<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HareRaama.in : Official homepage of Sri Sri Raghaveshwara Bharati Mahaswamiji &#187; ಬ್ಲಾಗ್</title>
	<atom:link href="http://hareraama.in/category/blog/feed/" rel="self" type="application/rss+xml" />
	<link>http://hareraama.in</link>
	<description>Official homepage of Sri Sri Raghaveshwara Bharati Mahaswamiji</description>
	<lastBuildDate>Thu, 29 Jul 2010 12:48:29 +0000</lastBuildDate>
	<generator>http://wordpress.org/?v=2.9.2</generator>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಕಾವ್ಯ ಕನ್ನಿಕೆಗಾಗಿ ವರಕಂಠದ ಅನ್ವೇಷಣೆ..!</title>
		<link>http://hareraama.in/blog/kavya-kannikege-vara-kanta/</link>
		<comments>http://hareraama.in/blog/kavya-kannikege-vara-kanta/#comments</comments>
		<pubDate>Thu, 22 Jul 2010 00:30:49 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[ರಾಘವೇಶ್ವರ]]></category>
		<category><![CDATA[ಲವಲವಿಕೆ]]></category>

		<guid isPermaLink="false">http://hareraama.in/?p=5880</guid>
		<description><![CDATA[ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..
ಆಮೇಲೆ ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..
ಎಲ್ಲೆಡೆ ಎದ್ದು ಕಾಣುವ ತಥ್ಯವಿದು..

ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ ವ್ಯಕ್ತವಾಗುವುದು..!?
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ ಯೋಜನೆಗಳಲ್ಲವೆ, 

ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?
ಕದನಗಳು ಮೊದಲಾಗುವುದು ಮನಸಿನಲ್ಲಿ ..
ಪತನಗಳು ಮೊದಲಾಗುವುದು ಮನಸಿನಲ್ಲಿ..]]></description>
			<content:encoded><![CDATA[<p style="text-align: center;"><strong>|| ಹರೇ ರಾಮ ||</strong></p>
<p>ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..<br />
ಆಮೇಲೆ  ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..<br />
ಎಲ್ಲೆಡೆ ಎದ್ದು ಕಾಣುವ  ತಥ್ಯವಿದು..</p>
<p>ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ  ವ್ಯಕ್ತವಾಗುವುದು..!?<br />
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ  ಯೋಜನೆಗಳಲ್ಲವೆ,</p>
<p>ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?<br />
ಕದನಗಳು  ಮೊದಲಾಗುವುದು ಮನಸಿನಲ್ಲಿ ..<br />
ಪತನಗಳು ಮೊದಲಾಗುವುದು ಮನಸಿನಲ್ಲಿ..<br />
ವಿಜಯ-ಪರಾಭವಗಳು  ಮೊದಲಾಗುವುದು ಮನಸಿನಲ್ಲಿ ..<br />
ಹುಟ್ಟುವುದೆಲ್ಲವೂ ಮೊದಲು ಒಳಗೇ ಹುಟ್ಟಬೇಕು..<br />
ಸಾಯುವುದೆಲ್ಲವೂ  ಮೊದಲು ಒಳಗೇ ಸಾಯಬೆಕು..<br />
ಇದು ಸೃಷ್ಟಿಯ ನಿಯಮ..</p>
<p>ಪ್ರಾಣಿಗಳು ಅಮ್ಮನ ಒಳಗೆ  ಗರ್ಭವಾಗಿ ಮೊದಲು ಹುಟ್ಟುತ್ತವೆ,<br />
ಜಗತ್ತಿಗೆ ಪ್ರಸವದ ಮೂಲಕ ಪ್ರಕಟವಾಗುತ್ತವೆ..<br />
ಪಕ್ಷಿಗಳು  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನ್ಮ ತಾಳುತ್ತವೆ..<br />
ಅಮ್ಮನ  ಹೊಟ್ಟೆಯೊಳಗೆ &#8211; ಅದರೊಳಗಿನ ಮೊಟ್ಟೆಯೊಳಗೆ ಜನ್ಮ ತಾಳುತ್ತವೆ..!<br />
ಸಾವಂತೂ  ಸದ್ದಿಲ್ಲದಂತೆ ಮೊದಲೊಳಸೇರಿ..<br />
ಗೆದ್ದಲಿನಂತೆ ಕೆಲಸವನ್ನು  ಮಾಡಿ, ಮತ್ತೆ  ಸುದ್ದಿಯಾಗುತ್ತದೆ..!</p>
<p>ಹೆಚ್ಚು ಮಾತೇಕೆ..?<br />
ವಿಶ್ವ ಸೃಷ್ಟಿಯೇ ಹೀಗೆ..<br />
ಈಶ್ವರನ  ಅಂತರಂಗದಲ್ಲಿ ಮಹಾಸಂಕಲ್ಪ ರೂಪದಲ್ಲಿ ಜಗವು ಮೊದಲು ಸೃಷ್ಟಿಯಾಯಿತು..<br />
ಆಮೇಲೆ ತಾನೇ  ಬಹಿರಂಗದಲ್ಲಿ ವಿಶ್ವರೂಪವಾಗಿ ಪ್ರಕಟವಾದದ್ದು..?</p>
<p>ಈ ಸನ್ನಿವೇಶದಲ್ಲಿ ಪೂಜ್ಯ.  ರಾಮಭದ್ರಾಚಾರ್ಯರು ಕೊಡುತ್ತಿದ್ದ ಉದಾಹರಣೆಯೊಂದು ನೆನಪಾಗುತ್ತದೆ..<br />
ಕೆ.ಆರ್.ಎಸ್.ಕಟ್ಟಿದ್ದು  ವಿಶ್ವೇಶ್ವರಯ್ಯನವರೆಂದು ಜಗತ್ತೇ ಹೇಳುತ್ತದೆ.<br />
ನಿಜವಾಗಿಯೂ ಆ ಕೆಲಸ ಮಾಡಿದ್ದು  ಸಾಮಾನ್ಯ ಕೂಲಿಕಾರರು- ಮೇಸ್ತ್ರಿಗಳಲ್ಲವೇ.?<br />
ವಿಶ್ವೇಶ್ವರಯ್ಯನವರೇನು  ಕಲ್ಲು-ಮಣ್ಣುಗಳನ್ನು ಹೊತ್ತಿದ್ದುಂಟೇ..?<br />
ಗಾರೆ ಕಲಸಿ ಮೆತ್ತಿದ್ದುಂಟೇ&#8230;?<br />
ನಿಜ,  ವಿಶ್ವೇಶ್ವರಯ್ಯನವರು ಜಲ್ಲಿಕಲ್ಲುಗಳನ್ನು ಮುಟ್ಟದಿರಬಹುದು..<br />
ಆದರೆ,  ಕೆ.ಆರ್.ಎಸ್.ಮೊದಲು ನಿರ್ಮಾಣವಾದದ್ದು ಅವರ ಬುದ್ದಿ-ಹೃದಯಗಳಲ್ಲಿ..!<br />
ಅವರ  ಕಲ್ಪನೆ-ಯೋಜನೆಗಳಿಗೆ ಬಹಿರಂಗದಲ್ಲಿ ಆಕಾರ ಕೊಟ್ಟವರು ಕಾರ್ಮಿಕರು-ಮೇಸ್ತ್ರಿಗಳು..<br />
ವಿಶ್ವೇಶ್ವರಯ್ಯನವರ  ಯೋಜನೆಯಿಲ್ಲದಿದ್ದರೆ ಕೂಲಿಕಾರರು- ಮೇಸ್ತ್ರಿಗಳು ಕಟ್ಟುವುದಾದರೂ ಏನನ್ನು..?<br />
ಕಾರ್ಮಿಕರು  ಇಲ್ಲದಿದ್ದರೆ ವಿಶ್ವೇಶ್ವರಯ್ಯನವರು ಯೋಜನೆಯನ್ನಿಟ್ಟುಕೊಂಡು ಮಾಡುವುದಾದರೂ ಏನನ್ನು..?</p>
<p>ಒಳ-ಹೊರಗಳು  ಸೇರಿಯೇ ಬದುಕು ಪೂರ್ಣ..!<br />
ಹಾಗೆ ನೋಡಿದರೆ ಜೀವನಕ್ಕೆ ಎರಡೇ ಅಂಗಗಳು..!<br />
ಅಂತರಂಗವೊಂದು.. ಬಹಿರಂಗವಿನ್ನೊಂದು..<br />
ಒಂದಿಲ್ಲದೆ ಇನ್ನೊಂದು ಪೂರ್ಣವಲ್ಲ.<br />
ಬಹಿರಂಗವಿಲ್ಲದ  ಅಂತರಂಗ.. ದೇಹವಿಲ್ಲದ ಜೀವದಂತೆ..ಪ್ರೇತ..!<br />
ಅಂತರಂಗವಿಲ್ಲದ ಬಹಿರಂಗ ಜೀವವಿಲ್ಲದ  ದೇಹದಂತೆ..ಶವ..!</p>
<p>ಈಗ ರಾಮಾಯಣಕ್ಕೆ ಬನ್ನಿ..<br />
ಅಂತರಂಗ-ಬಹಿರಂಗಗಳ  ಅನ್ಯೋನ್ಯಾಶ್ರಯದ ಆಟವನ್ನು ಇಲ್ಲಿಯೂ ನೋಡಿ&#8230;<br />
ಶಬ್ಧಗಳು ಅನುಭವದಲ್ಲಿ  ಪರ್ಯವಸಾನವಾಗಬೇಕು..<br />
ಅನುಭವಗಳು ಪುನಃ ಶಬ್ದರೂಪವನ್ನು ತಾಳಬೇಕು..</p>
<div id="attachment_5890" class="wp-caption alignright" style="width: 160px"><a href="http://hareraama.in/wp-content/uploads/2010/07/ValmikiMaharshi.jpg"><img class="size-full wp-image-5890" title="ValmikiMaharshi" src="http://hareraama.in/wp-content/uploads/2010/07/ValmikiMaharshi.jpg" alt="ಅಂತರಂಗದಲ್ಲೇ ರಾಮಾಯಣವ ಕಂಡ ಮಹಾಮುನಿ" width="150" height="220" /></a><p class="wp-caption-text">ಅಂತರಂಗದಲ್ಲೇ ರಾಮಾಯಣವ ಕಂಡ ಮಹಾಮುನಿ</p></div>
<p>ರಾಮನ ಕುರಿತು  ಕೇಳಿದ್ದು ಅನುಭವಕ್ಕೆ ಬಂದರೆ ಆತ್ಮೋದ್ಧಾರ..<br />
ರಾಮನ ಅನುಭವ ಶಬ್ದಗಳ ರೂಪದಲ್ಲಿ  ಅಭಿವ್ಯಕ್ತಗೊಂಡರೆ ಅದು ಲೋಕೋದ್ಧಾರ..<br />
ಮನದ ಮನೆಯೊಳಗೆ ಮೌನದಲ್ಲಿ &#8211; ತನ್ಮಯತೆಯಲ್ಲಿ  ಕುಳಿತು ವಾಲ್ಮೀಕಿಗಳು ನಾರದರಿಂದ ಸಂಕ್ಷೇಪವಾಗಿ ಕೇಳಿದ್ದನ್ನು ಬಹು ವಿಸ್ತಾರವಾಗಿ  ನೋಡಿದರು..<br />
ಬಳಿಕ ಬ್ರಹ್ಮನಾಣತಿಯಂತೆ ರಾಮಾಯಣದರ್ಶನದ ಅನುಭೂತಿಗೆ ಶಬ್ದಗಳ ರೂಪವನ್ನು  ನೀಡಿದರು..<br />
ಅಬ್ಬಾ..!<br />
ಅದೆಂಥಾ ವಿಸ್ತಾರ..!</p>
<p>ಒಂದೊಂದು ಶ್ಲೋಕದಲ್ಲಿ  ಮೂವತ್ತೆರಡು ಅಕ್ಷರಗಳು..<br />
ಅಂತಹ ಶ್ಲೋಕಗಳು ಇಪ್ಪತ್ತನಾಲ್ಕು  ಸಾವಿರ&#8230;!<br />
ಒಂದೊಂದು ಅಧ್ಯಾಯದಲ್ಲಿ ಅದೆಷ್ಟೋ ಶ್ಲೋಕಗಳು..<br />
ಅಂತಹ ಅಧ್ಯಾಯಗಳು  ಐದುನೂರು..!<br />
ಒಂದೊಂದು ಕಾಂಡದಲ್ಲಿ ಅದೆಷ್ಟೋ ಅಧ್ಯಾಯಗಳು..<br />
ಅಂತಹ ಕಾಂಡಗಳು  ಏಳು..!<br />
ಈ ಮೇರುಕೃತಿ ಯಾವುದೇ ಲಿಪಿಯ ಸಹಾಯವಿಲ್ಲದೆ ಮುನಿಯ ಮನದಲ್ಲಿಯೇ  ರಚಿತವಾಯಿತೆಂದರೆ ಆ ಮೇಧಾಶಕ್ತಿ ಅದೆಂಥದ್ದಿರಬೇಕು..!</p>
<p>ಇಲ್ಲಿಗೆ ರಾಮಾಯಣಾವತಾರದ  ಅಂತರಂಗದ ಭಾಗ ಮುಗಿದಿತ್ತು..<br />
ಬಹಿರಂಗದ ಭಾಗವಿನ್ನಷ್ಟೇ ಪ್ರಾರಂಭವಾಗಬೇಕಿತ್ತು&#8230;!<br />
ಸತ್ಯದ  ಅನ್ವೇಷಣೆ ಮುಗಿದಿತ್ತು..<br />
ಸೇತುವಿನ ಅನ್ವೇಷಣೆ ಆರಂಭವಾಗಿತ್ತು..!<br />
ಇತ್ತ  ವಾಲ್ಮೀಕಿಗಳ ಮನದಲ್ಲಿ ರಾಮಾಯಣದ ರಚನೆಯಾಗಿತ್ತು..<br />
ಅತ್ತ ಲೋಕಕ್ಕೆ ಅದರ ಅಗತ್ಯವೂ  ಅಗಾಧವಾಗಿತ್ತು..!<br />
ಇನ್ನುಳಿದ ಪ್ರಶ್ನೆ- <strong>ನಡುವೆ ಸೇತುವಾಗುವವರು </strong>ಯಾರು..?<br />
ದೇವರನ್ನು  ಲೋಕಕ್ಕೆ ತೋರಲು ದ್ವಾರವೊಂದು ಬೇಕಾಗುತ್ತದೆ..<br />
ಕೌಸಲ್ಯೆಯ ಒಡಲಲ್ಲಿ ಅವತರಿಸಿದ  ರಾಮನು ಲೋಕಕ್ಕೆ ಪ್ರಕಟಗೊಳ್ಳಲು ಅಯೋಧ್ಯೆಯು ದ್ವಾರವಾಯಿತು..<br />
ವಾಲ್ಮೀಕಿಯ ಮನದಲ್ಲಿ  ಅವತರಿಸಿದ ರಾಮನ ಶಬ್ದರೂಪವು &#8211; ರಾಮಾಯಣವು ವಿಶ್ವ ಮುಖಕ್ಕೆ ಪ್ರಕಟಗೊಳ್ಳಲು  ದ್ವಾರವಾವುದು..?<br />
ಅನುಭವವು ಅಕ್ಷರವಾಗಿತ್ತು..ಅಕ್ಷರಕ್ಕೊಂದು ಧ್ವನಿ ಬೇಕಿತ್ತು..!<br />
ದೇವರ  ಹೆಜ್ಜೆಗಳನ್ನು ಲೋಕಕ್ಕೆ ತೋರಬಲ್ಲ ದಿವ್ಯಧ್ವನಿಗಾಗಿ ವಾಲ್ಮೀಕಿಗಳ ಹುಡುಕಾಟ  ನಡೆದಿತ್ತು..!<br />
ಥಿಯರಿ<em> (Theory)</em> ಮತ್ತು ಪ್ರಾಕ್ಟಿಕಲ್ <em>(Practical)</em> ಎಂಬ ಎರಡು ಶಬ್ದಗಳು ಲೋಕದಲ್ಲಿ  ಬಹಳವಾಗಿ ಬಳಕೆಯಲ್ಲಿವೆ..<br />
ಥಿಯರಿ ಎಂಬುದು ಅಂತರಂಗದ ಕಾರ್ಯವಾದರೆ, ಪ್ರಾಕ್ಟಿಕಲ್  ಬಹಿರಂಗ ಕ್ಷೇತ್ರಕ್ಕೆ ಸಂಬಂಧಿಸಿದ್ದು..<br />
ರಾಮಾಯಣವೆಂಬುದು ಥಿಯರಿಗೆ ಸೀಮಿತವಲ್ಲ..<br />
ಅದೊಂದು  ಪ್ರಯೋಗಕಾವ್ಯ..<br />
ಪ್ರಯೋಗವೆಂದ ಮೇಲೆ ಪರಿಣಾಮವಿರಲೇಬೇಕಲ್ಲವೇ..?<br />
ಸರಿಯಾಗಿ  ಪ್ರಯೋಗಿಸಲ್ಪಟ್ಟಾಗ ಜೀವಗಳ ಮೇಲೆ ಅತ್ಯಂತ ಶುಭವಾದ ಪರಿಣಾಮವನ್ನು ಬೀರಬಲ್ಲ  ಕಾವ್ಯವದು..!<br />
ಬದುಕಿನಲ್ಲಿ &#8216;ರಾಮ&#8217;ಗುಣಗಳನ್ನು ತುಂಬಬಲ್ಲ,&#8217;ರಾವಣ&#8217;ದೋಷಗಳನ್ನು  ನಿವಾರಿಸಬಲ್ಲ ಶಬ್ದಾರ್ಥರಸಗಳ ತ್ರಿವೇಣೀಸಂಗಮವದು..!<br />
ರಾಮಾಯಣದ ವಿಷಯ-ವಿನ್ಯಾಸದಲ್ಲಿ  ವಿಜ್ಞಾನವಿದೆ..<br />
ಅಕ್ಷರಜೋಡಣೆಯಲ್ಲಿ ವಿಜ್ಞಾನವಿದೆ..<br />
ಉಚ್ಚಾರಣ ಪ್ರಕಾರದಲ್ಲಿ  ವಿಜ್ಞಾನವಿದೆ..<br />
ರಾಗ-ತಾಳಗಳ ಸಂಯೋಜನೆ-ಪ್ರಸ್ತುತಿಯಲ್ಲಿ ವಿಜ್ಞಾನವಿದೆ..!</p>
<p>ಮರ್ಮವರಿತು  ಪ್ರಯೋಗಿಸಲ್ಪಟ್ಟಾಗ ದಾನವತೆಯಿಂದ ಮಾನವತೆಗೆ..<br />
ಮಾನವತೆಯಿಂದ ಮಾಧವತೆಗೆ ಏರಿಸಬಲ್ಲ  ಜೀವನ ಪರಿವರ್ತನೆಯ ಮಹಾಕಾವ್ಯವದು..!<br />
ಕೇವಲ ಟೈಂಪಾಸ್ ಕಾವ್ಯವಲ್ಲ..!<br />
ಯಾವ  ಸ್ಥಿತಿಯಲ್ಲಿ <em>(wave length)</em> ರಾಮನು ಬದುಕನ್ನನುಭವಿಸಿದನೋ,<br />
ಆ ಸ್ಥಿತಿ <em>(wave  length)</em> ವಾಲ್ಮೀಕಿಗಳಲ್ಲುಂಟಾದಾಗ ತಾನೆ ಅವರಿಗೂ ರಾಮಾಯಣ ದರ್ಶನವಾಯಿತು ..!<br />
ಅದನ್ನು  ಲೋಕಮುಖಕ್ಕೆ ಪ್ರಸ್ತುತಪಡಿಸಲು, ಆ ಸ್ಥಿತಿಯನ್ನು (wave length) ತಲುಪಿ ಹಾಡುವವರೇ  ಬೇಕಲ್ಲವೇ..?<br />
ಆದರೆ.. ಅಂಥವರೆಲ್ಲಿ. . .? ಎಲ್ಲಿ . . ?  ಎಲ್ಲಿ . . ?<br />
ರಾಮಭಾವವನ್ನು  ರಾಮನಾದದಲ್ಲಿ, ರಾಮರಾಗದಲ್ಲಿ, ರಾಮತಾಳದಲ್ಲಿ ಹೊರಗೆ ತರಬಲ್ಲ ಕುಶಲರೆಲ್ಲಿ..?<br />
ಅದೋ..ಬಂದರು..ಬಂದರು..<br />
ವಂದಿಸಿಕೊಂಡರು..<br />
ಭಾವ-ರಾಗ-ತಾಳ  ಕುಶಲರು&#8230;<br />
<strong>ಕುಶ-ಲವರು..!</strong></p>
<p><strong> </strong><em>{ಚಿತ್ರಕೃಪೆ: ಅಂತರ್ಜಾಲ }</em></p>
]]></content:encoded>
			<wfw:commentRss>http://hareraama.in/blog/kavya-kannikege-vara-kanta/feed/</wfw:commentRss>
		<slash:comments>32</slash:comments>
		</item>
		<item>
		<title>ರಾಜ್ಯದಿಂದ ರಾಮನವರೆಗೆ&#8230;&#8230;&#8230;.</title>
		<link>http://hareraama.in/blog/rajyadinda-ramanavarege/</link>
		<comments>http://hareraama.in/blog/rajyadinda-ramanavarege/#comments</comments>
		<pubDate>Sun, 18 Jul 2010 02:18:24 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[bharati]]></category>
		<category><![CDATA[raama]]></category>
		<category><![CDATA[raghaveshwara]]></category>
		<category><![CDATA[sri]]></category>

		<guid isPermaLink="false">http://hareraama.in/?p=5713</guid>
		<description><![CDATA[ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ...
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!]]></description>
			<content:encoded><![CDATA[<p style="text-align: center;">
<p style="text-align: center;"><strong>॥ ಹರೇರಾಮ॥</strong></p>
<p>ಅಬ್ಬಾ..!<br />
ಆಸೆಯ ಆಳವೇನು..ಅಗಲವೇನು..?<br />
ಅದು ಸೃಷ್ಟಿಸುವ ಆಶ್ಚರ್ಯಗಳೇನು..?<br />
ಅಧಃಪತನವೇನು..?ಆನಂದವೇನು..?<br />
ಪರಿತಾಪವೇನು..? ಪರಿಪಾಕವೇನು..? ಪರಿವರ್ತನೆಯೇನು..?</p>
<p><strong>ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!<br />
</strong>ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ&#8230;<br />
ಉಂಡ ಮನೆಗೆ ಎರಡೆಣಿಸಬಹುದು..!<br />
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!<br />
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!<br />
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!<br />
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!<br />
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!<br />
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!</p>
<div id="attachment_5741" class="wp-caption alignright" style="width: 211px"><a href="http://hareraama.in/wp-content/uploads/2010/07/Kireeta-Gold.jpg"><img class="size-medium wp-image-5741" title="Kireeta-Gold" src="http://hareraama.in/wp-content/uploads/2010/07/Kireeta-Gold-201x300.jpg" alt="ಮುಕುಟವೋ ? ಮಾಯೆಯೋ ?" width="201" height="300" /></a><p class="wp-caption-text">ಮುಕುಟವೋ ? ಮಾಯೆಯೋ ?</p></div>
<p>ಇನ್ನೊಬ್ಬರನ್ನು ಹಾಳು ಮಾಡಲು ತಪಸ್ಸು ಮಾಡಬಹುದು..!<br />
ಕೊನೆಗೆ ಸಮಸ್ತ ಬಲ-ದರ್ಪಗಳನ್ನು ಕಳೆದುಕೊಂಡು ಸೊನ್ನೆಯಾಗಿ ಬಿಡಬಹುದು..!</p>
<p><strong><br />
ಸಾತ್ವಿಕ ಆಸೆಯೊಂದು ಏನೆಲ್ಲವನ್ನೂ ಸಾಧಿಸಿಕೊಡಬಹುದು..!</strong><br />
ಸಾತ್ವಿಕ ಅಸೆಯೊಂದು ಮನದಲ್ಲಿ ಮೂಡಿದರೆ..ಆ ವ್ಯಕ್ತಿ..<br />
ಪ್ರತಿದ್ವಂದ್ವಿಯನ್ನು ಧ್ವಂಸಗೊಳಿಸುವ ದುರ್ಬುದ್ಧಿಯನ್ನು ತೊರೆದು, ಆತನೆತ್ತರಕ್ಕೆ ತಾನೂ ಬೆಳೆಯುವ ಮಹಾಪ್ರಯತ್ನಕ್ಕೆಳೆಸಬಹುದು..!<br />
ಸಾಮ್ರಾಜ್ಯಪತಿಯಾಗಿದ್ದವನು ಸನ್ಯಸ್ತಮುನಿಯಾಗಬಹುದು..!<br />
ರಕ್ತಪಿಪಾಸೆಯ ಕ್ಷಾತ್ರವನ್ನು ತೊರೆದು ಅತಿಕಠಿಣತಪಸ್ಸಿನ ದ್ವಾರಾ ಜ್ಞಾನಪಿಪಾಸೆಯ ಬ್ರಾಹ್ಮದ ತುತ್ತತುದಿಯ ಬ್ರಹ್ಮರ್ಷಿ ಪದವಿಗೇರಬಹುದು..!<br />
ಅನಂತಕಾಲ ಅಪರಿಮಿತ ಜೀವಿಗಳನ್ನುದ್ಧರಿಸುವ ಗಾಯತ್ರಿಯಂತಹ ಮಹಾಮಂತ್ರವೊಂದನ್ನು ಸಾಕ್ಷಾತ್ಕರಿಸಿಕೊಂಡು ಸಕಲ ಜಗತ್ತಿಗೆ ನೀಡಬಹುದು..!<br />
ಬದ್ಧವೈರಿಯೊಡನೆ ಶುದ್ಧಮೈತ್ರಿಯನ್ನು ಬೆಳೆಸಬಹುದು..!<br />
ಒಮ್ಮೆ ಆಸೆಯ ರಾಜಸ -ತಾಮಸ ರೂಪ..<br />
ಮತ್ತೊಮ್ಮೆ ಆಸೆಯ ಸಾತ್ವಿಕ ತಾತ್ವಿಕ ರೂಪ..<br />
ಇವೆರಡೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿಒಂದಾದ ಮೇಲೊಂದರಂತೆ ತಾಂಡವ- ಲಾಸ್ಯಗಳನ್ನಾಡಿದ್ದುಂಟು..<br />
ಇವೆಲ್ಲವೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿ ಘಟಿಸಿದ್ದುಂಟು ಎಂದರೆ ನಂಬುತ್ತೀರಾ..?<br />
ರಾಜಾಧಿರಾಜ ಪದವಿಯಲ್ಲಿದ್ದುಕೊಂಡು, ಆಸೆಯ ರಾಜಸ-ರೌದ್ರ ರೂಪದ ದಾಳಿಗೆ ತನ್ನದೆಲ್ಲವನ್ನೂ ತೆತ್ತು ಸೊನ್ನೆಯಾಗಿ,<br />
ಮತ್ತದೇ ಆಸೆ ತನ್ನ ಸಾತ್ವಿಕ -ತಾತ್ವಿಕ ರೂಪದಲ್ಲಿ ಮೈದೋರಿದಾಗ ಮರುಹುಟ್ಟು ಪಡೆದು.. ಭುವಿಯಗಲ ಹರಡಿದ, ಬಾನೆತ್ತರ ಬೆಳೆದ ಮಹಾಪುರುಷನ ಕುರಿತು ಮಾತನಾಡುವ ಮನವಾಗುತಿದೆಯಿಂದು&#8230;<br />
ಅವನೇ&#8230;! ಅಲ್ಲಲ್ಲ..ಅವರೇ.. ರಾಜರ್ಷಿ ಪದ ತೊರೆದು ಬ್ರಹ್ಮರ್ಷಿ ಪದಕೇರಿದ ಮಹಾಚೇತನ <strong>&#8220;ವಿಶ್ವಾಮಿತ್ರ&#8221;</strong></p>
<p>ಭವ್ಯ ಭವನಕ್ಕೆ ಭದ್ರವಾದ ಅಡಿಪಾಯವೇ ಬೇಕಲ್ಲವೇ..!?<br />
ಸಾಕ್ಷಾತ್ ಸೃಷ್ಟಿಕರ್ತನಿಂದಲೇ ಆರಂಭವಾದ ಕುಶಿಕವಂಶದಲ್ಲಿ ವಿಶ್ವಾಮಿತ್ರನ ಆವಿರ್ಭಾವವಾಯಿತು..<br />
ಕುಶಿಕ ವಂಶಕ್ಕೆ ಆ ಹೆಸರು ಬರಲು ಮೂಲ ಕಾರಣನಾದವನು ಆ ವಂಶದ ಮೂಲ ಪುರುಷನಾದ, ಬ್ರಹ್ಮಮಾನಸ ಪುತ್ರನಾದ ಕುಶ..<strong><br />
&#8216;ಕು&#8217;</strong> ಎಂದರೆ ಭೂಮಿ..ಅಲ್ಲಿ ನೆಲೆಸಿದುದರಿಂದಲೇ ಆತ <strong>ಕುಶ</strong>..</p>
<p>ಭುವಿಯ ಜೀವಿಗಳು ಪಡುವ ಬವಣೆಯನ್ನು ಕಂಡು ಕನಿಕರಿಸಿದವನವನು..<br />
ಇಳೆಗೊಳಿತು ಮಾಡಲೆಂದು ಬ್ರಹ್ಮಲೋಕವನ್ನೇ ಪರಿತ್ಯಜಿಸಿ ಇಳಿದುಬಂದವನವನು..<br />
ಅನುರೂಪಳಾದ ವೈದರ್ಭಿಯೆಂಬ ವನಿತೆಯನ್ನು ವರಿಸಿ ಪಡೆದ ನಾಲ್ಕು ಮಕ್ಕಳಿೆಗೆ ಧರ್ಮಸಾಮ್ರಾಜ್ಯ ಕಟ್ಟಿರೆಂದು ಆದೇಶವಿತ್ತವನವನು..<br />
ಹೀಗೆ ಭುವಿಯ ಮೇಲಣ  ದಿವಿಯ ಕರುಣೆಯ ಫಲವಾಗಿಯೇ ಕುಶಿಕ ವಂಶವು ಆರಂಭವಾಯಿತು..<br />
ತಂದೆಯ ಆಣತಿಯಂತೆ ಮಹೋದಯವೆಂಬ ನಗರಿಯಯನ್ನು ನಿರ್ಮಿಸಿ, ಪಾಲಿಸುತ್ತಿದ್ದ ಕುಶಪುತ್ರನಾದ ಕುಶನಾಭನು ಪುತ್ರಕಾಮೇಷ್ಟಿಯ ಫಲವಾಗಿ ಪಡೆದುಕೊಂಡ ಸುಪುತ್ರನೇ ಗಾಧಿ ..<br />
ಪ್ರತಿಸೃಷ್ಟಿಕರ್ತನ ಸೃಷ್ಟಿಯಾದದ್ದು ಸೃಷ್ಟಿಕರ್ತನ ಐದನೆಯ ತಲೆಮಾರಿನಲ್ಲಿ, ಗಾಧಿಯ ಮಗನಾಗಿ..ವಿಶ್ವಾಮಿತ್ರನೆಂಬ ಅಭಿಧಾನದಲ್ಲಿ..<br />
ಭೃಗು ವಂಶದ ಸೊಸೆಯಾಗಿ , ಜಮದಗ್ನಿಗೆ ಜನ್ಮವಿತ್ತು, ವಿಶ್ವಮಂಗಲಕ್ಕಾಗಿ ನದಿಯಾಗಿ ಹರಿದ ಕೌಶಿಕೀ ವಿಶ್ವಾಮಿತ್ರನ ಸೋದರಿ..<br />
ಗಾಧಿಯ ಕಾಲ ಮುಗಿಯಿತು..ವಿಶ್ವಾಮಿತ್ರನ ಕಾಲ ಆರಂಭವಾಯಿತು..<br />
ಮುತ್ತಾತನಾದ ಕುಶನು ಯಾವ ಆಶಯವನ್ನು ಹೊತ್ತು ಬ್ರಹ್ಮಲೋಕದಿಂದ ಭುವಿಗಿಳಿದು ಧರ್ಮರಾಜ್ಯವನ್ನು ಸಂಸ್ಥಾಪಿಸಿದ್ದನೋ..<br />
ಅದಕ್ಕನುಗುಣವಾಗಿ ಪ್ರಜಾರಂಜಕನಾಗಿ ರಾಜ್ಯಭಾರ ಮಾಡತೊಡಗಿದನಾತ&#8230;!<br />
ಬಾಹುಬಲ-ಬುದ್ದಿಬಲಗಳು ವಿಶ್ವಾಮಿತ್ರನಲ್ಲಿ ನೈಸರ್ಗಿಕವಾಗಿಯೇ ಇದ್ದವು..<br />
ಅಸ್ತ್ರಬಲ-ಶಸ್ತ್ರಬಲಗಳು ಶಿಕ್ಷಣ -ಸಾಧನೆಗಳಿಂದ ಪ್ರಾಪ್ತವಾಗಿದ್ದವು..<br />
ಜನ-ಧನ-ಸೇನಾಬಲಗಳು ತಂದೆಯಿಂದ ಮುಂದುವರಿದು ಬಂದಿದ್ದವು..<br />
ಹೀಗೆ ಸರ್ವಬಲ ಸಂಪನ್ನನಾದ ರಾಜಾ ವಿಶ್ವಾಮಿತ್ರನು ಸೇನೆಯನ್ನು ಕೂಡಿಕೊಂಡು ದಿಗ್ವಿಜಯಾಕಾಂಕ್ಷಿಯಾಗಿ ಭೂಮಂಡಲ ಯಾತ್ರೆ ಹೊರಟನು..<br />
ಬಾನಂಗಳದಲ್ಲಿ ಸೂರ್ಯನುದಯಿಸಿ ಮೇಲೇರುತ್ತಿದ್ದಂತೆಯೇ ತಾರೆಗಳು ಮರೆಯಾಗುವಂತೆ, ಮೇಲೇರಿ ಬರುವ ವಿಶ್ವವಿಜಯಿ ವಿಶ್ವಾಮಿತ್ರನೆದುರು ವಿಶ್ವದ ಭೂಪತಿಗಳೆಲ್ಲರೂ ಮುದುರಿದರು..!</p>
<p>ವಿಜಯದ ಮೇಲೆ ವಿಜಯಗಳನ್ನು ಸಾಧಿಸುತ್ತಾ..<br />
ನಗರ-ರಾಷ್ಟ್ರಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುತ್ತಾ..<br />
ನದೀ-ಸರೋವರಗಳಲ್ಲಿ ಮೀಯುತ್ತಾ..<br />
ಗಿರಿವನಗಳ ಸೊಬಗನ್ನು ಸವಿಯುತ್ತಾ..<br />
ಮುಂದೊತ್ತಿ ಬರುವ ವಿಶ್ವಾಮಿತ್ರನ ಜೈತ್ರಯಾತ್ರೆ,  ಭುವಿಗಿಳಿದ ಬ್ರಹ್ಮಲೋಕದಂತಿದ್ದ ಅದೊಂದು ದಿವ್ಯಸ್ಥಳವನ್ನು ಪ್ರವೇಶಿಸುತ್ತಿರಲು..</p>
<p>ಹಿಮಾಲಯದ ಬಳಿಸಾರುವಾಗ ತಾನಾಗಿ ಉಂಟಾಗುವ ಶೈತ್ಯಾನುಭೂತಿಯಂತೆ ಆತನಿಗುಂಟಾಯಿತೊಂದು ಶಬ್ದಗಳಿಗೆ ನಿಲುಕದ ದಿವ್ಯಾನುಭೂತಿ..!</p>
<p><span style="color: #0000ff;">(ಮುಂದಿನ ಭಾಗಕ್ಕಾಗಿ ಮುಂದಿನ ಭಾನುವಾರ ಬನ್ನಿ..)</span></p>
<p style="text-align: center;"><strong>॥ ಹರೇರಾಮ॥</strong></p>
]]></content:encoded>
			<wfw:commentRss>http://hareraama.in/blog/rajyadinda-ramanavarege/feed/</wfw:commentRss>
		<slash:comments>15</slash:comments>
		</item>
		<item>
		<title>ಮುನಿಮನದೊಳು ಮಾತಾಗಿ ಮೂಡಿದನೆ ರಾಮ..?!</title>
		<link>http://hareraama.in/blog/%e0%b2%ae%e0%b3%81%e0%b2%a8%e0%b2%bf%e0%b2%ae%e0%b2%a8%e0%b2%a6%e0%b3%8a%e0%b2%b3%e0%b3%81-%e0%b2%ae%e0%b2%be%e0%b2%a4%e0%b2%be%e0%b2%97%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%a6%e0%b2%a8/</link>
		<comments>http://hareraama.in/blog/%e0%b2%ae%e0%b3%81%e0%b2%a8%e0%b2%bf%e0%b2%ae%e0%b2%a8%e0%b2%a6%e0%b3%8a%e0%b2%b3%e0%b3%81-%e0%b2%ae%e0%b2%be%e0%b2%a4%e0%b2%be%e0%b2%97%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%a6%e0%b2%a8/#comments</comments>
		<pubDate>Thu, 15 Jul 2010 16:08:02 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=5625</guid>
		<description><![CDATA[
&#124;&#124; ಹರೇರಾಮ &#124;&#124;
ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು..
ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು..
ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು..
ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..?
ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..?
ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!?
ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ ಮಡಕೆ ಚೂರುಗಳಲ್ಲಿಯೋ ಹುಡುಕುವುದುಂಟು..
ಅಂತಹವರಿಗೆ ಸಿಗುವುದು ಹರಿದ-ಮುರಿದ ಇತಿಹಾಸ ಮಾತ್ರವೇ..!
ಪೂರ್ಣ ಸತ್ಯದರ್ಶವಾಗುವುದೆಂದೂ ಅಂತಂಗದಲ್ಲಿಯೇ..!
ದೇವಮುನಿಯ ಮುಖದಿಂದ ರಾಮಕಥಾಶ್ರವಣ..
ಮತ್ತೆ ಮತ್ತೆ ಮನದಲ್ಲಿಯೇ ಮನನ..
ಧ್ಯಾನದಲ್ಲಿ ರಾಮಾಯಣದರ್ಶನ ..
ಇದು ವಾಲ್ಮೀಕಿಗಳ ತ್ರಿವಿಕ್ರಮ..!
(ತ್ರಿವಿಕ್ರಮ :- ದಿವಿ-ಭುವಿಗಳನ್ನಳೆಯುವ ಮೂರು ಹೆಜ್ಜೆಗಳು..)
ಇಂದಿನ [...]]]></description>
			<content:encoded><![CDATA[<div>
<p style="text-align: center;">|| ಹರೇರಾಮ ||</p>
<p>ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು..<br />
ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು..</p>
<p>ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು..<br />
ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..?</p>
<p>ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..?<br />
ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!?<br />
ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ ಮಡಕೆ ಚೂರುಗಳಲ್ಲಿಯೋ ಹುಡುಕುವುದುಂಟು..<br />
ಅಂತಹವರಿಗೆ ಸಿಗುವುದು ಹರಿದ-ಮುರಿದ ಇತಿಹಾಸ ಮಾತ್ರವೇ..!<br />
ಪೂರ್ಣ ಸತ್ಯದರ್ಶವಾಗುವುದೆಂದೂ ಅಂತಂಗದಲ್ಲಿಯೇ..!</p>
<p><strong>ದೇವಮುನಿಯ ಮುಖದಿಂದ ರಾಮಕಥಾಶ್ರವಣ..<br />
ಮತ್ತೆ ಮತ್ತೆ ಮನದಲ್ಲಿಯೇ ಮನನ..<br />
ಧ್ಯಾನದಲ್ಲಿ ರಾಮಾಯಣದರ್ಶನ ..<br />
ಇದು ವಾಲ್ಮೀಕಿಗಳ ತ್ರಿವಿಕ್ರಮ..!<br />
</strong>(ತ್ರಿವಿಕ್ರಮ :- ದಿವಿ-ಭುವಿಗಳನ್ನಳೆಯುವ ಮೂರು ಹೆಜ್ಜೆಗಳು..)</p>
<p>ಇಂದಿನ ಕಾಲದಲ್ಲಿ ಯಾವುದಾದರೊಂದು ಘಟನೆಯ ಬಗ್ಗೆ ಬರೆಯಬೇಕೆಂದರೆ, ಮೊದಲು ಗ್ರಂಥಾಲಯದಲ್ಲಿಯೋ ಅಂತರ್ಜಾಲದಲ್ಲಿಯೋ ಹುಡುಕುತ್ತಾರೆ..<br />
ಘಟನೆಯ ಭಾಗಿಗಳನ್ನೋ, ಸಾಕ್ಷಿಗಳನ್ನೋ ಸಂದರ್ಶನ ಮಾಡುವುದೂ ಉಂಟು..</p>
<p>ಆದರೆ ವಾಲ್ಮೀಕಿಗಳು ಇದಾವುದನ್ನೂ ಮಾಡಲಿಲ್ಲ..!<br />
ಶುದ್ಧಾಚಮನ ಮಾಡಿದರು..ಬದ್ಧಾಂಜಲಿಗಳಾದರು..ಪೂರ್ವಮುಖವಾದ ದರ್ಭೆಗಳಲ್ಲಿ ಸಮಾಸೀನರಾದರು.<br />
ರಾಮನೆಂಬ ತತ್ವದಲ್ಲಿ ತನ್ನ ಮನವನ್ನು ನೆಟ್ಟುಬಿಟ್ಟರು..!<br />
ಅವರು ತನ್ಮಯತೆಯ ಉತ್ತುಂಗಕ್ಕೇರಿದಾಗ&#8230;.<br />
ಯೋಗವು ಅವರನ್ನು ಆಮೂಲಾಗ್ರವಾಗಿ ಆವರಿಸಿದಾಗ..<br />
&#8216;ರಾಮ&#8217;ನೆಂಬ ಧರ್ಮವು ಅವರನ್ನು ಆಳತೊಡಗಿದಾಗ..<br />
ಜಗತ್ತು ಮರೆಯಾಯಿತು..<br />
ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ರಾಮಾಯಣದ ದೃಶ್ಯಾವಳಿಗಳು ಒಂದಾದ ಮೇಲೊಂದರಂತೆ ಗೋಚರಿಸತೊಡಗಿದವು..!</p>
<p>ನಶ್ವರ ಬದುಕಿನಲ್ಲಿ ಘಟನೆಗಳು ನಡೆದು ಮುಗಿದೇ ಹೋಗುತ್ತವೆ..<br />
ಹರಿದುಹೋದ ನೀರು ಮತ್ತೆ ಬಾರದಂತೆ ಅವು ಪುನಃ ಸಿಗುವುದೇ ಇಲ್ಲ..!</p>
<p>ಈಶ್ವರದ ಬದುಕನ್ನು ನೋಡಿ..!<br />
ಅದು ಅವಿನಾಶಿ.. ಯುಗ-ಯುಗಗಳೇ ಕಳೆದರೂ ರಾಮನ ಬದುಕಿನ ಘಟನೆಗಳನ್ನು ಧ್ಯಾನಮಗ್ನತೆಯಲ್ಲಿ ಪುನಃ ಪುನಃ<br />
ಕಾಣಲು ಸಾಧ್ಯವಿದೆಯೆಂದರೆ..ಎಂಥ ಅದ್ಭುತವಿದು..!</p>
<p><strong>ನಿನಗಿರದ ಕಣ್-ಬಾಯಿ ವಾಲ್ಮೀಕಿಗೆಂತಾಯ್ತು?<br />
ಮುನಿಕವಿತೆಗೆಂತು ನಿನ್ನೊದೆಯೊಳೆಡೆಯಾಯ್ತು?<br />
ಘನಮಹಿಮನೊಳ್ ಜ್ವಲಿಸುತಿತರರೊಳ್ ನಿದ್ರಿಸುತ,<br />
ಅನಲನೆಲ್ಲರೊಳಿಹನು &#8211; ಮಂಕುತಿಮ್ಮ||</strong></p>
<p>ವಾಲ್ಮೀಕಿಯ ಕಣ್ಣು ನಮಗುಂಟಾದರೆ ರಾಮಾಯಣ ದರ್ಶನವಿಂದಿಗೂ ಸಾಧ್ಯ..<br />
ವಾಲ್ಮೀಕಿಯ ಬಾಯಿ ನಮಗುಂಟಾದರೆ ಅದನ್ನು ಬಣ್ಣಿಸಲೂ ಸಾಧ್ಯ..<br />
ದ್ವಾರ ಸದಾ ತೆರೆದಿದೆ&#8230;ಇನ್ನು ನಾವು ಕಣ್ತೆರೆಯುವುದೊಂದೇ ಬಾಕಿ&#8230;.!</p>
<p>ಬ್ರಹ್ಮರ್ಷಿಗಳ ಪರಮಾನುಭವಗಳು ವೇದಗಳ ರೂಪ ತಾಳುವಂತೆ..<br />
ನವಜಾತ ಶಿಶುವಿನ ಸುಖ-ದುಃಖಗಳು ನಗು-ಅಳುಗಳಾಗಿ ಪರಿಣಾಮವಾಗುವಂತೆ..<br />
ಸೃಷ್ಟಿಯ ಮೂಲವಾದ ಪರಂಜ್ಯೋತಿಯು ಬರಬರುತ್ತಾ ವಿಶ್ವವಿಸ್ತರವಾಗಿ ವಿಕಸಿತವಾಗುವಂತೆ..<br />
ಚೈತ್ರದ ಚಿಗುರನ್ನು ಸೇವಿಸುವ ಕೋಗಿಲೆಯ ಆನಂದ , <strong>ಕುಹು-ಕುಹೂ</strong> ಆಗಿ ಹೊರಹೊಮ್ಮುವಂತೆ..<br />
ವಾಲ್ಮೀಕಿಗಳ ಅಂತಶ್ಚಕ್ಷುವಿಗೆ ಗೋಚರಿಸಿದ ರಾಮಾಯಣದ ಘಟನೆಗಳು ಅವರ ಮನದ ಮನೆಯ ಮೌನ ಮುರಿದು ಮಾತನಾಡತೊಡಗಿದವು ..!<br />
೨೪ ಸಾವಿರ ಶ್ಲೋಕಗಳ,೫೦೦ ಅಧ್ಯಾಯಗಳ,೭ ಕಾಂಡಗಳ ಶ್ರೀಮದ್ರಾಮಾಯಣವು ಅವರೊಳಗೇ ರಚಿತವಾಗತೊಡಗಿತು&#8230;</p>
<p>ಬದುಕೆಂಬುದು ಸಾಧನೆ-ಶೋಧನೆ- ಬೋಧನೆಗಳ ಅನಂತ ಚಕ್ರವಾಗಬೇಕೆಂದು ಪೂಜ್ಯ ರಾಮಭದ್ರಾಚಾರ್ಯರು ಹೇಳುತ್ತಿದ್ದುದುಂಟು..<br />
ಸಾಧನೆಯ ಫಲವಾಗಿ ವಾಲ್ಮೀಕಿಗಳು ರಾಮಾಯಣವನ್ನು ಶೋಧಿಸಿದರು..<br />
ಹಾಗೆ ಶೋಧಿಸಿದ ರಾಮಾಯಣವನ್ನು ಕಾವ್ಯರೂಪದಲ್ಲಿ ಜಗತ್ತಿಗೆ ಬೋಧಿಸಿದರು.<br />
ಆ ಬೋಧನೆ ತುಳಸೀದಾಸರು, ತ್ಯಾಗರಾಜರಂತಹ ಅದೆಷ್ಟೋ ಸಾಧಕರಿಗೆ ಸಾಧನೆಯ ಪ್ರೇರಣೆಯನ್ನು ಕೊಟ್ಟಿತು..!<br />
ಅವರೂ ಶೋಧಿಸಿದರು..ಬೋಧಿಸಿದರು..<br />
ಹೀಗೆ ಸಾಧನೆ-ಶೋಧನೆ-ಬೋಧನೆಗಳ ಅನಂತಚಕ್ರದಲ್ಲಿಯೇ ರಾಮಾಯಣವು ಅನಂತವಾಗಿ ವಿಸ್ತರಿಸತೊಡಗಿದ್ದು..!</p>
<p>(ಇನ್ನೂ ಇದೆ)</p>
<p style="text-align: center;">|| ಹರೇರಾಮ ||</p>
</div>
]]></content:encoded>
			<wfw:commentRss>http://hareraama.in/blog/%e0%b2%ae%e0%b3%81%e0%b2%a8%e0%b2%bf%e0%b2%ae%e0%b2%a8%e0%b2%a6%e0%b3%8a%e0%b2%b3%e0%b3%81-%e0%b2%ae%e0%b2%be%e0%b2%a4%e0%b2%be%e0%b2%97%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%a6%e0%b2%a8/feed/</wfw:commentRss>
		<slash:comments>15</slash:comments>
		</item>
		<item>
		<title>ಈ ಪರಿ ನೋಡುವುದೇ&#8230;ಪರಿವಾರವ..?</title>
		<link>http://hareraama.in/blog/ee-pari-noduvude-parivarava/</link>
		<comments>http://hareraama.in/blog/ee-pari-noduvude-parivarava/#comments</comments>
		<pubDate>Sun, 11 Jul 2010 16:58:42 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[Bharathi]]></category>
		<category><![CDATA[bhava sangama]]></category>
		<category><![CDATA[flood]]></category>
		<category><![CDATA[Hare Raama]]></category>
		<category><![CDATA[oberoy]]></category>
		<category><![CDATA[program]]></category>
		<category><![CDATA[raghaveshwara bharati]]></category>
		<category><![CDATA[ramachandrapura]]></category>
		<category><![CDATA[samsthana]]></category>

		<guid isPermaLink="false">http://hareraama.in/?p=5343</guid>
		<description><![CDATA[ಬೇಕೇ ಈ ಕೆಲಸ ?

ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?....
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..

ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..

ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!]]></description>
			<content:encoded><![CDATA[<p style="text-align: center;"><span style="color: #000000;"><br />
</span></p>
<p><span style="color: #000000;">|| ಹರೇರಾಮ ||</span></p>
<p style="text-align: justify;">
<p style="text-align: justify;"><span style="color: #000000;">ಬೇಕೇ ಈ ಕೆಲಸ ?</span></p>
<p><span style="color: #000000;">ನಿರಂತರ ಪರಿಭ್ರಮಣ..<br />
ದಿನಕ್ಕೊಂದು ಊರು..<br />
ಹೊತ್ತಿಗೊಂದು ಸೂರು..<br />
ಹತ್ತಾರು ಬಗೆಯ ನೀರು..!<br />
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?&#8230;.<br />
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.<br />
ಇಂದು ಆಗಸ ಹರಿದು ಬೀಳುವಂತೆ ಮಳೆ.. ನಾಳೆ ಮೈಯೆಲ್ಲ ಬೆವರ ಹೊಳೆ..</span></p>
<p><span style="color: #000000;">ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..<br />
ಇವರ ಪಾಲಿಗೆ ಊಟವೋ ಅದೃಷ್ಟದಾಟ..!<br />
ಒಮ್ಮೊಮ್ಮೆ ಇಲ್ಲವೇ ಇಲ್ಲ..<br />
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..<br />
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..<br />
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..<br />
ಇಂದು ಸೊಗಸಿಲ್ಲದ ಸಪ್ಪೆ.. ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!</span></p>
<p><span style="color: #000000;">ಇನ್ನು ನಿದ್ರೆಯ ಕಥೆ ಇದಕ್ಕಿಂತ ಭಿನ್ನವೇನಲ್ಲ..<br />
ಪ್ರಯಾಣ ತರುವ ಬಳಲಿಕೆ..<br />
ಕಾಲು ಚಾಚಿ ಕೆಲಹೊತ್ತು ಮಲಗುವಂತಿಲ್ಲ..<br />
ಒಂದೆಡೆ ಕರ್ತವ್ಯದ ಕರೆ..<br />
ಇನ್ನೊಂದೆಡೆ, ಸಂತೆಯಂತಿರುವಲ್ಲಿ ಮಲಗಲು ಎಡೆಯೆಲ್ಲಿ..?<br />
ರಾತ್ರಿ&#8230;<br />
ಒಮ್ಮೊಮ್ಮೆ ಹಾಸಲು ಹಾಸಿಗೆ.. ಹೊದೆಯಲು ಹೊದಿಕೆ&#8230;ವ್ಯವಸ್ಥಿತವಾಗಿ ಸಿಗುವ ಭರವಸೆಯಿಲ್ಲ&#8230;<br />
ನಿದ್ರೆಗೆ ಸಮಯವೂ ಇಲ್ಲ &#8211; ಸ್ಥಳವೂ ಇಲ್ಲ!<br />
ಯಾವುದೋ ಹೊತ್ತಿಗೆ ಇನ್ಯಾವುದೋ ಮೂಲೆಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ..!</span></p>
<p><span style="color: #000000;">ಅನಾರೋಗ್ಯ ಕಾಡಿದರೆ?&#8230;<br />
ನೋಡಿಕೊಳ್ಳಲು ಅಮ್ಮ- ಅಕ್ಕರಿಲ್ಲ..ಔಷಧಿ ತರಲು ಅಪ್ಪ- ಅಣ್ಣರಿಲ್ಲ..<br />
ಹಣೆಯ ಮೇಲೆ ಸಾಂತ್ವನದ ಕೈಯಿಡುವ ತಮ್ಮ-ತಂಗಿಯರಿಲ್ಲ..<br />
ನೋಡುವ ಮನವಿದ್ದರೂ ಒಡೆಯರಿಗೆ ನೋಡಲು ಸಮಯವಿಲ್ಲ..!</span></p>
<p><span style="color: #000000;">ಹೇಳಿ ಕೇಳಿ ಹದಿಹರೆಯದ ಸಮಯ..ಆದರೆ, ಓರಗೆಯ ಪೋರರಿಗೆ ಸಿಗುವ ಸುಖ-ಸಾಧನಗಳು ಇವರಿಗೆ ಕನಸು ಮಾತ್ರ..!<br />
ಗರಿ ಬಿಚ್ಚಿ ಹಾರುವ ವಯಸ್ಸು.. ಸ್ವತಂತ್ರವಲ್ಲದ ಮನಸ್ಸು..ನವನವೀನ ಉಡುಗೆ ತೊಡುಗೆಗಳಿಲ್ಲ..ವಾರಾಂತ್ಯಕ್ಕೊಂದು ರಜೆಯೂ ಇಲ್ಲ..!<br />
ಸಿನೆಮಾ-ಹೋಟೆಲ್ ಇಲ್ಲವೇ ಇಲ್ಲ..!</span></p>
<p><span style="color: #000000;">ಹಬ್ಬ ಬಂದಿತೇ?<br />
ಆತ್ಮೀಯರೊಂದಿಗಿನ ಸಂಭ್ರಮವಿಲ್ಲ..<br />
ಗೆಳೆಯರೊಂದಿಗಿನ ಒಡನಾಟ ಸಿಗದು..<br />
ಮನೆಯವರ ಒಡನಾಟ ಎಲ್ಲೋ ವರ್ಷದಲ್ಲೊಮ್ಮೆ..!<br />
ಈಡೇರದ ಅಪೇಕ್ಷೆಗಳು..ಬಗೆಬಗೆಯ ಉಪೇಕ್ಷೆಗಳು..</span></p>
<p><span style="color: #000000;">ಇದು ಮುನಿಜೀವನವೇ..!<br />
ಹಾಗೆಂದು ಇಂದಿನ ಜಗತ್ತಿನಲ್ಲಿ ಮುನಿಯಂತೆ ಬದುಕುವ ವಾತಾರವಣವಿಲ್ಲ..<br />
ಎತ್ತಲೋ ಸೆಳೆಯುವ ವಯಸ್ಸು ಬೇರೆ ..<br />
ಮುನಿಜೀವನವನ್ನೇ ನಡೆಸಬೇಕು; ಆದರೆ ಮುನಿಜೀವನಕ್ಕೆ ಸಲ್ಲಬೇಕಾದ ಗೌರವ ಮಾತ್ರ ಸಲ್ಲುವುದಿಲ್ಲ..!</span></p>
<p><span style="color: #000000;">ಹೊಟ್ಟೆ ಪಾಡಿಗಾಗಿ ಹೀಗೆ ದುಡಿಯುವವರುಂಟು..<br />
ಆದರೆ ಇವರೊಂದು ವಿಚಿತ್ರ ..!<br />
ಏಕೆಂದರೆ ಇವರಲ್ಲಿ ಅನೇಕರಿಗೆ ಸಂಪತ್ತಿನ ಕೊರತೆಯೇನಿಲ್ಲ..ಕೊರತೆ ಇರುವವರಿಗೂ ಹೊಟ್ಟೆ ಪಾಡಿನ ನಿರ್ವಹಣೆಗೆ ಬೇರೆ ಪ್ರಶಸ್ತ ಆಯ್ಕೆಗಳುಂಟು..</span></p>
<p><span style="color: #000000;">ಹೊಟ್ಟೆ ಪಾಡಿನ ನಂತರವೂ ಹೆಚ್ಚು ಹಣ ಸಂಪಾದನೆಗಾಗಿ ಹೀಗೆ ದುಡಿಯುವವರುಂಟು..ಆದರಿಲ್ಲಿ ವೇತನದ ಮಾತುಕತೆಯೇ ನಡೆಯದು !</span></p>
<p><span style="color: #000000;">ಹಲವರು ಹೆಸರ ಹಪಹಪಿಯಲ್ಲಿ ದುಡಿಯುವುದಿದೆ..<br />
ಇವರೋ ಎಲೆಮರೆಯ ಕಾಯಿಗಳು..</span></p>
<p><span style="color: #000000;">ಜೀವನ ಸಂಗಾತಿಗಳ ಮೆಚ್ಚಿಸಲೋ.. ಪಡೆಯಲೋ.. ರಕ್ಷಿಸಲೋ ಹೀಗೆ ಮಾಡುವರು..<br />
ಇಲ್ಲಿಯೋ ವೈರಾಗ್ಯದ ವಾತಾವರಣ!</span></p>
<p><span style="color: #000000;">ಕೆಲಸ ಬಹು ಸಂಕೀರ್ಣ..ದೊಡ್ಡದೊಡ್ಡವರನ್ನು ನಿಭಾಯಿಸಬೇಕು; ಸಾಮಾನ್ಯರನ್ನೂ ಸುಧಾರಿಸಬೇಕು..!<br />
ಎಲ್ಲವೂ ಸರಿಯಾಗಿ ಒಂದು ತಪ್ಪಾದರೂ ಸಾಕು..ಸರ್ವರ ಕೆಂಗಣ್ಣು ನಿಶ್ಚಿತ..</span></p>
<p><span style="color: #000000;">ಸಾಮರ್ಥ್ಯ- ವಯಸ್ಸುಗಳಿಗೆ ಮೀರಿದ ಕೆಲಸ..<br />
ಸಮಯ ಸೀಮಿತ&#8230;<br />
ಅನುಭವ ಪರಿಣತಿಗಳು ಅಲ್ಪ..<br />
ತರಬೇತಿ ತಾನಾಗಿಯೇ ಆಗಬೇಕು..<br />
ಫಲಿತಾಂಶ ಮಾತ್ರ ನೂರಕ್ಕೆ ನೂರು ಬರಲೇ ಬೇಕು..!</span></p>
<p><strong><span style="color: #000000;">ಇದು ನಮ್ಮ ನಿಮ್ಮ ನಡುವೆ ಸೇತುವೆ ಕಟ್ಟುವ ಪರಿವಾರದ ಬದುಕಿನ ಪರಿ!!!</span></strong></p>
<p><span style="color: #000000;">ಇ</span><span style="color: #000000;">ವೆಲ್ಲವೂ ಮನಸ್ಸಿನಲ್ಲಿ ಸುಳಿದಿದ್ದು ಮೊನ್ನೆ ಮೊನ್ನೆ </span><strong><span style="color: #000000;">ಪರಿವಾರದ ಹಿರಿಯ, ಚಿಪ್ಳಿ ರಮೇಶ &#8216;ಐವತ್ತಾಯಿತು&#8217;</span></strong><span style="color: #0000ff;"><span style="color: #000000;"> ಎಂದು ಆಶೀರ್ವಾದ ಬೇಡಿದಾಗ..<br />
ಆ ಜೀವನ.. ಅದು ರಾಮಾರ್ಪಣ..<br />
ಆತ ಪರಿವಾರವನ್ನು ಪ್ರವೇಶಿಸಿದ್ದು ಹದಿನಾಲ್ಕರ ಹರಯದಲ್ಲಿ..<br />
ಅಂದಿನಿಂದ ಇಂದಿಗೆ ಮೂವತ್ತಾರು ಸುದೀರ್ಘ ಸಂವತ್ಸರಗಳೇ ಸಂದಿವೆ..<br />
ಬದುಕಿನ ಬಹುಮುಖ್ಯ ಭಾಗವೇ ಮಠದಲ್ಲಿ ಕಳೆದಿದೆ..<br />
ಮಠದಲ್ಲಿ ಇಂದು ಎಲ್ಲವೂ ಬದಲಾವಣೆಯಾಗಿದೆ, ಆದರೆ ಬದಲಾಗದಿರುವುದು ರಮೇಶ ಮಾತ್ರ..<br />
ಅಂದಿನ ನಾಯಕರು ಇಂದಿಲ್ಲ, ಅಂದಿನ ಸೇವಕರೂ ಇಂದಿಲ್ಲ..</span><a href="http://hareraama.in/wp-content/uploads/2010/07/Parivaara-11.jpg"><img class="alignright size-medium wp-image-5435" title="ಶ್ರೀಪರಿವಾರ" src="http://hareraama.in/wp-content/uploads/2010/07/Parivaara-11-300x199.jpg" alt="" width="300" height="199" /></a><span style="color: #000000;"><br />
</span><span style="color: #000000;"> </span></span></p>
<p><span style="color: #000000;">ಅಷ್ಟೇ ಏಕೆ, ಪೀಠ ಪರಂಪರೆಯಲ್ಲಿಯೇ ಮೂವತ್ತೈದು ತಲೆಮಾರು ಕಳೆದು ಮೂವತ್ತಾರನೆಯ ತಲೆಮಾರು ನಡೆಯುತ್ತಿದೆ..<br />
ಶಕ ಪರಿವರ್ತನೆಯೆಂಬುದು ಸಣ್ಣ ಪ್ರಳಯವಿದ್ದಂತೆ, ಅದನ್ನು ದಾಟಿ ಮುಂದುವರಿಯುವುದು ಸಾಮಾನ್ಯ ಸಂಗತಿಯಲ್ಲ..<br />
ಆದರೆ ಅಂದು ಯಾವ ಮಹತ್ವ ರಮೇಶನಿಗಿದ್ದಿತೋ, ಯಾವ ವಿಶ್ವಾಸ ಪೀಠಕ್ಕೆ ಆತನಲ್ಲಿದ್ದಿತೋ ಅದು ಇಂದಿಗೂ ಹಾಗೆಯೇ ಇದೆ,</span><span style="color: #000000;">ಇನ್ನಷ್ಟು ದೃಢವಾಗಿದೆ..</span><span style="color: #000000;"> </span></p>
<p><span style="color: #000000;">ರಮೇಶನೆಂದರೆ ನಮಗೆ ನೆನಪಾಗುವುದು ಆ ದಿನ.. ಆ ಸಮಯ&#8230;ಆ ಅಮೃತಘಳಿಗೆ&#8230;<br />
ಭಾವ ಸಂ||ದ ಚೈತ್ರ ಶುದ್ಧ ಚತುರ್ಥಿ, ೧೯೯೪ರ ಏಪ್ರಿಲ್ ೧೫..<br />
ಬದುಕೇ ಬದಲಾದ ದಿನವದು..ವ್ಯಷ್ಟಿ ಬದುಕಿನಿಂದ ಸಮಷ್ಟಿ  ಬದುಕಿಗೆ..<br />
ಭೋಗದ  ಬದುಕಿನಿಂದ ತ್ಯಾಗದ ಬದುಕಿಗೆ..<br />
ಸುಖದ ಬದುಕಿನಿಂದ ಸೇವೆಯ ಬದುಕಿಗೆ..<br />
ಪ್ರಥಮ ಆಶ್ರಮದಿಂದ ತುರೀಯ ಆಶ್ರಮಕ್ಕೆ  ನಾವು ಕಾಲಿರಿಸಿದ</span></p>
<div id="attachment_5434" class="wp-caption alignright" style="width: 215px"><span style="color: #000000;"><img class="size-medium wp-image-5434 " title="ದಂಡ ಕಮಂಡಲುಗಳ ನೀಡಿದವ" src="http://hareraama.in/wp-content/uploads/2010/07/87-11-205x300.jpg" alt="" width="205" height="300" /></span><p class="wp-caption-text">ದಂಡ ಕಮಂಡಲುಗಳ ನೀಡಿದವ</p></div>
<p><span style="color: #000000;">ಮಂಗಲ ಮಹಾ ಮುಹೂರ್ತವದು..</span></p>
<p><span style="color: #000000;"> ಹಳೆಯದೆಲ್ಲವು ಕಳೆಯಬೇಕು..<br />
ಹುಟ್ಟು ಹೆಸರು, ಹಿಂದೆ ಸಂಪಾದಿಸಿದ ಹಣ, ಸಿಹಿ ಕಹಿ ಸಂಬಂಧಗಳು, ಹೆಚ್ಚೇಕೆ ಉಟ್ಟಬಟ್ಟೆಯನ್ನೂ ಪರಿತ್ಯಜಿಸಬೇಕು..<br />
ಧರಿಸಿದ ಯಜ್ಞಸೂತ್ರವನ್ನೂ, ಶಿಖೆಯನ್ನೂ ಕಿತ್ತೆಸೆಯಬೇಕು..<br />
ಪಾತ್ರೆಯನ್ನೊಮ್ಮೆ ಸಂಪೂರ್ಣ ಬರಿದು ಮಾಡಿ ತೊಳೆದಿರಿಸಿದ ಮೇಲಲ್ಲವೇ ಅದರಲ್ಲಿ ಹೊಸತನ್ನು ತುಂಬುವುದು ..<br />
ಹಾಗೆಯೇ ಒಳಗಿನ ಹಳತೆಲ್ಲವೂ ಕಳೆದು ಶೂನ್ಯವಾದ ಮೇಲೆ, ಗುರು ಅಲ್ಲಿ ನಿತ್ಯ ನೂತನ ಪೂರ್ಣವನ್ನು ತುಂಬತೊಡಗುವುದು..<br />
ಹೊಸ ಬದುಕಿನ ನಿತ್ಯ ಸತ್ಯ ಸಂಗತಿಗಳಾದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳು ಗುರುವಿನಿಂದ ಪ್ರಾಪ್ತವಾಗಬೇಕು..</span></p>
<p><span style="color: #000000;"> ಸಲಿಲ ಸನಿಹದಲ್ಲಿ ಸಂನ್ಯಾಸ ವಿಧಿಗಳು&#8230;<br />
ಆ ಸಮಯದಲ್ಲಿ ಗುರುಗಳಿರುವುದು ಮಠದಲ್ಲಿ.. ಉಪದೇಶ ನಡೆಯುವುದು ಅಲ್ಲಿಯೇ&#8230;<br />
ಗುರುವಿನ ಪ್ರತಿನಿಧಿಯೊಬ್ಬ ಗುರುಕರಗಳಿಂದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳನ್ನು ತೆಗೆದುಕೊಂಡು ಸಂನ್ಯಾಸ ಸ್ಥಳಕ್ಕೆ ಆಗಮಿಸಿ ಗುರುಗಳ ಪರವಾಗಿ ಅವುಗಳನ್ನು  ನೂತನ ಪೀಠಾಧಿಪತಿಗಳಿಗೆ ನೀಡಬೇಕು, ಇದು ಸಂಪ್ರದಾಯ..<br />
ಇಲ್ಲೊಂದು ತಾದಾತ್ಮ್ಯವಿದೆ..<br />
ಚಿಂತನೆಯೊಂದು ಕಾರ್ಯರೂಪಕ್ಕೆ ಬರುವಾಗ ಮೆದುಳಿಗೂ ಮತ್ತು ಕಾರ್ಯವೆಸಗುವ ಕರಗಳಿಗೂ ಒಂದು ಬಗೆಯ ತಾದಾತ್ಮ್ಯವಿರುವುದಲ್ಲವೇ..?<br />
ಹಾಗೆಯೇ ಗುರುವಿನ ಮನದಲ್ಲಿ ಮನವನ್ನು ಬೆರೆಸಿ ಗುರುವಿನ ಕರಕಮಲವೇ ತಾನಾಗಿ ನಡೆಸಬೇಕಾದ ಮಹತ್ಕಾರ್ಯವದು..<br />
ತಲೆಮಾರಿಗೊಂದು ಬಾರಿ ಒಬ್ಬರಿಗೆ ಮಾತ್ರವೇ ಸಿಗುವ ಈ ಯೋಗ ಯಾರದಾಗಬಹುದೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗಲೇ&#8230;&#8230;&#8230;ಅದು ರಮೇಶನನ್ನರಸಿ ಬಂತು..!</span></p>
<p><span style="color: #000000;">&#8220;</span><strong><span style="color: #000000;">ಯುಗ ಪರಿವರ್ತನೆಯ ಈ ಮಹತ್ಕಾರ್ಯವನ್ನು ನೀನೇ ಮಾಡಬೇಕು</span></strong><span style="color: #000000;">&#8221; ಎಂದು ರಮೇಶನಿಗೆ &#8216;ದೊಡ್ಡ ಗುರುಗಳ&#8217; ಅಪ್ಪಣೆಯಾಗಿತ್ತು..<br />
ಪರಿವಾರಕ್ಕೆ ಸಂದ ಪರಮೋಚ್ಚ ಗೌರವವಿದು!<br />
ಆದರೆ ಇತ್ತ ಸಂನ್ಯಾಸದ ಕ್ಷಣಗಣನೆಗಳು ಆರಂಭವಾಗುತ್ತಿದ್ದಂತೆಯೇ ಅತ್ತ ರುಗ್ಣಶಯ್ಯೆಯಲ್ಲಿದ್ದ ರಮೇಶನ ತಂದೆಯ ಮರಣದ ಕ್ಷಣಗಣನೆಯೂ ಆರಂಭವಾಗಿತ್ತು.<br />
ಆಶೌಚ ಬಂದರೆ ಅವಕಾಶವಿರದು&#8230;<br />
&#8220;ಹೇ ಭಗವಂತ&#8230;! ಕೃತಕೃತ್ಯತೆಯ ಆ ಅಮೃತ ಕ್ಷಣಗಳು ಕೈ ಜಾರದಿರಲಿ&#8221; ಎಂದು ನೆರೆನಂಬಿದ ರಾಮನಲ್ಲಿ ಮೊರೆಯಿಟ್ಟನಾತ..<br />
ಆ ದಿನ ಬಂದೇ ಬಂದಿತು..<br />
ಮೃತ್ಯುವಿನ ಮುಹೂರ್ತವನ್ನು ಬದಲಿಸಲು ಸಾಧ್ಯವೇ?<br />
ಕತ್ತಲೆ-ಬೆಳಕುಗಳು ರಮೇಶನ ಬಾಳಿನಲ್ಲಿ ಆ ದಿನ ಕೂಡಿ ಆಡಿದವು..<br />
ಅದೇನು ರಾಮನ ದಯೆಯೋ, ಸೇವೆಯ ಫಲವೋ, ತಂದೆಯ ಮೃತ್ಯುವಾರ್ತೆ ತಲುಪುವ ಮೊದಲೇ ಅಮೃತತ್ವದ ಸಂನ್ಯಾಸ ವಿಧಿಗಳು ಪೂರೈಸಿದ್ದವು..<br />
ಗುರುಪೀಠದ ಎರಡು ತಲೆಮಾರುಗಳನ್ನು ಬೆಸೆಯುವ ಬೆಸುಗೆಯಾಗಿ ರಮೇಶನ ಜೀವನ ಸಾರ್ಥಕಗೊಂಡಿತ್ತು..<br />
ವಿಪರ್ಯಾಸವೆಂದರೆ ಸಂನ್ಯಾಸ ದೀಕ್ಷೆಯಲ್ಲಿ ಅತ್ಯಂತ ಮುಖ್ಯಪಾತ್ರ ವಹಿಸಿದ ರಮೇಶನಿಗೆ, ಅದರ ವಾರ್ಷಿಕೋತ್ಸವದಲ್ಲೆಂದೂ ಭಾಗವಹಿಸಲು ಸಾಧ್ಯವಿಲ್ಲ, ಕಾರಣ ವಾರ್ಷಿಕವಾಗಿ ತಂದೆ ಬರುವ ದಿನವದು&#8230;</span></p>
<p><strong><span style="color: #000000;">ಅಹೋ..!<br />
ಧನ್ಯಸೇವಕ ರಮೇಶ..!</span></strong></p>
<p><span style="color: #000000;">ರಮೇಶನದು ಉದಾಹರಣೆ ಮಾತ್ರ. ಪರಿವಾರದಲ್ಲಿ ಸೇವೆ ಸಲ್ಲಿಸಿದ ಒಬ್ಬೊಬ್ಬರ ಬಗ್ಗೆ ಹೇಳಹೊರಟರೆ ಅದು ತುದಿಮೊದಲಿಲ್ಲದ ಸೇವಾಕಾವ್ಯವೇ ಆದೀತು..</span></p>
<p><span style="color: #000000;">ನಮ್ಮ ಪರಂಪರೆಯ ಸಂಪ್ರದಾಯವೆಂದರೆ, ಗುರುಸ್ಥಾನವನ್ನಲಂಕರಿಸಿರುವವರು ತಾವಾಗಿ ಏನನ್ನೂ ಮಾಡುವಂತಿಲ್ಲ..<br />
ಲೋಕದ ಕಾರ್ಯವನ್ನು ಗುರು ಮಾಡಿದರೆ ಗುರು ಕಾರ್ಯವೆಲ್ಲವೂ ಇವರದೇ..<br />
ಅಕ್ಷರಶಃ ಗುರುವಿನ ಅಂಗ-ಪ್ರತ್ಯಂಗಗಳಂತೆ ಪರಿವಾರದವರು..</span></p>
<p><span style="color: #000000;">ಸ್ನಾನ, ಭೋಜನ, ಶಯನಗಳಲ್ಲಿ ಅವರು ತಾಯಿ ಪಾತ್ರ ವಹಿಸಿದರೆ ನಾವು ವಹಿಸುವುದು ಮಗುವಿನ ಪಾತ್ರ..<br />
ಸಲಹೆ ನೀಡುವಾಗ ಇವರು ಮಂತ್ರಿಗಳು..<br />
ಚರಣಸೇವೆಯಲ್ಲಿ ದಾಸರು..<br />
ಬದುಕಿಗೆ ಮಾರ್ಗದರ್ಶನ ಕೇಳುವಾಗ ಮಕ್ಕಳು..<br />
ಮಂತ್ರಾಕ್ಷತೆಯ ಪಡೆಯುವಾಗ ಶಿಷ್ಯರು..<br />
ಗುರು-ಶಿಷ್ಯರನ್ನು ಬೆಸೆಯುವಲ್ಲಿ ಬೆಸುಗೆಗಳು&#8230;<br />
ಸಂಕಟಗಳು ಬರುವಾಗ ಸೇನಾನಿಗಳು..</span></p>
<p><span style="color: #000000;">ಒಮ್ಮೊಮ್ಮೆ ಪರಿವಾರದಲ್ಲಿ ನಮಗೆ ಲಕ್ಷ್ಮಣ ಕಾಣಿಸುತ್ತಾನೆ..<br />
ಅಯೋಧ್ಯೆಯಲ್ಲಿ ಸೀತಾರಾಮರಿಗೆ ಸಾವಿರ ಸೇವಕರು ಮಾಡುತ್ತಿದ್ದ ಸೇವೆಯನ್ನು ಅಡವಿಯಲ್ಲಿ ಆತನೊಬ್ಬನೇ ಗೈದನಲ್ಲವೇ!</span></p>
<p><span style="color: #000000;">ಒಮ್ಮೊಮ್ಮೆ ಪರಿವಾರದವರಲ್ಲಿ ನಮಗೆ ಭರತ ತೋರುತ್ತಾನೆ..<br />
ಮಠದಲ್ಲಿರಬಹುದಾದ ಸಕಲ ಸಂಪತ್ತುಗಳನ್ನೂ ಸಂರಕ್ಷಿಸುವ, ಸಧ್ವಿನಿಯೋಗ ಮಾಡುವ ಭಾರ ಅವರದ್ದೇ..</span></p>
<p><span style="color: #000000;">ಆದರೆ ಅದ್ಯಾವುದೂ ಅವರದಲ್ಲ&#8230;</span></p>
<p><strong><span style="color: #000000;">ಒಡರಿಸುವನೆಲ್ಲವನ್ ಅದಾವುದುಂ ತನದಲ್ಲ,<br />
ಬಿಡನೊಂದನುಂ ರಾಜ್ಯ ತನದಲ್ಲವೆಂದು|<br />
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ,<br />
ಕಡುಯೋಗಿ ಭರತನಲ &#8211; ಮಂಕುತಿಮ್ಮ||</span></strong></p>
<p><span style="color: #993366;"><span style="color: #000000;">ಶಿಲೆಯನ್ನು ಶಿಲ್ಪವನ್ನಾಗಿಸುವಾಗ ಶಿಲ್ಪಿ ತನ್ನ ಚಾಣದ ಅದೆಷ್ಟು ಪೆಟ್ಟುಗಳನ್ನು ನೀಡುವುದಿಲ್ಲ?<br />
ಹಾಗೆಂದು ಶಿಲ್ಪಿಗೆ ಶಿಲೆಯ ಮೇಲೆ ಮಮತೆಯಿಲ್ಲವೆಂದೇನಲ್ಲ..<br />
ಹೆಜ್ಜೆ-ಹೆಜ್ಜೆಗೆ ಪರಿವಾರದವರನ್ನು ದಂಡಿಸುವಾಗ ನಾವೆದುರಿಸುವ ಸಂದಿಗ್ಧವಿ</span><span style="color: #000000;">ದು..</span></span></p>
<p><span style="color: #000000;">ಒಂದೆಡೆ ಸಮಾಜವೆಂಬ ಬೆಂಕಿ&#8230; ಇನ್ನೊಂದೆಡೆ ಗುರುವೆಂಬ ಅಗ್ನಿ-<br />
ಎರಡು ಮಹಾಶಕ್ತಿಗಳ ನಡುವೆ ಪರಿವಾರದವರ ಪರಿ &#8216;ಅತ್ತ ಪುಲಿ ಇತ್ತ ದರಿ&#8217;..</span></p>
<p><span style="color: #000000;">ಇದು ಇದೇನು ಮೊದಲಲ್ಲ..<br />
ಹಿಂದಿನವರ ಅನುಭವವನ್ನು ಈ ಶ್ಲೋಕದಲ್ಲಿ ಗಮನಿಸಿ..</span></p>
<p><span style="color: #993300;"><strong><span style="color: #000000;">ಮೌನಾನ್ಮೂಕಃ ಪ್ರವಚನಪಟುಃ ಚಾಟುಲೋ ಜಲ್ಪಕೋ ವಾ<br />
ದ್ಷ್ಧಷ್ಟಃ ಪಾರ್ಶ್ವೇ ಭವತಿ ಚ ವಸನ್ ದೂರತೋಪಿ ಪ್ರಗಲ್ಬಃ |<br />
ಶಾಂತ್ಯಾ ಭೀರುಃ ಯದಿ ನ ಸಹತೇ ಪ್ರಾಯಶೋ ನಾಭಿಜಾತಃ<br />
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ ||</span></strong></span></p>
<p><span style="color: #000000;">ಮಿತಿಯಲ್ಲಿ ಮಾತನಾಡಿದರೆ  &#8220;</span><strong><span style="color: #000000;">ಮೂಕ</span></strong><span style="color: #000000;">&#8221;<br />
ಧಾರಾಳ ಮಾತನಾಡಿದರೆ    &#8220;</span><strong><span style="color: #000000;">&#8216;ಪ್ರವಚನ ಪಟು ಅಥವಾ ಹಲುಬುವವನು</span></strong><span style="color: #000000;">&#8221;<br />
ಪಕ್ಕದಲ್ಲೇ ನಿಂತರೆ               &#8220;</span><strong><span style="color: #000000;">ಎಲ್ಲವೂ ಇವನದ್ದೇ ಆಯಿತು</span></strong><span style="color: #000000;">&#8221;<br />
ಎಲ್ಲೋ ಮರೆಯಲ್ಲಿದ್ದರೆ         &#8220;</span><strong><span style="color: #000000;">ಊಟಕ್ಕೆ ಮಾತ್ರ ಬರುವವನು</span></strong><span style="color: #000000;">&#8221;<br />
ವಿನೀತನಾಗಿದ್ದರೆ                 &#8220;</span><strong><span style="color: #000000;">ಪುಕ್ಕಲ</span></strong><span style="color: #000000;">&#8221;<br />
ಗಟ್ಟಿ ನಿಂತರೆ                       &#8220;</span><strong><span style="color: #000000;">ಅಧಿಕ ಪ್ರಸಂಗಿ</span></strong><span style="color: #000000;">&#8220;</span><strong><span style="color: #000000;"><br />
</span><span style="color: #000000;"> </span></strong><span style="color: #000000;">ಸೇವಾಧರ್ಮವದೆಷ್ಟು ಗಹನವೆಂದರೆ ಯೋಗಿಗಳಿಗೂ ದುಸ್ಸಾಧ್ಯವಾದುದು (</span><span style="text-decoration: underline;"><strong><span style="color: #000000;">ನಮಗೂ ಹೀಗೆಯೇ ಅನಿಸಿದೆ.</span></strong></span><span style="color: #000000;">)</span></p>
<p><span style="color: #000000;">ಗುರುವೆಂದರೆ ರಾಮಕಿಂಕರ..<br />
ಪರಿವಾರದವರು ಗುರುಕಿಂಕರರು..<br />
ಅಂತವರ ಕುರಿತು ಸಮಾಜದ ಭಾವವೇನಿರಬೇಕೆಂಬುದನ್ನು ರಾಜಾ ಕುಲಶೇಖರನ ಮಾತುಗಳಲ್ಲಿ ಗಮನಿಸಿ..</span></p>
<p><strong><span style="color: #000000;">ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ-  ಭೃತ್ಯ-  ಭೃತ್ಯಸ್ಯ-  ಭೃತ್ಯ ಇತಿ ಮಾಂ ಸ್ಮರ ಲೋಕನಾಥ ||</span></strong></p>
<p><span style="color: #000000;">&#8221; ಹೇ ಭಗವಂತ.. ನಿನ್ನ ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕ ನಾನು ಎಂದೊಮ್ಮೆ ನೆನೆಸಿಕೊಂಡರೂ ಬದುಕು ಸಫಲ..&#8221;</span></p>
<p><span style="color: #000000;">ಹಿಂದೆಲ್ಲ ಹಿರಿಯರು ಮಠದಲ್ಲಿ ಓಡಿಯಾಡುವ ನಾಯಿಗಳನ್ನು ತೋರಿಸಿ &#8220;ಮಠದ ಹಳೆಯ ಸೇವಕರು&#8221; ಎಂದು ಪರಿಚಯಿಸುತ್ತಿದ್ದುದುಂಟು.<br />
&#8220;ಹಾಗೆಂದರೆ&#8221; ಎಂಬ ಪ್ರಶ್ನೆಗೆ &#8221; ಹಿಂದಿನ ಜನ್ಮದಲ್ಲಿ ಮಠದಲ್ಲಿ ಪರಿವಾರದವರೋ ಅಧಿಕಾರಿಗಳೋ ಆಗಿದ್ದು ಮಾಡಿದ ತಪ್ಪುಗಳ-<br />
ಭಾರವನ್ನಿಳಿಸಲು ಈ ಜನ್ಮದಲ್ಲಿ ನಾಯಿಗಳಾಗಿ ಇಲ್ಲಿಗೆ ಬಂದಿರುವವರು&#8221; ಎಂದು ಉತ್ತರಿಸಿದುದುಂಟು..!</span></p>
<p><span style="color: #000000;">ಪರಿವಾರದಲ್ಲಿ ತಪ್ಪುಗಳೇ ನಡೆಯುವುದಿಲ್ಲವೆಂದಲ್ಲ,<br />
ಅವರೂ ಮನುಷ್ಯರೇ ಅಲ್ಲವೆ?<br />
ತಪ್ಪುಗಳೇ ಇಲ್ಲದುದೆಲ್ಲಿ?<br />
ಸಂತರು ತಪ್ಪು ಮಾಡುವುದಿಲ್ಲವೇ?<br />
ರಾಜರು ತಪ್ಪು ಮಾಡುವುದಿಲ್ಲವೇ?<br />
ಸಾಮಾಜಿಕರು ತಪ್ಪು ಮಾಡುವುದಿಲ್ಲವೇ?<br />
ನಮ್ಮ ಶರೀರದಲ್ಲಿಯೇ ಎಲ್ಲೋ ಒಂದೆಡೆ ರೋಗ  ಉಂಟಾದರೆ ಹೀಗಳೆಯುವುದುಂಟೇ&#8230; ಬಿಟ್ಟುಬಿಡುವುದಂಟೇ&#8230;?</span></p>
<p><span style="color: #000000;">ಬಾಹ್ಯ ಜಗತ್ತಿನ ಸಕಲ ಸುಖಸಾಧನಗಳ ಸೆಳೆತಗಳನ್ನು ಮೀರಿ, ಭೋಗಪರರಿಗೆ ಹೇಗೆ ನೋಡಿದರೂ ಶುಷ್ಕವೆನಿಸುವ ಮಠದ ವಾತಾವರಣದಲ್ಲಿ-<br />
ಸೇವೆಗೈಯ್ಯಲು ಧಾವಿಸಿ ಬರುವ ಈ ಜೀವಿಗಳನ್ನು ಅದಾವುದು ಸೆಳೆಯಿತು..!?</span></p>
<p><span style="color: #000000;">ನಾಲ್ಕು ದಿನಕ್ಕೆಂದು ಬಂದು ಜೀವನವಿಡೀ ನಿಂತವರುಂಟು..<br />
ಭೇಟಿ ಮಾಡಲು ಬಂದು ಭೇಟಿ ಮಾಡಿಸಲು ನಿಂದವರುಂಟು..<br />
ಅದ್ಯಾವ ಬಗೆಯ ಸೆಳೆತವೋ!!</span></p>
<p><strong><span style="color: #000000;"> </span></strong></p>
<p><strong><span style="color: #000000;">ಯಾವ ವೃಂದಾವನವು ಸೆಳೆಯಿತೊ ನಿನ್ನ ಮಣ್ಣಿನ ಕಣ್ಣನು..<br />
ಯಾವ ವೃಂದಾವನವು ಚಾಚಿತೊ ತನ್ನ ಮಿಂಚಿನ ಕೈಯ್ಯನು</span></strong><span style="color: #000000;">..</span><strong><span style="color: #000000;"><br />
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ..</span></strong></p>
<p><span style="color: #000000;">ಪರಿವಾರವೆ೦ದರೆ ಗುರುದ್ವಾರ..<br />
ಮುಚ್ಚಿದ್ದು ಮರೆಯದು&#8230;ತೆರದದ್ದು ನೆನಪೇ ಇರದು&#8230;</span></p>
<p><span style="color: #000000;">ಪರಿವಾರವೆ೦ದರೆ ಗುರುವಿನ ದಾರಿ..<br />
ಗುರಿ ತಲುಪಿದ ಮೇಲೆ ದಾರಿಯ ಪರಿವೆ ಇಲ್ಲ..</span></p>
<p><span style="color: #800080;"><span style="color: #000000;">ಪರಿವಾರವೆಂದರೆ ಗುರುವಿನ ಮೆಟ್ಟಿಲು..<br />
ಮೆಟ್ಟಿಲು ಇರುವುದು ಮೂರ್ತಿಯ ಮುಟ್ಟಲು..<br />
ಆದರೆ ಹಲವರ ಭಾವನೆ&#8230; ಮೆಟ್ಟಿಲು ಇರುವುದೇ </span><strong><span style="color: #000000;">ಮೆಟ್ಟಲು..!</span></strong></span></p>
<p><strong><span style="color: #000000;">ಶಿವಾಜಿ ಹುಟ್ಟಿ ಬರಲೇ ಬೇಕು, ಆದರೆ ನಮ್ಮ ಮನೆಯಲ್ಲಲ್ಲವೆಂದರೆ ಹೇಗೆ?<br />
ಆದಿಶಂಕರರು ಅವತಾರ ತಾಳಲೇ ಬೇಕು, ಆದರೆ ಪಕ್ಕದ ಮನೆಯಲ್ಲಿ ಎಂದರೆ ಸರಿಯೇ?<br />
ನಮಗೆ ಮಠ ಬೇಕು, ಗುರು ಬೇಕು ಎಂದ ಮೇಲೆ ಪರಿವಾರವೂ ಬೇಕೇ ಬೇಕು..<br />
ಒಮ್ಮೆ ಯೋಚಿಸಿ, ನಿಂತಲ್ಲಿ ಕುಳಿತಲ್ಲಿ ಪರಿವಾರವನ್ನು ವಿಮರ್ಶಿಸುವ ನಾವು ಆ ಕಾರ್ಯಕ್ಕೆ ನಮ್ಮ ಮಕ್ಕಳನ್ನು ಕಳುಹಿಸಿಕೊಡಲು ಸಿದ್ಧರಿದ್ದೇವೆಯೇ?</span></strong></p>
<p><strong><span style="color: #000000;">ರಾಮಬಾಣ:<br />
ನಿ</span></strong><span style="color: #000000;">ಮ್ಮ ಮುಂದೆ ಎರಡು ಆಯ್ಕೆಗಳು.<br />
ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳುಹಿಸಿಕೊಡಿ.<br />
ಅದು ಸಾಧ್ಯವಾಗದಿದ್ದರೆ..<br />
ಪರಿವಾರದವರನ್ನು ನಿಮ್ಮ ಮಕ್ಕಳಂತೆ ನೋಡಿ..!</span></p>
<p style="text-align: center;"><span style="color: #0000ff;"><span style="color: #000000;">|| ಹರೇರಾಮ ||</span></span></p>
]]></content:encoded>
			<wfw:commentRss>http://hareraama.in/blog/ee-pari-noduvude-parivarava/feed/</wfw:commentRss>
		<slash:comments>113</slash:comments>
		</item>
		<item>
		<title>ಕಾವ್ಯ-ಸೃಷ್ಟಿಕರ್ತಾ..!</title>
		<link>http://hareraama.in/blog/%e0%b2%95%e0%b2%be%e0%b2%b5%e0%b3%8d%e0%b2%af-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%95%e0%b2%b0%e0%b3%8d%e0%b2%a4%e0%b2%be/</link>
		<comments>http://hareraama.in/blog/%e0%b2%95%e0%b2%be%e0%b2%b5%e0%b3%8d%e0%b2%af-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%95%e0%b2%b0%e0%b3%8d%e0%b2%a4%e0%b2%be/#comments</comments>
		<pubDate>Thu, 08 Jul 2010 17:39:23 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[hare raama barmha ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...! 'ಮಾನಿಷಾದ]]></category>

		<guid isPermaLink="false">http://hareraama.in/?p=5180</guid>
		<description><![CDATA[ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ...!
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.

ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...!
]]></description>
			<content:encoded><![CDATA[<p style="text-align: center;"><strong>||ಹರೇರಾಮ||</strong></p>
<p>ಒಮ್ಮೊಮ್ಮೆ ನಮ್ಮ ಕೃತಿಯ ಕುರಿತು ನಮ್ಮೊಳಗೇ ಅಚ್ಚರಿ ಮೂಡುವುದುಂಟು.ಇದು ಹೇಗಾಯಿತು ಎನ್ನುವ ಪ್ರಶ್ನೆ ಏಳುವುದುಂಟು ! ಆಗ ಅದು ಕೇವಲ ನಮ್ಮ  ಕೃತಿಯಲ್ಲವೆಂದೇ ತಿಳಿಯಬೇಕು.ನಮ್ಮನ್ನು ಮಾಧ್ಯಮವಾಗಿರಿಸಿಕೊಂಡು ಸೃಷ್ಟಿಕರ್ತನೇ ಹೊರ ತರುವ ಕೃತಿಯದು..! ನಮ್ಮ ಕೃತಿಯೇ ಆಗಿದ್ದರೆ, ಹೇಗಾಯಿತು ಎನ್ನುವ ಪ್ರಶ್ನೆಗೆ ಅವಕಾಶವಾದರೂ ಎಲ್ಲಿ?</p>
<p><span style="color: #339966;">ತಮ್ಮ ಮುಖದಿಂದಲೇ ತಾನಾಗಿ ಹೊರಹೊಮ್ಮಿದ </span><strong><span style="color: #339966;">&#8216;ಮಾನಿಷಾದ</span></strong><span style="color: #339966;">&#8216;ವನ್ನು ತಮ್ಮ ಕಿವಿಯಿಂದಲೇ ಕೇಳಿ ಅಚ್ಚರಿಗೊಂಡರು ವಾಲ್ಮೀಕಿಗಳು..!</span></p>
<p><span style="color: #0000ff;">ಅಚ್ಚರಿಯ ಆದಿಕವಿತೆಯ ಆವಿರ್ಭಾವಕ್ಕೆ ಪ್ರಪಂಚದ ಪಂಚ ಜೀವಿಗಳು ಸಾಕ್ಷಿ. ಬೇಡನ ಬಾಣಾಘಾತಕ್ಕೆ ಸಿಲುಕಿ ಸಾಯುವ ಪಕ್ಷಿ ಒಂದು ಸಾಕ್ಷಿಯಾದರೆ, ಸಾಯುವ ಪಕ್ಷಿಯನ್ನು ಕಂಡು ನೋಯುವ ಪಕ್ಷಿ, ಇನ್ನೊಂದು ಸಾಕ್ಷಿ !<br />
ಇನ್ನೆರಡು ಮಾನವ ಸಾಕ್ಷಿಗಳು. ವಾಲ್ಮೀಕಿಗಳಿಗೆ &#8216;ಬೇಡ-ಬೇಡ&#8217;ವೆನಿಸಿದ </span><strong><span style="color: #0000ff;">ಬೇಡ</span></strong><span style="color: #0000ff;">..ಬೇಕೆನಿಸಿದ ಭರದ್ವಾಜ&#8230;!<br />
ಐದನೆಯದು ಆತ್ಮಸಾಕ್ಷಿ. ಅದು ಬೇರೆ ಯಾರಲ್ಲ..ತನ್ನ ಮತಿ-ಅನುಮತಿಗಳಿಲ್ಲದೆ, ಸಂಕಲ್ಪ ಪ್ರಯತ್ನಗಳಿಲ್ಲದೆ, ತಾನೇತಾನಾಗಿ ತನ್ನೊಳಗಿಂದ ಹೊರಹೊಮ್ಮುವ  ಶ್ಲೋಕವೊಂದನ್ನು ಕಂಡು ಮೂಕರಾದ ವಾಲ್ಮೀಕಿಗಳೇ..!</span></p>
<p>ಈ ಪಂಚ ಸಾಕ್ಷಿಗಳಲ್ಲಿ ವಾಲ್ಮೀಕಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿದ್ದುದು ಭರದ್ವಾಜನೊಂದಿಗೆ ಮಾತ್ರ. ಪಾಲ್ಗಡಲು ತರಂಗವೊಂದನ್ನು ಕರೆದು ತನ್ನೊಳಗಿನಿಂದ ಉದಯಿಸಿ ಬರುವ ಚಂದ್ರನನ್ನು ತೋರಿಸಿದಂತೆ..<br />
ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.</p>
<p><span style="color: #008000;">&#8220;ಏನು ಸೋಜಿಗವಿದು!? ಛಂದಸ್ಸೂತ್ರದಲ್ಲಿ ಬದ್ಧವಾದ, ಸಮವಾದ ನಾಲ್ಕು ಪಾದಗಳಿಂದ ಶೋಭಿಸುವ, ನಾದ-ಲಯಗಳಲ್ಲಿ ನಲಿಯುವ ಕವಿತಾ ಕಾಮಧೇನುವೇ ಇಳೆಗಿಳಿದು ಬರುವುದನ್ನು ನೋಡು&#8230;<br />
ಇದು ಶಾಪವಲ್ಲ, ಶೋಕವಲ್ಲ&#8230;ಶ್ಲೋಕವಿದು..ಕರುಣರಸ ಪಾಕವಿದು..!&#8221;</span></p>
<p>ಭರದ್ವಾಜನ ಆತ್ಮ ಅಹುದೆಂದಿತು, ಮನ ಬಾಗಿತು,ತಲೆದೂಗಿತು.ವಾಲ್ಮೀಕಿಗಳ  <strong>&#8216;ಮಾನಿಷಾದ&#8217;</strong> ಭರದ್ವಾಜನ ಮುಖದಲ್ಲಿ ಮಾರ್ದನಿಸಿತು..<br />
ವಾಲ್ಮೀಕಿಗಳ ಕಿವಿದೆರೆಗಳಲ್ಲಿ ಅಮೃತ ಹೊಕ್ಕಂತೆ, ಅದೇನೋ ತಂಪು-ತೃಪ್ತಿ..ಆತ್ಮಸಂತೋಷ,ಸಮಾಧಾನ!<br />
ಅದೊಂದು ವೃತ್ತ&#8230;ವಾಲ್ಮೀಕಿಗಳ ಹೃದಯದಲ್ಲಿ ಹುಟ್ಟಿದ <strong>ಶೋಕ</strong>..ಮುಖದಲ್ಲಿ <strong>ಶ್ಲೋಕ</strong>ವಾಯಿತು! ಭರದ್ವಾಜನ ಕಿವಿಯ ಹಾದಿಯಲ್ಲಿ ಹೃದಯ ಸೇರಿ ಆತನ ಮುಖದಲ್ಲಿ ಪ್ರತಿಧ್ವನಿಸಿತು.<br />
ಅದು ವಾಲ್ಮೀಕಿಗಳ ಕರ್ಣಪಥದ ಮೂಲಕವಾಗಿ ಮತ್ತೊಮ್ಮೆ ತನ್ನ ಮೂಲನೆಲೆಯಾದ ಹೃದಯವನ್ನು ಸೇರುವಾಗ,  ಏನಚ್ಚರಿ! ತಾಪವು ತೃಪ್ತಿಯಾಗಿ..ಶೋಕವು ಸಂತೋಷವಾಗಿ ಮಾರ್ಪಟ್ಟಿತ್ತು&#8230;!</p>
<p><span style="color: #0000ff;">ತನ್ನ ಮಗುವನ್ನು ತಾನೇ ಕಂಡು ತೃಪ್ತಿಪಡುವ ತಾಯಿಯಂತೆ&#8230;ತನ್ನ ಮೊಗವನ್ನೇ ಕನ್ನಡಿಯಲ್ಲಿ ಕಂಡು ನಲಿಯುವ ನಾರಿಯಂತೆ&#8230;ತನ್ನದೇ ಪ್ರತಿಧ್ವನಿಯಲ್ಲಿ ವಿಸ್ತರಿಸುವ ಧ್ವನಿಯಂತೆ&#8230;<br />
ತನ್ನ ಜ್ಞಾನಕಂದನ ಸ್ವರದಲ್ಲಿ ಅನುರಣಿಸುವ ಕಾವ್ಯಕಂದವನ್ನು ಆಲಿಸಿ ಆನಂದಿಸಿದರು ವಾಲ್ಮೀಕಿಗಳು..<br />
ಗಂಗೆಯಲ್ಲಿ ಬಂದ ಮಹಾಪೂರವು ಮೆಲ್ಲಮೆಲ್ಲನೇ ಇಳಿಯುವಂತೆ,  ಒಮ್ಮೆ ಸಾಮಾನ್ಯ ಪ್ರಜ್ಞೆಗೆ ಮರಳಿ,ಮರೆತೇ ಹೋಗಿದ್ದ ತಮಸಾ ಸ್ನಾನಕ್ಕೆ ಉದ್ಯುಕ್ತರಾದರು..!</span></p>
<p><span style="color: #993366;">ಆಕಾಶಕಾಯಗಳು ಅಸಾಮಾನ್ಯ ಕಾರಣಗಳಿಗಾಗಿ ಒಮ್ಮೊಮ್ಮೆ ತಮ್ಮ ಪಥವನ್ನು ಬದಲಾಯಿಸುವುದುಂಟು..ಪುನಃ ಮೂಲಪಥವನ್ನೇ ಸೇರುವುದೂ ಉಂಟು&#8230;!ಎಂದಿನಂತೆ ಸ್ನಾನಕ್ಕೆ ಹೊರಟಿದ್ದ ವಾಲ್ಮೀಕಿಗಳನ್ನು ಅದ್ಯಾವುದೋ ದಿವ್ಯಶಕ್ತಿಯೊಂದು ಸೆಳೆದೊಯ್ದು ವಿಚಿತ್ರ ಘಟನಾವಳಿಗಳನ್ನು ನಿರ್ಮಿಸಿ ಮರಳಿ ತಮಸಾ ತೀರಕ್ಕೆ ತಂದಿಳಿಸಿತ್ತು..!</span></p>
<p>ತಮಸೆಯಲ್ಲಿ ತನ್ಮಯರಾಗಿ ಮುಳುಗಿ ತನು ತೊಳೆದರೂ ವಾಲ್ಮೀಕಿಗಳ ಮನದೊಳಗೆ &#8216;ಮಾನಿಷಾದ&#8217; ಮರೆಯಾಗಲಿಲ್ಲ..!</p>
<p><span style="color: #0000ff;">ನಮ್ಮಾತ್ಮ ನಮ್ಮ ತನುವಿಗೇ ಸೀಮಿತವಾಗಿದ್ದರೆ ಪರರ ನೋವು-ನಲಿವುಗಳು ನಮಗರಿವಾಗದು..ವಾಲ್ಮೀಕಿಗಳಾದರೋ, ಆತ್ಮವಿಸ್ತಾರವುಳ್ಳವರು..ಸಕಲ ಜೀವಿಗಳಲ್ಲಿಯೂ ತಮ್ಮನ್ನೇ ಕಾಣುವವರು..!<br />
ಆದುದರಿಂದಲೇ ಕ್ರೌಂಚಪಕ್ಷಿಗಳ ಕರುಣಧ್ವನಿ ಅವರ ಹೃದಯದಲ್ಲಿ ಪ್ರತಿಧ್ವನಿಸುತ್ತಿತ್ತು..ಆಶ್ರಮದಲ್ಲಿ ಸುಖಾಸನದಲ್ಲಿ ಸುಖಾಸೀನರಾಗಿ ಕ್ರೌಂಚಕಥೆಯನ್ನು ಮರೆಯಲೋಸುಗವೋ ಎಂಬಂತೆ&#8230;<br />
ಅನ್ಯಾನ್ಯ ಕಥೆಗಳನ್ನು ಕಥನ ಮಾಡತೊಡಗಿದರು..ಆದರೆ, ಮರೆತೇನೆಂದರೂ ಮರೆಯಲಾಗದಸ್ಥಿತಿ ಅವರದಾಗಿತ್ತು..ಮನದಲ್ಲಿ ಮಡುಗಟ್ಟಿದ ವಿಷಾದ,ಮುಖದಲ್ಲಿ ಉದ್ಗಾರಗೊಳ್ಳುವ ಮಾನಿಷಾದ&#8230;</span></p>
<p><strong>ಯಾಕೆ ಹೀಗೆ? ಏನಿದು? ಹೇಗಿದು?</strong> ಎನ್ನುವ ಪ್ರಶ್ನೆಗಳ ಸಾಲು ಸಾಲು ಮುನಿಮನದಲ್ಲಿ ಸಮುದ್ರಮಥನವನ್ನೇ ಏರ್ಪಡಿಸುವಾಗ ಉತ್ತರದ ಅಮೃತವನ್ನೇ ತರುವಂತೆ..ಚತುರ್ಮುಖ ಬ್ರಹ್ಮನ ಆವಿರ್ಭಾವವಾಯಿತಲ್ಲಿ&#8230;!<a href="http://hareraama.in/wp-content/uploads/2010/07/ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...!"><img class="alignright size-medium wp-image-5214" title="ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...!" src="http://hareraama.in/wp-content/uploads/2010/07/pw_ga_bhagiratha_and_brahma-e1278602841394-300x220.jpg" alt="" width="300" height="220" /></a><br />
ಸೃಷ್ಟಿ ರಹಸ್ಯದ ಓನಾಮವನ್ನೇ ತಿಳಿಯದೆ ಪಾಡುಪಡುವ ನಮಗೆ,ಸೃಷ್ಟಿಕರ್ತನೊಡನೆ ತನ್ನ ಕುಟಿಯಲ್ಲಿಯೇ ಮುಖಾಮುಖಿಯಾಗುವ,ಸರಳ ಸಂಭಾಷಣೆಗೈಯುವ ವಾಲ್ಮೀಕಿಗಳು ಅರ್ಥವಾಗದಿದ್ದರೆ ಆಶ್ಚರ್ಯವೇನಿಲ್ಲ&#8230;!</p>
<p><span style="color: #008000;">ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ&#8230;!<br />
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!<br />
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.</span></p>
<p><strong><span style="color: #008000;">ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ&#8230;!</span></strong></p>
<p>ದೊಡ್ಡವರ ಸ್ವಭಾವವೇ ಹೀಗೆ..ನಾವು ಯಾವುದನ್ನು ಬಹುದೊಡ್ಡದೆಂದುಕೊಳ್ಳುತ್ತೇವೆಯೋ,ಅದು ಕಣ್ಣೆದುರಿದ್ದರೂ ಮರೆತುಬಿಡುತ್ತಾರವರು..!<br />
ನಾವು ಯಾವುದನ್ನು ಚಿಕ್ಕದೆಂದುಕೊಳ್ಳುತ್ತೇವೆಯೋ,ಅದು ಅವರಿಗೆ ಬಹುದೊಡ್ಡದಾಗಿ ಕಾಣುತ್ತದೆ..!<br />
ವರ್ತಮಾನದಲ್ಲಿ ಪ್ರತ್ಯಕ್ಷವಿರುವ ಸೃಷ್ಟಿಕರ್ತನನ್ನು ಮರೆತು, ಭೂತದಲ್ಲಿ ಮರೆಯಾಗಿ ಹೋದ ಪುಟ್ಟ ಪಕ್ಷಿಗಳೆಡೆಗೆ ಮತ್ತೆ ಹರಿಯಿತು ಮುನಿಮನಸ್ಸು..!</p>
<p><span style="color: #ff0000;">&#8220;ಛೆ, ಪಾಪಿಯೇ..! ಅದೆಂಥ ಕೆಡುಕನ್ನೆಸಗಿಬಿಟ್ಟೆ..? ನಿನ್ನ ಅಕಾರಣ ವೈರಕ್ಕೆ,ನೀನೆಸಗಿದ ಅಕಾರಣ ಹಿಂಸೆಗೆ ಧಿಕ್ಕಾರವಿರಲಿ.ಸೊಗಸೇ ಮೈವೆತ್ತ ರೂಪದ, ಮಾಧುರ್ಯವೇ ಮೈವೆತ್ತ ನಾದದ ಕ್ರೌಂಚಪಕ್ಷಿಯನ್ನು ಆ ಅವಸ್ಥೆಯಲ್ಲಿ ಕೊಲ್ಲಲು ಮನವಾದರೂ ಹೇಗಾಯಿತು&#8230;?&#8221;</span></p>
<p><span style="color: #ff0000;"><br />
</span><span style="color: #0000ff;"> ತಮಸಾ ತೀರದ ಘಟನೆಗಳು ತಮಸಾ ತರಂಗಗಳಂತೆ ಒಂದರ ಮೇಲೊಂದು ವಾಲ್ಮೀಕಿಗಳ ಕಣ್ಣಿಗೆ ಕಟ್ಟಿದಂತೆ ಗೋಚರಿಸತೊಡಗಿದವು.<br />
ಮರಣಸಂಕಟದಲ್ಲಿ ಚಡಪಡಿಸುವ ತನ್ನ ವಲ್ಲಭನನ್ನು ಕಂಡು ಅಸಹಾಯಳಾಗಿ ರೋಧಿಸುವ ಕ್ರೌಂಚಿಯನ್ನು ನೆನೆನೆನೆದು ದುಃಖಿಸುತ್ತಾ ತನ್ನನ್ನೇ ಮರೆತ,<br />
ತನ್ನ ಮುಂದೆ ಬ್ರಹ್ಮದೇವನಿರುವನೆಂಬುದನ್ನೂ ಮರೆತ ವಾಲ್ಮೀಕಿಗಳ ಮುಖದಿಂದ ಅಪ್ರಯತ್ನವಾಗಿ ಮಾನಿಷಾದ ಹೊರಹೊಮ್ಮಿತು.<br />
ಅದನ್ನು ಆಲಿಸಿ ಕಮಲದಂತೆ ವಿಕಸಿತವಾದ ಕಮಲಾಸನನ ಮುಖದಿಂದ ಹೊರಹೊಮ್ಮಿದ ನಗು ಆಶ್ರಮವನ್ನು ವ್ಯಾಪಿಸಿತು&#8230;ವಾಲ್ಮೀಕಿಗಳಿಗೆ ಆಶ್ಚರ್ಯವನ್ನು ತಂದಿತು..!</span></p>
<p><span style="color: #0000ff;">ಆಗ ಬ್ರಹ್ಮನ ವಾಣಿಯಾಯಿತು&#8230;!</span></p>
<p><span style="color: #339966;">&#8220;ನಿನ್ನ ಮುಖದಲ್ಲಿ ಮಾನಿಷಾದದ ರೂಪದಲ್ಲಿ ಸರಸ್ವತಿ ಪ್ರಕಾಶವಾಗುತ್ತಿರುವುದು ನಿನ್ನಿಚ್ಚೆಯಲ್ಲ..ನನ್ನಿಚ್ಚೆ..!<br />
(ವಾಣಿ ಬ್ರಹ್ಮನ ರಾಣಿಯಲ್ಲವೇ..? ತನ್ನ ಪತಿಯ ಅಭಿಪ್ರಾಯ-ಅನುಮತಿಯಿಲ್ಲದೆ ಹೇಗೆ ತಾನೇ ಆಕೆ ಬೇರೊಂದೆಡೆ ಹೋಗಲು ಸಾಧ್ಯ..!?)<br />
ಯಾವುದು ಮೊದಲು ಶೋಕವಾಗಿತ್ತೋ..ಮತ್ತೆ ಶ್ಲೋಕವಾಯಿತೋ..ಅದು ಮುಂದೆ ಮಹಾಕಾವ್ಯವಾಗಬೇಕಾಗಿದೆ&#8230;!<br />
ರಾಮಚರಿತವನ್ನು ರಚಿಸು..<br />
ನಾರದರ ಮುಖದಿಂದ ಆ ಧರ್ಮಮೂರ್ತಿಯ, ಗುಣಸಾಗರನ, ಲೋಕೈಕವೀರನ ಚರಿತೆಯನ್ನು ಹೇಗೆ ನೀನು ಕೇಳಿದೆಯೋ, ಹಾಗೆಯೇ ಜಗತ್ತಿಗೆ ಬಿತ್ತರಿಸು.<br />
ನಾರದರು ಬಣ್ಣಿಸುವಾಗ ರಾಮಚರಿತೆಯನ್ನು ಕಿವಿಯಿಂದ ನೋಡಿದ ನೀನು..ಇದೋ, ಈಗ ನನ್ನ ಕೃಪೆಯಿಂದ ಅದನ್ನು ಕಣ್ಣಿನಿಂದಲೇ ನೋಡುವೆ.<br />
ಆದರೆ ಕಣ್ತೆರೆದು ನೋಡುವುದಲ್ಲ, ಧ್ಯಾನಮಗ್ನನಾಗಿ ಕಣ್ಮುಚ್ಚಿ ಕುಳಿತ ನಿನ್ನ ಮುಂದೆ ಸಂಪೂರ್ಣ ರಾಮಕಥೆಯೇ ಪ್ರಕಟಗೊಳ್ಳುವುದು ..<br />
ಯಾವ ಘಟನೆಗಳು ರಾಮನ ಜೀವನದಲ್ಲಿ ಲೋಕಾಂತದಲ್ಲಿ ನಡೆದವೋ..ಯಾವ ಘಟನೆಗಳು ಏಕಾಂತದಲ್ಲಿ ನಡೆದವೋ,ಅವೆಲ್ಲವೂ ಹಾಗೆ ಹಾಗೆಯೇ ನಿನ್ನ ಕಣ್ಮುಂದೆ ಗೋಚರಿಸುವುವು.<br />
ಇದೇ ರೀತಿಯ ಶ್ಲೋಕಗಳಿಂದಲೇ ರಾಮಕಥೆಯನ್ನು ಬಣ್ಣಿಸು..ಈ ಕಾವ್ಯದಲ್ಲಿ ನಿನ್ನ ಮಾತೆಂದಿಗೂ ಸುಳ್ಳಾಗದು..<br />
ಎಲ್ಲಿಯವರೆಗೆ ಧರೆಯಲ್ಲಿ ಹಿಮಾಲಯವೇ ಮೊದಲಾದ ಪರ್ವತಗಳಿರುವುವೋ..ಎಲ್ಲಿಯವರೆಗೆ ಗಂಗೆಯೇ ಮೊದಲಾದ ನದಿಗಳು ಹರಿಯುವುವೋ, ಅಲ್ಲಿಯವರೆಗೆ ನೀನು ರಚಿಸಿದ ರಾಮಾಯಣವು ಅಜರಾಮರವಾಗಿ ಉಳಿಯುವುದು.<br />
ಎಲ್ಲಿಯವರೆಗೆ ರಾಮಾಯಣವು ಭೂಮಿಯಲ್ಲಿ ಉಳಿದುಕೊಳ್ಳುವುದೋ..ಅಲ್ಲಿಯವರೆಗೆ ನೀನು ಬ್ರಹ್ಮಲೋಕದಲ್ಲಿ ವಿಹರಿಸುವೆ..&#8221;</span></p>
<p>ಆ ವಾಣಿಯ ಪರ್ಯವಸಾನದಲ್ಲಿ ಬ್ರಹ್ಮದೇವನು ಕಣ್ಮರೆಯಾದನು..ಆದರೆ, ಒಂದೇ ದಿನದಲ್ಲಿ ನಡೆದುಹೋದ, ಊಹೆಗೂ ಮೀರಿದ ಘಟನೆಗಳನ್ನವಲೋಕಿಸತೊಡಗಿದ ಮುನಿಯ ವಿಸ್ಮಯ ಬೆಳೆಯುತ್ತಲೇ ಇದ್ದಿತು..!<br />
<span style="color: #0000ff;"> ಮೊದಲು ಮನದೊಳಗೆ ಪರಿಪೂರ್ಣ ಪುರುಷನ ಕುರಿತುಮೂಡಿದ ಪ್ರಶ್ನೆ..<br />
ನಾರದರೊಂದಿಗೆ ಸಮಾಗಮ&#8230;<br />
ಉತ್ತರರೂಪವಾಗಿ ರಾಮಕಥಾಶ್ರವಣ..<br />
ತಮಸಾಗಮನ..<br />
ಕ್ರೌಂಚಯುಗ್ಮದ ಆನಂದ-ಅವಸಾನಗಳ ದರ್ಶನ&#8230;ಮಾನಿಷಾದ&#8230;<br />
ಆಶ್ರಮ ಪ್ರತ್ಯಾಗಮನ&#8230;<br />
ಮನದಲ್ಲಿಯೇ ಮಾನಿಷಾದ ಮಂಥನ&#8230;<br />
ಬ್ರಹ್ಮಾಗಮನ..<br />
ರಾಮಚರಿತೆಯ ಮಹಾಕಾವ್ಯ ರಚನೆಗೆ ನಿರ್ದೇಶನ.<br />
</span> <strong>ಆದಿಕಾವ್ಯದ ಅಂಕುರಾರೋಪಣದ ಮೂಲಕವಾಗಿ ಅಖಿಲ ವಿಶ್ವಕ್ಕೆ ನವದಿಶಾ ದರ್ಶನವನ್ನುಮಾಡಿಸಿದ ಆ ದಿನವನ್ನು ಮಹಾದಿನವೆನ್ನದಿರಲಾದೀತೆ&#8230;!?</strong></p>
<p>ಶ್ಲೋಕ ಒಂದೇ&#8230;!<br />
ಆದರೆ ಮೂವರ ಮುಂದೆ ಉಚ್ಚರಿಸಿದಾಗ ಆದ ಪರಿಣಾಮಗಳು ಸಂಪೂರ್ಣ ಬೇರೆ ಬೇರೆ&#8230;!<br />
ಬೇಡನ ಮುಂದೆ ಉದ್ಗರಿಸಿದಾಗ ಯಾವ ಶುಭ ಪರಿಣಾಮವೂ ಆಗಲಿಲ್ಲ..! (ಶಾಪದ ದುಷ್ಪರಿಣಾಮವನ್ನು ಹೊರತುಪಡಿಸಿ).<br />
ಭರದ್ವಾಜನ ಮುಂದೆ ಉಚ್ಚರಿಸಿದಾಗ ವೃದ್ಧಿಯಾಗದಿದ್ದರೂ ಪ್ರತಿಧ್ವನಿ ಬಂದಿತು&#8230;!<br />
ಬ್ರಹ್ಮದೇವನ ಮುಂದೆ ಉಚ್ಚರಿಸಿದಾಗ..ಅದೊಂದು ಮಹಾಕಾವ್ಯಕ್ಕೇ ನಾಂದಿಯಾಯಿತು..!ಕಾವ್ಯಲೋಕದ ನಿರ್ಮಿತಿಗೆ ಮೂಲಶಿಲೆಯಾಯಿತು&#8230;!</p>
<p><span style="color: #ff00ff;">ಬದುಕಿನಲ್ಲಿ &#8217;</span><strong><span style="color: #ff00ff;">ಏನು&#8217;</span></strong><span style="color: #ff00ff;"> ಎಂಬುದೆಷ್ಟು ಮುಖ್ಯವೋ, &#8216;</span><strong><span style="color: #ff00ff;">ಎಲ್ಲಿ&#8217;</span></strong><span style="color: #ff00ff;"> ಎಂಬುದೂ ಅಷ್ಟೇ ಮುಖ್ಯವಾಗುತ್ತದೆ..<br />
ಹೇಳಬಾರದಲ್ಲಿ ಹೇಳಿದರೆ ಆಗಬಾರದ್ದಾಗುತ್ತದೆ .<br />
ಹೇಳಬೇಕಾದಲ್ಲಿ ಹೇಳಿದರೆ ಆಗಬೇಕಾದದ್ದೇ ಆಗುತ್ತದೆ..ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ&#8230;!<br />
</span></p>
<p>ದಿವಿಯಲ್ಲಿ ದೇವತೆಗಳ ಸಂದೋಹವೇ ಇರುವಾಗ, ವಾಲ್ಮೀಕಿಗಳ ಬಳಿ ಬ್ರಹ್ಮದೇವನೇ ಬರಬೇಕೇಕೆ..?<br />
ಶ್ರೀರಾಮ ಯಾರ ಅವತಾರವೋ, ಆ ಮಹಾವಿಷ್ಣುವೇ ಬರಬಹುದಿತ್ತು..ಸೀತಾವತಾರಗೈದ ಮಹಾಲಕ್ಷ್ಮಿ ಬರಬಹುದಿತ್ತು.<br />
ಶ್ರೀರಾಮನ ಪರಮಪ್ರಿಯನಾದ ಮಹಾದೇವನೇ ಬರಬಹುದಿತ್ತು..</p>
<p>ಅದು ಹೀಗೆ..<br />
ಸರಸ್ವತಿಯನ್ನು ಧರೆಗೆ ಸರಸ್ವತೀರಮಣನೇ ಕರೆತರಬೇಕು..<br />
ರಾಮಾಯಣವೆಂದರೆ, ಸೃಷ್ಟಿ-ಶಬ್ಧ ಚಿತ್ರ. ಅದರ ಶುಭಾರಂಭಕ್ಕೆ ಸೃಷ್ಟಿಕರ್ತನೇ ಬರಬೇಕು..!<br />
ಅನನ್ಯವಾದ ಜೋಡಿಯದು ಸರಸ್ವತೀ-ಸರಸಿಜಾಸನರದು..</p>
<p>ಬ್ರಹ್ಮನೇ ಜಗತ್ತಿನ ಸಕಲ ವಸ್ತುಗಳನ್ನೂ ಸೃಷ್ಟಿ ಮಾಡುವವನು.<br />
ಒಂದೊಂದು ವಸ್ತುವಿಗೂ ಸಂಬಂಧಿಸಿದ ಶಬ್ಧಗಳನ್ನು ಸೃಷ್ಟಿಸುವುದು ಸರಸ್ವತಿ..<br />
ಅವೆರಡರಲ್ಲಿ (ಶಬ್ಧಾರ್ಥಗಳಲ್ಲಿ)ಸಹಚಾರವಿದ್ದರೆ ಅದುವೇ ಸತ್ಯ..ಅವುಗಳಲ್ಲಿ ವ್ಯಭಿಚಾರ ಬಂದರೆ ಅದುವೇ ಮಿಥ್ಯ..<br />
ಇರುವುದನ್ನೇ ನುಡಿದರೆ ಸತ್ಯ..ಇರುವುದೇ ಬೇರೆ, ನುಡಿಯೇ ಬೇರೆ ಆದರೆ ಅದುವೇ ಮಿಥ್ಯ..<br />
ಶಬ್ಧಾರ್ಥಗಳು <strong>&#8216;ಸಹಿತ&#8217;</strong>ವಾಗಿದ್ದರೆ, ಅದು ತಾನೆ<strong> &#8216;ಸಾಹಿತ್ಯ&#8217;</strong>ವೆನಿಸಿಕೊಳ್ಳುವುದು..?<br />
ಶಭಾರ್ಥಗಳ ಮೂಲ ಸ್ರೋತಸ್ಸುಗಳು ಜೊತೆಗೂಡಿ ಬಂದು ಆದಿಕವಿಯನ್ನು ಹರಸಿ ಪ್ರೇರಿಸಿದವು ಆದಿಕಾವ್ಯ ರಚನೆಗೆ..!</p>
<p>ಈ ಮಧ್ಯೆ ಮಾನಿಷಾದ ಬೆಳೆಯತೊಡಗಿತು.ಕ್ಷಣಕ್ಷಣಕ್ಕೂ ಹೆಚ್ಚು ಹೃದಯಗಳನ್ನೂ, ಹೆಚ್ಚು ಮುಖಗಳನ್ನೂ ಆವರಿಸತೊಡಗಿತು&#8230;<br />
ಮೊದಲು ವಾಲ್ಮೀಕಿಗಳು.. ಮತ್ತೆ ಜೊತೆಗೆ ಭರದ್ವಾಜ..ಈಗ ಆಶ್ರಮಕ್ಕೆ ಆಶ್ರಮವೇ ಆನಂದ ಆಶ್ಚರ್ಯಗಳೊಂದಿಗೆ ಮಾನಿಷಾದವನ್ನು ಮತ್ತೆ ಮತ್ತೆ ಹಾಡತೊಡಗಿತು&#8230;!</p>
<p><span style="color: #0000ff;">ಸಾವಿರ ಯೋಜನಗಳ ಪ್ರಯಾಣ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ..<br />
೨೪,೦೦೦ ಶ್ಲೋಕಗಳ ರಾಮಾಯಣ ರಚನೆ ಮಾನಿಷಾದವೆಂಬ ಒಂದು ಶ್ಲೋಕದಿಂದ ಆರಂಭವಾಯಿತು&#8230;!</span></p>
<p style="text-align: center;">||ಹರೇರಾಮ||</p>
]]></content:encoded>
			<wfw:commentRss>http://hareraama.in/blog/%e0%b2%95%e0%b2%be%e0%b2%b5%e0%b3%8d%e0%b2%af-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%95%e0%b2%b0%e0%b3%8d%e0%b2%a4%e0%b2%be/feed/</wfw:commentRss>
		<slash:comments>11</slash:comments>
		</item>
		<item>
		<title>ಮಡಿಲ ಮಮತೆಗೆ ಮುಡಿ ಸಮರ್ಪಿತ&#8230;</title>
		<link>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/</link>
		<comments>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/#comments</comments>
		<pubDate>Sun, 04 Jul 2010 16:19:02 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=5036</guid>
		<description><![CDATA[ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ...?
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?
ಹಂಚಿಕೊಂಡಾಗ ದು:ಖ ಅರ್ಧವಾಗುವದು.. ಸುಖ ಇಮ್ಮಡಿಸುವದು..
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?
ಲಕ್ಷ್ಮೀಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು...!!
ಲಕ್ಷ್ಮಿಯಿರುವ ಭೂಮಿಯೇ ಆಪ್ಯಾಯಮಾನವೆನಿಸಿತು…!
]]></description>
			<content:encoded><![CDATA[<p style="text-align: center;"><strong>|| ಹರೇರಾಮ ||</strong><strong> </strong></p>
<div>
<h4 style="text-align: center;"><span style="color: #993366;"> </span></h4>
</div>
<div>
<h4 style="text-align: left;"><span style="color: #993366;"> </span></h4>
</div>
<h4 style="text-align: left;"><span style="color: #993366;"></p>
<p style="text-align: center;"><span style="text-decoration: underline;"><span style="color: #0000ff;">ಕ್ಷೀರ ಸಾಗರ ತರಂಗ ಶೀಕರಾಸಾರ ತಾರಕಿತ ಚಾರುಮೂರ್ತಯೇ |<br />
ಭೋಗಿ ಭೋಗ ಶಯನೀಯ ಶಾಯಿನೇ ಮಾಧವಾಯ ಮಧುವಿದ್ವಿಷೇ ನಮಃ ||</span></span></p>
<p style="text-align: center;">
<div id="attachment_5051" class="wp-caption aligncenter" style="width: 310px"><a href="http://hareraama.in/wp-content/uploads/2010/07/Narayana-sg2.jpg"><img class="size-thumbnail wp-image-5051   " title="ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…! " src="http://hareraama.in/wp-content/uploads/2010/07/Narayana-sg2-150x150.jpg" alt="" width="150" height="150" /></a><p class="wp-caption-text">ಅಮೃತಸಾಗರದಲ್ಲಿ ಅದ್ವೈತದಂಪತಿಗಳು..!</p></div>
<p style="text-align: left;">ಹಾಲು&#8230;..ಹಾಲು&#8230;&#8230;ಹಾಲು&#8230;!<br />
ಎಲ್ಲೆಲ್ಲೂ ಹಾಲು..!<br />
ಎಷ್ಟು ದೂರ ನೋಡಿದರೂ ಹಾಲು..!<br />
ಎಷ್ಟು ಆಳಕ್ಕಿಳಿದರೂ ಹಾಲು…!<br />
ಹಾಲೇ ಹಾಲು&#8230;!</p>
<p style="text-align: left;">ಕಣ್ದಣಿಯುವಷ್ಟು ವಿಶಾಲ..<br />
ಕಣ್ತಣಿಯುವಂತೆ ಶೀತಲ&#8230;!</p>
<p style="text-align: left;">ಅದುವೇ ಕ್ಷೀರಸಾಗರ..!</p>
<p style="text-align: left;">ಅಗಾಧ ಅನಂತ ಅಮೃತ ಸಾಗರದ ಮಧ್ಯದಲ್ಲಿ ..ಆಶ್ಚರ್ಯ&#8230;ಆಶ್ಚರ್ಯ&#8230;!<br />
ಆದಿಶೇಷ&#8230;ವಿಷಸರ್ಪಗಳ ರಾಜ&#8230;</p>
<p style="text-align: left;">ಅದೋ ಅಲ್ಲಿ&#8230;!<br />
ಅಮೃತಸಾಗರದ ಶಯನಮಂದಿರದಲ್ಲಿ&#8230;<br />
ವಿಷವಿಭೂಷಿತನಾದ ಆದಿಶೇಷನ ಪರ್ಯಂಕದಲ್ಲಿ ..<br />
<strong>ಅಮೃತ- ವಿಷ</strong>ಗಳನ್ನು ಮೀರಿ ನಿಂತ ಮಹಾಪ್ರಭು…<strong>ಮಧುಮರ್ದನ..ಮಾಧವ…ಮಾರಮಣ..!</strong></p>
<p style="text-align: left;">ಕರುಣಾಸಾಗರನನ್ನು ಸೇರುವ ಅಮೃತಸಾಗರದ ತವಕವೇ ತರಂಗಗಳಾಗಿ -<br />
ಮತ್ತೆ ಮತ್ತೆ ಮೇಲೆದ್ದು ಮುಂದೊತ್ತಿ ಶೇಷಶರೀರವನ್ನು ಮುತ್ತಿಟ್ಟರೆ..<br />
ಅಲ್ಲಿಂದ ಚಿಮ್ಮಿದ ದುಗ್ಧ ಬಿಂದುಗಳು ತುಂತುರು ಮಳೆಯಾಗಿ ಮಾರಮಣನ ಮಂಗಳ ಶರೀರವನ್ನಲಂಕರಿಸುತ್ತಿದ್ದವು&#8230;!<br />
ನೀಲಶರೀರದಲ್ಲಿ ಪಡಿಮೂಡಿದ ಸ್ವರ್ಣವರ್ಣದ ಹಾಲಹನಿಗಳು<br />
ನೀಲಾಕಾಶದಲ್ಲಿ ಮೂಡಿ ಮಿನುಗುವ ಕೋಟಿತಾರೆಗಳಂತೆ ಅತಿಶಯವಾಗಿ ಶೋಭಿಸುತ್ತಿದ್ದವು&#8230;</p>
<p style="text-align: left;">ಸುಧಾಸಿಂಧುವಿನಲ್ಲಿ ಸಂಭವಿಸಿದವಳು&#8230;<br />
ದಯಾಸಿಂಧುವಿನ ಕೈ ಹಿಡಿದವಳು..<br />
ನಂಬಿದವರಿಗೆ,<br />
ಭವಸಿಂಧುವನ್ನು ದಾಟಿಸುವವಳು..<br />
ಸಂಪತ್ಸಿಂಧುವನ್ನೇ ನೀಡುವವಳು&#8230;<br />
ಮಂಗಳ ದೇವತೆ ಮಹಾಲಕ್ಷ್ಮಿ..!!</p>
<p style="text-align: left;">ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…!<br />
ಶಾಂತಸಾಗರದಲ್ಲಿ ಒಮ್ಮಿಂದೊಮ್ಮೆಲೇ ಬೀಸುವ ಚಂಡಮಾರುತದಂತೆ ಭೃಗುಮುನಿಗಳ ಪ್ರವೇಶವಾಯಿತಲ್ಲಿ..</p>
<p style="text-align: left;"><strong>ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ,<br />
ಚಿನ್ನದಾತುರಕಿಂತ ಹೆಣ್ಣು- ಗಂಡೊಲವು |<br />
ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ,<br />
ತಿನ್ನುವುದದಾತ್ಮವನೆ &#8211; ಮಂಕುತಿಮ್ಮ |</strong>|</p>
<p style="text-align: left;">ತನ್ನನ್ನು ಗಮನಿಸಬೇಕು, ಗುರುತಿಸಬೇಕು, ಗೌರವಿಸಬೇಕು ಎನ್ನುವ ಚಪಲವಿಲ್ಲದೇ ಹೋಗಿದ್ದರೆ..<br />
ಈ ಜಗತ್ತಿನಲ್ಲಿ ಕ್ಲೇಶ- ಕಲಹಗಳೇ ಇರುತ್ತಿರಲಿಲ್ಲವೇನೋ…!!</p>
<p style="text-align: left;">ಭಾವದುಂಬಿ ಚಿನ್ಮಯನ ಚರಣದಲ್ಲಿ ತನ್ಮಯರಾದ ವೈಕುಂಠವಾಸಿಗಳು&#8230;<br />
ಜಗದಗಲ ತೆರೆದ ತನ್ನ ಕಮಲ ನೇತ್ರಗಳಿಂದ ಅನುಗ್ರಹದ ಅಮೃತ ವರ್ಷವನ್ನೇ ಅವರೆಲ್ಲರ ಮೇಲೆ ಸುರಿಸುವ ವೈಕುಂಠದೊಡೆಯ&#8230;!<br />
ಯಾರೂ .. ಮತ್ಯಾರನ್ನೂ ಗಮನಿಸುವ ವಾತಾವರಣವೇ ಅಲ್ಲವದು..!</p>
<p style="text-align: left;">ವೈಕುಂಠದ ಸವಿಯನ್ನು ಸವಿಯಬೇಕಾದರೆ ಭಕ್ತನಾಗಬೇಕು.. ಅಥವಾ ಭಗವಂತನಾಗಬೇಕು.<br />
ಎರಡೂ ಭಾವಗಳಿಂದ ಭಿನ್ನನಾಗಿ ನಿಂತ ಭೃಗುವಿಗೆ ತಾನೇ ಬೇರೆಯೆಂದೆನಿಸಿತು.<br />
ಮಹಾವಿಷ್ಣುವೇ ತನ್ನನ್ನು ಉಪೇಕ್ಷಿಸಿದಂತೆನಿಸಿತು.</p>
<p style="text-align: left;">ವಿವೇಕದ ಕಣ್ಮುಚ್ಚಿ ಅಹಂಕಾರದ ಕಣ್ಣು ತೆರೆದಾಗ ಆಗುವದೇ ಹೀಗೆ..<br />
ಮಸ್ತಕವೆಂಬ ಉತ್ತಮಾಂಗದಲ್ಲಿರಬೇಕಾದ ದೃಷ್ಟಿ ಪತನಗೊಂಡು ಪಾದಕ್ಕಿಳಿದರೆ ಮತ್ತೇನಾಗಬೇಕು..?</p>
<p style="text-align: left;">ಮನೆಯವರು ಮಾತನಾಡಿಸಲಿಲ್ಲವೆಂದು ಮನೆಯ ಯಜಮಾನನ ಎದೆಗೊದೆಯುವ ಅತಿಥಿ..<br />
ಎದೆಗೊದೆಯುವ ಪಾದಗಳನ್ನೇ ಒತ್ತುವ, ಕಣ್ಣಿಗೊತ್ತಿಕೊಳ್ಳುವ ಯಜಮಾನ..</p>
<p style="text-align: left;">ವೈಕುಂಠದಲ್ಲಿ ನಡೆದಿದ್ದು ಹಾಗೆ&#8230;!!<br />
ಶ್ರೀ ವತ್ಸ &#8211; ಕೌಸ್ತುಭಗಳಿಂದ ವಿಭೂಷಿತವಾದ &#8216;ಶ್ರೀ&#8217;-ನಿವಾಸವಾದ ವಿಷ್ಣುವಿನ ವಕ್ಷಸ್ಠಲವು ಭೃಗುವಿನ ಪಾದಗಳಿಂದ ಆಕ್ರಾಂತವಾಯಿತು.<br />
ಭಗವತ್ಕರಕಮಲಗಳು ಸ್ಪರ್ಶಮಾತ್ರದಿಂದಲೇ ಭೃಗುವಿನ ಅಹಂಕಾರವನ್ನೇನೋ ಕೊನೆಗಾಣಿಸಿದವು..ಆದರೆ,<br />
ಮಳೆಮುಗಿದರೂ ನೆರೆ ಇಳಿಯದಂತೆ ಭೃಗುವಿನ ಅವಿನಯದ ಪರಿಣಾಮಗಳು ಮುಂದುವರೆದವು..!<br />
ಕ್ಷಣಮಾತ್ರದ ಆವೇಶದಲ್ಲಿ ನಡೆಯುವ ಘಟನೆಗಳ ಪರಿಣಾಮ ಯುಗ ಯುಗಗಳ ಕಾಲ ನಿಂತುಬಿಡಬಹುದಲ್ಲವೇ?</p>
<p style="text-align: left;">ತನ್ನ ಪರಮ ಪ್ರೇಮದ ನೆಲೆಯಾದ ಪ್ರಭುವಿನ ವಕ್ಷಸ್ಥಲವು ಭೃಗುವಿನ ಪಾದಾಘಾತಕ್ಕೊಳಗಾದುದನ್ನು ಕಂಡು ಖತಿಗೊಂಡ ಮಹಾಲಕ್ಷ್ಮೀ<br />
ಪತಿಗೃಹವನ್ನೂ..ಪಿತೃಗೃಹವನ್ನೂ ತ್ಯಜಿಸಿ ಧರೆಯಲ್ಲಿ ಮರೆಯಾಗಿ ಹೋದಳು…!</p>
<p style="text-align: left;"><strong><span style="color: #0000ff;">ಗೃಹಿಣೀ ಗೃಹಮುಚ್ಯತೇ…|</span></strong></p>
<p style="text-align: left;"><strong>ಗೃಹವು ಗೃಹವಲ್ಲ.. ಗೃಹಿಣಿಯೇ ನಿಜವಾದ ಗೃಹ..!!</strong></p>
<p style="text-align: left;">ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..<br />
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ&#8230;?<br />
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?<br />
ಹಂಚಿಕೊಂಡಾಗ ದು:ಖವು ಅರ್ಧವಾಗುವದು.. ಸುಖವು ಇಮ್ಮಡಿಸುವದು..<br />
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?ಸರಸವೆಲ್ಲಿ..?<br />
ಲಕ್ಷ್ಮಿಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು&#8230;!!<br />
ಅರಸಿಯನ್ನರಸುತ್ತಾ, ಸ್ಮರಿಸುತ್ತಾ, ಪರವೈಕುಂಠವನ್ನೇ ಪರಿತ್ಯಜಿಸಿ ಧರೆಗಿಳಿದನು ಸಿರಿಯರಸ..!</p>
<p style="text-align: left;">ಅಮೃತಸಾಗರದ ಜೊತೆಗೆ ಆಹಾರವನ್ನೂ, ಶೇಷಶಯನನ ಜೊತೆಗೆ ನಿದ್ರೆಯನ್ನೂ ಪರಿತ್ಯಜಿಸಿ,<br />
ವೆಂಕಟಾದ್ರಿಯ ಹುತ್ತವೊಂದರಲ್ಲಿ ಹುದುಗಿ ತೀವ್ರತರ ತಪ:ಶ್ಚರ್ಯೆಯಲ್ಲಿ ಮಗ್ನನಾದನಾತ!<br />
ಅಂತರ್ಭೂಮಿಯಲ್ಲಿ ಅಂತರ್ಮುಖನಾಗಿ ಕುಳಿತಿದ್ದ ಶ್ರೀನಿವಾಸನಿಗೆ ಜಗದ ಪರಿವೆಯೇ ಇರದಾಯಿತು.<br />
ಅತ್ತ ಜಗತ್ತಿಗೂ ಜಗನ್ನಿಯಾಮಕನ ಇರವೇ ತಿಳಿಯದಂತಾಯಿತು.<br />
ಅದೆಷ್ಟೋ ಕಾಲ ನಿರ್ನಿದ್ರನಾಗಿ, ನಿರಾಹಾರನಾಗಿ ಕುಳಿತಿದ್ದ ಹರಿಯ ಹಸಿವು -<br />
ಭೂಲೋಕವಾಸಿಗಳ್ಯಾರಿಗೂ ಅರಿವಿಲ್ಲದಾಯಿತು..</p>
<p style="text-align: left;">ಹ್ಞಾ..! ಯಾರಿಗೂ ಅರಿವಾಗಲಿಲ್ಲವೆನ್ನುವಂತಿಲ್ಲ..!<br />
ಕಣ್ಣರಿಯದಿದ್ದರೂ ಕರುಳರಿಯುವುದೆನ್ನುವರಲ್ಲವೇ..?<br />
ವೆಂಕಟಾದ್ರಿಯ ವಲ್ಮೀಕಗರ್ಭದಲ್ಲಿ ಅಂತರ್ಹಿತನಾಗಿ ಕುಳಿತುಕೊಂಡಿದ್ದ -<br />
ಶ್ರೀನಿವಾಸನ ಹಸಿವು ಚೋಳರಾಜನ ಅರಮನೆಯ ಒಡಲೊಂದರಲ್ಲಿ ಪ್ರತಿಧ್ವನಿಸತೊಡಗಿತ್ತು..!</p>
<p style="text-align: left;"><span style="color: #ff00ff;"><strong>ಅದು ಎನ್ನೋಣವೇ.?<br />
ಅವಳು ಎನ್ನೋಣವೇ.?<br />
ಅವರು ಎನ್ನೋಣವೇ..?<br />
ಪಶು ಎನ್ನೋಣವೇ..?<br />
ಮಾತೆ ಎನ್ನೋಣವೇ..?<br />
ಜೀವ ಎನ್ನೋಣವೇ..<br />
ದೇವನೆನ್ನೋಣವೇ..?<br />
ಚಲಿಸುವ ದೇವಾಲಯ ಎನ್ನೋಣವೇ..?</strong></span></p>
<p style="text-align: left;"><strong>ಮತ್ತೊಬ್ಬರ ಹಸಿವು ಅರ್ಥವಾಗುವುದು ಮಾತೃಹೃದಯಕ್ಕೆ ಮಾತ್ರ..!</strong></p>
<p style="text-align: left;"><strong><br />
</strong>ಚೋಳರಾಜನ ಗೋಶಾಲೆಯನ್ನಲಂಕರಿಸಿದ್ದ ಆ ಗೋಮಾತೆ ತನ್ನ ಕರುಳ ಕಣ್ಣಿನಿಂದಲೇ ಕಂಡಳು-<br />
ಅನ್ನ-ಪಾನಗಳಿಂದ ವಿರಹಿತನಾಗಿದ್ದ ವಿಶ್ವಾಧಾರ ಮೂರ್ತಿಯನ್ನು..!</p>
<p style="text-align: left;">ಹಟ್ಟಿಯಲ್ಲಿ ಅಂಬೆಗರೆಯುವ ತನ್ನ ಎಳೆಗರುವನ್ನೇ ಮರೆತು ವೆಂಕಟಾದ್ರಿಯ ಹುತ್ತದೆಡೆಗೆ ಲಗುಬಗೆಯಿಂದ ಧಾವಿಸಿದಳಾಕೆ..!<br />
ವಿಶ್ವಜನಕನನ್ನೇ ತನ್ನ ಕರುವಾಗಿಸಿಕೊಂಡು ವಿಶ್ವದ ವಾತ್ಸಲ್ಯವನ್ನೆಲ್ಲಾ ತನ್ನ ಜೀವರಸವಾದ ಹಾಲಿನಲ್ಲಿ ತುಂಬಿ ಹರಿಸಿದಳು ವಿಶ್ವಂಭರನಿಗಾಗಿ.<br />
ಹಸುವಿದ್ದಲ್ಲಿ ಹಸಿವಿಲ್ಲ..<br />
ಅಸುವುಳಿಸುವಳು..<br />
ಕಸು ತುಂಬುವಳು..<br />
ಹಸಿವಿಂಗಿಸುವಳು&#8230;<br />
ಆ ವಿಶ್ವಜನನಿ&#8230;!</p>
<p style="text-align: left;">ಸಮಯ ಸರಿಯಿತು&#8230;</p>
<p style="text-align: left;"><strong><span style="color: #0000ff;">&#8220;ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।</span></strong><strong><span style="color: #0000ff;"><br />
</span></strong><strong><span style="color: #0000ff;">ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ ||&#8221; - ಭಗವದ್ಗೀತೆ</span></strong></p>
<p style="text-align: left;"><strong>&#8220;ಅಗ್ನಿಸ್ವರೂಪವನ್ನು ತಾಳಿ ನಾನು ಜೀವಿಗಳ ದೇಹವನ್ನಾಶ್ರಯಿಸುವೆನು.<br />
ಪ್ರಾಣಾಪಾನಗಳ ಜೊತೆಗೂಡಿ ನಾಲ್ಕು ಬಗೆಯ ಆಹಾರಗಳನ್ನು ನಾನೇ ಜೀರ್ಣಗೊಳಿಸುವೆನು&#8221; </strong><br />
ಎನ್ನುವ ಸ್ವಾಮಿಯ ಒಡಲನ್ನು ತಂಪಾಗಿಡಲು ಪ್ರತಿನಿತ್ಯವೂ ವೆಂಕಟಾದ್ರಿಗೆ ಹೋಗಿ ಹಾಲಿಳಿಸತೊಡಗಿದಳಾ ಗೋಮಾತೆ!</p>
<p style="text-align: left;">ಅಸಾಮಾನ್ಯ ಸಂಗತಿಗಳು ಸಾಮಾನ್ಯರಿಗೆ ಹೇಗೆ ತಾನೆ ಅರ್ಥವಾಗಬೇಕು?<br />
ಅರಮನೆಯಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ..<br />
ಯಾವಾಗಲೂ ಸಮೃದ್ದವಾಗಿ ಹಾಲುಗರೆಯುತ್ತಿದ್ದ ಹಸುವೇಕೆ ಇದ್ದಕ್ಕಿದ್ದಂತೆ ಬರಿದಾಯಿತು..!?<br />
ಕಾರಣ ತಿಳಿಯಲು ಗೋಪಾಲಕನಿಗೆ ರಾಜಾಜ್ಞೆಯಾಯಿತು.<br />
ಮರುದಿನ ಹಸುವನ್ನು ಹಿಂಬಾಲಿಸಿದನಾತ..<br />
ವೆಂಕಟಗಿರಿಯ ಹುತ್ತವೊಂದರ ಮೇಲೆ ಹಸುವು ಹಾಲಿಳಿಸುವುದನ್ನು ಪೊದೆಯ ಮರೆಯಲ್ಲಿ ನಿಂತು ಕಂಡ<br />
ಗೋಪಾಲಕನ ಕೋಪ ನೆತ್ತಿಗೇರಿತು.. ಪ್ರಜ್ಞೆ ಪಾತಾಳಕ್ಕಿಳಿಯಿತು…!<br />
ಕಣ್ಣು ಕೆಂಪಾಯಿತು ..ಮನಸ್ಸು ಕಪ್ಪಾಯಿತು..!</p>
<p style="text-align: left;"><strong><span style="color: #0000ff;">ಕ್ರೋಧಾತ್ ಭವತಿ ಸಂಮೋಹ: ಸಂಮೋಹಾತ್ ಸ್ಮೃತಿ ವಿಭ್ರಮಃ |<br />
ಸ್ಮೃತಿಭ್ರಂಶಾತ್ ಬುದ್ಢಿನಾಶ: ಬುದ್ಡಿನಾಶಾತ್ ಪ್ರಣಶ್ಯತಿ || - ಭಗವದ್ಗೀತೆ</span></strong></p>
<p style="text-align: left;"><strong>ಕ್ರೋಧದಿಂದ ಸಂಮೋಹ;<br />
ಸಂಮೋಹದಿಂದ ಸ್ಮೃತಿ ಭ್ರಂಶ ;<br />
ಸ್ಮೃತಿಭ್ರಂಶದಿಂದ ಬುದ್ಢಿ ನಾಶ;<br />
ಬುದ್ಢಿನಾಶದಿಂದ ಸರ್ವ ನಾಶ..</strong></p>
<p style="text-align: left;">ಪ್ರತ್ಯಕ್ಷ ರಾಕ್ಷಸನಂತೆ ಕೈಯಲ್ಲಿ ಕೊಡಲಿ ಹಿಡಿದು ಆ ಗೋವಿನೆಡೆಗೆ ಧಾವಿಸಿದನಾತ..!<br />
ಆದರೆ ವಾತ್ಸಲ್ಯ &#8211; ತನ್ಮಯತೆಗಳ ಪ್ರತಿಮೂರ್ತಿಯಾಗಿದ್ದ ಗೋವು ಶ್ರೀನಿವಾಸನಲ್ಲಿಟ್ಟ ತನ್ನ ಚಿತ್ತವನ್ನು ಕದಲಿಸಲಿಲ್ಲ..<br />
ಆ ಸ್ಠಳವನ್ನು ಬಿಟ್ಟೋಡಲಿಲ್ಲ.. ಹಾಲ್ಗರೆಯುವುದನ್ನು ನಿಲ್ಲಿಸಲಿಲ್ಲ.!!!</p>
<p style="text-align: left;">ಅದೇನು ದುರ್ಬುದ್ಢಿಯೋ, ದುರ್ದೈವವೋ&#8230;<br />
ಆ ಗೋವಳನು ಕೊಳಲು ಹಿಡಿಯಬೇಕಾದ ಕೈಯಲ್ಲಿ ಕೊಡಲಿ ಹಿಡಿದು ತನ್ನ ನೆತ್ತಿಯೆತ್ತರಕ್ಕೆತ್ತಿ ಸರ್ವಶಕ್ತಿಯಿಂದ ಗೋವಿನ ಕೊರಳ ಮೇಲೆ ಪ್ರಯೋಗಿಸಿದನು.. ಧರ್ಮ ದಯೆಗಳನ್ನು ಮರೆತು..<br />
<strong>ಆ ಕ್ಷಣದಲ್ಲಿಯೂ ಬಾರದಿದ್ದರೆ ದೇವರು ದೇವರೆನಿಸುವುದಾದರೂ ಹೇಗೆ..?</strong></p>
<p style="text-align: left;">ಪ್ರಹ್ಲಾದನ ಕಷ್ಟಕ್ಕೆ ಕರಗಿ ಕಂಬವನ್ನೊಡೆದು ಬಂದ ನರಸಿಂಹನಂತೆ&#8230;<br />
ಘೋರ ಗೋಹತ್ಯೆಯನ್ನು ಸಹಿಸಲಾರದೆ ಹುತ್ತವನ್ನೊಡೆದು ಮೇಲೆದ್ದನಾ ಗೋವಿಂದ..!!</p>
<p style="text-align: left;">ಬ್ರಹ್ಮಾಂಡವೇ ಬೆಚ್ಚಿ ಬೆರಗಾಗಿ ನೋಡ ನೋಡುತ್ತಿದ್ದಂತೆ, ಗೋವಿನ ಕೊರಳ ಮೇಲೆ ಸಿಡಿಲಿನಂತೆರಗಿದ<br />
ಕೊಡಲಿಯ ಹೊಡೆತವನ್ನು ತನ್ನ ಸಿರಿಮುಡಿಯಿಂದ ಪರಿಗ್ರಹಿಸಿದನು ಶ್ರೀನಿವಾಸ..</p>
<p style="text-align: left;">ಒಮ್ಮೊಮ್ಮೆ ನವಿಲುಗರಿಗಳಿಂದ,<br />
ಒಮ್ಮೊಮ್ಮೆ ರತ್ನಮುಕುಟದಿಂದ,<br />
ಒಮ್ಮೊಮ್ಮೆ ಸುಕೋಮಲ ಸುಮಗಳಿಂದ ವಿಭೂಷಿತವಾಗುವ ಆ ವರಶಿರದ ಮೇಲಾಯಿತು ಕುಠಾರ ಪ್ರಹಾರ!!</p>
<p style="text-align: left;">ಕ್ಷೀರಸಾಗರದೊಡೆಯನ ಶಿರವೊಡೆದು,ಚಿಲುಮೆಯಂತೆ ಚಿಮ್ಮಿದ ರಕ್ತಧಾರೆಯಿಂದ ಗೋಮಾತೆಗಾಯಿತು ಅಭಿಷೇಕ..<br />
ಹಾಲಿತ್ತವಳಿಗೆ ರಕ್ತವಿತ್ತು ದೇವತ್ವವನ್ನು ಮೆರೆದನು ದೇವ ದೇವ..</p>
<p style="text-align: left;">ಆದರೆ ಗೋಪಾಲಕ..?<br />
ಸೂರ್ಯೋದಯವಾದ ಮೇಲೆ ಕತ್ತಲೆ ಬದುಕುವುದುಂಟೆ..?<br />
ಮಮತೆಯ ಮಾತೆಯ ಕೊರಳು ಕೊಯ್ಯುವ ಕ್ರೂರ ಕೃತ್ಯ ಕಂಡು ಖತಿಗೊಂಡು ನಿಂತ ಶ್ರೀನಿವಾಸನೆಂಬ ಪ್ರಳಯಾಗ್ನಿಯಲ್ಲಿ ಆ ಗೋವಳನು ಮಿಡತೆಯಾಗಿ ಹೋದ&#8230;!<br />
ಯಾವ ಅಶುಭವನ್ನು ಗೋವಿಗೆ ಮಾಡಹೊರಟನೋ ಅದು ಆತನಿಗೇ ಆಯಿತು.</p>
<p style="text-align: left;"><strong><span style="color: #0000ff;">&#8216;ರಾಜಾ ರಾಷ್ಟ್ರಗತಂ ಪಾಪಂ..&#8217;</span></strong></p>
<p style="text-align: left;">ತನ್ನ ಪ್ರಜೆಗಳಾಗಲಿ, ಸೇವಕರಾಗಲಿ ಮಾಡಿದ ಪಾಪಕ್ಕೆ ರಾಜನೂ ಹೊಣೆಗಾರನಾಗಬೇಕಾಗುತ್ತದೆ.<br />
ಗೋಹತ್ಯೆಗೆಳಸಿದ ಗೋಪಾಲಕನ ಪಾಪದ ಬಿಸಿ, ಚೋಳ ರಾಜನಿಗೂ ತಟ್ಟಿತು.<br />
&#8220;ರಾಕ್ಷಸ ಸದೃಶನಾದ ಗೋಪಾಲಕನ ಸ್ವಾಮಿಯಾದ ನೀನು ರಾಕ್ಷಸನೇ ಆಗು&#8221; ಎಂದು ಶ್ರೀನಿವಾಸನು ರಾಜನನ್ನು ಶಪಿಸಿದನು..</p>
<p style="text-align: left;">ಆದರೆ ಈ ಘಟನಾವಳಿಗಳಿಂದ ಭೂಲೋಕಕ್ಕೆ ಒಳಿತೇ ಆಯಿತು.<br />
ವೈಕುಂಠವೇ ಧರೆಗಿಳಿದು ತಿರುಪತಿ-ತಿರುಮಲವಾಯಿತು..<br />
ಶೇಷನು ಶೇಷಾಚಲವಾದ..<br />
ಕ್ಷೀರಸಾಗರವು ಭಕ್ತಸಾಗರವಾಯಿತು..</p>
<p style="text-align: left;">ಆದರೆ..ಲಕ್ಷ್ಮಿ&#8230;?</p>
<div id="_mcePaste" style="text-align: left;">
<div id="_mcePaste" style="text-align: left;">ಸೂರ್ಯಪ್ರಭೆ ಸೂರ್ಯನನ್ನು ಬಿಟ್ಟಿರಲು ಸಾಧ್ಯವೇ ?</div>
</div>
<div id="_mcePaste" style="text-align: left;">ಬೆಳದಿಂಗಳು ಚಂದ್ರನಿಂದ ದೂರವಿರಲು ಸಾಧ್ಯವೇ ?</div>
<div id="_mcePaste" style="text-align: left;">ನಾರಾಯಣ ರಾಮನಾದಾಗ ಸೀತೆಯಾಗಿ ಜೊತೆಯಾದವಳು&#8230;</div>
<div id="_mcePaste" style="text-align: left;">ಕೃಷ್ಣನಾದಾಗ ರುಕ್ಮಿಣಿಯಾಗಿ ಆತನನ್ನೇ ವರಿಸಿದವಳು&#8230;</div>
<div id="_mcePaste" style="text-align: left;">ವಿಷ್ಣುವಿಗೆ ಅನಪಾಯಿನಿಯವಳು..</div>
<div id="_mcePaste" style="text-align: left;"><span style="color: #0000ff;">&#8216;ವಿಷ್ಣೋ: ಏಷಾ ಅನಪಾಯಿನೀ&#8217;<span style="color: #993366;"><br />
ತಿರುಪತಿಯಲ್ಲಿ ಶ್ರೀನಿವಸನೊಡನೆ ಆಕೆ ಪ್ರಕಟಗೊಳ್ಳುವ ಬಗೆಯೇ ಅನ್ಯಾದೃಶವಾದುದು&#8230;</span> </span></div>
<div style="text-align: left;"><span style="color: #0000ff;"><span style="color: #993366;">&#8216;ಶ್ರೀ&#8217; <span style="font-weight: normal;">ಇಲ್ಲದೆ</span> ಶ್ರೀನಿವಾಸ<span style="font-weight: normal;">ನೆನಿಸುವುದೆಂತು..?</span></span><br />
</span></div>
<div id="_mcePaste" style="text-align: left;">ಜಗತ್ತಿನ ಎಲ್ಲೆಡೆಯಿಂದ ಧನ ಕನಕಗಳ ರಾಶಿಯ ರೂಪದಲ್ಲಿ ಬಂದು ಕ್ಷಣ ಕ್ಷಣವೂ ಶ್ರೀನಿವಾಸನ್ನನ್ನಾವರಿಸುವಳವಳು, ಆಲಂಗಿಸುವಳವಳು&#8230;</div>
<div id="_mcePaste" style="text-align: left;">ಆದುದರಿಂದಲೇ ತಿರುಪತಿಗೆ ಹರಿದುಬರುವಷ್ಟು ಸಂಪತ್ತು ಜಗತ್ತಿನ ಬೇರಾವ ದೇವಸ್ಠಾನಗಳಿಗೂ ಬಾರದು..!</div>
<div id="_mcePaste" style="text-align: left;">ತಿರುಪತಿಯ ವೈಭವವಿನ್ನೆಲ್ಲಿಯೂ ಕಾಣದು.<br />
ತಿರುಪತಿಯೆಂದಾಕ್ಷಣವೇ ಮನಸ್ಸ್ಸಿಗೆ ಬರುವದು ಅಲ್ಲಿಯ ವೈಭವ.</div>
<div id="_mcePaste" style="text-align: left;">ಅದು&#8230;ಲಕ್ಷ್ಮಿ..!</div>
<div style="text-align: left;">ವಿರಹದ ನಂತರ ಬರುವ ಸಂಗಮ ಮತ್ತಷ್ಟು ಗಾಢವಾಗಿರುವದಲ್ಲವೇ?</div>
<div id="_mcePaste" style="text-align: left;">ಒಮ್ಮೆ ಬಿಟ್ಟು ಹೋದ ಪಶ್ಚಾತ್ತಾಪವಿರಬೇಕು,<br />
ಆಕೆ ನೂರಾರು ಸಾವಿರಾರು ರೂಪದಲ್ಲಿ ಹೆಚ್ಚೇಕೆ ವಿಶ್ವರೂಪಿಣಿಯಾಗಿ ವಿಶ್ವಂಭರನನ್ನು ಸೇರಿದಳು..!</div>
<div style="text-align: left;">ಆದರೆ ಈ ಎಲ್ಲಾ ವೈಭವಗಳ ಮಧ್ಯದಲ್ಲಿಯೂ ಒಂದು ಕೊರತೆ..<br />
ಸಮಯ ಸರಿದಂತೆ ಶ್ರೀನಿವಾಸನ ಶಿರದ ಗಾಯ ಮಾಯವಾದರೂ ಕುಠಾರ ಪ್ರಹಾರವಾದ ಸ್ಠಾನದಲ್ಲಿ ಕೂದಲು ಬಾರದಿದ್ದುದರಿಂದ..<br />
ಚೆಲ್ವಿಕೆಯ ಚಂದ್ರಮನಲ್ಲಿ ಚುಕ್ಕಿಯೊಂದು ಉಳಿದುಬಿಟ್ಟಿತ್ತು.!</div>
<div id="_mcePaste" style="text-align: left;">ಕಲಂಕವಲ್ಲ.. ಆತನ ಗೋ ಪ್ರೇಮದ ಪ್ರತೀಕವದು&#8230;!</div>
<div style="text-align: left;">ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಮುಡಿಕೊಡುವ ಪದ್ಢತಿ ಇಂದಿಗೂ ಚಾಲ್ತಿಯಲ್ಲಿರುವದು ಈ ಹಿನ್ನೆಲೆಯಲ್ಲಿ..!</div>
<div id="_mcePaste" style="text-align: left;">ಅಂದು ನಮ್ಮವನೊಬ್ಬನೆಸಗಿದ ಅಪರಾಧದಿಂದಾಗಿ ಶ್ರೀನಿವಾಸನ ಕಳೆದ ಕೂದಲಿನ ಸಾಲವನ್ನು ತೀರಿಸಲು -<br />
ಮನುಜ ಕೋಟಿ ಇಂದಿನವರೆಗೂ ಮುಡಿ ನೀಡುತ್ತಾ ಬಂದಿದೆ.</div>
<div id="_mcePaste" style="text-align: left;">ಎಂದೆಂದೂ ತೀರದ ಸಾಲವದು..!</div>
<div style="text-align: left;">
<div style="text-align: left;"><span style="color: #0000ff;">ಗೋವು..</span>.</div>
<div style="text-align: left;">ತಿರುಪತಿಯ ಕಥೆಯಲ್ಲಿ ಬರುವ ಗೋವು ಒಂದು ಸೋಜಿಗವೇ ಸರಿ.!</div>
<div style="text-align: left;">ಸುದೂರದಲ್ಲಿದ್ದ ಶ್ರೀನಿವಾಸನ ಹಸಿವಿನ ಕರೆಯನ್ನು ಕೇಳಿಸಿಕೊಂಡ ಕಿವಿಗಳೆಂತಹವು..?</div>
<div style="text-align: left;">ಬೆಟ್ಟದ ದಟ್ಟ ಕಾಡಿನಲ್ಲಿ ಯಾರೂ ಅರಿಯದಂತೆ ಹುತ್ತದಲ್ಲಿ ಹುದುಗಿ ಕುಳಿತಿದ್ದ ಶ್ರೀನಿವಾಸನನ್ನು ಕಂಡ ಕಣ್ಣುಗಳೆಂತಹವು..?</div>
<div style="text-align: left;">ಶ್ರೀನಿವಾಸನ ಕರೆಗೆ ಕರಗಿ ತನ್ನ ಕರುವನ್ನೇ ಬಿಟ್ಟೋಡಿದ ಕರುಳದೆಂತಹದು..?</div>
<div style="text-align: left;">ಕಟುಕನ ಕ್ರೂರ ಕೊಡಲಿಗೂ ನಡುಗದ, ಹಾಲ್ಗರೆಯುವದನ್ನು ಬಿಡದ ಆ ಧೀರ ಹೃದಯವೆಂತಹದು..!</div>
<div style="text-align: left;"><span style="color: #0000ff;">&#8216;ಋಷಿಶ್ಚ ಕಿಲ ದರ್ಶನಾತ್ &#8217;</span></div>
<div style="text-align: left;">ಬರಿಗಣ್ಣಿಗೆ ಕಾಣದ ದೇವರನ್ನು ಕಾಣುವ ಕಣ್ಣುಳ್ಳವನೇ ಋಷಿ..</div>
<div style="text-align: left;">ಎಂದಮೇಲೆ ಯಾರೂ ಕಾಣದ ಶ್ರೀನಿವಾಸನನ್ನು ಕಂಡ ಆ ಗೋವು ಯಾವ ಋಷಿಗೇನು ಕಡಿಮೆ..?</div>
<div style="text-align: left;">ದೇವರಿಗಾಗಿ ದ್ರವಿಸುವ ಹೃದಯವುಳ್ಳವನೇ ಭಕ್ತ..</div>
<div style="text-align: left;">ಶ್ರೀನಿವಾಸನನ್ನು ಕರುಳ ಕಣ್ಣಿಂದಲೇ ಕಂಡು ಕರಗಿ ಹಾಲ್ಗರೆದ ಗೋವು ಯಾವ ಭಕ್ತನಿಗೇನು ಕಡಿಮೆ..?</div>
<div style="text-align: left;">ಕಾಣದ ದೇವರನ್ನು ಜಗತ್ತಿಗೆ ಕಾಣಿಸುವವನೇ ಗುರು..</div>
<div style="text-align: left;">ಶ್ರೀನಿವಾಸನನ್ನು ಮೊದಲಾಗಿ ಕಂಡು ಲೋಕಮುಖಕ್ಕೆ ಉದ್ಘಾಟಿಸಿದ ಗೋವು ಯಾವ ಗುರುವಿಗೇನು ಕಡಿಮೆ..?</div>
<div style="text-align: left;">ಜಗತ್ಪಿತನನ್ನೇ ಶಿಶುವಾಗಿಸಿಕೊಂಡು ಸಂತೃಪ್ತಿಯಾಗುವಷ್ಟು ಹಾಲುಣಿಸಿದ ಆ ಗೋಮಾತೆ ಯಾವ ಮಾತೆಗೇನು ಕಡಿಮೆ..?<br />
ವಿಶ್ವಂಭರನನ್ನೇ ಸಂತರ್ಪಿಸಿದ ಆಕೆಯ ಹಾಲು ಕ್ಷೀರಸಾಗರಕ್ಕೇನು ಕಡಿಮೆ..?</div>
<div style="text-align: left;"><span style="font-weight: normal;">[ತಿರುಪತಿಯನ್ನು ತ್ವರಿತವಾಗಿ ಹೇಳಿದರೆ ತೃಪ್ತಿ ಎಂದಾಗುವದು.. ವಿಶ್ವಂಭರೆನ ತೃಪ್ತಿ ಕ್ಷೇತ್ರವದು..!]</span></div>
<div style="text-align: left;"><span style="font-weight: normal;"><br />
</span></div>
<div style="text-align: left;">ಈ ಕಥಾನಕದಲ್ಲಿ ನಾವು ಕಂಡ ಶ್ರೀನಿವಾಸನ ಮೂರು ಸತ್ಯ ಸಂದೇಶಗಳು:</div>
<div style="text-align: left;"><span style="color: #ff0000;">ಸಕಲ ಗೋ ಘಾತಕರಿಗೆ -</span></div>
<div style="text-align: left;">ಗೋವಿನ ಮೇಲೆ ಎತ್ತಿದ ಕತ್ತಿ ನಿಮ್ಮ ಕುತ್ತಿಗೆಗೇ ಬಂದೀತು..</div>
<div style="text-align: left;">ಗೋವಂಶ ನಾಶದಿಂದ ನಿಮ್ಮ ಸರ್ವ ನಾಶವೇ ಆದೀತು..!!</div>
<div style="text-align: left;"><span style="color: #ff6600;">ಸಕಲ ರಾಜರಿಗೆ (ಸಕಲ ಸರ್ಕಾರಗಳಿಗೆ) -</span></div>
<div style="text-align: left;">ತನ್ನ ಸೇವಕ, ಒಂದು ಗೋಹತ್ಯೆ ಮಾಡಲೆಳಸಿದ ಮಾತ್ರಕ್ಕೇ ರಾಕ್ಷಸತ್ವದ ಶಾಪ ತಟ್ಟಿತು.</div>
<div style="text-align: left;">ಅವ್ಯಾಹತವಾಗಿ ಕೋಟಿ ಕೋಟಿ ಗೋವುಗಳ ಹತ್ಯೆಯನ್ನು ಮುಂದೆ ನಿಂತು ಮಾಡಿಸಿದರೆ ನಿಮ್ಮ ಕತೆಯೇನಾದೀತು..!?</div>
<div style="text-align: left;">ನಿಮ್ಮ ಊಹೆಗೇ ಬಿಟ್ಟಿದ್ದು..!</div>
<div style="text-align: left;">ಅಂತಿಮವಾಗಿ,</div>
<div style="text-align: left;"><span style="color: #339966;">ಸಕಲ ಪ್ರಜೆಗಳಿಗೆ (ನಮಗೆಲ್ಲರಿಗೆ) -</span></div>
<div style="text-align: left;">ಗೋಮಾತೆಯ ಕೊರಳ ಮೇಲೆರಗುವ ಕೊಡಲಿಗೆ ನಿಮ್ಮ ಮುಡಿಯನ್ನಾದರೂ ಕೊಡಿ..</div>
<div style="text-align: left;">ಗೋಹತ್ಯೆಯಾಗಲು ಬಿಡಬೇಡಿ.</div>
<div style="text-align: left;">ಚಿಮ್ಮುವುದಿದ್ದರೆ ಚಿಮ್ಮಲಿ ಗಗನಕ್ಕೆ ಗೋಭಕ್ತರ ರಕ್ತ&#8230;!</div>
<div style="text-align: left;">ಆದರೆ&#8230;</div>
<div style="text-align: left;">ಭಾರತದ ಪುಣ್ಯಧರೆಯೆಂದಿಗೂ ಆಗದಿರಲಿ ಗೋರಕ್ತಸಿಕ್ತ..!!</div>
</div>
<p style="text-align: center;">|| ಹರೇರಾಮ ||</p>
<p style="text-align: left;">
<p style="text-align: left;">
<p style="text-align: left;">
<p></span></h4>
]]></content:encoded>
			<wfw:commentRss>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/feed/</wfw:commentRss>
		<slash:comments>48</slash:comments>
		</item>
		<item>
		<title>ಮಾ ನಿಷಾದ&#8230;</title>
		<link>http://hareraama.in/blog/%e0%b2%ae%e0%b2%be-%e0%b2%a8%e0%b2%bf%e0%b2%b7%e0%b2%be%e0%b2%a6/</link>
		<comments>http://hareraama.in/blog/%e0%b2%ae%e0%b2%be-%e0%b2%a8%e0%b2%bf%e0%b2%b7%e0%b2%be%e0%b2%a6/#comments</comments>
		<pubDate>Thu, 01 Jul 2010 06:13:59 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4998</guid>
		<description><![CDATA[ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ...!
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು...!
]]></description>
			<content:encoded><![CDATA[<p style="text-align: center;"><strong>|| ಹರೇರಾಮ ||</strong></p>
<p>ಕೇವಲ ದುಃಖವು ದುಃಖವೇ ಅಲ್ಲ.<br />
ಸಂತೋಷದ ನಂತರ ಬರುವ ದುಃಖವೇ ನಿಜವಾದ ದುಃಖ..!<br />
ಹುಟ್ಟುಬಡವನಿಗೆ ಗಂಜಿ ಕುಡಿಯಲು ಕಷ್ಟವೇನಿಲ್ಲ -<br />
ಅದು ಕಷ್ಟವಾಗುವುದು, ಕೆಲಕಾಲ ಮೃಷ್ಟಾನ್ನವನ್ನುಂಡ ನಂತರವೇ&#8230;!</p>
<p>ಇಲ್ಲಿ ವಾಲ್ಮೀಕಿಗಳಿಗಾದದ್ದು ಹಾಗೆಯೇ&#8230;<br />
ಪಕ್ಷಿಗಳ ಪ್ರೇಮ ಪ್ರಸಂಗವನ್ನು ಕಂಡ ಕಣ್ಣಿನಿಂದಲೇ ಅವುಗಳ ದಾರುಣ ಮರಣ-ವಿರಹ-ಸಂಕಟಗಳನ್ನು-<br />
ಆ ಮೃದು ಹೃದಯಿ ಮುನಿ ಕಾಣಬೇಕಾಯಿತು&#8230;.!<br />
ಒಂದಾದ ಮೇಲೊಂದರಂತೆ ಪ್ರೇಮ-ಘೋರಗಳ ಪರಾಕಾಷ್ಠೆಯನ್ನು ಕಾಣುವುದೆಂದರೆ -<br />
ಆನಂದದ ಅಂಬರವೇರಿ ಅನ್ಯಾಯದ ಪಾತಾಳಕ್ಕೆ ಉರುಳಿದಂತೆಯೇ ಅಲ್ಲವೇ..?</p>
<p>ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..<br />
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..<br />
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ&#8230;!<br />
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-<br />
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು&#8230;!</p>
<p>ಮಹಾಪೂರವು ಆಣೆಕಟ್ಟನ್ನು ಮುರಿದು ಮುನ್ನುಗ್ಗುವಂತೆ -<br />
ಸಂಯಮದ ಕಟ್ಟೆಯನ್ನೊಡೆದು ಮುನಿಮುಖದಿಂದ ಹೊರಹೊಮ್ಮಿತು ಶಾಪವಾಕ್ಯ..</p>
<p><strong>ಮಾ ನಿಷಾದ ಪ್ರತಿಷ್ಠಾಂ ತ್ವಂ<br />
ಅಗಮಃ ಶಾಶ್ವತೀಃ ಸಮಾಃ|<br />
ಯತ್ ಕ್ರೌಂಚಮಿಥುನಾತ್ ಏಕಂ<br />
ಅವಧೀಃ ಕಾಮಮೋಹಿತಮ್..||</strong></p>
<div id="attachment_5002" class="wp-caption alignright" style="width: 199px"><a href="http://hareraama.in/wp-content/uploads/2010/07/valmiki_sm.jpg"><img class="size-medium wp-image-5002" title="ಮಾ ನಿಷಾದ......." src="http://hareraama.in/wp-content/uploads/2010/07/valmiki_sm-189x300.jpg" alt="" width="189" height="300" /></a><p class="wp-caption-text">ಶಾಪವಿದು ಬೇಡನಿಗೆ...ಮಂಗಲಮಹಾವರ ಮನುಕುಲಕೆ..!</p></div>
<p>&#8220;ಎಲೋ ಬೇಡನೇ..! ಕ್ರೌಂಚ ದ್ವಂದ್ವದಲ್ಲೊಂದನ್ನು, ಅದು ಕಾಮಮೋಹಿತವಾಗಿದ್ದಾಗ ನಿಷ್ಕರುಣೆಯಿಂದ ಕೊಂದೆಯಲ್ಲವೇ..?<br />
ಮುಗ್ಧ ಪಕ್ಷಿಯ ವಾಸದ ನೆಲೆ (ವೃಕ್ಷ)-<br />
ವಿಶ್ವಾಸದ ನೆಲೆ (ಪತ್ನಿ)-<br />
ಮತ್ತು ಶ್ವಾಸದ ನೆಲೆ (ಬದುಕು)-<br />
ಹೀಗೆ ಮೂರೂ ನೆಲೆಗಳನ್ನು ಇಲ್ಲವಾಗಿಸಿದ ನಿನಗೆ ನೆಲೆಯೇ ಸಿಗದಿರಲಿ&#8230;!&#8221;</p>
<p>ವೃತ್ತಿಧರ್ಮವೆಂಬ ನೆಲೆಯಲ್ಲಿ ನಿಂತಲ್ಲವೇ ಆತ ಪಕ್ಷಿಯನ್ನು ಹೊಡೆದದ್ದು..?<br />
ಅಂದಮೇಲೆ ಋಷಿಯು ಬೇಡನ ಮೇಲೆ  ಕೋಪಿಸಲೇಕೆ..?<br />
ಆತನನ್ನು ಶಪಿಸಲೇಕೆ..?</p>
<p>ಹಿಂಸೆಗಾದರೊಂದು ಕಾರಣ ಬೇಡವೇ&#8230;?<br />
ಹಸಿವಿಗಾಗಿ ಕೊಲ್ಲುವುದುಂಟು..<br />
ಅಪಾಯವಿದ್ದರೆ ಆತ್ಮರಕ್ಷಣೆಗೆಂದು ಕೊಲ್ಲುವುದುಂಟು..!<br />
ಅಪರಾಧ ನಡೆದಾಗ ದಂಡನೆಯ ರೂಪದಲ್ಲಿ ಕೊಲ್ಲುವುದುಂಟು..</p>
<p>ಆದರಿಲ್ಲಿ..?<br />
ಪಕ್ಷಿಯ ಹತ್ಯೆಯ ಹಿನ್ನೆಲೆಯಲ್ಲಿ ಇದ್ಯಾವ ಕಾರಣಗಳೂ ಇರಲಿಲ್ಲ..!<br />
ಕೊಂದವನಿಗೆ ಹಸಿವಿರಲಿಲ್ಲ&#8230;<br />
ಮುಗ್ಧ ಪಕ್ಷಿಯಿಂದ ಅವನಿಗೆ ಯಾವ ಅಪಾಯವೂ ಇರಲಿಲ್ಲ..<br />
ಯಾವ ಅಪರಾಧವೂ ಘಟಿಸಿರಲಿಲ್ಲ..<br />
ಆದುದರಿಂದಲೇ ವೃತ್ತಿಧರ್ಮವೊಂದೇನು..ಯಾವ ಧರ್ಮದ ನೆಲೆಯಲ್ಲಿಯೂ ನಡೆಸಿದ ಹತ್ಯೆ ಅದಾಗಿರಲಿಲ್ಲ..!</p>
<p>ಹಿಂಸೆಗಾದರೊಂದು ಸಮಯ ಬೇಡವೇ..?<br />
ಕೊಲ್ಲಲು ಜೋಡಿ ಹಕ್ಕಿಗಳು ಜೊತೆಯಾಗಿ ಅದ್ವೈತದ ನೈಸರ್ಗಿಕ ಆನಂದದಲ್ಲಿ ವಿಹರಿಸುತ್ತಿರುವ ಸಮಯವೇ ಆಗಬೇಕೇ&#8230;?</p>
<p>ಹಿಂಸೆಗಾದರೊಂದು ಸಂದರ್ಭ ಬೇಡವೇ&#8230;?<br />
ಪ್ರೇಮ-ದಯೆಗಳ ಸಾಕಾರರೂಪರಾದ ಮಹರ್ಷಿಗಳ ಕಣ್ಣೆದುರೇ ಇಂತಹ ಘೋರ ಕೃತ್ಯವನ್ನು ನಡೆಸುವುದೇ&#8230;?</p>
<p>ಹಿಂಸೆಗಾದರೊಂದು ಮಿತಿ ಬೇಡವೇ&#8230;?<br />
ಪಕ್ಷಿಯುಗಳದಲ್ಲಿ ಒಂದನ್ನು ಹೊಡೆದು ಇನ್ನೊಂದನ್ನು ಬಿಡುವುದರಲ್ಲಿ,<br />
ಒಂದರ ಮರಣಸಂಕಟ, ಇನ್ನೊಂದರ ವಿಯೋಗವ್ಯಥೆಯನ್ನು<br />
ಒಮ್ಮೆಲೇ ಕಂಡು ಆನಂದಿಸುವ ಕ್ರೂರ ಹಿಂಸಾಸಂತೋಷಪ್ರವೃತ್ತಿಯಲ್ಲವೇ ಆ ಬೇಡನಲ್ಲಿ ಅಡಗಿದ್ದದ್ದು&#8230;!?</p>
<p>ವಿಷಯವೊಂದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಬುದ್ಧಿಗೆ ಉಪಕರಣಗಳು ಬೇಕು..<br />
ಯುಕ್ತಿಗಳು ಬೇಕು..ಸಾಕ್ಷ್ಯಗಳು ಬೇಕು..<br />
ಆದರೆ,<br />
ಮುನಿಯಾದವನಿಗೆ ಅವನ ಪರಿಶುದ್ಧ ಅಂತಃಕರಣವೇ ಸಾಕು..<br />
ಆ ಸಮಯದಲ್ಲಿ ಅವನ ಅಂತರಂಗದಲ್ಲೇಳುವ ಭಾವತರಂಗಗಳೇ ಸಾಕು..<br />
ಅವನ ಆತ್ಮಸಾಕ್ಷಿಯೇ ಸಾಕು..!<br />
ತನ್ನ ಆತ್ಮದಲ್ಲೇ ಜಗತ್ತನ್ನೇ ನೋಡಬಲ್ಲವನಿಗೆ, ಅರಿಯಬಲ್ಲವನಿಗೆ ತಾನೆ, ಮುನಿಯೆಂದು ಹೆಸರು..!</p>
<p>ಬೇಡನ ಬೇಡದ ಕೃತ್ಯದಿಂದಾಗಿ ತನ್ನೊಳಗೆ ಉಂಟಾದ ಶೋಕದಿಂದಲೇ ವಾಲ್ಮೀಕಿಗಳು ನಿರ್ಣಯಿಸಿದರು <strong>ಇಲ್ಲಿ ಧರ್ಮನಾಶವಾಗಿದೆ</strong> ಎಂದು.<br />
ಏಕೆಂದರೆ, ಸತ್ಪುರುಷರಿಗೆ ಶೋಕವುಂಟಾಗುವುದು ಧರ್ಮನಾಶವಾದಾಗ ಮಾತ್ರ&#8230;!</p>
<p><strong>&#8216;ಧರ್ಮೋ ಹಂತಿ ಹತೋ ರಾಜನ್ ಧರ್ಮೋ ರಕ್ಷತಿ ರಕ್ಷಿತಃ..|&#8217;</strong></p>
<p>ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುವುದು..<br />
ಧರ್ಮವನ್ನು ನಾವು ಘಾತಿಸಿದರೆ ಅದು ನಮ್ಮನ್ನು ಘಾತಿಸುವುದೂ ಅಷ್ಟೇ ಸಹಜ&#8230;!<br />
ಬಲ್ಲವರ ವಾಣಿಯಿದು..!</p>
<p>ಬೇಡ ಹೊಡೆದದ್ದು ಕೇವಲ ಪಕ್ಷಿಯನ್ನಲ್ಲ..<br />
ಪಕ್ಷಿಗಳಲ್ಲಿ ಆನಂದದ ರೂಪದಲ್ಲಿ ಪ್ರಕಟವಾಗುತ್ತಿದ್ದ ಪ್ರಾಕೃತಿಕ ಧರ್ಮವನ್ನು&#8230;!<br />
ಆದುದರಿಂದಲೇ ಪಕ್ಷಿಯೊಳಗೆ ಆಹತವಾದ ಧರ್ಮವು ವಾಲ್ಮೀಕಿಗಳೊಳಗಿನಿಂದ ವ್ಯಕ್ತವಾಗಿ &#8211; ಶಾಪವಾಗಿ ಬೇಡನನ್ನು ದಂಡಿಸಿತು&#8230;!<br />
(ಪೂಜ್ಯರಾದ ಎನ್ೆ.ಎಸ್. ರಾಮಭದ್ರಾಚಾರ್ಯರು ನೀಡುತ್ತಿದ್ದ ವಿವರಣೆಯಿದು).</p>
<p>ನೆಲೆ ಸಿಗದಿರಲೆಂಬ ಶಾಪವಾಣಿಯೂ ಅರ್ಥಪೂರ್ಣವಾದುದೇ&#8230;!</p>
<p><strong>ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ&#8230;|<br />
ಧರ್ಮೋ ಧಾರಯತೇ ಪ್ರಜಾಃ&#8230;|</strong></p>
<p>ಜಗತ್ತು ನೆಲೆ ನಿಂತಿರುವುದೇ ಧರ್ಮದ ಮೇಲೆ..<br />
ಸಕಲ ಜೀವಿಗಳನ್ನೂ ಧರಿಸಿರುವ ಸೃಷ್ಟಿಯ ಧಾರಕಶಕ್ತಿಯೇ ಧರ್ಮ..<br />
ಅದನ್ನೇ ಘಾತಿಸಿದ ಮೇಲೆ ಮತ್ತೆ ನೆಲೆಯೆಲ್ಲಿಂದ&#8230;?<br />
ತಾನು ಕುಳಿತ ಕೊಂಬೆಯನ್ನೇ ಕಡಿದಂತಲ್ಲವೇ ಅದು..?</p>
<p><strong>ಶ್ಲೋಕವಾಯಿತು ಶೋಕ..!</strong></p>
<p>ಶೋಕದಲ್ಲಿಯೋ, ರೋಷದಲ್ಲಿಯೋ, ಆವೇಶದಲ್ಲಿಯೋ..ಆಡಿದ ಮಾತುಗಳು ತಾಳ ತಪ್ಪುವುದು ಸಹಜ..<br />
ಆದರೆ ಅದೇನು ವಿಚಿತ್ರವೋ, ಶೋಕವಶರಾದ ವಾಲ್ಮೀಕಿಗಳ ಬಾಯಿಯಿಂದ ಅಪ್ರಯತ್ನವಾಗಿ ಹೊರಹೊಮ್ಮಿದ ಮಾತುಗಳು ಕೇವಲ ಮಾತಾಗಿರದೆ ಸುವ್ಯವಸ್ಥಿತವಾದ ಛಂದೋಬದ್ಧವಾದ ಕವಿತೆಯಾಗಿದ್ದವು&#8230;!</p>
<p>ಸರಿಯಾಗಿ ನಾಲ್ಕು ಚರಣಗಳು..<br />
ಒಂದೊಂದು ಚರಣದಲ್ಲಿಯೂ ಸರಿಯಾಗಿ ಎಂಟೆಂಟು ಅಕ್ಷರಗಳು&#8230;!<br />
ತಂತ್ರೀವಾದ್ಯಗಳೊಡನೆ ಮೇಳೈಸಿ ಸೊಗಸಾಗಿ ಹಾಡಬರುವ ತೆರನಾದ ರಾಗ- ತಾಳ-ಲಯಗಳ ಸಮನ್ವಯ..!<br />
ಇವುಗಳೆಲ್ಲವೂ ಆ ಕವಿತಾರೂಪದ ಶಾಪವಾಕ್ಯದಲ್ಲಿ ತಾನೇತಾನಾಗಿ ಪಡಿಮೂಡಿದ್ದವು..</p>
<p>ಗಿರಿಯಿಂದ ಸಹಜವಾಗಿ ಧುಮ್ಮಿಕ್ಕುವ ಝರಿಯಂತೆ..<br />
ವಾಲ್ಮೀಕಿಗಳ ಯಾವ ಪ್ರಯತ್ನವೂ ಇಲ್ಲದೆಯೇ ಛಂದೋಬದ್ಧವಾಗಿ &#8211; ರಸಭಾವ ಪರಿಪೂರ್ಣವಾಗಿ -<br />
ತಾಳ-ಲಯಸಮನ್ವಿತವಾಗಿ ಆ ಕವಿತೆ ಅವರೊಳಗಿನಿಂದ ಧುಮ್ಮಿಕ್ಕಿತು…!</p>
<p>ಅವು ಕೇವಲ ಅಕ್ಷರಗಳ ಜೋಡಣೆಯಲ್ಲ..<br />
ಅಂತಃಸ್ಪೂರ್ತಿಯ ನೆಲೆಯಲ್ಲಿ ಚಿಮ್ಮಿಬಂದ ಕಾವ್ಯಧಾರೆ..</p>
<p><strong>ಅದು ಈ ಜಗದ ಮೊದಲ ಕವಿತೆ&#8230;!<br />
ಆದಿಕಾವ್ಯದ ಆದಿಮಂಗಳ ಪಂಕ್ತಿಯದು&#8230;!</strong></p>
<p>ಆದಿಕವಿತೆಯು ಮುಂಬರುವ ಅನಂತಕವಿತೆಗಳಿಗೆ ಹೇಳಿದ ಪಾಠವಿದು..<br />
ಕವಿತೆಯೆಂಬುದು ಮುಗಿಲಿನಿಂದ ತಾನೇತಾನಾಗಿ ಇಳಿದು ಬರುವ ಮಳೆಯಂತೆ..<br />
ಗಿರಿಯಿಂದ ಸಹಜವಾಗಿ ಹರಿದು ಬರುವ ಝರಿಯಂತೆ&#8230;<br />
ಭೂಮಿಯ ಒಡಲಿನಿಂದ ನೈಸರ್ಗಿಕವಾಗಿ ಚಿಮ್ಮಿ ಬರುವ ಚಿಲುಮೆಯಂತೆ&#8230;<br />
ಸಹಜವಾದ ಭಾವ ಸೃಷ್ಟಿಯಾಗಿರಬೇಕೇ ಹೊರತು ನಲ್ಲಿಯ ನೀರಿನಂತೆ  ಕೃತ್ರಿಮವಾದ ಬುದ್ಧಿಸೃಷ್ಟಿಯಾಗಿರಬಾರದು..<br />
ಒಂದಿಷ್ಟು ಹಣಕ್ಕಾಗಿಯೋ ಹೆಸರಿಗಾಗಿಯೋ ಮನ ಬಂದಂತೆ ಕೃತ್ರಿಮವಾಗಿ ಹೊಸೆಯುವ ಶಬ್ದಜಾಲಗಳೆಲ್ಲ ಕಾವ್ಯಗಳಲ್ಲ&#8230;!</p>
<p>ಕೆಲವರ ವರ ಹಲವರಿಗೆ ಶಾಪವಾಗುವುದುಂಟು..!<br />
ಉದಾಹರಣೆಗೆ, ರಾವಣನಿಗೂ, ಹಿರಣ್ಯಕಶ್ಯಪುವಿಗೂ ಸಿಕ್ಕಿದ ವರಗಳು ವಿಶ್ವಕಂಟಕವಾಗಿ ಪರಿಣಮಿಸಿದವು&#8230;!<br />
ಆದರೆ ಇಲ್ಲಿ ಹಾಗಲ್ಲ&#8230;<br />
ಬೇಡನಿಗೆ ವಾಲ್ಮೀಕಿಗಳಿತ್ತ ಶಾಪವು ವಿಶ್ವಕ್ಕೆ <strong>ಶ್ರೀರಾಮಾಯಣ</strong> ರೂಪದ ಶಾಶ್ವತ ವರವಾಗಿ ಪರಿಣಮಿಸಿತು&#8230;!<br />
ಅನಂತ ಕಾವ್ಯಗಳ ಅಮೃತಧಾರೆಯ ಪ್ರಥಮಬಿಂದುವಾಯಿತು&#8230;!</p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/%e0%b2%ae%e0%b2%be-%e0%b2%a8%e0%b2%bf%e0%b2%b7%e0%b2%be%e0%b2%a6/feed/</wfw:commentRss>
		<slash:comments>26</slash:comments>
		</item>
		<item>
		<title>ನೆಗಡಿಯೆನಿಸಿದರೆ ಮೂಗು ಕೊಯ್ದುಕೊಳ್ಳಬೇಕೆ&#8230;!?</title>
		<link>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/</link>
		<comments>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/#comments</comments>
		<pubDate>Sat, 26 Jun 2010 19:57:50 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4924</guid>
		<description><![CDATA[&#124;&#124;ಹರೇರಾಮ &#124;&#124;
ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ&#8230;.?
ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ,
ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ..
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ..
ಆಗ ಮಾಡಬೇಕಾದುದೇನು&#8230;?
ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!?
ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ..
ಭಾವಸಂವಾದದ ನಿರೀಕ್ಷೆಯಲ್ಲಿ&#8230;
]]></description>
			<content:encoded><![CDATA[<p style="text-align: center;">||ಹರೇರಾಮ ||</p>
<p><strong>ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ&#8230;.?</strong></p>
<p>ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ,<br />
ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ..<br />
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ..<br />
ಆಗ ಮಾಡಬೇಕಾದುದೇನು&#8230;?</p>
<p>ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!?</p>
<p>ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ..</p>
<p>ಭಾವಸಂವಾದದ ನಿರೀಕ್ಷೆಯಲ್ಲಿ&#8230;</p>
]]></content:encoded>
			<wfw:commentRss>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/feed/</wfw:commentRss>
		<slash:comments>16</slash:comments>
		</item>
		<item>
		<title>ಅಂಬೊಂದು&#8230;.ಹಕ್ಕಿಯೆರಡು&#8230;!</title>
		<link>http://hareraama.in/blog/%e0%b2%85%e0%b2%82%e0%b2%ac%e0%b3%8a%e0%b2%82%e0%b2%a6%e0%b3%81-%e0%b2%b9%e0%b2%95%e0%b3%8d%e0%b2%95%e0%b2%bf%e0%b2%af%e0%b3%86%e0%b2%b0%e0%b2%a1%e0%b3%81/</link>
		<comments>http://hareraama.in/blog/%e0%b2%85%e0%b2%82%e0%b2%ac%e0%b3%8a%e0%b2%82%e0%b2%a6%e0%b3%81-%e0%b2%b9%e0%b2%95%e0%b3%8d%e0%b2%95%e0%b2%bf%e0%b2%af%e0%b3%86%e0%b2%b0%e0%b2%a1%e0%b3%81/#comments</comments>
		<pubDate>Thu, 24 Jun 2010 10:00:22 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4852</guid>
		<description><![CDATA[ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
ಹಿನ್ನೆಲೆಯಲ್ಲಿ ಹರಿಯುವ ಹೊಳೆ..
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ...!]]></description>
			<content:encoded><![CDATA[<p style="text-align: center;"><strong>|| ಹರೇರಾಮ ||</strong></p>
<p>ದೈವೀಸಂಪತ್ತುಗಳು ಹರಿದು ಬರುವ ದ್ವಾರವನ್ನು ಕೃತಜ್ಞತೆಯಿಂದ ಪೂಜಿಸಬೇಕು.<br />
ಹಾಗೆ ಮಾಡದಿದ್ದಾಗ ದ್ವಾರಬಂಧವಾಗಬಹುದು, ಸಂಪತ್ತಿನ ಹರಿವೆಯೇ ನಿಲ್ಲಬಹುದೆಂಬುದು ಬಲ್ಲವರ ಮಾತು..</p>
<p>ಸಂಪೂರ್ಣ ರಾಮಕಥೆಯನ್ನು ಸಂಕ್ಷೇಪವಾಗಿ ಕೇಳಿದ ವಾಲ್ಮೀಕಿಗಳು ನಾರದರನ್ನು ವಿಧಿವತ್ತಾಗಿ ಪೂಜಿಸಿದರು.<br />
ವಾಲ್ಮೀಕಿಗಳ ಪಾಲಿಗೆ ರಾಮದ್ವಾರವಲ್ಲವೇ ನಾರದರು..?<br />
ಯುಗ-ಯುಗಗಳ ಕಾಲ ಭುವಿಯ ಜೀವಿಗಳಿಗೆ ಭವ್ಯ ಬದುಕಿನ ದಾರಿ ತೋರಬಲ್ಲ ಮಹಾಕಾವ್ಯವೊಂದಕ್ಕೆ -<br />
ಅಮೃತಬೀಜವನ್ನು ವಾಲ್ಮೀಕಿಗಳ ಹೃದಯದಲ್ಲಿ ಬಿತ್ತಿದ ನಾರದರು-<br />
&#8216;ಬಂದ ಕಾರ್ಯವಾಯಿತು&#8217; ಎಂಬಂತೆ ಗಗನವನ್ನೇರಿ ಹೊರಟು ಹೋದರು&#8230;</p>
<p>ದಿವಿ ಭುವಿಗಿಳಿದಿತ್ತು..<br />
ಭುವಿಯನ್ನು ದಿವಿಯಾಗಿಸಬಯಸಿತ್ತು..!<br />
ವಾಲ್ಮೀಕಿಗಳ ಹೃದಯವನ್ನು ಹೊಕ್ಕಿತ್ತು..<br />
ಬಹು ದೊಡ್ಡ ರೂಪದಲ್ಲಿ ಪ್ರಕಟಗೊಳ್ಳಲು ಸಮಯ ಕಾಯುತ್ತಿತ್ತು&#8230;<br />
ಸನ್ನಿವೇಶವನ್ನು ಸೃಷ್ಟಿಸತೊಡಗಿತ್ತು..!</p>
<p>ರಾಮಾಯಣದ ಕಥನ-ಕಥಾನಕ-ಕಥಾನಾಯಕರ ಗಾಢ ಪ್ರಭಾವಕ್ಕೊಳಗಾದ ಮಹಾಮುನಿಗಳಿಗೆ ಬಹು ಹೊತ್ತಿನವರೆಗೆ ಬಾಹ್ಯಪ್ರಜ್ಞೆ ಮರಳಲಿಲ್ಲ&#8230;!<br />
ನಡುನೆತ್ತಿಯ ನೇಸರ ತನ್ನ ಕಿರಣಗಳ ಕರಗಳಿಂದ ತಟ್ಟಿ ಎಬ್ಬಿಸಿದಾಗಲೇ ವಾಲ್ಮೀಕಿಗಳಿಗೆ ಎಚ್ಚರವಾದದ್ದು&#8230;!</p>
<p>ಪವಿತ್ರತೆಯಲ್ಲಿ ಗಂಗೆಯ ತಂಗಿಯೇ ಆದ ತಮಸೆಯೆಡೆಗೆ ತೆರಳಿದರು ವಾಲ್ಮೀಕಿಗಳು ಮಾಧ್ಯಾಹ್ನಿಕ ಸ್ನಾನಕ್ಕಾಗಿ.<br />
ಪ್ರಿಯಶಿಷ್ಯನಾದ ಭರದ್ವಾಜನು ಸ್ನಾನವಸ್ತ್ರ ಮತ್ತು ಕಲಶಗಳೊಡನೆ ಅವರನ್ನನುಸರಿಸಿದನು.<br />
ನಿರ್ಮಲಾತ್ಮನ ನೆನಪಿನಲ್ಲಿಯೇ ಇದ್ದ ವಾಲ್ಮೀಕಿಗಳಿಗೆ ಪ್ರತಿನಿತ್ಯ ನೋಡುತ್ತಿದ್ದರೂ ಅಂದೇಕೋ ವಿಶೇಷವಾಗಿ ತೋರಿದಳು ತಮಸೆ..!</p>
<p>ಒಂದಿನಿತೂ ಕಲ್ಮಷವಿಲ್ಲದ, ರಮಣೀಯವಾದ, ಸ್ಫಟಿಕಸದೃಶವಾದ ತಮಸೆಯ ಜಲದಲ್ಲಿ -<br />
ವಾಲ್ಮೀಕಿಗಳಿಗೆ ತೋರಿದ್ದು ಶ್ರೀರಾಮನ ಮನ&#8230;.!<br />
ತಿಳಿದವನಾಗದಿದ್ದರೂ ಚಿಂತೆಯಿಲ್ಲ, ಸನ್ಮನುಷ್ಯನಾಗಬೇಕಿದ್ದರೆ ತಿಳಿಮನದವನಾಗಿರಬೇಕು..!<br />
ಅಂತಹ ಶ್ರೀರಾಮನ ಮನಕ್ಕೆ ನಮನ ಸಲ್ಲಿಸಿ ಸ್ನಾನಕ್ಕೆ ಸಿದ್ಧರಾದ ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.</p>
<p>&#8221; ಮಗೂ.. ಕಲಶವನ್ನಿಲ್ಲಿಯೇ ಇಡು, ಸ್ನಾನವಸ್ತ್ರವನ್ನು ಕೊಡು.<br />
ಹಿತವಾದ ಈ ತಮಸಾ ತೀರ್ಥವನ್ನು ಅವಗಾಹಿಸುವೆ..&#8221;<br />
ಭರದ್ವಾಜನು ವಿನೀತನಾಗಿ ವಾಲ್ಮೀಕಿಗಳ ಆಣತಿಯನ್ನು ಪಾಲಿಸಿದನು.</p>
<p>ಭರದ್ವಾಜನ ಹಸ್ತದಿಂದ ಸ್ನಾನವಸ್ತ್ರವನ್ನು ವಾಲ್ಮೀಕಿಗಳು ತೆಗೆದುಕೊಂಡಿದ್ದೇನೋ ನಿಜ,<br />
ಆದರೆ ತಮಸೆಯ ಅವಗಾಹನವನ್ನು ಅವರು ಮಾಡಲಿಲ್ಲ..!<br />
ಅದಾಗಲೇ ಅವರ ಮನಸ್ಸು ನಿರ್ಮಲತೆಯಲ್ಲಿ ತಮಸೆಯನ್ನೇ ಹೋಲುವ ರಾಮನ ಮನದಲ್ಲಿ ಅವಗಾಹನಗೈದಾಗಿತ್ತು&#8230;!<br />
ಯಾರೋ ಕರೆದವರಂತೆ ತಟ್ಟನೆದ್ದ ವಾಲ್ಮೀಕಿಗಳು ತಮಸಾವನದಲ್ಲಿ ವಿಹರಿಸತೊಡಗಿದರು&#8230;!</p>
<p>ತಮಸೆಯ ತಂಪಿನಿಂದ ಮೇಲೆದ್ದು ಬಂದು, ಹಸಿರಿನ ಸೊಂಪಿನಲ್ಲಿ ವಿಹರಿಸುತ್ತಿದ್ದ ವಾಲ್ಮೀಕಿಗಳನ್ನು-<br />
ಇದ್ದಕ್ಕಿದ್ದಂತೆ ಸೆಳೆಯಿತು ಜೋಡಿಹಕ್ಕಿಗಳ ಹಾಡಿನ ಇಂಪು..!<br />
ಧ್ವನಿ ಬಂದೆಡೆಗೆ ಅಪ್ರಯತ್ನವಾಗಿ ತಿರುಗಿದ ವಾಲ್ಮೀಕಿಗಳ ದೃಷ್ಟಿಗೆ -<br />
ಗೋಚರವಾದವು ಪ್ರೇಮದ ವಿನಿಮಯದಲ್ಲಿ ಮಗ್ನವಾಗಿದ್ದ ಜೋಡಿ ಕ್ರೌಂಚ ಪಕ್ಷಿಗಳು..!</p>
<p>ಅನ್ಯೋನ್ಯ ಪ್ರೇಮಾತಿಶಯದಿಂದಾಗಿ ಒಂದು ಕ್ಷಣವಾದರೂ ಪರಸ್ಪರ ವಿರಹವನ್ನು ಸಹಿಸಲಾರದ,<br />
ಆನಂದಾತಿಶಯದಿಂದಾಗಿ ಅತ್ಯಂತ ಮಧುರವಾಗಿ ನಿನಾದಗೈಯುತ್ತಿದ್ದ ಕ್ರೌಂಚಮಿಥುನವನ್ನು-<br />
ಕಣ್ತುಂಬ ನೋಡಿದಾಗ ವಾಲ್ಮೀಕಿಗಳಿಗೆ ಆದದ್ದು ಪ್ರಕೃತಿ-ಪುರುಷರ ಸಾಕ್ಷಾತ್ಕಾರ&#8230;!</p>
<p>ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!<br />
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!<br />
ಹಿನ್ನೆಲೆಯಲ್ಲಿ ಹರಿಯುವ ಹೊಳೆ..<br />
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!<br />
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ&#8230;!</p>
<p>ಅಯ್ಯೋ&#8230;<br />
ಆಗ ಬಿದ್ದಿತಲ್ಲಿಗೊಂದು <strong>&#8216;ಬೇಡ&#8217;</strong>ದ ದೃಷ್ಟಿ..!<br />
ಸೃಷ್ಟಿ-ದೃಷ್ಟಿಗಳ ಸಮರಸ-ಸೌಖ್ಯವನ್ನು ಚಿರಕಾಲ ಉಳಿಯಲು ವಿಧಿಯದೇಕೆ ಬಿಡದೋ&#8230;!?<br />
ಕೆಂಗಣ್ಣಿನ, ಕೆಡುಮನಸ್ಸಿನ, ಕ್ರೂರವೈರದ, ದಯಾದೂರನಾದ, ದುರುಳ ಬೇಡನೊಬ್ಬನು ದಾಂಗುಡಿಯಿಟ್ಟನಲ್ಲಿ..!</p>
<p>ಒಂದೆಡೆ ಸಕಲ ಜೀವಗಳನ್ನೂ ಸ್ವಾರ್ಥವಿಲ್ಲದೆ ಪ್ರೀತಿಸುವ ವಾಲ್ಮೀಕಿಗಳು-<br />
ಇನ್ನೊಂದೆಡೆ ಸಕಲಜೀವಗಳನ್ನೂ ಅಕಾರಣವಾಗಿ ದ್ವೇಷಿಸುವ ಒಬ್ಬ ಬೇಡ..<br />
ಒಂದೆಡೆ ಜೀವಗಳ ಆನಂದವನ್ನು ಕಂಡು ಆನಂದಿಸುವ ದೈವೀಮನಸ್ಥಿತಿ..<br />
ಇನ್ನೊಂದೆಡೆ ಜೀವಹಿಂಸೆಯಲ್ಲೇ ಆನಂದವನ್ನು ಕಾಣುವ ಆಸುರೀಮನಸ್ಥಿತಿ..<br />
ಎಂಥ ವಿಪರ್ಯಾಸದ ಸಮಾವೇಶವಿದು&#8230;!</p>
<p>ಪಕ್ಷಿಯುಗಳವು ಮೈಮರೆತು ಸುಖಿಸುತ್ತಿರುವಂತೆಯೇ, ಮಹರ್ಷಿ ವಾಲ್ಮೀಕಿಗಳು ನೋಡನೋಡುತ್ತಿರುವಂತೆಯೇ -<br />
ಬೇಡನ ಕೆಡುಮನಸ್ಸು ಕೆಡುಸಂಕಲ್ಪವೊಂದನ್ನು ಮಾಡಿತು..<br />
ಕೆಂಗಣ್ಣು ಗುರಿಯಿಟ್ಟಿತು..<br />
ಕ್ರೂರ ಕೈಗಳು ಕೂರಂಬನ್ನೆಸೆದವು&#8230;!<br />
ನಲ್ಲೆಯ ಒಲವಿನಲ್ಲಿ ಜಗದಿರವನ್ನು, ಹೆಚ್ಚೇಕೆ.. ತನ್ನಿರವನ್ನೇ ಮರೆತಿದ್ದ ಗಂಡುಪಕ್ಷಿಯ ಕೋಮಲ ಹೃದಯವನ್ನು -<br />
ಹೃದಯಶೂನ್ಯನಾದ ಬೇಡನ ಬಾಣವು ಭೇದಿಸಿಯೇಬಿಟ್ಟಿತು..!</p>
<p>ಅಹೋ&#8230;ಬದುಕಿನ ಭಾಗ್ಯದ ವಿಪರ್ಯಯವೇ&#8230;!<br />
ಎಲ್ಲಿಋಷಿಯ ಪಾವನ ದೃಷ್ಟಿಯಿದ್ದಿತೋ..ಅಲ್ಲಿ ಬಿದ್ದಿತು ವ್ಯಾಧನ ಪಾಪದೃಷ್ಟಿ..<br />
ಮಡದಿಗಾಗಿ ಮೀಸಲಿಟ್ಟ ಮೃದು ಹೃದಯದಲ್ಲಿ ಆಯಿತು ಕ್ರೂರ ಶರಪ್ರವೇಶ..<br />
ಶೃಂಗಾರರಸವಳಿದು ಪ್ರಕಟವಾಯಿತು ಕರುಣರಸ&#8230;<br />
ಪ್ರೇಮಧಾರೆಯಾರಿತು, ಚಿಮ್ಮಿತು ರಕ್ತಧಾರೆ..<br />
ಕಲರವ ಕರಗಿತು, ಮಾರ್ದನಿಸಿತು ಚೀತ್ಕಾರ&#8230;!!</p>
<p>ಮುಂಜಾನೆಯ ಮಂಜಿನಲ್ಲಿ ಮಿಂದು ನಳನಳಿಸುವ, ಸೂರ್ಯನನ್ನು ನೋಡಿ ತನ್ನಷ್ಟಕ್ಕೇ ನಗುವ,<br />
ಸುಕೋಮಲ ಕಮಲದ ಮೇಲೆ ಸಿಡಿಲು ಬಿದ್ದಂತೆ..<br />
ಹಿಂದುಮುಂದಿಲ್ಲದ, ಪ್ರಾಣಹರವಾದ ಬಾಣಾಘಾತಕ್ಕೆ ತುತ್ತಾಗಿ ಧರೆಗುರುಳಿದ ಪ್ರೇಮಪಕ್ಷಿ ,<br />
ರಕ್ತದ ಮಡುವಿನಲ್ಲಿ ತನ್ನ ಪ್ರಾಣಗಳಿಗಾಗಿ..ಅಲ್ಲಲ್ಲ..ತನ್ನ ಪ್ರಾಣಪ್ರಿಯಳಿಗಾಗಿ ಚಡಪಡಿಸಿತು&#8230;!</p>
<p>ಒಂದೇ ಕಲ್ಲಿಗೆ ಎರಡು ಹಕ್ಕಿಗಳೆನ್ನುವರಲ್ಲವೇ..<br />
ಇಲ್ಲಿ ಆದದ್ದು ಹಾಗೇ..!<br />
ಒಂದೇ  ಶ್ರುತಿಯ ಎರಡು ವೀಣೆಗಳಲ್ಲಿ ಒಂದನ್ನು ಮೀಟಿದರೆ ಎರಡೂ ಮಿಡಿಯುವಂತೆ -<br />
ಗಂಡುಪಕ್ಷಿಯ ಮರಣವೇದನೆಯ ಕೂಗು ಹೆಣ್ಣುಪಕ್ಷಿಯ ಹೃದಯದಲ್ಲಿ<br />
ಇಮ್ಮಡಿಯಾಗಿ..ಮುಮ್ಮಡಿಯಾಗಿ..ನೂರ್ಮಡಿಯಾಗಿ ಪ್ರತಿಧ್ವನಿಸಿತು..!<br />
ಆಕೆಯ ಕರುಣಾಕ್ರಂದನಕ್ಕೆ ಕರುಳೇಕೆ..ಕಲ್ಲುಬಂಡೆಗಳೇ ಕರಗಿದವು&#8230;!</p>
<p>ತಮಸೆಯ ತಟದಲ್ಲಿ ಹರಿಯತೊಡಗಿತು ಮತ್ತೊಂದು ನದಿ..<br />
ಅದು ಜೀವನದಿ&#8230; ಜೀವನದ ನೋವ ನದಿ..!</p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/%e0%b2%85%e0%b2%82%e0%b2%ac%e0%b3%8a%e0%b2%82%e0%b2%a6%e0%b3%81-%e0%b2%b9%e0%b2%95%e0%b3%8d%e0%b2%95%e0%b2%bf%e0%b2%af%e0%b3%86%e0%b2%b0%e0%b2%a1%e0%b3%81/feed/</wfw:commentRss>
		<slash:comments>14</slash:comments>
		</item>
		<item>
		<title>ಇದು ಹೀಗೇ ಇರದು..!!</title>
		<link>http://hareraama.in/blog/%e0%b2%87%e0%b2%a6%e0%b3%81-%e0%b2%b9%e0%b3%80%e0%b2%97%e0%b3%87-%e0%b2%87%e0%b2%b0%e0%b2%a6%e0%b3%81/</link>
		<comments>http://hareraama.in/blog/%e0%b2%87%e0%b2%a6%e0%b3%81-%e0%b2%b9%e0%b3%80%e0%b2%97%e0%b3%87-%e0%b2%87%e0%b2%b0%e0%b2%a6%e0%b3%81/#comments</comments>
		<pubDate>Sun, 20 Jun 2010 16:39:15 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4777</guid>
		<description><![CDATA[ ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..
ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!

ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.
ರಾಜ್ಯ-ರಾಜಧಾನಿ-ರಾಜಮಾರ್ಗಗಳು,
ಜನಗಳು-ಜಯಕಾರಗಳು,
ಆನೆ-ಅಂಬಾರಿಗಳು,
ಅರಮನೆ-ಸಿಂಹಾಸನಗಳು..
ಇವುಗಳೆಲ್ಲವೂ ಕರಗಿ...ಅಲ್ಲಿ
ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು...!!

"ಇದು ಹೀಗೇ ಇರದು"]]></description>
			<content:encoded><![CDATA[<p style="text-align: center;"><span style="color: #888888;"><strong>|| ಹರೇರಾಮ ||</strong></span></p>
<p>ಒಮ್ಮೊಮ್ಮೆ ಸೌಭಾಗ್ಯವು ವೈರಾಗ್ಯವನ್ನು ಹುಡುಕಿಕೊಂಡು ಬರುವುದುಂಟು..<br />
ನಾಡಿನ ದೊರೆಗಳು ಕಾಡಿನ ಗುರುಗಳ ಚರಣಗಳನ್ನಾಶ್ರಯಿಸುವುದುಂಟು..<br />
ತಥಾಕಥಿತ ಸುಖಪುರುಷರು ನಿಜಸುಖವನ್ನರಸಿ ತ್ಯಾಗಿಗಳ ಬಳಿ ಸಾರುವುದುಂಟು..</p>
<p>ಒಮ್ಮೆ ಹೀಗಾಯಿತು..<br />
ಮಹಾಯೋಗಿಯೊಬ್ಬರ ಸನ್ನಿಧಿಯಲ್ಲಿ ಮಹಾರಾಜನೊಬ್ಬ ವಿಚಿತ್ರವಾದ ಪ್ರಶ್ನೆಯೊಂದನ್ನು ಮುಂದಿಡುತ್ತಾನೆ..<br />
&#8220;ಗುರುವೇ, ಮೂರೇಮೂರು ಶಬ್ದಗಳ ಒಂದು ವಾಕ್ಯದಲ್ಲಿ ಸಂಪೂರ್ಣ ಜೀವನಕ್ಕೇ ಸಮತೋಲನವನ್ನು ಕೊಡುವ ಉಪದೇಶವೊಂದನ್ನು ತಮ್ಮಿಂದ ಬಯಸುವೆ.<br />
ಉಪದೇಶ ಹೇಗಿರಬೇಕೆಂದರೆ, ಒಮ್ಮೆ ನೆನೆಸಿಕೊಂಡರೆ ಸಾಕು ಕಡುಕಷ್ಟಗಳಲ್ಲಿಯೂ ಮನ ಕುಗ್ಗಬಾರದು- ಸುಖದ ಸುಪ್ಪತ್ತಿಗೆಯಲ್ಲಿಯೂ ಹಿಗ್ಗಬಾರದು.</p>
<p>ತಮ್ಮ ಉಪದೇಶವನ್ನು ಮುದ್ರೆಯುಂಗುರದಲ್ಲಿ ಬರೆಸಿ ನಿತ್ಯ ಧರಿಸುವೆನು. ಏಕೆಂದರೆ, ಅದು ಯಾವಾಗಲೂ ನನ್ನ ಕಣ್ಣಿಗೆ ಬೀಳುವಂತಿರಬೇಕು..&#8221;</p>
<p>ಕೊಂಚಕಾಲ ತನ್ನೊಳಗೇ ಹುಡುಕಿದ ಗುರು ನೀಡಿದ ಉಪದೇಶ ಹೀಗಿತ್ತು..</p>
<p><strong><span style="color: #ff00ff;">&#8221; ಇದು ಹೀಗೇ ಇರದು &#8220;</span><br />
</strong><strong><br />
<span style="font-weight: normal;"> &#8220;ಹಾಗೆಂದರೆ..!?&#8221;<br />
&#8220;ಹಾಗೆಂದರೇನೆಂದು ಸಮಯ ಬಂದಾಗ ತಾನಾಗಿ ಅರ್ಥವಾದೀತು..<br />
ಯಾವಾಗ ನಿನಗೀ ಉಪದೇಶದ ಅಗತ್ಯ ಬೀಳುವುದೋ..<br />
ಆಗ ನಿನ್ನ ಮುದ್ರೆಯುಂಗುರ ಒಮ್ಮೆ ಮಿಂಚೀತು&#8230;!&#8221;</span></strong></p>
<p><strong><span style="font-weight: normal;"> </span></strong></p>
<p><span style="font-weight: normal;">ಕೆಲಕಾಲ ಕಳೆಯಿತು..<br />
ಒಮ್ಮೆ ಆ ರಾಜ್ಯದ ಮೇಲೆ ಶತ್ರುಗಳ ಅಕ್ರಮಣವಾಯಿತು..ಸಮರದಲ್ಲಿ ರಾಜನಿಗೆ ಸೋಲೇ ಆಯಿತು..<br />
ಪ್ರಾಣಗಳನ್ನುಳಿಸಿಕೊಳ್ಳಲು ಕುದುರೆಯನ್ನೇರಿ ಪಲಾಯನ ಮಾಡಿದನಾತ&#8230;<br />
ಶತ್ರುಸೈನಿಕರು ಆತನನ್ನು ಹಿಂಬಾಲಿಸಿದರು..<br />
ತನ್ನೊಡೆಯನನ್ನು ಹೊತ್ತು ಬಹುದೂರ ಓಡಿದ ಕುದುರೆ  ಬಳಲಿ ಬಸವಳಿದು ಬಿದ್ದು ಸತ್ತಾಗ -<br />
ರಾಜನಿಗೆ ಮುಂದೇನು ಮಾಡಬೇಕಂದು ದಿಕ್ಕೇ ತೋಚಲಿಲ್ಲ..<br />
ಶತ್ರುಗಳ ವಶವಾದರೆ ಮುಂದೆ ಬರಬಹುದಾದ ಪರಿಸ್ಥಿತಿಯನ್ನು ಎಣಿಸಿಕೊಂಡಾಗ ಆತ್ಮಹತ್ಯೆಯೇ ಹಿತವೆನಿಸಿತು&#8230;<br />
ಇನ್ನೇನು ಆತ ಸಾವಿಗೆ ಶರಣಾಗಬೇಕು ಎನ್ನುವಷ್ಟರಲ್ಲಿ </span><span style="font-weight: normal;"><strong>ಮುದ್ರೆಯುಂಗುರ ಮಿಂಚಿತು&#8230;!</strong></span></p>
<p><span style="font-weight: normal;"><strong>ಆಗ ಕಾಣಿಸಿದವು ಗುರು&#8217;ಪದ&#8217;ಗಳು&#8230;!<br />
</strong><br />
<strong><span style="color: #339966;"> &#8220;ಇದು ಹೀಗೇ ಇರದು&#8221;<br />
</span><br />
ಮೊದಲೆಷ್ಟೋ ಬಾರಿ ನೋಡಿದ ಅವೇ &#8216;ಪದ&#8217;ಗಳು ಮೊದಲ ಬಾರಿಗೆ ಈಗ ಅರ್ಥ ಕೊಡತೊಡಗಿದವು&#8230;!</strong></span></p>
<p><span style="font-weight: normal;">&#8220;ಮಗೂ..ಈ ವಿಕಟ ಪರಿಸ್ಥಿತಿ ಬಹುಕಾಲ ಹೀಗೆಯೇ ಇರದು. ಸಾವಿಗೆ ಮನ ಮಾಡಬೇಡ. ಶೀಘ್ರದಲ್ಲಿಯೇ ಒಳ್ಳೆಯ ಕಾಲ ಬಂದೀತು&#8221;<br />
ಎಂದು ಕಿವಿಯಲ್ಲಿ ಗುರುವೇ ಹೇಳಿದಂತೆನಿಸಿತು..<br />
&#8216;ಈಸಬೇಕು, ಇದ್ದು ಜೈಸಬೇಕು&#8217; ಎಂಬ ದೃಢ ನಿಶ್ಚಯದೊಡನೆ </span><span style="font-weight: normal;"><strong>ಮನೋಭಾರವನ್ನು ಗುರುಪಾದದಲ್ಲಿರಿಸಿ,<br />
ಮೈಭಾರವನ್ನು ತನ್ನ ಪದಗಳಲ್ಲಿಯೇ ಇಟ್ಟು ಮುಂದುವರೆದನಾತ&#8230;!</strong></span></p>
<p><span style="font-weight: normal;">ಅನತಿದೂರದಲ್ಲೊಂದು ಕವಲುದಾರಿ..<br />
ಅವುಗಳಲ್ಲಿ ರಾಜನೊಂದು ದಾರಿಯಲ್ಲಿ ಮುಂದುವರಿದರೆ,<br />
ಆತನನ್ನು ಬೆಂಬತ್ತಿ ಬಂದ ಶತ್ರುಸೈನಿಕರು ಮತ್ತೊಂದು ದಾರಿಯಲ್ಲಿ ಸಾಗಿದರು&#8230;!<br />
ಹೀಗೆ ಶತ್ರುಗಳಿಂದ ಪಾರಾದ ರಾಜ ಗುಡ್ಡಗಾಡಿನ ಪ್ರದೇಶವೊಂದನ್ನು ಪ್ರವೇಶಿಸಿದ..</span></p>
<p>ಅಲ್ಲಿಯ ಜನರು ಅವನನ್ನು ಪ್ರೀತಿಸುವವರು..!<br />
ಆತನ ರಾಜ್ಯಭಾರದಲ್ಲಿ ಸುಖಪಟ್ಟವರು..ಶ್ರೇಯಸ್ಸು ಕಂಡವರು&#8230;<br />
<strong>ಎಂದೋ ಮಾಡಿದ ಒಳ್ಳೆಯ ಕೆಲಸ ಇಂದು ಫಲ ಕೊಡತೊಡಗಿತ್ತು..!</strong><br />
ಅವರ ನಡುವೆ ಆಶ್ರಯ ಪಡೆದ ರಾಜ ಮತ್ತೆ ಸೈನ್ಯ ಕಟ್ಟಿದ&#8230;ಸಮರಸಿದ್ಧತೆ ನಡೆಸಿದ&#8230;</p>
<p><span style="font-weight: normal;">ಒಂದು ಶುಭದಿನದಂದು..<br />
ಎಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದನೋ&#8230;ಎಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದನೋ..<br />
ಎಲ್ಲಿ ವೈಭವದಲ್ಲಿ ಮೆರೆದಿದ್ದನೋ&#8230;ಎಲ್ಲಿ ಸೋತು ಸುಣ್ಣವಾಗಿದ್ದನೋ&#8230;<br />
ಅಲ್ಲಿಗೆ &#8211; </span><span style="font-weight: normal;"><strong>ತನ್ನ ತಾಯ್ನೆಲಕ್ಕೆ</strong></span><span style="font-weight: normal;">- ತನ್ನವರೊಡನೆ ಯುದ್ದಯಾತ್ರೆಯನ್ನು ಕೈಗೊಂಡ..<br />
</span>ಯುದ್ಧ ನಡೆಯಿತು..<br />
ಈ ಬಾರಿ ವಿಜಯಲಕ್ಷ್ಮಿ ಆತನ ಕೈ ಬಿಡಲಿಲ್ಲ..<br />
ಕಳೆದುಹೋದದ್ದೆಲ್ಲವೂ ಮತ್ತೆ ಪ್ರಾಪ್ತವಾಗಿತ್ತು&#8230;!</p>
<p><span style="font-weight: normal;"> ರಾಜ್ಯವೇ ಸಂಭ್ರಮಿಸಿತು..!<br />
ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,<br />
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..<br />
<strong> ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!</strong></span></p>
<p><span style="font-weight: normal;">ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.<br />
ರಾಜ್ಯ-ರಾಜಧಾನಿ-ರಾಜಮಾರ್ಗಗಳು,<br />
ಜನಗಳು-ಜಯಕಾರಗಳು,<br />
ಆನೆ-ಅಂಬಾರಿಗಳು,<br />
ಅರಮನೆ-ಸಿಂಹಾಸನಗಳು..<br />
ಇವುಗಳೆಲ್ಲವೂ ಕರಗಿ&#8230;ಅಲ್ಲಿ<br />
<strong> ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು&#8230;!!</strong></span></p>
<h3 style="font-size: 1.17em;"><span style="font-weight: normal;"><strong><span style="color: #ff0000;">&#8220;ಇದು ಹೀಗೇ ಇರದು&#8221;</span></strong></span></h3>
<p><strong>ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ|</strong></p>
<p><strong>ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ||</strong></p>
<p><strong>ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು|</strong></p>
<p><strong>ಗಡುವಿರುವುದೆಲ್ಲಕಂ &#8211;ಮಂಕುತಿಮ್ಮ||</strong></p>
<p>ಸಪ್ತಸಾಗರಗಳು ಸುನಾಮಿಯಾಗಿ ಉಕ್ಕೇರಿ ಬರಲಿ ನಿನ್ನೆಡೆಗೆ,</p>
<p>ನಿನ್ನನ್ನು ಹೊತ್ತ ಭೂಮಂಡಲವೇ ಧೂಳೀಪಟಲವಾಗಿ ಮೇಲೇಳಲಿ ಮುಗಿಲಿನೆಡೆಗೆ,</p>
<p>ನೆಮ್ಮದಿ ಬಿಡಬೇಡ..ಗಾಬರಿಪಡಬೇಡ,</p>
<p>ಏಕೆಂದರೆ..<br />
<strong>&#8221; ಅದು ಹಾಗೇ ಇರದು &#8221;<br />
</strong>ಅದು ಹಾಗೇ ಇರದು ಏಕೆಂದರೆ, ಕಾಲ ಅದನ್ನು ಬಹುಕಾಲ ಹಾಗೇ ಇರಲು ಬಿಡದು..!<br />
ಉಕ್ಕೇರಿದ ಸಾಗರವು ಹಿಂದೆ ಸರಿಯಲೇಬೇಕು..<br />
ಮೇಲೆದ್ದ ಧೂಳೀಪಟಲ ಕೆಳಗಿಳಿಯಲೇಬೇಕು..!<br />
ಏಕೆಂದರೆ, ಎಲ್ಲದಕ್ಕೂ ಒಂದು ಗಡುವಿದೆ&#8230;</p>
<p><strong>&#8220;ಮಾ ಕುರು ಧನಜನ ಯೌವನಗರ್ವಂ|<br />
ಹರತಿ ನಿಮೇಷಾತ್ ಕಾಲಃ ಸರ್ವಮ್||</strong></p>
<p><strong> &#8211;  ಭಜಗೋವಿಂದಂನಲ್ಲಿ ಶ್ರೀ ಶಂಕರಾಚರ್ಯರು..</strong></p>
<p>ಧನ-ಜನ-ಯೌವನಗಳಿವೆಯೆಂದು ಗರ್ವ ತಾಳಬೇಡ ಏಕೆಂದರೆ, ಅದು ಹಾಗೇ ಇರದು&#8230;!<br />
ಧನ-ಜನ-ಯೌವನಗಳ ಉನ್ಮಾದದಲ್ಲಿ ಹಿಗ್ಗಿ ನೀನು ಕುಣಿಯುವಾಗ ಕಾಲನು ಕಾಲಕೆಳಗಿನ ನೆಲವನ್ನೇ ಕಸಿದಾನು..!</p>
<p>ನೆಮ್ಮದಿಯಿರುವುದು ಸಮತೆಯಲ್ಲಿಯೇ ಹೊರತು, ಹಿಗ್ಗು-ಕುಗ್ಗುಗಳ ವಿಷಮತೆಯಲ್ಲಲ್ಲ..<br />
&#8216;ಹಿಗ್ಗು ಬೇಕೇ ಬೇಕು, ಕುಗ್ಗು ಬೇಡವೇ ಬೇಡ&#8217; ಎನ್ನುವವರುಂಟು..<br />
ಮೇಲ್ನೋಟಕ್ಕೆ ಕತ್ತಲು-ಬೆಳಕಿನಂತೆ ಹಿಗ್ಗು-ಕುಗ್ಗುಗಳು ಪರಸ್ಪರ ವಿರೋಧಿಗಳಂತೆ ಕಂಡರೂ,<br />
ಬಗೆದು ನೋಡಿದರೆ, <strong>ಜೊತೆಗೂಡಿ ದೋಚುವ ಜೊಡಿಕಳ್ಳರೇ ಅವರು..!</strong></p>
<div id="attachment_4807" class="wp-caption alignright" style="width: 310px"><a href="http://hareraama.in/wp-content/uploads/2010/06/black_and_white_cats-1541.jpg"><img class="size-medium wp-image-4807" title="black and white" src="http://hareraama.in/wp-content/uploads/2010/06/black_and_white_cats-1541-300x249.jpg" alt="" width="300" height="249" /></a><p class="wp-caption-text">ಹಿಗ್ಗು-ಕುಗ್ಗುಗಳೆಂಬ ಹಾಲುಮನವನ್ನು ಕದಿಯುವ ಕಳ್ಳಬೆಕ್ಕುಗಳು..!</p></div>
<p>ಭೂಗೋಳದ ಏರಿಳಿತಗಳನ್ನೇ ನೋಡಿ.!<br />
ಏರಿದ್ದಲ್ಲಿ ಇಳಿತ -ಇಳಿತವಿದ್ದಲ್ಲಿ ಏರು..<br />
ಏರಿಳಿತಗಳು ಒಂದನ್ನು ಬಿಟ್ಟು ಇನ್ನೊಂದು ಇಲ್ಲವೇ ಇಲ್ಲ..<br />
ಹಾಗೆ ನೋಡಿದರೆ ಎಲ್ಲಾ ಏರುಗಳೂ ಇನ್ನೊಂದು ಕಡೆಯಿಂದ ನೋಡಿದರೆ ಇಳಿತಗಳೇ..!<br />
ಎಲ್ಲಾ ಇಳಿತಗಳೂ ವಿರುದ್ಧ ದಿಕ್ಕಿನಿಂದ ನೋಡಿದರೆ ಏರುಗಳೇ..!<br />
ಸಮಭೂಮಿ ಹಾಗಲ್ಲ..! ಅದು ಎಲ್ಲಿಂದ ನೋಡಿದರೂ ಸಮವೇ&#8230;!<br />
ಹಿಗ್ಗು ಬರುವಾಗ ತನ್ನ ಬೆನ್ನ ಹಿಂದೆ ಕುಗ್ಗನ್ನು ಅಡಗಿಸಿಟ್ಟುಕೊಂಡೇ ಬರುತ್ತದೆ..!<br />
ಹಾಗೆಯೇ ಕುಗ್ಗೂ ಕೂಡ&#8230;<br />
ಹಿಗ್ಗು ಬರುವಾಗ  ಹಮ್ಮನ್ನು ತರುತ್ತದೆ..ಹಮ್ಮು ಪತನಕ್ಕೆ ಕಾರಣವಾಗುತ್ತದೆ&#8230;<br />
ಕುಗ್ಗು ಆತ್ಮ್ಸಸ್ಥೈರ್ಯ ಕೆಡಿಸುತ್ತದೆ..<br />
ಕೆಲವೂಮ್ಮೆ ಆತ್ಮಹತ್ಯೆಗೂ ಕಾರಣವಾಗುತ್ತದೆ..<br />
ಒಂದು ಕಬ್ಬಿಣದ ಚೂರಿಯಾದರೆ, ಇನ್ನೊಂದು ಚಿನ್ನದ ಚೂರಿ&#8230;!<br />
ವಿಷಮತೆಯು ತರುವ ಹಿಗ್ಗು-ಕುಗ್ಗುಗಳೆಂಬ ಜೋಡಿಖಾಯಿಲೆಗೆ ಸಮತೆಯೇ ಸರಿಯಾದ ಮದ್ದು..!<br />
ತನ್ನೆರಡೂ ರೆಕ್ಕೆಗಳನ್ನೂ ಸಮವಾಗಿಟ್ಟುಕೊಂಡು ತಡೆಯಿಲ್ಲದೆ ಆಕಾಶದಂಗಳದಲ್ಲಿ ಹಾರಾಡುವ ,<br />
ಹಕ್ಕಿಯೇ ಸಮತೆಯ ಗುರು ನಮಗೆ..!<br />
ಮಳೆಗಾಲದಲ್ಲಿ ಉಕ್ಕಿಹರಿಯದ, ಬೇಸಿಗೆಯಲ್ಲಿ ಬತ್ತದ ಮಹಾಸಾಗರವೇ ಸಮತೆಯ ಗುರು ನಮಗೆ&#8230;.!<br />
ಸುಖ-ದುಃಖಗಳು ಬಂದೊದಗುವಾಗ (ಬಂದೆರಗುವಾಗ) ಪ್ರತಿಕ್ರಿಯಿಸದಿರಲು ನಾನೇನು ಕಲ್ಲುಬಂಡೆಯೇ ಎಂದು ಕೇಳಬೇಡಿ&#8230;!<br />
ಪ್ರತಿಕ್ರಿಯೆಗಳಿರಲಿ..<br />
ಆದರೆ ಅವುಗಳು ಮನದ ಮೇಲುಪದರದಲ್ಲಿದ್ದರೆ ಸಾಕು&#8230;<br />
ಗಂಭೀರ ಸಾಗರದಲ್ಲಿಯೂ ಮೇಲ್ಪದರದಲ್ಲಿಅಲೆಗಳಿವೆ..<br />
ಆದರೆ ಆಳಕ್ಕಿಳಿದಂತೆ ಶಾಂತ-ಶಾಂತ..ಅಚಲ-ಅಚಲ&#8230;!</p>
<p><strong>ಎರಡು ಕೋಣೆಗಳ ನೀಂ ಮಾಡು ಮನದಾಲಯದಿ|</strong></p>
<p><strong>ಹೊರಕೋಣೆಯಲಿ ಲೋಗರಾಟಗಳನಾಡು||</strong></p>
<p><strong>ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ|</strong></p>
<p><strong>ವರಯೋಗಸೂತ್ರವಿದು &#8211;ಮಂಕುತಿಮ್ಮ||</strong></p>
<p>ನಿನ್ನಂತರಂಗದ ಮೇಲ್ಪದರದಲ್ಲಿ ಹಿಗ್ಗು-ಕುಗ್ಗುಗಳ ದಾಳಿಯಲ್ಲಿ ಅದೆಷ್ಟ್ಟೇ ತರಂಗಗಳೇಳಲಿ ಚಿಂತೆಯಿಲ್ಲ,<br />
ಆದರೆ ಭಾವದಾಳದಲ್ಲಿ &#8216;ಇದು ಶಾಶ್ವತವಲ್ಲ&#8230;ಇದು ಶಾಶ್ವತವಲ್ಲ&#8217; ಎನ್ನುವ ಮಂತ್ರವನ್ನು ನಿನ್ನ ಜೀವವು ಸದಾಕಾಲವೂ ಜಪಿಸುತ್ತಿರಲಿ&#8230;!<br />
ಪರಿಸ್ಥಿತಿಗಳು ಬದಲಾಗುತ್ತಿದ್ದರೂ ಮನಸ್ಥಿತಿಯು ಬದಲಾಗದಂತೆ ಮಾಡುವ ಮಹಾಮಂತ್ರವದು&#8230;!</p>
<p>ಮನಃಪರಿಪಾಕದ ಫಲವಾಗಿ ನಿನ್ನೊಳಗುದಯಿಸಿ ಬರುವ ಸಮತೆಯ ಸ್ಥಿತಿಯೇ ಮೋಕ್ಷ..!</p>
<h3><span style="font-weight: normal;"><em><span style="color: #0000ff;">ಮುಕ್ತನಾಗು&#8230;ಮುಕ್ತಿಗಾಗಿ ದ್ವಂದ್ವಮುಕ್ತನಾಗು&#8230;!</span></em></span></p>
<p><span style="font-weight: normal;"><strong><span style="color: #ff0000;"> </span></strong></span></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong></p>
<div id="_mcePaste"><span style="color: #0000ff; font-size: small;"><span style="font-weight: normal;"><span style="color: #ff0000; font-size: medium;"><strong></p>
<div style="text-align: center;"><span style="color: #c0c0c0;">|| ಹರೇರಾಮ ||</span></div>
<p></strong></p>
<p></span></span></span></div>
<p></strong></h3>
]]></content:encoded>
			<wfw:commentRss>http://hareraama.in/blog/%e0%b2%87%e0%b2%a6%e0%b3%81-%e0%b2%b9%e0%b3%80%e0%b2%97%e0%b3%87-%e0%b2%87%e0%b2%b0%e0%b2%a6%e0%b3%81/feed/</wfw:commentRss>
		<slash:comments>32</slash:comments>
		</item>
	</channel>
</rss>
