ಹುಟ್ಟು

ಬುಧವಾರ, ದಶಂಬರ 22nd, 2010 - - 3 Comments

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

  • Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು.

    ಎಂತಹ ಭಾಗ್ಯವಂತರಲ್ಲಿ ಭಾಗ್ಯವಂತರು ನಾವು….. ಸಿತಾರನ್ನು ಜೋಡಿಸಿ ಕೊಟ್ಟದ್ದೂ ಅಲ್ಲದೆ, ದಿವ್ಯ ಸಂಗೀತವನ್ನೂ ತಾನೇ ಹೊರಡಿಸುತ್ತ ಇದ್ದಾನೆ….. ಆಲಿಸುವ, ಆನಂದವನ್ನು ಸವಿಯುವ,ಆನಂದವನ್ನು ಉಣಿಸುವ ಮನಸ್ಸನ್ನು ಮಾಡಿದರೆ ಸಾಕು…. ಕರುಣಾಸಾಗರ ಕ್ರುಪೆದೋರೋ…

  • http://hareraama.in/members/rnarayana/ Raghavendra Narayana

    ಹುಟ್ಟು ಹೇಗೆ ಸಿಕ್ಕಿತು ಎ೦ದು ಅರಿತುಕೊ೦ಡರೆ ನಡುಕ ಶುರುವಾಗಬಹುದು, ಅಪರೂಪದ ಸಹಸ್ರ ಕಾಲಗಳ ದಾಟಿ ಸಿಕ್ಕಿರುವುದು ನರ ಜನ್ಮ, ಉಪಯೋಗಿಕೊಳ್ಳುತ್ತಿರುವ ಪರಿ ಎ೦ತು, ನರನಿಗೆ ನರಿ ಬುದ್ಧಿಯ ಕೊಟ್ಟಿಹೆಯ ಹರಿಯೆ.. ಶಿವ ನಿನ್ನ ತಾ೦ಡವವ ತಡಿಯುವ ಶಕ್ತಿ ನಮ್ಮ೦ತ ನರ ಪ್ರಾಣಿಗಳಿಗೆ ಎಲ್ಲು೦ಟು.
    .
    ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮ, ಸ೦ನ್ಯಾಸಾಶ್ರಮ – ನಮ್ಮ ಸ೦ಸ್ಕೃತಿಗೆ ಸಾಟಿ? ಪ್ರತೀ ಕ್ರಿಯೆ ಪ್ರತಿಕ್ರಿಯೆಗಳಲ್ಲಿ ತು೦ಬಿಹುದು ಭಗವ೦ತ ಪ್ರೇಮ.
    .
    ನಪಾಸು, ಉತ್ತೀರ್ಣದ ಚಿ೦ತೆಯೇನಾದರು ನಮ್ಮಲ್ಲಿ? ಪರೀಕ್ಷೆಯ ಸಮಯದಲ್ಲಿ ಓದುವ೦ತೆ ಜಸ್ಟ್ ಪಾಸ್ ಆದರು ಅಡ್ಡಿಯಿಲ್ಲ ಕೊನೆಗೆ ಆಗುವ. ಕರ್ತವ್ಯವಿಲ್ಲವೆ೦ದುಕೊ೦ಡಿರುವೆವು, ಬಿಟ್ಟಿ ಸಿಕ್ಕಿದೆ, ಜಗವೆಲ್ಲ ನಮ್ಮ ಸುಖಕ್ಕಾಗಿ ಎ೦ದುಕೊ೦ಡಿರುವೆವು, ಪರಮಾತ್ಮ ಕೊಟ್ಟ ಕೆಲಸ ಬಹಳವಿರುವುದು – ಸ೦ಬಳ ಮೊದಲೆ ಸಿಕ್ಕಿರುವುದು, ಯಾರಿಗೋ ಯಾವುದಕ್ಕೋ ಸ೦ಬಳ ಕೊಡುವುರೆ೦ದು ಹರಲಿರುಳು ದುಡಿಯುವ ನಮಗೆ, ಪರಮಾತ್ಮ ಕೊಟ್ಟಿರುವ ಸ೦ಬಳದ ಅನುಕೂಲಗಳ ಅರಿವಾಗಲಿ, ಅವನಿಗಾಗಿ ದುಡಿಯುವ. ಕಳ್ಳರ೦ತೆ ಕದ್ದು ಓಡಿಹೋಗದೆ, ರಾಜರ೦ತೆ ಜೀವವಿತ್ತು ಋಣವ ಪರಮಾತ್ಮನಿಗೆ ಬಿಟ್ಟು ವೀರರಾಗುವ.
    .
    ಶ್ರೀ ಗುರುಭ್ಯೋ ನಮಃ

    • Jayashree Neeramoole

      ಗುರುಚರಣಗಳಿಗೆ ಅನಂತ ಪ್ರಣಾಮಗಳು.

      ತುಂಬಾ ಚೆನ್ನಾಗಿ ಹೇಳಿದ್ದೀರಿ
      “ಯಾರಿಗೋ ಯಾವುದಕ್ಕೋ ಸಂಬಳ ಕೊಡುವರೆಂದು ಹಗಲಿರುಳು ದುಡಿಯುವ ನಮಗೆ…..”

      ನಮಗಾಗಿ, ನಮ್ಮ ಮನೆಯವರ ನೆಮ್ಮದಿಗಾಗಿ, ನಮ್ಮ ಸಮಾಜದ ನೆಮ್ಮದಿಗಾಗಿ ಪ್ರತಿಕ್ಷಣವನ್ನೂ ಮೀಸಲಾಗಿಡೋಣ…. ಅದಕ್ಕಾಗಿ ಹೋರಾಡುತ್ತಿರುವವರ ಜೊತೆ ಕೈ ಜೋಡಿಸೋಣ…. ಅದುವೇ ಭಗವಂತನ ಸೇವೆ… ಭಗವಂತನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಮೊದಲಿಗೆ ಪ್ರಯೋಜನವನ್ನು ಪದೆಕೊಳ್ಳುವವರು ನಾವು, ನಂತರ ನಮ್ಮ ಮನೆಯವರು,ನಮ್ಮ ಸಮಾಜ…. ಇದಕ್ಕೋಸ್ಕರವೇ ನಮ್ಮ ಜೀವನದ ಎಲ್ಲ ಹೋರಾಟಗಳು…. ಮತ್ತಿನ್ಯಾಕೆ ತಡ…. ಇಂದೇ ಗುರುಗಳ ಮಾರ್ಗದರ್ಶನದೊಂದಿಗೆ ಭಗವಂತನ ಸೇವೆಯನ್ನು ಪ್ರಾರಂಭಿಸೋಣ…..

Powered By Indic IME