ತಮೋನಿರ್ಮುಕ್ತೆ ತಮಸೆಯ ಪರಿಶುದ್ಧಪ್ರವಾಹ . .
ಮುಗಿಲು ಮುತ್ತಿಕ್ಕುವ ಗಿರಿಶಿಖರಗಳ ಅಚಲತೆ, ಗಾಂಭೀರ್ಯ, ಔನ್ನತ್ಯ . . .
ಝರಿಗಳ ತಂಪು, ಹಸಿರಿನ ಸೊಂಪು, ಕುಸುಮಗಳ ಕಂಪುಗಳೊಡನೆ ಕಂಗೊಳಿಸುವ ಕಾನನಮಂಡಲ…
ಅಲ್ಲೊಂದು…
ಪಾವನತೆಯೇ ಪಡಿಮೂಡಿದಂತಿದ್ದ ಪರ್ಣಕುಟಿ…
ಅಲ್ಲಿ. . .
ಮೈಮೇಲೆ ಹುತ್ತವೇ ಬೆಳೆದರೂ ಅರಿವಾಗದಂತೆ ಮೈಮರೆತ ಪರಮ ತನ್ಮಯತೆಯ ಮಹಾಮುನಿ. . .
ಆ ಮುನಿಯ ಮಹಾಮನದಲ್ಲಿ ಮೂಡಿಬಂದಿತ್ತೊಂದು ಮಹಾಪುರುಷನ ದಿವ್ಯ ಮೂರ್ತಿ. . .
ತಮಸೆಯ ಪರಿಶುದ್ಧಿ. .
ಗಿರಿಶಿಖರಗಳ ಅಚಲತೆ, ಉನ್ನತಿ, ಗಾಂಭೀರ್ಯ. .
ಕಾನನಗಳ ಸೌಂದರ್ಯ,ಸೌಮ್ಯತೆ . .
ಆಶ್ರಮದ ಪವಿತ್ರತೆ . .
ಮುನಿಯತ್ಯಾಗ..
ಇವೆಲ್ಲವೂ ಮೇಳೈಸಿದ್ದವು ಆ ಮೂರ್ತಿಯಲ್ಲಿ..
ಕೋಟಿಸೂರ್ಯ ಪ್ರಕಾಶ..!!!
ಆದರೆ ಕೋಟಿ ಚಂದ್ರರ ತಂಪು..!!!!!
ಆ ಮೂರ್ತಿಯ ಮೂಲದ್ರವ್ಯ ಶಿಲೆಯಾಗಿರಲಿಲ್ಲ – ಚೈತನ್ಯದ ಸೆಲೆಯಾಗಿತ್ತು..!!
ಮರದ ಮೂರ್ತಿಯದಲ್ಲ – ಅಮರ ಮೂರ್ತಿ..!!
ಮೃಣ್ಮಯವಲ್ಲ – ಚಿನ್ಮಯಮೂರ್ತಿ..!!
ಒಂದೇ ಒಂದೂ ಕುಂದೂ ಇಲ್ಲದ ಚಂದದ ಮೂರ್ತಿ…
ಒಮ್ಮೆ ನೋಡಿದರೆ ಮತ್ತೊಮ್ಮೆ..
ಮತ್ತೊಮ್ಮೆ ನೋಡಿದರೆ ಮಗದೊಮ್ಮೆ..
ನೋಡುತ್ತಲೇ ಇರುವಂತೆ ಮಾಡುವ ಮಾಟ..
ಜೀವಕೋಟಿಯ ನೋಟವನ್ನೆಲ್ಲ ತನ್ನೆಡೆಗೆ ಸೆಳೆಯುವ ಹೂಟ..
ಕಬ್ಬಿಣದ ದೃಷ್ಟಿಯನ್ನೂ ಕದಲಗೊಡದ ಚುಂಬಕಮೂರ್ತಿ…
ಹೃದಯಕಮಲದಲ್ಲಿ ಕುಳಿತು ಆ ಮೂರ್ತಿ ಮುನಿಯ ಹೊರಗಣ್ಣು ಮುಚ್ಚಿಸಿ…ಜಗವ ಮರೆ ಮಾಡಿತು…
ಒಳಗಣ್ಣು ತೆರೆಯಿಸಿ ತನ್ನನ್ನು ತಾನೇ ತೋರಿಸಿತು…!!
ಸೂರ್ಯನ ಗುರುತ್ವಾಕರ್ಷಣೆಗೆ ಸಿಕ್ಕಿ, ಸೂರ್ಯನಿಂದ ದೂರ ಸರಿಯಲಾರದೇ, ಸೂರ್ಯನ ಸುತ್ತವೇ ಸತತವಾಗಿ ಸುತ್ತುವ ಭೂಮಿಯಂತಾಯ್ತು ಮುನಿಯ ಮನ..
ತನ್ನೊಳಗೇ ತಾನು ಆ ಮಂಗಲಮೂರ್ತಿಯನ್ನೇ ಕಾಣುತ್ತಾ . . . .
ಕಣ್ಣು ಹಿಂದಿರುಗಿಸಲಾರದೇ……….
ಸ್ವಯಂ ಮೂರ್ತಿಯಂತೆಯೇ ಕುಳಿತ ಮುನಿಗೆ ಮೈಮೇಲೆ ಹುತ್ತ ಬೆಳೆದರೂ ಗೊತ್ತಾಗಲೇ ಇಲ್ಲ . . . ! ! !
March 5, 2010 at 9:02 AM
Hare raama
ತಮೋನಿರ್ಮುಕ್ತೆ ತಮಸೆಯ ಪರಿಶುದ್ಧಪ್ರವಾಹ . .
ಮುಗಿಲು ಮುತ್ತಿಕ್ಕುವ ಗಿರಿಶಿಖರಗಳ ಅಚಲತೆ, ಗಾಂಭೀರ್ಯ, ಔನ್ನತ್ಯ . . .
ಝರಿಗಳ ತಂಪು, ಹಸಿರಿನ ಸೊಂಪು, ಕುಸುಮಗಳ ಕಂಪುಗಳೊಡನೆ ಕಂಗೊಳಿಸುವ ಕಾನನಮಂಡಲ…
ಅಲ್ಲೊಂದು…
ಪಾವನತೆಯೇ ಪಡಿಮೂಡಿದಂತಿದ್ದ ಪರ್ಣಕುಟಿ… tumbaaa channagide,
alli kulitu ramayanavannomme keluva
nanasaaguttide,munde
namage intha avakasha sigabahude?
Pranamagalu
March 5, 2010 at 11:19 AM
ಹರೇ ರಾಮ….
ನಿರೀಕ್ಷಣೆಯೂ ಒಂದು ತಪಸ್ಸೇ ಅಲ್ಲವೇ….!!!!
ಮುಂದಿನ ಭಾಗದ ನಿರೀಕ್ಷಣೆಯಲ್ಲಿ…..
February 20, 2011 at 2:10 PM
We are missing your comments…
.
Shri Gurubhyo Namaha
March 5, 2010 at 12:06 PM
ಪುಂಸಾಂ ಮೋಹನರೂಪಾಯ ಪುಣ್ಯಶ್ಲೋಕಾಯ ಮಂಗಳಂ…
ಸತ್ವಪೂರ್ಣ ಧರ್ಮಮಯ ಮಂಗಳಮೂರ್ತಿಶ್ರೀ ರಾಮಚಂದ್ರನ ಚರಣಕಮಲಗಳಲ್ಲಿ ಕೋಟಿ ನಮನಗಳು..
ಹರೇರಾಮ
February 20, 2011 at 2:12 PM
We are missing your comments..
.
Shri Gurubhyo Namaha
March 5, 2010 at 12:27 PM
hare rama,
rama nama smaraNeyalli
March 5, 2010 at 1:17 PM
ಹರೇ ರಾಮ,
ವಂದೇ ವಾಲ್ಮೀಕಿಕೋಕಿಲಮ್ ||
March 5, 2010 at 5:34 PM
ಹರೇರಾಮ,
ವಾಲ್ಮೀಕಿ ಆ ಮರ,ಈ ಮರ ಹೇಳಿ ರಾಮ ರಾಮ ಎಂದು ರಾಮನ ದರ್ಶನ ಮಾಡಿ ಅಮರನಾದ,ಹಾಗೆಯೇ ಜಗತ್ತಿನ ಜೀವ ಜಂತುಗಳೆಲ್ಲ ರಾಮನ ಸ್ಮರನೆ ಮಾಡಿ ಸದ್ಗತಿ ಹೊಂದುವಂತೆ ಗುರುವು ದಾರಿ ತೋರಿಸಲಿ
March 5, 2010 at 5:43 PM
ಬದುಕ ಬೇಸಿಗೆಯಲ್ಲಿ,
ಉರಿವ ಸೂರ್ಯನ ದಗೆಗೆ,
ಬಳಲಿ ಬಸವಳಿದು,
ಉಸ್ಸೆಂದು ಧರೆಗೊರಗಿ,
ಕುಳಿತ ಗಳಿಗೆಯಲಿ,
ಭರತ ತಂದೊರಗಿಸಿದ,
ಸಿಹಿಯ ಗಂಗೆಯ ತೆರದಿ,
ಬರುತಿರುವ
ನಮ್ಮೆಲ್ಲರ ಶ್ರೀರಾಮನ
ಪಾವನ,ಪುನೀತ ಕಥನ.
ಗುರೂಜಿ, ನಿಮಗಿದೋ..
March 5, 2010 at 6:41 PM
ಪರಮ ಪಾವನೆಯಾದ ಆ ನದಿಗೇಕೆ ’ತಮಸಾ’ ಎಂಬ ಹೆಸರು?
February 20, 2011 at 12:19 PM
ತಮಸ್ಸನ್ನು ಕಳೆಯುತ್ತಾಳೆ ಎಂದಿರಬೇಕು..
March 5, 2010 at 7:44 PM
ಮಹಾಪುರುಷರೆಂದೂ ಹಾಗೆಯೇ ಅಲ್ಲವೇ? ಲೋಕಕಲ್ಯಾಣಾರ್ಥವಾಗಿ ತಮ್ಮ ಅಂತರಂಗದಲ್ಲಿ ಎನನ್ನು ಕಾಣುತ್ತಾರೋ ಅದು ಬಹಿರಂಗದಲ್ಲಿ ಕಾಣಲಿ. ಜಗತ್ತಿಗೆ ಅದರಿಂದ ಒಳ್ಲೆಯದಾಗಲಿ ಎಂದು ಬಯಸುತ್ತಾರೆ.
ಮಹಾತ್ಮರ, ಮಹಾಪುರುಷರ, ದೇವತಾ ಸ್ವರೂಪರುಗಳ ಮನಸ್ಸಿನಲ್ಲಿ ಏನು ಉದಯಿಸುತ್ತದೋ ಅದು ಬಹಿ: ಪ್ರಪಂಚಕ್ಕೆ ಪೂರ್ಣ ರೂಪದಿಂದ ಸಿಗುತ್ತದೆ. ವಿಶ್ವ ಗೋ ಸಮ್ಮೇಳನ, ವಿಶ್ವ ಮಂಗಲ ಗೋಗ್ರಾಮ ಯಾತ್ರೆಗಳೂ, ಮಹಾಮಂಡಲ-ಮಂಡಲಗಳ ರಚನೆಗಳೂ ಅದರ ಮೂರ್ತ ರೂಪಗಳೇ ಅಲ್ಲವೇ………….
March 5, 2010 at 9:02 PM
ಹರೇ ರಾಮ.
ಭಗವಂತನ ಧ್ಯಾನ ಕೇವಲ ನೆಪಕ್ಕಾಗಿ ಅಲ್ಲ. ಅಂತರಾತ್ಮದಲ್ಲಿ ಭಗವಂತನ ಧ್ಯಾನದಿಂದ ಆತನ ಕೃಪೆಗೆ ಸಾಧ್ಯ.
ಶ್ರೀ ಗುರುಭ್ಯೋ ನಮಃ
March 6, 2010 at 8:45 AM
Horagannanu muchisi olagannu thereyisi gurugale
March 6, 2010 at 9:33 AM
Hareraama,Vaalmiki darushana adbhuthavagithu ,
Ramana Darushanakkagi Shabariyagiddene
March 9, 2010 at 10:34 PM
ಜೈ ಗಣೇಶ
ಶ್ರೀ ಗುರುಭ್ಯೋ ನಮಃ
.
.
ತಾ೦ಡವ ಆಡುವ ಒಳ ಹೊರ ಮನಸನ್ನು ನಿಗ್ರಹಿಸಿ, ಕ್ಷಣವಲ್ಲ ಯುಗಗಳನ್ನೆ ಕಳೆಯುವ ಸ್ಥಿತಿ ತಲುಪಿದ್ದ ಋಷಿ ವಾಲ್ಮಿಕಿಯ ಸ್ಥಿರ ಅ೦ತರ೦ಗದಲಿ ತರ೦ಗಗಳನ್ನು ಎಬ್ಬಿಸಿ, ಪರದೆಯೊಳ್ ಮಹಾಕಾವ್ಯವ ಮೂಡಿಸಿ ಕವಿಯಾಗಿ ಮಾಡಿಸಿದ ನಾರಾಯಣ, ಕಾಣಿಕೆಯಾಗಿ ರಾಮನ ಅ೦ತರ೦ಗದ ಪೂರ್ಣ ದರ್ಶನ ಮಾಡಿಸಿದ….?
.
ಸ್ಥಾಣುವಾಗಿ ಕುಳಿತು, ಸ್ವ೦ತವನ್ನು ಮರೆತು, ಆನ೦ದವನ್ನೆ ನೆನೆಯುತ್ತಿರುವಾಗ ಮೂಡಿದ ರಾಮನ, ರಾಮಾಯಣದ ಅನ೦ತ ವರ್ಣಚಿತ್ರಗಳ ನೋಡುತ್ತ ನೋಡುತ್ತ ಇನ್ನೂ ಕಳೆದು ಹೋದನೆ ವಾಲ್ಮಿಕಿ.. ಈ ಸ್ಥಿತಿಯಲ್ಲಿ ವಾಲ್ಮಿಕಿ ಕಳೆದ ಯುಗಗಳೇಷ್ಟೋ..
.
ನಿಸರ್ಗ ತ೦ಗಾಳಿ ನದಿಯ ದ೦ಡೆ ಸ೦ಗೀತದ ನಡುವಿನಿ೦ದ ಧ್ಯಾನದ ಮಡುವಿಗೆ, ಧ್ಯಾನದ ಮಡುವಿನಿ೦ದ ನಾರಾಯಣನ ತೆಕ್ಕೆಗೆ ಸೇರಿ ತೇಲುತ್ತಲಿರುವಾಗ, ಶ್ಲೋಕದ ರೂಪ ಕೊಡುವ ಕಷ್ಟ ಮತ್ತು ಸುಖ.