನಾರಾಯಣನನ್ನೂ ನಿರೀಕ್ಷಿಸುತ್ತಾರೆ ತಮ್ಮ ಮನೆಗೆ..!
ಅಪ್ಪ-ಅಮ್ಮ ಇಬ್ಬರೂ ನಮ್ಮ ಮನೆಯಲ್ಲೇ ಇರಲಿ ಎಂಬ ಭಾವ ಯಾವಾಗ ಮೂಡುತ್ತದೋ, ದುಡಿದು ಗಳಿಸಿದ ಸಂಪತ್ತು ಸದ್ವಿನಿಯೋಗವಾಗುತ್ತದೆ… ಆ ಮನೆಯೆಂದೂ ಬರಿದಾಗದು..!
ಈ ಮನೋಭಾವ ನಮ್ಮಲ್ಲಿ ಉದಯಿಸಲು ಸಾಧ್ಯವೇ…?
ಸಾಧ್ಯವಾದಲ್ಲಿ….
ಅದುವೇ ರಾಮರಾಜ್ಯ..!
January 2, 2011 at 12:06 AM
“ಶ್ರೀ ಗುರುಭ್ಯೋ ನಮಃ”
ಆಹಾ! ಏನಿದೇನಿದು ಮೋಡಿ?
ಶಬ್ಧ-ಅರ್ಥ-ಪರಮಾರ್ಥಗಳ ಚಿಂತನಾ ಪರಿ!…..
ಆಧುನಿಕ ’ಅರ್ಥಶಾಸ್ತ್ರಿ’ಗಳಿಗೂ, ’ಪಂಡಿತ-ಕವಿ’ಗಳಿಗೂ ಪಾಠವೇ?…..
“ಹರೇ ರಾಮ”
January 5, 2011 at 12:10 AM
ಸಮಾಜದ ಯೋಗ ಕ್ಷೇಮ ನೋಡುವ ವ್ಯವಸ್ಥೆ ಯ ಕೊರತೆ ಇಂದಿನ ದೋಷವೆಂಬುದು ಈಗ ಅರ್ಥವಾಗುತ್ತಿದೆ.
ಯಾಗ ಯಜ್ನಾದಿಗಳನ್ನು ನಡೆಸುತ್ತಾ ಲೋಕಕಲ್ಯಾಣ ಕಾಯುವ ಋಷಿ ಪುಂಗವರ ಹಿಂಡೆಲ್ಲಿ ?
ಕೇವಲ ಅರ್ಥ ಪ್ರಾಶತ್ತ್ಯದ ಪ್ರಾಬಲ್ಯಪಡೆದಿರುವ ಇಂದಿನ ಸಮಾಜ ಹೀಗಾಗದೆ ಮತ್ತೇನಾನಗುವದಕ್ಕೆ ಸಾಧ್ಯ?
ವರ್ತಮಾನ ಕಾಲದಲ್ಲಿ ವ್ವಿದ್ಯಾಭ್ಯಾಸ, ಉದ್ಯೋಗ,ರಾಜನೀತಿ…ಪ್ರತಿಯೊಂದರ ಹಿಂದೆ ಅಧಿಪತ್ಯ ಸಾಧಿಸಿರುವ ಅರ್ಥವು
ಸಮಾಜದವರನ್ನು ಅನರ್ಥದ ಕಡೆಗೆ ಎಳೆಯುವುದು ಸಹಜವೇನೋ…
January 19, 2011 at 9:11 AM
ಎ೦ದಿನ೦ತೆ ಅದ್ಭುತ, ರಾಮಾಯಣ, ವಾಲ್ಮಿಕಿ, ಗುರುಗಳು, ಎಲ್ಲವೂ ಅದ್ಭುತ.
ಬ್ರಹ್ಮ-ಕ್ಷತ್ರ ಸೂತ್ರ, ಅದ್ಭುತ, ನಿಜ, ಭಾರತ ವಿಶ್ವ ಗುರು..
.
ಅದು ಯಾವಾಗ ಈ ಪ್ರಜ್ವಲಿಸುವ ಜ್ಞಾನಾಗ್ನಿ ಕಪ್ಪು ಕಟ್ಟಿದ ದೀಪದ ಬತ್ತಿಯ೦ತಾಯಿತೊ.. ಸಿ೦ಹಗಳ೦ತೆ ಘರ್ಜಿಸುತ್ತಿದ್ದವರು, ಅದು ಯಾವಾಗ ನರಿಗಳ೦ತೆ ಓಡಾಡಲು ಶುರು ಮಾಡಿದೆವೊ..
ಆತ್ಮಕ್ಕೆ ಆತ್ಮ ಬೆಸೆಯುತ್ತಿದ್ದವರು ಅದು ಯಾವಾಗ ಬೇಸತ್ತು ಹೋದೆವೊ..
ಎದೆಗೆ ಎದೆ ನೀಡುತ್ತಿದ್ದವರು ಅದು ಯಾವಾಗ ಗು೦ಡಿಗೆಯ ಬಿಸಿ ಆರಿತೊ..
.
ಲಕ್ಷಿನಾರಾಯಣ ನಿಮ್ಮ ಆಶೀರ್ವಾದ ಬೇಡುತಿರುವೆವು, ಮತ್ತೆ ದರ್ಶನ ಮಾಡಿಸಿ ಸಮೃದ್ಧ ಭಾರತವ, ಬಿತ್ತಿ ನಮ್ಮ ಎದೆಯೊಳಗೆಲ್ಲ ಬೀಜವ, ಕಾಲ ಕಾಲಕ್ಕೆ ಚಿಮುಕಿಸುತ್ತಿರಿ ಜಲವ, ಪ್ರತಿ ಎದೆಯು ಬದರಿನಾರಾಯಣ ವೃಕ್ಷವಾಗಲಿ,
ಸ್ಥಾಣುವೆ ಬ೦ದು ಧ್ಯಾನಿಸುವ೦ತಾಗಲಿ.
.
ಶ್ರೀ ಗುರುಭ್ಯೋ ನಮಃ
September 2, 2012 at 5:22 PM
|| ಹರೇ ರಾಮ ||
ಈ ಲೇಖನ ಲೇಖನವಲ್ಲ – ಆಧುನಿಕ ಜಗತ್ತು ಅನುಸರಿಸಲೇ ಬೇಕಾದ ಅರ್ಥ ಶಾಸ್ತ್ರ!!
Chartered Accountant ಆಗಿರುವ ನನಗೆ ಈ ಲೇಖನ ರೋಮಂಚನಗೊಳಿಸಿತು! ಈ ಜಗತ್ತಿನಲ್ಲೇ ಅತೀ ಪುರಾತನವಾದ ಶ್ರೀಮದ್ ರಾಮಾಯಣ ಗ್ರಂಥವು ನಮ್ಮ ಮನೆ ನಾಡು ರಾಷ್ಟ್ರ ಅನುಸರಿಸುತ್ತಿದ್ದ ಅತ್ಯಾದುನಿಕ ಪಾರಮಾರ್ಥಿಕ ಅರ್ಥ ಶಾಸ್ತ್ರ!!!
ಇದನ್ನು ತಿಳಿಸಿಕೊಟ್ಟ ಶ್ರೀ ಗುರುಗಳ ಪದ ಕಮಲಗಳಿಗೆ ಕರ ಜೋಡಿಸುವೆನು!! ಕೋಟಿ ನಮನಗಳು.
|| ಹರೇ ರಾಮ ||
November 2, 2012 at 6:07 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಸಾಮಾನ್ಯರು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಾರ್ಥಕತೆಯನ್ನು ಸಾಧಿಸಿ ತೋರಿಸುವುದು ಲಕ್ಷ್ಮೀ ನಾರಾಯಣನಿಗಲ್ಲದೆ ಮತ್ಯಾರಿಗೆ ಸಾಧ್ಯ?
March 15, 2014 at 6:59 PM
Hare Ram,
Maharaj, Nammannu nimma rajyadholage seriskoli Maharaj.
Sri Ram Jai Ram Jai Jai Ram
Jai Shri Krishna
Radhe Radhe