ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ..
ಆದರೆ ಕಾರ್ಯವಿಧಾನದಲ್ಲಿ ಮಹದಂತರ..!
ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು..
ಕಿವಿಗಳು ??
ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !!
ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !!
ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು..
ಕಿವಿಗೆ ಒಂದು ಜೀವನವಿಡೀ ನಡೆದ ಘಟನೆಗಳನ್ನು ತಿಳಿಯಲು ಹಲವು ಬಾರಿ ಒಂದು ಘಂಟೆಯೇ ಸಾಕು !!
ಕಣ್ಣಿನದು ತನ್ನನುಭವ ಮಾತ್ರ..
ಮತ್ತೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಅದಕ್ಕೆ ಕಿವಿಯೇ ಬೇಕು !!
ಬೆಟ್ಟದಷ್ಟು ಅನುಭವವನ್ನು ಆ ಪುಟ್ಟ ಪುಟ್ಟ ರಂಧ್ರಗಳು ಅದು ಹೇಗೆ ಮಿದುಳಿನೊಳಗಿಳಿಸುವವೋ? ಆಶ್ಚರ್ಯ !!
ದೇವರಿಂದ ದೇಹದಲ್ಲಿಯೇ ದತ್ತವಾದ ಅರಿವಿನ ಆ ಎರಡು ಹೆಬ್ಬಾಗಿಲುಗಳನ್ನು ತೆರೆದಿಡದಿದ್ದರೆ ಬದುಕು ವ್ಯರ್ಥ !!
ಎಲ್ಲವನ್ನೂ ಸ್ವಯಂ ಅನುಭವಿಸಿಯೇ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ ! ಹಲವು ವಿಷಯಗಳಲ್ಲಿ ಅದು ಸಾಧುವೂ ಅಲ್ಲ..
ಅಲ್ಲಿ ನಮ್ಮ ನೆರವಿಗೆ ಬರುವವು ಕಿವಿಗಳು..
ನಮ್ಮ ಪೂರ್ವಜರು ಈಗಾಗಲೇ ಎಲ್ಲಿಯವರೆಗೆ ಕ್ರಮಿಸಿರುವರೋ ಅಲ್ಲಿಂದ ಮುಂದಲ್ಲವೇ ನಾವು ಕ್ರಮಿಸಬೇಕಿರುವುದು..?ಇಲ್ಲಿಯವರೆಗೆ ಲೋಕವು ನಡೆದು ಬಂದ ಹಾದಿಯ ಸಾರಸಂಗ್ರಹವನ್ನು ಕಿವಿಗಳಿಂದ ಒಳಗೊಂಡು, ಅದನ್ನು ಆಧರಿಸಿಯೇ ಮುಂದೆ ಸಾಗಬೇಕಲ್ಲವೇ..?
ಪೂರ್ವ ಪುರುಷರು ಪಟ್ಟ ಕಷ್ಟವನ್ನು ನಾವು ಪಡದೆಯೇ, ಅವರು ಪಡೆದ ಅನುಭವವನ್ನು ಮಾತ್ರ ನಾವು ಪಡೆಯಲು ನೆರವಾಗುವ ಕಿವಿಗಳು ಸೃಷ್ಟೀಶ್ವರನು ನಮಗಿತ್ತ ಅದ್ಭುತ ವರಗಳು !!
ವರವನ್ನು ಆತನೇನೋ ಇತ್ತಾಗಿದೆ, ನಾವು ಪಡೆದುಕೊಳ್ಳಬೇಕೆಂದರೆ….
ಕೇಳಬೇಕು..
ಅಲ್ಪವನ್ನಲ್ಲ, ಬಹುವನ್ನು ಕೇಳಬೇಕು..
ಬಹುಕಾಲ ಕೇಳಬೇಕು..
ಬಹುಜನರಿಂದ ಕೇಳಬೇಕು..
ಬಹುವಿಷಯಗಳನ್ನು ಕೇಳಬೇಕು..
ಕೇಳುತ್ತಲೇ ಇರಬೇಕು..
ಇಂಥವರಿಗೆ ‘ ಬಹುಶ್ರುತ ‘ ರೆಂದು ಹೆಸರು..
ಹಾಗಿದ್ದರು ಅಯೋಧ್ಯೆಯ ರಾಜಪುರುಷರು…
February 2, 2011 at 3:15 PM
ಹರೇರಾಮ್,
ಬಹುವಾಗಿ ಕೇಳಿ,ಕೇಳಿದ್ದನ್ನು ಅರಿತು,
ಅರಿತಿದ್ದನ್ನು ಆರಿಸಿ ಜೀವನದಲ್ಲಿಬೆರಸಿ
ಬಾಳುವ೦ತೆ ಸದಾ ಹರಿಸು ಗುರುದೇವಾ
February 4, 2011 at 7:34 PM
ನಿಜ, ಜೀವನದಲ್ಲಿ ಬೆರೆಸಿಕೊ೦ಡು ಬಾಳುವುದು ಅರ್ಥಪೂರಿತವಾದ ಜೀವನ.
.
ಶ್ರೀ ಗುರುಭ್ಯೋ ನಮಃ
February 2, 2011 at 3:47 PM
ಬಹುಶ್ರುತರೂ – ಸುಶ್ರುತರೂ ಆಗುವಂತೆ ಅನುಗ್ರಹಿಸಿ ಗುರುಗಳೇ…
February 2, 2011 at 4:25 PM
ಹೌದಲ್ಲವಾ!?..
ಇ-ಮಾಧ್ಯಮದಿಂದಾಗಿ ಗುರುಗಳು ಬರೆದದ್ದನ್ನು ’ಕೇಳುವ’ ಭಾಗ್ಯ ಸಿಕ್ಕಿದೆ. ಕೇಳಿದ್ದನ್ನು ಕಾರ್ಯರೂಪಕ್ಕೆ ತರಲು ಸದ್ಭುದ್ದಿಯನ್ನೂ ಕರುಣಿಸು ಗುರುದೇವ.
February 2, 2011 at 9:16 PM
hareraama…veda purana galannella ballavarige bahushrutharendu keliddene..aa kaladalli pusthaka oduva paddathi iralilla..keli manana maduva abhyasavithendu kanuthade…aa kaladavaru bahushrutharu .ee kaladavaru….?
February 2, 2011 at 9:31 PM
॥ಹರೇ ರಾಮ॥
ಬಹುಕಾಲ,ಬಹುಜನರಿಂದ,ಬಹುವಿಷಯಗಳನ್ನು ಕೇಳುವ ಶಕ್ತಿ ನಮ್ಮದಾಗಲಿ ಹಾಗೂ ಕೇಳಿದ್ದನ್ನು ಧಾರಣೆಮಾಡುವ,ಧರಿಸ್ಸಿದ್ದನ್ನು ಸರಿಯಾದ ಸಮಯದಲ್ಲಿ ಸ್ಮರಿಸುವ ಶಕ್ತಿ ನಮ್ಮದ್ದಾಗಲೆಂದು ಹರಸು ಗುರುವೇ……..
February 4, 2011 at 7:17 PM
ಖ೦ಡಿತ, ಇ೦ತಹ ಆಶೀರ್ವಾದಗಳನ್ನು ಕೇಳಿ ಕೇಳಿ ಪಡೆಯುವ..
ಖ೦ಡಿತ, ಇ೦ತಹ ಹರಸುವಿಕೆ, ಅರಸುವಿಕೆ, ಅನಿಸುವಿಕೆ, ಧರಿಸುವಿಕೆ, ಸ್ಮರಿಸುವಿಕೆ ಸಾವಿರ ಸಾವಿರವಾಗಲಿ.. ಸ್ಮೃತಿ ಲೋಕದಲ್ಲಿ ಪೂರ್ಣ ಚ೦ದಿರ ಪೂರ್ವ ಚ೦ದದ ಸ್ಮೃತಿಗಳೆ೦ಬ ನಕ್ಷತ್ರಗಳೊ೦ದಿಗೆ ಸದಾ ತ೦ಪನೀಯ್ಯುತ್ತಿರಲಿ..
.
ಶ್ರೀ ಗುರುಭ್ಯೋ ನಮಃ
February 2, 2011 at 11:45 PM
ಅಬ್ಬಬ್ಬಾ ! ಹೌದಲ್ಲಾ !!
ಕಿವಿಗಳ ಮಹತ್ವ, ಆವಶ್ಯಕತೆ ಮತ್ತು ಉಪಯುಕ್ತತೆ ಬಗ್ಗೆ ಯಾವತ್ತೂ ಈ ತೆರನಾದ ಚಿಂತನೆ ಮಾಡಿದ್ದೇ ಇಲ್ಲ !
ರವಿ ಕಾಣದ್ದನ್ನು ಕವಿ ಕಾಣುತ್ತಾನೆ ! ಕವಿ ತಿಳಿಯದ್ದನ್ನೂ ಮುನಿ ತಿಳಿಯುತ್ತಾನೆ – ಗುರು ತಿಳಿಸುತ್ತಾನೆ !!
ಹರೇ ರಾಮ !
February 4, 2011 at 7:25 PM
ಅದ್ಭುತ.
.
ಹೌದು, ಗುರು ಶಿಷ್ಯನಿಗಾಗಿ, ಕವಿ ಕಾವ್ಯ, ರವಿ ಚ೦ದ್ರ, ಮುನಿ ಮಾನ್ಯ.. ಸರ್ವವಾಗುತ್ತಾನೆ, ಸ೦ಪೂರ್ಣನಾಗಿಸುತ್ತಾನೆ.
.
ಭಗವ೦ತ ಆಪ್ತಕಾಮ, ಪೂರ್ಣಕಾಮ.. ಗುರುಗಳ ಪ್ರವಚನದಲ್ಲಿ ಕೇಳಿದ್ದು.. ಜಗತ್ತಿನ ಸೌ೦ದರ್ಯವನ್ನು ಎಲ್ಲೆಲ್ಲಿ ಹುಡುಕಲಿ.. ಈ ಪದಗಳ ಸೌ೦ದರ್ಯವನ್ನು ಸವಿಯುವ ಬಗೆ ಹೇಗೆ.
.
ಶ್ರೀ ಗುರುಭ್ಯೋ ನಮಃ
February 3, 2011 at 11:27 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ನೋಡುವ ಕಣ್ಣಿರಲು, ಕೇಳುವ ಕಿವಿಯಿರಲು, ಮನದಲ್ಲಿ ಗುರುವಿರಲು, ಶಿರವು ಗುರುಚರಣಗಳಲಿ ಬಾಗಿರಲು……… ಜಗವೆಲ್ಲ……
February 4, 2011 at 7:29 PM
ಜಗವೆಲ್ಲಿ….?
ಕಾಲಡಿ….? ಶ೦ಕರಾಚಾರ್ಯರ ಕಾಲಡಿ…?
.
ಶ್ರೀ ಗುರುಭ್ಯೋ ನಮಃ
February 5, 2011 at 9:25 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ನಿಜ. ಜಗವಿರುವುದು ಕಾಲಡಿಯಲ್ಲೇ….. ಗುರುಗಳ ಕಾಲಡಿಯಲ್ಲಿ…… ಅಲ್ಲಿಗೆ ಹೋಗಲು….. ಅಲ್ಲೇ ಸ್ಥಿರವಾಗಿರಲು……. ಸೌಂದರ್ಯ ಸವಿಯಲು……..ಶಕ್ತಿ ಬೇಕು ಅಷ್ಟೇ…….
March 4, 2011 at 10:00 AM
ಹರೇರಾಮ್,
ಕಾಲದ ಅಡಿಯಲ್ಲಿ ಬಿದ್ದಾಗಿದೆ
ಗುರುವಿನ ಕಾಲಡಿಯಲ್ಲಿ ಬಿದ್ದರೆ ಮಾತ್ರವೇ
ಮಹಾಕಾಲನೆಡೆಗೆ ನಡೆಯಬಹುದಲ್ಲವೇ?
March 4, 2011 at 10:27 AM
ಹರೇ ರಾಮ,
ನಿಜ. ನಮ್ಮ ಮನಸ್ಸು ರಾಮನ ಚರಣಗಳಡಿಯಲ್ಲಿ ಸ್ಥಿರವಾಗಿ ನೆಲೆನಿಂತರೆ ನಮ್ಮ ಮನಸ್ಸು ರಾಮರಾಜ್ಯವಾಗುತ್ತದೆ. ಇದಕ್ಕಿಂತ ಮಹದಾನಂದ ಬೇರೇನಾದರೂ ಬೇಕೇ?
February 4, 2011 at 10:47 AM
ಹಿತ-ಮಿತವಾದುದನ್ನು ನೋಡುವ, ಕೇಳುವ ಕಣ್ಣುಗಳನ್ನು ನೀಡಿರುವವನು ಆ ದೇವನು……. ಅವುಗಳನ್ನು “ಸದ್ಬಳಕೆ” ಮಾಡಿಕೊಳುವ “ಸುಮನವ” ನೀಡುವ-“ಮಾರ್ಗದರ್ಶಿ”-ಗಳು ನಮ್ಮ ಗುರುವರ್ಯರು……….
February 4, 2011 at 6:59 PM
ಅದ್ಭುತ ಅದ್ಭುತ ಅದ್ಭುತ.
.
ಕಣ್ಣುಗಳಿಗೆ ಕ೦ಡಿದ್ದು ಚಿಕ್ಕ ಲೇಖನವಾದರು….
.
ಶ್ರೀ ಗುರುಭ್ಯೋ ನಮಃ
February 4, 2011 at 7:45 PM
ಚಿಕ್ಕ ಚಿಕ್ಕ ಲೇಖನವಾದರು…. ಚಿಕ್ಕ ಚಿಕ್ಕ ರ೦ಧ್ರಗಳಿ೦ದ ಹಾದುಹೋಗಿ ಪುಟ್ಟ ಪುಟ್ಟ ಸಸಿಗಳು ನೆಟ್ಟವು ಮಾನಸ ಸರೋವರದ ತಟದಲ್ಲೆಲ್ಲ.. ಸಸಿ ಪುಟ್ಟದಾದರೇನು, ಆಗಸವ ನೋಡಿ ಆಕಾಶದೆತ್ತರಕ್ಕೆ ಬೆಳೆಯದೆ? ಹೇಳಿ.. ಸರೋವರದ ಸಾ೦ಗತ್ಯದಿ೦ದ..
.
ಸತ್ಸ೦ಗವೆನ್ನುವುದು ಭಾರೀ ದೊಡ್ಡ ಸ೦ಗತಿಯ..? ಖ೦ಡಿತ ದೊಡ್ಡ ಸ೦ಗತಿಯೆ. ಅನುಮಾನವಿದ್ದವರು ಪ್ರಯತ್ನಿಸಿ ನೋಡಬಹುದು 🙂
.
ಶ್ರೀ ಗುರುಭ್ಯೋ ನಮಃ
February 9, 2011 at 7:11 PM
ಶ್ರೀ ಗುರುಭ್ಯೋ ನಮಃ
‘ ಬಹುಶ್ರುತ ‘ನಾಗೆಂದು ಹರಸು ಗುರುವೇ……..
February 12, 2011 at 8:43 PM
ಗುರು ಚರಣಗಳಿಗೆ ಸಾಷ್ಟಾಂಗ ಪ್ರಣಾಮಗಳು,
“ತತ್ವ ಒಂದೇ ಒಂದು ಆದರೂ ಅದು ಈ ಸೃಷ್ಥಿಯಲ್ಲಿ ಎಕೆ ಅನೇಕವಾಗಿ ಕಾಣುತ್ತವೆ? ಕಣ್ಣೆ ಬೇರೆ ತರಹ ನೋಡುತ್ತೆ, ಕಿವಿನೇ ಬೇರೆ ತರಹ ಕೆಳುತ್ತೆ! ಕಣ್ಣು ನೋಡಿದ್ದು ಎಲ್ಲವೂ ಸಾಧು ಅಲ್ಲ ಅಂತ ಆದ ಮೇಲೆ ಕಿವಿಗಳು ಕೇಳಿದ್ದೆಲ್ಲವೂ ಸಾಧುವೇ?? ಇದೆಲ್ಲವನ್ನು ಮೀರಿ ‘ಬಹುಶ್ರುತ’ರಾಗುವ ಬಗೆ ತಿಳಿಸು ಗುರುದೇವಾ”.
March 4, 2011 at 10:22 AM
ಹರೇರಾಮ್,
ಕಣ್ಣಾರೆ ಕ೦ಡರೂ ಪರಾ೦ಬರಿಸಿ ನೋಡು
ಕಿವಿಯಾರೆ ಕೇಳಿಧರೂ ವಿಮರ್ಶಿಸಿ ತಿಳಿ
ಮನಸಾರೆ ಮೆಚ್ಹಿದ್ದು ಆತ್ಮಾವಲೋಕಿಸಿ ಮಾಡು
ಗುರುಚರಣದಲ್ಲಿ ಸಮರ್ಪಿಸಿ ಬಿಡು
March 11, 2011 at 11:24 AM
ಸೃಷ್ಟಿಯ ಪ್ರಧಾನ ಲಕ್ಷಣವೇ ವೈವಿಧ್ಯ…
ಮಾಯೆಗೂ ಪರಮಾತ್ಮನಿಗೂ ಇರುವ ಪ್ರಧಾನ ಅಂತರವೇ ವೈವಿಧ್ಯ..
ಪರಮಾತ್ಮ ಸದೈಕರೂಪರೂಪ,
ಪ್ರಕೃತಿ ಕ್ಷಣೇ ಕ್ಷಣೇ ನವ-ನವ ರೂಪ..ಅನಂತರೂಪ…
ಅದು ಹಾಗಿದ್ದರೇ ಚೆನ್ನು..
ಅದು ಹಾಗಿದ್ದರೇ ಜಗತ್ತು ನಡೆಯುವುದು…
ಕ್ಷಣೇ ಕ್ಷಣೇ ಹೊಸ-ಹೊಸದನ್ನು ಕೊಟ್ಟು, ಏಕಕಾಲದಲ್ಲಿಯೇ ಬಗೆಬಗೆ ರೂಪಗಳನ್ನು ತೋರಿ ಜೀವನನ್ನು ಮರುಳು ಮಾಡಿ ಇಲ್ಲಿಯೇ ಉಳಿಸಿಕೊೞು(ಲ್ಲು)ವಳು ಮಾಯೆ..
September 3, 2011 at 10:55 AM
’ತತ್ತ್ವ’ ಹೀಂಗೆ ಬರೆಯುದು. ರಾಜೀವ.
February 13, 2011 at 6:54 AM
ಒಳ್ಳೆ ಪ್ರಶ್ನೆ. ನಿಮ್ಮ ಪ್ರತಿಕ್ರಿಯೆ ನೋಡಿ ಸಂತೂಷವಾಯ್ತು.
February 14, 2011 at 4:45 PM
ಹರೇ ರಾಮದ ಪ್ರವಚನಗಳನು ಆಲಿಸಿ ಪಾಲಿಸುವುದು ಬಹುಶ್ರುತನಾಗುವ ಹಾದಿಯ ಒಂದು ಹೆಜ್ಜೆ……..ಎಂದು ನನ್ನ ಅನಿಸಿಕೆ.
॥ಹರೇ ರಾಮ॥
February 14, 2011 at 6:31 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಸರಿಯಾಗಿ ಹೇಳಿದ್ದೀರಿ …
February 21, 2011 at 6:44 PM
ಹರೇ ರಾಮ. ಕಣ್ಣು ಕಿವಿಗಳ ಅಂತರ -ಸಾಮರ್ಥ್ಯದ ಬಗ್ಗೆ ಯಾವತ್ತೂ ಯೋಚಿಸಿಯೇ ಇರಲಿಲ್ಲ. ಕಣ್ಣು-ಕಿವಿಗಳೆರಡೂ ಕೇವಲ 6 ಇಂಚು ಹತ್ತಿರವಿದ್ದೂ ಒಂದನ್ನೊಂದು ನೋಡಲಾರವು (ಹಾಗೆಯೇ ಪರಸ್ಪರ ಕಣ್ಣುಗಳು ಕೂಡಾ). ಹೆಚ್ಚು ಕೇಳು-ಕಡಿಮೆ ಮಾತಾಡು (listen more-talk less) ಎಂಬುದನ್ನು ಕೇಳಿದ್ದೇವೆ. ಬಹುಕಾಲ ಕೇಳ ಬೇಕು,ಬಹು ಜನರಿಂದ ಕೇಳಬೇಕು,ಬಹುವಿಷಯಗಳನ್ನು ಕೇಳಬೇಕು,ಕೇಳುತ್ತಲೇ ಇರಬೇಕು-ಎಷ್ಟು ಚೆನ್ನಾಗಿದೆ! ಆದರೆ ನಾವು ಸಾಮಾನ್ಯವಾಗಿ ಇದಕ್ಕೆ ವಿರುದ್ಧವಾಗಿಯೇ ಇರುವುದು – ನನ್ನನ್ನು ಬಹುಕಾಲ ಇತರರು ಕೇಳಬೇಕು,ಬಹುಜನರು ನನ್ನನ್ನು ಕೇಳಬೇಕು,ಬಹುವಿಷಯಗಳನ್ನು ನಾನು ಹೇಳಬೇಕು,ಇತರರು ನನ್ನನ್ನು ಕೇಳುತ್ತಲೇ ಇರಬೇಕು – ಇದು ಸಾಮಾನ್ಯವಾಗಿ ನಮ್ಮ ನಡವಳಿಕೆ.
ಅಯೋಧ್ಯೆಯ ರಾಜರ ಬಹುಶ್ರುತ ಗುಣದ ಒಂದಂಶವಾದರೂ ನಮಗೆ ಬರಲಿ, ಇತರರು ಮಾತಾಡುವಾಗ ಕೇಳುವ ವ್ಯವಧಾನ ನಮಗೆ ಬರುವಂತೆ ಆಗಲಿ, ಗುರು ಕರುಣೆ ನಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ. ಹರೇ ರಾಮ.
ಸಂಸನಾಭ
February 26, 2011 at 4:04 PM
ವಸ೦ತನ ಆಗಮನ ಸಮುದ್ರದ ಅಲೆಗಳ೦ತೆ ಮೇಲೇಳುತಿದೆ, ಬೀಸುತ್ತಿದೆ, ಬರುತ್ತಿದೆ, ವಸ೦ತನ ಆಗಮನದ ಕುರುಹು.. ಇನ್ನೇನು ಎರಡೇ ಪಕ್ಷದಲ್ಲಿ ಬರಲಿದೆ..
ಹೃದಯವೆಲ್ಲ ಕಣ್ಣಾಗಲಿ, ಕಣ್ಣೆಲ್ಲ ಹೃದಯವಾಗಲಿ..
ಮನವೆಲ್ಲ ಕಿವಿಯಾಗಲಿ, ಕಿವಿಯೆಲ್ಲ ಮನವಾಗಲಿ..
ಪ್ರಕೃತಿಯೆ ಕವಿಯಾಗಲಿ, ರಚಿಸಲಿ ನವ ಕಾವ್ಯಗಳ..
ಕಣ್ಣು ಕಿವಿ ಮನ ಹೃದಯವೆಲ್ಲ ಚಿ೦ತನೆಗಳೆಲ್ಲ ಜಗವೆಲ್ಲ ಕವಿಮನವಾಗಲಿ.. ಸುಮವಾಗಲಿ.. ಆ ಸುಮಗಳೆಲ್ಲಾ ನಾವ್ ನಡೆಯುವಎಡೆಯೆಲ್ಲ ಕಾಣುತ್ತಿರಲಿ ಬೀಳುತ್ತಿರಲಿ.. ಬೀಳಲು ಬಿಡೆವು ಹೃದಯ ಕೊಡುವೆವು ಅದಕ್ಕೆ..
.
ಶ್ರೀ ಗುರುಭ್ಯೋ ನಮಃ
February 27, 2011 at 8:35 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಹೌದು. ಮೋಡಗಳೆಲ್ಲ ಮರೆಯಾಗಿ ಸೂರ್ಯ ಪ್ರಕಾಶವು ವಿಶ್ವದಲ್ಲೆಲ್ಲ ಪಸರಿಸುವ ಸಮಯ ಹತ್ತಿರವಾದಂತಿದೆ. ಪ್ರಕೃತಿ ನಿಯಮದಂತೆ ಮುಂದೆಂದಾದರೂ ಮೋಡ ಒಂದು ಕ್ಷಣ ಅಡ್ಡ ಬಂದರೂ ಸೂರ್ಯ ದೇವನೇ… ನಿನ್ನ ಸ್ಮರಣೆ ಜಗಕೆ ಮರೆಯದಿರಲಿ…… ಎಂದೆಂದೂ ಕರುಣೆ ಇರಲಿ……
February 27, 2011 at 9:21 PM
ಕಣ್ಣು ಬೇಕೆಂದಾಗ ತೆರೆಯಬಹುದು ಮುಚ್ಚಲೂ ಬಹುದು. ಕಿವಿ ಸದಾ ತೆರೆದೇ ಇರುತ್ತದೆ. ಬಹುಶೃತನಾಗೆಂದು.
ಶ್ರೀ ಗುರುಭ್ಯೋ ನಮಃ
February 27, 2011 at 9:32 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಕಣ್ಣು ಕಿವಿಗಳ ಮೂಲಕ ಒಳ ಹೋಗುವ ಎಲ್ಲ ವಿಷಯಗಳನ್ನೂ “ಗುರು” ಗಳ ಮೂಲಕವಾಗಿಯೇ ಒಳ ಕಳಿಸಿದರೆ ಅಗತ್ಯವಿರುವ ವಿಷಯಗಳು ಮಾತ್ರ ಒಳ ಸೇರುತ್ತವೆ. ಖಂಡಿತವಾಗಿಯೂ ನಾವೆಲ್ಲಾ ಬಹುಶ್ರುತರಾಗಬಹುದು ಎನಿಸುತ್ತದೆ.
March 2, 2011 at 6:59 AM
Missing Gurugalu from long time..
.
ವಾಲ್ಮಿಕಿಯೊ೦ದಿಗೆ ಹೆಜ್ಜೆಯಿರಿಸಿದ್ದೇವೆ ನದಿಗೆ.. ವಾಲ್ಮಿಕಿ ಪಟ್ಟಷ್ಟೆ ನೋವು ಪಟ್ಟಿದ್ದೇವೆ ಅ೦ತರ೦ಗದಿ ಪಕ್ಷಿಗಳ ಕ೦ಡು..
ರಾಮನೊ೦ದಿಗೆ ಬಾಣ ಬಿಟ್ಟಿದ್ದೇವೆ ದ೦ಡಕಾರಣ್ಯದಲ್ಲಿ ಶೂರ್ಪಣಕಿ ಕಳಿಸಿದ ರಾಕ್ಷಸರಿಗೆ..
ಜಟಾಯುವಷ್ಟೆ ವೃದ್ಧ ಸುಖಪಟ್ಟಿದ್ದೇವೆ ನೋವಿನಲ್ಲಿ..
ಗುರುಗಳ ರಾಮಾಯಣ ಪ್ರವಚನ ಲೇಖನಗಳಿ೦ದ ರಾಮಪ್ರಿಯರು ಹುಟ್ಟುವರು – ಹೆಚ್ಚು ಹೆಚ್ಚು ಬೆಳೆಯವರು..
ರಾಮಾಯಣವನ್ನು ನೆನೆಸಿದ ಪ್ರತಿಕ್ಷಣವೂ ಲೋಕೋಪಯೋಗಿ, ರಾಮಾಮೃತವನ್ನು ಉಣಬಡಿಸುವ ಪ್ರತಿತಾಣದಲ್ಲು ಬಹು ಶಿವಯೋಗಿ..
ಭಾರತವೆ೦ಬ ಮಾತೆಗೆ ರಾಮನಲ್ಲವೆ ಜೀವ, ರಾಮತತ್ತ್ವವಲ್ಲವೆ ಬೀಜ
.
ಶ್ರೀ ಗುರುಭ್ಯೋ ನಮಃ
March 2, 2011 at 8:16 AM
Hare Rama,
We are also feeling same thing.
ಗುರುಗಳ ಕರುಣಾದೃಷ್ಟಿಯ ಒಂದು ಪುಟ್ಟ ಹನಿ ಈ ಹರೇರಾಮದತ್ತ ಒಮ್ಮೆ ಬಿದ್ದರೆ ಚೆನ್ನಾಗಿತ್ತೇನೋ!
February 18, 2012 at 8:14 PM
harerama adakkagi kayuvavarestu jana
March 2, 2011 at 7:01 AM
ಇದೋ ಇಲ್ಲಿದೆ ಅದ್ಭುತ ಅಮೃತ ಅವಕಾಶ, ಈ ಶಿವರಾತ್ರಿಯ೦ದು ಹಗಲು-ರಾತ್ರಿ ಪೂರ ಗುರುಗಳ ಲೇಖನ ಓದುತ್ತ ಪ್ರವಚನ ಕೇಳುತ್ತ ಪ್ರತಿಕ್ರಿಯೆಗಳ ಬರೆಯುತ್ತ ಶಿವನೊಡನೆ ಉಪವಾಸ ಮಾಡಬಹುದು – ಶಿವನೊಡನೆ ಜಾಗ್ರತರಾಗಿರಬಹುದು.
.
ಶ್ರೀ ಗುರುಭ್ಯೋ ನಮಃ
March 2, 2011 at 8:20 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಎಷ್ಟು ಒಳ್ಳೆ ಸಲಹೆ! ಅಧ್ಬುತ ಕಲ್ಪನೆ….
March 2, 2011 at 9:18 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಶಿವನು ಪ್ರತ್ಯಕ್ಷನಾಗುವವರೆಗೆ ಕಲ್ಪನೆ! ಆಮೇಲೆ ವಾಸ್ತವ…..
February 18, 2012 at 6:39 PM
ವರುಶ ಕಳೆಯಿತು ರಾಮನ ಕಾಣದೆ..
ಇನ್ನು ಉಪವಾಸವಿರಲು ಸಾಧ್ಯವಿಲ್ಲ..
ಕೇಳಲೇ ಬೇಕು.. ಗುರುಗಳೇ ನೀವು ಹೇಳಲೇ ಬೇಕು…
ಕೃಪೆತೋರಿ…
August 7, 2012 at 8:43 AM
ಕೆಳುತಿವೆ ಕಿವಿಗಳು
ರಾವಣನ ಆರ್ಭಟಗಳನ್ನು
ಎರಡು ದಿನಗಳಿಂದ ಆಗಿವೆ ಬಿಸಿ ಮನ, ಕಿವಿಗಳೆರಡು
ತಮ್ಪೆರೆಯೋ ಬೇಗ ಶ್ರೀರಾಮ ನಿನ್ನ ಕಥೆಯಿಂದ.
September 2, 2012 at 4:45 PM
|| ಹರೇ ರಾಮ ||
ಶ್ರೀ ಗುರುಗಳ ಶ್ರೀ ಚರಣಗಳಿಗೆ ನಮಿಸುತ್ತಾ, ನನ್ನ ಕೆಲ ಅನಿಸಿಕೆಗಳನ್ನು ವಾಚಕರೊಂದಿಗೆ ಹಂಚಿ ಕೊಳ್ಳ ಬಯಸುತ್ತೇನೆ.
ಶ್ರೀಮದ್ ರಾಮಾಯಣದಂತಹ ಗ್ರಂಥಗಳು ನಿತ್ಯ ಪಾರಾಯಣ ಗ್ರಂಥಗಳೆನ್ನುವುದು ಬಹುಶ್ಯ್ಹ ಇದಕ್ಕೆ ಏನೋ! ಅಂತಹ ಶ್ರೇಷ್ಠ ಕ್ರತಿಗಳನ್ನೂ ನಮ್ಮ ಇಂದಿನ ಕಾಲಕ್ಕೆ, ಜೀವನ ಕ್ರಮಕ್ಕೆ ಸೂಕ್ತವಾದ ರೀತಿಯಲ್ಲಿ ತಿಳಿಯಪಡಿಸುವ ನಮ್ಮ ಶ್ರೀ ಗುರುಗಳ ವಿಶ್ಲೇಷಣ ಶೈಲಿ ಅನಿರ್ವಚನೀಯವಾದದ್ದು!!!
ಬಹು ಶ್ರುತಾಹ ಎನ್ನುವ ಈ ಲೇಖನದಲ್ಲಿ ಇರುವ ತತ್ವ ಈವತ್ತಿಗೆ ಅತೀ ಅಗತ್ಯವಾದದ್ದು. ಈವತ್ತು ನಮ್ಮ ಮನೆಗಳಲ್ಲಿ ಆಫೀಸುಗಳಲ್ಲಿ ಯಾವುದೇ ವಿಷಯವನ್ನು ಸಂಪೂರ್ಣವಾಗಿ ಕೇಳುವ ಅರ್ಥೈಸಿಕೊಳ್ಳುವ ತಾಳ್ಮೆ, ವ್ಯವಧಾನ, ಮನಸ್ಥಿತಿ ತುಂಬಾ ಕಡಿಮೆ ಆಗುತ್ತಾ ಬಂದಿರುವುದು ವಿಚಾರ ಯೋಗ್ಯವಾದುದು. ನಾವುಗಳು ಶ್ರೀ ಗಣೇಶನ ಭಕ್ತರೆಂದು ಹೇಳಿಕೊಳ್ಳುತ್ತಿದ್ದರೂ ನಮಗೆಲ್ಲ ಗಣೇಶನಿಗೆ ತದ್ವಿರುದ್ಧವಾಗಿ ಕಿವಿ ಚಿಕ್ಕದು ಬಾಯಿ ತುಂಬಾ ದೊಡ್ಡದು!!!
ಶ್ರೀ ಗುರುಗಳು ನಮಗೆ ದಯಪಲಿಸುತ್ತಿರುವ ಲೇಖನಗಳು, ಪ್ರವಚನಗಳು, ಕವನಗಳು, ಸಂದರ್ಶನಗಳು, ರಾಮಕಥಾ ಮಾಲಿಕೆಗಳೇ ಮೊದಲಾದ ಪಂಚ ಭಕ್ಷ ಭೋಜನಗಳನ್ನು ಕಂಠ ಪೂರ್ತಿ ಉಂಡು ಅರಗಿಸಿಕೊಂಡು ನಮ್ಮ ಬಾಳಿನಲ್ಲಿ ಅಯೋಧ್ಯೆಯ ಅರಸುಗಳಂತೆ ‘ ಬಹುಶ್ರುತ ‘ ರಾಗಿ ತನ್ಮೂಲಕ ಜೀವನ ಸಾರ್ಥಕ್ಯ ಕಂಡುಕೊಳ್ಳೋಣ ಎಂದು ಆಶಿಸುವ ತಮ್ಮ ಭಕ್ತ.
|| ಹರೇ ರಾಮ ||
June 10, 2014 at 4:42 PM
Aruna Kukkemane
June 10th 2014
|| ಶ್ರೀ ಗುರುಭ್ಯೋ ನಮಃ ||
ಬಹುಶ್ರುತಾಹ-ಹಸುವಿನ ಅಂಬಾ ಧ್ವನಿ, ಕರುವಿನ ಕೊರಳಿನ ಕಿರುಗೆಜ್ಜೆಯ ಕಿಣಿಕಿಣಿ ನಾದ, ಪಕ್ಷಿಗಳ ಚಿಲಿಪಿಲಿ, ವೇದಘೋಷ, ಆಧ್ಯಾತ್ಮಿಕ ಪ್ರವಚನಗಳು, ಕೊಳಲಿನ ನಾದ, ತಾಯಿ ಮಗುವಿನ ತೊಟ್ಟಿಲು ತೂಗುತ್ತಾ ಹಾಡುವ ಧ್ವನಿ, ಪ್ರಶಂತವಾಗಿ ಹರಿಯುವ ನೀರಿನ ಝುಳು ಝುಳು, ಸಾಗರದ ಅಲೆಗಳ ಮೊರೆತ, ಮಳೆ ನಿಂತು ಹೋದ ಬಳಿಕ ಎಲೆಗಳಿಂದ ತೊಟ್ಟಿಕ್ಕುವ ನೀರ ಹನಿಗಳ ಸದ್ದು, ಮಳೆಗಾಲದಲ್ಲಿ ಓದುವ ರಾಮಾಯಣ ಹಾಗೂ ಕುಮಾರ ವ್ಯಾಸನ ಭಾಮಿನಿ ಷಟ್ಪದಿಯ ಮಹಾಭಾರತ ಕಥಗಳನ್ನು ಕೇಳುತ್ತಾ ಬಹುಶ್ರುತರಾಗಿ ಎಂದು ಹರಸಿ ಗುರುದೇವಾ.