ಅದೊಂದು ಶಿಲ್ಪ ಶಾಲೆ..!!
ತನ್ನ ಅಮರ ಶಿಲ್ಪಗಳಿಂದ ಲೋಕ ವಿಖ್ಯಾತನಾಗಿದ್ದ ಮಹಾ ಶಿಲ್ಪಿಯೊಬ್ಬ ಅಲ್ಲಿಯ ಗುರುಸ್ಥಾನವನ್ನಲಂಕರಿಸಿದ್ದ..!
ಆತನ ಶಿಷ್ಯರಲ್ಲೊಬ್ಬ ಗುರುವಿಗೆ ಸರಿಮಿಗಿಲೆನಿಸುವ ಕೈಚಳಕ ಹೊಂದಿದ್ದ..
ಕೈಚಳಕವನ್ನೇನೋ ಹೊಂದಿದ್ದ, ಆದರೆ ಅದೆಷ್ಟೇ ಪ್ರಯತ್ನ ಪಟ್ಟರೂ ಗುರುವಿನ ಶಿಲ್ಪಗಳಿಗೆ ಸರಿಮಿಗಿಲೆನಿಸುವ ಶಿಲ್ಪಗಳನ್ನು ರಚಿಸಲು ಆತನಿಂದ ಸಾಧ್ಯವಾಗುತ್ತಿರಲಿಲ್ಲ..!
ಒಮ್ಮೆ ಆತ ತನ್ನ ಜಿಜ್ಞಾಸೆಯನ್ನು ಗುರುವಿನ ಮುಂದಿಟ್ಟ:
“ಅದೆಷ್ಟೋ ಪ್ರಯತ್ನಿಸಿದೆ, ಆದರೆ ತಮ್ಮ ಶಿಲ್ಪಗಳ ಶ್ರೇಣಿಯಲ್ಲಿ ಸಲ್ಲುವಂತಹ ಶಿಲ್ಪಗಳನ್ನು ರಚಿಸಲು ಸಾಧ್ಯವಾಗಲೇ ಇಲ್ಲ..!!!
ತಮ್ಮ ಸಿದ್ಧಿಯ ಮರ್ಮವೇನು ಗುರುಗಳೇ..?!!”
ಕಣ್ತೆರೆಸುವಂತಹ ಉತ್ತರ ಗುರುವಿನ ಕಡೆಯಿಂದ ಬಂದಿತು..!
“ಕೆತ್ತನೆಗಾಗಿ ಶಿಲೆಯನ್ನು ಆಯ್ದುಕೊಂಡ ನಂತರ ನಾನೊಮ್ಮೆ ತದೇಕಚಿತ್ತನಾಗಿ ಏಕಾಗ್ರದೃಷ್ಟಿಯಿಂದ ಅದನ್ನೇ ನೋಡುತ್ತೇನೆ..
ಕೊಂಚಹೊತ್ತಿನಲ್ಲಿಯೇ, ಕೆತ್ತನೆಮಾಡಬೇಕಾಗಿರುವ ಮೂರ್ತಿ ನನಗೆ ಅಲ್ಲಿ ಗೋಚರಿಸ ತೊಡಗುತ್ತದೆ..
ಮುಂದಿನ ಕೆಲಸ ಬಹುಸುಲಭ..!
ಶಿಲೆಯಲ್ಲಿ ಮೂರ್ತಿಯಲ್ಲದ ಭಾಗವನ್ನು ತೆಗದು ಹಾಕಿದರಾಯಿತು..!!”
ಬಂಡೆಯಲ್ಲಿಯೂ ಭಗವಂತನನ್ನು ಕಾಣುವುದು ಶಿಲ್ಪಿಯ ದೃಷ್ಟಿ..!
ಪಾಪಿಯಲ್ಲಿಯೂ ಪರಮಾತ್ಮನನ್ನು ಕಾಣುವುದು ಗುರುದೃಷ್ಟಿ..!!
ಶರೀರದ ಹೊರ ಅವರಣವನ್ನು ಭೇದಿಸಿ ಒಳಹೊಕ್ಕು ಅಲ್ಲಿಯ ಗುಣ ದೋಷಗಳನ್ನು ಗುರುತಿಸುವುದು ಎಕ್ಸ್ ರೇ ದೃಷ್ಟಿ..!!
ಹೊರಗಿನ ಶರೀರವನ್ನೂ ಒಳಗಿನ ಮನಸ್ಸನ್ನೂಭೇದಿಸಿ ಎಕ್ಸ್ ರೇ ಗಿಂತಾ ಆಳಕ್ಕಿಳಿದು ಆತ್ಮದ ದಿವ್ಯತೆಯನ್ನು ಹುಡುಕುವುದು ಗುರು ದೃಷ್ಟಿ..!!
ದಿವ್ಯತೆ ಮಾತ್ರವೇ ತೋರಿದರೆ ತಿದ್ದುವ ಮಾತೇ ಇಲ್ಲ..!!
ದೋಷಗಳು ಮಾತ್ರವೇ ತೋರಿದರೆ ತಿದ್ದುವುದಾದರೂ ಎಲ್ಲಿಂದ..!?
ಒಂದು ಕಣ್ಣಿನಿಂದ ವ್ಯಕ್ತಿತ್ವದ ಆಳದಲ್ಲಿ ಹುದುಗಿರುವ ದಿವ್ಯತೆಯನ್ನು ಕಾಣಬೇಕು..!
ಇನ್ನೊಂದು ಕಣ್ಣಿನಿಂದ ಆ ದಿವ್ಯತೆಯನ್ನು ಮುಸುಕಿರುವ ದೋಷಗಳನ್ನೂ ಕಾಣಬೇಕು..!
ಮತ್ತೆ ಆ ದೋಷಗಳನ್ನು ಕಳೆಯಬೇಕು, ದಿವ್ಯತೆಯನ್ನು ಬೆಳಗಿಸಬೇಕು..!
ಇದು ಗುರು ದೃಷ್ಟಿಯ ಕಾರ್ಯ ವೈಖರಿ..!
ಗುರುದೃಷ್ಟಿಯೆಂಬುದು ಶಿಷ್ಯನ ಪಾಲಿಗೆ ಗಂಗಾ ಸ್ನಾನವಿದ್ದಂತೆ..!!
ಒಳ ಹೊರಗಿನ ದೋಷಗಳನ್ನು ತೊಳೆದು ಶುದ್ಧವಾಗಿಸುವ ನೋಟವದು..!
ಕತ್ತಲೆಯನ್ನು ಕಳೆಯುವುದು ಮತ್ತು ಭೂಮಿಯನ್ನು ಬೆಳಗಿಸುವುದು ಸೂರ್ಯನಿಗೆ ಎರಡು ಕಾರ್ಯಗಳಲ್ಲ..
ಬಾನಿನಲ್ಲಿ ಸೂರ್ಯನುದಯಿಸಿ ಭೂಮಿಯನ್ನೊಮ್ಮೆ ನೋಡಿದರೆ ಸಾಕು,
ಕತ್ತೆಲೆ ಕಾಲಿಗೆ ಬುದ್ಧಿಹೇಳುತ್ತದೆ..
ಭೂಮಿ ಬೆಳಗುತ್ತದೆ..!
ಶಿಷ್ಯನ ಬದುಕಿನ ಬಾಂದಳದಲ್ಲಿ ಗುರುಸೂರ್ಯನುದಯಿಸಿದರೂ ಆಗುವುದು ಹೀಗೆಯೇ..!!
ಮೂಕ ಬಾಲಕನನ್ನು ಹಸ್ತಾಮಲಕರನ್ನಾಗಿಸಿದ್ದು ಗುರುದೃಷ್ಟಿ..!
ಪರಮ ಪಾತಕಿಯಾಗಿದ್ದ ಅಂಗುಲಿಮಾಲನಲ್ಲಿ ಪರಿವರ್ತನೆ ತಂದಿದ್ದು ಗುರುದೃಷ್ಟಿ..!
ತನ್ನೊಳಗೆ ಹುದುಗಿರುವ ಪರಮಾತ್ಮನೆಂಬ ಅಮೃತವನ್ನು ದೃಷ್ಟಿಯೆಂಬ ಸೌಟಿನಿಂದಲ್ಲವೇ ಗುರು, ಶಿಷ್ಯರ ಹೃದಯವೆಂಬ ತಟ್ಟೆಗಳಿಗೆ ಬಡಿಸುವುದು…!!!?
ಗುರುದೃಷ್ಟಿಗೆ,
ಗಂಗೆ ಬರಿಯ ನೀರಲ್ಲ..!
ಕಾಶಿ ಬರಿಯ ಊರಲ್ಲ..!
ಗೋವು ಕೇವಲ ಪ್ರಾಣಿಯಲ್ಲ..!
ತುಳಸಿ ಜಡವಾದ ಗಿಡವಲ್ಲ..!
ರಾಮ – ಕೃಷ್ಣರು ಮನುಷ್ಯ ಮಾತ್ರರಲ್ಲ..!
ಸಾಲಿಗ್ರಾಮ ಬರಿಯ ಕಲ್ಲಲ್ಲ…!
ಎಲ್ಲೆಲ್ಲೂ ಕಾಣದ ಪರಮಾತ್ಮನನ್ನು..
ಎಲ್ಲೆಲ್ಲೂ ಕಾಣುವ – ತೋರುವ ಗುರುದೃಷ್ಟಿಯೊಮ್ಮೆ ಸೋಕಿದರೆ ಸಾಕು,
ಮಾನವ ಮಾಧವನಾಗುವನಲ್ಲವೇ..!
ರಾಮಬಾಣ: ಗುರುವಿನ ಕಣ್ಣಿಗೆ ಕಲ್ಲಿನಲ್ಲಿಯೂ ಶಿವದರ್ಶನ, ಪಾಮರನ ಕಣ್ಣಿಗೆ ಶಂಕರನೂ ಶಿಲೆಯಾಗಿ ತೋರುತ್ತಾನೆ!
January 21, 2010 at 10:15 AM
ಹರೇ ರಾಮ
ಗುರುವಿನ ದೃಷ್ಟಿಯನ್ನು ಅದ್ಭುತವಾಗಿ ವಿವರಿಸಿದ ನಮ್ಮೆಲ್ಲರ ಮಹಾನ್ ಗುರುಗಳಿಗೆ ಧನ್ಯವಾದಗಳು
January 21, 2010 at 10:56 AM
ಶೀರ್ಷಿಕೆ ನವ್ಯ, ಲೇಖನ ಭವ್ಯ, ನಾವು ಧನ್ಯ, ಗುರುಗಳ ದೃಷ್ಟಿ ಅಪೂರ್ವ, ಪೂರ್ಣ.
ಶಿಕ್ಷಣ ಪೂರ್ಣವಾಗಲಿ, ಗುರು ತೋರಿದ ಗುರಿಯನ್ನು ಶಿಷ್ಯ ಮುಟ್ಟುವಂತಾಗಲಿ.
January 21, 2010 at 11:36 AM
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ…”
January 21, 2010 at 1:11 PM
Hare raama
gurugalu aayda shilegalu maatra shilpagalaguvudaadare ulida
shilegala gatiyenu? aayke hege?aaykege arhate yenu? dayavittu
tilisi gurugale
January 21, 2010 at 1:32 PM
ಗುರುರೇವ ಹರಿಃ ಸಾಕ್ಷಾತ್ ಹರಿರೇವ ಗುರುಃ ಸ್ವಯಮ್….
ಜೀವ ಜಗತ್ತಿನ ದೋಷಗಳನ್ನೆಲ್ಲಾ ಕಳೆಯ ಬಲ್ಲುದು ಗುರುಭಾವವೊಂದೇ… ಜಗತ್ತನ್ನೆಲ್ಲಾ ಬೆಳಗಿಸಬಲ್ಲುದು ಗುರುದೃಷ್ಟಿಯೊಂದೇ…..
January 21, 2010 at 3:36 PM
ಗುರು ದೃಷ್ಟಿ – ಶಿಷ್ಯ ಸೃಷ್ಟಿ ಶೀರ್ಷಿಕೆ ತುಂಬಾ ಚನ್ನಾಗಿದೆ
ನಾನು ಇಲ್ಲಿ ಕಲಿಯುವುದು ಮತ್ತು ತಿಳಿದುಕೊಳ್ಳುವುದು ತುಂಬಾ ಇದೆ ತುಂಬಾ ಧನ್ಯವಾದಗಳು 🙂
ಬಂಡೆಯಲ್ಲಿಯೂ ಭಗವಂತನನ್ನು ಕಾಣುವುದು ಶಿಲ್ಪಿಯ ದೃಷ್ಟಿ..!
ಪಾಪಿಯಲ್ಲಿಯೂ ಪರಮಾತ್ಮನನ್ನು ಕಾಣುವುದು ಗುರುದೃಷ್ಟಿ..!! ಈ ಸಾಲುಗಳು ತುಂಬಾ ಇಷ್ಟವಾಯಿತು
January 21, 2010 at 4:29 PM
ಗುರುಗಳೇ ಅದ್ಭುತ, ಈ ಕೆಳಗಿನ ಸಾಲುಗಳು ಅತ್ಯದ್ಭುತ. ಹಿ೦ದೆ೦ದು ಅನುಭವಕ್ಕೆ ಬ೦ದಿರದ೦ತಹ ಮಾತುಗಳು-ಭಾವಗಳು, ಭಾವದ ಮಾತುಗಳು.
”
ಶಿಲೆಯಲ್ಲಿ ಮೂರ್ತಿಯಲ್ಲದ ಭಾಗವನ್ನು ತೆಗದು ಹಾಕಿದರಾಯಿತು..!!
ಕತ್ತಲೆಯನ್ನು ಕಳೆಯುವುದು ಮತ್ತು ಭೂಮಿಯನ್ನು ಬೆಳಗಿಸುವುದು ಸೂರ್ಯನಿಗೆ ಎರಡು ಕಾರ್ಯಗಳಲ್ಲ..
ಗುರುದೃಷ್ಟಿಯೆಂಬುದು ಶಿಷ್ಯನ ಪಾಲಿಗೆ ಗಂಗಾ ಸ್ನಾನವಿದ್ದಂತೆ..!!
ಒಳ ಹೊರಗಿನ ದೋಷಗಳನ್ನು ತೊಳೆದು ಶುದ್ಧವಾಗಿಸುವ ನೋಟವದು..!
ತನ್ನೊಳಗೆ ಹುದುಗಿರುವ ಪರಮಾತ್ಮನೆಂಬ ಅಮೃತವನ್ನು ದೃಷ್ಟಿಯೆಂಬ ಸೌಟಿನಿಂದಲ್ಲವೇ ಗುರು, ಶಿಷ್ಯರ ಹೃದಯವೆಂಬ ತಟ್ಟೆಗಳಿಗೆ ಬಡಿಸುವುದು…!!!?
ಒಂದು ಕಣ್ಣಿನಿಂದ ವ್ಯಕ್ತಿತ್ವದ ಆಳದಲ್ಲಿ ಹುದುಗಿರುವ ದಿವ್ಯತೆಯನ್ನು ಕಾಣಬೇಕು..!
ಇನ್ನೊಂದು ಕಣ್ಣಿನಿಂದ ಆ ದಿವ್ಯತೆಯನ್ನು ಮುಸುಕಿರುವ ದೋಷಗಳನ್ನೂ ಕಾಣಬೇಕು..!
ಮತ್ತೆ ಆ ದೋಷಗಳನ್ನು ಕಳೆಯಬೇಕು, ದಿವ್ಯತೆಯನ್ನು ಬೆಳಗಿಸಬೇಕು..!
“
January 21, 2010 at 6:58 PM
ಗುರುಭ್ಯೋ ನಮ:
January 21, 2010 at 7:56 PM
Aa Guru drishti enna melirali,Hareraama
January 21, 2010 at 11:01 PM
ಸಂಸ್ಥಾನ,
ಗುರುವಿನ ದೃಷ್ಟಿಗೆ ಬೀಳಲು ಶಿಷ್ಯನಿಗಿರಬೇಕಾದ ಅರ್ಹತೆಗಳೇನು ?
January 22, 2010 at 7:22 AM
“ಮೂಕ ಬಾಲಕನನ್ನು ಹಸ್ತಾಮಲಕರನ್ನಾಗಿಸಿದ್ದು ಗುರುದೃಷ್ಟಿ..!
ಪರಮ ಪಾತಕಿಯಾಗಿದ್ದ ಅಂಗುಲಿಮಾಲನಲ್ಲಿ ಪರಿವರ್ತನೆ ತಂದಿದ್ದು ಗುರುದೃಷ್ಟಿ..!”
ಗುರುಗಳೇ, ಹಿ೦ದಿನ ಜನ್ಮಗಳ ಯಾವುದೇ ಸಾಧನೆ ಇಲ್ಲದಿದ್ದರೂ, ಗುರುವಿನ ಈ ರೀತಿಯ ಕೃಪಾಕಟಾಕ್ಷ ಶಿಷ್ಯನ ಮೇಲೆ ಆಗುತ್ತದೆಯೆ? ಎ೦ತಹ ಶಿಷ್ಯನ ಮೇಲೆ ಗುರುವಿನ ಈ ರೀತಿಯ ಪರಮ ದೃಷ್ಟಿ ಹರಿಯುತ್ತದೆ ತಿಳಿಸುವಿರಾ?
January 22, 2010 at 8:45 AM
ಹರೆ ರಾಮ,
ಗುರುಗಳ ಮಾತುಗಳು ಅಕ್ಷರಸಹ ಸತ್ಯ. ಗುರು ಎಂದರೆ ಶಿಷ್ಯನಲ್ಲಿರುವ ಅವಗುಣಗಳನ್ನು ತನ್ನ ಸಾಮರ್ಠ್ಯದಿಂದ ಗುರುತಿಸಿ, ಅದನ್ನು ಸರಿಪಡಿಸುವತ್ತ ಪ್ರಯತ್ನ ಮಾಡಬೇಕು.
ಇಂದು ಗುರು ಸ್ಠಾನದಲ್ಲಿ ಇರುವ ಗುರು(ಶಿಕ್ಷಕ)ಗಳು ಈ ಕೆಲಸವನ್ನು ಮಾಡುತ್ತಿದ್ದರೆಯೇ ಎಂದು ಪರಾಮಶಿ೯ಸಿದರೆ ಅನೇಕ ಸಂದಭ೯ದಲ್ಲಿ ನಿರಾಸೆಯೇ ಕಾಣುತ್ತದೆ. ಇಂದು ಗುರು(ಶಿಕ್ಷಕ) ವಿದ್ಯರ್ಥಿಯಲ್ಲಿ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ತುಂಬುವಲ್ಲಿ ವಿಫಲರಾಗುತ್ತಿರುವುದು ಮೇಲ್ನೋಟಕ್ಕೆ ಕಾಣ ಸಿಗುತ್ತದೆ.
January 25, 2010 at 1:17 PM
ಪ್ರಯತ್ನವಿದೆ ಕುಲಕರ್ಣಿಗಳೇ, ಅಂಥ flexibale ವಿದ್ಯಾರ್ಥಿಗಳಿದ್ದಾರೆಯೇ ? ಗುರವೇ ನಮಃ ಎಂಬ ಕಾಲದಲ್ಲಿ ಈ ತಿದ್ದುವಿಕೆ ಸಾಧ್ಯವಿತ್ತು ” ಗುರು ಏನ್ ಮಹಾ ” ಎನ್ನೋ ಕಾಲಘಟ್ಟದಲ್ಲಿ ……………
January 29, 2010 at 3:03 PM
ಖಂಡಿತಾ ನಿಮ್ಮ ಮಾತು ೧೦೦ಕ್ಕೆ ೧೦೦ ಸತ್ಯ… ಆದರೆ ವಿದ್ಯಾರ್ಥಿಗಳನ್ನು flexibale ಮಾಡುವವರಾರು? ನಾವು ಎಡ್ವುತ್ತಿರುವುದು ಅಲ್ಲಿ ಅನ್ನೋದು ನನ್ನ ಅಭಿಪ್ರಯ. ಪಠ್ಯ ಪುಸ್ತಕದ ವಿಷಯಗಳಲ್ಲಿ ಜೀವನಕ್ಕೆ ಬೇಕಾದ ಮೌಲ್ಯಗಳು ಸಿಗುತ್ತಿಲ್ಲ, ಕೇವಲ ಸಂಪಾದನೆಗೆ ಬೇಕಾದ ಮಾರ್ಗವನ್ನು ತೋರಿಸಲಾಗುತ್ತಿದೆ. ಹಾಗಾಗಿ ಗುರು (ಶಿಕ್ಷಕ)ವಿನ ಮಹತ್ವ ತಿಳಿಯಲು ಸಾಧ್ಯವಾಗುತ್ತಿಲ್ಲ.
January 22, 2010 at 9:25 AM
ಪಾಪಿಯಲ್ಲೂ ಪರಮಾತ್ಮನನ್ನು ಕಾಣಲು ತುಂಬ ಸಾಧನೆ ಮಾಡೆಕ್ಕು. ಅದಕ್ಕೆ ಗುರುಗಳ ಆಶೀರ್ವಾದ ಬೇಕು.
January 22, 2010 at 9:45 AM
… Guru sakshaath parambrahma thasmai shree guruve namaha. Guru drishti namma melirali endu bedikolluthhene.
January 22, 2010 at 2:50 PM
ಶ್ರೀ ಗುರವೇ ನಮ:….
January 22, 2010 at 6:40 PM
Hareram,
GuruDrusti namma meliralu gurutharavada karyagalannu guru tharave maadabhudallve?
Still Guru is GURU only.
Sada tamma drusti namma melirali,
hrudaya deguladalli sada mokkam irali
AAgale “Sab Kam-Shub kam “
January 22, 2010 at 9:44 PM
ಜ್ಞಾನವೇ ಬೆಳಕು, ಅಜ್ಞಾನವೇ ಇರುಳು ಎಂದು ಕಸ್ತೂರಿ ಕನ್ನಡದಲ್ಲಿಯೂ ಹೇಳಬಹುದು. ಇಲ್ಲಿಯೂ ಸಹ ಜ್ಞಾನವೆಂದರೆ ಅದೊಂದು ರೀತಿಯ ಪ್ರಖರ ಜ್ಯೋತಿಯಂತೆ, ಸೂರ್ಯನಂತೆ. ಅದೇ ಅಜ್ಞಾನವಾದರೆ, ನೀರಸ ರಾತ್ರಿಯಲ್ಲಿ ಅದರಲ್ಲಿಯೂ ಚಂದ್ರನ ಬೆಳಕಿಲ್ಲದ ಮೋಡಮುಸುಕಿದ ಆಕಾಶದಲ್ಲಿ ಇರುವಂತೆಯೇ ಆಗಿದ್ದು ಕತ್ತಲಕೂಪದಲ್ಲಿ ಬೀಳುವುದೇ ಆಗಿದೆ….. ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಕಣ್ಣುಗಳನ್ನು ಜ್ಞಾನವೆಂಬ ಶಲಾಕೆ (ಸೂಜಿ) ಯಿಂದ ತೆರೆದು ಅಜ್ಞಾನವನ್ನು ಹೊಡೆದೋಡಿಸುವ ಗುರುವಿಗೆ ನಮನಗಳು.
January 23, 2010 at 3:05 PM
ಸೃಷ್ಟಿಯ ಪರಮ ರಹಸ್ಯಗಳನ್ನು ಭೇದಿಸುವ ವಿದ್ಯೆಯನ್ನು ತಿಳಿಸಿಕೊಡುವ ಗುರು ಬ್ರಹ್ಮನೆ?
ಸ್ಥಿತಿಯಲ್ಲಿ ಸ್ಥಿರತೆಯನ್ನು ಸಾಧಿಸಿ ಜಗತ್ತನ್ನು ಸಾಕ್ಷಿ ಭಾವದಿ೦ದ ನೋಡುತ್ತಿರುವ ಪುರುಷನನ್ನು ಪುರುಷನಿಗೆ ದರ್ಶನ ಮಾಡಿಸುವ ಗುರು ವಿಷ್ಣುವೆ?
ಲಯ ನಾಟ್ಯದಲ್ಲಿ ನಟರಾಜನೊಡಗೂಡಿ ನರ್ತಿಸಲು ಕಲಿಸಿಕೊಡುವ ಗುರು ಮಹೇಶ್ವರನೆ?
ಅಪರಿಮಿತ ಆನ೦ದವನ್ನು ಮೈಮನಗಳಲ್ಲಿ ತು೦ಬಿಸಿ ಅಹ೦ ಅನ್ನು ಸ್ವಯ೦ ಮಾಡಿಸುವ ಗುರು ಸಾಕ್ಷಾತ್ ಪರಬ್ರಹ್ಮನೆ?
January 23, 2010 at 7:29 PM
ಹರೇ ರಾಮ. ಗುರುಗಳ ಬಾಯಿಯಿಂದ ಮೇಲಿನ ಕಥೆಯನ್ನು ಹಿಂದೆ ಕೇಳಿದ್ದೆ. ಈಗ ಅದರ ಮರ್ಮವನ್ನೆಲ್ಲ ವಿವರಿಸಿದ್ದೀರಿ.ಗುರುಗಳ ಕೃಪಾ ದೃಷ್ಟಿ ಸದಾ ನಮ್ಮ ಮೇಲಿರಲಿ ಎಂದಷ್ಟೇ ಕೋರಿಕೆ. ಸೀಹೆಚ್ಚೆಸ್ಸ್
January 23, 2010 at 9:24 PM
ಹರೇರಾಮ….ಈ ಲೇಖನ ಮಹತ್ವಪೂರ್ಣವಾದದ್ದು….ಪ್ರತಿಯೊಬ್ಬ ಶಿಶ್ಯ ಓದಲೇಬೇಕು….ಇದರಲ್ಲಿಯ ಪ್ರತಿ ಅಕ್ಶರ ನೆನಪಲ್ಲಿಡಬೇಕು…
ಗುರುದೇವ..ಈಗರ್ಥವಾಯಿತು ತಮ್ಮದ್ರುಷ್ತಿಯ ಗುಟ್ಟು….ಗುರು ದ್ರುಷ್ಟಿ ಸದಾ ಎನ್ನ ಮೇಲಿರಲಿ ಎ೦ದು ಬೇಡಿಕೊಳ್ಳುವೆ…..
January 23, 2010 at 9:27 PM
ತಮ್ಮ ದಿವ್ಯ ದ್ರುಷ್ಟಿಯಿ೦ದ ನನ್ನ ದಿವ್ಯತೆಗೆ ಮುಸುಕಿರುವ ದೋಷ ವನ್ನು ಅಳಿಸಿ ದೇವಾ………….ನನ್ನನ್ನು ಬೆಳಗಿಸಬೇಕೆ೦ದು ಪ್ರಾರ್ಥಿಸುವ ಶೋಭಾ..
January 24, 2010 at 1:44 PM
ಅಜ್ನಾನ ತಿಮಿರಾಂಧಸ್ಯ ಜ್ನಾನಾಂಜನ ಶಲಾಕಯಾ,ಚಕ್ಶುರುನ್ಮೀಲಿತಮ್ ಏನ ತಸ್ಮೈ ಶ್ರೀ ಗುರವೇ ನಮಃ
January 24, 2010 at 10:08 PM
ತಸ್ಮೈ ಶ್ರೀ ಗುರವೇ ನಮಃ
ಗುರುಭ್ಯೋ ನಮಃ, ಸರ್ವ ಗುರುವೇ ನಮಃ, ಶಿವ ಶ೦ಕರಾಯ ನಮಃ
ಜೀವನದಲ್ಲಿ ಬ೦ದ, ಬರುವ, ಇರುವ, ಸಿಗುವ ಸರ್ವ ಗುರುಗಳ ಪಾದದ ದೂಳು – ನಿತ್ಯ ಮ೦ಥನದಿ೦ದ ಉದ್ಭವಿಸುವ ಚಿ೦ತನೆಗಳಲ್ಲಿ, ವಿಷವನ್ನು ಬೇರ್ಪಡಿಸಲಿ ಅಮೃತವನ್ನು ನೀಡಲಿ.
.
ವಿಮಲಾಯೈ = ಜ್ಞಾನಾಯೈ + ಕ್ರಿಯಾಯೈ = ಯೋಗಾಯೈ
.
ಗುರುವೇ,
ಸೃಷ್ಟಿಯ ನವ ನವ್ಯ ನೋಟಗಳನ್ನು ಕರುಣಿಸೈ, ಆಟಗಳಲ್ಲಿ ಮುಳುಗಿಸೈ, ಅ೦ಟಿಕೊಳ್ಳದೇ ನೆ೦ಟನ್ನು ಬೆಸಯುವ ಕಮಲವಾಗಿಸೈ
ಮೋಹನನ ಮುರಲಿನಾದ ಕರುಣಿಸೈ, ಏಕಾ೦ತವಾಗಿಸೈ
ಶಿವ ತಾ೦ಡವದ ದೃಶ್ಯ ಕರುಣಿಸೈ, ಲಯವಾಗಿಸೈ
ಪರಮಾತ್ಮನ ಪಾದಸ್ಪರ್ಶ ಕರುಣಿಸೈ, ಲೀನವಾಗಿಸೈ
.
ಗುರುವೇ,
ವಿಚಿತ್ರ, ವಿಕಾರ, ವಿಕೃತಿಗಳ ಕ್ಷಮಿಸೈ, ಶಿಕ್ಷಿಸೈ
ಮಾರನನ್ನು ಸ೦ಹರಿಸೈ, ಪವಿತ್ರವಾಗಿಸೈ, ಶೂನ್ಯವಾಗಿಸೈ, ಪೂರ್ಣನಾಗಿಸೈ
.
ಗುರುವೇ,
ಜ್ಞಾನ ಕಣ್ಣೀರಿನ ಗ೦ಗೆಯಾಗಿಸೈ, ಮಾಯೆಯನ್ನು ಕರಗಿಸೈ, ಯುಗಗಳನ್ನು ಕ್ಷಣವಾಗಿಸೈ
ಮಗನಾಗೈ ಶೇಷ ಜನ್ಮಗಳನ್ನು ಜ್ವಲಿಸೈ, ತ೦ದೆಯಾಗೈ ಅಮೃತಪುತ್ರನಾಗಿಸೈ
ಶಿಷ್ಯನನ್ನು ನಾರಾಯಣನಾಗಿಸೈ
January 24, 2010 at 11:33 PM
Gurugale , poorvajanmakku guru drishti bagyakku enadaru sambanda idaye? Please explain. Pranamagalu
January 25, 2010 at 1:18 PM
……ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||
January 26, 2010 at 8:34 AM
ಜೀವನ ಎ೦ಬ ವನವನ್ನು ಬನ ಮಾಡಲು, ಬಣ್ಣ ಬಣ್ಣಗಳಿದ್ದರೂ ಭಣ ಭಣ ಎನಿಸುವ ಸ೦ಸಾರವನ್ನು ಬನವಾಸಿ ಮಾಡಲು ಸ೦ಸ್ಕೃತಿ ಬೇಕು, ಸ೦ಸ್ಕಾರ ಬೇಕು, ಇದನ್ನು ಕೊಡುವವರು ಗುರುಗಳು. ಸ೦ಸಾರ ಎ೦ಬ ಘೋರ ಕತ್ತಲ ಅರಣ್ಯವನ್ನು, ಅಭಯಾರಣ್ಯ ಆಗಿಸಲು, ಗುರು ಎ೦ಬ ಬೆಳಕಿನ ಮಾರ್ಗದರ್ಶನ ಅಗತ್ಯ.
.
ಬೆಳೆಯುವ ವಯಸಲಿ, ಬಲಿಯುವ ಮನಸಲಿ – ಮನೆಯಲ್ಲಿರುವ + ಮನದಲ್ಲಿರುವ ಎಲ್ಲರೂ ಗುರುಗಳೇ. ಹುಟ್ಟಿನಿ೦ದಲೆ ಸ೦ಸ್ಕಾರ ಶುರುವಾಗುತ್ತದೆ ಎನ್ನಬಹುದೆ, ಅಥವಾ ಹುಟ್ಟಿಗೂ ಮೊದಲೆ? ತ೦ದೆ ತಾಯಿಯಲ್ಲಿಯೆ? ಅವರಿಗೂ ಮೊದಲೆ? ಸ೦ಸ್ಕಾರದ ಆರ೦ಭ ಎಲ್ಲಿ೦ದ?
January 26, 2010 at 8:34 AM
ಗುರುಗಳೇ, ಸ೦ಸ್ಕಾರದ ಆದಿ ಯಾವುದು ತಿಳಿಸುವಿರಾ?
January 26, 2010 at 10:56 PM
ಹರೇ ರಾಮ|
ಮನಸ್ಸು ಕನಸುಗಳನ್ನು ಸೃಸ್ಟಿಸುತ್ತದೆ. ಭ್ರಮೆಗಳಿಂದ ತುಂಬಿದ ಮನಸ್ಸೇ ಜೀವ ಆತ್ಮ.
ಗುರು ದೃಷ್ಟಿಯೇ ಪರಮ ಆತ್ಮ.
ಆದ್ದರಿಂದ:
” ಗುರುರೆವ ಗತಿಃ | ಗುರುಮೇವ ಭಜೆ|
ಗುರುಣೈವ ಸಹಾಸ್ಮಿ| ನಮೋ ಗುರವೇ|
ನಃ ಗುರೊಃ ಪರಮಂ| ಶಿಶುರಸ್ಮಿ ಗುರೊಃ|
ಮತಿರಸ್ತಿ ಗುರೌ| ಮಮ ಪಾಹಿ ಗುರೊಃ||
ಮಮ ಪಾಹಿ ಗುರೊಃ||
ಮಮ ಪಾಹಿ ಗುರೊಃ|| “
January 29, 2010 at 11:27 PM
ದಿವ್ಯತೆ ಮಾತ್ರವೇ ತೋರಿದರೆ ತಿದ್ದುವ ಮಾತೇ ಇಲ್ಲ..!!
ದೋಷಗಳು ಮಾತ್ರವೇ ತೋರಿದರೆ ತಿದ್ದುವುದಾದರೂ ಎಲ್ಲಿಂದ..!? ನಿಜ ಗುರುಗಳೇ …ನಮ್ಮ ಸಮಾಜ ನಡೆದುಕೊಂಡ ರೀತಿ ನೋಡಿದರೆ …ತಿದ್ದುವುದಾದರೂ ಎಲ್ಲಿಂದ..!?
February 1, 2010 at 8:27 AM
ಸತ್ಯಮೇವ ಜಯತಿ . . . ನಾನೃತಮ್ . . .
February 3, 2010 at 8:02 PM
gurugale…
shikshaka – adhyaaka- guru – ivella bere bere artha hondirabekallave
February 17, 2010 at 7:08 PM
syta. guru bittare munde gatiyilla.
July 10, 2019 at 7:47 AM
ತುಂಬ ಙ್ನಾನಾರ್ಜನೆ ಆಗುವಂತ ಲೇಖನ ಇನ್ನಷ್ಟು ಹೆಚ್ಚು ಮೂಡಿ ಬರಲಿ
ಧನ್ಯವಾದಗಳು