ಸೀತೆಯ ಚಾರಿತ್ರ್ಯ ದೊಡ್ಡದು.
ತನ್ನ ಬಾಲದ ಬೆಂಕಿಯಿಂದ ಸಂಪೂರ್ಣ ಲಂಕೆಯೇ ಹೊತ್ತಿ ಉರಿದರೂ ಅಬಾಧಿತಳಾಗಿಯೇ ಉಳಿದ ಆಕೆಯನ್ನು ಕಂಡು ಹನುಮಂತ ಉದ್ಗರಿಸುತ್ತಾನೆ..
ಅಪಿ ಸಾ ನಿರ್ದಹೇತ್ ಅಗ್ನಿಂ ನ ತಾಂ ಅಗ್ನಿಃ ಪ್ರಧಕ್ಷ್ಯತಿ ||
(ತನ್ನ ಚಾರಿತ್ರ್ಯ ಬಲದಿಂದ ಸೀತೆಯೇ ಅಗ್ನಿಯನ್ನು ಸುಟ್ಟು ಬಿಡಬಹುದೇ ಹೊರತು, ಅಗ್ನಿ ಸೀತೆಯನ್ನು ಮುಟ್ಟಲಾರ – ವಾಲ್ಮೀಕಿ ರಾಮಾಯಣ)
ರಾವಣನ ಭೋಗ ಲಾಲಸೆ ದೊಡ್ಡದು.
ಅಂತಃಪುರದಲ್ಲಿ ಏಳು ಸಾವಿರ ಮಂದಿ ಸ್ತ್ರೀಯರಿದ್ದರೂ, ಆತನಿಗೆ ಸಾಕೆಂಬುದಿರಲಿಲ್ಲ..
ಸೀತೆಯ ಚಾರಿತ್ರ್ಯ, ರಾವಣನ ಭೋಗ ಲಾಲಸೆಗಳ ನಡುವಿನ ಮಹಾ ಸಂಗ್ರಾಮವೇ ’ರಾಮಾಯಣ’..
ತನ್ನ ಬಲ ಪರಾಕ್ರಮಗಳಿಂದ ಹದಿನಾಲ್ಕು ಲೋಕಗಳನ್ನೂ ವಶಪಡಿಸಿಕೊಂಡ ರಾವಣನಿಗೆ ಸೀತೆಯನ್ನು ಮಾತ್ರ ವಶಪಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಬಗೆಬಗೆಯ ಆಮಿಷಗಳನ್ನೊಡ್ಡಿದರೂ..
ಪರಿಪರಿಯಲ್ಲಿ ಪೀಡಿಸಿ ಭಯಪಡಿಸಿದರೂ..
ಸೀತೆಯನ್ನು ವಶಪಡಿಸಿಕೊಳ್ಳಲಾರದೆ ಚಿಂತಾಕ್ರಾಂತನಾಗಿ ಕುಳಿತಿದ್ದ ರಾವಣನಿಗೆ ಸಚಿವನೊಬ್ಬ ಸಲಹೆ ಕೊಡುತ್ತಾನೆ..
“ಸೀತೆಗೆ ರಾಮನೆಂದರೆ ಪಂಚಪ್ರಾಣ, ನೀನ್ಯಾಕೆ ರಾಮನ ರೂಪ ಧರಿಸಿ ಸೀತೆಯ ಬಳಿ ಸಾಗಬಾರದು? ದೀರ್ಘಕಾಲದ ಪತಿವಿರಹದಿಂದ ಕಂಗೆಟ್ಟ ಆಕೆ ಕ್ಷಣದಲ್ಲಿ ನಿನ್ನ ವಶವಾಗಿ ಬಿಡಬಹುದಲ್ಲವೇ?”..
ಅಸಹಾಯಕತೆಯ ಮುಖಮುದ್ರೆಯೊಂದಿಗೆ ರಾವಣ ಉತ್ತರವಿತ್ತ:
“ನಾನಿದನ್ನು ಬಹಳ ಮೊದಲೇ ಪ್ರಯತ್ನಿಸಿದ್ದೆ, ಆದರೇನು ಮಾಡೋಣ?,
ರಾಮನ ರೂಪವನ್ನು ಧರಿಸಲೆಂದು ಆಪಾದಮಸ್ತಕ ರಾಮನ ಮೂರ್ತಿಯನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಆರಂಭಿಸುತ್ತಿದ್ದಂತೆಯೇ,ನನ್ನ ಸ್ವರೂಪ – ಸ್ವಭಾವಗಳೇ ಬದಲಾಗಿ ಬಿಡ್ಡುತ್ತಿದ್ದವು..
ಕೇವಲ ಸೀತೆಯೇಕೆ, ಪರನಾರಿಯರನ್ನು ವಶಪಡಿಸಿಕೊಳ್ಳುವ ವಿಚಾರವೇ ಮನದಿಂದ ಮರೆಯಾಗಿ ಬಿಡುತ್ತಿತ್ತು. ಮುಂದುವರಿದರೆ ರಾವಣತ್ವವೇ ನಶಿಸಿಬಿಡಬಹುದೆಂಬ ಭಯದಿಂದ ಆ ಪ್ರಯತ್ನವನ್ನೇ ನಾನು ಕೈ ಬಿಡಬೇಕಾಯಿತು”.
ಶ್ರೀ ರಾಮನ ಸ್ಮರಣೆ ಮಾಡುವ ಪವಾಡವಿದು!!
ದುರುದ್ದೇಶದಿಂದಲೇ ಆದರೂ, ಒಂದೇ ಒಂದು ಬಾರಿ ಸ್ಮರಿಸಿದ ಮಾತ್ರಕ್ಕೇ ರಾವಣನಂಥವನ ವಿಕೃತ ಮನಸ್ಸನ್ನೇ ಪರಿವರ್ತಿಸಬಲ್ಲ ರಾಮನ ರೂಪದ ಪ್ರಭಾವವನ್ನು ಊಹಿಸಿಕೊಳ್ಳಿ!
ಸ್ಮರಣೆಯೆಂಬುದು ಅಂತರಂಗದ ಬಾಗಿಲಿದ್ದಂತೆ..
ಸ್ಮರಣೆಯ ಮೂಲಕ ಯಾರನ್ನು ಬೇಕಾದರೂ ನಮ್ಮೊಳಗೆ ಕರೆತರಬಹುದು..
ಒಂದು ವೇಳೆ ರಾವಣನನ್ನು ಕರೆತಂದರೆ..!?
ನಮ್ಮ ಮನಸ್ಸೇ ಲಂಕೆಯಾದೀತು..
ಹೊತ್ತಿ ಉರಿದೀತು..
ರಣ ಭೂಮಿಯಾದೀತು..!
ಅದೇ ನಾವು ರಾಮನನ್ನೇ ಕರೆತಂದರೆ..?
ನಮ್ಮ ಅಂತರಂಗವೇ ರಾಮರಾಜ್ಯವಾದೀತು..
ಯುದ್ಧಗಳನ್ನು ಮೀರಿದ ಅಯೋಧ್ಯೆಯಾದೀತು..!
ಕೃತಯುಗದಲ್ಲಿ ರಾಕ್ಷಸರ ವಾಸ ಕಾಡಿನಲ್ಲಿ..
ತ್ರೇತಾಯುಗದಲ್ಲಿ ರಾಕ್ಷಸರು ಲಂಕೆಯಂತಹ ನಾಡಿನಲ್ಲಿ.,
ದ್ವಾಪರದಲ್ಲಿ ಕಂಸ ಶಿಶುಪಾಲರಾಗಿ ಮನೆ ಮನೆಗಳಲ್ಲಿ..
ಕಲಿಯುಗದಲ್ಲಿ ರಾಕ್ಷಸರು ಮನ ಮನಗಳಲ್ಲಿ…!!
ಮನದೊಳಗೆ ರಾಕ್ಷಸ ಸಂಹಾರವಾಗಬೇಡವೇ?
ಹಾಗಾಗಲು – ನಮ್ಮೊಳಗೆ ರಾಮನ ಅವತಾರ ಆಗಲೇ ಬೇಕಲ್ಲವೇ.?
ಜೀವನ ಪಾವನವಾಗಲು ಎಷ್ಟೆಲ್ಲ ಬೇಕು?
ಇಷ್ಟು ಸಾಕು..!
ಹತ್ತು ಹಲವು ಬಾರಿ ಬೇಕಿಲ್ಲ…
ರಾಮನೊಪ್ಪುವಂತೆ ಒಂದೇ ಒಂದು ಬಾರಿ ಸ್ಮರಣೆಯಾಗಲಿ..
ಸ್ಮರಣೆಯ ರಥವೇರಿ ರಾಜಾರಾಮ ಮನದ ರಾಜ್ಯವನ್ನು ಪ್ರವೇಶಿಸಲಿ..
ದೇಹ ದೇಹಗಳಲ್ಲಿ ರಾಮರಾಜ್ಯದ ಉದಯವಾಗಲಿ..!
ಮತ್ತೆ ದೇಶ ದೇಶಗಳಲ್ಲಿ ವಿಸ್ತರಿಸಲಿ..
ಆರಂಭ ನಮ್ಮಿಂದಲೇ..
|| ಹರೇ ರಾಮ ||
November 19, 2009 at 8:42 AM
ಸಂಸ್ಥಾನ… ನೀವು ‘ಹರೇರಾಮ’ ಎಂದು ಸ್ಮರಿಸಿದಂತೆ ನಾವೂ ಸ್ಮರಿಸುವಂತಾಗಲಿ..
ಹರೇರಾಮ…
November 20, 2009 at 6:47 AM
ಹಾಗೆಂದರೆ..?
November 20, 2009 at 8:56 AM
“दक्षिणे लक्षमणोयस्य वामे तु जनकातमज
पुर तो मारुतिर्यस्य तं वन्दे रघुनन्दनं “
November 19, 2009 at 8:46 AM
HareRama,Samstana namma manassina arishadvairigalaada raakshasara meeri Ramana ola tappadu henge?
November 20, 2009 at 6:47 AM
ರಾಕ್ಷಸರಿದ್ದರೆ ರಾಮನಿಗೆ ಬರಲೇನಡ್ಡಿ ..? ಕತ್ತಲೆಯ ಮಧ್ಯೆ ಬರಲು ದೀಪಕ್ಕೆ ಏತರ ಭಯ..? ಹ್ಞಾ..! ಕತ್ತಲೆಗೆ ಎಂದೂ ದೀಪದ ಬಳಿ ಬರಲು ಸಾಧ್ಯವಿಲ್ಲ..ರಾಕ್ಷಸರಿದ್ದಲ್ಲಿ ತಾನೇ ರಾಮನಿಗೆ ಕೆಲಸ..?
November 19, 2009 at 8:56 AM
ಅಷ್ಟು ನೀಚ ರಾವಣ ಒಂದು ಬಾರಿ ಸ್ಮರಣೆ ಮಾಡಿದ ಮಾತ್ರಕ್ಕೆ ಅವನು ತನ್ನ ಸ್ವಭಾವ ಬದಲಾಯಿತು ಎಂದ…
ನಾವು ಇಷ್ಟೆಲ್ಲಾ ಬಾರಿ ರಾಮನ ಸ್ಮರಣೆ ಮಾಡಿದರೂ ನಮ್ಮ ಸ್ವಭಾವವೇಕೆ ಬದಲಾಗುತ್ತಿಲ್ಲ?
ಹಾಗಿದ್ದರೆ ನಾವು ರಾವಣನಿಗಿಂತ ಕೆಟ್ಟವರೆ….??
November 20, 2009 at 6:39 AM
ಏಕಾಗ್ರತೆ ಎಂಬುದು ಎಲ್ಲ ಸಿದ್ಧಿ ಗಳ ಕೀಲಿಕೈ ಇದ್ದಂತೆ..ಅದಿದ್ದರೆ ವಿದ್ಯಾರ್ಥಿ ಚೆನ್ನಾಗಿ ಓದುತ್ತಾನೆ..ಉದ್ಯೋಗಿ ಚೆನ್ನಾಗಿ ಕೆಲಸ ಮಾಡುತ್ತಾನೆ..ಸಂತ ಚೆನ್ನಾಗಿ ಧ್ಯಾನ ಮಾಡುತ್ತಾನೆ..ಏಕಾಗ್ರತೆ ಇದ್ದುದರಿಂದಲೇ ರಾವಣ ಅಷ್ಟು ದೊಡ್ಡ ತಪಸ್ಸು ಮಾಡಿ ಬ್ರಹ್ಮ-ಶಿವರನ್ನು ಒಲಿಸಿ ವರಗಳನ್ನು ಪಡೆದು ಕೊಳ್ಳಲು ಸಾಧ್ಯವಾಯಿತು..!! ನಮ್ಮಲ್ಲಿ ಏಕಾಗ್ರತೆ-ತನ್ಮಯತೆಗಳ ಅಭಾವವಿರುವುದರಿಂದಲೇ ಸ್ಮರಣೆ ನಿಜವಾದ ಅರ್ಥದಲ್ಲಿ ಆಗುತ್ತಿಲ್ಲ..ಪರಿಣಾಮವಾಗಿ ಅಪೇಕ್ಷಿತ ಫಲಗಳು ದೊರೆಯುತ್ತಿಲ್ಲ..
November 19, 2009 at 9:33 AM
ಗುರುಗಳೇ ಪ್ರಣತಿಗಳು, ಒಂದು ಹೀನೋಪಮೆ, ಸಂಜೆ ಹೊತ್ತಿಗೆ ಆ ಪಾನಕ ತೆಕ್ಕಂಡ ಜೆನ, ಹುಳಿಮಜ್ಜಿಗೆ ಕೊಟ್ಟರೆ ಕುಡಿತ್ವಿಲ್ಲೆ ! ರಾಮನ ವೇಶಾರೋಪಿಸಿಕೊಂಡರೆ ಸ್ವಭಾವ ಬದಲಪ್ಪಬಗ್ಗೆ ರಾವಣನ ಅನಾಸಕ್ತಿ.
November 19, 2009 at 10:01 AM
ಹರೇ ರಾಮಾ
November 19, 2009 at 11:01 AM
hare ram…,
kaliyugadalli rakshasaru mana managallalli annodu nija, bahushya ulidella yugagalalli manadaladallello hudugidda rakshasatva ee yugadalli hora baruttirabahudallave…??!!! Shri Rama bhaktara hrudayadolage baralarane endu kelidde nanu.., eegarivaitu, hrudayadolage iddaru manake arivagadu eke endu..!! sada ninna “Neenoppuvante Smarisuva” bhagya dayapalisu rama…jayarama…
November 19, 2009 at 11:35 AM
mane- managalali…
rama — viramisali…
November 19, 2009 at 2:46 PM
ಹರೇ ರಾಮ
ಸಂಸ್ಥಾನ,
ಲೇಖನ ತುಂಬಾ ಮನೋಜ್ಞವಾಗಿದೆ…
ಧನ್ಯವಾದಗಳು…
ಕೃತಯುಗದಲ್ಲಿ ರಾಕ್ಷಸರ ವಾಸ ಕಾಡಿನಲ್ಲಿ..
ತ್ರೇತಾಯುಗದಲ್ಲಿ ರಾಕ್ಷಸರು ಲಂಕೆಯಂತಹ ನಾಡಿನಲ್ಲಿ.,
ದ್ವಾಪರದಲ್ಲಿ ಕಂಸ ಶಿಶುಪಾಲರಾಗಿ ಮನೆ ಮನೆಗಳಲ್ಲಿ..
ಕಲಿಯುಗದಲ್ಲಿ ರಾಕ್ಷಸರು ಮನ ಮನಗಳಲ್ಲಿ…!!
ಈ ಮಾತಿನ ಬಗ್ಗೆ ಒಂದು ‘ಬುದ್ದಿಜೀವಿ’ಗಳ ಪ್ರಶ್ನೆ…
ಉದ್ದಟತನವಾದರೆ ಕ್ಷಮಿಸಿ…
ರಾಮ ಬಂದದ್ದು ಧರ್ಮಸಂಸ್ಥಾಪನೆಗಾಗಿ.. ಸಮಯ ತ್ರೇತೆಯ ಅಂತ್ಯ.. ಅದಾದ ನಂತರ ಪ್ರಾರಂಭವಾಗಿದ್ದು ದ್ವಾಪರ.. ಧರ್ಮ ಇನ್ನಷ್ಟು ಅವನತಿಯಾದ ಕಾಲ…
ಹೀಗಾದರೆ, ಧರ್ಮಸಂಸ್ಥಾಪನೆಗಾಗಿಯೇ ಬಂದ ರಾಮನ ಕಾಲದ ನಂತರ ಧರ್ಮ ಮೊದಲಿಗಿಂತ ಅವನತಿಯಾದಂತಾಯಿತಲ್ಲಾ!
ಕೃಷ್ಣಾವತಾರದಲ್ಲಿಯೂ ಅದೇ ಕಥೆ!
ಇದನ್ನು ಒಬ್ಬ ಇತಿಹಾಸಕಾರ ಹೇಗೆ ಅರ್ಥೈಸಿಕೊಳ್ಳುವುದು..?
November 20, 2009 at 6:19 AM
ಕೃತಯುಗದಿಂದ ಕಲಿಯುಗದವರೆಗೆ ಯುಗದಿಂದ ಯುಗಕ್ಕೆ ಅವನತಿ ಕಾಲದ ಸಹಜ ಸ್ವಭಾವ..ಅವತಾರಗಳು ಅವನತಿಗೆ brake ಇದ್ದ ಹಾಗೆ..ಅವನತಿಯ ಮಿತಿ ಮೀರಿದ ವೇಗವನ್ನು ತಡೆಗಟ್ಟಿ ಪುನರಪಿ ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸುತ್ತವೆ..ಮತ್ತೆ ಜಾರುವುದು ಯುಗಧರ್ಮ..ಒಮ್ಮೆ ಕೆಳಕ್ಕೆ,ಮತ್ತೊಮ್ಮೆ ಮೇಲಕ್ಕೆ ಚಲಿಸುವುದು ಕಾಲ’ಚಕ್ರ’ದ ಸ್ವಭಾವ..ಒಂದು ವೇಳೆ ಶ್ರೀರಾಮ ಬರದೆ ಇದ್ದಿದ್ದರೆ ತ್ರೆತಾಯುಗದಲ್ಲಿಯೇ ಕಲಿಯುಗ ಬಂದಿರುತ್ತಿತ್ತು..!!
ಅವತಾರಗಳಿಗೆ ಶಾಶ್ವತವಾದ ಪ್ರಭಾವವಿದೆ..ರಾಮಾವತಾರದ ನಂತರ ಯುಗ-ಯುಗಗಳೇ ಕಳೆದು ಕಲಿಯುಗವೇ ಬಂದಿದ್ದರೂ ಸ್ಮರಣೆ ಮಾತ್ರದಿಂದ ಆತ
ಇಂದೂ ನಮ್ಮನ್ನು ಕೃತಯುಗದೆತ್ತರಕ್ಕೆ ಏರಿಸುವನಲ್ಲವೇ..?
November 20, 2009 at 5:31 PM
ninyako nina hangyako ninna namada bala ondiddare sako …RAMANiginta rama namada mahime doddadu ennuvudu nijana gurugale???
ramaniginta modale ramanama huttidu nijave?
November 19, 2009 at 9:29 PM
ರಾಮನಿಗೆ ರಾವಣನಲ್ಲಿ ಇದ್ದ ಒಲವಿಗೆ ಕಾರಣ ಅವರ ಪುಉರ್ವ ಜನ್ಮದ ಸಂಬಂದ- ನೆನೆದರೆ ಒಲ್ಲಿಯುವ ಸ್ವಾಮಿ ಅವನು
sharadakka
Another reason for Rama’s quick response could be – opposite poles attract?
sharadakka.
November 20, 2009 at 5:59 AM
Even same poles attract..!!
November 21, 2009 at 11:06 AM
ಗುರು ದೇವ ನೀವು ಹೇಳ್ತಿರೋ poles ಅಲ್ಲಿ ಏನು…?
November 19, 2009 at 10:44 PM
ಮಾನವನ ಜೀವನದ ಬಹುಭಾಗ ಒಂದಲ್ಲೊಂದು ಸ್ಮರಣೆಯಿಂದಲೇ ಸಾಗುತ್ತದೆ.
ಕಾರ್ಯಾರಂಭ ವಿನಾಯಕನ ಸ್ಮರಣೆಯಿಂದ.
ಯಾವುದೇ ಕ್ರಿಯೆಯ ಜೊತೆಗೆ ತಂದೆ ,ತಾಯಿ ಅಥವಾ ಆತನಿಗೆ ಸ್ಫೂರ್ತಿ ನೀಡಿದ ದೇವ – ದೇವಿ , ಮಹಾಪುರುಷರ ಸ್ಮರಣೆಯಿರುತ್ತದೆ.
ಯೋಧ ‘ಹರ ಹರ ಮಹಾದೇವ ‘ ಎಂಬ ಘೋಷಣೆಯೊಂದಿಗೆ ಶಿವನ ಪರಾಕ್ರಮವನ್ನು ನೆನೆದು ಧೈರ್ಯದಿಂದ ಮುನ್ನುಗ್ಗುತ್ತಿದ್ದ.
‘ವಂದೇ ಮಾತರಂ’ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಗಿ ಭಾರತಮಾತೆಯ ಶಕ್ತಿ, ಸಹನೆ, ತ್ಯಾಗಗಳು ಅವರಲ್ಲಿ ಆವಿಭವಿಸಿದವು.
ರಾಮ ಸ್ಮರಣೆ ಜಗತ್ತಿನಲ್ಲೆಲ್ಲಾ ಹರಡಿ ಶ್ರೀ ರಾಮನ ಆದರ್ಶಗಳು ಎಲ್ಲರಲ್ಲೂ ಮೈಗೂಡಲೆಂದು ಎಲ್ಲರೂ ಜೊತೆಯಾಗಿ ಹಾರೈಸೋಣ…..
November 20, 2009 at 9:35 AM
ಹರೇ ರಾಮ,
ಯಾವಾಗ ಕಲಿಯಗ ಮುಗಿತು ?ರಾಮ ಪಟ್ಟಾಭಿಷೇಕ ನಮ್ಮಕಾಲದಲ್ಲಿ ನೆಡಿತಾ?
ನಮಗೆ ಶ್ರೀರಾಮನ ದಿವ್ಯದರ್ಶನ ಯಾವಾಗ ಗುರುಗಳೇ?{ನಮ್ಮಮನದಲ್ಲಿ,ಮಠದಲ್ಲಿ,ಗುಡಿಯಲ್ಲಿ ಅವನಿದ್ದರು ಸಹ ,ಅರ್ಜುನನಿಗೆ ಶ್ರೀ ಕೃಷ್ಣ ಕೊಟ್ಟ ಹಾಗೆ}
November 22, 2009 at 10:23 PM
ಸರ್ವಾಧಿಕ ಪ್ರೀತಿ ರಾಮನ ಮೇಲೆ ಯಾವ ಕ್ಷಣದಲ್ಲಿ ಬಂದರೆ ಅದೇ ಕ್ಷಣದಲ್ಲಿ..!!
November 20, 2009 at 11:03 AM
ಹರೇ ರಾಮ ಗುರುಗಳೇ, ತುಂಬಾ ತುಂಬಾ ಚೆನ್ನಾಗಿದೆ ಈ ಲೇಖನ. ಓದಿದಷ್ಟು ಇನ್ನೂ ಓದಬೇಕು ಅಂತ ಅನ್ನಿಸುತ್ತದೆ. ಆ ರಾಮನ ನೆನೆಸಿ ಕಣ್ಣಲ್ಲಿ ನೀರೆ ಬಂತು (ಆನಂದದ್ದು). ಗುರುಗಳ ರಾಮಾಯಣ ಪ್ರವಚನದ ಕೇಳಿದಾಗಿಂದ ನನಗೆ ಮೊದಲು ಇದ್ದ ರಾಮನ impression ಬದಲಾಗಿದೆ.
ಗುರುಗಳೇ, ರಾಮಾಯಣ ಪ್ರವಚನ ಅರ್ಧ ಮಾತ್ರ ನಾವು ಆನಂದಿಸಿದ್ದೇವೆ. ಅದನ್ನು ಈಗಲೂ ಮೆಲುಕು ಹಾಕುತ್ತೇವೆ. ಇನ್ನುಳಿದ್ದದ್ದು ಕೇಳುವ ಭಾಗ್ಯ ಎಂದು?
November 22, 2009 at 10:20 PM
ಬೇ……….ಗ……….
November 20, 2009 at 11:39 AM
ಕೆಲವು ಬಾರಿ ಬರುವ ಕಷ್ಟಗಳು (ದುರ್ದೈವ)ಗಳು ನಮ್ಮಲ್ಲಿರು ರಾವಣನನ್ನು ತೆಗೆದು ರಾಮನನ್ನಾಗಿ ಮಾಡುತ್ತವೆ ಅನ್ನೋ ಮಾತು ಸರಿ ಅಂತೆಆಯ್ತು……
ಇಂಗ್ಲಿಷಲ್ಲಿ ಒಂದು ಮಾತು ಇದೆ …..”A gem can’t be polished without friction nor a man without adversity”
ಇದನ್ನ ಅರ್ಥ ಮಾಡಿಕೊಳ್ಳಲು ರಾಮ(ದೇವರು) ತೋರ್ಸಿರೋ ಒಂದು …example/ನಾಟಕ ….ಅಲ್ವೇ ಗುರುಗಳೇ
November 22, 2009 at 10:19 PM
ಸರಿ..
November 22, 2009 at 10:16 PM
ತಥಾಸ್ತು..
November 23, 2009 at 6:47 PM
“ರಾಮನೊಪ್ಪುವಂತೆ ಒಂದೇ ಒಂದು ಬಾರಿ ಸ್ಮರಣೆಯಾಗಲಿ..”
ಕೆಲವು ಬಲ್ಲವರು ಹೇಳುವ ಪ್ರಕಾರ ಇಂಥ ಸ್ಮರಣೆಯಲ್ಲಿ ಸ್ವಾರ್ಥ/ಕೋರಿಕೆ ಏನೂ ಇರಬಾರದು – ಬರೀ ಶುದ್ಧ ಪ್ರೇಮವಿರಬೇಕು ಅಂತ. ಹೇಳಿ ಕೇಳಿ ನಮ್ಮಂಥ ಸಾಮಾನ್ಯರು ಬರೀ ಸಮಸ್ಯೆಗಳ ಗೋಜಲಲ್ಲೇ ಇರುವವರು. ಅದಕ್ಕೆ ತಕ್ಕಂತೆ ನಮ್ಮ ಸ್ಮರಣೆಗಳೂ ಕೂಡ ಸ್ವಾರ್ಥಪರವಾಗಿ ‘ನಾವೊಪ್ಪು’ವಂತಿರಬಹುದೇ ವಿನಃ ‘ರಾಮನೊಪ್ಪು’ವಂತಿರುವುದು ಕಷ್ಟ. ಅದರೂ ಶುದ್ಧ ಪ್ರೇಮವಿಡುವ ದಿಸೆಯಲ್ಲಿ ನಮ್ಮ ಮನಸ್ಸನ್ನು ತರಬೇತು ಮಾಡುವ ಸತತ ಪ್ರಯತ್ನ ಮಾಡಬಹುದಷ್ಟೇ. ಗುರು ಆಶೀರ್ವಾದವಿದ್ದರೆ ನಮ್ಮ ಪ್ರಯತ್ನ ಸುಲಭಸಾಧ್ಯ!
November 23, 2009 at 8:11 PM
ರಾಮನಿಗಿಂತ ಕೃಷ್ಣನ ನೀತಿ ಕಲಿಯುಗಕ್ಕೆ ಸೂಕ್ತ ಯೆನಿಸುತದೆ.. ರಾಮನ ಹಾಗೆ ಇದ್ದರೆ ಈಗಿನ ಕಾಲಕ್ಕೆ ’ಶಿವಾಯ ನಮಃ’ ಮಾಡಿಸಿಬಿಡುತ್ತಾರೆ.. ತತ್ವಕ್ಕೆ, ನೀತಿಗೆ ಇಂದಿನ ವ್ಯವಹಾರದಲ್ಲಿ ಹೆಚ್ಚು ಬೆಲೆ ಇಲ್ಲ ಯೆನಿಸುತದೆ.. ಈ commercial ಲೋಕದಲ್ಲಿ ರಾಮನ ಹಾಗೆ ಇರಲು ಕಾಡೋ ಅಥವಾ ಹಿಮಾಲಯಕ್ಕೆ ಹೋಗಬೇಕದಿತು, ಅಲ್ಲೂ Spirituality Commercialization ಹೆಚ್ಹಾಗಿ ಮತ್ತೆ Commercial ಪ್ರಪಂಚಕ್ಕೆ ಸೇರಿದಂತಗಬಹುದು..
(ಇಲ್ಲೇ ಇದ್ದು ಪುರುಷ ಸಾಕ್ಷಾತ್ಕಾರ ಮಾಡಿಕೊಂಡವರು ಬಹಳ ಜನ ಇದ್ದಾರೆ, ಹಿಮಾಲಯಕ್ಕೆ ಹೋಗುವ ಅಗತ್ಯ ಇಲ್ಲ, ದೇಹಾತ್ಮದಲ್ಲಿ ನರ ಇರಬೇಕು, ಅದು ಗಟ್ಟಿ ಇರಬೇಕಷ್ಟೆ)..
ಕೃಷ್ಣನ ಜಾಣ್ಮೆ.. ಹೇಗಾದರೂ ಮಾಡಿ ಒಳ್ಳೆಯವರಿಗೆ ಒಳ್ಳೆಯ ಮತ್ತು ಕೆಟ್ಟವರಿಗೆ ಕೆಟ್ಟ ಫಲ ಸಿಗುವ ಹಾಗೆ ಮಾಡುವುದು.. ಜೊತೆ ಜೊತೆಗೆ ಪುರುಷ ಗುಣವನ್ನು ಮರೆಯದೆ ಸದಾ ಮನೋಲ್ಲಾಸದಿಂದಿರುವುದು, ಕಲಿಯುಗಕ್ಕೆ ಹೆಚ್ಹು ಸೂಕ್ತ ಯೆನಿಸುತದೆ.. ಖಂಡಿತ ರಾಮನದು ಅದ್ಭುತ ವ್ಯಕ್ತಿತ್ವ, ಸಾಮಾನ್ಯ ಮನುಷ್ಯನ ಗುಣ ಸ್ವಭಾವದಲ್ಲೇ ಪುರುಶೋತ್ತನಗಿದುದ್ದು.. ಆದರೆ, ಇಂದಿನ ವ್ಯವಹಾರ ಪ್ರಪಂಚದಲ್ಲಿ, ಉತ್ತಮ ಗುಣವನ್ನು ದುರುಪೋಯೋಗ ಮಾಡಿಕೊಂಡು ಗುಲಾಮರನ್ನಾಗಿ ಮಾಡುವರೇ ಹೊರತು ಉದ್ದರದ ಕಡೆ ಗಮನವಿಲ್ಲವೇನೋ..
ರಾಮನ ಬಗ್ಗೆ ನಾವು ಕ್ಷುಲಕ್ಕ ಮಾತನಡುತ್ತೇವೆ, ‘ಸೀತೆಯನ್ನು ಕಾಡಿಗೆ ಕಳಿಸಿದ’, ಆಯಿತು ಅಲ್ಲಿಗೆ ನಿಂತೆ ಹೋಯಿತು ರಾಮನ ಆಯನ, ಮುಂದೆ ಮತ್ತೆ ತಿಳಿದುಕೊಳ್ಳುವ ಸಾಮಾನ್ಯ ಪ್ರಯತ್ನವು ಇಲ್ಲ, ಇಂಥ ನಮ್ಮವರಿಗೆ, ಒಂದು ಗೂಬೆಯನ್ನು ತೋರಿಸಿ – ನೋಡು ಇದೆ ಕಲ್ಕಿ ಅವತಾರ, ರೆಕ್ಕೆಯನ್ನು ಸರಿ ನೋಡು – ಕತ್ತಿ ಕಾಣುತ್ತದೆ ಎಂದೆರೆ, ಆ ಗೂಬೆಯ ಫೋಟೋ ತೆಕ್ಕೊಂಡು ಹೋಗಿ ರಾಮ ಫೋಟದ ತಲೆಯಮೇಲೆ ಇಡುತ್ತೇವೆ.. ಆಚಾರದಲ್ಲಿನ ವಿಚಾರ ತಿಳಿಯುವ ಪ್ರಯತ್ನ ಇಲ್ಲದೆ ಶಂಕರಾಚಾರ್ಯನನ್ನು ಮರೆತು ಅಂಧಾಚಾರ್ಯರ ಶಿಷ್ಯಕೋಟಿಯಗುತ್ತೇವೆ..
ರಾಮನ ಕ್ಷತ್ರಿಯ ಗುಣಗಳನ್ನು, ಅವನು ಸೂರ್ಪನಕ ಕಳಿಸಿದ ಕರ ಇನ್ನಿಥರ ರಾಕ್ಷಷರನ್ನು ಸಂಹರಿಸಿದ ರೀತಿ, ಕರ್ತವ್ಯ ಗುಣ, ವಾಲಿ ಅಂಗದ ವಿಭೀಷಣ ಲಕ್ಷ್ಮಣ ಶತ್ರುಘ್ನ ಹನುಮಂತ ಇನ್ನು ಆನೆಕರೊಂದಿಗೆ ನೆಡೆದುಕೊಂಡ ರೀತಿಯನ್ನು ಯಾರು ಮಾತನಾಡುವುದಿಲ್ಲ.
ಗುರುಗಳೇ, ದಯವಿಟ್ಟು ತಿಳಿಸಿ, ರಾಮ ಕಲಿಯುಗಕ್ಕೆ ಅದರಲ್ಲೂ ಈಗ ನಾವಿರುವ ಮೆಟ್ರೋ ಸಂಸ್ಕೃತಿಗೆ ಹೆಗೆ ಸೂಕ್ತ?
November 24, 2009 at 11:29 AM
ramana avatara …….
November 24, 2009 at 10:46 PM
HARE RAAMA
December 13, 2009 at 4:38 PM
hare raama hare raama raama raama hare hare
December 23, 2009 at 11:19 AM
ಅಗಸನ ಮಾತು ಕೇಳಿ ರಾಮ, ಸೀತೆಯ ಕಾಡಿಗೆ ಕಳುಹಿಸಿದ ಕಥೆ ವಾಲ್ಮೀಕಿ ರಾಮಾಯಣಲ್ಲಿ ಇಲ್ಲೆ ಎಂಬುದಾಗಿ ಕೇಳಿದೆ. ಅಂದರೆ ಸೀಥೆ ವಾಲ್ಮೀಕಿ ಆಶ್ರಮಕ್ಕೆ ಹೋಗಿ ಇಪ್ಪ ಸಂದರ್ಭ ಯಾವದು?
ಲವ ಕುಶ ಅಯೋಧ್ಯೆಲಿಯೇ ಬೆಳದವಾ?
February 28, 2011 at 10:31 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಹರೇ ರಾಮ,
“ರಾಮನೊಪ್ಪುವಂತೆ ಒಂದೇ ಒಂದು ಬಾರಿ ಸ್ಮರಣೆಯಾಗಲಿ…”
“ಸ್ಮರಣೆಯ ರಥವೇರಿ ಬರುವ ರಾಜಾರಾಮ ಮನದ ರಾಜ್ಯವನ್ನು ಪ್ರವೇಶಿಸಲಿ…,
ದೇಹ ದೇಹಗಳಲ್ಲಿ ರಾಮ ರಾಜ್ಯದ ಉದಯವಾಗಲಿ…,
ಮತ್ತೆ ದೇಶ ದೇಶಗಳಲ್ಲಿ ವಿಸ್ತರಿಸಲಿ….
ಆರಂಭ ನಮ್ಮಿಂದಲೇ…”
October 23, 2012 at 8:45 AM
”
ಸೀತೆಯನ್ನು ವಶಪಡಿಸಿಕೊಳ್ಳಲಾರದೆ ಚಿಂತಾಕ್ರಾಂತನಾಗಿ ಕುಳಿತಿದ್ದ ರಾವಣನಿಗೆ ಸಚಿವನೊಬ್ಬ ಸಲಹೆ ಕೊಡುತ್ತಾನೆ..
“ಸೀತೆಗೆ ರಾಮನೆಂದರೆ ಪಂಚಪ್ರಾಣ, ನೀನ್ಯಾಕೆ ರಾಮನ ರೂಪ ಧರಿಸಿ ಸೀತೆಯ ಬಳಿ ಸಾಗಬಾರದು? ದೀರ್ಘಕಾಲದ ಪತಿವಿರಹದಿಂದ ಕಂಗೆಟ್ಟ ಆಕೆ ಕ್ಷಣದಲ್ಲಿ ನಿನ್ನ ವಶವಾಗಿ ಬಿಡಬಹುದಲ್ಲವೇ?”..
ಅಸಹಾಯಕತೆಯ ಮುಖಮುದ್ರೆಯೊಂದಿಗೆ ರಾವಣ ಉತ್ತರವಿತ್ತ:
“ನಾನಿದನ್ನು ಬಹಳ ಮೊದಲೇ ಪ್ರಯತ್ನಿಸಿದ್ದೆ, ಆದರೇನು ಮಾಡೋಣ?,
ರಾಮನ ರೂಪವನ್ನು ಧರಿಸಲೆಂದು ಆಪಾದಮಸ್ತಕ ರಾಮನ ಮೂರ್ತಿಯ…
ನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಆರಂಭಿಸುತ್ತಿದ್ದಂತೆಯೇ,ನನ್ನ ಸ್ವರೂಪ – ಸ್ವಭಾವಗಳೇ ಬದಲಾಗಿ ಬಿಡ್ಡುತ್ತಿದ್ದವು..
ಕೇವಲ ಸೀತೆಯೇಕೆ, ಪರನಾರಿಯರನ್ನು ವಶಪಡಿಸಿಕೊಳ್ಳುವ ವಿಚಾರವೇ ಮನದಿಂದ ಮರೆಯಾಗಿ ಬಿಡುತ್ತಿತ್ತು. ಮುಂದುವರಿದರೆ ರಾವಣತ್ವವೇ ನಶಿಸಿಬಿಡಬಹುದೆಂಬ ಭಯದಿಂದ ಆ ಪ್ರಯತ್ನವನ್ನೇ ನಾನು ಕೈ ಬಿಡಬೇಕಾಯಿತು”.
ಶ್ರೀ ರಾಮನ ಸ್ಮರಣೆ ಮಾಡುವ ಪವಾಡವಿದು!!
”
.
ಹೊರ ದ್ವಾರದಲ್ಲಿ ಇರುವ ರಾವಣ ನಾಶವಾಗಲು, ಒಳ ಆಳದಲ್ಲಿ ಇರುವ ರಾಮ ಕಾಣಲು – ಗುರುಗಳ ಬ್ಲಾಗ್ಸ್ ಇನ್ನಷ್ಟು ಮತ್ತಷ್ಟು ಬೇಕು, ಗುರುಗಳು ಅನುಗ್ರಹಿಸಬೇಕು.
.
ಶ್ರೀ ಗುರುಭ್ಯೋ ನಮಃ