<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HareRaama.in : Official homepage of Sri Sri Raghaveshwara Bharati Mahaswamiji &#187; ರಾಜ್ಯ</title>
	<atom:link href="http://hareraama.in/category/blog/raajya/feed/" rel="self" type="application/rss+xml" />
	<link>http://hareraama.in</link>
	<description>Official homepage of Sri Sri Raghaveshwara Bharati Mahaswamiji</description>
	<lastBuildDate>Thu, 29 Jul 2010 12:48:29 +0000</lastBuildDate>
	<generator>http://wordpress.org/?v=2.9.2</generator>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ರಾಜ್ಯದಿಂದ ರಾಮನವರೆಗೆ&#8230;&#8230;&#8230;.</title>
		<link>http://hareraama.in/blog/rajyadinda-ramanavarege/</link>
		<comments>http://hareraama.in/blog/rajyadinda-ramanavarege/#comments</comments>
		<pubDate>Sun, 18 Jul 2010 02:18:24 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[bharati]]></category>
		<category><![CDATA[raama]]></category>
		<category><![CDATA[raghaveshwara]]></category>
		<category><![CDATA[sri]]></category>

		<guid isPermaLink="false">http://hareraama.in/?p=5713</guid>
		<description><![CDATA[ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ...
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!]]></description>
			<content:encoded><![CDATA[<p style="text-align: center;">
<p style="text-align: center;"><strong>॥ ಹರೇರಾಮ॥</strong></p>
<p>ಅಬ್ಬಾ..!<br />
ಆಸೆಯ ಆಳವೇನು..ಅಗಲವೇನು..?<br />
ಅದು ಸೃಷ್ಟಿಸುವ ಆಶ್ಚರ್ಯಗಳೇನು..?<br />
ಅಧಃಪತನವೇನು..?ಆನಂದವೇನು..?<br />
ಪರಿತಾಪವೇನು..? ಪರಿಪಾಕವೇನು..? ಪರಿವರ್ತನೆಯೇನು..?</p>
<p><strong>ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!<br />
</strong>ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ&#8230;<br />
ಉಂಡ ಮನೆಗೆ ಎರಡೆಣಿಸಬಹುದು..!<br />
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!<br />
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!<br />
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!<br />
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!<br />
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!<br />
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!</p>
<div id="attachment_5741" class="wp-caption alignright" style="width: 211px"><a href="http://hareraama.in/wp-content/uploads/2010/07/Kireeta-Gold.jpg"><img class="size-medium wp-image-5741" title="Kireeta-Gold" src="http://hareraama.in/wp-content/uploads/2010/07/Kireeta-Gold-201x300.jpg" alt="ಮುಕುಟವೋ ? ಮಾಯೆಯೋ ?" width="201" height="300" /></a><p class="wp-caption-text">ಮುಕುಟವೋ ? ಮಾಯೆಯೋ ?</p></div>
<p>ಇನ್ನೊಬ್ಬರನ್ನು ಹಾಳು ಮಾಡಲು ತಪಸ್ಸು ಮಾಡಬಹುದು..!<br />
ಕೊನೆಗೆ ಸಮಸ್ತ ಬಲ-ದರ್ಪಗಳನ್ನು ಕಳೆದುಕೊಂಡು ಸೊನ್ನೆಯಾಗಿ ಬಿಡಬಹುದು..!</p>
<p><strong><br />
ಸಾತ್ವಿಕ ಆಸೆಯೊಂದು ಏನೆಲ್ಲವನ್ನೂ ಸಾಧಿಸಿಕೊಡಬಹುದು..!</strong><br />
ಸಾತ್ವಿಕ ಅಸೆಯೊಂದು ಮನದಲ್ಲಿ ಮೂಡಿದರೆ..ಆ ವ್ಯಕ್ತಿ..<br />
ಪ್ರತಿದ್ವಂದ್ವಿಯನ್ನು ಧ್ವಂಸಗೊಳಿಸುವ ದುರ್ಬುದ್ಧಿಯನ್ನು ತೊರೆದು, ಆತನೆತ್ತರಕ್ಕೆ ತಾನೂ ಬೆಳೆಯುವ ಮಹಾಪ್ರಯತ್ನಕ್ಕೆಳೆಸಬಹುದು..!<br />
ಸಾಮ್ರಾಜ್ಯಪತಿಯಾಗಿದ್ದವನು ಸನ್ಯಸ್ತಮುನಿಯಾಗಬಹುದು..!<br />
ರಕ್ತಪಿಪಾಸೆಯ ಕ್ಷಾತ್ರವನ್ನು ತೊರೆದು ಅತಿಕಠಿಣತಪಸ್ಸಿನ ದ್ವಾರಾ ಜ್ಞಾನಪಿಪಾಸೆಯ ಬ್ರಾಹ್ಮದ ತುತ್ತತುದಿಯ ಬ್ರಹ್ಮರ್ಷಿ ಪದವಿಗೇರಬಹುದು..!<br />
ಅನಂತಕಾಲ ಅಪರಿಮಿತ ಜೀವಿಗಳನ್ನುದ್ಧರಿಸುವ ಗಾಯತ್ರಿಯಂತಹ ಮಹಾಮಂತ್ರವೊಂದನ್ನು ಸಾಕ್ಷಾತ್ಕರಿಸಿಕೊಂಡು ಸಕಲ ಜಗತ್ತಿಗೆ ನೀಡಬಹುದು..!<br />
ಬದ್ಧವೈರಿಯೊಡನೆ ಶುದ್ಧಮೈತ್ರಿಯನ್ನು ಬೆಳೆಸಬಹುದು..!<br />
ಒಮ್ಮೆ ಆಸೆಯ ರಾಜಸ -ತಾಮಸ ರೂಪ..<br />
ಮತ್ತೊಮ್ಮೆ ಆಸೆಯ ಸಾತ್ವಿಕ ತಾತ್ವಿಕ ರೂಪ..<br />
ಇವೆರಡೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿಒಂದಾದ ಮೇಲೊಂದರಂತೆ ತಾಂಡವ- ಲಾಸ್ಯಗಳನ್ನಾಡಿದ್ದುಂಟು..<br />
ಇವೆಲ್ಲವೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿ ಘಟಿಸಿದ್ದುಂಟು ಎಂದರೆ ನಂಬುತ್ತೀರಾ..?<br />
ರಾಜಾಧಿರಾಜ ಪದವಿಯಲ್ಲಿದ್ದುಕೊಂಡು, ಆಸೆಯ ರಾಜಸ-ರೌದ್ರ ರೂಪದ ದಾಳಿಗೆ ತನ್ನದೆಲ್ಲವನ್ನೂ ತೆತ್ತು ಸೊನ್ನೆಯಾಗಿ,<br />
ಮತ್ತದೇ ಆಸೆ ತನ್ನ ಸಾತ್ವಿಕ -ತಾತ್ವಿಕ ರೂಪದಲ್ಲಿ ಮೈದೋರಿದಾಗ ಮರುಹುಟ್ಟು ಪಡೆದು.. ಭುವಿಯಗಲ ಹರಡಿದ, ಬಾನೆತ್ತರ ಬೆಳೆದ ಮಹಾಪುರುಷನ ಕುರಿತು ಮಾತನಾಡುವ ಮನವಾಗುತಿದೆಯಿಂದು&#8230;<br />
ಅವನೇ&#8230;! ಅಲ್ಲಲ್ಲ..ಅವರೇ.. ರಾಜರ್ಷಿ ಪದ ತೊರೆದು ಬ್ರಹ್ಮರ್ಷಿ ಪದಕೇರಿದ ಮಹಾಚೇತನ <strong>&#8220;ವಿಶ್ವಾಮಿತ್ರ&#8221;</strong></p>
<p>ಭವ್ಯ ಭವನಕ್ಕೆ ಭದ್ರವಾದ ಅಡಿಪಾಯವೇ ಬೇಕಲ್ಲವೇ..!?<br />
ಸಾಕ್ಷಾತ್ ಸೃಷ್ಟಿಕರ್ತನಿಂದಲೇ ಆರಂಭವಾದ ಕುಶಿಕವಂಶದಲ್ಲಿ ವಿಶ್ವಾಮಿತ್ರನ ಆವಿರ್ಭಾವವಾಯಿತು..<br />
ಕುಶಿಕ ವಂಶಕ್ಕೆ ಆ ಹೆಸರು ಬರಲು ಮೂಲ ಕಾರಣನಾದವನು ಆ ವಂಶದ ಮೂಲ ಪುರುಷನಾದ, ಬ್ರಹ್ಮಮಾನಸ ಪುತ್ರನಾದ ಕುಶ..<strong><br />
&#8216;ಕು&#8217;</strong> ಎಂದರೆ ಭೂಮಿ..ಅಲ್ಲಿ ನೆಲೆಸಿದುದರಿಂದಲೇ ಆತ <strong>ಕುಶ</strong>..</p>
<p>ಭುವಿಯ ಜೀವಿಗಳು ಪಡುವ ಬವಣೆಯನ್ನು ಕಂಡು ಕನಿಕರಿಸಿದವನವನು..<br />
ಇಳೆಗೊಳಿತು ಮಾಡಲೆಂದು ಬ್ರಹ್ಮಲೋಕವನ್ನೇ ಪರಿತ್ಯಜಿಸಿ ಇಳಿದುಬಂದವನವನು..<br />
ಅನುರೂಪಳಾದ ವೈದರ್ಭಿಯೆಂಬ ವನಿತೆಯನ್ನು ವರಿಸಿ ಪಡೆದ ನಾಲ್ಕು ಮಕ್ಕಳಿೆಗೆ ಧರ್ಮಸಾಮ್ರಾಜ್ಯ ಕಟ್ಟಿರೆಂದು ಆದೇಶವಿತ್ತವನವನು..<br />
ಹೀಗೆ ಭುವಿಯ ಮೇಲಣ  ದಿವಿಯ ಕರುಣೆಯ ಫಲವಾಗಿಯೇ ಕುಶಿಕ ವಂಶವು ಆರಂಭವಾಯಿತು..<br />
ತಂದೆಯ ಆಣತಿಯಂತೆ ಮಹೋದಯವೆಂಬ ನಗರಿಯಯನ್ನು ನಿರ್ಮಿಸಿ, ಪಾಲಿಸುತ್ತಿದ್ದ ಕುಶಪುತ್ರನಾದ ಕುಶನಾಭನು ಪುತ್ರಕಾಮೇಷ್ಟಿಯ ಫಲವಾಗಿ ಪಡೆದುಕೊಂಡ ಸುಪುತ್ರನೇ ಗಾಧಿ ..<br />
ಪ್ರತಿಸೃಷ್ಟಿಕರ್ತನ ಸೃಷ್ಟಿಯಾದದ್ದು ಸೃಷ್ಟಿಕರ್ತನ ಐದನೆಯ ತಲೆಮಾರಿನಲ್ಲಿ, ಗಾಧಿಯ ಮಗನಾಗಿ..ವಿಶ್ವಾಮಿತ್ರನೆಂಬ ಅಭಿಧಾನದಲ್ಲಿ..<br />
ಭೃಗು ವಂಶದ ಸೊಸೆಯಾಗಿ , ಜಮದಗ್ನಿಗೆ ಜನ್ಮವಿತ್ತು, ವಿಶ್ವಮಂಗಲಕ್ಕಾಗಿ ನದಿಯಾಗಿ ಹರಿದ ಕೌಶಿಕೀ ವಿಶ್ವಾಮಿತ್ರನ ಸೋದರಿ..<br />
ಗಾಧಿಯ ಕಾಲ ಮುಗಿಯಿತು..ವಿಶ್ವಾಮಿತ್ರನ ಕಾಲ ಆರಂಭವಾಯಿತು..<br />
ಮುತ್ತಾತನಾದ ಕುಶನು ಯಾವ ಆಶಯವನ್ನು ಹೊತ್ತು ಬ್ರಹ್ಮಲೋಕದಿಂದ ಭುವಿಗಿಳಿದು ಧರ್ಮರಾಜ್ಯವನ್ನು ಸಂಸ್ಥಾಪಿಸಿದ್ದನೋ..<br />
ಅದಕ್ಕನುಗುಣವಾಗಿ ಪ್ರಜಾರಂಜಕನಾಗಿ ರಾಜ್ಯಭಾರ ಮಾಡತೊಡಗಿದನಾತ&#8230;!<br />
ಬಾಹುಬಲ-ಬುದ್ದಿಬಲಗಳು ವಿಶ್ವಾಮಿತ್ರನಲ್ಲಿ ನೈಸರ್ಗಿಕವಾಗಿಯೇ ಇದ್ದವು..<br />
ಅಸ್ತ್ರಬಲ-ಶಸ್ತ್ರಬಲಗಳು ಶಿಕ್ಷಣ -ಸಾಧನೆಗಳಿಂದ ಪ್ರಾಪ್ತವಾಗಿದ್ದವು..<br />
ಜನ-ಧನ-ಸೇನಾಬಲಗಳು ತಂದೆಯಿಂದ ಮುಂದುವರಿದು ಬಂದಿದ್ದವು..<br />
ಹೀಗೆ ಸರ್ವಬಲ ಸಂಪನ್ನನಾದ ರಾಜಾ ವಿಶ್ವಾಮಿತ್ರನು ಸೇನೆಯನ್ನು ಕೂಡಿಕೊಂಡು ದಿಗ್ವಿಜಯಾಕಾಂಕ್ಷಿಯಾಗಿ ಭೂಮಂಡಲ ಯಾತ್ರೆ ಹೊರಟನು..<br />
ಬಾನಂಗಳದಲ್ಲಿ ಸೂರ್ಯನುದಯಿಸಿ ಮೇಲೇರುತ್ತಿದ್ದಂತೆಯೇ ತಾರೆಗಳು ಮರೆಯಾಗುವಂತೆ, ಮೇಲೇರಿ ಬರುವ ವಿಶ್ವವಿಜಯಿ ವಿಶ್ವಾಮಿತ್ರನೆದುರು ವಿಶ್ವದ ಭೂಪತಿಗಳೆಲ್ಲರೂ ಮುದುರಿದರು..!</p>
<p>ವಿಜಯದ ಮೇಲೆ ವಿಜಯಗಳನ್ನು ಸಾಧಿಸುತ್ತಾ..<br />
ನಗರ-ರಾಷ್ಟ್ರಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುತ್ತಾ..<br />
ನದೀ-ಸರೋವರಗಳಲ್ಲಿ ಮೀಯುತ್ತಾ..<br />
ಗಿರಿವನಗಳ ಸೊಬಗನ್ನು ಸವಿಯುತ್ತಾ..<br />
ಮುಂದೊತ್ತಿ ಬರುವ ವಿಶ್ವಾಮಿತ್ರನ ಜೈತ್ರಯಾತ್ರೆ,  ಭುವಿಗಿಳಿದ ಬ್ರಹ್ಮಲೋಕದಂತಿದ್ದ ಅದೊಂದು ದಿವ್ಯಸ್ಥಳವನ್ನು ಪ್ರವೇಶಿಸುತ್ತಿರಲು..</p>
<p>ಹಿಮಾಲಯದ ಬಳಿಸಾರುವಾಗ ತಾನಾಗಿ ಉಂಟಾಗುವ ಶೈತ್ಯಾನುಭೂತಿಯಂತೆ ಆತನಿಗುಂಟಾಯಿತೊಂದು ಶಬ್ದಗಳಿಗೆ ನಿಲುಕದ ದಿವ್ಯಾನುಭೂತಿ..!</p>
<p><span style="color: #0000ff;">(ಮುಂದಿನ ಭಾಗಕ್ಕಾಗಿ ಮುಂದಿನ ಭಾನುವಾರ ಬನ್ನಿ..)</span></p>
<p style="text-align: center;"><strong>॥ ಹರೇರಾಮ॥</strong></p>
]]></content:encoded>
			<wfw:commentRss>http://hareraama.in/blog/rajyadinda-ramanavarege/feed/</wfw:commentRss>
		<slash:comments>15</slash:comments>
		</item>
		<item>
		<title>ಈ ಪರಿ ನೋಡುವುದೇ&#8230;ಪರಿವಾರವ..?</title>
		<link>http://hareraama.in/blog/ee-pari-noduvude-parivarava/</link>
		<comments>http://hareraama.in/blog/ee-pari-noduvude-parivarava/#comments</comments>
		<pubDate>Sun, 11 Jul 2010 16:58:42 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[Bharathi]]></category>
		<category><![CDATA[bhava sangama]]></category>
		<category><![CDATA[flood]]></category>
		<category><![CDATA[Hare Raama]]></category>
		<category><![CDATA[oberoy]]></category>
		<category><![CDATA[program]]></category>
		<category><![CDATA[raghaveshwara bharati]]></category>
		<category><![CDATA[ramachandrapura]]></category>
		<category><![CDATA[samsthana]]></category>

		<guid isPermaLink="false">http://hareraama.in/?p=5343</guid>
		<description><![CDATA[ಬೇಕೇ ಈ ಕೆಲಸ ?

ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?....
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..

ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..

ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!]]></description>
			<content:encoded><![CDATA[<p style="text-align: center;"><span style="color: #000000;"><br />
</span></p>
<p><span style="color: #000000;">|| ಹರೇರಾಮ ||</span></p>
<p style="text-align: justify;">
<p style="text-align: justify;"><span style="color: #000000;">ಬೇಕೇ ಈ ಕೆಲಸ ?</span></p>
<p><span style="color: #000000;">ನಿರಂತರ ಪರಿಭ್ರಮಣ..<br />
ದಿನಕ್ಕೊಂದು ಊರು..<br />
ಹೊತ್ತಿಗೊಂದು ಸೂರು..<br />
ಹತ್ತಾರು ಬಗೆಯ ನೀರು..!<br />
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?&#8230;.<br />
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.<br />
ಇಂದು ಆಗಸ ಹರಿದು ಬೀಳುವಂತೆ ಮಳೆ.. ನಾಳೆ ಮೈಯೆಲ್ಲ ಬೆವರ ಹೊಳೆ..</span></p>
<p><span style="color: #000000;">ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..<br />
ಇವರ ಪಾಲಿಗೆ ಊಟವೋ ಅದೃಷ್ಟದಾಟ..!<br />
ಒಮ್ಮೊಮ್ಮೆ ಇಲ್ಲವೇ ಇಲ್ಲ..<br />
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..<br />
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..<br />
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..<br />
ಇಂದು ಸೊಗಸಿಲ್ಲದ ಸಪ್ಪೆ.. ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!</span></p>
<p><span style="color: #000000;">ಇನ್ನು ನಿದ್ರೆಯ ಕಥೆ ಇದಕ್ಕಿಂತ ಭಿನ್ನವೇನಲ್ಲ..<br />
ಪ್ರಯಾಣ ತರುವ ಬಳಲಿಕೆ..<br />
ಕಾಲು ಚಾಚಿ ಕೆಲಹೊತ್ತು ಮಲಗುವಂತಿಲ್ಲ..<br />
ಒಂದೆಡೆ ಕರ್ತವ್ಯದ ಕರೆ..<br />
ಇನ್ನೊಂದೆಡೆ, ಸಂತೆಯಂತಿರುವಲ್ಲಿ ಮಲಗಲು ಎಡೆಯೆಲ್ಲಿ..?<br />
ರಾತ್ರಿ&#8230;<br />
ಒಮ್ಮೊಮ್ಮೆ ಹಾಸಲು ಹಾಸಿಗೆ.. ಹೊದೆಯಲು ಹೊದಿಕೆ&#8230;ವ್ಯವಸ್ಥಿತವಾಗಿ ಸಿಗುವ ಭರವಸೆಯಿಲ್ಲ&#8230;<br />
ನಿದ್ರೆಗೆ ಸಮಯವೂ ಇಲ್ಲ &#8211; ಸ್ಥಳವೂ ಇಲ್ಲ!<br />
ಯಾವುದೋ ಹೊತ್ತಿಗೆ ಇನ್ಯಾವುದೋ ಮೂಲೆಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ..!</span></p>
<p><span style="color: #000000;">ಅನಾರೋಗ್ಯ ಕಾಡಿದರೆ?&#8230;<br />
ನೋಡಿಕೊಳ್ಳಲು ಅಮ್ಮ- ಅಕ್ಕರಿಲ್ಲ..ಔಷಧಿ ತರಲು ಅಪ್ಪ- ಅಣ್ಣರಿಲ್ಲ..<br />
ಹಣೆಯ ಮೇಲೆ ಸಾಂತ್ವನದ ಕೈಯಿಡುವ ತಮ್ಮ-ತಂಗಿಯರಿಲ್ಲ..<br />
ನೋಡುವ ಮನವಿದ್ದರೂ ಒಡೆಯರಿಗೆ ನೋಡಲು ಸಮಯವಿಲ್ಲ..!</span></p>
<p><span style="color: #000000;">ಹೇಳಿ ಕೇಳಿ ಹದಿಹರೆಯದ ಸಮಯ..ಆದರೆ, ಓರಗೆಯ ಪೋರರಿಗೆ ಸಿಗುವ ಸುಖ-ಸಾಧನಗಳು ಇವರಿಗೆ ಕನಸು ಮಾತ್ರ..!<br />
ಗರಿ ಬಿಚ್ಚಿ ಹಾರುವ ವಯಸ್ಸು.. ಸ್ವತಂತ್ರವಲ್ಲದ ಮನಸ್ಸು..ನವನವೀನ ಉಡುಗೆ ತೊಡುಗೆಗಳಿಲ್ಲ..ವಾರಾಂತ್ಯಕ್ಕೊಂದು ರಜೆಯೂ ಇಲ್ಲ..!<br />
ಸಿನೆಮಾ-ಹೋಟೆಲ್ ಇಲ್ಲವೇ ಇಲ್ಲ..!</span></p>
<p><span style="color: #000000;">ಹಬ್ಬ ಬಂದಿತೇ?<br />
ಆತ್ಮೀಯರೊಂದಿಗಿನ ಸಂಭ್ರಮವಿಲ್ಲ..<br />
ಗೆಳೆಯರೊಂದಿಗಿನ ಒಡನಾಟ ಸಿಗದು..<br />
ಮನೆಯವರ ಒಡನಾಟ ಎಲ್ಲೋ ವರ್ಷದಲ್ಲೊಮ್ಮೆ..!<br />
ಈಡೇರದ ಅಪೇಕ್ಷೆಗಳು..ಬಗೆಬಗೆಯ ಉಪೇಕ್ಷೆಗಳು..</span></p>
<p><span style="color: #000000;">ಇದು ಮುನಿಜೀವನವೇ..!<br />
ಹಾಗೆಂದು ಇಂದಿನ ಜಗತ್ತಿನಲ್ಲಿ ಮುನಿಯಂತೆ ಬದುಕುವ ವಾತಾರವಣವಿಲ್ಲ..<br />
ಎತ್ತಲೋ ಸೆಳೆಯುವ ವಯಸ್ಸು ಬೇರೆ ..<br />
ಮುನಿಜೀವನವನ್ನೇ ನಡೆಸಬೇಕು; ಆದರೆ ಮುನಿಜೀವನಕ್ಕೆ ಸಲ್ಲಬೇಕಾದ ಗೌರವ ಮಾತ್ರ ಸಲ್ಲುವುದಿಲ್ಲ..!</span></p>
<p><span style="color: #000000;">ಹೊಟ್ಟೆ ಪಾಡಿಗಾಗಿ ಹೀಗೆ ದುಡಿಯುವವರುಂಟು..<br />
ಆದರೆ ಇವರೊಂದು ವಿಚಿತ್ರ ..!<br />
ಏಕೆಂದರೆ ಇವರಲ್ಲಿ ಅನೇಕರಿಗೆ ಸಂಪತ್ತಿನ ಕೊರತೆಯೇನಿಲ್ಲ..ಕೊರತೆ ಇರುವವರಿಗೂ ಹೊಟ್ಟೆ ಪಾಡಿನ ನಿರ್ವಹಣೆಗೆ ಬೇರೆ ಪ್ರಶಸ್ತ ಆಯ್ಕೆಗಳುಂಟು..</span></p>
<p><span style="color: #000000;">ಹೊಟ್ಟೆ ಪಾಡಿನ ನಂತರವೂ ಹೆಚ್ಚು ಹಣ ಸಂಪಾದನೆಗಾಗಿ ಹೀಗೆ ದುಡಿಯುವವರುಂಟು..ಆದರಿಲ್ಲಿ ವೇತನದ ಮಾತುಕತೆಯೇ ನಡೆಯದು !</span></p>
<p><span style="color: #000000;">ಹಲವರು ಹೆಸರ ಹಪಹಪಿಯಲ್ಲಿ ದುಡಿಯುವುದಿದೆ..<br />
ಇವರೋ ಎಲೆಮರೆಯ ಕಾಯಿಗಳು..</span></p>
<p><span style="color: #000000;">ಜೀವನ ಸಂಗಾತಿಗಳ ಮೆಚ್ಚಿಸಲೋ.. ಪಡೆಯಲೋ.. ರಕ್ಷಿಸಲೋ ಹೀಗೆ ಮಾಡುವರು..<br />
ಇಲ್ಲಿಯೋ ವೈರಾಗ್ಯದ ವಾತಾವರಣ!</span></p>
<p><span style="color: #000000;">ಕೆಲಸ ಬಹು ಸಂಕೀರ್ಣ..ದೊಡ್ಡದೊಡ್ಡವರನ್ನು ನಿಭಾಯಿಸಬೇಕು; ಸಾಮಾನ್ಯರನ್ನೂ ಸುಧಾರಿಸಬೇಕು..!<br />
ಎಲ್ಲವೂ ಸರಿಯಾಗಿ ಒಂದು ತಪ್ಪಾದರೂ ಸಾಕು..ಸರ್ವರ ಕೆಂಗಣ್ಣು ನಿಶ್ಚಿತ..</span></p>
<p><span style="color: #000000;">ಸಾಮರ್ಥ್ಯ- ವಯಸ್ಸುಗಳಿಗೆ ಮೀರಿದ ಕೆಲಸ..<br />
ಸಮಯ ಸೀಮಿತ&#8230;<br />
ಅನುಭವ ಪರಿಣತಿಗಳು ಅಲ್ಪ..<br />
ತರಬೇತಿ ತಾನಾಗಿಯೇ ಆಗಬೇಕು..<br />
ಫಲಿತಾಂಶ ಮಾತ್ರ ನೂರಕ್ಕೆ ನೂರು ಬರಲೇ ಬೇಕು..!</span></p>
<p><strong><span style="color: #000000;">ಇದು ನಮ್ಮ ನಿಮ್ಮ ನಡುವೆ ಸೇತುವೆ ಕಟ್ಟುವ ಪರಿವಾರದ ಬದುಕಿನ ಪರಿ!!!</span></strong></p>
<p><span style="color: #000000;">ಇ</span><span style="color: #000000;">ವೆಲ್ಲವೂ ಮನಸ್ಸಿನಲ್ಲಿ ಸುಳಿದಿದ್ದು ಮೊನ್ನೆ ಮೊನ್ನೆ </span><strong><span style="color: #000000;">ಪರಿವಾರದ ಹಿರಿಯ, ಚಿಪ್ಳಿ ರಮೇಶ &#8216;ಐವತ್ತಾಯಿತು&#8217;</span></strong><span style="color: #0000ff;"><span style="color: #000000;"> ಎಂದು ಆಶೀರ್ವಾದ ಬೇಡಿದಾಗ..<br />
ಆ ಜೀವನ.. ಅದು ರಾಮಾರ್ಪಣ..<br />
ಆತ ಪರಿವಾರವನ್ನು ಪ್ರವೇಶಿಸಿದ್ದು ಹದಿನಾಲ್ಕರ ಹರಯದಲ್ಲಿ..<br />
ಅಂದಿನಿಂದ ಇಂದಿಗೆ ಮೂವತ್ತಾರು ಸುದೀರ್ಘ ಸಂವತ್ಸರಗಳೇ ಸಂದಿವೆ..<br />
ಬದುಕಿನ ಬಹುಮುಖ್ಯ ಭಾಗವೇ ಮಠದಲ್ಲಿ ಕಳೆದಿದೆ..<br />
ಮಠದಲ್ಲಿ ಇಂದು ಎಲ್ಲವೂ ಬದಲಾವಣೆಯಾಗಿದೆ, ಆದರೆ ಬದಲಾಗದಿರುವುದು ರಮೇಶ ಮಾತ್ರ..<br />
ಅಂದಿನ ನಾಯಕರು ಇಂದಿಲ್ಲ, ಅಂದಿನ ಸೇವಕರೂ ಇಂದಿಲ್ಲ..</span><a href="http://hareraama.in/wp-content/uploads/2010/07/Parivaara-11.jpg"><img class="alignright size-medium wp-image-5435" title="ಶ್ರೀಪರಿವಾರ" src="http://hareraama.in/wp-content/uploads/2010/07/Parivaara-11-300x199.jpg" alt="" width="300" height="199" /></a><span style="color: #000000;"><br />
</span><span style="color: #000000;"> </span></span></p>
<p><span style="color: #000000;">ಅಷ್ಟೇ ಏಕೆ, ಪೀಠ ಪರಂಪರೆಯಲ್ಲಿಯೇ ಮೂವತ್ತೈದು ತಲೆಮಾರು ಕಳೆದು ಮೂವತ್ತಾರನೆಯ ತಲೆಮಾರು ನಡೆಯುತ್ತಿದೆ..<br />
ಶಕ ಪರಿವರ್ತನೆಯೆಂಬುದು ಸಣ್ಣ ಪ್ರಳಯವಿದ್ದಂತೆ, ಅದನ್ನು ದಾಟಿ ಮುಂದುವರಿಯುವುದು ಸಾಮಾನ್ಯ ಸಂಗತಿಯಲ್ಲ..<br />
ಆದರೆ ಅಂದು ಯಾವ ಮಹತ್ವ ರಮೇಶನಿಗಿದ್ದಿತೋ, ಯಾವ ವಿಶ್ವಾಸ ಪೀಠಕ್ಕೆ ಆತನಲ್ಲಿದ್ದಿತೋ ಅದು ಇಂದಿಗೂ ಹಾಗೆಯೇ ಇದೆ,</span><span style="color: #000000;">ಇನ್ನಷ್ಟು ದೃಢವಾಗಿದೆ..</span><span style="color: #000000;"> </span></p>
<p><span style="color: #000000;">ರಮೇಶನೆಂದರೆ ನಮಗೆ ನೆನಪಾಗುವುದು ಆ ದಿನ.. ಆ ಸಮಯ&#8230;ಆ ಅಮೃತಘಳಿಗೆ&#8230;<br />
ಭಾವ ಸಂ||ದ ಚೈತ್ರ ಶುದ್ಧ ಚತುರ್ಥಿ, ೧೯೯೪ರ ಏಪ್ರಿಲ್ ೧೫..<br />
ಬದುಕೇ ಬದಲಾದ ದಿನವದು..ವ್ಯಷ್ಟಿ ಬದುಕಿನಿಂದ ಸಮಷ್ಟಿ  ಬದುಕಿಗೆ..<br />
ಭೋಗದ  ಬದುಕಿನಿಂದ ತ್ಯಾಗದ ಬದುಕಿಗೆ..<br />
ಸುಖದ ಬದುಕಿನಿಂದ ಸೇವೆಯ ಬದುಕಿಗೆ..<br />
ಪ್ರಥಮ ಆಶ್ರಮದಿಂದ ತುರೀಯ ಆಶ್ರಮಕ್ಕೆ  ನಾವು ಕಾಲಿರಿಸಿದ</span></p>
<div id="attachment_5434" class="wp-caption alignright" style="width: 215px"><span style="color: #000000;"><img class="size-medium wp-image-5434 " title="ದಂಡ ಕಮಂಡಲುಗಳ ನೀಡಿದವ" src="http://hareraama.in/wp-content/uploads/2010/07/87-11-205x300.jpg" alt="" width="205" height="300" /></span><p class="wp-caption-text">ದಂಡ ಕಮಂಡಲುಗಳ ನೀಡಿದವ</p></div>
<p><span style="color: #000000;">ಮಂಗಲ ಮಹಾ ಮುಹೂರ್ತವದು..</span></p>
<p><span style="color: #000000;"> ಹಳೆಯದೆಲ್ಲವು ಕಳೆಯಬೇಕು..<br />
ಹುಟ್ಟು ಹೆಸರು, ಹಿಂದೆ ಸಂಪಾದಿಸಿದ ಹಣ, ಸಿಹಿ ಕಹಿ ಸಂಬಂಧಗಳು, ಹೆಚ್ಚೇಕೆ ಉಟ್ಟಬಟ್ಟೆಯನ್ನೂ ಪರಿತ್ಯಜಿಸಬೇಕು..<br />
ಧರಿಸಿದ ಯಜ್ಞಸೂತ್ರವನ್ನೂ, ಶಿಖೆಯನ್ನೂ ಕಿತ್ತೆಸೆಯಬೇಕು..<br />
ಪಾತ್ರೆಯನ್ನೊಮ್ಮೆ ಸಂಪೂರ್ಣ ಬರಿದು ಮಾಡಿ ತೊಳೆದಿರಿಸಿದ ಮೇಲಲ್ಲವೇ ಅದರಲ್ಲಿ ಹೊಸತನ್ನು ತುಂಬುವುದು ..<br />
ಹಾಗೆಯೇ ಒಳಗಿನ ಹಳತೆಲ್ಲವೂ ಕಳೆದು ಶೂನ್ಯವಾದ ಮೇಲೆ, ಗುರು ಅಲ್ಲಿ ನಿತ್ಯ ನೂತನ ಪೂರ್ಣವನ್ನು ತುಂಬತೊಡಗುವುದು..<br />
ಹೊಸ ಬದುಕಿನ ನಿತ್ಯ ಸತ್ಯ ಸಂಗತಿಗಳಾದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳು ಗುರುವಿನಿಂದ ಪ್ರಾಪ್ತವಾಗಬೇಕು..</span></p>
<p><span style="color: #000000;"> ಸಲಿಲ ಸನಿಹದಲ್ಲಿ ಸಂನ್ಯಾಸ ವಿಧಿಗಳು&#8230;<br />
ಆ ಸಮಯದಲ್ಲಿ ಗುರುಗಳಿರುವುದು ಮಠದಲ್ಲಿ.. ಉಪದೇಶ ನಡೆಯುವುದು ಅಲ್ಲಿಯೇ&#8230;<br />
ಗುರುವಿನ ಪ್ರತಿನಿಧಿಯೊಬ್ಬ ಗುರುಕರಗಳಿಂದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳನ್ನು ತೆಗೆದುಕೊಂಡು ಸಂನ್ಯಾಸ ಸ್ಥಳಕ್ಕೆ ಆಗಮಿಸಿ ಗುರುಗಳ ಪರವಾಗಿ ಅವುಗಳನ್ನು  ನೂತನ ಪೀಠಾಧಿಪತಿಗಳಿಗೆ ನೀಡಬೇಕು, ಇದು ಸಂಪ್ರದಾಯ..<br />
ಇಲ್ಲೊಂದು ತಾದಾತ್ಮ್ಯವಿದೆ..<br />
ಚಿಂತನೆಯೊಂದು ಕಾರ್ಯರೂಪಕ್ಕೆ ಬರುವಾಗ ಮೆದುಳಿಗೂ ಮತ್ತು ಕಾರ್ಯವೆಸಗುವ ಕರಗಳಿಗೂ ಒಂದು ಬಗೆಯ ತಾದಾತ್ಮ್ಯವಿರುವುದಲ್ಲವೇ..?<br />
ಹಾಗೆಯೇ ಗುರುವಿನ ಮನದಲ್ಲಿ ಮನವನ್ನು ಬೆರೆಸಿ ಗುರುವಿನ ಕರಕಮಲವೇ ತಾನಾಗಿ ನಡೆಸಬೇಕಾದ ಮಹತ್ಕಾರ್ಯವದು..<br />
ತಲೆಮಾರಿಗೊಂದು ಬಾರಿ ಒಬ್ಬರಿಗೆ ಮಾತ್ರವೇ ಸಿಗುವ ಈ ಯೋಗ ಯಾರದಾಗಬಹುದೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗಲೇ&#8230;&#8230;&#8230;ಅದು ರಮೇಶನನ್ನರಸಿ ಬಂತು..!</span></p>
<p><span style="color: #000000;">&#8220;</span><strong><span style="color: #000000;">ಯುಗ ಪರಿವರ್ತನೆಯ ಈ ಮಹತ್ಕಾರ್ಯವನ್ನು ನೀನೇ ಮಾಡಬೇಕು</span></strong><span style="color: #000000;">&#8221; ಎಂದು ರಮೇಶನಿಗೆ &#8216;ದೊಡ್ಡ ಗುರುಗಳ&#8217; ಅಪ್ಪಣೆಯಾಗಿತ್ತು..<br />
ಪರಿವಾರಕ್ಕೆ ಸಂದ ಪರಮೋಚ್ಚ ಗೌರವವಿದು!<br />
ಆದರೆ ಇತ್ತ ಸಂನ್ಯಾಸದ ಕ್ಷಣಗಣನೆಗಳು ಆರಂಭವಾಗುತ್ತಿದ್ದಂತೆಯೇ ಅತ್ತ ರುಗ್ಣಶಯ್ಯೆಯಲ್ಲಿದ್ದ ರಮೇಶನ ತಂದೆಯ ಮರಣದ ಕ್ಷಣಗಣನೆಯೂ ಆರಂಭವಾಗಿತ್ತು.<br />
ಆಶೌಚ ಬಂದರೆ ಅವಕಾಶವಿರದು&#8230;<br />
&#8220;ಹೇ ಭಗವಂತ&#8230;! ಕೃತಕೃತ್ಯತೆಯ ಆ ಅಮೃತ ಕ್ಷಣಗಳು ಕೈ ಜಾರದಿರಲಿ&#8221; ಎಂದು ನೆರೆನಂಬಿದ ರಾಮನಲ್ಲಿ ಮೊರೆಯಿಟ್ಟನಾತ..<br />
ಆ ದಿನ ಬಂದೇ ಬಂದಿತು..<br />
ಮೃತ್ಯುವಿನ ಮುಹೂರ್ತವನ್ನು ಬದಲಿಸಲು ಸಾಧ್ಯವೇ?<br />
ಕತ್ತಲೆ-ಬೆಳಕುಗಳು ರಮೇಶನ ಬಾಳಿನಲ್ಲಿ ಆ ದಿನ ಕೂಡಿ ಆಡಿದವು..<br />
ಅದೇನು ರಾಮನ ದಯೆಯೋ, ಸೇವೆಯ ಫಲವೋ, ತಂದೆಯ ಮೃತ್ಯುವಾರ್ತೆ ತಲುಪುವ ಮೊದಲೇ ಅಮೃತತ್ವದ ಸಂನ್ಯಾಸ ವಿಧಿಗಳು ಪೂರೈಸಿದ್ದವು..<br />
ಗುರುಪೀಠದ ಎರಡು ತಲೆಮಾರುಗಳನ್ನು ಬೆಸೆಯುವ ಬೆಸುಗೆಯಾಗಿ ರಮೇಶನ ಜೀವನ ಸಾರ್ಥಕಗೊಂಡಿತ್ತು..<br />
ವಿಪರ್ಯಾಸವೆಂದರೆ ಸಂನ್ಯಾಸ ದೀಕ್ಷೆಯಲ್ಲಿ ಅತ್ಯಂತ ಮುಖ್ಯಪಾತ್ರ ವಹಿಸಿದ ರಮೇಶನಿಗೆ, ಅದರ ವಾರ್ಷಿಕೋತ್ಸವದಲ್ಲೆಂದೂ ಭಾಗವಹಿಸಲು ಸಾಧ್ಯವಿಲ್ಲ, ಕಾರಣ ವಾರ್ಷಿಕವಾಗಿ ತಂದೆ ಬರುವ ದಿನವದು&#8230;</span></p>
<p><strong><span style="color: #000000;">ಅಹೋ..!<br />
ಧನ್ಯಸೇವಕ ರಮೇಶ..!</span></strong></p>
<p><span style="color: #000000;">ರಮೇಶನದು ಉದಾಹರಣೆ ಮಾತ್ರ. ಪರಿವಾರದಲ್ಲಿ ಸೇವೆ ಸಲ್ಲಿಸಿದ ಒಬ್ಬೊಬ್ಬರ ಬಗ್ಗೆ ಹೇಳಹೊರಟರೆ ಅದು ತುದಿಮೊದಲಿಲ್ಲದ ಸೇವಾಕಾವ್ಯವೇ ಆದೀತು..</span></p>
<p><span style="color: #000000;">ನಮ್ಮ ಪರಂಪರೆಯ ಸಂಪ್ರದಾಯವೆಂದರೆ, ಗುರುಸ್ಥಾನವನ್ನಲಂಕರಿಸಿರುವವರು ತಾವಾಗಿ ಏನನ್ನೂ ಮಾಡುವಂತಿಲ್ಲ..<br />
ಲೋಕದ ಕಾರ್ಯವನ್ನು ಗುರು ಮಾಡಿದರೆ ಗುರು ಕಾರ್ಯವೆಲ್ಲವೂ ಇವರದೇ..<br />
ಅಕ್ಷರಶಃ ಗುರುವಿನ ಅಂಗ-ಪ್ರತ್ಯಂಗಗಳಂತೆ ಪರಿವಾರದವರು..</span></p>
<p><span style="color: #000000;">ಸ್ನಾನ, ಭೋಜನ, ಶಯನಗಳಲ್ಲಿ ಅವರು ತಾಯಿ ಪಾತ್ರ ವಹಿಸಿದರೆ ನಾವು ವಹಿಸುವುದು ಮಗುವಿನ ಪಾತ್ರ..<br />
ಸಲಹೆ ನೀಡುವಾಗ ಇವರು ಮಂತ್ರಿಗಳು..<br />
ಚರಣಸೇವೆಯಲ್ಲಿ ದಾಸರು..<br />
ಬದುಕಿಗೆ ಮಾರ್ಗದರ್ಶನ ಕೇಳುವಾಗ ಮಕ್ಕಳು..<br />
ಮಂತ್ರಾಕ್ಷತೆಯ ಪಡೆಯುವಾಗ ಶಿಷ್ಯರು..<br />
ಗುರು-ಶಿಷ್ಯರನ್ನು ಬೆಸೆಯುವಲ್ಲಿ ಬೆಸುಗೆಗಳು&#8230;<br />
ಸಂಕಟಗಳು ಬರುವಾಗ ಸೇನಾನಿಗಳು..</span></p>
<p><span style="color: #000000;">ಒಮ್ಮೊಮ್ಮೆ ಪರಿವಾರದಲ್ಲಿ ನಮಗೆ ಲಕ್ಷ್ಮಣ ಕಾಣಿಸುತ್ತಾನೆ..<br />
ಅಯೋಧ್ಯೆಯಲ್ಲಿ ಸೀತಾರಾಮರಿಗೆ ಸಾವಿರ ಸೇವಕರು ಮಾಡುತ್ತಿದ್ದ ಸೇವೆಯನ್ನು ಅಡವಿಯಲ್ಲಿ ಆತನೊಬ್ಬನೇ ಗೈದನಲ್ಲವೇ!</span></p>
<p><span style="color: #000000;">ಒಮ್ಮೊಮ್ಮೆ ಪರಿವಾರದವರಲ್ಲಿ ನಮಗೆ ಭರತ ತೋರುತ್ತಾನೆ..<br />
ಮಠದಲ್ಲಿರಬಹುದಾದ ಸಕಲ ಸಂಪತ್ತುಗಳನ್ನೂ ಸಂರಕ್ಷಿಸುವ, ಸಧ್ವಿನಿಯೋಗ ಮಾಡುವ ಭಾರ ಅವರದ್ದೇ..</span></p>
<p><span style="color: #000000;">ಆದರೆ ಅದ್ಯಾವುದೂ ಅವರದಲ್ಲ&#8230;</span></p>
<p><strong><span style="color: #000000;">ಒಡರಿಸುವನೆಲ್ಲವನ್ ಅದಾವುದುಂ ತನದಲ್ಲ,<br />
ಬಿಡನೊಂದನುಂ ರಾಜ್ಯ ತನದಲ್ಲವೆಂದು|<br />
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ,<br />
ಕಡುಯೋಗಿ ಭರತನಲ &#8211; ಮಂಕುತಿಮ್ಮ||</span></strong></p>
<p><span style="color: #993366;"><span style="color: #000000;">ಶಿಲೆಯನ್ನು ಶಿಲ್ಪವನ್ನಾಗಿಸುವಾಗ ಶಿಲ್ಪಿ ತನ್ನ ಚಾಣದ ಅದೆಷ್ಟು ಪೆಟ್ಟುಗಳನ್ನು ನೀಡುವುದಿಲ್ಲ?<br />
ಹಾಗೆಂದು ಶಿಲ್ಪಿಗೆ ಶಿಲೆಯ ಮೇಲೆ ಮಮತೆಯಿಲ್ಲವೆಂದೇನಲ್ಲ..<br />
ಹೆಜ್ಜೆ-ಹೆಜ್ಜೆಗೆ ಪರಿವಾರದವರನ್ನು ದಂಡಿಸುವಾಗ ನಾವೆದುರಿಸುವ ಸಂದಿಗ್ಧವಿ</span><span style="color: #000000;">ದು..</span></span></p>
<p><span style="color: #000000;">ಒಂದೆಡೆ ಸಮಾಜವೆಂಬ ಬೆಂಕಿ&#8230; ಇನ್ನೊಂದೆಡೆ ಗುರುವೆಂಬ ಅಗ್ನಿ-<br />
ಎರಡು ಮಹಾಶಕ್ತಿಗಳ ನಡುವೆ ಪರಿವಾರದವರ ಪರಿ &#8216;ಅತ್ತ ಪುಲಿ ಇತ್ತ ದರಿ&#8217;..</span></p>
<p><span style="color: #000000;">ಇದು ಇದೇನು ಮೊದಲಲ್ಲ..<br />
ಹಿಂದಿನವರ ಅನುಭವವನ್ನು ಈ ಶ್ಲೋಕದಲ್ಲಿ ಗಮನಿಸಿ..</span></p>
<p><span style="color: #993300;"><strong><span style="color: #000000;">ಮೌನಾನ್ಮೂಕಃ ಪ್ರವಚನಪಟುಃ ಚಾಟುಲೋ ಜಲ್ಪಕೋ ವಾ<br />
ದ್ಷ್ಧಷ್ಟಃ ಪಾರ್ಶ್ವೇ ಭವತಿ ಚ ವಸನ್ ದೂರತೋಪಿ ಪ್ರಗಲ್ಬಃ |<br />
ಶಾಂತ್ಯಾ ಭೀರುಃ ಯದಿ ನ ಸಹತೇ ಪ್ರಾಯಶೋ ನಾಭಿಜಾತಃ<br />
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ ||</span></strong></span></p>
<p><span style="color: #000000;">ಮಿತಿಯಲ್ಲಿ ಮಾತನಾಡಿದರೆ  &#8220;</span><strong><span style="color: #000000;">ಮೂಕ</span></strong><span style="color: #000000;">&#8221;<br />
ಧಾರಾಳ ಮಾತನಾಡಿದರೆ    &#8220;</span><strong><span style="color: #000000;">&#8216;ಪ್ರವಚನ ಪಟು ಅಥವಾ ಹಲುಬುವವನು</span></strong><span style="color: #000000;">&#8221;<br />
ಪಕ್ಕದಲ್ಲೇ ನಿಂತರೆ               &#8220;</span><strong><span style="color: #000000;">ಎಲ್ಲವೂ ಇವನದ್ದೇ ಆಯಿತು</span></strong><span style="color: #000000;">&#8221;<br />
ಎಲ್ಲೋ ಮರೆಯಲ್ಲಿದ್ದರೆ         &#8220;</span><strong><span style="color: #000000;">ಊಟಕ್ಕೆ ಮಾತ್ರ ಬರುವವನು</span></strong><span style="color: #000000;">&#8221;<br />
ವಿನೀತನಾಗಿದ್ದರೆ                 &#8220;</span><strong><span style="color: #000000;">ಪುಕ್ಕಲ</span></strong><span style="color: #000000;">&#8221;<br />
ಗಟ್ಟಿ ನಿಂತರೆ                       &#8220;</span><strong><span style="color: #000000;">ಅಧಿಕ ಪ್ರಸಂಗಿ</span></strong><span style="color: #000000;">&#8220;</span><strong><span style="color: #000000;"><br />
</span><span style="color: #000000;"> </span></strong><span style="color: #000000;">ಸೇವಾಧರ್ಮವದೆಷ್ಟು ಗಹನವೆಂದರೆ ಯೋಗಿಗಳಿಗೂ ದುಸ್ಸಾಧ್ಯವಾದುದು (</span><span style="text-decoration: underline;"><strong><span style="color: #000000;">ನಮಗೂ ಹೀಗೆಯೇ ಅನಿಸಿದೆ.</span></strong></span><span style="color: #000000;">)</span></p>
<p><span style="color: #000000;">ಗುರುವೆಂದರೆ ರಾಮಕಿಂಕರ..<br />
ಪರಿವಾರದವರು ಗುರುಕಿಂಕರರು..<br />
ಅಂತವರ ಕುರಿತು ಸಮಾಜದ ಭಾವವೇನಿರಬೇಕೆಂಬುದನ್ನು ರಾಜಾ ಕುಲಶೇಖರನ ಮಾತುಗಳಲ್ಲಿ ಗಮನಿಸಿ..</span></p>
<p><strong><span style="color: #000000;">ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ-  ಭೃತ್ಯ-  ಭೃತ್ಯಸ್ಯ-  ಭೃತ್ಯ ಇತಿ ಮಾಂ ಸ್ಮರ ಲೋಕನಾಥ ||</span></strong></p>
<p><span style="color: #000000;">&#8221; ಹೇ ಭಗವಂತ.. ನಿನ್ನ ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕ ನಾನು ಎಂದೊಮ್ಮೆ ನೆನೆಸಿಕೊಂಡರೂ ಬದುಕು ಸಫಲ..&#8221;</span></p>
<p><span style="color: #000000;">ಹಿಂದೆಲ್ಲ ಹಿರಿಯರು ಮಠದಲ್ಲಿ ಓಡಿಯಾಡುವ ನಾಯಿಗಳನ್ನು ತೋರಿಸಿ &#8220;ಮಠದ ಹಳೆಯ ಸೇವಕರು&#8221; ಎಂದು ಪರಿಚಯಿಸುತ್ತಿದ್ದುದುಂಟು.<br />
&#8220;ಹಾಗೆಂದರೆ&#8221; ಎಂಬ ಪ್ರಶ್ನೆಗೆ &#8221; ಹಿಂದಿನ ಜನ್ಮದಲ್ಲಿ ಮಠದಲ್ಲಿ ಪರಿವಾರದವರೋ ಅಧಿಕಾರಿಗಳೋ ಆಗಿದ್ದು ಮಾಡಿದ ತಪ್ಪುಗಳ-<br />
ಭಾರವನ್ನಿಳಿಸಲು ಈ ಜನ್ಮದಲ್ಲಿ ನಾಯಿಗಳಾಗಿ ಇಲ್ಲಿಗೆ ಬಂದಿರುವವರು&#8221; ಎಂದು ಉತ್ತರಿಸಿದುದುಂಟು..!</span></p>
<p><span style="color: #000000;">ಪರಿವಾರದಲ್ಲಿ ತಪ್ಪುಗಳೇ ನಡೆಯುವುದಿಲ್ಲವೆಂದಲ್ಲ,<br />
ಅವರೂ ಮನುಷ್ಯರೇ ಅಲ್ಲವೆ?<br />
ತಪ್ಪುಗಳೇ ಇಲ್ಲದುದೆಲ್ಲಿ?<br />
ಸಂತರು ತಪ್ಪು ಮಾಡುವುದಿಲ್ಲವೇ?<br />
ರಾಜರು ತಪ್ಪು ಮಾಡುವುದಿಲ್ಲವೇ?<br />
ಸಾಮಾಜಿಕರು ತಪ್ಪು ಮಾಡುವುದಿಲ್ಲವೇ?<br />
ನಮ್ಮ ಶರೀರದಲ್ಲಿಯೇ ಎಲ್ಲೋ ಒಂದೆಡೆ ರೋಗ  ಉಂಟಾದರೆ ಹೀಗಳೆಯುವುದುಂಟೇ&#8230; ಬಿಟ್ಟುಬಿಡುವುದಂಟೇ&#8230;?</span></p>
<p><span style="color: #000000;">ಬಾಹ್ಯ ಜಗತ್ತಿನ ಸಕಲ ಸುಖಸಾಧನಗಳ ಸೆಳೆತಗಳನ್ನು ಮೀರಿ, ಭೋಗಪರರಿಗೆ ಹೇಗೆ ನೋಡಿದರೂ ಶುಷ್ಕವೆನಿಸುವ ಮಠದ ವಾತಾವರಣದಲ್ಲಿ-<br />
ಸೇವೆಗೈಯ್ಯಲು ಧಾವಿಸಿ ಬರುವ ಈ ಜೀವಿಗಳನ್ನು ಅದಾವುದು ಸೆಳೆಯಿತು..!?</span></p>
<p><span style="color: #000000;">ನಾಲ್ಕು ದಿನಕ್ಕೆಂದು ಬಂದು ಜೀವನವಿಡೀ ನಿಂತವರುಂಟು..<br />
ಭೇಟಿ ಮಾಡಲು ಬಂದು ಭೇಟಿ ಮಾಡಿಸಲು ನಿಂದವರುಂಟು..<br />
ಅದ್ಯಾವ ಬಗೆಯ ಸೆಳೆತವೋ!!</span></p>
<p><strong><span style="color: #000000;"> </span></strong></p>
<p><strong><span style="color: #000000;">ಯಾವ ವೃಂದಾವನವು ಸೆಳೆಯಿತೊ ನಿನ್ನ ಮಣ್ಣಿನ ಕಣ್ಣನು..<br />
ಯಾವ ವೃಂದಾವನವು ಚಾಚಿತೊ ತನ್ನ ಮಿಂಚಿನ ಕೈಯ್ಯನು</span></strong><span style="color: #000000;">..</span><strong><span style="color: #000000;"><br />
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ..</span></strong></p>
<p><span style="color: #000000;">ಪರಿವಾರವೆ೦ದರೆ ಗುರುದ್ವಾರ..<br />
ಮುಚ್ಚಿದ್ದು ಮರೆಯದು&#8230;ತೆರದದ್ದು ನೆನಪೇ ಇರದು&#8230;</span></p>
<p><span style="color: #000000;">ಪರಿವಾರವೆ೦ದರೆ ಗುರುವಿನ ದಾರಿ..<br />
ಗುರಿ ತಲುಪಿದ ಮೇಲೆ ದಾರಿಯ ಪರಿವೆ ಇಲ್ಲ..</span></p>
<p><span style="color: #800080;"><span style="color: #000000;">ಪರಿವಾರವೆಂದರೆ ಗುರುವಿನ ಮೆಟ್ಟಿಲು..<br />
ಮೆಟ್ಟಿಲು ಇರುವುದು ಮೂರ್ತಿಯ ಮುಟ್ಟಲು..<br />
ಆದರೆ ಹಲವರ ಭಾವನೆ&#8230; ಮೆಟ್ಟಿಲು ಇರುವುದೇ </span><strong><span style="color: #000000;">ಮೆಟ್ಟಲು..!</span></strong></span></p>
<p><strong><span style="color: #000000;">ಶಿವಾಜಿ ಹುಟ್ಟಿ ಬರಲೇ ಬೇಕು, ಆದರೆ ನಮ್ಮ ಮನೆಯಲ್ಲಲ್ಲವೆಂದರೆ ಹೇಗೆ?<br />
ಆದಿಶಂಕರರು ಅವತಾರ ತಾಳಲೇ ಬೇಕು, ಆದರೆ ಪಕ್ಕದ ಮನೆಯಲ್ಲಿ ಎಂದರೆ ಸರಿಯೇ?<br />
ನಮಗೆ ಮಠ ಬೇಕು, ಗುರು ಬೇಕು ಎಂದ ಮೇಲೆ ಪರಿವಾರವೂ ಬೇಕೇ ಬೇಕು..<br />
ಒಮ್ಮೆ ಯೋಚಿಸಿ, ನಿಂತಲ್ಲಿ ಕುಳಿತಲ್ಲಿ ಪರಿವಾರವನ್ನು ವಿಮರ್ಶಿಸುವ ನಾವು ಆ ಕಾರ್ಯಕ್ಕೆ ನಮ್ಮ ಮಕ್ಕಳನ್ನು ಕಳುಹಿಸಿಕೊಡಲು ಸಿದ್ಧರಿದ್ದೇವೆಯೇ?</span></strong></p>
<p><strong><span style="color: #000000;">ರಾಮಬಾಣ:<br />
ನಿ</span></strong><span style="color: #000000;">ಮ್ಮ ಮುಂದೆ ಎರಡು ಆಯ್ಕೆಗಳು.<br />
ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳುಹಿಸಿಕೊಡಿ.<br />
ಅದು ಸಾಧ್ಯವಾಗದಿದ್ದರೆ..<br />
ಪರಿವಾರದವರನ್ನು ನಿಮ್ಮ ಮಕ್ಕಳಂತೆ ನೋಡಿ..!</span></p>
<p style="text-align: center;"><span style="color: #0000ff;"><span style="color: #000000;">|| ಹರೇರಾಮ ||</span></span></p>
]]></content:encoded>
			<wfw:commentRss>http://hareraama.in/blog/ee-pari-noduvude-parivarava/feed/</wfw:commentRss>
		<slash:comments>113</slash:comments>
		</item>
		<item>
		<title>ಮಡಿಲ ಮಮತೆಗೆ ಮುಡಿ ಸಮರ್ಪಿತ&#8230;</title>
		<link>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/</link>
		<comments>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/#comments</comments>
		<pubDate>Sun, 04 Jul 2010 16:19:02 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=5036</guid>
		<description><![CDATA[ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ...?
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?
ಹಂಚಿಕೊಂಡಾಗ ದು:ಖ ಅರ್ಧವಾಗುವದು.. ಸುಖ ಇಮ್ಮಡಿಸುವದು..
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?
ಲಕ್ಷ್ಮೀಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು...!!
ಲಕ್ಷ್ಮಿಯಿರುವ ಭೂಮಿಯೇ ಆಪ್ಯಾಯಮಾನವೆನಿಸಿತು…!
]]></description>
			<content:encoded><![CDATA[<p style="text-align: center;"><strong>|| ಹರೇರಾಮ ||</strong><strong> </strong></p>
<div>
<h4 style="text-align: center;"><span style="color: #993366;"> </span></h4>
</div>
<div>
<h4 style="text-align: left;"><span style="color: #993366;"> </span></h4>
</div>
<h4 style="text-align: left;"><span style="color: #993366;"></p>
<p style="text-align: center;"><span style="text-decoration: underline;"><span style="color: #0000ff;">ಕ್ಷೀರ ಸಾಗರ ತರಂಗ ಶೀಕರಾಸಾರ ತಾರಕಿತ ಚಾರುಮೂರ್ತಯೇ |<br />
ಭೋಗಿ ಭೋಗ ಶಯನೀಯ ಶಾಯಿನೇ ಮಾಧವಾಯ ಮಧುವಿದ್ವಿಷೇ ನಮಃ ||</span></span></p>
<p style="text-align: center;">
<div id="attachment_5051" class="wp-caption aligncenter" style="width: 310px"><a href="http://hareraama.in/wp-content/uploads/2010/07/Narayana-sg2.jpg"><img class="size-thumbnail wp-image-5051   " title="ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…! " src="http://hareraama.in/wp-content/uploads/2010/07/Narayana-sg2-150x150.jpg" alt="" width="150" height="150" /></a><p class="wp-caption-text">ಅಮೃತಸಾಗರದಲ್ಲಿ ಅದ್ವೈತದಂಪತಿಗಳು..!</p></div>
<p style="text-align: left;">ಹಾಲು&#8230;..ಹಾಲು&#8230;&#8230;ಹಾಲು&#8230;!<br />
ಎಲ್ಲೆಲ್ಲೂ ಹಾಲು..!<br />
ಎಷ್ಟು ದೂರ ನೋಡಿದರೂ ಹಾಲು..!<br />
ಎಷ್ಟು ಆಳಕ್ಕಿಳಿದರೂ ಹಾಲು…!<br />
ಹಾಲೇ ಹಾಲು&#8230;!</p>
<p style="text-align: left;">ಕಣ್ದಣಿಯುವಷ್ಟು ವಿಶಾಲ..<br />
ಕಣ್ತಣಿಯುವಂತೆ ಶೀತಲ&#8230;!</p>
<p style="text-align: left;">ಅದುವೇ ಕ್ಷೀರಸಾಗರ..!</p>
<p style="text-align: left;">ಅಗಾಧ ಅನಂತ ಅಮೃತ ಸಾಗರದ ಮಧ್ಯದಲ್ಲಿ ..ಆಶ್ಚರ್ಯ&#8230;ಆಶ್ಚರ್ಯ&#8230;!<br />
ಆದಿಶೇಷ&#8230;ವಿಷಸರ್ಪಗಳ ರಾಜ&#8230;</p>
<p style="text-align: left;">ಅದೋ ಅಲ್ಲಿ&#8230;!<br />
ಅಮೃತಸಾಗರದ ಶಯನಮಂದಿರದಲ್ಲಿ&#8230;<br />
ವಿಷವಿಭೂಷಿತನಾದ ಆದಿಶೇಷನ ಪರ್ಯಂಕದಲ್ಲಿ ..<br />
<strong>ಅಮೃತ- ವಿಷ</strong>ಗಳನ್ನು ಮೀರಿ ನಿಂತ ಮಹಾಪ್ರಭು…<strong>ಮಧುಮರ್ದನ..ಮಾಧವ…ಮಾರಮಣ..!</strong></p>
<p style="text-align: left;">ಕರುಣಾಸಾಗರನನ್ನು ಸೇರುವ ಅಮೃತಸಾಗರದ ತವಕವೇ ತರಂಗಗಳಾಗಿ -<br />
ಮತ್ತೆ ಮತ್ತೆ ಮೇಲೆದ್ದು ಮುಂದೊತ್ತಿ ಶೇಷಶರೀರವನ್ನು ಮುತ್ತಿಟ್ಟರೆ..<br />
ಅಲ್ಲಿಂದ ಚಿಮ್ಮಿದ ದುಗ್ಧ ಬಿಂದುಗಳು ತುಂತುರು ಮಳೆಯಾಗಿ ಮಾರಮಣನ ಮಂಗಳ ಶರೀರವನ್ನಲಂಕರಿಸುತ್ತಿದ್ದವು&#8230;!<br />
ನೀಲಶರೀರದಲ್ಲಿ ಪಡಿಮೂಡಿದ ಸ್ವರ್ಣವರ್ಣದ ಹಾಲಹನಿಗಳು<br />
ನೀಲಾಕಾಶದಲ್ಲಿ ಮೂಡಿ ಮಿನುಗುವ ಕೋಟಿತಾರೆಗಳಂತೆ ಅತಿಶಯವಾಗಿ ಶೋಭಿಸುತ್ತಿದ್ದವು&#8230;</p>
<p style="text-align: left;">ಸುಧಾಸಿಂಧುವಿನಲ್ಲಿ ಸಂಭವಿಸಿದವಳು&#8230;<br />
ದಯಾಸಿಂಧುವಿನ ಕೈ ಹಿಡಿದವಳು..<br />
ನಂಬಿದವರಿಗೆ,<br />
ಭವಸಿಂಧುವನ್ನು ದಾಟಿಸುವವಳು..<br />
ಸಂಪತ್ಸಿಂಧುವನ್ನೇ ನೀಡುವವಳು&#8230;<br />
ಮಂಗಳ ದೇವತೆ ಮಹಾಲಕ್ಷ್ಮಿ..!!</p>
<p style="text-align: left;">ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…!<br />
ಶಾಂತಸಾಗರದಲ್ಲಿ ಒಮ್ಮಿಂದೊಮ್ಮೆಲೇ ಬೀಸುವ ಚಂಡಮಾರುತದಂತೆ ಭೃಗುಮುನಿಗಳ ಪ್ರವೇಶವಾಯಿತಲ್ಲಿ..</p>
<p style="text-align: left;"><strong>ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ,<br />
ಚಿನ್ನದಾತುರಕಿಂತ ಹೆಣ್ಣು- ಗಂಡೊಲವು |<br />
ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ,<br />
ತಿನ್ನುವುದದಾತ್ಮವನೆ &#8211; ಮಂಕುತಿಮ್ಮ |</strong>|</p>
<p style="text-align: left;">ತನ್ನನ್ನು ಗಮನಿಸಬೇಕು, ಗುರುತಿಸಬೇಕು, ಗೌರವಿಸಬೇಕು ಎನ್ನುವ ಚಪಲವಿಲ್ಲದೇ ಹೋಗಿದ್ದರೆ..<br />
ಈ ಜಗತ್ತಿನಲ್ಲಿ ಕ್ಲೇಶ- ಕಲಹಗಳೇ ಇರುತ್ತಿರಲಿಲ್ಲವೇನೋ…!!</p>
<p style="text-align: left;">ಭಾವದುಂಬಿ ಚಿನ್ಮಯನ ಚರಣದಲ್ಲಿ ತನ್ಮಯರಾದ ವೈಕುಂಠವಾಸಿಗಳು&#8230;<br />
ಜಗದಗಲ ತೆರೆದ ತನ್ನ ಕಮಲ ನೇತ್ರಗಳಿಂದ ಅನುಗ್ರಹದ ಅಮೃತ ವರ್ಷವನ್ನೇ ಅವರೆಲ್ಲರ ಮೇಲೆ ಸುರಿಸುವ ವೈಕುಂಠದೊಡೆಯ&#8230;!<br />
ಯಾರೂ .. ಮತ್ಯಾರನ್ನೂ ಗಮನಿಸುವ ವಾತಾವರಣವೇ ಅಲ್ಲವದು..!</p>
<p style="text-align: left;">ವೈಕುಂಠದ ಸವಿಯನ್ನು ಸವಿಯಬೇಕಾದರೆ ಭಕ್ತನಾಗಬೇಕು.. ಅಥವಾ ಭಗವಂತನಾಗಬೇಕು.<br />
ಎರಡೂ ಭಾವಗಳಿಂದ ಭಿನ್ನನಾಗಿ ನಿಂತ ಭೃಗುವಿಗೆ ತಾನೇ ಬೇರೆಯೆಂದೆನಿಸಿತು.<br />
ಮಹಾವಿಷ್ಣುವೇ ತನ್ನನ್ನು ಉಪೇಕ್ಷಿಸಿದಂತೆನಿಸಿತು.</p>
<p style="text-align: left;">ವಿವೇಕದ ಕಣ್ಮುಚ್ಚಿ ಅಹಂಕಾರದ ಕಣ್ಣು ತೆರೆದಾಗ ಆಗುವದೇ ಹೀಗೆ..<br />
ಮಸ್ತಕವೆಂಬ ಉತ್ತಮಾಂಗದಲ್ಲಿರಬೇಕಾದ ದೃಷ್ಟಿ ಪತನಗೊಂಡು ಪಾದಕ್ಕಿಳಿದರೆ ಮತ್ತೇನಾಗಬೇಕು..?</p>
<p style="text-align: left;">ಮನೆಯವರು ಮಾತನಾಡಿಸಲಿಲ್ಲವೆಂದು ಮನೆಯ ಯಜಮಾನನ ಎದೆಗೊದೆಯುವ ಅತಿಥಿ..<br />
ಎದೆಗೊದೆಯುವ ಪಾದಗಳನ್ನೇ ಒತ್ತುವ, ಕಣ್ಣಿಗೊತ್ತಿಕೊಳ್ಳುವ ಯಜಮಾನ..</p>
<p style="text-align: left;">ವೈಕುಂಠದಲ್ಲಿ ನಡೆದಿದ್ದು ಹಾಗೆ&#8230;!!<br />
ಶ್ರೀ ವತ್ಸ &#8211; ಕೌಸ್ತುಭಗಳಿಂದ ವಿಭೂಷಿತವಾದ &#8216;ಶ್ರೀ&#8217;-ನಿವಾಸವಾದ ವಿಷ್ಣುವಿನ ವಕ್ಷಸ್ಠಲವು ಭೃಗುವಿನ ಪಾದಗಳಿಂದ ಆಕ್ರಾಂತವಾಯಿತು.<br />
ಭಗವತ್ಕರಕಮಲಗಳು ಸ್ಪರ್ಶಮಾತ್ರದಿಂದಲೇ ಭೃಗುವಿನ ಅಹಂಕಾರವನ್ನೇನೋ ಕೊನೆಗಾಣಿಸಿದವು..ಆದರೆ,<br />
ಮಳೆಮುಗಿದರೂ ನೆರೆ ಇಳಿಯದಂತೆ ಭೃಗುವಿನ ಅವಿನಯದ ಪರಿಣಾಮಗಳು ಮುಂದುವರೆದವು..!<br />
ಕ್ಷಣಮಾತ್ರದ ಆವೇಶದಲ್ಲಿ ನಡೆಯುವ ಘಟನೆಗಳ ಪರಿಣಾಮ ಯುಗ ಯುಗಗಳ ಕಾಲ ನಿಂತುಬಿಡಬಹುದಲ್ಲವೇ?</p>
<p style="text-align: left;">ತನ್ನ ಪರಮ ಪ್ರೇಮದ ನೆಲೆಯಾದ ಪ್ರಭುವಿನ ವಕ್ಷಸ್ಥಲವು ಭೃಗುವಿನ ಪಾದಾಘಾತಕ್ಕೊಳಗಾದುದನ್ನು ಕಂಡು ಖತಿಗೊಂಡ ಮಹಾಲಕ್ಷ್ಮೀ<br />
ಪತಿಗೃಹವನ್ನೂ..ಪಿತೃಗೃಹವನ್ನೂ ತ್ಯಜಿಸಿ ಧರೆಯಲ್ಲಿ ಮರೆಯಾಗಿ ಹೋದಳು…!</p>
<p style="text-align: left;"><strong><span style="color: #0000ff;">ಗೃಹಿಣೀ ಗೃಹಮುಚ್ಯತೇ…|</span></strong></p>
<p style="text-align: left;"><strong>ಗೃಹವು ಗೃಹವಲ್ಲ.. ಗೃಹಿಣಿಯೇ ನಿಜವಾದ ಗೃಹ..!!</strong></p>
<p style="text-align: left;">ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..<br />
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ&#8230;?<br />
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?<br />
ಹಂಚಿಕೊಂಡಾಗ ದು:ಖವು ಅರ್ಧವಾಗುವದು.. ಸುಖವು ಇಮ್ಮಡಿಸುವದು..<br />
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?ಸರಸವೆಲ್ಲಿ..?<br />
ಲಕ್ಷ್ಮಿಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು&#8230;!!<br />
ಅರಸಿಯನ್ನರಸುತ್ತಾ, ಸ್ಮರಿಸುತ್ತಾ, ಪರವೈಕುಂಠವನ್ನೇ ಪರಿತ್ಯಜಿಸಿ ಧರೆಗಿಳಿದನು ಸಿರಿಯರಸ..!</p>
<p style="text-align: left;">ಅಮೃತಸಾಗರದ ಜೊತೆಗೆ ಆಹಾರವನ್ನೂ, ಶೇಷಶಯನನ ಜೊತೆಗೆ ನಿದ್ರೆಯನ್ನೂ ಪರಿತ್ಯಜಿಸಿ,<br />
ವೆಂಕಟಾದ್ರಿಯ ಹುತ್ತವೊಂದರಲ್ಲಿ ಹುದುಗಿ ತೀವ್ರತರ ತಪ:ಶ್ಚರ್ಯೆಯಲ್ಲಿ ಮಗ್ನನಾದನಾತ!<br />
ಅಂತರ್ಭೂಮಿಯಲ್ಲಿ ಅಂತರ್ಮುಖನಾಗಿ ಕುಳಿತಿದ್ದ ಶ್ರೀನಿವಾಸನಿಗೆ ಜಗದ ಪರಿವೆಯೇ ಇರದಾಯಿತು.<br />
ಅತ್ತ ಜಗತ್ತಿಗೂ ಜಗನ್ನಿಯಾಮಕನ ಇರವೇ ತಿಳಿಯದಂತಾಯಿತು.<br />
ಅದೆಷ್ಟೋ ಕಾಲ ನಿರ್ನಿದ್ರನಾಗಿ, ನಿರಾಹಾರನಾಗಿ ಕುಳಿತಿದ್ದ ಹರಿಯ ಹಸಿವು -<br />
ಭೂಲೋಕವಾಸಿಗಳ್ಯಾರಿಗೂ ಅರಿವಿಲ್ಲದಾಯಿತು..</p>
<p style="text-align: left;">ಹ್ಞಾ..! ಯಾರಿಗೂ ಅರಿವಾಗಲಿಲ್ಲವೆನ್ನುವಂತಿಲ್ಲ..!<br />
ಕಣ್ಣರಿಯದಿದ್ದರೂ ಕರುಳರಿಯುವುದೆನ್ನುವರಲ್ಲವೇ..?<br />
ವೆಂಕಟಾದ್ರಿಯ ವಲ್ಮೀಕಗರ್ಭದಲ್ಲಿ ಅಂತರ್ಹಿತನಾಗಿ ಕುಳಿತುಕೊಂಡಿದ್ದ -<br />
ಶ್ರೀನಿವಾಸನ ಹಸಿವು ಚೋಳರಾಜನ ಅರಮನೆಯ ಒಡಲೊಂದರಲ್ಲಿ ಪ್ರತಿಧ್ವನಿಸತೊಡಗಿತ್ತು..!</p>
<p style="text-align: left;"><span style="color: #ff00ff;"><strong>ಅದು ಎನ್ನೋಣವೇ.?<br />
ಅವಳು ಎನ್ನೋಣವೇ.?<br />
ಅವರು ಎನ್ನೋಣವೇ..?<br />
ಪಶು ಎನ್ನೋಣವೇ..?<br />
ಮಾತೆ ಎನ್ನೋಣವೇ..?<br />
ಜೀವ ಎನ್ನೋಣವೇ..<br />
ದೇವನೆನ್ನೋಣವೇ..?<br />
ಚಲಿಸುವ ದೇವಾಲಯ ಎನ್ನೋಣವೇ..?</strong></span></p>
<p style="text-align: left;"><strong>ಮತ್ತೊಬ್ಬರ ಹಸಿವು ಅರ್ಥವಾಗುವುದು ಮಾತೃಹೃದಯಕ್ಕೆ ಮಾತ್ರ..!</strong></p>
<p style="text-align: left;"><strong><br />
</strong>ಚೋಳರಾಜನ ಗೋಶಾಲೆಯನ್ನಲಂಕರಿಸಿದ್ದ ಆ ಗೋಮಾತೆ ತನ್ನ ಕರುಳ ಕಣ್ಣಿನಿಂದಲೇ ಕಂಡಳು-<br />
ಅನ್ನ-ಪಾನಗಳಿಂದ ವಿರಹಿತನಾಗಿದ್ದ ವಿಶ್ವಾಧಾರ ಮೂರ್ತಿಯನ್ನು..!</p>
<p style="text-align: left;">ಹಟ್ಟಿಯಲ್ಲಿ ಅಂಬೆಗರೆಯುವ ತನ್ನ ಎಳೆಗರುವನ್ನೇ ಮರೆತು ವೆಂಕಟಾದ್ರಿಯ ಹುತ್ತದೆಡೆಗೆ ಲಗುಬಗೆಯಿಂದ ಧಾವಿಸಿದಳಾಕೆ..!<br />
ವಿಶ್ವಜನಕನನ್ನೇ ತನ್ನ ಕರುವಾಗಿಸಿಕೊಂಡು ವಿಶ್ವದ ವಾತ್ಸಲ್ಯವನ್ನೆಲ್ಲಾ ತನ್ನ ಜೀವರಸವಾದ ಹಾಲಿನಲ್ಲಿ ತುಂಬಿ ಹರಿಸಿದಳು ವಿಶ್ವಂಭರನಿಗಾಗಿ.<br />
ಹಸುವಿದ್ದಲ್ಲಿ ಹಸಿವಿಲ್ಲ..<br />
ಅಸುವುಳಿಸುವಳು..<br />
ಕಸು ತುಂಬುವಳು..<br />
ಹಸಿವಿಂಗಿಸುವಳು&#8230;<br />
ಆ ವಿಶ್ವಜನನಿ&#8230;!</p>
<p style="text-align: left;">ಸಮಯ ಸರಿಯಿತು&#8230;</p>
<p style="text-align: left;"><strong><span style="color: #0000ff;">&#8220;ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।</span></strong><strong><span style="color: #0000ff;"><br />
</span></strong><strong><span style="color: #0000ff;">ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ ||&#8221; - ಭಗವದ್ಗೀತೆ</span></strong></p>
<p style="text-align: left;"><strong>&#8220;ಅಗ್ನಿಸ್ವರೂಪವನ್ನು ತಾಳಿ ನಾನು ಜೀವಿಗಳ ದೇಹವನ್ನಾಶ್ರಯಿಸುವೆನು.<br />
ಪ್ರಾಣಾಪಾನಗಳ ಜೊತೆಗೂಡಿ ನಾಲ್ಕು ಬಗೆಯ ಆಹಾರಗಳನ್ನು ನಾನೇ ಜೀರ್ಣಗೊಳಿಸುವೆನು&#8221; </strong><br />
ಎನ್ನುವ ಸ್ವಾಮಿಯ ಒಡಲನ್ನು ತಂಪಾಗಿಡಲು ಪ್ರತಿನಿತ್ಯವೂ ವೆಂಕಟಾದ್ರಿಗೆ ಹೋಗಿ ಹಾಲಿಳಿಸತೊಡಗಿದಳಾ ಗೋಮಾತೆ!</p>
<p style="text-align: left;">ಅಸಾಮಾನ್ಯ ಸಂಗತಿಗಳು ಸಾಮಾನ್ಯರಿಗೆ ಹೇಗೆ ತಾನೆ ಅರ್ಥವಾಗಬೇಕು?<br />
ಅರಮನೆಯಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ..<br />
ಯಾವಾಗಲೂ ಸಮೃದ್ದವಾಗಿ ಹಾಲುಗರೆಯುತ್ತಿದ್ದ ಹಸುವೇಕೆ ಇದ್ದಕ್ಕಿದ್ದಂತೆ ಬರಿದಾಯಿತು..!?<br />
ಕಾರಣ ತಿಳಿಯಲು ಗೋಪಾಲಕನಿಗೆ ರಾಜಾಜ್ಞೆಯಾಯಿತು.<br />
ಮರುದಿನ ಹಸುವನ್ನು ಹಿಂಬಾಲಿಸಿದನಾತ..<br />
ವೆಂಕಟಗಿರಿಯ ಹುತ್ತವೊಂದರ ಮೇಲೆ ಹಸುವು ಹಾಲಿಳಿಸುವುದನ್ನು ಪೊದೆಯ ಮರೆಯಲ್ಲಿ ನಿಂತು ಕಂಡ<br />
ಗೋಪಾಲಕನ ಕೋಪ ನೆತ್ತಿಗೇರಿತು.. ಪ್ರಜ್ಞೆ ಪಾತಾಳಕ್ಕಿಳಿಯಿತು…!<br />
ಕಣ್ಣು ಕೆಂಪಾಯಿತು ..ಮನಸ್ಸು ಕಪ್ಪಾಯಿತು..!</p>
<p style="text-align: left;"><strong><span style="color: #0000ff;">ಕ್ರೋಧಾತ್ ಭವತಿ ಸಂಮೋಹ: ಸಂಮೋಹಾತ್ ಸ್ಮೃತಿ ವಿಭ್ರಮಃ |<br />
ಸ್ಮೃತಿಭ್ರಂಶಾತ್ ಬುದ್ಢಿನಾಶ: ಬುದ್ಡಿನಾಶಾತ್ ಪ್ರಣಶ್ಯತಿ || - ಭಗವದ್ಗೀತೆ</span></strong></p>
<p style="text-align: left;"><strong>ಕ್ರೋಧದಿಂದ ಸಂಮೋಹ;<br />
ಸಂಮೋಹದಿಂದ ಸ್ಮೃತಿ ಭ್ರಂಶ ;<br />
ಸ್ಮೃತಿಭ್ರಂಶದಿಂದ ಬುದ್ಢಿ ನಾಶ;<br />
ಬುದ್ಢಿನಾಶದಿಂದ ಸರ್ವ ನಾಶ..</strong></p>
<p style="text-align: left;">ಪ್ರತ್ಯಕ್ಷ ರಾಕ್ಷಸನಂತೆ ಕೈಯಲ್ಲಿ ಕೊಡಲಿ ಹಿಡಿದು ಆ ಗೋವಿನೆಡೆಗೆ ಧಾವಿಸಿದನಾತ..!<br />
ಆದರೆ ವಾತ್ಸಲ್ಯ &#8211; ತನ್ಮಯತೆಗಳ ಪ್ರತಿಮೂರ್ತಿಯಾಗಿದ್ದ ಗೋವು ಶ್ರೀನಿವಾಸನಲ್ಲಿಟ್ಟ ತನ್ನ ಚಿತ್ತವನ್ನು ಕದಲಿಸಲಿಲ್ಲ..<br />
ಆ ಸ್ಠಳವನ್ನು ಬಿಟ್ಟೋಡಲಿಲ್ಲ.. ಹಾಲ್ಗರೆಯುವುದನ್ನು ನಿಲ್ಲಿಸಲಿಲ್ಲ.!!!</p>
<p style="text-align: left;">ಅದೇನು ದುರ್ಬುದ್ಢಿಯೋ, ದುರ್ದೈವವೋ&#8230;<br />
ಆ ಗೋವಳನು ಕೊಳಲು ಹಿಡಿಯಬೇಕಾದ ಕೈಯಲ್ಲಿ ಕೊಡಲಿ ಹಿಡಿದು ತನ್ನ ನೆತ್ತಿಯೆತ್ತರಕ್ಕೆತ್ತಿ ಸರ್ವಶಕ್ತಿಯಿಂದ ಗೋವಿನ ಕೊರಳ ಮೇಲೆ ಪ್ರಯೋಗಿಸಿದನು.. ಧರ್ಮ ದಯೆಗಳನ್ನು ಮರೆತು..<br />
<strong>ಆ ಕ್ಷಣದಲ್ಲಿಯೂ ಬಾರದಿದ್ದರೆ ದೇವರು ದೇವರೆನಿಸುವುದಾದರೂ ಹೇಗೆ..?</strong></p>
<p style="text-align: left;">ಪ್ರಹ್ಲಾದನ ಕಷ್ಟಕ್ಕೆ ಕರಗಿ ಕಂಬವನ್ನೊಡೆದು ಬಂದ ನರಸಿಂಹನಂತೆ&#8230;<br />
ಘೋರ ಗೋಹತ್ಯೆಯನ್ನು ಸಹಿಸಲಾರದೆ ಹುತ್ತವನ್ನೊಡೆದು ಮೇಲೆದ್ದನಾ ಗೋವಿಂದ..!!</p>
<p style="text-align: left;">ಬ್ರಹ್ಮಾಂಡವೇ ಬೆಚ್ಚಿ ಬೆರಗಾಗಿ ನೋಡ ನೋಡುತ್ತಿದ್ದಂತೆ, ಗೋವಿನ ಕೊರಳ ಮೇಲೆ ಸಿಡಿಲಿನಂತೆರಗಿದ<br />
ಕೊಡಲಿಯ ಹೊಡೆತವನ್ನು ತನ್ನ ಸಿರಿಮುಡಿಯಿಂದ ಪರಿಗ್ರಹಿಸಿದನು ಶ್ರೀನಿವಾಸ..</p>
<p style="text-align: left;">ಒಮ್ಮೊಮ್ಮೆ ನವಿಲುಗರಿಗಳಿಂದ,<br />
ಒಮ್ಮೊಮ್ಮೆ ರತ್ನಮುಕುಟದಿಂದ,<br />
ಒಮ್ಮೊಮ್ಮೆ ಸುಕೋಮಲ ಸುಮಗಳಿಂದ ವಿಭೂಷಿತವಾಗುವ ಆ ವರಶಿರದ ಮೇಲಾಯಿತು ಕುಠಾರ ಪ್ರಹಾರ!!</p>
<p style="text-align: left;">ಕ್ಷೀರಸಾಗರದೊಡೆಯನ ಶಿರವೊಡೆದು,ಚಿಲುಮೆಯಂತೆ ಚಿಮ್ಮಿದ ರಕ್ತಧಾರೆಯಿಂದ ಗೋಮಾತೆಗಾಯಿತು ಅಭಿಷೇಕ..<br />
ಹಾಲಿತ್ತವಳಿಗೆ ರಕ್ತವಿತ್ತು ದೇವತ್ವವನ್ನು ಮೆರೆದನು ದೇವ ದೇವ..</p>
<p style="text-align: left;">ಆದರೆ ಗೋಪಾಲಕ..?<br />
ಸೂರ್ಯೋದಯವಾದ ಮೇಲೆ ಕತ್ತಲೆ ಬದುಕುವುದುಂಟೆ..?<br />
ಮಮತೆಯ ಮಾತೆಯ ಕೊರಳು ಕೊಯ್ಯುವ ಕ್ರೂರ ಕೃತ್ಯ ಕಂಡು ಖತಿಗೊಂಡು ನಿಂತ ಶ್ರೀನಿವಾಸನೆಂಬ ಪ್ರಳಯಾಗ್ನಿಯಲ್ಲಿ ಆ ಗೋವಳನು ಮಿಡತೆಯಾಗಿ ಹೋದ&#8230;!<br />
ಯಾವ ಅಶುಭವನ್ನು ಗೋವಿಗೆ ಮಾಡಹೊರಟನೋ ಅದು ಆತನಿಗೇ ಆಯಿತು.</p>
<p style="text-align: left;"><strong><span style="color: #0000ff;">&#8216;ರಾಜಾ ರಾಷ್ಟ್ರಗತಂ ಪಾಪಂ..&#8217;</span></strong></p>
<p style="text-align: left;">ತನ್ನ ಪ್ರಜೆಗಳಾಗಲಿ, ಸೇವಕರಾಗಲಿ ಮಾಡಿದ ಪಾಪಕ್ಕೆ ರಾಜನೂ ಹೊಣೆಗಾರನಾಗಬೇಕಾಗುತ್ತದೆ.<br />
ಗೋಹತ್ಯೆಗೆಳಸಿದ ಗೋಪಾಲಕನ ಪಾಪದ ಬಿಸಿ, ಚೋಳ ರಾಜನಿಗೂ ತಟ್ಟಿತು.<br />
&#8220;ರಾಕ್ಷಸ ಸದೃಶನಾದ ಗೋಪಾಲಕನ ಸ್ವಾಮಿಯಾದ ನೀನು ರಾಕ್ಷಸನೇ ಆಗು&#8221; ಎಂದು ಶ್ರೀನಿವಾಸನು ರಾಜನನ್ನು ಶಪಿಸಿದನು..</p>
<p style="text-align: left;">ಆದರೆ ಈ ಘಟನಾವಳಿಗಳಿಂದ ಭೂಲೋಕಕ್ಕೆ ಒಳಿತೇ ಆಯಿತು.<br />
ವೈಕುಂಠವೇ ಧರೆಗಿಳಿದು ತಿರುಪತಿ-ತಿರುಮಲವಾಯಿತು..<br />
ಶೇಷನು ಶೇಷಾಚಲವಾದ..<br />
ಕ್ಷೀರಸಾಗರವು ಭಕ್ತಸಾಗರವಾಯಿತು..</p>
<p style="text-align: left;">ಆದರೆ..ಲಕ್ಷ್ಮಿ&#8230;?</p>
<div id="_mcePaste" style="text-align: left;">
<div id="_mcePaste" style="text-align: left;">ಸೂರ್ಯಪ್ರಭೆ ಸೂರ್ಯನನ್ನು ಬಿಟ್ಟಿರಲು ಸಾಧ್ಯವೇ ?</div>
</div>
<div id="_mcePaste" style="text-align: left;">ಬೆಳದಿಂಗಳು ಚಂದ್ರನಿಂದ ದೂರವಿರಲು ಸಾಧ್ಯವೇ ?</div>
<div id="_mcePaste" style="text-align: left;">ನಾರಾಯಣ ರಾಮನಾದಾಗ ಸೀತೆಯಾಗಿ ಜೊತೆಯಾದವಳು&#8230;</div>
<div id="_mcePaste" style="text-align: left;">ಕೃಷ್ಣನಾದಾಗ ರುಕ್ಮಿಣಿಯಾಗಿ ಆತನನ್ನೇ ವರಿಸಿದವಳು&#8230;</div>
<div id="_mcePaste" style="text-align: left;">ವಿಷ್ಣುವಿಗೆ ಅನಪಾಯಿನಿಯವಳು..</div>
<div id="_mcePaste" style="text-align: left;"><span style="color: #0000ff;">&#8216;ವಿಷ್ಣೋ: ಏಷಾ ಅನಪಾಯಿನೀ&#8217;<span style="color: #993366;"><br />
ತಿರುಪತಿಯಲ್ಲಿ ಶ್ರೀನಿವಸನೊಡನೆ ಆಕೆ ಪ್ರಕಟಗೊಳ್ಳುವ ಬಗೆಯೇ ಅನ್ಯಾದೃಶವಾದುದು&#8230;</span> </span></div>
<div style="text-align: left;"><span style="color: #0000ff;"><span style="color: #993366;">&#8216;ಶ್ರೀ&#8217; <span style="font-weight: normal;">ಇಲ್ಲದೆ</span> ಶ್ರೀನಿವಾಸ<span style="font-weight: normal;">ನೆನಿಸುವುದೆಂತು..?</span></span><br />
</span></div>
<div id="_mcePaste" style="text-align: left;">ಜಗತ್ತಿನ ಎಲ್ಲೆಡೆಯಿಂದ ಧನ ಕನಕಗಳ ರಾಶಿಯ ರೂಪದಲ್ಲಿ ಬಂದು ಕ್ಷಣ ಕ್ಷಣವೂ ಶ್ರೀನಿವಾಸನ್ನನ್ನಾವರಿಸುವಳವಳು, ಆಲಂಗಿಸುವಳವಳು&#8230;</div>
<div id="_mcePaste" style="text-align: left;">ಆದುದರಿಂದಲೇ ತಿರುಪತಿಗೆ ಹರಿದುಬರುವಷ್ಟು ಸಂಪತ್ತು ಜಗತ್ತಿನ ಬೇರಾವ ದೇವಸ್ಠಾನಗಳಿಗೂ ಬಾರದು..!</div>
<div id="_mcePaste" style="text-align: left;">ತಿರುಪತಿಯ ವೈಭವವಿನ್ನೆಲ್ಲಿಯೂ ಕಾಣದು.<br />
ತಿರುಪತಿಯೆಂದಾಕ್ಷಣವೇ ಮನಸ್ಸ್ಸಿಗೆ ಬರುವದು ಅಲ್ಲಿಯ ವೈಭವ.</div>
<div id="_mcePaste" style="text-align: left;">ಅದು&#8230;ಲಕ್ಷ್ಮಿ..!</div>
<div style="text-align: left;">ವಿರಹದ ನಂತರ ಬರುವ ಸಂಗಮ ಮತ್ತಷ್ಟು ಗಾಢವಾಗಿರುವದಲ್ಲವೇ?</div>
<div id="_mcePaste" style="text-align: left;">ಒಮ್ಮೆ ಬಿಟ್ಟು ಹೋದ ಪಶ್ಚಾತ್ತಾಪವಿರಬೇಕು,<br />
ಆಕೆ ನೂರಾರು ಸಾವಿರಾರು ರೂಪದಲ್ಲಿ ಹೆಚ್ಚೇಕೆ ವಿಶ್ವರೂಪಿಣಿಯಾಗಿ ವಿಶ್ವಂಭರನನ್ನು ಸೇರಿದಳು..!</div>
<div style="text-align: left;">ಆದರೆ ಈ ಎಲ್ಲಾ ವೈಭವಗಳ ಮಧ್ಯದಲ್ಲಿಯೂ ಒಂದು ಕೊರತೆ..<br />
ಸಮಯ ಸರಿದಂತೆ ಶ್ರೀನಿವಾಸನ ಶಿರದ ಗಾಯ ಮಾಯವಾದರೂ ಕುಠಾರ ಪ್ರಹಾರವಾದ ಸ್ಠಾನದಲ್ಲಿ ಕೂದಲು ಬಾರದಿದ್ದುದರಿಂದ..<br />
ಚೆಲ್ವಿಕೆಯ ಚಂದ್ರಮನಲ್ಲಿ ಚುಕ್ಕಿಯೊಂದು ಉಳಿದುಬಿಟ್ಟಿತ್ತು.!</div>
<div id="_mcePaste" style="text-align: left;">ಕಲಂಕವಲ್ಲ.. ಆತನ ಗೋ ಪ್ರೇಮದ ಪ್ರತೀಕವದು&#8230;!</div>
<div style="text-align: left;">ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಮುಡಿಕೊಡುವ ಪದ್ಢತಿ ಇಂದಿಗೂ ಚಾಲ್ತಿಯಲ್ಲಿರುವದು ಈ ಹಿನ್ನೆಲೆಯಲ್ಲಿ..!</div>
<div id="_mcePaste" style="text-align: left;">ಅಂದು ನಮ್ಮವನೊಬ್ಬನೆಸಗಿದ ಅಪರಾಧದಿಂದಾಗಿ ಶ್ರೀನಿವಾಸನ ಕಳೆದ ಕೂದಲಿನ ಸಾಲವನ್ನು ತೀರಿಸಲು -<br />
ಮನುಜ ಕೋಟಿ ಇಂದಿನವರೆಗೂ ಮುಡಿ ನೀಡುತ್ತಾ ಬಂದಿದೆ.</div>
<div id="_mcePaste" style="text-align: left;">ಎಂದೆಂದೂ ತೀರದ ಸಾಲವದು..!</div>
<div style="text-align: left;">
<div style="text-align: left;"><span style="color: #0000ff;">ಗೋವು..</span>.</div>
<div style="text-align: left;">ತಿರುಪತಿಯ ಕಥೆಯಲ್ಲಿ ಬರುವ ಗೋವು ಒಂದು ಸೋಜಿಗವೇ ಸರಿ.!</div>
<div style="text-align: left;">ಸುದೂರದಲ್ಲಿದ್ದ ಶ್ರೀನಿವಾಸನ ಹಸಿವಿನ ಕರೆಯನ್ನು ಕೇಳಿಸಿಕೊಂಡ ಕಿವಿಗಳೆಂತಹವು..?</div>
<div style="text-align: left;">ಬೆಟ್ಟದ ದಟ್ಟ ಕಾಡಿನಲ್ಲಿ ಯಾರೂ ಅರಿಯದಂತೆ ಹುತ್ತದಲ್ಲಿ ಹುದುಗಿ ಕುಳಿತಿದ್ದ ಶ್ರೀನಿವಾಸನನ್ನು ಕಂಡ ಕಣ್ಣುಗಳೆಂತಹವು..?</div>
<div style="text-align: left;">ಶ್ರೀನಿವಾಸನ ಕರೆಗೆ ಕರಗಿ ತನ್ನ ಕರುವನ್ನೇ ಬಿಟ್ಟೋಡಿದ ಕರುಳದೆಂತಹದು..?</div>
<div style="text-align: left;">ಕಟುಕನ ಕ್ರೂರ ಕೊಡಲಿಗೂ ನಡುಗದ, ಹಾಲ್ಗರೆಯುವದನ್ನು ಬಿಡದ ಆ ಧೀರ ಹೃದಯವೆಂತಹದು..!</div>
<div style="text-align: left;"><span style="color: #0000ff;">&#8216;ಋಷಿಶ್ಚ ಕಿಲ ದರ್ಶನಾತ್ &#8217;</span></div>
<div style="text-align: left;">ಬರಿಗಣ್ಣಿಗೆ ಕಾಣದ ದೇವರನ್ನು ಕಾಣುವ ಕಣ್ಣುಳ್ಳವನೇ ಋಷಿ..</div>
<div style="text-align: left;">ಎಂದಮೇಲೆ ಯಾರೂ ಕಾಣದ ಶ್ರೀನಿವಾಸನನ್ನು ಕಂಡ ಆ ಗೋವು ಯಾವ ಋಷಿಗೇನು ಕಡಿಮೆ..?</div>
<div style="text-align: left;">ದೇವರಿಗಾಗಿ ದ್ರವಿಸುವ ಹೃದಯವುಳ್ಳವನೇ ಭಕ್ತ..</div>
<div style="text-align: left;">ಶ್ರೀನಿವಾಸನನ್ನು ಕರುಳ ಕಣ್ಣಿಂದಲೇ ಕಂಡು ಕರಗಿ ಹಾಲ್ಗರೆದ ಗೋವು ಯಾವ ಭಕ್ತನಿಗೇನು ಕಡಿಮೆ..?</div>
<div style="text-align: left;">ಕಾಣದ ದೇವರನ್ನು ಜಗತ್ತಿಗೆ ಕಾಣಿಸುವವನೇ ಗುರು..</div>
<div style="text-align: left;">ಶ್ರೀನಿವಾಸನನ್ನು ಮೊದಲಾಗಿ ಕಂಡು ಲೋಕಮುಖಕ್ಕೆ ಉದ್ಘಾಟಿಸಿದ ಗೋವು ಯಾವ ಗುರುವಿಗೇನು ಕಡಿಮೆ..?</div>
<div style="text-align: left;">ಜಗತ್ಪಿತನನ್ನೇ ಶಿಶುವಾಗಿಸಿಕೊಂಡು ಸಂತೃಪ್ತಿಯಾಗುವಷ್ಟು ಹಾಲುಣಿಸಿದ ಆ ಗೋಮಾತೆ ಯಾವ ಮಾತೆಗೇನು ಕಡಿಮೆ..?<br />
ವಿಶ್ವಂಭರನನ್ನೇ ಸಂತರ್ಪಿಸಿದ ಆಕೆಯ ಹಾಲು ಕ್ಷೀರಸಾಗರಕ್ಕೇನು ಕಡಿಮೆ..?</div>
<div style="text-align: left;"><span style="font-weight: normal;">[ತಿರುಪತಿಯನ್ನು ತ್ವರಿತವಾಗಿ ಹೇಳಿದರೆ ತೃಪ್ತಿ ಎಂದಾಗುವದು.. ವಿಶ್ವಂಭರೆನ ತೃಪ್ತಿ ಕ್ಷೇತ್ರವದು..!]</span></div>
<div style="text-align: left;"><span style="font-weight: normal;"><br />
</span></div>
<div style="text-align: left;">ಈ ಕಥಾನಕದಲ್ಲಿ ನಾವು ಕಂಡ ಶ್ರೀನಿವಾಸನ ಮೂರು ಸತ್ಯ ಸಂದೇಶಗಳು:</div>
<div style="text-align: left;"><span style="color: #ff0000;">ಸಕಲ ಗೋ ಘಾತಕರಿಗೆ -</span></div>
<div style="text-align: left;">ಗೋವಿನ ಮೇಲೆ ಎತ್ತಿದ ಕತ್ತಿ ನಿಮ್ಮ ಕುತ್ತಿಗೆಗೇ ಬಂದೀತು..</div>
<div style="text-align: left;">ಗೋವಂಶ ನಾಶದಿಂದ ನಿಮ್ಮ ಸರ್ವ ನಾಶವೇ ಆದೀತು..!!</div>
<div style="text-align: left;"><span style="color: #ff6600;">ಸಕಲ ರಾಜರಿಗೆ (ಸಕಲ ಸರ್ಕಾರಗಳಿಗೆ) -</span></div>
<div style="text-align: left;">ತನ್ನ ಸೇವಕ, ಒಂದು ಗೋಹತ್ಯೆ ಮಾಡಲೆಳಸಿದ ಮಾತ್ರಕ್ಕೇ ರಾಕ್ಷಸತ್ವದ ಶಾಪ ತಟ್ಟಿತು.</div>
<div style="text-align: left;">ಅವ್ಯಾಹತವಾಗಿ ಕೋಟಿ ಕೋಟಿ ಗೋವುಗಳ ಹತ್ಯೆಯನ್ನು ಮುಂದೆ ನಿಂತು ಮಾಡಿಸಿದರೆ ನಿಮ್ಮ ಕತೆಯೇನಾದೀತು..!?</div>
<div style="text-align: left;">ನಿಮ್ಮ ಊಹೆಗೇ ಬಿಟ್ಟಿದ್ದು..!</div>
<div style="text-align: left;">ಅಂತಿಮವಾಗಿ,</div>
<div style="text-align: left;"><span style="color: #339966;">ಸಕಲ ಪ್ರಜೆಗಳಿಗೆ (ನಮಗೆಲ್ಲರಿಗೆ) -</span></div>
<div style="text-align: left;">ಗೋಮಾತೆಯ ಕೊರಳ ಮೇಲೆರಗುವ ಕೊಡಲಿಗೆ ನಿಮ್ಮ ಮುಡಿಯನ್ನಾದರೂ ಕೊಡಿ..</div>
<div style="text-align: left;">ಗೋಹತ್ಯೆಯಾಗಲು ಬಿಡಬೇಡಿ.</div>
<div style="text-align: left;">ಚಿಮ್ಮುವುದಿದ್ದರೆ ಚಿಮ್ಮಲಿ ಗಗನಕ್ಕೆ ಗೋಭಕ್ತರ ರಕ್ತ&#8230;!</div>
<div style="text-align: left;">ಆದರೆ&#8230;</div>
<div style="text-align: left;">ಭಾರತದ ಪುಣ್ಯಧರೆಯೆಂದಿಗೂ ಆಗದಿರಲಿ ಗೋರಕ್ತಸಿಕ್ತ..!!</div>
</div>
<p style="text-align: center;">|| ಹರೇರಾಮ ||</p>
<p style="text-align: left;">
<p style="text-align: left;">
<p style="text-align: left;">
<p></span></h4>
]]></content:encoded>
			<wfw:commentRss>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/feed/</wfw:commentRss>
		<slash:comments>48</slash:comments>
		</item>
		<item>
		<title>ನೆಗಡಿಯೆನಿಸಿದರೆ ಮೂಗು ಕೊಯ್ದುಕೊಳ್ಳಬೇಕೆ&#8230;!?</title>
		<link>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/</link>
		<comments>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/#comments</comments>
		<pubDate>Sat, 26 Jun 2010 19:57:50 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4924</guid>
		<description><![CDATA[&#124;&#124;ಹರೇರಾಮ &#124;&#124;
ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ&#8230;.?
ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ,
ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ..
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ..
ಆಗ ಮಾಡಬೇಕಾದುದೇನು&#8230;?
ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!?
ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ..
ಭಾವಸಂವಾದದ ನಿರೀಕ್ಷೆಯಲ್ಲಿ&#8230;
]]></description>
			<content:encoded><![CDATA[<p style="text-align: center;">||ಹರೇರಾಮ ||</p>
<p><strong>ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ&#8230;.?</strong></p>
<p>ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ,<br />
ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ..<br />
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ..<br />
ಆಗ ಮಾಡಬೇಕಾದುದೇನು&#8230;?</p>
<p>ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!?</p>
<p>ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ..</p>
<p>ಭಾವಸಂವಾದದ ನಿರೀಕ್ಷೆಯಲ್ಲಿ&#8230;</p>
]]></content:encoded>
			<wfw:commentRss>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/feed/</wfw:commentRss>
		<slash:comments>16</slash:comments>
		</item>
		<item>
		<title>ಇದು ಹೀಗೇ ಇರದು..!!</title>
		<link>http://hareraama.in/blog/%e0%b2%87%e0%b2%a6%e0%b3%81-%e0%b2%b9%e0%b3%80%e0%b2%97%e0%b3%87-%e0%b2%87%e0%b2%b0%e0%b2%a6%e0%b3%81/</link>
		<comments>http://hareraama.in/blog/%e0%b2%87%e0%b2%a6%e0%b3%81-%e0%b2%b9%e0%b3%80%e0%b2%97%e0%b3%87-%e0%b2%87%e0%b2%b0%e0%b2%a6%e0%b3%81/#comments</comments>
		<pubDate>Sun, 20 Jun 2010 16:39:15 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4777</guid>
		<description><![CDATA[ ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..
ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!

ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.
ರಾಜ್ಯ-ರಾಜಧಾನಿ-ರಾಜಮಾರ್ಗಗಳು,
ಜನಗಳು-ಜಯಕಾರಗಳು,
ಆನೆ-ಅಂಬಾರಿಗಳು,
ಅರಮನೆ-ಸಿಂಹಾಸನಗಳು..
ಇವುಗಳೆಲ್ಲವೂ ಕರಗಿ...ಅಲ್ಲಿ
ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು...!!

"ಇದು ಹೀಗೇ ಇರದು"]]></description>
			<content:encoded><![CDATA[<p style="text-align: center;"><span style="color: #888888;"><strong>|| ಹರೇರಾಮ ||</strong></span></p>
<p>ಒಮ್ಮೊಮ್ಮೆ ಸೌಭಾಗ್ಯವು ವೈರಾಗ್ಯವನ್ನು ಹುಡುಕಿಕೊಂಡು ಬರುವುದುಂಟು..<br />
ನಾಡಿನ ದೊರೆಗಳು ಕಾಡಿನ ಗುರುಗಳ ಚರಣಗಳನ್ನಾಶ್ರಯಿಸುವುದುಂಟು..<br />
ತಥಾಕಥಿತ ಸುಖಪುರುಷರು ನಿಜಸುಖವನ್ನರಸಿ ತ್ಯಾಗಿಗಳ ಬಳಿ ಸಾರುವುದುಂಟು..</p>
<p>ಒಮ್ಮೆ ಹೀಗಾಯಿತು..<br />
ಮಹಾಯೋಗಿಯೊಬ್ಬರ ಸನ್ನಿಧಿಯಲ್ಲಿ ಮಹಾರಾಜನೊಬ್ಬ ವಿಚಿತ್ರವಾದ ಪ್ರಶ್ನೆಯೊಂದನ್ನು ಮುಂದಿಡುತ್ತಾನೆ..<br />
&#8220;ಗುರುವೇ, ಮೂರೇಮೂರು ಶಬ್ದಗಳ ಒಂದು ವಾಕ್ಯದಲ್ಲಿ ಸಂಪೂರ್ಣ ಜೀವನಕ್ಕೇ ಸಮತೋಲನವನ್ನು ಕೊಡುವ ಉಪದೇಶವೊಂದನ್ನು ತಮ್ಮಿಂದ ಬಯಸುವೆ.<br />
ಉಪದೇಶ ಹೇಗಿರಬೇಕೆಂದರೆ, ಒಮ್ಮೆ ನೆನೆಸಿಕೊಂಡರೆ ಸಾಕು ಕಡುಕಷ್ಟಗಳಲ್ಲಿಯೂ ಮನ ಕುಗ್ಗಬಾರದು- ಸುಖದ ಸುಪ್ಪತ್ತಿಗೆಯಲ್ಲಿಯೂ ಹಿಗ್ಗಬಾರದು.</p>
<p>ತಮ್ಮ ಉಪದೇಶವನ್ನು ಮುದ್ರೆಯುಂಗುರದಲ್ಲಿ ಬರೆಸಿ ನಿತ್ಯ ಧರಿಸುವೆನು. ಏಕೆಂದರೆ, ಅದು ಯಾವಾಗಲೂ ನನ್ನ ಕಣ್ಣಿಗೆ ಬೀಳುವಂತಿರಬೇಕು..&#8221;</p>
<p>ಕೊಂಚಕಾಲ ತನ್ನೊಳಗೇ ಹುಡುಕಿದ ಗುರು ನೀಡಿದ ಉಪದೇಶ ಹೀಗಿತ್ತು..</p>
<p><strong><span style="color: #ff00ff;">&#8221; ಇದು ಹೀಗೇ ಇರದು &#8220;</span><br />
</strong><strong><br />
<span style="font-weight: normal;"> &#8220;ಹಾಗೆಂದರೆ..!?&#8221;<br />
&#8220;ಹಾಗೆಂದರೇನೆಂದು ಸಮಯ ಬಂದಾಗ ತಾನಾಗಿ ಅರ್ಥವಾದೀತು..<br />
ಯಾವಾಗ ನಿನಗೀ ಉಪದೇಶದ ಅಗತ್ಯ ಬೀಳುವುದೋ..<br />
ಆಗ ನಿನ್ನ ಮುದ್ರೆಯುಂಗುರ ಒಮ್ಮೆ ಮಿಂಚೀತು&#8230;!&#8221;</span></strong></p>
<p><strong><span style="font-weight: normal;"> </span></strong></p>
<p><span style="font-weight: normal;">ಕೆಲಕಾಲ ಕಳೆಯಿತು..<br />
ಒಮ್ಮೆ ಆ ರಾಜ್ಯದ ಮೇಲೆ ಶತ್ರುಗಳ ಅಕ್ರಮಣವಾಯಿತು..ಸಮರದಲ್ಲಿ ರಾಜನಿಗೆ ಸೋಲೇ ಆಯಿತು..<br />
ಪ್ರಾಣಗಳನ್ನುಳಿಸಿಕೊಳ್ಳಲು ಕುದುರೆಯನ್ನೇರಿ ಪಲಾಯನ ಮಾಡಿದನಾತ&#8230;<br />
ಶತ್ರುಸೈನಿಕರು ಆತನನ್ನು ಹಿಂಬಾಲಿಸಿದರು..<br />
ತನ್ನೊಡೆಯನನ್ನು ಹೊತ್ತು ಬಹುದೂರ ಓಡಿದ ಕುದುರೆ  ಬಳಲಿ ಬಸವಳಿದು ಬಿದ್ದು ಸತ್ತಾಗ -<br />
ರಾಜನಿಗೆ ಮುಂದೇನು ಮಾಡಬೇಕಂದು ದಿಕ್ಕೇ ತೋಚಲಿಲ್ಲ..<br />
ಶತ್ರುಗಳ ವಶವಾದರೆ ಮುಂದೆ ಬರಬಹುದಾದ ಪರಿಸ್ಥಿತಿಯನ್ನು ಎಣಿಸಿಕೊಂಡಾಗ ಆತ್ಮಹತ್ಯೆಯೇ ಹಿತವೆನಿಸಿತು&#8230;<br />
ಇನ್ನೇನು ಆತ ಸಾವಿಗೆ ಶರಣಾಗಬೇಕು ಎನ್ನುವಷ್ಟರಲ್ಲಿ </span><span style="font-weight: normal;"><strong>ಮುದ್ರೆಯುಂಗುರ ಮಿಂಚಿತು&#8230;!</strong></span></p>
<p><span style="font-weight: normal;"><strong>ಆಗ ಕಾಣಿಸಿದವು ಗುರು&#8217;ಪದ&#8217;ಗಳು&#8230;!<br />
</strong><br />
<strong><span style="color: #339966;"> &#8220;ಇದು ಹೀಗೇ ಇರದು&#8221;<br />
</span><br />
ಮೊದಲೆಷ್ಟೋ ಬಾರಿ ನೋಡಿದ ಅವೇ &#8216;ಪದ&#8217;ಗಳು ಮೊದಲ ಬಾರಿಗೆ ಈಗ ಅರ್ಥ ಕೊಡತೊಡಗಿದವು&#8230;!</strong></span></p>
<p><span style="font-weight: normal;">&#8220;ಮಗೂ..ಈ ವಿಕಟ ಪರಿಸ್ಥಿತಿ ಬಹುಕಾಲ ಹೀಗೆಯೇ ಇರದು. ಸಾವಿಗೆ ಮನ ಮಾಡಬೇಡ. ಶೀಘ್ರದಲ್ಲಿಯೇ ಒಳ್ಳೆಯ ಕಾಲ ಬಂದೀತು&#8221;<br />
ಎಂದು ಕಿವಿಯಲ್ಲಿ ಗುರುವೇ ಹೇಳಿದಂತೆನಿಸಿತು..<br />
&#8216;ಈಸಬೇಕು, ಇದ್ದು ಜೈಸಬೇಕು&#8217; ಎಂಬ ದೃಢ ನಿಶ್ಚಯದೊಡನೆ </span><span style="font-weight: normal;"><strong>ಮನೋಭಾರವನ್ನು ಗುರುಪಾದದಲ್ಲಿರಿಸಿ,<br />
ಮೈಭಾರವನ್ನು ತನ್ನ ಪದಗಳಲ್ಲಿಯೇ ಇಟ್ಟು ಮುಂದುವರೆದನಾತ&#8230;!</strong></span></p>
<p><span style="font-weight: normal;">ಅನತಿದೂರದಲ್ಲೊಂದು ಕವಲುದಾರಿ..<br />
ಅವುಗಳಲ್ಲಿ ರಾಜನೊಂದು ದಾರಿಯಲ್ಲಿ ಮುಂದುವರಿದರೆ,<br />
ಆತನನ್ನು ಬೆಂಬತ್ತಿ ಬಂದ ಶತ್ರುಸೈನಿಕರು ಮತ್ತೊಂದು ದಾರಿಯಲ್ಲಿ ಸಾಗಿದರು&#8230;!<br />
ಹೀಗೆ ಶತ್ರುಗಳಿಂದ ಪಾರಾದ ರಾಜ ಗುಡ್ಡಗಾಡಿನ ಪ್ರದೇಶವೊಂದನ್ನು ಪ್ರವೇಶಿಸಿದ..</span></p>
<p>ಅಲ್ಲಿಯ ಜನರು ಅವನನ್ನು ಪ್ರೀತಿಸುವವರು..!<br />
ಆತನ ರಾಜ್ಯಭಾರದಲ್ಲಿ ಸುಖಪಟ್ಟವರು..ಶ್ರೇಯಸ್ಸು ಕಂಡವರು&#8230;<br />
<strong>ಎಂದೋ ಮಾಡಿದ ಒಳ್ಳೆಯ ಕೆಲಸ ಇಂದು ಫಲ ಕೊಡತೊಡಗಿತ್ತು..!</strong><br />
ಅವರ ನಡುವೆ ಆಶ್ರಯ ಪಡೆದ ರಾಜ ಮತ್ತೆ ಸೈನ್ಯ ಕಟ್ಟಿದ&#8230;ಸಮರಸಿದ್ಧತೆ ನಡೆಸಿದ&#8230;</p>
<p><span style="font-weight: normal;">ಒಂದು ಶುಭದಿನದಂದು..<br />
ಎಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದನೋ&#8230;ಎಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದನೋ..<br />
ಎಲ್ಲಿ ವೈಭವದಲ್ಲಿ ಮೆರೆದಿದ್ದನೋ&#8230;ಎಲ್ಲಿ ಸೋತು ಸುಣ್ಣವಾಗಿದ್ದನೋ&#8230;<br />
ಅಲ್ಲಿಗೆ &#8211; </span><span style="font-weight: normal;"><strong>ತನ್ನ ತಾಯ್ನೆಲಕ್ಕೆ</strong></span><span style="font-weight: normal;">- ತನ್ನವರೊಡನೆ ಯುದ್ದಯಾತ್ರೆಯನ್ನು ಕೈಗೊಂಡ..<br />
</span>ಯುದ್ಧ ನಡೆಯಿತು..<br />
ಈ ಬಾರಿ ವಿಜಯಲಕ್ಷ್ಮಿ ಆತನ ಕೈ ಬಿಡಲಿಲ್ಲ..<br />
ಕಳೆದುಹೋದದ್ದೆಲ್ಲವೂ ಮತ್ತೆ ಪ್ರಾಪ್ತವಾಗಿತ್ತು&#8230;!</p>
<p><span style="font-weight: normal;"> ರಾಜ್ಯವೇ ಸಂಭ್ರಮಿಸಿತು..!<br />
ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,<br />
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..<br />
<strong> ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!</strong></span></p>
<p><span style="font-weight: normal;">ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.<br />
ರಾಜ್ಯ-ರಾಜಧಾನಿ-ರಾಜಮಾರ್ಗಗಳು,<br />
ಜನಗಳು-ಜಯಕಾರಗಳು,<br />
ಆನೆ-ಅಂಬಾರಿಗಳು,<br />
ಅರಮನೆ-ಸಿಂಹಾಸನಗಳು..<br />
ಇವುಗಳೆಲ್ಲವೂ ಕರಗಿ&#8230;ಅಲ್ಲಿ<br />
<strong> ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು&#8230;!!</strong></span></p>
<h3 style="font-size: 1.17em;"><span style="font-weight: normal;"><strong><span style="color: #ff0000;">&#8220;ಇದು ಹೀಗೇ ಇರದು&#8221;</span></strong></span></h3>
<p><strong>ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ|</strong></p>
<p><strong>ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ||</strong></p>
<p><strong>ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು|</strong></p>
<p><strong>ಗಡುವಿರುವುದೆಲ್ಲಕಂ &#8211;ಮಂಕುತಿಮ್ಮ||</strong></p>
<p>ಸಪ್ತಸಾಗರಗಳು ಸುನಾಮಿಯಾಗಿ ಉಕ್ಕೇರಿ ಬರಲಿ ನಿನ್ನೆಡೆಗೆ,</p>
<p>ನಿನ್ನನ್ನು ಹೊತ್ತ ಭೂಮಂಡಲವೇ ಧೂಳೀಪಟಲವಾಗಿ ಮೇಲೇಳಲಿ ಮುಗಿಲಿನೆಡೆಗೆ,</p>
<p>ನೆಮ್ಮದಿ ಬಿಡಬೇಡ..ಗಾಬರಿಪಡಬೇಡ,</p>
<p>ಏಕೆಂದರೆ..<br />
<strong>&#8221; ಅದು ಹಾಗೇ ಇರದು &#8221;<br />
</strong>ಅದು ಹಾಗೇ ಇರದು ಏಕೆಂದರೆ, ಕಾಲ ಅದನ್ನು ಬಹುಕಾಲ ಹಾಗೇ ಇರಲು ಬಿಡದು..!<br />
ಉಕ್ಕೇರಿದ ಸಾಗರವು ಹಿಂದೆ ಸರಿಯಲೇಬೇಕು..<br />
ಮೇಲೆದ್ದ ಧೂಳೀಪಟಲ ಕೆಳಗಿಳಿಯಲೇಬೇಕು..!<br />
ಏಕೆಂದರೆ, ಎಲ್ಲದಕ್ಕೂ ಒಂದು ಗಡುವಿದೆ&#8230;</p>
<p><strong>&#8220;ಮಾ ಕುರು ಧನಜನ ಯೌವನಗರ್ವಂ|<br />
ಹರತಿ ನಿಮೇಷಾತ್ ಕಾಲಃ ಸರ್ವಮ್||</strong></p>
<p><strong> &#8211;  ಭಜಗೋವಿಂದಂನಲ್ಲಿ ಶ್ರೀ ಶಂಕರಾಚರ್ಯರು..</strong></p>
<p>ಧನ-ಜನ-ಯೌವನಗಳಿವೆಯೆಂದು ಗರ್ವ ತಾಳಬೇಡ ಏಕೆಂದರೆ, ಅದು ಹಾಗೇ ಇರದು&#8230;!<br />
ಧನ-ಜನ-ಯೌವನಗಳ ಉನ್ಮಾದದಲ್ಲಿ ಹಿಗ್ಗಿ ನೀನು ಕುಣಿಯುವಾಗ ಕಾಲನು ಕಾಲಕೆಳಗಿನ ನೆಲವನ್ನೇ ಕಸಿದಾನು..!</p>
<p>ನೆಮ್ಮದಿಯಿರುವುದು ಸಮತೆಯಲ್ಲಿಯೇ ಹೊರತು, ಹಿಗ್ಗು-ಕುಗ್ಗುಗಳ ವಿಷಮತೆಯಲ್ಲಲ್ಲ..<br />
&#8216;ಹಿಗ್ಗು ಬೇಕೇ ಬೇಕು, ಕುಗ್ಗು ಬೇಡವೇ ಬೇಡ&#8217; ಎನ್ನುವವರುಂಟು..<br />
ಮೇಲ್ನೋಟಕ್ಕೆ ಕತ್ತಲು-ಬೆಳಕಿನಂತೆ ಹಿಗ್ಗು-ಕುಗ್ಗುಗಳು ಪರಸ್ಪರ ವಿರೋಧಿಗಳಂತೆ ಕಂಡರೂ,<br />
ಬಗೆದು ನೋಡಿದರೆ, <strong>ಜೊತೆಗೂಡಿ ದೋಚುವ ಜೊಡಿಕಳ್ಳರೇ ಅವರು..!</strong></p>
<div id="attachment_4807" class="wp-caption alignright" style="width: 310px"><a href="http://hareraama.in/wp-content/uploads/2010/06/black_and_white_cats-1541.jpg"><img class="size-medium wp-image-4807" title="black and white" src="http://hareraama.in/wp-content/uploads/2010/06/black_and_white_cats-1541-300x249.jpg" alt="" width="300" height="249" /></a><p class="wp-caption-text">ಹಿಗ್ಗು-ಕುಗ್ಗುಗಳೆಂಬ ಹಾಲುಮನವನ್ನು ಕದಿಯುವ ಕಳ್ಳಬೆಕ್ಕುಗಳು..!</p></div>
<p>ಭೂಗೋಳದ ಏರಿಳಿತಗಳನ್ನೇ ನೋಡಿ.!<br />
ಏರಿದ್ದಲ್ಲಿ ಇಳಿತ -ಇಳಿತವಿದ್ದಲ್ಲಿ ಏರು..<br />
ಏರಿಳಿತಗಳು ಒಂದನ್ನು ಬಿಟ್ಟು ಇನ್ನೊಂದು ಇಲ್ಲವೇ ಇಲ್ಲ..<br />
ಹಾಗೆ ನೋಡಿದರೆ ಎಲ್ಲಾ ಏರುಗಳೂ ಇನ್ನೊಂದು ಕಡೆಯಿಂದ ನೋಡಿದರೆ ಇಳಿತಗಳೇ..!<br />
ಎಲ್ಲಾ ಇಳಿತಗಳೂ ವಿರುದ್ಧ ದಿಕ್ಕಿನಿಂದ ನೋಡಿದರೆ ಏರುಗಳೇ..!<br />
ಸಮಭೂಮಿ ಹಾಗಲ್ಲ..! ಅದು ಎಲ್ಲಿಂದ ನೋಡಿದರೂ ಸಮವೇ&#8230;!<br />
ಹಿಗ್ಗು ಬರುವಾಗ ತನ್ನ ಬೆನ್ನ ಹಿಂದೆ ಕುಗ್ಗನ್ನು ಅಡಗಿಸಿಟ್ಟುಕೊಂಡೇ ಬರುತ್ತದೆ..!<br />
ಹಾಗೆಯೇ ಕುಗ್ಗೂ ಕೂಡ&#8230;<br />
ಹಿಗ್ಗು ಬರುವಾಗ  ಹಮ್ಮನ್ನು ತರುತ್ತದೆ..ಹಮ್ಮು ಪತನಕ್ಕೆ ಕಾರಣವಾಗುತ್ತದೆ&#8230;<br />
ಕುಗ್ಗು ಆತ್ಮ್ಸಸ್ಥೈರ್ಯ ಕೆಡಿಸುತ್ತದೆ..<br />
ಕೆಲವೂಮ್ಮೆ ಆತ್ಮಹತ್ಯೆಗೂ ಕಾರಣವಾಗುತ್ತದೆ..<br />
ಒಂದು ಕಬ್ಬಿಣದ ಚೂರಿಯಾದರೆ, ಇನ್ನೊಂದು ಚಿನ್ನದ ಚೂರಿ&#8230;!<br />
ವಿಷಮತೆಯು ತರುವ ಹಿಗ್ಗು-ಕುಗ್ಗುಗಳೆಂಬ ಜೋಡಿಖಾಯಿಲೆಗೆ ಸಮತೆಯೇ ಸರಿಯಾದ ಮದ್ದು..!<br />
ತನ್ನೆರಡೂ ರೆಕ್ಕೆಗಳನ್ನೂ ಸಮವಾಗಿಟ್ಟುಕೊಂಡು ತಡೆಯಿಲ್ಲದೆ ಆಕಾಶದಂಗಳದಲ್ಲಿ ಹಾರಾಡುವ ,<br />
ಹಕ್ಕಿಯೇ ಸಮತೆಯ ಗುರು ನಮಗೆ..!<br />
ಮಳೆಗಾಲದಲ್ಲಿ ಉಕ್ಕಿಹರಿಯದ, ಬೇಸಿಗೆಯಲ್ಲಿ ಬತ್ತದ ಮಹಾಸಾಗರವೇ ಸಮತೆಯ ಗುರು ನಮಗೆ&#8230;.!<br />
ಸುಖ-ದುಃಖಗಳು ಬಂದೊದಗುವಾಗ (ಬಂದೆರಗುವಾಗ) ಪ್ರತಿಕ್ರಿಯಿಸದಿರಲು ನಾನೇನು ಕಲ್ಲುಬಂಡೆಯೇ ಎಂದು ಕೇಳಬೇಡಿ&#8230;!<br />
ಪ್ರತಿಕ್ರಿಯೆಗಳಿರಲಿ..<br />
ಆದರೆ ಅವುಗಳು ಮನದ ಮೇಲುಪದರದಲ್ಲಿದ್ದರೆ ಸಾಕು&#8230;<br />
ಗಂಭೀರ ಸಾಗರದಲ್ಲಿಯೂ ಮೇಲ್ಪದರದಲ್ಲಿಅಲೆಗಳಿವೆ..<br />
ಆದರೆ ಆಳಕ್ಕಿಳಿದಂತೆ ಶಾಂತ-ಶಾಂತ..ಅಚಲ-ಅಚಲ&#8230;!</p>
<p><strong>ಎರಡು ಕೋಣೆಗಳ ನೀಂ ಮಾಡು ಮನದಾಲಯದಿ|</strong></p>
<p><strong>ಹೊರಕೋಣೆಯಲಿ ಲೋಗರಾಟಗಳನಾಡು||</strong></p>
<p><strong>ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ|</strong></p>
<p><strong>ವರಯೋಗಸೂತ್ರವಿದು &#8211;ಮಂಕುತಿಮ್ಮ||</strong></p>
<p>ನಿನ್ನಂತರಂಗದ ಮೇಲ್ಪದರದಲ್ಲಿ ಹಿಗ್ಗು-ಕುಗ್ಗುಗಳ ದಾಳಿಯಲ್ಲಿ ಅದೆಷ್ಟ್ಟೇ ತರಂಗಗಳೇಳಲಿ ಚಿಂತೆಯಿಲ್ಲ,<br />
ಆದರೆ ಭಾವದಾಳದಲ್ಲಿ &#8216;ಇದು ಶಾಶ್ವತವಲ್ಲ&#8230;ಇದು ಶಾಶ್ವತವಲ್ಲ&#8217; ಎನ್ನುವ ಮಂತ್ರವನ್ನು ನಿನ್ನ ಜೀವವು ಸದಾಕಾಲವೂ ಜಪಿಸುತ್ತಿರಲಿ&#8230;!<br />
ಪರಿಸ್ಥಿತಿಗಳು ಬದಲಾಗುತ್ತಿದ್ದರೂ ಮನಸ್ಥಿತಿಯು ಬದಲಾಗದಂತೆ ಮಾಡುವ ಮಹಾಮಂತ್ರವದು&#8230;!</p>
<p>ಮನಃಪರಿಪಾಕದ ಫಲವಾಗಿ ನಿನ್ನೊಳಗುದಯಿಸಿ ಬರುವ ಸಮತೆಯ ಸ್ಥಿತಿಯೇ ಮೋಕ್ಷ..!</p>
<h3><span style="font-weight: normal;"><em><span style="color: #0000ff;">ಮುಕ್ತನಾಗು&#8230;ಮುಕ್ತಿಗಾಗಿ ದ್ವಂದ್ವಮುಕ್ತನಾಗು&#8230;!</span></em></span></p>
<p><span style="font-weight: normal;"><strong><span style="color: #ff0000;"> </span></strong></span></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong> </strong></p>
<p><strong></p>
<div id="_mcePaste"><span style="color: #0000ff; font-size: small;"><span style="font-weight: normal;"><span style="color: #ff0000; font-size: medium;"><strong></p>
<div style="text-align: center;"><span style="color: #c0c0c0;">|| ಹರೇರಾಮ ||</span></div>
<p></strong></p>
<p></span></span></span></div>
<p></strong></h3>
]]></content:encoded>
			<wfw:commentRss>http://hareraama.in/blog/%e0%b2%87%e0%b2%a6%e0%b3%81-%e0%b2%b9%e0%b3%80%e0%b2%97%e0%b3%87-%e0%b2%87%e0%b2%b0%e0%b2%a6%e0%b3%81/feed/</wfw:commentRss>
		<slash:comments>32</slash:comments>
		</item>
		<item>
		<title>ಮತ್ತೆ ಮತ್ತೆ ಬಂದೆ&#8230;&#8230;ತಂದೇ&#8230;.! ನೀ ಅಮೃತ ತಂದೆ&#8230;!</title>
		<link>http://hareraama.in/blog/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ac%e0%b2%b0%e0%b3%81%e0%b2%b5-%e0%b2%a4%e0%b2%82%e0%b2%a6%e0%b3%86-%e0%b2%85%e0%b2%ae%e0%b3%83/</link>
		<comments>http://hareraama.in/blog/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ac%e0%b2%b0%e0%b3%81%e0%b2%b5-%e0%b2%a4%e0%b2%82%e0%b2%a6%e0%b3%86-%e0%b2%85%e0%b2%ae%e0%b3%83/#comments</comments>
		<pubDate>Sat, 12 Jun 2010 23:00:02 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4580</guid>
		<description><![CDATA[
ನೀನೆಷ್ಟು ದಿನ ಬದುಕುವೆಯೋ ಅಷ್ಟು ಸಂಖ್ಯೆಯ  ಅಮೃತ ಕಲಶಗಳನ್ನು ಈಶ್ವರನು ನಿನಗೆಂದೇ ತೆಗೆದಿರಿಸಿದ್ದಾನೆ...!!
ಆ ಸಮಯದಲ್ಲಿ ತನ್ನ ಮಕ್ಕಳಿಗೆಲ್ಲ ಅಮೃತವನ್ನು ಹಂಚಬೇಕೆನ್ನುವ ಸಂಪ್ರೀತಿಯಿಂದ ಅಮೃತಕಲಶದೊಡನೆ ಈಶ್ವರನು ನಿನ್ನೆಡೆಗೆ ಬರುತ್ತಾನೆ....!!!
]]></description>
			<content:encoded><![CDATA[<div id="_mcePaste" style="text-align: center;">||ಹರೇರಾಮ||</div>
<div>ರಾತ್ರಿಯನ್ನು ಹದಿನೈದು ಭಾಗ ಮಾಡಿದರೆ ಹದಿನಾಲ್ಕನೆಯ ಭಾಗಕ್ಕೆ ಬ್ರಾಹ್ಮೀಮುಹೂರ್ತವೆಂದು ಹೆಸರು&#8230;</div>
<div>ಈಶ್ವರನ ಸಮಯವದು&#8230;.!!!</div>
<div id="_mcePaste">ಅಮೃತವೇಳೆಯದು&#8230;..!!!</div>
<div>ನೀನೆಷ್ಟು ದಿನ ಬದುಕುವೆಯೋ ಅಷ್ಟು ಸಂಖ್ಯೆಯ  ಅಮೃತ ಕಲಶಗಳನ್ನು ಈಶ್ವರನು ನಿನಗೆಂದೇ ತೆಗೆದಿರಿಸಿದ್ದಾನೆ&#8230;!!</div>
<div id="_mcePaste">ಆ ಸಮಯದಲ್ಲಿ ತನ್ನ ಮಕ್ಕಳಿಗೆಲ್ಲ ಅಮೃತವನ್ನು ಹಂಚಬೇಕೆನ್ನುವ ಸಂಪ್ರೀತಿಯಿಂದ ಅಮೃತಕಲಶದೊಡನೆ ಈಶ್ವರನು ನಿನ್ನೆಡೆಗೆ ಬರುತ್ತಾನೆ&#8230;.!!!</div>
<div id="_mcePaste">ನಿನ್ನಲ್ಲಿಯೋ&#8230; ಆ ಸಮಯದಲ್ಲಿ ಕುಂಭಕರ್ಣನ ಆವೇಶವೇ ಆಗಿರುತ್ತದೆ&#8230;.!!!</div>
<div id="_mcePaste">ನಿನಗಾಗಿ ತಂದ ಅಮೃತಕಲಶವನ್ನು ಕೊಡಲಾರದೆ ಈಶ್ವರನು ಹಿಂದಿರುಗಬೇಕಾಗುತ್ತದೆ&#8230;!!</div>
<div id="_mcePaste">ಹಾಗೆ ಹಿಂದಿರುಗುವ ಮುನ್ನ ಬಹಳ ವಾತ್ಸಲ್ಯದಿಂದ ನಿನ್ನ ತಲೆ ನೇವರಿಸಿ ಈಶ್ಚರನು ನುಡಿಯುತ್ತಾನೆ&#8230;!</div>
<div id="_mcePaste"><strong>&#8220;ಇರಲಿ ಮಗೂ&#8230;! ಏನೂ ಬೇಸರವಿಲ್ಲ,ನಾಳೆ ಪುನಃ ಬರುವೆ&#8230;&#8221;!!</strong></div>
<div><strong><br />
</strong></div>
<div><strong> </strong></div>
<div><strong> </strong></div>
<div id="_mcePaste">ಮರುದಿನವೂ ಅದೇ ಸಮಯದಲ್ಲಿ ಈಶ್ವರನು ಬಂದೇ ಬರುತ್ತಾನೆ&#8230; ನೀನೋ ನಿದ್ರಿಸುತ್ತಲೇ ಇರುತ್ತೀಯೆ&#8230;.!!!</div>
<div id="_mcePaste">ಈ ಘಟನೆ ದಿನಕ್ಕೊಮ್ಮೆಯಂತೆ ನಿನ್ನ ಜೀವನವಿಡೀ ಪುನರಾವರ್ತನೆಯಾಗುತ್ತದೆ&#8230;!</div>
<div id="_mcePaste">ಕೊನೆಗೊಮ್ಮೆ ಈಶ್ವರನ ಬದಲು ಯಮದೂತರು ಅಮೃತಕಲಶದ ಸ್ಥಾನದಲ್ಲಿ ಮೃತ್ಯುಪಾಶವನ್ನು ಹಿಡಿದು ನಿನ್ನೆಡೆಗೆ ಬರುತ್ತಾರೆ&#8230;!!</div>
<div id="_mcePaste">ಮತ್ತೆ ಅತ್ತೂ ಫಲವಿಲ್ಲ&#8230;&#8230;ಎಚ್ಚೆತ್ತುಕೊಳ್ಳಲೂ ಸಾಧ್ಯವಿಲ್ಲ&#8230;</div>
<p>ಏಕೆಂದರೆ&#8230;</p>
<div>ಆಗ ಬರುವುದು ಚಿರನಿದ್ರೆ&#8230;!!!<br />
<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span></div>
<div><span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;">(</span></span></span>ಸರಿ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ದಾಟಿದರೂ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಮಲಗದ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> ,</span></span></span>ಸೂರ್ಯ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಮೇಲೇರಿದರೂ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಮೇಲೇಳದ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಅಭಿನವ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಕುಂಭಕರ್ಣರಿಗೆ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಕಲಕತ್ತೆಯ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಉದ್ಯೋಗಪತಿ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ರಾಧೇಶ್ಯಾಮ್<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಅಗರ್ವಾಲ್<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಅವರು<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಹೇಳುವ<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;"> </span></span></span>ಮಾತುಗಳಿವು<span style="font: 28.2px 'Bank Gothic';"><span style="font-family: Georgia, 'Times New Roman', 'Bitstream Charter', Times, serif; font-size: small;"><span style="line-height: 19px;">&#8230;.!!)</span></span></span></div>
<div>
<p><span style="font-size: small;">ಜಗತ್ತು ಕಂಡ ಬಹುದೊಡ್ಡ ಆರೋಗ್ಯಶಾಸ್ತ್ರಜ್ಞರಾದ ವಾಗ್ಭಟರು ಅಷ್ಟಾಂಗ ಹೃದಯದಲ್ಲಿ ಆಡಿದ ಸಾವಿಲ್ಲದ, ಸರ್ವಕಾಲಪ್ರಸ್ತುತವಾದ ಮಾತುಗಳಿವು..<br />
</span><strong><br />
।।ಬ್ರಾಹ್ಮೇ ಮುಹೂರ್ತೇ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಮಾಯುಷಃ ॥</strong></p>
<p>ಸ್ವಸ್ಥ ಬದುಕನ್ನು ಬದುಕಬೇಕೆ&#8230;?<br />
ಪೂರ್ಣ ಬದುಕನ್ನು ಬದುಕಬೇಕೇ&#8230;?<br />
ಸತ್ತಂತೆ ನಿದ್ರಿಸಿರಬೇಡಿ ..ಅಮೃತವೇಳೆಯಲ್ಲಿ&#8230;.!<br />
ನಿತ್ಯಜೀವನವನ್ನು ಪ್ರಾರಂಭಿಸಿ ಆ ಹೊತ್ತಿನಲ್ಲಿ&#8230;!!</p>
</div>
<div><strong>ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು</strong></div>
<div><strong>ಸ್ವಾಮಿ ನಮ್ಮಯ್ಯ ರಥವೇರೀ&#8230;</strong></div>
<div><strong>ಸ್ವಾಮಿ ನಮ್ಮಯ್ಯ ರಥವೇರಿ ಬರುವಾಗ</strong></div>
<div><strong>ನಾವೆದ್ದು ಕೈಯಾ ಮುಗಿದೇವು&#8230;॥</strong></div>
<div><strong><br />
</strong></div>
<div>ಚರಾಚರ ಪ್ರಪಂಚಕ್ಕೆ ಚೈತನ್ಯದ ಧಾರೆಯನ್ನೆರೆಯುವ ಸೂರ್ಯದೇವನುದಯಿಸಿ ಬರುವಾಗ ನಾವೆದ್ದು ಸ್ವಾಗತಿಸಬೇಡವೇ&#8230;?</div>
<div>ವಿಶ್ವದ ಸ್ವಾಮಿಯೇ ನಮ್ಮ ಬಳಿಸಾರುವಾಗ ..</div>
<div>ಅಮೃತ ಕಿರಣಗಳ ದೃಷ್ಟಿಯನ್ನು ನಮ್ಮೆಡೆಗೆ ಬೀರುವಾಗ&#8230;</div>
<div>ನಮ್ಮ ಕಣ್ಣುಗಳು ನಿದ್ರಾಜಾಡ್ಯದಲ್ಲಿ ಮುಳುಗಿರಬೇಕೆ&#8230;?</div>
<div><strong>ಎಚ್ಚರದ ಸ್ವಾಮಿಗೆ ಮುಚ್ಚಿದ ಕಣ್ಣುಗಳ ಸ್ವಾಗತವೇ&#8230;!!</strong></div>
<div><strong><br />
</strong></div>
<div>ಗುರುಗಳು ಬರುವರೆಂದರೆ ಮುಂಚಿತವಾಗಿ ಮನೆಯನ್ನು ಶುಚಿಗೊಳಿಸಿ, ಸಿಂಗರಿಸಿ, ನಾವೂ ಶುಚೀರ್ಭೂತರಾಗಿ ಅವರನ್ನು ಇದಿರ್ಗೊಳ್ಳಬೇಕಲ್ಲವೇ&#8230;?</div>
<div>ವಿಶ್ವದ ಗುರುವಾದ ಪರಮಾತ್ಮನ ಪ್ರಕಟರೂಪವೇ ಆಗಿದ್ದಾನೆ ಸೂರ್ಯದೇವ&#8230;!!</div>
<div>ದಿನದ ಆರಂಭದಲ್ಲಿ ಕಿರಣಗಳ ರೂಪದಲ್ಲಿ ಆ ತೇಜೋರಾಶಿ ನಮ್ಮನ್ನು ಪ್ರವೇಶಿಸುವಾಗ&#8230;</div>
<div>ಸೌಮ್ಯ-ಸುಂದರ ರೂಪದಲ್ಲಿ ನಮಗೆ ದರ್ಶನವೀಯುವಾಗ &#8230;</div>
<div>ನಾವು ಹೇಗಿದ್ದರೆ ಚೆನ್ನ ಎಂದು ಚಿಂತಿಸಬೇಡವೇ&#8230;.!?</div>
<div>ಶರೀರದ ಮನೆಗೆ ಕಣ್ಣುಗಳೇ ಬಾಗಿಲುಗಳು&#8230;.ಮನವೇ ವಾಸದ ಕೋಣೆ&#8230;.!!</div>
<div>ಆ ಸಮಯದಲ್ಲಿ ನಾವು ಮಲಗಿದ್ದು, ಮಲಿನ ಮನೆ (ದೇಹ)-ಮನಗಳು&#8230;ಮುಚ್ಚಿದ ಬಾಗಿಲುಗಳು(ಕಣ್ಣುಗಳು)..ದೇವರನ್ನು  ಸ್ವಾಗತಿಸಬೇಕೇ&#8230;?</div>
<div>ಇನ್ನು ಆ ಸಮಯದಲ್ಲಿ ಕಣ್ಣು ಮುಚ್ಚಿರಬೇಕೆಂಬ ಹಠವೇ ಇದ್ದರೆ&#8230;..ಒಂದು ದಾರಿಯಿದೆ&#8230;!</div>
<div>ಅದು&#8230;.ಒಳಗಣ್ಣು ತೆರೆಯುವುದು&#8230;!</div>
<div>ಒಳಗಣ್ಣು ತೆರೆಯುವಾಗ ಕೆಲವೊಮ್ಮೆ ಹೊರಗಣ್ಣು ಮುಚ್ಚಬೇಕಾಗುತ್ತದೆ&#8230;</div>
<div>ಧ್ಯಾನತನ್ಮಯತೆಯಲ್ಲಿ ಆಗ ಹೊರಗಣ್ಣು ಮುಚ್ಚಿ ಕುಳಿತಿದ್ದರೆ&#8230;.</div>
<div>ಅಂತರಂಗದಲ್ಲಿ ಆತ್ಮಸೂರ್ಯನೇ ಉದಯವಾಗುವಂತಿದ್ದರೆ&#8230;.</div>
<div>ಅದು ಅಮೃತಘಳಿಗೆಯ ಸಂಪೂರ್ಣ ಸಾರ್ಥಕತೆ&#8230;!!</div>
<div>ನಮ್ಮ ಬಹಿರಂಗದ ಮೇಲೆಲ್ಲಾ ಬಾಹ್ಯಸೂರ್ಯನ ಬೆಳಕು ಬಿದ್ದು ಅಂತರಂಗವನ್ನು ಆತ್ಮಸೂರ್ಯ ಆವರಿಸಿದ್ದರೆ&#8230;</div>
<div>ಒಳಗೂ ಹೊರಗೂ ಬೆಳಕೇ ಬೆಳಕಾದರೆ&#8230;..</div>
<div>ಮತ್ತೆ ಕತ್ತಲೆಗೆ ನೆಲೆಯೆಲ್ಲಿ&#8230;!!?</div>
<div>
<div><strong>ಸರ್ವತ್ರ ಸೂರ್ಯ&#8230;&#8230;!!</strong></div>
<div><strong><br />
</strong></div>
<div>ಸೇವಕನಾದವನು ಸ್ವಾಮಿ ಮಲಗಿದ ಮೇಲೆಯೇ ಮಲಗಬೇಕು&#8230;!</div>
</div>
<div>ಸ್ವಾಮಿ ಏಳುವ ಸಾಕಷ್ತು ಮೊದಲೇ ಏಳಬೇಕು&#8230;.!</div>
<div>ಸೂರ್ಯನೆಂಬ ಸ್ವಾಮಿಯ ಬಗೆಗೆ ಸೇವಕರಾದ ನಾವು ನಡೆದುಕೊಳ್ಳಬೇಕಾದ ರೀತಿ ಇದಲ್ಲವೇ&#8230;.??</div>
<div>ತಾನು ಮಲಗಿದ ಮೇಲೆ ಮಲಗಿ, ತಾನೇಳುವ ಮುನ್ನವೇ ಏಳುವವರ ಬಗೆಗೆ &#8230;.</div>
<div>ಸ್ಥಾವರ-ಜಂಗಮಗಳ ಆತ್ಮವೇ ಆದ ಸೂರ್ಯದೇವನು ಸಂಪ್ರೀತನಾದಾನು&#8230;!!</div>
<p><strong>ಬೆಳೆಯುವ ಸಿರಿ ಮೊಳಕೆಯಲ್ಲಿ&#8230;.</strong></p>
<p>ನಮ್ಮ ಬದುಕು ವಿಷಘಳಿಗೆಯಲ್ಲಿ ಆರಂಭವಾಯಿತೋ, ಅಮೃತಘಳಿಗೆಅಲ್ಲಿ ಆರಂಭವಾಯಿತೋ ನಾವರಿಯೆವು..<br />
ಈಗ ನಮ್ಮ ಕೈಯಲ್ಲಿಲ್ಲದ ವಿಷಯವದು..<br />
ಆದರೆ ಈಗ ಪ್ರತಿನಿತ್ಯದ ಬದುಕನ್ನು ಅಮೃತವೇಳೆಯಲ್ಲಿಯೇ ಆರಂಭಿಸುವುದು ನಮ್ಮ ಕೈಯಲ್ಲೇ ಇದೆ.</p>
<p>ಕಳ್ಳಿಯ ಬೀಜದಿಂದ ಕಲ್ಪವೃಕ್ಷ ಹುಟ್ಟಲು ಸಾಧ್ಯವಿಲ್ಲ.<br />
ಬ್ರಾಹ್ಮೀಮುಹೂರ್ತವೆಂಬುದು ಸಂಪೂರ್ಣದಿನದ ಬೀಜವಿದ್ದಂತೆ.<br />
ಅದು ಜಾಡ್ಯಮಯವಾದರೆ ಮತ್ತೆ ನಮ್ಮದಿನ ಚೈತನ್ಯಮಯವಾಗುವುದಾದರೂ ಹೇಗೆ..?</p>
<p>ಆರಂಭವಾದುದು ತಾನೆ ಮಂದುವರಿದು ಮುಕ್ತಾಯದಲ್ಲಿ ಪೂರ್ಣತೆಯನ್ನು ಕಾಣಬೇಕು..?<br />
ನಮ್ಮ ಬದುಕು ಜಾಡ್ಯದಲ್ಲಿ ಆರಂಭವಾಗಿ, ಪರಮ ಜಾಡ್ಯದಲ್ಲಿ ಮುಂದುವರಿದು,<br />
ಪರಿಪೂರ್ಣ ಜಾಡ್ಯದಲ್ಲಿ ಮುಕ್ತಾಯವಾಗಬೇಕೆ..?</p>
<p>ಅಥವಾ, ಜೀವ ಜಾಗೃತಿಯಲ್ಲಿ ಆರಂಭವಾಗಿ, ದೇವದಿವ್ಯತೆಯಲ್ಲಿ ಮುಂದುವರೆದು,<br />
ಪರಮಾತ್ಮನ ಪರಿಪೂರ್ಣತೆಯಲ್ಲಿ ಪರ್ಯವಸನವಾಗಬೇಕೆ..?</p>
<p>ಆಯ್ಕೆ ನಮ್ಮದು&#8230;.ಫಲವೂ ನಮ್ಮದೇ&#8230;&#8230;.!!</p>
<p><strong>ಉಠ್ ಜಾಗ್ ಮುಸಾಫಿರ್ ಬೋರ್ ಭಯೀ,<br />
</strong><strong>ಅಬ್ ರೈನ್ ಕಹಾ ಜೋ ಸೋವತ್ ಹೈ|<br />
</strong><strong>ಜೋ ಸೋವತ್ ಹೈ ಸೋ ಖೋವತ್ ಹೈ,<br />
</strong><strong>ಜೋ ಜಾಗತ್ ಹೈ ವೋ ಪಾವತ್ ಹೈ&#8230;.||</strong></p>
<div>
<div><strong>ಟುಕ್ ನೀಂದ್ ಸೆ ಅಖಿಯಾ ಖೋಲ್ ಜರಾ,</strong></div>
<div><strong>ಔರ್ ಅಪನೇ ಪ್ರಭು ಸೆ ಧ್ಯಾನ್ ಲಗಾ|</strong></div>
<div><strong>ಯಹ್ ಪ್ರೀತ್ ಕರನ್ ಕೀ ರೀತ್ ನಹೀ, </strong></div>
<div><strong>ಪ್ರಭು ಜಾಗತ್ ಹೈ ತೂ ಸೋವತ್ ಹೈ&#8230;||</strong></div>
<div><strong><br />
</strong></div>
<div><strong> </strong><strong>ಜೋ ಕಲ್ ಕರ್ನಾ ಹೈ ವೋ ಆಜ್ ಕರ್ ಲೇ,</strong></div>
<div><strong><span style="font-weight: normal;"><strong> ಜೋ ಆಜ್ ಕರ್ನಾ ಹೈ ವೋ ಅಬ್ ಕರ್ ಲೇ||</strong></p>
<p></span></strong></p>
</div>
<div><strong></p>
<div>ರಾಮಬಾಣ-</div>
<div>
<div>ಬಾಳಿನಲ್ಲಿ ಏಳಬೇಕಾದರೆ ಬೇಗ ಏಳಬೇಕು..</div>
<div>ಬೇಗ ಏಳಲು ಸಾಧ್ಯವಾಗದಿದ್ದವರಿಗೆ ಇಲ್ಲಿದೆ ನೋಡಿ ಪರಿಹಾರ&#8230;.</div>
<div>ಬೇಗ ಮಲಗಬೇಕು&#8230;!</div>
</div>
<div>
</div>
<div>|| ಹರೇರಾಮ ||</div>
<p></strong></p>
</div>
</div>
<p><span style="color: #0000ff;"><strong><br />
</strong><strong> </strong><strong> </strong></span></p>
]]></content:encoded>
			<wfw:commentRss>http://hareraama.in/blog/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ac%e0%b2%b0%e0%b3%81%e0%b2%b5-%e0%b2%a4%e0%b2%82%e0%b2%a6%e0%b3%86-%e0%b2%85%e0%b2%ae%e0%b3%83/feed/</wfw:commentRss>
		<slash:comments>34</slash:comments>
		</item>
		<item>
		<title>ಜರೆಯದಿರು&#8230;ಜರೆಯ&#8230;!</title>
		<link>http://hareraama.in/blog/jareyadiru-jareya/</link>
		<comments>http://hareraama.in/blog/jareyadiru-jareya/#comments</comments>
		<pubDate>Sun, 06 Jun 2010 04:07:51 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[life style]]></category>

		<guid isPermaLink="false">http://hareraama.in/?p=4504</guid>
		<description><![CDATA[
ಸೋಮುವಿಗೆ ಆಕಸ್ಮಿಕವಾಗಿ ಯಮದೂತನ ಪರಿಚಯವಾಯಿತು,
ಮಾತನಾಡಿ ಮಾತನಾಡಿ ಅವರೀರ್ವರಲ್ಲಿ ಗಾಢವಾದ ಸ್ನೇಹ ಬೆಳೆಯಿತು..
ಬೀಳ್ಕೊಡುವ ಹೊತ್ತು ಬಂದಾಗ ಯಮದೂತ ಸೋಮುವಿಗೆ ಹೇಳಿದ..

'ಗೆಳೆಯಾ,ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳು'..

"ನನಗೆ ಸಾವೇ ಇಲ್ಲದಂತೆ ಮಾಡುವೆಯಾ?" - ಸೋಮು ಕೇಳಿದ..!

"ಅದಾಗದು,ನನ್ನ ಕೈಮೀರಿದ ವಿಷಯವದು. ಬೇರೇನಾದರೂ ಕೇಳು".

"ಹಾಗಿದ್ದರೆ ಕೊನೆಯಪಕ್ಷ ವರುಷಗಳ ಮೊದಲೇ ಸಾವಿನ ಮುನ್ಸೂಚನೆಯನ್ನಾದರೂ ನನಗೆ ನೀನು ಕೊಡಬೇಕು; ಮತ್ತು ಕರೆದುಕೊಂಡು ಹೋಗಲು ನೀನೇ ಬರಬೇಕು...!!!"

"ತಥಾಸ್ತು..."

ಯಮದೂತ ತನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ. . .]]></description>
			<content:encoded><![CDATA[<p style="text-align: center;"><strong>||ಹರೇರಾಮ||</strong></p>
<p>ಸೋಮುವಿಗೆ ಆಕಸ್ಮಿಕವಾಗಿ ಯಮದೂತನ ಪರಿಚಯವಾಯಿತು&#8230;.<br />
ಮಾತನಾಡಿ ಮಾತನಾಡಿ ಅವರೀರ್ವರಲ್ಲಿ ಗಾಢವಾದ ಸ್ನೇಹ ಬೆಳೆಯಿತು..<br />
ಬೀಳ್ಕೊಡುವ ಹೊತ್ತು ಬಂದಾಗ ಯಮದೂತ ಸೋಮುವಿಗೆ ಹೇಳಿದ..</p>
<p>&#8220;ಗೆಳೆಯಾ,ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳು&#8221;..</p>
<p>&#8220;ನನಗೆ ಸಾವೇ ಇಲ್ಲದಂತೆ ಮಾಡುವೆಯಾ?&#8221; &#8211; ಸೋಮು ಕೇಳಿದ..!</p>
<p>&#8220;ಅದಾಗದು,ನನ್ನ ಕೈಮೀರಿದ ವಿಷಯವದು. ಬೇರೇನಾದರೂ ಕೇಳು&#8221;.</p>
<p>&#8220;ಹಾಗಿದ್ದರೆ ಕೊನೆಯಪಕ್ಷ ವರುಷಗಳ ಮೊದಲೇ ಸಾವಿನ ಮುನ್ಸೂಚನೆಯನ್ನಾದರೂ ನನಗೆ ನೀನು ಕೊಡಬೇಕು;<br />
ಮತ್ತು ಕರೆದುಕೊಂಡು ಹೋಗಲು ನೀನೇ ಬರಬೇಕು&#8230;!!!&#8221;</p>
<p>&#8220;ತಥಾಸ್ತು&#8230;&#8221;<br />
ಯಮದೂತ ತನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ. . .</p>
<p>ಬಹಳ ಕಾಲ ಕಳೆಯಿತು.<br />
ಸೋಮು ಈಗ ಮುಪ್ಪಿನ ಮುದುಕ..!<br />
ಅದೊಂದು ದಿನ ಮತ್ತೆ ಯಮಲೋಕದ ಗೆಳೆಯನ ಆಗಮನವಾಯಿತು&#8230;.!!</p>
<p>&#8220;ಏನು ಬಂದೆ ಗೆಳೆಯಾ ಬಹಳ ಕಾಲದ ನಂತರ&#8230;?&#8221;</p>
<p>&#8220;ಮಾತು ಕೊಟ್ಟಿದ್ದೆನಲ್ಲವೇ? ನಿನಗೆ ಸಾವು ಸನ್ನಿಹಿತವಾಗಿದೆ. ಕರೆದೊಯ್ಯಲು ನಾನೇ ಬಂದೆ..&#8221;</p>
<p>ಸೋಮುವಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ&#8230;!!<br />
ವರುಷಗಳ ಮೊದಲೇ ತನಗೆ ಸಾವಿನ ಸೂಚನೆ ಸಿಗುವುದೆಂದೂ,ಮತ್ತುಳಿದ ಸಮಯದಲ್ಲಿ ಮತ್ತುಳಿದ ಆಸೆಗಳೆಲ್ಲವನ್ನೂ (ತಿನ್ನುವ,ತಿರುಗುವ,ಕುಡಿಯುವ,..ಇತ್ಯಾದಿ ಇತ್ಯಾದಿ . . .!) ಪೂರೈಸಿಕೊಳ್ಳಬಹುದೆಂದು ಆತ ಭಾವಿಸಿಕೊಂಡಿದ್ದ..<br />
ಆದರೀಗ ಏಕಾಏಕಿ ಸಾವೇ ಎದುರು ಬಂದು ನಿಂತಾಗ ಗೆಳೆಯನ ಮೇಲೆ ಆಕ್ರೋಶವೇ ಉಂಟಾಯಿತು&#8230;</p>
<p>&#8220;ಹೀಗೂ ಮಿತ್ರದ್ರೋಹ ಮಾಡುವುದುಂಟೆ..!? ಮೇಲಿನ ಲೋಕದವರೂ ಮಾತಿಗೆ ತಪ್ಪಬಹುದೆ?<br />
ಕೊಟ್ಟ ಮಾತಿನಂತೆ ಸಾವಿನ ಮುನ್ಸೂಚನೆಯನ್ನು ನನಗೆ ನೀನು ಕೊಡಬೇಕಿತ್ತಲ್ಲವೇ&#8230;?&#8221;</p>
<p>ಯಮದೂತನಿತ್ತ ಉತ್ತರ ಸೋಮುವಿನ ಮಾತ್ರವಲ್ಲ, ಸಕಲ ಮಾನವಕೋಟಿಯ ಕಣ್ತೆರೆಸುವ ಹಾಗಿತ್ತು&#8230;!!<br />
ಮುಪ್ಪಿನ ಬಗ್ಗೆ ಅಪೂರ್ವವಾದ ,ಅತ್ಯಾಶ್ಚರ್ಯಕರವಾದ ವಿವರಣೆಯೊಂದನ್ನು ಅದು ಒಳಗೊಂಡಿತ್ತು&#8230;</p>
<p>&#8220;ಗೆಳೆಯಾ, ಅದೆಷ್ಟೋ ಬಾರಿ ಸಾವಿನ ಸೂಚನೆಗಳನ್ನು ನಿನಗೆ ನಾನು ಕೊಟ್ಟೆ. ಆದರೆ ಅವುಗಳನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ.<br />
ಮಾತ್ರವಲ್ಲ, ಕೃತ್ರಿಮ ವಿಧಾನಗಳಿಂದ ಆ ಸೂಚನೆಗಳನ್ನೇ ಮರೆಮಾಡಿ ಸುಳ್ಳು ವಿಶ್ವಾಸದಲ್ಲಿ ನೀನು ಬದುಕಿದರೆ ನಾನೇನು ಮಾಡಲಿ..?</p>
<p>ಮೊಟ್ಟಮೊದಲು ನಾನು ನಿನ್ನ ಕೂದಲನ್ನು ಬಿಳಿಯಾಗಿಸಿದೆ &#8211; ಆದರೆ ಅವುಗಳಿಗೆ ನೀನು ಕರಿಬಣ್ಣ ಹಚ್ಚಿದೆ&#8230;!!</p>
<p>ಮತ್ತೆ ನಿನ್ನ ಕಣ್ಣಿನ ಶಕ್ತಿಯನ್ನು ಕುಂದಿಸಿದೆ &#8211; ಆದರೆ ನೀನು ಕನ್ನಡಕ ಹಾಕಿಕೊಂಡೆ&#8230;!!</p>
<p>ಆಮೇಲೆ ನಿನ್ನ ಶ್ರವಣಶಕ್ತಿಯನ್ನು ಶಿಥಿಲಗೊಳಿಸಿದೆ &#8211; ಆದರೆ ನೀನು ಶ್ರವಣಸಾಧನವನ್ನು ಬಳಸಿದೆಯೇ ಹೊರತು, ನನ್ನ ಸೂಚನೆಯನ್ನರಿಯಲಿಲ್ಲ..!!</p>
<p>ನಂತರ ನಿನ್ನ ಹಲ್ಲುಗಳನ್ನು ಬೀಳಿಸಿದೆ &#8211; ನಿನ್ನ ಬಾಯಲ್ಲಿ ಕೃತಕ ಹಲ್ಲುಗಳು ಪ್ರತ್ಯಕ್ಷವಾದವು&#8230;!!</p>
<p>ನಾ ನಿನ್ನ ಚರ್ಮವನ್ನು ಸುಕ್ಕಾಗಿಸಿ ಸೌಂದರ್ಯ ಕೆಡಿಸಿದೆ &#8211; ಆದರೆ ನೀನು &#8216;ಮೇಕಪ್&#8217; ಎಂಬ ಚಮತ್ಕಾರದ ಮೂಲಕ ನಾನಿನ್ನೂ ಯುವಕನೆಂಬ ಭ್ರಮೆಯನ್ನು ನೋಡುಗರಲ್ಲಿ ಮೂಡಿಸಲು ಯತ್ನಿಸಿದೆ&#8230;!!</p>
<p>ಸೂಚನೆಯ ಸಂದೇಶವನ್ನು ನೀನರಿಯದಿದ್ದರೆ ಅದಕ್ಕೆ ಬೇರೆ ಯಾರು ಹೊಣೆಯಾಗಲು ಸಾಧ್ಯ..?&#8221;</p>
<p>ಸೋಮುವಿನ ಬಳಿ ಉತ್ತರವಿರಲಿಲ್ಲ&#8230;!!<br />
ಸತ್ಯ ಅರ್ಥವಾಗಿತ್ತು&#8230;!<br />
ಆದರೆ ಸಮಯ ಮಿಂಚಿತ್ತು&#8230;.!!</p>
<p><strong>ನಮಗೆ ಇಷ್ಟವೇ ಇರದ, ಆದರೆ ಬದುಕಿನಲ್ಲಿ ಬಂದೇ ಬರುವ ಒಂದು ಅವಸ್ಥೆಯೆಂದರೆ ..ಮುಪ್ಪು..!!</strong><br />
<strong>ಮುಪ್ಪು ಕೆಡುಕಲ್ಲ.. ಮುಕ್ತಾಯದ ಮುನ್ಸೂಚನೆಯದು&#8230;!!</strong><br />
<strong>ಬದುಕು ಮೃತ್ಯುವಿನಲ್ಲಿ ಮುಕ್ತಾಯವಾಗಬಾರದು. . . .  ಮುಕ್ತಿಯಲ್ಲಿ ಮುಕ್ತಾಯವಾಗಬೇಕು&#8230;..!</strong><br />
&#8216;ಮುಕ್ತಿ ಸಿದ್ಧತೆಯ ಸಮಯ ಮೀರುತ್ತಿದೆ&#8217; ಎಂಬ ಎಚ್ಚರಿಕೆಯ ಘಂಟೆಯಿದು&#8230;.!!<br />
ಹಣವೆಂಬ ಸಂಪತ್ತು ಹೋದರೆ ಮತ್ತೆ ಬರಬಹುದು &#8211; ಆದರೆ ಸಮಯವೆಂಬ ಸಂಪತ್ತು ಮತ್ತೆ ಬರಲಾರದು&#8230;!!<br />
<strong><strong>ಮುಪ್ಪೆಂಬುದು ಈಶ್ವರನ ಭಾಷೆ</strong></strong>&#8230;</p>
<p>ರೈಲು ಪ್ರಯಾಣದಲ್ಲಿ ಇಳಿಯುವ ಸ್ಥಳ ಸಮೀಪಿಸುತ್ತ್ತಿದ್ದರೂ ಇನ್ನೂ ಮಲಗಿರುವ ಮಗುವನ್ನು ತಾಯಿ ತಟ್ಟಿ ಎಬ್ಬಿಸುವುದಿಲ್ಲವೇ..?<br />
ಜೀವನವಾಹನವಾದ ದೇಹವನ್ನೇ ನಾವು ಬಿಟ್ಟು ಹೋಗುವ ಸಮಯ ಹತ್ತಿರ ಬರುವಾಗ ಸಿದ್ಧತೆಗಳಿಗಾಗಿ ಈಶ್ವರನು ನಮ್ಮನ್ನು ಬಡಿದೆಬ್ಬಿಸುವ ರೀತಿಯದು&#8230;!</p>
<p>ರಾತ್ರಿ ಮಲಗುವಾಗ ಅಲಾರ್ಮ್ ಇಟ್ಟುಕೊಳ್ಳುವುದುಂಟು..<br />
ಅದು ಬೆಳಿಗ್ಗೆ ಕೂಗಿ ನಮ್ಮನ್ನೆಚ್ಚರಿಸುವಾಗ ಕಿರಿಕಿರಿಯೆನ್ನಿಸುವುದುಂಟು&#8230;<br />
ಅಲಾರ್ಮ್ ಕೆಟ್ಟದಲ್ಲ&#8230;!!<br />
&#8216;ನಿದ್ದೆಯ ಸಮಯ ಮುಗಿಯಿತು,ಎಚ್ಚರದ ಸಮಯ ಆರಂಭವಾಯಿತು&#8217; ಎನ್ನುವ ಸೂಚನೆಯದು..!!<br />
ಮುಪ್ಪೆಂಬುದು ನಮಗಾಗಿ ಈಶ್ವರನಿಟ್ಟ ಅಲಾರ್ಮ್&#8230;.!!</p>
<p>ಬಾಲ್ಯ ಆಟದಲ್ಲಿ ಮುಗಿಯಿತು&#8230;..<br />
ಯೌವನ ಹುಡುಗಾಟದಲ್ಲಿ&#8230;..<br />
ಇಲ್ಲಿ ನಿಜದ ಹುಡುಕಾಟಕ್ಕೆ ಎಡೆಯೆಲ್ಲಿ&#8230;?!!</p>
<p>ನಮ್ಮ ಮೈಮರೆವಿನ ನಿದ್ದೆಯನ್ನು ಕಳೆಯಲು&#8230;<br />
ಬದುಕಿನ ಸಾರ್ಥಕತೆಯ ಹುಡುಕಾಟಕ್ಕೆ ತೊಡಗಿಸಲು,<br />
ಪ್ರತಿಯೊಂದು ಜೀವಿಯ ಶರೀರದಲ್ಲಿಯೂ ದೇವರು ಮುಪ್ಪೆಂಬ ಎಚ್ಚರಿಕೆ ಗಂಟೆಯನ್ನು ಅಳವಡಿಸಿದ್ದಾನೆ&#8230;!!</p>
<p>ಮುಪ್ಪೆಂಬುದು ನಮ್ಮ ಕುರಿತು ಈಶ್ವರನಿಗಿರುವ ಕಾಳಜಿಯ ಪ್ರತೀಕ..!<br />
ಅಡುಗೆ ಮಾಡುವಾಗ ಎದ್ದು, ಕುಳಿತು, ಓಡಾಡಿ, ಗಡಿಬಿಡಿಯಲ್ಲಿ ದುಡಿಯುತ್ತಾನೆ ಮನುಷ್ಯ&#8230;!<br />
ಆದರೆ ಊಟ ಮಾಡುವಾಗ ಶಾಂತವಾಗಿ ಕುಳಿತು ಅಡುಗೆಯನ್ನು ಆಸ್ವಾದಿಸುತ್ತಾನೆ&#8230;!!<br />
ಬಾಲ್ಯ-ಯೌವನಗಳು ಜೀವನದ ಅಡುಗೆಯಿದ್ದಂತೆ. . !<br />
ಅಲ್ಲಿ ಗಡಿಬಿಡಿ ದುಡಿಮೆಗಳಿವೆ..!!<br />
ಮುಪ್ಪಿರುವುದು ಶಾಂತವಾಗಿ ಬದುಕನ್ನು ಆಸ್ವಾದಿಸಲು&#8230;!</p>
<p>ಮುಪ್ಪಿನಲ್ಲಿ ಕಣ್ಣು ಮಂಜಾಗುತ್ತದೆ&#8230;<br />
ಕಿವಿ ಮಂದವಾಗುತ್ತದೆ&#8230;<br />
ಹಲ್ಲುಗಳು ಶಿಥಿಲವಾಗುತ್ತವೆ&#8230;<br />
ದೇಹ ದುರ್ಬಲವಾಗುತ್ತದೆ&#8230;<br />
ಹೀಗೆ ಬಾಹ್ಯಶರೀರ ಮತ್ತು ಬಹಿರಿಂದ್ರಿಯಗಳೆಲ್ಲವೂ ಕ್ಷೀಣಿಸುತ್ತವೆ&#8230;<br />
ಆದರೆ ಅಂತರಂಗ ಕ್ಷೀಣಿಸುವುದಿಲ್ಲ&#8230;..!<br />
ಅದು ಅನುಭವದಿಂದ ಇನ್ನಷ್ಟು ಪಕ್ವವಾಗುತ್ತದೆ&#8230;!!<br />
ಅನಗತ್ಯ ವೇಗ ಕಳೆದು ಮನಸ್ಸಿಗೊಂದು ಸಮತೋಲನ ಬರಬೇಕಾದ ಕಾಲವದು&#8230;</p>
<p>ಬಗೆದು ನೋಡಿದರೆ ಇದರ ಅರ್ಥ &#8220;<strong><strong>ಅಂತರ್ಮುಖಿಯಾಗು</strong>&#8220;</strong> ಎಂದೇ ಅಲ್ಲವೇ&#8230;?<br />
ಹೊರಜಗತ್ತಿನೆಡೆಗೆ ಇಂದ್ರಿಯಗಳು ಹರಿಯುವುದು ಅಲ್ಲಿಯ ಸೌಂದರ್ಯವನ್ನು ಸವಿಯಲು &#8211; ಆನಂದವನ್ನು ಮೊಗೆಯಲು . . !!<br />
ಆದರೆ, ಅದಕ್ಕಿಂತ ಅದೆಷ್ಟೋ ಮಿಗಿಲಾದ ಆನಂದ-ಸೌಂದರ್ಯಗಳ ನಿಧಿ ನಮ್ಮೊಳಗೇ ಇದೆ!</p>
<p><strong>ಮಾಯೆಯ ಮೋಸವಿದು. . !!</strong></p>
<p>ಆನಂದ-ಸೌಂದರ್ಯಗಳ ತುಣುಕುಗಳನ್ನು ತೋರಿಸಿ ಹೊರಪ್ರಪಂಚದೆಡೆಗೆ ನಮ್ಮನ್ನು ಸೆಳೆದು, ನಮ್ಮೊಳಗೇ ಇರುವ ಆನಂದ ಸೌಂದರ್ಯಗಳ ರಾಶಿಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡುವುದು&#8230;!!</p>
<p><strong>ಈಶ್ವರನ ಕರುಣೆಯಿದು&#8230;!!</strong></p>
<p>ಮುಪ್ಪಿನ ಮೂಲಕ ನಮ್ಮ ಬಹಿರಿಂದ್ರಿಯಗಳೆಲ್ಲವನ್ನೂ ಶಿಥಿಲಗೊಳಿಸಿ,<br />
ಅಂತರ್ಮುಖಿಯಾಗಲು ಬೇಕಾದ ಸಕಲ ಸೌಲಭ್ಯಗಳನ್ನೂ ಕಲ್ಪಿಸುವುದು..?</p>
<p><strong> ನಮ್ಮ ಮೂರ್ಖತೆಯಿದು&#8230;.!!!</strong></p>
<p>ಸೂಚನೆಯ ಸಂದೇಶವನ್ನರಿಯದೆಯೇ &#8211; ಭ್ರಮೆಯಲ್ಲಿಯೇ ವಿಹರಿಸಲೆಳಸುವುದು. . . !!</p>
<p>ಜಾನಪದ ಪದ್ಯವೊಂದು ನೆನಪಾಗುತ್ತಿದೆ&#8230;..</p>
<p><em><span style="color: #0000ff;"><strong>&gt;ಮಕ್ಕಳಾಟಿಕೆ ಚಂದ&#8230;.<br />
ಮತ್ತೆ ಯೌವನ ಚಂದ&#8230;&#8230;<br />
ಮುಪ್ಪಿನಲಿ ಚಂದ ನರೆಗಡ್ಡ&#8230;..!!</strong></span></em></p>
<p><em> </em>ಈ ಪದ್ಯದಲ್ಲಿರುವಂತೆ ಯಾವುದೂ ಇಂದು ನಡೆಯುತ್ತಿಲ್ಲವೆನ್ನುವುದೇ ನಮ್ಮ ವಿಷಾದದ ವಿಷಯ&#8230;</p>
<p><span style="color: #0000ff;">ಮಕ್ಕಳಾಟಿಕೆ ಚಂದ&#8230;.</span></p>
<p>ಮಕ್ಕಳು ಸ್ವತಂತ್ರ ಹಕ್ಕಿಗಳಂತೆ,ತಾಯಿಯ ಹಾಲ್ಕುಡಿದ ಪುಟ್ಟ ಕರುಗಳಂತೆ ನಲಿಯುತ್ತಿದ್ದರೇ ಚೆನ್ನ&#8230;!<br />
ಆದರೆ ತಂದೆ-ತಾಯಂದಿರಿಗೆ ಮಕ್ಕಳು ಆಟವಾಡಿದರೆ ಕೋಪವೇ ಬರುತ್ತದೆ&#8230;!!<br />
ಮಕ್ಕಳು ಗಂಭೀರವಾಗಿರಬೇಕೆಂದೂ,ದೊಡ್ಡವರ ಹಾಗೆ ಜವಾಬ್ಧಾರಿಯುತರಾಗಿರಬೇಕೆಂದೂ, ದಿನವಿಡೀ ಓದಬೇಕೆಂದೂ ಕಂಡಕಂಡ ದೇವರಲ್ಲಿ ಹರಕೆ ಹೊರುತ್ತಾರೆ&#8230;!!<br />
ಆದರೆ ಒಮ್ಮೆ ಕಳೆದುಹೋದ ಆಟದ ವಯಸ್ಸು ಮತ್ತೆ ಬರುವುದೇ&#8230;?<br />
ಮಕ್ಕಳು ಮುದುಕರಾದ ಮೇಲೆ ಆಟವಾಡಬೇಕೆ..? <strong>(ಅಲ್ಲಿಯವರೆಗೂ ಆಟವಾಡಲು ಬಿಡುವೆಲ್ಲಿ&#8230;?!!)</strong></p>
<p><span style="color: #0000ff;"><strong>ಮತ್ತೆ ಯೌವನ ಚಂದ&#8230;</strong></span></p>
<p>ಯೌವನ ಚಂದ&#8230;.ಆದರೆ ಅದು ಬರುವಾಗ ಬರಬೇಕು&#8230;!<br />
ತಿನ್ನುವ ಅನ್ನವೇ ನಮ್ಮ ಮನಸ್ಸಾಗುತ್ತದೆ..ನಮ್ಮ ಸ್ವಭಾವವಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು&#8230;<br />
ನಮ್ಮ ಆಹಾರದಲ್ಲಿ ಹೈಬ್ರೀಡಿನದ್ದೇ ಸಿಂಹಪಾಲು&#8230;!!<br />
ಹೈಬ್ರೀಡೆಂದರೆ ಅನೈಸರ್ಗಿಕವಾಗಿ &#8211; <strong>ಸಮಯಕ್ಕೆ ಮೊದಲೇ ಬರುವ ಬೆಳೆ</strong>ಯಲ್ಲವೇ&#8230;?<br />
ಅದನ್ನೇ ತಿಂದರೆ ಮತ್ತೇನಾಗಬೇಕು&#8230;?<br />
ಜೊತೆಗೆ ವಾತಾವರಣದ ಕುಮ್ಮಕ್ಕು ಬೇರೆ&#8230;.!!<br />
ಹೀಗಾಗಿ&#8230;&#8230;.<br />
<strong>ಐದು</strong> ವರ್ಷಕ್ಕೇ ಯೌವನ &#8230;&#8230;.<br />
<strong> ಇಪ್ಪತ್ತೈದು </strong>ವರ್ಷಕ್ಕೇ ವೃದ್ಧಾಪ್ಯ&#8230;.<br />
<strong>ಮುವತ್ತೈದು</strong> ವರ್ಷಕ್ಕೇ ಸತ್ತು, ಮತ್ತೆ ಜೀವನವಿಡೀ ಜೀವಚ್ಛವವಾಗಿ ಬದುಕಿರುತ್ತಾರೆ&#8230;.!!!<br />
<strong>ಅವಸ್ಥೆ ಯಾವುದಾದರೂ &#8211; ಬರುವ ಸಮಯಕ್ಕೆ ಬಂದರೆ; ಇರುವ ಹಾಗೇ ಇದ್ದರೇ &#8211; ಚಂದ ಅಲ್ಲವೇ&#8230;.?</strong></p>
<p><span style="color: #0000ff;"><strong>ಮುಪ್ಪಿನಲಿ ಚಂದ ನರೆ ಗಡ್ಡ</strong></span><span style="color: #0000ff;">&#8230;.</span><br />
ಕಾಯಿ ಹಣ್ಣಾಗುವಾಗ ಬಣ್ಣ ಬೇರಾಗುತ್ತದೆ&#8230;<br />
ಭಿನ್ನ ಪರಿಮಳ ಬರುತ್ತದೆ&#8230;<br />
ಮೃದುತ್ವವೇರ್ಪಡುತ್ತದೆ&#8230;.<br />
ಅಂತರಂಗ ಮಧುರವಾಗುತ್ತದೆ&#8230;!!!</p>
<p>ಇದೆಲ್ಲವೂ ಪಕ್ವತೆಯ ಲಕ್ಷಣಗಳು&#8230;.<br />
ಮನೆಗೆ ತರುವಾಗ, ಸವಿದು ತಿನ್ನುವಾಗ, ಕಾಯಿಗಳನ್ನು ಪಕ್ಕಕ್ಕಿಟ್ಟು ಹಣ್ಣುಗಳನ್ನೇ ಇಷ್ಟಪಟ್ಟು ಆರಿಸುವ ನಮಗೆ&#8230;<br />
ನಮ್ಮದೇ ಜೀವನದಲ್ಲಿ ಪಕ್ವತೆ ಏರ್ಪಡುವಾಗ ಅದೇಕೆ ಜಿಗುಪ್ಸೆಯೋ&#8230;..?!!<br />
ಮನುಷ್ಯನೂ ಹಣ್ಣಾಗುವಾಗ ಆತನ &#8220;<span style="color: #ff00ff;">ಬಣ್ಣ</span>&#8220;ಬೇರಾಗಬೇಕು..!!<br />
ಅನುಭವದ ಸುಗಂಧ ಸೂಸಬೇಕು&#8230;!!</p>
<p>ಅಂತರಂಗ ಮೃದು-ಮಧುರವಾಗಬೇಕು&#8230;.!!!<br />
ಅದೇಕೆ ಮುಚ್ಚಬೇಕೋ ಮುಪ್ಪನ್ನು&#8230;?<br />
ಕಪ್ಪೆಂದರೆ ತಮೋಗುಣ&#8230;ಬಿಳಿ ಎಂದರೆ ಸತ್ವಗುಣ&#8230;.<br />
ಮಸ್ತಿಷ್ಕ ತಮಸ್ಸಿನಿಂದ ಸತ್ವದೆಡೆಗೆ ಸಾಗಬೇಕಿರುವುದನ್ನು ತೋರಿಸಲು, ಕೂದಲಿನ ಕಪ್ಪು ಹೋಗಿ ಬಿಳಿ ಬರುತ್ತದೆ . . .!!<br />
ಬಿಳಿ ತಲೆಗೆ ಕರಿವಿಷ ಹಾಕಿ ಕಪ್ಪು ಮಾಡಿದರೆ&#8230;..ಆಗುವ ಲಾಭ ಬರಿಯ ಭ್ರಮೆ ಮಾತ್ರ . . .!<br />
ತಲೆಯೊಳಗಿಳಿಯುವುದು ವಿಷ &#8211; ಆತ್ಮಕ್ಕಾಗುವುದು ವಂಚನೆ&#8230;<br />
ನೋಡುಗನಲ್ಲುಂಟಾಗುವುದು ಭ್ರಮೆ&#8230;!!!</p>
<p>ಸಹಜತೆಯಷ್ಟು ಚಂದ ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ&#8230;.!!</p>
<p><strong>ಸೃಷ್ಟಿಯನ್ನು ನೋಡಿ&#8230;.!!</strong></p>
<p>ಸೂರ್ಯನ ಬೆಳಕು . .<br />
ಚಂದ್ರನ ತಂಪು . . .<br />
ಅಗ್ನಿಯ ಬಿಸಿ . . .<br />
ಆಕಾಶದ ಅನಂತತೆ. . .<br />
ಹಿಮಾಲಯದ ಔನ್ನತ್ಯ . . .<br />
ಸಾಗರದ ಆಳ&#8230;&#8230;<br />
ಇವುಗಳೆಲ್ಲವೂ ಸಹಜತೆಯ ಸೊಗಸುಗಳು&#8230;.!!!!</p>
<p><strong>ಕಾಡು ನೋಡಿ&#8230;.!!</strong></p>
<p>ಕೋತಿಯ ಬಾಲ&#8230;<br />
ಆನೆಯ ಸೊಂಡಿಲು&#8230;<br />
ಘೇಂಡಾಮೃಗದ ಕೊಂಬು&#8230;<br />
ಸಿಂಹದ ಕೇಸರ&#8230;..<br />
ನವಿಲಿನ ಗರಿ&#8230;&#8230;<br />
ಹಾವಿನ ಹೆಡೆ&#8230;&#8230;.<br />
ಇವೆಲ್ಲವೂ ಸಹಜತೆಯ ಸೊಗಸುಗಳು&#8230;.!!!</p>
<p><strong>ನಾಡು ನೋಡಿದರೆ&#8230;&#8230;.?</strong></p>
<p><strong>&#8230;&#8230;.!?<br />
&#8230;&#8230; !?<br />
&#8230;&#8230;!?<br />
&#8230;..!?</strong></p>
<p><span style="color: #000000;"><strong>ಮೆರೆಯೋಣ ಸಹಜತೆಯ&#8230;..<br />
ಮರೆಯೋಣ ಕೃತಕತೆಯ&#8230;..<br />
</strong></span><strong>ಅರಿಯೋಣ &#8220;ಜರೆ&#8221;ಯ ಸಾರ-ಸಂದೇಶಗಳ&#8230;.<br />
ಕಳೆಯಿತೈ ಬಹುಕಾಲ&#8230;<br />
ಕದ ತಟ್ಟುತಿಹ &#8220;ಕಾಲ&#8221;&#8230;.!<br />
ಕಳವಳವ ಬಿಟ್ಟೇಳು&#8230;<br />
ನಡೆ ಸತ್ಯದೆಡೆಗೆ&#8230;.!!</strong></p>
<p style="text-align: center;"><strong>||ಹರೇರಾಮ||</strong></p>
]]></content:encoded>
			<wfw:commentRss>http://hareraama.in/blog/jareyadiru-jareya/feed/</wfw:commentRss>
		<slash:comments>14</slash:comments>
		</item>
		<item>
		<title>ದಕ್ಕಿತ್ತೋ ದಕ್ಕಿತ್ತು&#8230;.!</title>
		<link>http://hareraama.in/blog/%e0%b2%a6%e0%b2%95%e0%b3%8d%e0%b2%95%e0%b2%bf%e0%b2%a4%e0%b3%8d%e0%b2%a4%e0%b3%8b-%e0%b2%a6%e0%b2%95%e0%b3%8d%e0%b2%95%e0%b2%bf%e0%b2%a4%e0%b3%8d%e0%b2%a4%e0%b3%81/</link>
		<comments>http://hareraama.in/blog/%e0%b2%a6%e0%b2%95%e0%b3%8d%e0%b2%95%e0%b2%bf%e0%b2%a4%e0%b3%8d%e0%b2%a4%e0%b3%8b-%e0%b2%a6%e0%b2%95%e0%b3%8d%e0%b2%95%e0%b2%bf%e0%b2%a4%e0%b3%8d%e0%b2%a4%e0%b3%81/#comments</comments>
		<pubDate>Sun, 30 May 2010 05:42:17 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4432</guid>
		<description><![CDATA[ಉತ್ತರ ಕನ್ನಡದ ಒಂದು ಹಳ್ಳಿ..
ಆ ರಾತ್ರಿ ಯಕ್ಷಗಾನ ನಡೆಯಬೇಕಿತ್ತಲ್ಲಿ..
ಪ್ರಸಂಗ ಗದಾಯುದ್ಧ....
ಒಂಭತ್ತೂವರೆಗೆ ಪ್ರಾರಂಭವಾಗಬೇಕಿದ್ದ ಆಟ ಹನ್ನೆರಡಾದರೂ ಪ್ರಾರಂಭವಾಗಲಿಲ್ಲ..!!
ಕಾರಣ - ಐವರು ಕಲಾವಿದರು ದುರ್ಯೋಧನನ ವೇಷ ಧರಿಸಿ ಕುಳಿತದ್ದು..!!
ಆ ಪ್ರಸಂಗದಲ್ಲಿ ದುರ್ಯೋಧನ,ಕೃಷ್ಣ,ಭೀಮ, ಸಂಜಯ ಮೊದಲಾದ ಹಲವಾರು ಪಾತ್ರಗಳಿವೆ..
ಅದರಲ್ಲಿ ದುರ್ಯೋಧನನ ಪಾತ್ರವೇ ಮುಖ್ಯ ಪಾತ್ರ, ಅದನ್ನು ಮಾಡಬೇಕಾದವನು ನಾನೇ ಎಂಬ ಭ್ರಮೆ ಅವರನ್ನಾವರಿಸಿತ್ತು…!

ಎಲ್ಲಕಲಾವಿದರೂ ಒಂದೇ ಪಾತ್ರವನ್ನು ಮಾಡಹೊರಟರೆ ಆಟ ನಡೆಯುವುದಾದರೂ ಹೇಗೆ..?
ಎಲ್ಲ ಶಿಲೆಗಳೂ ಪೂಜೆಗೊಳ್ಳುವ ಆಧಾರಶಿಲೆಯೇ ಆಗ ಹೊರಟರೆ ಕಟ್ಟಡ ಕಟ್ಟುವುದೆಲ್ಲಿಂದ..?
]]></description>
			<content:encoded><![CDATA[<p style="text-align: center;">|| ಹರೇರಾಮ ||</p>
<p><strong>ಹಾಸ್ಯಗಾರ</strong> ಃ ಆಹೋಹೋ&#8230;.<br />
ಮತ್ತು ಹೊಸನಗರದಲ್ಲಿ ವಾಸವಾಗಿರುವ ಶ್ರೀ ಸೀತಾರಾಮಚಂದ್ರ ದೇವರು…!<br />
<strong>ಭಾಗವತರು</strong> ಃ<br />
ಮಾತಾರಾಮೋ ಮತ್ಪಿತಾ ರಾಮಚಂದ್ರಃ ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ….!!<br />
<strong>ಹಾಸ್ಯಗಾರ</strong> ಃ ಶಾಭಾಸ್..!<br />
<strong>ಭಾಗವತರು ಃ</strong><br />
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ ನಾನ್ಯಂ ಜಾನೇ ನೈವ ಜಾನೇ ನ ಜಾನೆ…!!<br />
<strong>ಹಾಸ್ಯಗಾರ</strong> ಃ ಭಲಾ..!<br />
<strong>ಭಾಗವತರು</strong> :<br />
ನಂಬಿರುವ ಭಕ್ತರಿಗೆ ಪ್ರೀತಿಯಿಂದ ಕೊಟ್ಟ ಶ್ರೀಮುಡಿಗಂಧ ಪ್ರಸಾದ&#8230; ಶ್ರೀ ರಾಮಾರ್ಪಣಮಸ್ತು |<br />
<strong>ಹಾಸ್ಯಗಾರ</strong> ಃ ದಕ್ಕಿತ್ತೋ ದಕ್ಕಿತ್ತು&#8230;!!</p>
<p>ಸ್ಥಳ ಃ ಶ್ರೀರಾಮಚಂದ್ರಾಪುರ ಮಠ ಪೆರಾಜೆ- ಮಾಣಿ&#8230;</p>
<div id="attachment_4433" class="wp-caption alignright" style="width: 190px"><a href="http://hareraama.in/wp-content/uploads/2010/05/DSC_7027.jpg"><img class="size-medium wp-image-4433 " title="ಶ್ರೀಮುಡಿ ಗಂಧಪ್ರಸಾದ" src="http://hareraama.in/wp-content/uploads/2010/05/DSC_7027-300x198.jpg" alt="ಶ್ರೀಮುಡಿ ಗಂಧಪ್ರಸಾದ" width="180" height="119" /></a><p class="wp-caption-text">ಶ್ರೀಮುಡಿ ಗಂಧಪ್ರಸಾದ</p></div>
<p>ಸಮಯ : ವಿಕೃತಿ ಸಂವತ್ಸರದ ವೈಶಾಖ ಶುದ್ಧ ತ್ರಯೋದಶಿ ರಾತ್ರಿ,,,<br />
ಸಂದರ್ಭ : ಹೊಸನಗರದ ಶ್ರೀರಾಮಚಂದ್ರ ಕೃಪಾಪೋಶಿತ ಯಕ್ಷಗಾನ ಮೇಳದ ವರ್ಷದ ತಿರುಗಾಟದ ಮುಕ್ತಾಯದ ನಿಮಿತ್ತ ಮಾಣಿ ಮಠದಲ್ಲಿ ಸೇವೆಯಾಟ&#8230;<br />
ಸಾಯಂಕಾಲ ನಾವು ಮಾಡುವ ಶ್ರೀರಾಮ ಪೂಜೆಯ ನಂತರ ದೇವರ ಮುಂದೆ ಕೊನೆಯ ಬಾರಿಗೆ ಕುಣಿದು,<br />
ಮತ್ತೆ ಗೆಜ್ಜೆಬಿಚ್ಚಿ ದೇವರಿಗೊಪ್ಪಿಸಿ ಪ್ರಸಾದದೊಂದಿಗೆ ಮರಳಿ ಪಡೆಯುವಾಗ ಭಾಗವತ ಮತ್ತು ಹಾಸ್ಯಗಾರರ ನಡುವೆ ನಡೆಯುವ ನುಡಿಗಟ್ಟುಗಳ ರೂಪದ ಸಾಂಪ್ರದಾಯಿಕ ಸಂಭಾಷಣೆ..</p>
<p>ಯೋಗಾಯೋಗವೆಂದರೆ ಅದು ನಮ್ಮ ಪೀಠಾರೋಹಣ ದಿನವೂ ಆಗಿತ್ತು…..!!<br />
ತನ್ನಿಮಿತ್ತವಾಗಿ ಬೇರಾವ ಕಾರ್ಯಕ್ರಮಗಳೂ ಇರಲಿಲ್ಲ..<br />
ಮೇಳದ ವರ್ಷದ ತಿರುಗಾಟದ ಮುಕ್ತಾಯ ಕಾರ್ಯಕ್ರಮವೇ ಪೀಠಾರೋಹಣ ವಾರ್ಷಿಕೋತ್ಸವದ ಆಚರಣೆಯಾಗಿತ್ತು.!<br />
ಮಠವೆಂಬ ಮೇಳದ ತಿರುಗಾಟದ ಪ್ರಾರಂಭದ ದಿನವೇ ಮಠದ ಮೇಳದ ವಾರ್ಷಿಕ ತಿರುಗಾಟದ ಮುಕ್ತಾಯದ ದಿನವಾಗಿ ಬರಬೇಕೇ..?</p>
<p>ಎತ್ತಣಿಂದೆತ್ತಣ ಸಂಬಂಧವಿದು..!?<br />
ಒಂದು ಮಠದಲ್ಲಿ ಪೀಠಾರೋಹಣದ ವಾರ್ಷಿಕೋತ್ಸವವಾಗುವುದಕ್ಕೂ, ಒಂದು ಮೇಳದ ತಿರುಗಾಟ ಮುಕ್ತಾಯವಾಗುವುದಕ್ಕೂ ಎಲ್ಲಿ ಸಮನ್ವಯ..!!?</p>
<p>ಇದು ತಾಯಿ-ಮಕ್ಕಳ ಸಂಬಂಧ..!<br />
ರಾಮಚಂದ್ರಾಪುರ ಮಠ ತಾಯಿಯಾದರೆ, ಯಕ್ಷಗಾನ ಮೇಳ ಅದರ ಮಗು..!<br />
ತಾಯಿಯಂತೆ ಮಗು &#8211; ಮಗುವಿನಂತೆ ತಾಯಿ&#8230;!!<br />
ಎರಡೂ ಮೇಳಗಳೇ..!<br />
ತಿರುಗಾಟ ಎರಡೂ ಕಡೆ ಸಮಾನ..!<br />
ಆದರೆ, <strong>ತಿರುಗಾಟದ ಮುಕ್ತಾಯವೊಂದು..<br />
ಮುಕ್ತಾಯವೇ ಇಲ್ಲದ ತಿರುಗಾಟವಿನ್ನೊಂದು…!!</strong></p>
<p><strong> </strong><br />
ಉದ್ದೇಶವೂ ಒಂದೇ..!<br />
ನೊಂದ ಜೀವಗಳ ನೋವು ನಿವಾರಿಸುವುದು&#8230;.<br />
ಆನಂದ ಹಂಚುವುದು..!<br />
ಬದುಕಿಗೊಂದು ಸಂದೇಶ ನೀಡುವುದು&#8230;.<br />
ಯಕ್ಷಗಾನವನ್ನು ವೀಕ್ಷಿಸುವ ಪ್ರೇಕ್ಷಕ ಕ್ಷಣ ಹೊತ್ತಾದರೂ ತನ್ನ ನೋವುಗಳನ್ನು ಮರೆಯುತ್ತಾನೆ&#8230;<br />
ಆನಂದವನ್ನನುಭವಿಸುತ್ತಾನೆ..!<br />
ರಂಗವು ಅವನ  ಅಂತರಂಗಕ್ಕೆ ಅನೇಕ ಜೀವನ ಸಂದೇಶಗಳನ್ನು ರವಾನಿಸುತ್ತಿರುತ್ತದೆ..!</p>
<p>ಮಠವೆಂಬ ಮೇಳವೂ ಹೀಗೆಯೇ…..!</p>
<div id="attachment_4442" class="wp-caption alignright" style="width: 310px"><a href="http://hareraama.in/wp-content/uploads/2010/05/DSC_6837.jpg"><img class="size-medium wp-image-4442" title="ಮಠ-ಮೇಳ" src="http://hareraama.in/wp-content/uploads/2010/05/DSC_6837-300x198.jpg" alt="ಮಠ-ಮೇಳ" width="300" height="198" /></a><p class="wp-caption-text">ಮಠ-ಮೇಳ</p></div>
<p>ಮಠವನ್ನು ಪ್ರತಿನಿಧಿಸುವ ಗುರು ನಿರಂತರವಾಗಿ ಸಂಚರಿಸುತ್ತಿರಬೇಕು..<br />
(ಮಳೆಗಾಲದಲ್ಲಿ ಎರಡೂ ಕಡೆ ತಿರುಗಾಟವಿಲ್ಲ..! )<br />
ಮಳೆಯ ಹಾಗೆ ತಾನು ಸಂಚರಿಸಿದಲ್ಲೆಲ್ಲಾ  ಬದುಕಿನ ಬೇಗೆ ಕಳೆಯಬೇಕು..<br />
ಪಾಪದ ಕೊಳೆ ತೊಳೆಯಬೇಕು…!<br />
ಸಂಸ್ಕೃತಿಯ ಬೆಳೆ ಬೆಳೆಯ ಬೇಕು..<br />
ದೀಪದ ಹಾಗೆ ತಾನು ಸಂಚರಿಸುವಲ್ಲೆಲ್ಲಾ ಜ್ಞಾನಾನಂದಗಳ ಬೆಳಕು ಚೆಲ್ಲಬೇಕು..!<br />
<strong>ಜ್ಞಾನ(ಶಂಕರಾಚಾರ್ಯರು)ವೆಂಬುದು ಬದುಕಿನ ಹಾದಿಯ ಬೆಳಕು..!!<br />
ಆನಂದ(ಶ್ರೀರಾಮ)ವೆಂಬುದು ಬದುಕನ್ನು ಮುನ್ನೆಡೆಸುವ ಶಕ್ತಿ..!!</strong></p>
<p>ಮೇಳವೆಂದರೇ ಹೊಂದಾಣಿಕೆ..!<br />
ಭಾಗವತರ ಕಂಠದಿಂದ ಹೊರಹೊಮ್ಮುವ ಪದ್ಯಕ್ಕೂ, ಕೈಗಳಲ್ಲಿ ಧ್ವನಿಗೈಯುವ ತಾಳಕ್ಕೂ ಹೊಂದಾಣಿಕೆ ಬೇಕು..!<br />
ತಾಳವು ಮದ್ದಳೆಯಲ್ಲಿ ಧಿಮಿಧಿಮಿಯೆಂದು ಪ್ರತಿಧ್ವನಿಸಬೇಕು…!<br />
ಚಂಡೆ &#8211; ಮೃದಂಗಗಳು ಪರಸ್ಪರ ಮಾತನಾಡಿಕೊಳ್ಳಬೇಕು..!<br />
ಹಿಮ್ಮೇಳ &#8211; ಮುಮ್ಮೇಳಗಳಲ್ಲಿ &#8216;ಮೇಳ&#8217; ಬೇಕು..!<br />
ಪಾತ್ರಗಳು ಒಂದನ್ನೊಂದು ಪೋಷಿಸಬೇಕು…!<br />
ಕಲಾವಿದರ ರಂಗಸ್ಥಳ ಮತ್ತು ಪ್ರೇಕ್ಷಕರ ಅಂತರಂಗ ಸ್ಥಳಗಳು ಭೇದವೇ ಇರದಂತೆ ಬೆಸೆದುಕೊಳ್ಳಬೇಕು&#8230;<br />
ವ್ಯವಸ್ಥಾಪಕರು + ಕಲಾವಿದರು + ಪ್ರೇಕ್ಷಕರು + ವಾದ್ಯಗಳು + ಬಣ್ಣ + ಬೆಳಕು&#8230;<br />
ಇವುಗಳ ಸಮರಸವಾದ ಮೇಳನವೇ ಯಕ್ಷಗಾನ ಮೇಳ. ….!!</p>
<p>ಮಠವೆಂದರೂ ಹಾಗೆಯೇ..!<br />
ಶಿಷ್ಯರ ಪರಸ್ಪರ ಮೇಳನ..!<br />
ಶಿಷ್ಯರು ಕಾರ್ಯಕರ್ತರ ಮೇಳನ..!<br />
ಕಾರ್ಯಕರ್ತರ ಪರಸ್ಪರ ಮೇಳನ..!<br />
ಶಿಷ್ಯರು ಕಾರ್ಯಕರ್ತರ ಮೇಳನ ಗುರುವಿನೊಂದಿಗೆ …!<br />
ಶಿಷ್ಯರು ಕಾರ್ಯಕರ್ತರ ಸಹಿತ ಗುರುವಿನ ಮೇಳನ ಶ್ರೀರಾಮನೊಂದಿಗೆ.. ..!!</p>
<p>ಗುರುಗಳು, ಪರಿವಾರ, ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು, ಶಿಷ್ಯರು ಇವೆಲ್ಲವೂ ಇಲ್ಲಿ ಪಾತ್ರಗಳೇ..!!<br />
ಧರ್ಮವೇ ಇಲ್ಲಿ ಸೂತ್ರ..!<br />
ಸ್ವಯಂ ಶ್ರೀರಾಮನೇ ಸೂತ್ರಧಾರ&#8230;!<br />
ಆಯಾ ಪಾತ್ರಗಳಿಗೆ ಅವರವರು <strong>ಪಾತ್ರ</strong>ರಾಗಬೇಕು..<br />
ಪರಸ್ಪರರಲ್ಲಿ ಮೇಳನ ಬೇಕು..!<br />
ಹಾಗಿದ್ದಲ್ಲಿ ಮಠವೆಂಬ ಮಹಾಮೇಳ ತನ್ನೊಡಗೂಡುವ ಜೀವಗಳ ನೋವು ನಿವಾರಿಸುವುದು ಮತ್ತು<br />
ಸಂತೋಷ &#8211; ಸಂದೇಶಗಳನ್ನು ಹಂಚುವುದು ನಿಶ್ಚಿತ..<br />
<strong>ಹಾಗಾಗದಿದ್ದರೆ ಅದು ಹೊಂದಿಕೆಯ ಹದ ತಪ್ಪಿದ ಯಕ್ಷಗಾನವಾದೀತು..!!</strong></p>
<p>ಉತ್ತರ ಕನ್ನಡದ ಒಂದು ಹಳ್ಳಿ..<br />
ಆ ರಾತ್ರಿ ಯಕ್ಷಗಾನ ನಡೆಯಬೇಕಿತ್ತಲ್ಲಿ..<br />
ಪ್ರಸಂಗ ಗದಾಯುದ್ಧ&#8230;.<br />
ಒಂಭತ್ತೂವರೆಗೆ ಪ್ರಾರಂಭವಾಗಬೇಕಿದ್ದ ಆಟ ಹನ್ನೆರಡಾದರೂ ಪ್ರಾರಂಭವಾಗಲಿಲ್ಲ..!!<br />
<strong>ಕಾರಣ &#8211; ಐವರು ಕಲಾವಿದರು ದುರ್ಯೋಧನನ ವೇಷ ಧರಿಸಿ ಕುಳಿತದ್ದು..!!</strong><br />
ಆ ಪ್ರಸಂಗದಲ್ಲಿ ದುರ್ಯೋಧನ,ಕೃಷ್ಣ,ಭೀಮ, ಸಂಜಯ ಮೊದಲಾದ ಹಲವಾರು ಪಾತ್ರಗಳಿವೆ..<br />
ಅದರಲ್ಲಿ ದುರ್ಯೋಧನನ ಪಾತ್ರವೇ ಮುಖ್ಯ ಪಾತ್ರ, ಅದನ್ನು ಮಾಡಬೇಕಾದವನು ನಾನೇ ಎಂಬ ಭ್ರಮೆ ಅವರನ್ನಾವರಿಸಿತ್ತು…!</p>
<p>ಎಲ್ಲಕಲಾವಿದರೂ ಒಂದೇ ಪಾತ್ರವನ್ನು ಮಾಡಹೊರಟರೆ ಆಟ ನಡೆಯುವುದಾದರೂ ಹೇಗೆ..?<br />
ಎಲ್ಲ ಶಿಲೆಗಳೂ ಪೂಜೆಗೊಳ್ಳುವ ಆಧಾರಶಿಲೆಯೇ ಆಗ ಹೊರಟರೆ ಕಟ್ಟಡ ಕಟ್ಟುವುದೆಲ್ಲಿಂದ..?</p>
<p>ಬೀಜದೊಳಗಿನ ಕೆಲವಂಶ ಬೇರಾಗಬೇಕು, ಕೆಲವು ನಾರಾಗಬೇಕು..<br />
ಕೆಲವಂಶ ತೊಗಟೆಯಾಗಬೇಕು…. ಕೆಲವು ತಿರುಳಾಗಬೇಕು..<br />
ಕೆಲವಂಶ ಪತ್ರವಾಗಬೇಕು,ಪುಷ್ಪವಾಗಬೇಕು.. ಕೆಲವು ಫಲವಾಗಬೇಕು..<br />
ಇವುಗಳೆಲ್ಲವೂ ಅದರದರ ಸ್ಥಾನದಲ್ಲಿ ನಿಂತು ಒಂದಕ್ಕೊಂದು ಬೆಸೆದುಕೊಂಡರೆ…<br />
ಅಲ್ಲಿ ವೃಕ್ಷ ಸೃಷ್ಟಿ&#8230;!</p>
<p>ಹೀಗೆಯೇ ಮೇಳ ಸೃಷ್ಟಿ….ಸಮಾಜ ಸೃಷ್ಟಿ..!<br />
ಯಾವ ಕ್ಷಣ ನಮ್ಮ ಪಾತ್ರವೇನೆಂಬುದು ನಮಗರ್ಥವಾಗುತ್ತದೆಯೋ, ಸಮಾಜ ಜೀವನ ಪ್ರಾರಂಭವಾಗುವುದು ಆ ಕ್ಷಣದಿಂದಲೇ..!<br />
ಮಠವೆಂಬುದು ಸಮಾಜವನ್ನು ಸುವ್ಯವಸ್ಥೆಯಲ್ಲಿ ಬಂಧಿಸಿಡುವ ಒಂದು ಸೂತ್ರ..<br />
<strong><br />
ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |<br />
ಕೋಟಿ ನಟರಾಂತಿಹರು ಚಿತ್ರ &#8211; ಪಾತ್ರಗಳ ||<br />
ಆಟಕ್ಕೆ ಕಥೆಯಿಲ್ಲ, ಕೊನೆಯಿಲ್ಲ, ಮೊದಲಿಲ್ಲ |<br />
ನೋಟಕನುಂ ಆಟಕನೇ..! &#8211; ಮಂಕುತಿಮ್ಮ </strong></p>
<p>ಬಗೆದು ನೋಡಿದರೆ ಸೃಷ್ಟಿಯೇ ಒಂದು ಮೇಳ..<a href="http://hareraama.in/wp-content/uploads/2010/05/DSC_6897.jpg"><img class="alignright size-medium wp-image-4434" title="DSC_6897" src="http://hareraama.in/wp-content/uploads/2010/05/DSC_6897-300x198.jpg" alt="" width="300" height="198" /></a><br />
ಬ್ರಹ್ಮಾಂಡವದರ ರಂಗಸ್ಥಲ..<br />
ತುದಿಮೊದಲಿಲ್ಲದ ನಿರಂತರ ನಡೆಯುವ ಕಥೆ..<br />
ಇಲ್ಲಿ ಆಟಕರು- ನೋಟಕರು ಬೇರೆಯಿಲ್ಲ..<br />
ಆಟಕರೂ ನೋಟಕರೇ&#8230; ನೋಟಕರೂ ಆಟಕರೇ..!!</p>
<div id="_mcePaste">ಸೃಷ್ಟಿನಾಟಕದಲ್ಲಿ ಮಹತ್ವದ ಪಾತ್ರ ವಹಿಸುವ ರವಿ-ಚಂದ್ರ-ತಾರೆಗಳು,ಸಾಗರ-ನದೀ-ಸರೋವರಗಳು,ಪರ್ವತ-ಪರಮಾಣುಗಳು ಎಂದಿಗೂ</div>
<div>ತಮ್ಮ ಪಾತ್ರದ ಮಿತಿಯನ್ನು ಮೀರುವುದೂ ಇಲ್ಲ&#8230;ಮರೆಯುವುದೂ ಇಲ್ಲ&#8230;</div>
<div id="_mcePaste">ಆದುದರಿಂದಲೇ ಸೃಷ್ಟಿ ಸೊಗಸೇ ಸೊಗಸು..!</div>
<div id="_mcePaste"><strong>ಆದರೆ ಅದು ನಮಗೆ ಸೊಗಸಾಗಬೇಕಾದರೆ ಅದರೊಳಗಿನ ನಮ್ಮ ಪಾತ್ರ ಸೊಗಸಾಗಬೇಕು..!</strong></div>
<p>ಶತ್ರುಗಳೂ &#8216;ಶಾಭಾಸ್&#8217; ಎನ್ನುವಂತೆ&#8230;<br />
ಬಂಧುಗಳು &#8216;ಭಲಾ&#8217; ಎನ್ನುವಂತೆ..<br />
ಆತ್ಮವೇ &#8216;ಆಹೋಹೋ&#8217; ಎನ್ನುವಂತೆ..<br />
ನಮ್ಮ ಪಾತ್ರವೇ &#8216;ರಾಮಾರ್ಪಣವಾಗುವಂತೆ&#8217;..<br />
ನಮ್ಮ ಮುಡಿ ಅವನಡಿಯ ಪ್ರಸಾದವಾಗುವಂತೆ ಬದುಕಿದರೆ….<br />
<strong><br />
ಅಂಥವನಿಗೆ ಬದುಕು &#8216;ದಕ್ಕಿತ್ತೋ ದಕ್ಕಿತ್ತು&#8217;&#8230;!!!</strong></p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/%e0%b2%a6%e0%b2%95%e0%b3%8d%e0%b2%95%e0%b2%bf%e0%b2%a4%e0%b3%8d%e0%b2%a4%e0%b3%8b-%e0%b2%a6%e0%b2%95%e0%b3%8d%e0%b2%95%e0%b2%bf%e0%b2%a4%e0%b3%8d%e0%b2%a4%e0%b3%81/feed/</wfw:commentRss>
		<slash:comments>10</slash:comments>
		</item>
		<item>
		<title>ಮಳೆ-ಹೊಳೆಗಳು ಮಾತಾಡಿದವು&#8230;!!</title>
		<link>http://hareraama.in/blog/male-holegalu-matanadidavu/</link>
		<comments>http://hareraama.in/blog/male-holegalu-matanadidavu/#comments</comments>
		<pubDate>Sun, 23 May 2010 09:23:01 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[male]]></category>
		<category><![CDATA[sanghatane]]></category>

		<guid isPermaLink="false">http://hareraama.in/?p=4397</guid>
		<description><![CDATA[ವಿಕೃತಿ ಸಂವತ್ಸರದ ನಿಜವೈಶಾಖ ಶುದ್ಧ ಅಷ್ಟಮಿ-ನವಮಿ ೨೦೧೦ ಮೇ ತಿಂಗಳ ೨೧, ೨೨..
ಶಿರೂರಿನ ಸಮೀಪದ ಗೋಳಿಗುಂಡಿಯ ಅಮೃತಧಾರಾ ಗೋಶಾಲೆಯಲ್ಲಿ ವಸತಿ ಮಾಡಿದ್ದೆವು.

ರಾತ್ರಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. . .
ಪಕ್ಕದಲ್ಲಿಯೇ ಸಂಕದಗುಂಡಿ ಹೊಳೆಯೂ ಹರಿಯುತ್ತಿತ್ತು . .
ಮಳೆ-ಹೊಳೆಗಳನ್ನು ಕಂಡಾಗ ಅದೇಕೋ ಮನುಷ್ಯ ಸಮೂಹದ ನೆನಪಾಯಿತು..
ಮಳೆಯಲ್ಲಿ ಅಸಂಖ್ಯ ಜಲಬಿಂದುಗಳು ಒಮ್ಮೆಲೇ ಧರೆಗಿಳಿಯುವವಲ್ಲವೇ. . ?
ಹೊಳೆಯಲ್ಲಿ ಅಸಂಖ್ಯ ಜಲಬಿಂದುಗಳು ಜೊತೆಗೂಡಿ ಹರಿಯುವವಲ್ಲವೇ. . ?]]></description>
			<content:encoded><![CDATA[<p>ವಿಕೃತಿ ಸಂವತ್ಸರದ ನಿಜವೈಶಾಖ ಶುದ್ಧ ಅಷ್ಟಮಿ-ನವಮಿ&#8230;<br />
೨೦೧೦ ಮೇ ತಿಂಗಳ ೨೧, ೨೨..<br />
ಶಿರೂರಿನ ಸಮೀಪದ ಗೋಳಿಗುಂಡಿಯ ಅಮೃತಧಾರಾ ಗೋಶಾಲೆಯಲ್ಲಿ ವಸತಿ ಮಾಡಿದ್ದೆವು.</p>
<p>ರಾತ್ರಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. . .</p>
<div id="attachment_4402" class="wp-caption alignright" style="width: 310px"><a href="http://hareraama.in/wp-content/uploads/2010/05/rain.jpg"><img class="size-medium wp-image-4402" title="Rain falling on ground" src="http://hareraama.in/wp-content/uploads/2010/05/rain-300x200.jpg" alt="Rain falling on ground" width="300" height="200" /></a><p class="wp-caption-text">ಬಿಡಿಹನಿಗಳಾಗಿ ಧರೆಗಿಳಿಯುವ ಮಳೆ....</p></div>
<p style="text-align: left;">ಪಕ್ಕದಲ್ಲಿಯೇ ಸಂಕದಗುಂಡಿ ಹೊಳೆಯೂ ಹರಿಯುತ್ತಿತ್ತು . .<br />
ಮಳೆ-ಹೊಳೆಗಳನ್ನು ಕಂಡಾಗ ಅದೇಕೋ ಮನುಷ್ಯ ಸಮೂಹದ ನೆನಪಾಯಿತು..<br />
ಮಳೆಯಲ್ಲಿ ಅಸಂಖ್ಯ ಜಲಬಿಂದುಗಳು ಒಮ್ಮೆಲೇ ಧರೆಗಿಳಿಯುವವಲ್ಲವೇ..?<br />
ಹೊಳೆಯಲ್ಲಿ ಅಸಂಖ್ಯ ಜಲಬಿಂದುಗಳು  ಜೊತೆಗೂಡಿ ಹರಿಯುವವಲ್ಲವೇ..?</p>
<p style="text-align: left;">ಜಲಬಿಂದುಗಳಹಾಗೆ ಮನುಷ್ಯರೂ ಸಹಾ ಸೇರುವುದುಂಟು..!</p>
<p>ಸೇರುವಿಕೆಯಲ್ಲಿ ಎರಡು ವಿಧ:</p>
<ul>
<li> ಬೃಹತ್ ಕಾರ್ಯಕ್ರಮಗಳು&#8230;</li>
<li>ಸಂಘಟನೆಗಳು..</li>
</ul>
<p>ಮಳೆ ಹನಿಗಳು ಒಮ್ಮೆಲೇ ಧರೆಗಿಳಿದರೂ ಒಂದೊಂದೂ  ಸ್ವತಂತ್ರವಾಗಿರುವಂತೆ&#8230;<br />
ಬೃಹತ್ ಕಾರ್ಯಕ್ರಮಗಳಲ್ಲಿ ಮನುಷ್ಯರು ಭೌತಿಕವಾಗಿ ಜೊತೆಗಿದ್ದರೂ ಮಾನಸಿಕವಾಗಿ ಎಲ್ಲರೂ ಸ್ವತಂತ್ರರೇ..!<br />
ಅಲ್ಲಿ ಸಂವಾದ ಸಾಧ್ಯವಿಲ್ಲ &#8230;ಕೆಲವರು ಹೇಳುವುದು ಮತ್ತು ಹಲವರು ಕೇಳುವುದು ಮಾತ್ರ..!</p>
<p>ಆದರೆ ಸಂಘಟನೆ ಹಾಗಲ್ಲ..</p>
<div id="attachment_4400" class="wp-caption alignright" style="width: 310px"><a href="http://hareraama.in/wp-content/uploads/2010/05/River.jpg"><img class="size-medium wp-image-4400" title="River" src="http://hareraama.in/wp-content/uploads/2010/05/River-300x224.jpg" alt="ಮಳೆಹನಿಗಳ ಸಮೂಹ - ಹೊಳೆಯಾಗಿ ಹರಿದವು" width="300" height="224" /></a><p class="wp-caption-text">ಮಳೆಹನಿಗಳ ಸಮೂಹ - ಹೊಳೆಯಾಗಿ ಹರಿದವು</p></div>
<p>ಅಲ್ಲಿ ಭೌತಿಕವಾಗಿ ಜೊತೆಗಿರದಿದ್ದರೂ ಮನಸ್ಸುಗಳು ಒಂದಾಗಿರಬೇಕು..<br />
ಜಲಬಿಂದುಗಳು ಭೇದವೇ ಇರದಂತೆ &#8211; ಒಂದಿಷ್ಟೂ ಅಂತರವೇ ಇರದಂತೆ ಬೆರೆತು ಹರಿಯುವಂತೆ..<br />
ಹಲವು ಮನಸ್ಸುಗಳು ಒಂದೇ ವಿಚಾರಧಾರೆಯಲ್ಲಿ ಬೆರೆತು, ಮಹೋನ್ನತವಾದ ಲಕ್ಷ್ಯವೊಂದರೆಡೆಗೆ  ಜೊತೆಗೂಡಿ ಹರಿದಾಗ…<br />
ಅದಕ್ಕೆ ಸಂಘಟನೆಯೆಂಬ ಹೆಸರು ಬಂತು..</p>
<p>ಮಳೆಬಂದಾಗ ಎಲ್ಲೆಲ್ಲೂ ನೀರು, ನಾಲ್ಕುದಿನ ಕಳೆದರೆ ಎಲ್ಲಿಯೂ ನೀರಿಲ್ಲ&#8230;!!!<br />
ಹೊಳೆ ನೀರು ಅದರ ಪಾತ್ರದಲ್ಲಿ ಮಾತ್ರ&#8230;<br />
ಆದರೆ, ವರ್ಷವಿಡೀ ನಿಲ್ಲದ ಹರಿವು ಅದರದು&#8230;!!<br />
ಅತ್ಯಂತ ಭಿನ್ನ ಸ್ವಭಾವದ ಈ ಎರಡು ಜಲಮೂಲಗಳು ಒಂದಕ್ಕೊಂದು ಪರಮೋಪಕಾರಿ&#8230;<br />
ಮಳೆಯಿದ್ದರೆ ಹೊಳೆ. .<br />
ಮಳೆಗಾಲದಲ್ಲಿ ಸತತವಾಗಿ ಬೀಳುವ ಮಳೆಯಿಂದಲ್ಲವೇ ಹೊಳೆ ಮೈದುಂಬಿ ಹರಿಯುವುದು…?<br />
ಕೆಲಸಮಯ ಮಳೆಯಿಲ್ಲದಿದ್ದರೆ ಮತ್ತೆ ಹೊಳೆ ಉಳಿಯುವುದೇ ಇಲ್ಲ&#8230;.!</p>
<p>ಮಳೆಯ ಮೂಲವೇ ಹೊಳೆ&#8230;<br />
ಮೋಡವಿಲ್ಲದೇ ಮಳೆಯೆಲ್ಲಿ..?<br />
ಹೊಳೆ &#8211; ಕೆರೆ- ಸಮುದ್ರಗಳ ನೀರಲ್ಲವೇ ಸೂರ್ಯಕಿರಣಗಳಿಂದ ಆವಿಯಾಗಿ ಮೋಡವಾಗುವುದು..?</p>
<p>ವಿಶಾಲ ಜನಸಭೆಗಳಲ್ಲಿ, ಬೃಹತ್ ಕಾರ್ಯಕ್ರಮಗಳಲ್ಲಿ ತೋರುವ ಮಳೆಯ ಇನ್ನಷ್ಟು ಸಾಮ್ಯಗಳನ್ನು ಗಮನಿಸಿ. . . !</p>
<div id="attachment_4401" class="wp-caption alignright" style="width: 310px"><a href="http://hareraama.in/wp-content/uploads/2010/05/Crowd.jpg"><img class="size-medium wp-image-4401" title="Crowd" src="http://hareraama.in/wp-content/uploads/2010/05/Crowd-300x218.jpg" alt="ಬಿಡಿಜನಗಳ ಸಮೂಹ - ಸಭೆ" width="300" height="218" /></a><p class="wp-caption-text">ಬಿಡಿಜನಗಳ ಸಮೂಹ - ಸಭೆ</p></div>
<p>ಮಳೆ ಬಂದಾಗ ಎಲ್ಲೆಲ್ಲೂ ನೀರಿರುವಂತೆ ವಿಶಾಲ ಜನಸಭೆಗಳ ಸಮಯದಲ್ಲಿ ಅದೇ ವಾತಾವರಣ. . .</p>
<p>ಮಳೆಯ ಹಾಗೆ ಎಲ್ಲೆಡೆ ಅದೇ ಸದ್ದು. . .<br />
ಅದೇ ಸುದ್ದಿ&#8230;!!<br />
ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೋಸ್ಟರ್ ಗಳು &#8211; ಮಾಧ್ಯಮಗಳಲ್ಲಿಯೂ ಅದೇ ಸಮಾಚಾರ..!<br />
ನಾಲ್ಕುಜನ ಸೇರಿದಲ್ಲಿಯೂ ಅದೇ ಚರ್ಚೆ&#8230;!<br />
ಎಲ್ಲರ ಮನ-ಗಮನಗಳೂ ಆ  ಕಡೆಗೇ&#8230;<br />
ಕಾರ್ಯಕ್ರಮ ಮುಗಿಯಿತೋ &#8211; ನಾಲ್ಕುದಿನ ಕಳೆಯಿತೋ . . .<br />
ಮತ್ತೆ ಸದ್ದೇ ಇಲ್ಲ…!!!</p>
<p>ಹೊಳೆ ಸಂಘಟನೆಯ ಪ್ರತೀಕ..<br />
ಹೊಳೆಯ ಹಾಗೆ ಸಂಘಟನೆಯದೂ ದೊಡ್ಡಸದ್ದಿಲ್ಲ; ಆದರೆ ಹರಿವು ವರ್ಷವಿಡೀ ನಿಲ್ಲುವುದಿಲ್ಲ..!<br />
ನಿರ್ದಿಷ್ಟ ಗಮ್ಯದೆಡೆಗೆ ಹೊಳೆ ನಿರಂತರವಾಗಿ ಹರಿಯುತ್ತಿರುತ್ತದೆ&#8230;<br />
ಹಾಗೆಯೇ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಘಟನೆ ಕಾರ್ಯನಿರತವಾಗಿರುತ್ತದೆ..<br />
<strong>ಒಮ್ಮೆ ಸೇರಿದರೆ ಸಭೆ, ನಿರಂತರ ಸೇರಿದರೆ ಸಂಘಟನೆ. . .!</strong><br />
ಮಳೆ &#8211; ಹೊಳೆಗಳ ಹಾಗೆ ಸಂಘಟನೆ  ಹಾಗೂ ಬೃಹತ್ ಕಾರ್ಯಕ್ರಮಗಳು ಒಂದಕ್ಕೊಂದು ಪೂರಕ..<br />
ಬೃಹತ್ ಕಾರ್ಯಕ್ರಮಗಳು ಸಂಘಟನೆಗಳಿಗೆ ಶಕ್ತಿ ತುಂಬುತ್ತವೆ..<br />
ಅದೆಷ್ಟೋ ಜನರನ್ನು ವಿಚಾರಧಾರೆಯೆಡೆಗೆ ಆಕರ್ಷಿಸುತ್ತವೆ&#8230;ಸಂಘಟನೆಯಲ್ಲಿ ಜೋಡಿಸುತ್ತವೆ..</p>
<p>ಅಡಿಪಾಯವಿಲ್ಲದೆ ಬೃಹತ್ ಕಟ್ಟಡವೊಂದು ನಿಲ್ಲಲು ಸಾಧ್ಯವಿಲ್ಲ&#8230;<br />
ಹಾಗೆಯೀ,<strong>ಸಂಘಟನೆಯಿಲ್ಲದೆ ಬೃಹತ್ ಕಾರ್ಯಕ್ರಮವೊಂದು ನಡೆಯಲು ಸಾಧ್ಯವೇ ಇಲ್ಲ</strong>&#8230;!!<br />
ಜನ-ಜನಗಳೂ, ಮನ-ಮನಗಳೊ ಬೆರೆತು ಕಾರ್ಯಗಳನ್ನು ಹಂಚಿಕೊಂಡು, ಸಮಯದಲ್ಲಿ ನಿರ್ವಹಿಸಿದರಲ್ಲವೇ ಕಾರ್ಯಕ್ರಮಗಳು ನಡೆಯುವುದು..?</p>
<div id="attachment_4398" class="wp-caption alignright" style="width: 310px"><a href="http://hareraama.in/wp-content/uploads/2010/05/hands_together.jpg"><img class="size-medium wp-image-4398" title="Hands Together" src="http://hareraama.in/wp-content/uploads/2010/05/hands_together-300x208.jpg" alt="" width="300" height="208" /></a><p class="wp-caption-text">ಜೊತೆಗೂಡಿದ ಹನಿಗಳು - ಸಂಘಟನೆಯ ಮೂಲಧಾತುಗಳು.. </p></div>
<p>ಚಂದ್ರನಿಂದ ಆಕಾಶಕ್ಕೆ ಶೋಭೆ, ಆಕಾಶದಿಂದ ಚಂದ್ರನಿಗೆ ಶೋಭೆ..<br />
ಇವೆರಡರಿಂದಲೂ ರಾತ್ರಿಗೆ ಶೋಭೆ..</p>
<p>ಹಾಗೆಯೇ,<br />
ಸಂಘಟನೆಯಿಂದ ಸಭೆ &#8211; ಸಭೆಯಿಂದ ಸಂಘಟನೆ..<br />
ಇವೆರಡರಿಂದಲೂ ಸಮಾಜ..<strong><br />
ಸಂಘಟನೆ, ಸಭೆಯೆಂಬ ಎರಡು ಚಕ್ರಗಳು ಸಮರ್ಪಕವಾಗಿ ಮುನ್ನಡೆದರೆ, ಸಮಾಜವೆಂಬ ರಥ ಸರಿಯಾದ ಗುರಿಯತ್ತ ಸಾಗೀತು..</strong></p>
<p>ಪ್ರಕೃತಿಯನ್ನು ನೋಡಿ ಕಲಿಯೋಣ ಪಾಠ&#8230;<br />
ಬಿರುಗಾಳಿ ಬೀಸಿದರೆ ಒಂಟಿಮರಗಳು ಬುಡಮೇಲಾಗುವುವು..<br />
ಆದರೆ, ಮರಗಳ ಸಂಘಟನೆಯೇ ಆದ ಕಾಡಿನಲ್ಲಿ ಅವು ಸುರಕ್ಷಿತ..!</p>
<p>ಒಂದು ಕಟ್ಟಿಗೆಯನ್ನು ಮುರಿಯಲು ಕಷ್ಟವೇನಲ್ಲ,<br />
ಆದರೆ, ಹತ್ತಾರು ಕಟ್ಟಿಗೆಗಳನ್ನು ಕೂಡಿಸಿ ಹೊರೆಕಟ್ಟಿದರೆ&#8230;?!</p>
<p>ಅಷ್ಟು ದೂರವೇಕೆ, ನಮ್ಮ ಕೈ ಬೆರಳುಗಳೇ ನಮಗೆ ಪಾಠ ಹೇಳುತ್ತವೆ&#8230;..!</p>
<p>ಬಿಡಿ-ಬಿಡಿ ಬೆರಳುಗಳಿಗಿಲ್ಲ ಶಕ್ತಿ.. ಅದೇ ಬೆರಳುಗಳು ಕೂಡಿದರೆ.. ಇಡಿಯಾದರೆ.. ಹಿಡಿಯಾದರೆ.. ಅದೆಂಥ ಶಕ್ತಿ..!?</p>
<p>ಭಗವಂತ ನಮ್ಮೆಲ್ಲರನ್ನೂ ಭುವಿಗೆ ಜೊತೆಯಾಗಿ ಕಳುಹಿದುದರ ಉದ್ದೇಶವೇ ಕೂಡಿ ಬದುಕಲೆಂದು, ಹಂಚಿ ತಿನ್ನಲೆಂದು..!</p>
<p><strong>ಜೀವವು ದೇವರೊಂದಿಗೆ ಬೆರೆಯುವುದಕ್ಕೆ ಮುಕ್ತಿ ಎಂದು ಹೆಸರು..<br />
ಮೊದಲು ಭುವಿಯಲ್ಲಿ ನಮ್ಮ ಸಹಜೀವಿಗಳೊಂದಿಗೆ ಬೆರೆಯೋಣ&#8230;<br />
ಮುಕ್ತಿಯ ಅಭ್ಯಾಸವನ್ನು ಇಲ್ಲಿಯೇ ಮಾಡೋಣ&#8230;</strong></p>
<p>(<em>ಚಿತ್ರಕೃಪೆ: ಅಂತರ್ಜಾಲ</em>)</p>
]]></content:encoded>
			<wfw:commentRss>http://hareraama.in/blog/male-holegalu-matanadidavu/feed/</wfw:commentRss>
		<slash:comments>3</slash:comments>
		</item>
		<item>
		<title>ನೆಚ್ಚು ನಿನ್ನಾತ್ಮವನೆ..!</title>
		<link>http://hareraama.in/blog/%e0%b2%a8%e0%b3%86%e0%b2%9a%e0%b3%8d%e0%b2%9a%e0%b3%81-%e0%b2%a8%e0%b2%bf%e0%b2%a8%e0%b3%8d%e0%b2%a8%e0%b2%be%e0%b2%a4%e0%b3%8d%e0%b2%ae%e0%b2%b5%e0%b2%a8%e0%b3%86/</link>
		<comments>http://hareraama.in/blog/%e0%b2%a8%e0%b3%86%e0%b2%9a%e0%b3%8d%e0%b2%9a%e0%b3%81-%e0%b2%a8%e0%b2%bf%e0%b2%a8%e0%b3%8d%e0%b2%a8%e0%b2%be%e0%b2%a4%e0%b3%8d%e0%b2%ae%e0%b2%b5%e0%b2%a8%e0%b3%86/#comments</comments>
		<pubDate>Sun, 16 May 2010 10:22:17 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4356</guid>
		<description><![CDATA[ಜೀವಲೋಕದ ಇತಿಹಾಸದಲ್ಲಿ ನಡೆದಿರಬಹುದಾದ ಯುದ್ಧಗಳಿಗೆ ಲೆಕ್ಕವಿಲ್ಲ..
ಆದರೆ ರಾಮ - ರಾವಣಸಂಗ್ರಾಮದ ತೆರನಾದ ಸಂಗ್ರಾಮವಿನ್ನೊಂದಿಲ್ಲ..
ಆ ಯುದ್ಧವನ್ನು ಬಣ್ಣಿಸಹೊರಟ ಕವಿಗಳಿಗೆ ಉಪಮೆಯೇ ಸಿಗಲಿಲ್ಲ..!
ಸಾಗರಕ್ಕೆ ಸಾಟಿಯುಂಟೇ..?
ಅಂಬರವನ್ನು ಹೋಲುವ ವಸ್ತು ಇನ್ನೊಂದುಂಟೇ...?
ಸೃಷ್ಟಿಯ ಅನನ್ಯ ಸಂಗತಿಗಳಿವು..!

ರಾಮಾಯಣ ಯುದ್ಧವೂ ಹಾಗೇ..
ವಿವಾಹವಾಗಲೀ, ವಿವಾದವಾಗಲೀ ಸಮಾನರ ಮಧ್ಯೆ ನಡೆಯಬೇಕೆನ್ನುವುದುಂಟು..
ಆದರೆ, ಇಲ್ಲಿಮಾತ್ರ ಹಾಗಲ್ಲ..
ರಾಮ - ರಾವಣರು ಹೊಂದಿದ್ದ ಯುದ್ಧ ಪರಿಕರಗಳಲ್ಲಿ ಮಹದಂತರವಿದೆ..!
ಒಬ್ಬನ ಬಳಿ ಅಗಾಧವಾದ ಯುದ್ಧೋಪಕರಣಗಳು..!
ಇನ್ನೊಬ್ಬನಬಳಿ ಅಲುಗಾಡದ ಅಂತಃಸತ್ವ..!!]]></description>
			<content:encoded><![CDATA[<p style="text-align: center;">|| ಹರೇರಾಮ ||</p>
<p>ಜೀವಲೋಕದ ಇತಿಹಾಸದಲ್ಲಿ ನಡೆದಿರಬಹುದಾದ ಯುದ್ಧಗಳಿಗೆ ಲೆಕ್ಕವಿಲ್ಲ..<br />
ಆದರೆ ರಾಮ &#8211; ರಾವಣಸಂಗ್ರಾಮದ ತೆರನಾದ ಸಂಗ್ರಾಮವಿನ್ನೊಂದಿಲ್ಲ..<br />
ಆ ಯುದ್ಧವನ್ನು ಬಣ್ಣಿಸಹೊರಟ ಕವಿಗಳಿಗೆ ಉಪಮೆಯೇ ಸಿಗಲಿಲ್ಲ..!<br />
ಸಾಗರಕ್ಕೆ ಸಾಟಿಯುಂಟೇ..?<br />
ಅಂಬರವನ್ನು ಹೋಲುವ ವಸ್ತು ಇನ್ನೊಂದುಂಟೇ&#8230;?<br />
ಸೃಷ್ಟಿಯ ಅನನ್ಯ ಸಂಗತಿಗಳಿವು..!</p>
<p>ರಾಮಾಯಣ ಯುದ್ಧವೂ ಹಾಗೇ..<br />
ವಿವಾಹವಾಗಲೀ, ವಿವಾದವಾಗಲೀ ಸಮಾನರ ಮಧ್ಯೆ ನಡೆಯಬೇಕೆನ್ನುವುದುಂಟು..<br />
ಆದರೆ, ಇಲ್ಲಿಮಾತ್ರ ಹಾಗಲ್ಲ..<br />
ರಾಮ &#8211; ರಾವಣರು ಹೊಂದಿದ್ದ ಯುದ್ಧ ಪರಿಕರಗಳಲ್ಲಿ ಮಹದಂತರವಿದೆ..!<br />
ಒಬ್ಬನ ಬಳಿ ಅಗಾಧವಾದ ಯುದ್ಧೋಪಕರಣಗಳು..!<br />
ಇನ್ನೊಬ್ಬನಬಳಿ ಅಲುಗಾಡದ ಅಂತಃಸತ್ವ..!!</p>
<p>ಸುರಕ್ಷಿತವಾದ, ಸುಸಜ್ಜಿತವಾದ, ಸುಸಂಪನ್ನವಾದ, ಲಂಕಾನಗರಿ ರಾವಣನ ಅಧೀನದಲ್ಲಿ..!!<br />
ಆ ಪುರಿಗೋ ಪರಿ &#8211; ಪರಿಯ ರಕ್ಷಣೆಗಳು..!<br />
ದುರ್ಗಮವಾದ ಕೋಟೆಗಳು..!<br />
ಪ್ರಕೃತಿಯೇ ಪ್ರಧಾನ ರಕ್ಷಣೆ ಆ ನಗರಿಗೆ..!<br />
ಸಮುದ್ರಕ್ಕಿಂತ ದೊಡ್ಡ ರಕ್ಷಣೆ ಬೇರೆ ಬೇಕೇ..?<br />
ಸುತ್ತೆಲ್ಲ ಸುತ್ತಿರುವ ನೂರು ಯೋಜನ ವಿಸ್ತಾರದ ಸಾಗರವನ್ನು ಲಂಘಿಸದೇ ಲಂಕೆಗೆ ಪ್ರವೇಶವೇ ಇಲ್ಲ..!<br />
ಸಾಲದ್ದಕ್ಕೆ ಅಲ್ಲಿ ನೌಕಾ ಪಥವೂ ಇಲ್ಲ&#8230;!<br />
ಮತ್ತೆ ಗಹನವಾದ ಅರಣ್ಯ..!<br />
ಅರಣ್ಯವನ್ನತಿಕ್ರಮಿಸಿದರೆ ಗಗನದಲ್ಲಿ ಮುಖವಿಟ್ಟ ಮಹೋನ್ನತ ತ್ರಿಕೂಟ ಪರ್ವತ..!<br />
ಅದರ ತುತ್ತ ತುದಿಯಲ್ಲಿ ಲಂಕೆ..!!!<br />
ಸುತ್ತಲೂ ಅಗಾಧ ಕಂದಕ..! ಅಲ್ಲಿ ಹರಿಯುವ &#8211; ಕೊರೆಯುವ ಶೀತಜಲದಲ್ಲಿ ಸುಳಿದಾಡುವ ಮೊಸಳೆಯೇ ಮೊದಲಾದ ಕ್ರೂರ ಜಲಜಂತುಗಳು..!<br />
ಮತ್ತೆ ದುರ್ಭೇಧ್ಯವಾದ ವಿಶ್ವಕರ್ಮ ನಿರ್ಮಿತ ಕೋಟೆ..!<br />
ಕೋಟೆಯಮೇಲೆ ಶತಘ್ನಿಯೇ ಮೊದಲಾದ ಶತ್ರುಸಂಹಾರಕವಾದ ವಿವಿಧ ಯಂತ್ರಗಳು&#8230;.!<br />
ನಾಲ್ಕೂ ದಿಕ್ಕಿಗೆ ಅತ್ಯಂತ ದೃಢವಾದ ಮಹಾದ್ವಾರಗಳು..!<br />
ಪಶ್ಚಿಮದ್ವಾರವನ್ನು ರಕ್ಷಿಸುವ ಅಯುತ(ಹತ್ತುಸಾವಿರ)ಸಂಖ್ಯೆಯ ಮಹಾರಾಕ್ಷಸ ವೀರರು..!<br />
ದಕ್ಷಿಣದ್ವಾರವನ್ನು ಅಹರ್ನಿಶಿ ಕಾಯುವ ನಿಯುತ ಸಂಖ್ಯೆಯ ವೀರರಾಕ್ಷಸರು..!<br />
ಪ್ರಯುತ ಸಂಖ್ಯೆಯಲ್ಲಿ ಪೂರ್ವದ್ವಾರವನ್ನು ಸಂರಕ್ಷಿಸುವ ರಾಕ್ಷಸಸ್ತೋಮ..!<br />
ಶ್ರೀರಾಮನ ಆಗಮನದ ಸಾಧ್ಯತೆಯ ದಕ್ಷಿಣದ್ವಾರದಲ್ಲಿಯಂತೂ ರಾಕ್ಷಸಮಹಾವೀರರು ನ್ಯರ್ಭುದ ಸಂಖ್ಯೆಯಲ್ಲಿ..!!<br />
ಸಾಗರತೀರದ ಮರಳ ಕಣಗಳನ್ನು ಎಣಿಸಲು ಹೇಗೆ ಸಾಧ್ಯವಿಲ್ಲವೋ&#8230;<br />
ಹಾಗೆಯೇ,ಲಂಕಾ ಮಧ್ಯದಲ್ಲಿ ರಾವಣನ ಆಜ್ಞೆಗೆ ಕಾದುನಿಂತ ರಾಕ್ಷಸ ಸೈನಿಕರ ಸಂಖ್ಯೆ ಎಣಿಸಿ ಮುಗಿಯದು..!<br />
ದೇಹಬಲ &#8211; ಬುದ್ಢಿಬಲ, ಶಸ್ತ್ರಬಲ &#8211; ಅಸ್ತ್ರಬಲ, ಸಂಖ್ಯಾಬಲ, ವರಬಲಗಳಿಂದ ದರ್ಪಿತರಾದ ರಾಕ್ಷಸನಾಯಕರು..!<br />
ಚಿತ್ರ &#8211; ವಿಚಿತ್ರವಾದ ಮಾಯೆಗಳು..!<br />
ಭೂಮಿತೂಕದ ಭೂರಿಬಲದ ಕುಂಭಕರ್ಣ..!<br />
ಅದೃಶ್ಯನಾಗಿ ಸೆಣೆಸುವ ನಾಗಪಾಶವೇ ಮೊದಲಾದ ಪ್ರತ್ಯುತ್ತರವೇ ಇಲ್ಲದ ಶಕ್ತಿಗಳನ್ನು ಹೊಂದಿದ ಇಂದ್ರಜಿತು..!<br />
ಸಮರ ಸಮರ್ಥವಾದ ರಥಗಳು, ಆನೆಗಳು, ಕುದುರೆಗಳು..!<br />
ಉತ್ಕೃಷ್ಟವಾದ ಧನುಸ್ಸುಗಳು, ಬಾಣಗಳು, ಶೂಲಗಳು,ಖಡ್ಗಗಳು,ಗುರಾಣಿಗಳು, ತೋಮರಗಳು,ಭುಶುಂಡಿಗಳು,ಪರಿಘಗಳು ಋಷ್ಟಿಗಳು, ಶಕ್ತಿಗಳು,ಮುಸಲಗಳು ಇವೇ ಮೊದಲಾದ ಉತ್ತಮೋತ್ತಮ ಆಯುಧಗಳು ಅಸಂಖ್ಯ ಸಂಖ್ಯೆಯಲ್ಲಿ..!!!!</p>
<p>ಎಲ್ಲಕ್ಕಿಂತ ಮಿಗಿಲಾಗಿ ಯಾವಮಟ್ಟಕ್ಕೂ ಇಳಿಯುವ, ಯಾವ ಹೇಯ ಕೃತ್ಯಕ್ಕೂ ಹೇಸದ, ಯಾವದಾರಿಯನ್ನಾದರೂ ಹಿಡಿಯುವ ಕುಬುದ್ಧಿ- ಕುತಂತ್ರಗಳು&#8230;.!<br />
ತನ್ನ ವಿಕ್ರಮ &#8211; ದೌರ್ಜನ್ಯಗಳಿಂದ ಸಕಲಲೋಕಗಳನ್ನೂ ತಲ್ಲಣಗೊಳಿದ್ದ ಸ್ವಯಂ ರಾವಣ..!!!<br />
ಇವೆಲ್ಲಕ್ಕೂ ಬೆಂಬಲವಾಗಿ ತುಂಬಿತುಳುಕುತ್ತಿದ್ದ ಕೋಶಗಾರ..!</p>
<p>ತ್ತ ರಾಮನಬಳಿಯಾದರೋ..</p>
<p>ರಾಜ್ಯವಿಲ್ಲ..!<a href="http://hareraama.in/wp-content/uploads/2010/05/ravana3.jpg"><img class="alignright size-medium wp-image-4358" title="ಯುದ್ಧ ಪರಿಕರಗಳು..!!! " src="http://hareraama.in/wp-content/uploads/2010/05/ravana3-300x192.jpg" alt="ಯುದ್ಧ ಪರಿಕರಗಳು..!!! " width="300" height="192" /></a><br />
ಕೋಶವಿಲ್ಲ&#8230;!<br />
ತನ್ನದೇ ಆದ ಸೈನ್ಯವಿಲ್ಲ..!<br />
ಮಿತ್ರರ ಸೈನ್ಯವಿದ್ದರೂ ಅಲ್ಲಿ ರಥ, ಗಜ, ತುರಗಗಳಿಲ್ಲ..!<br />
ಸೈನ್ಯವೊಂದಕ್ಕೆ ಸರ್ವ ಪ್ರಥಮವಾಗಿ ಬೇಕಾದದ್ದು ಶಿಸ್ತು..!<br />
ಹಾಗೆಂದರೇನೆಂದೇ ಗೊತ್ತಿಲ್ಲದ ಕಪಿಗಳು ಸೈನಿಕರು..!<br />
ಅವರಾದರೋ ಧನುರ್ಬಾಣಗಳು ಖಡ್ಗವೇ ಮೊದಲಾದ ಆಯುಧಗಳನ್ನು ಬಳಸುವ ಅಭ್ಯಾಸವೇ ಇಲ್ಲದವರು..!<br />
ಅವರ ಶರೀರವೇ ಅವರಿಗೆ ಪ್ರಧಾನವಾದ ಆಯುಧ..!<br />
ತಮ್ಮ ನಖ &#8211; ದಂತಗಳಿಂದ, ಮುಷ್ಟಿ &#8211; ಪಾದಗಳಿಂದಲೇ ಯುದ್ಧಮಾಡುವವರವರು..!<br />
ಶರೀರದ ಹೊರತಾಗಿ ಅವರು ಬಳಸುವ ಆಯುಧವೆಂದರೆ, ಬಂಡೆಗಳು, ವೃಕ್ಷಗಳು, ಗಿರಿ-ಶಿಖರಗಳು..!<br />
ರಾಕ್ಷಸರ ಆಯುಧಗಳ ಸಂಗ್ರಹ ಅವರ ಬಳಿಯೇ ಸದಾ ಸಿದ್ಧವಿದ್ದರೆ..<br />
ಕಪಿಗಳು ತಮ್ಮ ಆಯುಧಗಳಿಗಾಗಿ ಸುತ್ತ ಮುತ್ತ ಹುಡುಕಬೇಕಾಗುತ್ತಿತ್ತು..!<br />
ರಾಕ್ಷಸರ ಆಯುಧಗಳು ಮತ್ತೆ ಮತ್ತೆ ಬಳಸಬಹುದಾದವುಗಳು..<br />
ಕಪಿಗಳ ಆಯುಧಗಳು ಹಾಗಲ್ಲ..!<br />
ಅವುಗಳಿಗೆ ಮರುಬಳಕೆಯೇ ಇಲ್ಲ..!<br />
ಶ್ರೀರಾಮನು ದಾಟಬೇಕಾದುದು ಸಮುದ್ರವನ್ನು&#8230; ಸಾಧನ ಬರಿಗಾಲು ಮಾತ್ರ..<br />
ಜಯಿಸಬೇಕಾದುದು ಲಂಕೆಯನ್ನು&#8230; ಸಹಾಯಕರು ಕಪಿಗಳು ಮಾತ್ರ..!<br />
ರಾಕ್ಷಸರು ಹೋರಾಡುತ್ತಿದ್ದುದು ತಾಯಿನಾಡಿಗಾಗಿ, ತಮಗೆ ಅನ್ನವಿತ್ತ ಅರಸನ ಅಳಿವು &#8211; ಉಳಿವಿನ ಸವಾಲಿಗಾಗಿ..!</p>
<p>ರಾಜನೀತಿಯ ದೃಷ್ಟಿಯಿಂದ ಹೇಳುವುದಾದರೆ ಕಪಿಗಳು ಹೋರಾಡುತ್ತಿದ್ದುದು ತಮ್ಮ ತಾಯ್ನಾಡಿಗಾಗಿಯಾಗಲೀ, ದೊರೆಗಾಗಿಯಾಗಲೀ ಅಲ್ಲವೇ ಅಲ್ಲ..!<br />
ತಮ್ಮ ದೊರೆಯ ಮಿತ್ರನಿಗಾಗಿ&#8230;!<br />
ರಾವಣನಿಗದು ಸ್ವಕ್ಷೇತ್ರ..!!<br />
ರಾಮನಿಗೋ ಶತ್ರು ಕ್ಷೇತ್ರ..!<br />
ಯುದ್ಧದಲ್ಲಿ ಸ್ವಕ್ಷೇತ್ರ &#8211; ಶತ್ರು ಕ್ಷೇತ್ರಗಳಿಗೆ ಮಹದಂತರವಿದೆ..!<br />
ಸ್ವಾರಸ್ಯದ ಸಂಗತಿಯೆಂದರೆ &#8216;ವಿಜಯ ಸಾಧನ&#8217;ಗಳೆಲ್ಲವೂ ರಾವಣನಲ್ಲಿ..!<br />
&#8220;ವಿಜಯ&#8221;ಮಾತ್ರ ರಾಮನಲ್ಲಿ..!<br />
ಯಾಕೆ ಹೀಗೆ..??!!<br />
ಇದು ಹೇಗೆ ಸಾಧ್ಯ..!!?</p>
<p>ಅದು ಹೀಗೆ&#8230;<br />
ಕಾರ್ಯಸಾಧನೆಗೆ ತೊಡಗುವವರಲ್ಲಿ ವರ್ಗಗಳೆರಡು..!<br />
* ಕಾರ್ಯಸಾಧನೆಗಗಿ ಹೊರಗಿನ ಉಪಕರಣಗಳನ್ನು ಆಶ್ರಯಿಸುವವರು ಹಲವರು..!<br />
* ತಮ್ಮ ಅಂತಃಸತ್ವವನ್ನೇ ನೆಚ್ಚಿ ಕಾರ್ಯಸಾಧನೆಗಿಳಿಯುವವರು ಅಪರೂಪದ ಕೆಲವರು..!!<br />
ಅನ್ಯವೆಂದಿಗೂ ಅನ್ಯವೇ..!!!!<br />
ನಮ್ಮದೆಂದಿಗೂ ನಮ್ಮದೇ..!<br />
ಬದುಕಿಗೆ ಬೇಕಾದ ಪ್ರಧಾನ ಸಾಧನಗಳನ್ನು ತನುವೆಂಬ ಪೆಟ್ಟಿಗೆಯೊಳಗಿಟ್ಟೇ ಸೃಷ್ಟೀಶ ಜೀವಿಗಳನ್ನು ಭೂಮಿಗೆ ಕಳುಹಿಸಿ ಕೊಟ್ಟಿದ್ದಾನೆ..!<br />
ಅವುಗಳನ್ನು ಸಮೀಚೀನವಾಗಿ ಬಳಸದೇ, ಹೊರಗಿನ ವಸ್ತುಗಳ ಮೊರೆಹೋಗುವುದು ಆತನಿಗೆ ಮಾಡುವ ಅಪಚಾರ..!!<br />
ಅಪಚಾರಕ್ಕೆ ತಕ್ಕ ಶಿಕ್ಷೆಯೂ ಇದೆ..!<br />
ಹೊರಗಿನ ವಸ್ತುಗಳನ್ನು ಹೆಚ್ಚು-ಹೆಚ್ಚು ಬಳಸಿದಂತೆ, ಒಳಗಿನ ಸಂಪತ್ತನ್ನು ಹೆಚ್ಚು ಹೆಚ್ಚು ಕಳೆದುಕೊಳ್ಳಬೇಕಾಗುತ್ತದೆ ಉದಾ:- ಅನಗತ್ಯವಾಗಿ ಬೆಳಕನ್ನು ಹೆಚ್ಚಛೆಚ್ಚು ಬಳಸಿದಂತೆ ಕಣ್ಣಿನ ಶಕ್ತಿ ಕ್ಷೀಣಿಸುತ್ತದೆ..!<br />
ಶರೀರದಿಂದ ಮಾಡಬೇಕಾದ ಕಾರ್ಯಗಳಲ್ಲಿಯೂ ಯಂತ್ರಗಳನ್ನೇ ಬಳಸಿದರೆ ಶರೀರಬಲ ಕುಂದುತ್ತದೆ..!<br />
ಕೊಟ್ಟದ್ದನ್ನು ಬಳಸದಿದ್ದರೆ ಕೊಟ್ಟವನು ಮೆಚ್ಚನು ಮಾತ್ರವಲ್ಲ ಕೊಟ್ಟದ್ದನ್ನು ಕಸಿಯುವನು, ಮತ್ತೆ ಕೊಡನು&#8230;!!!<br />
ಆತ್ಮಬಲ ಎಲ್ಲಕ್ಕಿಂತ ದೊಡ್ಡದು..!<br />
ಮತ್ತೆ ಮನೋಬಲ, ಇಂದ್ರಿಯಬಲ, ದೇಹಬಲಗಳು..!<br />
ಇದಕ್ಕಿಂತ ಹೊರಗಿನ ಬಲಗಳೆಲ್ಲ ಕೇವಲ ಭ್ರಮೆ..!!<br />
ಬೇರೆಲ್ಲ ಬಲಗಳೂ ಇರುವುದು ಈ ಬಲಗಳಾನ್ನಾಶ್ರಯಿಸಿಯೇ..!!<br />
ಈ ಬಲಗಳನ್ನು ಬಳಸಿಕೊಳ್ಳುವವನಿಗೆ ಬೆಂಬಲವಾಗಿ ಸಮಸ್ತ ಸೃಷ್ಟಿಯೇನಿಲ್ಲುವುದು..!</p>
<p>ಉಪಕರಣಗಳು ಬೇಡವೆಂದೇನೂ ಈ ಲೇಖನದ ತಾತ್ಪರ್ಯವಲ್ಲ..!<br />
ಅಂತಃಕರಣವು ಪ್ರಧಾನವಾದರೆ ಉಪಕರಣವು ಪೂರಕ..<br />
ಹಸುವಿನೊಡನೆ ಹಗ್ಗವಿದ್ದಂತೆ..!</p>
<p>ಅಂದಿನ ರಾಮನ ಅಂತಃಸತ್ವವನ್ನು ಇಂದಿನ ಯುಗದ ಆದಿಶಂಕರಾಚಾರ್ಯರಲ್ಲೂ ಕಾಣಬಹುದು..!<br />
ಶಂಕರಾಚಾರ್ಯರು ಭುವಿಗೆ ಬಂದಾಗ ಭಾರತವೇ ಕತ್ತಲಲ್ಲಿತ್ತು, ಸನಾತನ ಧರ್ಮ ಸಂಕಟದಲ್ಲಿತ್ತು..<br />
ಸಾವಿರ ಸಂಸ್ಥೆಗಳೂ ಮಾಡಲಾರದ ಕಾರ್ಯಗಳನ್ನು ಅಂದು ಏಕಾಂಗಿಯಾಗಿ ಅತ್ಯಲ್ಪ ಸಮಯದಲ್ಲಿ ಸಾಧಿಸಿದರವರು..!<a href="http://hareraama.in/wp-content/uploads/2010/05/shankaracharya.jpg"><img class="alignright size-full wp-image-4357" title="shankaracharya" src="http://hareraama.in/wp-content/uploads/2010/05/shankaracharya.jpg" alt="" width="304" height="246" /></a><br />
ಏನಿತ್ತು ಅವರಲ್ಲಿ..!!??<br />
ಜನರಿಲ್ಲ..!<br />
ಧನವಿಲ್ಲ..!!<br />
ವಸ್ತು ವಾಹನಗಳಿಲ್ಲ..<br />
ರಾಜಾಶ್ರಯವಿಲ್ಲ..!!<br />
ಹಾಗೆ ನೋಡಿದರೆ ರಾಜ್ಯಾಡಳಿತಗಳು ವಿರೋಧ ಪಕ್ಷದಲ್ಲಿ..!<br />
ಇಷ್ಟೇ ಸಾಲದೆಂಬಂತೆ ಧಾರಾಳವಾಗಿ ಆಯಸ್ಸು ಕೂಡಾ ಇಲ್ಲ..!</p>
<p>ಆದರೆ ಅವರು ಸಾಧಿಸಿದ್ದೆಷ್ಟು..?</p>
<p>&#8221; ಅಷ್ಟ ವರ್ಷೇ ಚತುರ್ವೇದಿ ದ್ವಾದಶೇ ಸರ್ವ ಶಾಸ್ತ್ರವಿತ್ |<br />
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||&#8221;<br />
ಐದನೇ ವಯಸ್ಸಿನಲ್ಲಿ ಉಪನಯನ&#8230;<br />
ಮತ್ತೆ ನಾಲ್ಕೇ ವರ್ಶಗಳಲ್ಲಿ ನಾಲ್ಕೂ ವೇದಗಳ ಸಮಗ್ರ ಅಧ್ಯಯನ..<br />
ಮುಂದಿನ ನಾಲ್ಕು ವರ್ಷಗಳಲ್ಲಿ ಸಕಲ ಶಾಸ್ತ್ರಗಳಲ್ಲಿ ಪರಿಣತಿ..!<br />
ಮತ್ತೆ ನಾಲ್ಕು ವರ್ಷಗಳ ಪ್ರಸ್ಥಾನ ತ್ರಯಗಳಿಗೆ ಭಾಷ್ಯರಚನೆ..!<br />
ಇವು ಪೂರ್ವ ಸಿದ್ಧತೆಯ ಹದಿನಾರು ವರ್ಷಗಳು..!<br />
ಮತ್ತೆ ಹದಿನಾರೇ ವರ್ಷಗಳಲ್ಲಿ ಅಖಂಡ ಭಾರತ ವರ್ಷದ( ಈಗಿನ ಪಾಕಿಸ್ಥಾನ,ಬಾಂಗ್ಲಾ,ಭರ್ಮಾ ದೇಶಗಳು ಸೇರಿದಂತೆ) ಭ್ರಮಣ..!<br />
ಸರ್ವಜ್ಞ ಪೀಠಾರೋಹಣ..</p>
<p>ಇಂದು ಈ ದೇಶದಲ್ಲಿ ಧರ್ಮ ಸಂಸ್ಕೃತಿಗಳೆಂಬ ಶಬ್ಧಗಳಾದರೂ ಉಳಿದಿದ್ದರೆ ಅದಕ್ಕೆ ಆದಿ ಶಂಕರಾಚಾರ್ಯರು ಮಾಡಿದ ಕಾರ್ಯಗಳೇ ಕಾರಣ..!</p>
<p>ಆ ಹದಿನಾರು ವರ್ಷಗಳಲ್ಲಿ ಶಂಕರಾಚಾರ್ಯರು ಮಾಡಿದ ಕಾರ್ಯಗಳು ಇಂದಿಗೂ ಉಳಿದಿವೆ&#8230;ಬೆಳೆಯುತ್ತಿವೆ..!</p>
<p>ತ್ರೇತಾಯುಗದ ಶ್ರೀರಾಮಚಂದ್ರ ಮತ್ತು ಕಲಿಯುಗದ ಆದಿಶಂಕರಾಚಾರ್ಯರು ಇವರೀರ್ವರು ಮಹಾಪುರುಷರ ಕಾಲಗಳೆರಡಾದರೂ ಕಾರ್ಯಗಳೆರಡಲ್ಲ..!!<br />
ಕಾರ್ಯ ಸಾಧನೆಯ ಪರಿ ಬೇರಲ್ಲ..!<br />
ಉಪಕರಣಗಳ ಬರವಿದ್ದರೂ, ಜಗವೆಲ್ಲ ಎದುರಾಗಿದ್ದರೂ ಹಿಮಾಲಯವನ್ನು ಹೋಲುವ ತಮ್ಮ ಅಂತಃಸತ್ವದ ಬಲದಿಂದ ಗೆದ್ದವರಿವರು..!<br />
ವಿಶೇಷವೆಂದರೆ ಶ್ರೀರಾಮ ಜನಿಸಿದ್ದು ಪುನರ್ವಸು ನಕ್ಷತ್ರದಲ್ಲಿ..<br />
ಶ್ರೀ ಶಂಕರಾಚಾರ್ಯರು ಜನಿಸಿದ್ದು ಆದ್ರಾ೯ ನಕ್ಷತ್ರದಲ್ಲಿ..<br />
ಆಕಾಶ ಮಂಡಲದಲ್ಲಿ ಜೊತೆ ಜೊತೆಗೇ ಬೆಳಗುವ ನಕ್ಷತ್ರಗಳಿವು..!<br />
ಶ್ರೀರಾಮ ಜನಿಸಿದ್ದು ಚೈತ್ರಮಾಸದಲ್ಲಿ..<br />
ಶಂಕರಾಚಾರ್ಯರು ಜನಿಸಿದ್ದು ವೈಶಾಖ ಮಾಸದಲ್ಲಿ..!<br />
ಒಂದೇ ಋತುವಿನಲ್ಲಿ ಒಂದರ ಪಕ್ಕ ಇನ್ನೊಂದಾಗಿಬರುವ ಎರಡು ಮಾಸಗಳಿವು..!</p>
<p>ನಮಗೊಂದು ಹಿಮಾಲಯದಂಥ ಹೆಮ್ಮೆಯಿದೆ&#8230;<br />
ಆಕಾಶದಲ್ಲಿ ನಕ್ಷತ್ರಗಳಾಗಿ ಜೊತೆಗಿರುವ, ಸಂವತ್ಸರದಲ್ಲಿ ಮಾಸಗಳಾಗಿ ಜೊತೆಗಿರುವ ಇವರೀರ್ವರು ಮಹಾಪುರುಷರು ಒಂದುಗೂಡುವ ಇನ್ನೊಂದು ಸ್ಥಾನವೆಂದರೆ<br />
ಅದು ನಮ್ಮಮಠ..!!</p>
<p>ನಮ್ಮ ಆರಂಭ ಶಂಕರಾಚಾರ್ಯರಾದರೆ, ಆರಾಧ್ಯ ಶ್ರೀರಾಮ..!<br />
ಶ್ರೀರಾಮ ನಮ್ಮ ಶಕ್ತಿಯಾದರೆ ಶಂಕರಾಚಾರ್ಯರು ನಮ್ಮ ಬೆಳಕು..!<br />
ಶಂಕರರು ಸರಿಯಾದ ಗುರಿಯತ್ತ ದಾರುತೋರಿದರೆ&#8230;ಕೈ ಹಿಡಿದು ನಡೆಸುವವನು ಶ್ರೀರಾಮ&#8230;!<br />
ಶ್ರೀರಾಮನವಮಿಯ ಸಂಭ್ರಮವನ್ನು ಮೊನ್ನೆ ಮೊನ್ನೆ ಕಂಡಾಯಿತು ನಾಡಿದ್ದು ವೈಶಾಖ ಶುದ್ಧ ಪಂಚಮಿ&#8230;ಶಂಕರ ಜಯಂತಿ&#8230;!<br />
ಬಹಿರಂಗದ ಉಪಕರಣಗಳ ಮೇಲಿಟ್ಟ ಭರವಸೆಗಿಂತ ಮಿಗಿಲಾದಭರವಸೆಯನ್ನು ಅಂತರಂಗದ ಆತ್ಮಬಲದ ಮೇಲಿಟ್ಟರೆ ಅದು ಪರಮ ಗುರುವಿಗೂ ಪರಮ ಪುರುಷನಿಗೂ ಸಲ್ಲಿಸುವ ಪರಮಾದರ&#8230;!!</p>
<p>ಅದುವೇ ಶಂಕರಜಯಂತಿಯ ಸಾರ್ಥಕ ಆಚರಣೆ..!</p>
<p style="text-align: center;">|| ಹರೇರಾಮ ||</p>
]]></content:encoded>
			<wfw:commentRss>http://hareraama.in/blog/%e0%b2%a8%e0%b3%86%e0%b2%9a%e0%b3%8d%e0%b2%9a%e0%b3%81-%e0%b2%a8%e0%b2%bf%e0%b2%a8%e0%b3%8d%e0%b2%a8%e0%b2%be%e0%b2%a4%e0%b3%8d%e0%b2%ae%e0%b2%b5%e0%b2%a8%e0%b3%86/feed/</wfw:commentRss>
		<slash:comments>5</slash:comments>
		</item>
	</channel>
</rss>
