<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HareRaama.in : Official homepage of Sri Sri Raghaveshwara Bharati Mahaswamiji &#187; ರಾಮ</title>
	<atom:link href="http://hareraama.in/category/blog/raama-blog/feed/" rel="self" type="application/rss+xml" />
	<link>http://hareraama.in</link>
	<description>Official homepage of Sri Sri Raghaveshwara Bharati Mahaswamiji</description>
	<lastBuildDate>Thu, 29 Jul 2010 12:48:29 +0000</lastBuildDate>
	<generator>http://wordpress.org/?v=2.9.2</generator>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಕಾವ್ಯ ಕನ್ನಿಕೆಗಾಗಿ ವರಕಂಠದ ಅನ್ವೇಷಣೆ..!</title>
		<link>http://hareraama.in/blog/kavya-kannikege-vara-kanta/</link>
		<comments>http://hareraama.in/blog/kavya-kannikege-vara-kanta/#comments</comments>
		<pubDate>Thu, 22 Jul 2010 00:30:49 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[ರಾಘವೇಶ್ವರ]]></category>
		<category><![CDATA[ಲವಲವಿಕೆ]]></category>

		<guid isPermaLink="false">http://hareraama.in/?p=5880</guid>
		<description><![CDATA[ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..
ಆಮೇಲೆ ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..
ಎಲ್ಲೆಡೆ ಎದ್ದು ಕಾಣುವ ತಥ್ಯವಿದು..

ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ ವ್ಯಕ್ತವಾಗುವುದು..!?
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ ಯೋಜನೆಗಳಲ್ಲವೆ, 

ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?
ಕದನಗಳು ಮೊದಲಾಗುವುದು ಮನಸಿನಲ್ಲಿ ..
ಪತನಗಳು ಮೊದಲಾಗುವುದು ಮನಸಿನಲ್ಲಿ..]]></description>
			<content:encoded><![CDATA[<p style="text-align: center;"><strong>|| ಹರೇ ರಾಮ ||</strong></p>
<p>ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..<br />
ಆಮೇಲೆ  ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..<br />
ಎಲ್ಲೆಡೆ ಎದ್ದು ಕಾಣುವ  ತಥ್ಯವಿದು..</p>
<p>ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ  ವ್ಯಕ್ತವಾಗುವುದು..!?<br />
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ  ಯೋಜನೆಗಳಲ್ಲವೆ,</p>
<p>ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?<br />
ಕದನಗಳು  ಮೊದಲಾಗುವುದು ಮನಸಿನಲ್ಲಿ ..<br />
ಪತನಗಳು ಮೊದಲಾಗುವುದು ಮನಸಿನಲ್ಲಿ..<br />
ವಿಜಯ-ಪರಾಭವಗಳು  ಮೊದಲಾಗುವುದು ಮನಸಿನಲ್ಲಿ ..<br />
ಹುಟ್ಟುವುದೆಲ್ಲವೂ ಮೊದಲು ಒಳಗೇ ಹುಟ್ಟಬೇಕು..<br />
ಸಾಯುವುದೆಲ್ಲವೂ  ಮೊದಲು ಒಳಗೇ ಸಾಯಬೆಕು..<br />
ಇದು ಸೃಷ್ಟಿಯ ನಿಯಮ..</p>
<p>ಪ್ರಾಣಿಗಳು ಅಮ್ಮನ ಒಳಗೆ  ಗರ್ಭವಾಗಿ ಮೊದಲು ಹುಟ್ಟುತ್ತವೆ,<br />
ಜಗತ್ತಿಗೆ ಪ್ರಸವದ ಮೂಲಕ ಪ್ರಕಟವಾಗುತ್ತವೆ..<br />
ಪಕ್ಷಿಗಳು  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನ್ಮ ತಾಳುತ್ತವೆ..<br />
ಅಮ್ಮನ  ಹೊಟ್ಟೆಯೊಳಗೆ &#8211; ಅದರೊಳಗಿನ ಮೊಟ್ಟೆಯೊಳಗೆ ಜನ್ಮ ತಾಳುತ್ತವೆ..!<br />
ಸಾವಂತೂ  ಸದ್ದಿಲ್ಲದಂತೆ ಮೊದಲೊಳಸೇರಿ..<br />
ಗೆದ್ದಲಿನಂತೆ ಕೆಲಸವನ್ನು  ಮಾಡಿ, ಮತ್ತೆ  ಸುದ್ದಿಯಾಗುತ್ತದೆ..!</p>
<p>ಹೆಚ್ಚು ಮಾತೇಕೆ..?<br />
ವಿಶ್ವ ಸೃಷ್ಟಿಯೇ ಹೀಗೆ..<br />
ಈಶ್ವರನ  ಅಂತರಂಗದಲ್ಲಿ ಮಹಾಸಂಕಲ್ಪ ರೂಪದಲ್ಲಿ ಜಗವು ಮೊದಲು ಸೃಷ್ಟಿಯಾಯಿತು..<br />
ಆಮೇಲೆ ತಾನೇ  ಬಹಿರಂಗದಲ್ಲಿ ವಿಶ್ವರೂಪವಾಗಿ ಪ್ರಕಟವಾದದ್ದು..?</p>
<p>ಈ ಸನ್ನಿವೇಶದಲ್ಲಿ ಪೂಜ್ಯ.  ರಾಮಭದ್ರಾಚಾರ್ಯರು ಕೊಡುತ್ತಿದ್ದ ಉದಾಹರಣೆಯೊಂದು ನೆನಪಾಗುತ್ತದೆ..<br />
ಕೆ.ಆರ್.ಎಸ್.ಕಟ್ಟಿದ್ದು  ವಿಶ್ವೇಶ್ವರಯ್ಯನವರೆಂದು ಜಗತ್ತೇ ಹೇಳುತ್ತದೆ.<br />
ನಿಜವಾಗಿಯೂ ಆ ಕೆಲಸ ಮಾಡಿದ್ದು  ಸಾಮಾನ್ಯ ಕೂಲಿಕಾರರು- ಮೇಸ್ತ್ರಿಗಳಲ್ಲವೇ.?<br />
ವಿಶ್ವೇಶ್ವರಯ್ಯನವರೇನು  ಕಲ್ಲು-ಮಣ್ಣುಗಳನ್ನು ಹೊತ್ತಿದ್ದುಂಟೇ..?<br />
ಗಾರೆ ಕಲಸಿ ಮೆತ್ತಿದ್ದುಂಟೇ&#8230;?<br />
ನಿಜ,  ವಿಶ್ವೇಶ್ವರಯ್ಯನವರು ಜಲ್ಲಿಕಲ್ಲುಗಳನ್ನು ಮುಟ್ಟದಿರಬಹುದು..<br />
ಆದರೆ,  ಕೆ.ಆರ್.ಎಸ್.ಮೊದಲು ನಿರ್ಮಾಣವಾದದ್ದು ಅವರ ಬುದ್ದಿ-ಹೃದಯಗಳಲ್ಲಿ..!<br />
ಅವರ  ಕಲ್ಪನೆ-ಯೋಜನೆಗಳಿಗೆ ಬಹಿರಂಗದಲ್ಲಿ ಆಕಾರ ಕೊಟ್ಟವರು ಕಾರ್ಮಿಕರು-ಮೇಸ್ತ್ರಿಗಳು..<br />
ವಿಶ್ವೇಶ್ವರಯ್ಯನವರ  ಯೋಜನೆಯಿಲ್ಲದಿದ್ದರೆ ಕೂಲಿಕಾರರು- ಮೇಸ್ತ್ರಿಗಳು ಕಟ್ಟುವುದಾದರೂ ಏನನ್ನು..?<br />
ಕಾರ್ಮಿಕರು  ಇಲ್ಲದಿದ್ದರೆ ವಿಶ್ವೇಶ್ವರಯ್ಯನವರು ಯೋಜನೆಯನ್ನಿಟ್ಟುಕೊಂಡು ಮಾಡುವುದಾದರೂ ಏನನ್ನು..?</p>
<p>ಒಳ-ಹೊರಗಳು  ಸೇರಿಯೇ ಬದುಕು ಪೂರ್ಣ..!<br />
ಹಾಗೆ ನೋಡಿದರೆ ಜೀವನಕ್ಕೆ ಎರಡೇ ಅಂಗಗಳು..!<br />
ಅಂತರಂಗವೊಂದು.. ಬಹಿರಂಗವಿನ್ನೊಂದು..<br />
ಒಂದಿಲ್ಲದೆ ಇನ್ನೊಂದು ಪೂರ್ಣವಲ್ಲ.<br />
ಬಹಿರಂಗವಿಲ್ಲದ  ಅಂತರಂಗ.. ದೇಹವಿಲ್ಲದ ಜೀವದಂತೆ..ಪ್ರೇತ..!<br />
ಅಂತರಂಗವಿಲ್ಲದ ಬಹಿರಂಗ ಜೀವವಿಲ್ಲದ  ದೇಹದಂತೆ..ಶವ..!</p>
<p>ಈಗ ರಾಮಾಯಣಕ್ಕೆ ಬನ್ನಿ..<br />
ಅಂತರಂಗ-ಬಹಿರಂಗಗಳ  ಅನ್ಯೋನ್ಯಾಶ್ರಯದ ಆಟವನ್ನು ಇಲ್ಲಿಯೂ ನೋಡಿ&#8230;<br />
ಶಬ್ಧಗಳು ಅನುಭವದಲ್ಲಿ  ಪರ್ಯವಸಾನವಾಗಬೇಕು..<br />
ಅನುಭವಗಳು ಪುನಃ ಶಬ್ದರೂಪವನ್ನು ತಾಳಬೇಕು..</p>
<div id="attachment_5890" class="wp-caption alignright" style="width: 160px"><a href="http://hareraama.in/wp-content/uploads/2010/07/ValmikiMaharshi.jpg"><img class="size-full wp-image-5890" title="ValmikiMaharshi" src="http://hareraama.in/wp-content/uploads/2010/07/ValmikiMaharshi.jpg" alt="ಅಂತರಂಗದಲ್ಲೇ ರಾಮಾಯಣವ ಕಂಡ ಮಹಾಮುನಿ" width="150" height="220" /></a><p class="wp-caption-text">ಅಂತರಂಗದಲ್ಲೇ ರಾಮಾಯಣವ ಕಂಡ ಮಹಾಮುನಿ</p></div>
<p>ರಾಮನ ಕುರಿತು  ಕೇಳಿದ್ದು ಅನುಭವಕ್ಕೆ ಬಂದರೆ ಆತ್ಮೋದ್ಧಾರ..<br />
ರಾಮನ ಅನುಭವ ಶಬ್ದಗಳ ರೂಪದಲ್ಲಿ  ಅಭಿವ್ಯಕ್ತಗೊಂಡರೆ ಅದು ಲೋಕೋದ್ಧಾರ..<br />
ಮನದ ಮನೆಯೊಳಗೆ ಮೌನದಲ್ಲಿ &#8211; ತನ್ಮಯತೆಯಲ್ಲಿ  ಕುಳಿತು ವಾಲ್ಮೀಕಿಗಳು ನಾರದರಿಂದ ಸಂಕ್ಷೇಪವಾಗಿ ಕೇಳಿದ್ದನ್ನು ಬಹು ವಿಸ್ತಾರವಾಗಿ  ನೋಡಿದರು..<br />
ಬಳಿಕ ಬ್ರಹ್ಮನಾಣತಿಯಂತೆ ರಾಮಾಯಣದರ್ಶನದ ಅನುಭೂತಿಗೆ ಶಬ್ದಗಳ ರೂಪವನ್ನು  ನೀಡಿದರು..<br />
ಅಬ್ಬಾ..!<br />
ಅದೆಂಥಾ ವಿಸ್ತಾರ..!</p>
<p>ಒಂದೊಂದು ಶ್ಲೋಕದಲ್ಲಿ  ಮೂವತ್ತೆರಡು ಅಕ್ಷರಗಳು..<br />
ಅಂತಹ ಶ್ಲೋಕಗಳು ಇಪ್ಪತ್ತನಾಲ್ಕು  ಸಾವಿರ&#8230;!<br />
ಒಂದೊಂದು ಅಧ್ಯಾಯದಲ್ಲಿ ಅದೆಷ್ಟೋ ಶ್ಲೋಕಗಳು..<br />
ಅಂತಹ ಅಧ್ಯಾಯಗಳು  ಐದುನೂರು..!<br />
ಒಂದೊಂದು ಕಾಂಡದಲ್ಲಿ ಅದೆಷ್ಟೋ ಅಧ್ಯಾಯಗಳು..<br />
ಅಂತಹ ಕಾಂಡಗಳು  ಏಳು..!<br />
ಈ ಮೇರುಕೃತಿ ಯಾವುದೇ ಲಿಪಿಯ ಸಹಾಯವಿಲ್ಲದೆ ಮುನಿಯ ಮನದಲ್ಲಿಯೇ  ರಚಿತವಾಯಿತೆಂದರೆ ಆ ಮೇಧಾಶಕ್ತಿ ಅದೆಂಥದ್ದಿರಬೇಕು..!</p>
<p>ಇಲ್ಲಿಗೆ ರಾಮಾಯಣಾವತಾರದ  ಅಂತರಂಗದ ಭಾಗ ಮುಗಿದಿತ್ತು..<br />
ಬಹಿರಂಗದ ಭಾಗವಿನ್ನಷ್ಟೇ ಪ್ರಾರಂಭವಾಗಬೇಕಿತ್ತು&#8230;!<br />
ಸತ್ಯದ  ಅನ್ವೇಷಣೆ ಮುಗಿದಿತ್ತು..<br />
ಸೇತುವಿನ ಅನ್ವೇಷಣೆ ಆರಂಭವಾಗಿತ್ತು..!<br />
ಇತ್ತ  ವಾಲ್ಮೀಕಿಗಳ ಮನದಲ್ಲಿ ರಾಮಾಯಣದ ರಚನೆಯಾಗಿತ್ತು..<br />
ಅತ್ತ ಲೋಕಕ್ಕೆ ಅದರ ಅಗತ್ಯವೂ  ಅಗಾಧವಾಗಿತ್ತು..!<br />
ಇನ್ನುಳಿದ ಪ್ರಶ್ನೆ- <strong>ನಡುವೆ ಸೇತುವಾಗುವವರು </strong>ಯಾರು..?<br />
ದೇವರನ್ನು  ಲೋಕಕ್ಕೆ ತೋರಲು ದ್ವಾರವೊಂದು ಬೇಕಾಗುತ್ತದೆ..<br />
ಕೌಸಲ್ಯೆಯ ಒಡಲಲ್ಲಿ ಅವತರಿಸಿದ  ರಾಮನು ಲೋಕಕ್ಕೆ ಪ್ರಕಟಗೊಳ್ಳಲು ಅಯೋಧ್ಯೆಯು ದ್ವಾರವಾಯಿತು..<br />
ವಾಲ್ಮೀಕಿಯ ಮನದಲ್ಲಿ  ಅವತರಿಸಿದ ರಾಮನ ಶಬ್ದರೂಪವು &#8211; ರಾಮಾಯಣವು ವಿಶ್ವ ಮುಖಕ್ಕೆ ಪ್ರಕಟಗೊಳ್ಳಲು  ದ್ವಾರವಾವುದು..?<br />
ಅನುಭವವು ಅಕ್ಷರವಾಗಿತ್ತು..ಅಕ್ಷರಕ್ಕೊಂದು ಧ್ವನಿ ಬೇಕಿತ್ತು..!<br />
ದೇವರ  ಹೆಜ್ಜೆಗಳನ್ನು ಲೋಕಕ್ಕೆ ತೋರಬಲ್ಲ ದಿವ್ಯಧ್ವನಿಗಾಗಿ ವಾಲ್ಮೀಕಿಗಳ ಹುಡುಕಾಟ  ನಡೆದಿತ್ತು..!<br />
ಥಿಯರಿ<em> (Theory)</em> ಮತ್ತು ಪ್ರಾಕ್ಟಿಕಲ್ <em>(Practical)</em> ಎಂಬ ಎರಡು ಶಬ್ದಗಳು ಲೋಕದಲ್ಲಿ  ಬಹಳವಾಗಿ ಬಳಕೆಯಲ್ಲಿವೆ..<br />
ಥಿಯರಿ ಎಂಬುದು ಅಂತರಂಗದ ಕಾರ್ಯವಾದರೆ, ಪ್ರಾಕ್ಟಿಕಲ್  ಬಹಿರಂಗ ಕ್ಷೇತ್ರಕ್ಕೆ ಸಂಬಂಧಿಸಿದ್ದು..<br />
ರಾಮಾಯಣವೆಂಬುದು ಥಿಯರಿಗೆ ಸೀಮಿತವಲ್ಲ..<br />
ಅದೊಂದು  ಪ್ರಯೋಗಕಾವ್ಯ..<br />
ಪ್ರಯೋಗವೆಂದ ಮೇಲೆ ಪರಿಣಾಮವಿರಲೇಬೇಕಲ್ಲವೇ..?<br />
ಸರಿಯಾಗಿ  ಪ್ರಯೋಗಿಸಲ್ಪಟ್ಟಾಗ ಜೀವಗಳ ಮೇಲೆ ಅತ್ಯಂತ ಶುಭವಾದ ಪರಿಣಾಮವನ್ನು ಬೀರಬಲ್ಲ  ಕಾವ್ಯವದು..!<br />
ಬದುಕಿನಲ್ಲಿ &#8216;ರಾಮ&#8217;ಗುಣಗಳನ್ನು ತುಂಬಬಲ್ಲ,&#8217;ರಾವಣ&#8217;ದೋಷಗಳನ್ನು  ನಿವಾರಿಸಬಲ್ಲ ಶಬ್ದಾರ್ಥರಸಗಳ ತ್ರಿವೇಣೀಸಂಗಮವದು..!<br />
ರಾಮಾಯಣದ ವಿಷಯ-ವಿನ್ಯಾಸದಲ್ಲಿ  ವಿಜ್ಞಾನವಿದೆ..<br />
ಅಕ್ಷರಜೋಡಣೆಯಲ್ಲಿ ವಿಜ್ಞಾನವಿದೆ..<br />
ಉಚ್ಚಾರಣ ಪ್ರಕಾರದಲ್ಲಿ  ವಿಜ್ಞಾನವಿದೆ..<br />
ರಾಗ-ತಾಳಗಳ ಸಂಯೋಜನೆ-ಪ್ರಸ್ತುತಿಯಲ್ಲಿ ವಿಜ್ಞಾನವಿದೆ..!</p>
<p>ಮರ್ಮವರಿತು  ಪ್ರಯೋಗಿಸಲ್ಪಟ್ಟಾಗ ದಾನವತೆಯಿಂದ ಮಾನವತೆಗೆ..<br />
ಮಾನವತೆಯಿಂದ ಮಾಧವತೆಗೆ ಏರಿಸಬಲ್ಲ  ಜೀವನ ಪರಿವರ್ತನೆಯ ಮಹಾಕಾವ್ಯವದು..!<br />
ಕೇವಲ ಟೈಂಪಾಸ್ ಕಾವ್ಯವಲ್ಲ..!<br />
ಯಾವ  ಸ್ಥಿತಿಯಲ್ಲಿ <em>(wave length)</em> ರಾಮನು ಬದುಕನ್ನನುಭವಿಸಿದನೋ,<br />
ಆ ಸ್ಥಿತಿ <em>(wave  length)</em> ವಾಲ್ಮೀಕಿಗಳಲ್ಲುಂಟಾದಾಗ ತಾನೆ ಅವರಿಗೂ ರಾಮಾಯಣ ದರ್ಶನವಾಯಿತು ..!<br />
ಅದನ್ನು  ಲೋಕಮುಖಕ್ಕೆ ಪ್ರಸ್ತುತಪಡಿಸಲು, ಆ ಸ್ಥಿತಿಯನ್ನು (wave length) ತಲುಪಿ ಹಾಡುವವರೇ  ಬೇಕಲ್ಲವೇ..?<br />
ಆದರೆ.. ಅಂಥವರೆಲ್ಲಿ. . .? ಎಲ್ಲಿ . . ?  ಎಲ್ಲಿ . . ?<br />
ರಾಮಭಾವವನ್ನು  ರಾಮನಾದದಲ್ಲಿ, ರಾಮರಾಗದಲ್ಲಿ, ರಾಮತಾಳದಲ್ಲಿ ಹೊರಗೆ ತರಬಲ್ಲ ಕುಶಲರೆಲ್ಲಿ..?<br />
ಅದೋ..ಬಂದರು..ಬಂದರು..<br />
ವಂದಿಸಿಕೊಂಡರು..<br />
ಭಾವ-ರಾಗ-ತಾಳ  ಕುಶಲರು&#8230;<br />
<strong>ಕುಶ-ಲವರು..!</strong></p>
<p><strong> </strong><em>{ಚಿತ್ರಕೃಪೆ: ಅಂತರ್ಜಾಲ }</em></p>
]]></content:encoded>
			<wfw:commentRss>http://hareraama.in/blog/kavya-kannikege-vara-kanta/feed/</wfw:commentRss>
		<slash:comments>32</slash:comments>
		</item>
		<item>
		<title>ಮುನಿಮನದೊಳು ಮಾತಾಗಿ ಮೂಡಿದನೆ ರಾಮ..?!</title>
		<link>http://hareraama.in/blog/%e0%b2%ae%e0%b3%81%e0%b2%a8%e0%b2%bf%e0%b2%ae%e0%b2%a8%e0%b2%a6%e0%b3%8a%e0%b2%b3%e0%b3%81-%e0%b2%ae%e0%b2%be%e0%b2%a4%e0%b2%be%e0%b2%97%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%a6%e0%b2%a8/</link>
		<comments>http://hareraama.in/blog/%e0%b2%ae%e0%b3%81%e0%b2%a8%e0%b2%bf%e0%b2%ae%e0%b2%a8%e0%b2%a6%e0%b3%8a%e0%b2%b3%e0%b3%81-%e0%b2%ae%e0%b2%be%e0%b2%a4%e0%b2%be%e0%b2%97%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%a6%e0%b2%a8/#comments</comments>
		<pubDate>Thu, 15 Jul 2010 16:08:02 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=5625</guid>
		<description><![CDATA[
&#124;&#124; ಹರೇರಾಮ &#124;&#124;
ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು..
ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು..
ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು..
ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..?
ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..?
ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!?
ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ ಮಡಕೆ ಚೂರುಗಳಲ್ಲಿಯೋ ಹುಡುಕುವುದುಂಟು..
ಅಂತಹವರಿಗೆ ಸಿಗುವುದು ಹರಿದ-ಮುರಿದ ಇತಿಹಾಸ ಮಾತ್ರವೇ..!
ಪೂರ್ಣ ಸತ್ಯದರ್ಶವಾಗುವುದೆಂದೂ ಅಂತಂಗದಲ್ಲಿಯೇ..!
ದೇವಮುನಿಯ ಮುಖದಿಂದ ರಾಮಕಥಾಶ್ರವಣ..
ಮತ್ತೆ ಮತ್ತೆ ಮನದಲ್ಲಿಯೇ ಮನನ..
ಧ್ಯಾನದಲ್ಲಿ ರಾಮಾಯಣದರ್ಶನ ..
ಇದು ವಾಲ್ಮೀಕಿಗಳ ತ್ರಿವಿಕ್ರಮ..!
(ತ್ರಿವಿಕ್ರಮ :- ದಿವಿ-ಭುವಿಗಳನ್ನಳೆಯುವ ಮೂರು ಹೆಜ್ಜೆಗಳು..)
ಇಂದಿನ [...]]]></description>
			<content:encoded><![CDATA[<div>
<p style="text-align: center;">|| ಹರೇರಾಮ ||</p>
<p>ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು..<br />
ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು..</p>
<p>ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು..<br />
ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..?</p>
<p>ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..?<br />
ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!?<br />
ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ ಮಡಕೆ ಚೂರುಗಳಲ್ಲಿಯೋ ಹುಡುಕುವುದುಂಟು..<br />
ಅಂತಹವರಿಗೆ ಸಿಗುವುದು ಹರಿದ-ಮುರಿದ ಇತಿಹಾಸ ಮಾತ್ರವೇ..!<br />
ಪೂರ್ಣ ಸತ್ಯದರ್ಶವಾಗುವುದೆಂದೂ ಅಂತಂಗದಲ್ಲಿಯೇ..!</p>
<p><strong>ದೇವಮುನಿಯ ಮುಖದಿಂದ ರಾಮಕಥಾಶ್ರವಣ..<br />
ಮತ್ತೆ ಮತ್ತೆ ಮನದಲ್ಲಿಯೇ ಮನನ..<br />
ಧ್ಯಾನದಲ್ಲಿ ರಾಮಾಯಣದರ್ಶನ ..<br />
ಇದು ವಾಲ್ಮೀಕಿಗಳ ತ್ರಿವಿಕ್ರಮ..!<br />
</strong>(ತ್ರಿವಿಕ್ರಮ :- ದಿವಿ-ಭುವಿಗಳನ್ನಳೆಯುವ ಮೂರು ಹೆಜ್ಜೆಗಳು..)</p>
<p>ಇಂದಿನ ಕಾಲದಲ್ಲಿ ಯಾವುದಾದರೊಂದು ಘಟನೆಯ ಬಗ್ಗೆ ಬರೆಯಬೇಕೆಂದರೆ, ಮೊದಲು ಗ್ರಂಥಾಲಯದಲ್ಲಿಯೋ ಅಂತರ್ಜಾಲದಲ್ಲಿಯೋ ಹುಡುಕುತ್ತಾರೆ..<br />
ಘಟನೆಯ ಭಾಗಿಗಳನ್ನೋ, ಸಾಕ್ಷಿಗಳನ್ನೋ ಸಂದರ್ಶನ ಮಾಡುವುದೂ ಉಂಟು..</p>
<p>ಆದರೆ ವಾಲ್ಮೀಕಿಗಳು ಇದಾವುದನ್ನೂ ಮಾಡಲಿಲ್ಲ..!<br />
ಶುದ್ಧಾಚಮನ ಮಾಡಿದರು..ಬದ್ಧಾಂಜಲಿಗಳಾದರು..ಪೂರ್ವಮುಖವಾದ ದರ್ಭೆಗಳಲ್ಲಿ ಸಮಾಸೀನರಾದರು.<br />
ರಾಮನೆಂಬ ತತ್ವದಲ್ಲಿ ತನ್ನ ಮನವನ್ನು ನೆಟ್ಟುಬಿಟ್ಟರು..!<br />
ಅವರು ತನ್ಮಯತೆಯ ಉತ್ತುಂಗಕ್ಕೇರಿದಾಗ&#8230;.<br />
ಯೋಗವು ಅವರನ್ನು ಆಮೂಲಾಗ್ರವಾಗಿ ಆವರಿಸಿದಾಗ..<br />
&#8216;ರಾಮ&#8217;ನೆಂಬ ಧರ್ಮವು ಅವರನ್ನು ಆಳತೊಡಗಿದಾಗ..<br />
ಜಗತ್ತು ಮರೆಯಾಯಿತು..<br />
ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ರಾಮಾಯಣದ ದೃಶ್ಯಾವಳಿಗಳು ಒಂದಾದ ಮೇಲೊಂದರಂತೆ ಗೋಚರಿಸತೊಡಗಿದವು..!</p>
<p>ನಶ್ವರ ಬದುಕಿನಲ್ಲಿ ಘಟನೆಗಳು ನಡೆದು ಮುಗಿದೇ ಹೋಗುತ್ತವೆ..<br />
ಹರಿದುಹೋದ ನೀರು ಮತ್ತೆ ಬಾರದಂತೆ ಅವು ಪುನಃ ಸಿಗುವುದೇ ಇಲ್ಲ..!</p>
<p>ಈಶ್ವರದ ಬದುಕನ್ನು ನೋಡಿ..!<br />
ಅದು ಅವಿನಾಶಿ.. ಯುಗ-ಯುಗಗಳೇ ಕಳೆದರೂ ರಾಮನ ಬದುಕಿನ ಘಟನೆಗಳನ್ನು ಧ್ಯಾನಮಗ್ನತೆಯಲ್ಲಿ ಪುನಃ ಪುನಃ<br />
ಕಾಣಲು ಸಾಧ್ಯವಿದೆಯೆಂದರೆ..ಎಂಥ ಅದ್ಭುತವಿದು..!</p>
<p><strong>ನಿನಗಿರದ ಕಣ್-ಬಾಯಿ ವಾಲ್ಮೀಕಿಗೆಂತಾಯ್ತು?<br />
ಮುನಿಕವಿತೆಗೆಂತು ನಿನ್ನೊದೆಯೊಳೆಡೆಯಾಯ್ತು?<br />
ಘನಮಹಿಮನೊಳ್ ಜ್ವಲಿಸುತಿತರರೊಳ್ ನಿದ್ರಿಸುತ,<br />
ಅನಲನೆಲ್ಲರೊಳಿಹನು &#8211; ಮಂಕುತಿಮ್ಮ||</strong></p>
<p>ವಾಲ್ಮೀಕಿಯ ಕಣ್ಣು ನಮಗುಂಟಾದರೆ ರಾಮಾಯಣ ದರ್ಶನವಿಂದಿಗೂ ಸಾಧ್ಯ..<br />
ವಾಲ್ಮೀಕಿಯ ಬಾಯಿ ನಮಗುಂಟಾದರೆ ಅದನ್ನು ಬಣ್ಣಿಸಲೂ ಸಾಧ್ಯ..<br />
ದ್ವಾರ ಸದಾ ತೆರೆದಿದೆ&#8230;ಇನ್ನು ನಾವು ಕಣ್ತೆರೆಯುವುದೊಂದೇ ಬಾಕಿ&#8230;.!</p>
<p>ಬ್ರಹ್ಮರ್ಷಿಗಳ ಪರಮಾನುಭವಗಳು ವೇದಗಳ ರೂಪ ತಾಳುವಂತೆ..<br />
ನವಜಾತ ಶಿಶುವಿನ ಸುಖ-ದುಃಖಗಳು ನಗು-ಅಳುಗಳಾಗಿ ಪರಿಣಾಮವಾಗುವಂತೆ..<br />
ಸೃಷ್ಟಿಯ ಮೂಲವಾದ ಪರಂಜ್ಯೋತಿಯು ಬರಬರುತ್ತಾ ವಿಶ್ವವಿಸ್ತರವಾಗಿ ವಿಕಸಿತವಾಗುವಂತೆ..<br />
ಚೈತ್ರದ ಚಿಗುರನ್ನು ಸೇವಿಸುವ ಕೋಗಿಲೆಯ ಆನಂದ , <strong>ಕುಹು-ಕುಹೂ</strong> ಆಗಿ ಹೊರಹೊಮ್ಮುವಂತೆ..<br />
ವಾಲ್ಮೀಕಿಗಳ ಅಂತಶ್ಚಕ್ಷುವಿಗೆ ಗೋಚರಿಸಿದ ರಾಮಾಯಣದ ಘಟನೆಗಳು ಅವರ ಮನದ ಮನೆಯ ಮೌನ ಮುರಿದು ಮಾತನಾಡತೊಡಗಿದವು ..!<br />
೨೪ ಸಾವಿರ ಶ್ಲೋಕಗಳ,೫೦೦ ಅಧ್ಯಾಯಗಳ,೭ ಕಾಂಡಗಳ ಶ್ರೀಮದ್ರಾಮಾಯಣವು ಅವರೊಳಗೇ ರಚಿತವಾಗತೊಡಗಿತು&#8230;</p>
<p>ಬದುಕೆಂಬುದು ಸಾಧನೆ-ಶೋಧನೆ- ಬೋಧನೆಗಳ ಅನಂತ ಚಕ್ರವಾಗಬೇಕೆಂದು ಪೂಜ್ಯ ರಾಮಭದ್ರಾಚಾರ್ಯರು ಹೇಳುತ್ತಿದ್ದುದುಂಟು..<br />
ಸಾಧನೆಯ ಫಲವಾಗಿ ವಾಲ್ಮೀಕಿಗಳು ರಾಮಾಯಣವನ್ನು ಶೋಧಿಸಿದರು..<br />
ಹಾಗೆ ಶೋಧಿಸಿದ ರಾಮಾಯಣವನ್ನು ಕಾವ್ಯರೂಪದಲ್ಲಿ ಜಗತ್ತಿಗೆ ಬೋಧಿಸಿದರು.<br />
ಆ ಬೋಧನೆ ತುಳಸೀದಾಸರು, ತ್ಯಾಗರಾಜರಂತಹ ಅದೆಷ್ಟೋ ಸಾಧಕರಿಗೆ ಸಾಧನೆಯ ಪ್ರೇರಣೆಯನ್ನು ಕೊಟ್ಟಿತು..!<br />
ಅವರೂ ಶೋಧಿಸಿದರು..ಬೋಧಿಸಿದರು..<br />
ಹೀಗೆ ಸಾಧನೆ-ಶೋಧನೆ-ಬೋಧನೆಗಳ ಅನಂತಚಕ್ರದಲ್ಲಿಯೇ ರಾಮಾಯಣವು ಅನಂತವಾಗಿ ವಿಸ್ತರಿಸತೊಡಗಿದ್ದು..!</p>
<p>(ಇನ್ನೂ ಇದೆ)</p>
<p style="text-align: center;">|| ಹರೇರಾಮ ||</p>
</div>
]]></content:encoded>
			<wfw:commentRss>http://hareraama.in/blog/%e0%b2%ae%e0%b3%81%e0%b2%a8%e0%b2%bf%e0%b2%ae%e0%b2%a8%e0%b2%a6%e0%b3%8a%e0%b2%b3%e0%b3%81-%e0%b2%ae%e0%b2%be%e0%b2%a4%e0%b2%be%e0%b2%97%e0%b2%bf-%e0%b2%ae%e0%b3%82%e0%b2%a1%e0%b2%bf%e0%b2%a6%e0%b2%a8/feed/</wfw:commentRss>
		<slash:comments>15</slash:comments>
		</item>
		<item>
		<title>ಕಾವ್ಯ-ಸೃಷ್ಟಿಕರ್ತಾ..!</title>
		<link>http://hareraama.in/blog/%e0%b2%95%e0%b2%be%e0%b2%b5%e0%b3%8d%e0%b2%af-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%95%e0%b2%b0%e0%b3%8d%e0%b2%a4%e0%b2%be/</link>
		<comments>http://hareraama.in/blog/%e0%b2%95%e0%b2%be%e0%b2%b5%e0%b3%8d%e0%b2%af-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%95%e0%b2%b0%e0%b3%8d%e0%b2%a4%e0%b2%be/#comments</comments>
		<pubDate>Thu, 08 Jul 2010 17:39:23 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[hare raama barmha ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...! 'ಮಾನಿಷಾದ]]></category>

		<guid isPermaLink="false">http://hareraama.in/?p=5180</guid>
		<description><![CDATA[ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ...!
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.

ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...!
]]></description>
			<content:encoded><![CDATA[<p style="text-align: center;"><strong>||ಹರೇರಾಮ||</strong></p>
<p>ಒಮ್ಮೊಮ್ಮೆ ನಮ್ಮ ಕೃತಿಯ ಕುರಿತು ನಮ್ಮೊಳಗೇ ಅಚ್ಚರಿ ಮೂಡುವುದುಂಟು.ಇದು ಹೇಗಾಯಿತು ಎನ್ನುವ ಪ್ರಶ್ನೆ ಏಳುವುದುಂಟು ! ಆಗ ಅದು ಕೇವಲ ನಮ್ಮ  ಕೃತಿಯಲ್ಲವೆಂದೇ ತಿಳಿಯಬೇಕು.ನಮ್ಮನ್ನು ಮಾಧ್ಯಮವಾಗಿರಿಸಿಕೊಂಡು ಸೃಷ್ಟಿಕರ್ತನೇ ಹೊರ ತರುವ ಕೃತಿಯದು..! ನಮ್ಮ ಕೃತಿಯೇ ಆಗಿದ್ದರೆ, ಹೇಗಾಯಿತು ಎನ್ನುವ ಪ್ರಶ್ನೆಗೆ ಅವಕಾಶವಾದರೂ ಎಲ್ಲಿ?</p>
<p><span style="color: #339966;">ತಮ್ಮ ಮುಖದಿಂದಲೇ ತಾನಾಗಿ ಹೊರಹೊಮ್ಮಿದ </span><strong><span style="color: #339966;">&#8216;ಮಾನಿಷಾದ</span></strong><span style="color: #339966;">&#8216;ವನ್ನು ತಮ್ಮ ಕಿವಿಯಿಂದಲೇ ಕೇಳಿ ಅಚ್ಚರಿಗೊಂಡರು ವಾಲ್ಮೀಕಿಗಳು..!</span></p>
<p><span style="color: #0000ff;">ಅಚ್ಚರಿಯ ಆದಿಕವಿತೆಯ ಆವಿರ್ಭಾವಕ್ಕೆ ಪ್ರಪಂಚದ ಪಂಚ ಜೀವಿಗಳು ಸಾಕ್ಷಿ. ಬೇಡನ ಬಾಣಾಘಾತಕ್ಕೆ ಸಿಲುಕಿ ಸಾಯುವ ಪಕ್ಷಿ ಒಂದು ಸಾಕ್ಷಿಯಾದರೆ, ಸಾಯುವ ಪಕ್ಷಿಯನ್ನು ಕಂಡು ನೋಯುವ ಪಕ್ಷಿ, ಇನ್ನೊಂದು ಸಾಕ್ಷಿ !<br />
ಇನ್ನೆರಡು ಮಾನವ ಸಾಕ್ಷಿಗಳು. ವಾಲ್ಮೀಕಿಗಳಿಗೆ &#8216;ಬೇಡ-ಬೇಡ&#8217;ವೆನಿಸಿದ </span><strong><span style="color: #0000ff;">ಬೇಡ</span></strong><span style="color: #0000ff;">..ಬೇಕೆನಿಸಿದ ಭರದ್ವಾಜ&#8230;!<br />
ಐದನೆಯದು ಆತ್ಮಸಾಕ್ಷಿ. ಅದು ಬೇರೆ ಯಾರಲ್ಲ..ತನ್ನ ಮತಿ-ಅನುಮತಿಗಳಿಲ್ಲದೆ, ಸಂಕಲ್ಪ ಪ್ರಯತ್ನಗಳಿಲ್ಲದೆ, ತಾನೇತಾನಾಗಿ ತನ್ನೊಳಗಿಂದ ಹೊರಹೊಮ್ಮುವ  ಶ್ಲೋಕವೊಂದನ್ನು ಕಂಡು ಮೂಕರಾದ ವಾಲ್ಮೀಕಿಗಳೇ..!</span></p>
<p>ಈ ಪಂಚ ಸಾಕ್ಷಿಗಳಲ್ಲಿ ವಾಲ್ಮೀಕಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿದ್ದುದು ಭರದ್ವಾಜನೊಂದಿಗೆ ಮಾತ್ರ. ಪಾಲ್ಗಡಲು ತರಂಗವೊಂದನ್ನು ಕರೆದು ತನ್ನೊಳಗಿನಿಂದ ಉದಯಿಸಿ ಬರುವ ಚಂದ್ರನನ್ನು ತೋರಿಸಿದಂತೆ..<br />
ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.</p>
<p><span style="color: #008000;">&#8220;ಏನು ಸೋಜಿಗವಿದು!? ಛಂದಸ್ಸೂತ್ರದಲ್ಲಿ ಬದ್ಧವಾದ, ಸಮವಾದ ನಾಲ್ಕು ಪಾದಗಳಿಂದ ಶೋಭಿಸುವ, ನಾದ-ಲಯಗಳಲ್ಲಿ ನಲಿಯುವ ಕವಿತಾ ಕಾಮಧೇನುವೇ ಇಳೆಗಿಳಿದು ಬರುವುದನ್ನು ನೋಡು&#8230;<br />
ಇದು ಶಾಪವಲ್ಲ, ಶೋಕವಲ್ಲ&#8230;ಶ್ಲೋಕವಿದು..ಕರುಣರಸ ಪಾಕವಿದು..!&#8221;</span></p>
<p>ಭರದ್ವಾಜನ ಆತ್ಮ ಅಹುದೆಂದಿತು, ಮನ ಬಾಗಿತು,ತಲೆದೂಗಿತು.ವಾಲ್ಮೀಕಿಗಳ  <strong>&#8216;ಮಾನಿಷಾದ&#8217;</strong> ಭರದ್ವಾಜನ ಮುಖದಲ್ಲಿ ಮಾರ್ದನಿಸಿತು..<br />
ವಾಲ್ಮೀಕಿಗಳ ಕಿವಿದೆರೆಗಳಲ್ಲಿ ಅಮೃತ ಹೊಕ್ಕಂತೆ, ಅದೇನೋ ತಂಪು-ತೃಪ್ತಿ..ಆತ್ಮಸಂತೋಷ,ಸಮಾಧಾನ!<br />
ಅದೊಂದು ವೃತ್ತ&#8230;ವಾಲ್ಮೀಕಿಗಳ ಹೃದಯದಲ್ಲಿ ಹುಟ್ಟಿದ <strong>ಶೋಕ</strong>..ಮುಖದಲ್ಲಿ <strong>ಶ್ಲೋಕ</strong>ವಾಯಿತು! ಭರದ್ವಾಜನ ಕಿವಿಯ ಹಾದಿಯಲ್ಲಿ ಹೃದಯ ಸೇರಿ ಆತನ ಮುಖದಲ್ಲಿ ಪ್ರತಿಧ್ವನಿಸಿತು.<br />
ಅದು ವಾಲ್ಮೀಕಿಗಳ ಕರ್ಣಪಥದ ಮೂಲಕವಾಗಿ ಮತ್ತೊಮ್ಮೆ ತನ್ನ ಮೂಲನೆಲೆಯಾದ ಹೃದಯವನ್ನು ಸೇರುವಾಗ,  ಏನಚ್ಚರಿ! ತಾಪವು ತೃಪ್ತಿಯಾಗಿ..ಶೋಕವು ಸಂತೋಷವಾಗಿ ಮಾರ್ಪಟ್ಟಿತ್ತು&#8230;!</p>
<p><span style="color: #0000ff;">ತನ್ನ ಮಗುವನ್ನು ತಾನೇ ಕಂಡು ತೃಪ್ತಿಪಡುವ ತಾಯಿಯಂತೆ&#8230;ತನ್ನ ಮೊಗವನ್ನೇ ಕನ್ನಡಿಯಲ್ಲಿ ಕಂಡು ನಲಿಯುವ ನಾರಿಯಂತೆ&#8230;ತನ್ನದೇ ಪ್ರತಿಧ್ವನಿಯಲ್ಲಿ ವಿಸ್ತರಿಸುವ ಧ್ವನಿಯಂತೆ&#8230;<br />
ತನ್ನ ಜ್ಞಾನಕಂದನ ಸ್ವರದಲ್ಲಿ ಅನುರಣಿಸುವ ಕಾವ್ಯಕಂದವನ್ನು ಆಲಿಸಿ ಆನಂದಿಸಿದರು ವಾಲ್ಮೀಕಿಗಳು..<br />
ಗಂಗೆಯಲ್ಲಿ ಬಂದ ಮಹಾಪೂರವು ಮೆಲ್ಲಮೆಲ್ಲನೇ ಇಳಿಯುವಂತೆ,  ಒಮ್ಮೆ ಸಾಮಾನ್ಯ ಪ್ರಜ್ಞೆಗೆ ಮರಳಿ,ಮರೆತೇ ಹೋಗಿದ್ದ ತಮಸಾ ಸ್ನಾನಕ್ಕೆ ಉದ್ಯುಕ್ತರಾದರು..!</span></p>
<p><span style="color: #993366;">ಆಕಾಶಕಾಯಗಳು ಅಸಾಮಾನ್ಯ ಕಾರಣಗಳಿಗಾಗಿ ಒಮ್ಮೊಮ್ಮೆ ತಮ್ಮ ಪಥವನ್ನು ಬದಲಾಯಿಸುವುದುಂಟು..ಪುನಃ ಮೂಲಪಥವನ್ನೇ ಸೇರುವುದೂ ಉಂಟು&#8230;!ಎಂದಿನಂತೆ ಸ್ನಾನಕ್ಕೆ ಹೊರಟಿದ್ದ ವಾಲ್ಮೀಕಿಗಳನ್ನು ಅದ್ಯಾವುದೋ ದಿವ್ಯಶಕ್ತಿಯೊಂದು ಸೆಳೆದೊಯ್ದು ವಿಚಿತ್ರ ಘಟನಾವಳಿಗಳನ್ನು ನಿರ್ಮಿಸಿ ಮರಳಿ ತಮಸಾ ತೀರಕ್ಕೆ ತಂದಿಳಿಸಿತ್ತು..!</span></p>
<p>ತಮಸೆಯಲ್ಲಿ ತನ್ಮಯರಾಗಿ ಮುಳುಗಿ ತನು ತೊಳೆದರೂ ವಾಲ್ಮೀಕಿಗಳ ಮನದೊಳಗೆ &#8216;ಮಾನಿಷಾದ&#8217; ಮರೆಯಾಗಲಿಲ್ಲ..!</p>
<p><span style="color: #0000ff;">ನಮ್ಮಾತ್ಮ ನಮ್ಮ ತನುವಿಗೇ ಸೀಮಿತವಾಗಿದ್ದರೆ ಪರರ ನೋವು-ನಲಿವುಗಳು ನಮಗರಿವಾಗದು..ವಾಲ್ಮೀಕಿಗಳಾದರೋ, ಆತ್ಮವಿಸ್ತಾರವುಳ್ಳವರು..ಸಕಲ ಜೀವಿಗಳಲ್ಲಿಯೂ ತಮ್ಮನ್ನೇ ಕಾಣುವವರು..!<br />
ಆದುದರಿಂದಲೇ ಕ್ರೌಂಚಪಕ್ಷಿಗಳ ಕರುಣಧ್ವನಿ ಅವರ ಹೃದಯದಲ್ಲಿ ಪ್ರತಿಧ್ವನಿಸುತ್ತಿತ್ತು..ಆಶ್ರಮದಲ್ಲಿ ಸುಖಾಸನದಲ್ಲಿ ಸುಖಾಸೀನರಾಗಿ ಕ್ರೌಂಚಕಥೆಯನ್ನು ಮರೆಯಲೋಸುಗವೋ ಎಂಬಂತೆ&#8230;<br />
ಅನ್ಯಾನ್ಯ ಕಥೆಗಳನ್ನು ಕಥನ ಮಾಡತೊಡಗಿದರು..ಆದರೆ, ಮರೆತೇನೆಂದರೂ ಮರೆಯಲಾಗದಸ್ಥಿತಿ ಅವರದಾಗಿತ್ತು..ಮನದಲ್ಲಿ ಮಡುಗಟ್ಟಿದ ವಿಷಾದ,ಮುಖದಲ್ಲಿ ಉದ್ಗಾರಗೊಳ್ಳುವ ಮಾನಿಷಾದ&#8230;</span></p>
<p><strong>ಯಾಕೆ ಹೀಗೆ? ಏನಿದು? ಹೇಗಿದು?</strong> ಎನ್ನುವ ಪ್ರಶ್ನೆಗಳ ಸಾಲು ಸಾಲು ಮುನಿಮನದಲ್ಲಿ ಸಮುದ್ರಮಥನವನ್ನೇ ಏರ್ಪಡಿಸುವಾಗ ಉತ್ತರದ ಅಮೃತವನ್ನೇ ತರುವಂತೆ..ಚತುರ್ಮುಖ ಬ್ರಹ್ಮನ ಆವಿರ್ಭಾವವಾಯಿತಲ್ಲಿ&#8230;!<a href="http://hareraama.in/wp-content/uploads/2010/07/ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...!"><img class="alignright size-medium wp-image-5214" title="ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ...!" src="http://hareraama.in/wp-content/uploads/2010/07/pw_ga_bhagiratha_and_brahma-e1278602841394-300x220.jpg" alt="" width="300" height="220" /></a><br />
ಸೃಷ್ಟಿ ರಹಸ್ಯದ ಓನಾಮವನ್ನೇ ತಿಳಿಯದೆ ಪಾಡುಪಡುವ ನಮಗೆ,ಸೃಷ್ಟಿಕರ್ತನೊಡನೆ ತನ್ನ ಕುಟಿಯಲ್ಲಿಯೇ ಮುಖಾಮುಖಿಯಾಗುವ,ಸರಳ ಸಂಭಾಷಣೆಗೈಯುವ ವಾಲ್ಮೀಕಿಗಳು ಅರ್ಥವಾಗದಿದ್ದರೆ ಆಶ್ಚರ್ಯವೇನಿಲ್ಲ&#8230;!</p>
<p><span style="color: #008000;">ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ&#8230;!<br />
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!<br />
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.</span></p>
<p><strong><span style="color: #008000;">ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ&#8230;!</span></strong></p>
<p>ದೊಡ್ಡವರ ಸ್ವಭಾವವೇ ಹೀಗೆ..ನಾವು ಯಾವುದನ್ನು ಬಹುದೊಡ್ಡದೆಂದುಕೊಳ್ಳುತ್ತೇವೆಯೋ,ಅದು ಕಣ್ಣೆದುರಿದ್ದರೂ ಮರೆತುಬಿಡುತ್ತಾರವರು..!<br />
ನಾವು ಯಾವುದನ್ನು ಚಿಕ್ಕದೆಂದುಕೊಳ್ಳುತ್ತೇವೆಯೋ,ಅದು ಅವರಿಗೆ ಬಹುದೊಡ್ಡದಾಗಿ ಕಾಣುತ್ತದೆ..!<br />
ವರ್ತಮಾನದಲ್ಲಿ ಪ್ರತ್ಯಕ್ಷವಿರುವ ಸೃಷ್ಟಿಕರ್ತನನ್ನು ಮರೆತು, ಭೂತದಲ್ಲಿ ಮರೆಯಾಗಿ ಹೋದ ಪುಟ್ಟ ಪಕ್ಷಿಗಳೆಡೆಗೆ ಮತ್ತೆ ಹರಿಯಿತು ಮುನಿಮನಸ್ಸು..!</p>
<p><span style="color: #ff0000;">&#8220;ಛೆ, ಪಾಪಿಯೇ..! ಅದೆಂಥ ಕೆಡುಕನ್ನೆಸಗಿಬಿಟ್ಟೆ..? ನಿನ್ನ ಅಕಾರಣ ವೈರಕ್ಕೆ,ನೀನೆಸಗಿದ ಅಕಾರಣ ಹಿಂಸೆಗೆ ಧಿಕ್ಕಾರವಿರಲಿ.ಸೊಗಸೇ ಮೈವೆತ್ತ ರೂಪದ, ಮಾಧುರ್ಯವೇ ಮೈವೆತ್ತ ನಾದದ ಕ್ರೌಂಚಪಕ್ಷಿಯನ್ನು ಆ ಅವಸ್ಥೆಯಲ್ಲಿ ಕೊಲ್ಲಲು ಮನವಾದರೂ ಹೇಗಾಯಿತು&#8230;?&#8221;</span></p>
<p><span style="color: #ff0000;"><br />
</span><span style="color: #0000ff;"> ತಮಸಾ ತೀರದ ಘಟನೆಗಳು ತಮಸಾ ತರಂಗಗಳಂತೆ ಒಂದರ ಮೇಲೊಂದು ವಾಲ್ಮೀಕಿಗಳ ಕಣ್ಣಿಗೆ ಕಟ್ಟಿದಂತೆ ಗೋಚರಿಸತೊಡಗಿದವು.<br />
ಮರಣಸಂಕಟದಲ್ಲಿ ಚಡಪಡಿಸುವ ತನ್ನ ವಲ್ಲಭನನ್ನು ಕಂಡು ಅಸಹಾಯಳಾಗಿ ರೋಧಿಸುವ ಕ್ರೌಂಚಿಯನ್ನು ನೆನೆನೆನೆದು ದುಃಖಿಸುತ್ತಾ ತನ್ನನ್ನೇ ಮರೆತ,<br />
ತನ್ನ ಮುಂದೆ ಬ್ರಹ್ಮದೇವನಿರುವನೆಂಬುದನ್ನೂ ಮರೆತ ವಾಲ್ಮೀಕಿಗಳ ಮುಖದಿಂದ ಅಪ್ರಯತ್ನವಾಗಿ ಮಾನಿಷಾದ ಹೊರಹೊಮ್ಮಿತು.<br />
ಅದನ್ನು ಆಲಿಸಿ ಕಮಲದಂತೆ ವಿಕಸಿತವಾದ ಕಮಲಾಸನನ ಮುಖದಿಂದ ಹೊರಹೊಮ್ಮಿದ ನಗು ಆಶ್ರಮವನ್ನು ವ್ಯಾಪಿಸಿತು&#8230;ವಾಲ್ಮೀಕಿಗಳಿಗೆ ಆಶ್ಚರ್ಯವನ್ನು ತಂದಿತು..!</span></p>
<p><span style="color: #0000ff;">ಆಗ ಬ್ರಹ್ಮನ ವಾಣಿಯಾಯಿತು&#8230;!</span></p>
<p><span style="color: #339966;">&#8220;ನಿನ್ನ ಮುಖದಲ್ಲಿ ಮಾನಿಷಾದದ ರೂಪದಲ್ಲಿ ಸರಸ್ವತಿ ಪ್ರಕಾಶವಾಗುತ್ತಿರುವುದು ನಿನ್ನಿಚ್ಚೆಯಲ್ಲ..ನನ್ನಿಚ್ಚೆ..!<br />
(ವಾಣಿ ಬ್ರಹ್ಮನ ರಾಣಿಯಲ್ಲವೇ..? ತನ್ನ ಪತಿಯ ಅಭಿಪ್ರಾಯ-ಅನುಮತಿಯಿಲ್ಲದೆ ಹೇಗೆ ತಾನೇ ಆಕೆ ಬೇರೊಂದೆಡೆ ಹೋಗಲು ಸಾಧ್ಯ..!?)<br />
ಯಾವುದು ಮೊದಲು ಶೋಕವಾಗಿತ್ತೋ..ಮತ್ತೆ ಶ್ಲೋಕವಾಯಿತೋ..ಅದು ಮುಂದೆ ಮಹಾಕಾವ್ಯವಾಗಬೇಕಾಗಿದೆ&#8230;!<br />
ರಾಮಚರಿತವನ್ನು ರಚಿಸು..<br />
ನಾರದರ ಮುಖದಿಂದ ಆ ಧರ್ಮಮೂರ್ತಿಯ, ಗುಣಸಾಗರನ, ಲೋಕೈಕವೀರನ ಚರಿತೆಯನ್ನು ಹೇಗೆ ನೀನು ಕೇಳಿದೆಯೋ, ಹಾಗೆಯೇ ಜಗತ್ತಿಗೆ ಬಿತ್ತರಿಸು.<br />
ನಾರದರು ಬಣ್ಣಿಸುವಾಗ ರಾಮಚರಿತೆಯನ್ನು ಕಿವಿಯಿಂದ ನೋಡಿದ ನೀನು..ಇದೋ, ಈಗ ನನ್ನ ಕೃಪೆಯಿಂದ ಅದನ್ನು ಕಣ್ಣಿನಿಂದಲೇ ನೋಡುವೆ.<br />
ಆದರೆ ಕಣ್ತೆರೆದು ನೋಡುವುದಲ್ಲ, ಧ್ಯಾನಮಗ್ನನಾಗಿ ಕಣ್ಮುಚ್ಚಿ ಕುಳಿತ ನಿನ್ನ ಮುಂದೆ ಸಂಪೂರ್ಣ ರಾಮಕಥೆಯೇ ಪ್ರಕಟಗೊಳ್ಳುವುದು ..<br />
ಯಾವ ಘಟನೆಗಳು ರಾಮನ ಜೀವನದಲ್ಲಿ ಲೋಕಾಂತದಲ್ಲಿ ನಡೆದವೋ..ಯಾವ ಘಟನೆಗಳು ಏಕಾಂತದಲ್ಲಿ ನಡೆದವೋ,ಅವೆಲ್ಲವೂ ಹಾಗೆ ಹಾಗೆಯೇ ನಿನ್ನ ಕಣ್ಮುಂದೆ ಗೋಚರಿಸುವುವು.<br />
ಇದೇ ರೀತಿಯ ಶ್ಲೋಕಗಳಿಂದಲೇ ರಾಮಕಥೆಯನ್ನು ಬಣ್ಣಿಸು..ಈ ಕಾವ್ಯದಲ್ಲಿ ನಿನ್ನ ಮಾತೆಂದಿಗೂ ಸುಳ್ಳಾಗದು..<br />
ಎಲ್ಲಿಯವರೆಗೆ ಧರೆಯಲ್ಲಿ ಹಿಮಾಲಯವೇ ಮೊದಲಾದ ಪರ್ವತಗಳಿರುವುವೋ..ಎಲ್ಲಿಯವರೆಗೆ ಗಂಗೆಯೇ ಮೊದಲಾದ ನದಿಗಳು ಹರಿಯುವುವೋ, ಅಲ್ಲಿಯವರೆಗೆ ನೀನು ರಚಿಸಿದ ರಾಮಾಯಣವು ಅಜರಾಮರವಾಗಿ ಉಳಿಯುವುದು.<br />
ಎಲ್ಲಿಯವರೆಗೆ ರಾಮಾಯಣವು ಭೂಮಿಯಲ್ಲಿ ಉಳಿದುಕೊಳ್ಳುವುದೋ..ಅಲ್ಲಿಯವರೆಗೆ ನೀನು ಬ್ರಹ್ಮಲೋಕದಲ್ಲಿ ವಿಹರಿಸುವೆ..&#8221;</span></p>
<p>ಆ ವಾಣಿಯ ಪರ್ಯವಸಾನದಲ್ಲಿ ಬ್ರಹ್ಮದೇವನು ಕಣ್ಮರೆಯಾದನು..ಆದರೆ, ಒಂದೇ ದಿನದಲ್ಲಿ ನಡೆದುಹೋದ, ಊಹೆಗೂ ಮೀರಿದ ಘಟನೆಗಳನ್ನವಲೋಕಿಸತೊಡಗಿದ ಮುನಿಯ ವಿಸ್ಮಯ ಬೆಳೆಯುತ್ತಲೇ ಇದ್ದಿತು..!<br />
<span style="color: #0000ff;"> ಮೊದಲು ಮನದೊಳಗೆ ಪರಿಪೂರ್ಣ ಪುರುಷನ ಕುರಿತುಮೂಡಿದ ಪ್ರಶ್ನೆ..<br />
ನಾರದರೊಂದಿಗೆ ಸಮಾಗಮ&#8230;<br />
ಉತ್ತರರೂಪವಾಗಿ ರಾಮಕಥಾಶ್ರವಣ..<br />
ತಮಸಾಗಮನ..<br />
ಕ್ರೌಂಚಯುಗ್ಮದ ಆನಂದ-ಅವಸಾನಗಳ ದರ್ಶನ&#8230;ಮಾನಿಷಾದ&#8230;<br />
ಆಶ್ರಮ ಪ್ರತ್ಯಾಗಮನ&#8230;<br />
ಮನದಲ್ಲಿಯೇ ಮಾನಿಷಾದ ಮಂಥನ&#8230;<br />
ಬ್ರಹ್ಮಾಗಮನ..<br />
ರಾಮಚರಿತೆಯ ಮಹಾಕಾವ್ಯ ರಚನೆಗೆ ನಿರ್ದೇಶನ.<br />
</span> <strong>ಆದಿಕಾವ್ಯದ ಅಂಕುರಾರೋಪಣದ ಮೂಲಕವಾಗಿ ಅಖಿಲ ವಿಶ್ವಕ್ಕೆ ನವದಿಶಾ ದರ್ಶನವನ್ನುಮಾಡಿಸಿದ ಆ ದಿನವನ್ನು ಮಹಾದಿನವೆನ್ನದಿರಲಾದೀತೆ&#8230;!?</strong></p>
<p>ಶ್ಲೋಕ ಒಂದೇ&#8230;!<br />
ಆದರೆ ಮೂವರ ಮುಂದೆ ಉಚ್ಚರಿಸಿದಾಗ ಆದ ಪರಿಣಾಮಗಳು ಸಂಪೂರ್ಣ ಬೇರೆ ಬೇರೆ&#8230;!<br />
ಬೇಡನ ಮುಂದೆ ಉದ್ಗರಿಸಿದಾಗ ಯಾವ ಶುಭ ಪರಿಣಾಮವೂ ಆಗಲಿಲ್ಲ..! (ಶಾಪದ ದುಷ್ಪರಿಣಾಮವನ್ನು ಹೊರತುಪಡಿಸಿ).<br />
ಭರದ್ವಾಜನ ಮುಂದೆ ಉಚ್ಚರಿಸಿದಾಗ ವೃದ್ಧಿಯಾಗದಿದ್ದರೂ ಪ್ರತಿಧ್ವನಿ ಬಂದಿತು&#8230;!<br />
ಬ್ರಹ್ಮದೇವನ ಮುಂದೆ ಉಚ್ಚರಿಸಿದಾಗ..ಅದೊಂದು ಮಹಾಕಾವ್ಯಕ್ಕೇ ನಾಂದಿಯಾಯಿತು..!ಕಾವ್ಯಲೋಕದ ನಿರ್ಮಿತಿಗೆ ಮೂಲಶಿಲೆಯಾಯಿತು&#8230;!</p>
<p><span style="color: #ff00ff;">ಬದುಕಿನಲ್ಲಿ &#8217;</span><strong><span style="color: #ff00ff;">ಏನು&#8217;</span></strong><span style="color: #ff00ff;"> ಎಂಬುದೆಷ್ಟು ಮುಖ್ಯವೋ, &#8216;</span><strong><span style="color: #ff00ff;">ಎಲ್ಲಿ&#8217;</span></strong><span style="color: #ff00ff;"> ಎಂಬುದೂ ಅಷ್ಟೇ ಮುಖ್ಯವಾಗುತ್ತದೆ..<br />
ಹೇಳಬಾರದಲ್ಲಿ ಹೇಳಿದರೆ ಆಗಬಾರದ್ದಾಗುತ್ತದೆ .<br />
ಹೇಳಬೇಕಾದಲ್ಲಿ ಹೇಳಿದರೆ ಆಗಬೇಕಾದದ್ದೇ ಆಗುತ್ತದೆ..ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ&#8230;!<br />
</span></p>
<p>ದಿವಿಯಲ್ಲಿ ದೇವತೆಗಳ ಸಂದೋಹವೇ ಇರುವಾಗ, ವಾಲ್ಮೀಕಿಗಳ ಬಳಿ ಬ್ರಹ್ಮದೇವನೇ ಬರಬೇಕೇಕೆ..?<br />
ಶ್ರೀರಾಮ ಯಾರ ಅವತಾರವೋ, ಆ ಮಹಾವಿಷ್ಣುವೇ ಬರಬಹುದಿತ್ತು..ಸೀತಾವತಾರಗೈದ ಮಹಾಲಕ್ಷ್ಮಿ ಬರಬಹುದಿತ್ತು.<br />
ಶ್ರೀರಾಮನ ಪರಮಪ್ರಿಯನಾದ ಮಹಾದೇವನೇ ಬರಬಹುದಿತ್ತು..</p>
<p>ಅದು ಹೀಗೆ..<br />
ಸರಸ್ವತಿಯನ್ನು ಧರೆಗೆ ಸರಸ್ವತೀರಮಣನೇ ಕರೆತರಬೇಕು..<br />
ರಾಮಾಯಣವೆಂದರೆ, ಸೃಷ್ಟಿ-ಶಬ್ಧ ಚಿತ್ರ. ಅದರ ಶುಭಾರಂಭಕ್ಕೆ ಸೃಷ್ಟಿಕರ್ತನೇ ಬರಬೇಕು..!<br />
ಅನನ್ಯವಾದ ಜೋಡಿಯದು ಸರಸ್ವತೀ-ಸರಸಿಜಾಸನರದು..</p>
<p>ಬ್ರಹ್ಮನೇ ಜಗತ್ತಿನ ಸಕಲ ವಸ್ತುಗಳನ್ನೂ ಸೃಷ್ಟಿ ಮಾಡುವವನು.<br />
ಒಂದೊಂದು ವಸ್ತುವಿಗೂ ಸಂಬಂಧಿಸಿದ ಶಬ್ಧಗಳನ್ನು ಸೃಷ್ಟಿಸುವುದು ಸರಸ್ವತಿ..<br />
ಅವೆರಡರಲ್ಲಿ (ಶಬ್ಧಾರ್ಥಗಳಲ್ಲಿ)ಸಹಚಾರವಿದ್ದರೆ ಅದುವೇ ಸತ್ಯ..ಅವುಗಳಲ್ಲಿ ವ್ಯಭಿಚಾರ ಬಂದರೆ ಅದುವೇ ಮಿಥ್ಯ..<br />
ಇರುವುದನ್ನೇ ನುಡಿದರೆ ಸತ್ಯ..ಇರುವುದೇ ಬೇರೆ, ನುಡಿಯೇ ಬೇರೆ ಆದರೆ ಅದುವೇ ಮಿಥ್ಯ..<br />
ಶಬ್ಧಾರ್ಥಗಳು <strong>&#8216;ಸಹಿತ&#8217;</strong>ವಾಗಿದ್ದರೆ, ಅದು ತಾನೆ<strong> &#8216;ಸಾಹಿತ್ಯ&#8217;</strong>ವೆನಿಸಿಕೊಳ್ಳುವುದು..?<br />
ಶಭಾರ್ಥಗಳ ಮೂಲ ಸ್ರೋತಸ್ಸುಗಳು ಜೊತೆಗೂಡಿ ಬಂದು ಆದಿಕವಿಯನ್ನು ಹರಸಿ ಪ್ರೇರಿಸಿದವು ಆದಿಕಾವ್ಯ ರಚನೆಗೆ..!</p>
<p>ಈ ಮಧ್ಯೆ ಮಾನಿಷಾದ ಬೆಳೆಯತೊಡಗಿತು.ಕ್ಷಣಕ್ಷಣಕ್ಕೂ ಹೆಚ್ಚು ಹೃದಯಗಳನ್ನೂ, ಹೆಚ್ಚು ಮುಖಗಳನ್ನೂ ಆವರಿಸತೊಡಗಿತು&#8230;<br />
ಮೊದಲು ವಾಲ್ಮೀಕಿಗಳು.. ಮತ್ತೆ ಜೊತೆಗೆ ಭರದ್ವಾಜ..ಈಗ ಆಶ್ರಮಕ್ಕೆ ಆಶ್ರಮವೇ ಆನಂದ ಆಶ್ಚರ್ಯಗಳೊಂದಿಗೆ ಮಾನಿಷಾದವನ್ನು ಮತ್ತೆ ಮತ್ತೆ ಹಾಡತೊಡಗಿತು&#8230;!</p>
<p><span style="color: #0000ff;">ಸಾವಿರ ಯೋಜನಗಳ ಪ್ರಯಾಣ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ..<br />
೨೪,೦೦೦ ಶ್ಲೋಕಗಳ ರಾಮಾಯಣ ರಚನೆ ಮಾನಿಷಾದವೆಂಬ ಒಂದು ಶ್ಲೋಕದಿಂದ ಆರಂಭವಾಯಿತು&#8230;!</span></p>
<p style="text-align: center;">||ಹರೇರಾಮ||</p>
]]></content:encoded>
			<wfw:commentRss>http://hareraama.in/blog/%e0%b2%95%e0%b2%be%e0%b2%b5%e0%b3%8d%e0%b2%af-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%95%e0%b2%b0%e0%b3%8d%e0%b2%a4%e0%b2%be/feed/</wfw:commentRss>
		<slash:comments>11</slash:comments>
		</item>
		<item>
		<title>ಮಾ ನಿಷಾದ&#8230;</title>
		<link>http://hareraama.in/blog/%e0%b2%ae%e0%b2%be-%e0%b2%a8%e0%b2%bf%e0%b2%b7%e0%b2%be%e0%b2%a6/</link>
		<comments>http://hareraama.in/blog/%e0%b2%ae%e0%b2%be-%e0%b2%a8%e0%b2%bf%e0%b2%b7%e0%b2%be%e0%b2%a6/#comments</comments>
		<pubDate>Thu, 01 Jul 2010 06:13:59 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4998</guid>
		<description><![CDATA[ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ...!
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು...!
]]></description>
			<content:encoded><![CDATA[<p style="text-align: center;"><strong>|| ಹರೇರಾಮ ||</strong></p>
<p>ಕೇವಲ ದುಃಖವು ದುಃಖವೇ ಅಲ್ಲ.<br />
ಸಂತೋಷದ ನಂತರ ಬರುವ ದುಃಖವೇ ನಿಜವಾದ ದುಃಖ..!<br />
ಹುಟ್ಟುಬಡವನಿಗೆ ಗಂಜಿ ಕುಡಿಯಲು ಕಷ್ಟವೇನಿಲ್ಲ -<br />
ಅದು ಕಷ್ಟವಾಗುವುದು, ಕೆಲಕಾಲ ಮೃಷ್ಟಾನ್ನವನ್ನುಂಡ ನಂತರವೇ&#8230;!</p>
<p>ಇಲ್ಲಿ ವಾಲ್ಮೀಕಿಗಳಿಗಾದದ್ದು ಹಾಗೆಯೇ&#8230;<br />
ಪಕ್ಷಿಗಳ ಪ್ರೇಮ ಪ್ರಸಂಗವನ್ನು ಕಂಡ ಕಣ್ಣಿನಿಂದಲೇ ಅವುಗಳ ದಾರುಣ ಮರಣ-ವಿರಹ-ಸಂಕಟಗಳನ್ನು-<br />
ಆ ಮೃದು ಹೃದಯಿ ಮುನಿ ಕಾಣಬೇಕಾಯಿತು&#8230;.!<br />
ಒಂದಾದ ಮೇಲೊಂದರಂತೆ ಪ್ರೇಮ-ಘೋರಗಳ ಪರಾಕಾಷ್ಠೆಯನ್ನು ಕಾಣುವುದೆಂದರೆ -<br />
ಆನಂದದ ಅಂಬರವೇರಿ ಅನ್ಯಾಯದ ಪಾತಾಳಕ್ಕೆ ಉರುಳಿದಂತೆಯೇ ಅಲ್ಲವೇ..?</p>
<p>ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..<br />
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..<br />
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ&#8230;!<br />
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-<br />
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು&#8230;!</p>
<p>ಮಹಾಪೂರವು ಆಣೆಕಟ್ಟನ್ನು ಮುರಿದು ಮುನ್ನುಗ್ಗುವಂತೆ -<br />
ಸಂಯಮದ ಕಟ್ಟೆಯನ್ನೊಡೆದು ಮುನಿಮುಖದಿಂದ ಹೊರಹೊಮ್ಮಿತು ಶಾಪವಾಕ್ಯ..</p>
<p><strong>ಮಾ ನಿಷಾದ ಪ್ರತಿಷ್ಠಾಂ ತ್ವಂ<br />
ಅಗಮಃ ಶಾಶ್ವತೀಃ ಸಮಾಃ|<br />
ಯತ್ ಕ್ರೌಂಚಮಿಥುನಾತ್ ಏಕಂ<br />
ಅವಧೀಃ ಕಾಮಮೋಹಿತಮ್..||</strong></p>
<div id="attachment_5002" class="wp-caption alignright" style="width: 199px"><a href="http://hareraama.in/wp-content/uploads/2010/07/valmiki_sm.jpg"><img class="size-medium wp-image-5002" title="ಮಾ ನಿಷಾದ......." src="http://hareraama.in/wp-content/uploads/2010/07/valmiki_sm-189x300.jpg" alt="" width="189" height="300" /></a><p class="wp-caption-text">ಶಾಪವಿದು ಬೇಡನಿಗೆ...ಮಂಗಲಮಹಾವರ ಮನುಕುಲಕೆ..!</p></div>
<p>&#8220;ಎಲೋ ಬೇಡನೇ..! ಕ್ರೌಂಚ ದ್ವಂದ್ವದಲ್ಲೊಂದನ್ನು, ಅದು ಕಾಮಮೋಹಿತವಾಗಿದ್ದಾಗ ನಿಷ್ಕರುಣೆಯಿಂದ ಕೊಂದೆಯಲ್ಲವೇ..?<br />
ಮುಗ್ಧ ಪಕ್ಷಿಯ ವಾಸದ ನೆಲೆ (ವೃಕ್ಷ)-<br />
ವಿಶ್ವಾಸದ ನೆಲೆ (ಪತ್ನಿ)-<br />
ಮತ್ತು ಶ್ವಾಸದ ನೆಲೆ (ಬದುಕು)-<br />
ಹೀಗೆ ಮೂರೂ ನೆಲೆಗಳನ್ನು ಇಲ್ಲವಾಗಿಸಿದ ನಿನಗೆ ನೆಲೆಯೇ ಸಿಗದಿರಲಿ&#8230;!&#8221;</p>
<p>ವೃತ್ತಿಧರ್ಮವೆಂಬ ನೆಲೆಯಲ್ಲಿ ನಿಂತಲ್ಲವೇ ಆತ ಪಕ್ಷಿಯನ್ನು ಹೊಡೆದದ್ದು..?<br />
ಅಂದಮೇಲೆ ಋಷಿಯು ಬೇಡನ ಮೇಲೆ  ಕೋಪಿಸಲೇಕೆ..?<br />
ಆತನನ್ನು ಶಪಿಸಲೇಕೆ..?</p>
<p>ಹಿಂಸೆಗಾದರೊಂದು ಕಾರಣ ಬೇಡವೇ&#8230;?<br />
ಹಸಿವಿಗಾಗಿ ಕೊಲ್ಲುವುದುಂಟು..<br />
ಅಪಾಯವಿದ್ದರೆ ಆತ್ಮರಕ್ಷಣೆಗೆಂದು ಕೊಲ್ಲುವುದುಂಟು..!<br />
ಅಪರಾಧ ನಡೆದಾಗ ದಂಡನೆಯ ರೂಪದಲ್ಲಿ ಕೊಲ್ಲುವುದುಂಟು..</p>
<p>ಆದರಿಲ್ಲಿ..?<br />
ಪಕ್ಷಿಯ ಹತ್ಯೆಯ ಹಿನ್ನೆಲೆಯಲ್ಲಿ ಇದ್ಯಾವ ಕಾರಣಗಳೂ ಇರಲಿಲ್ಲ..!<br />
ಕೊಂದವನಿಗೆ ಹಸಿವಿರಲಿಲ್ಲ&#8230;<br />
ಮುಗ್ಧ ಪಕ್ಷಿಯಿಂದ ಅವನಿಗೆ ಯಾವ ಅಪಾಯವೂ ಇರಲಿಲ್ಲ..<br />
ಯಾವ ಅಪರಾಧವೂ ಘಟಿಸಿರಲಿಲ್ಲ..<br />
ಆದುದರಿಂದಲೇ ವೃತ್ತಿಧರ್ಮವೊಂದೇನು..ಯಾವ ಧರ್ಮದ ನೆಲೆಯಲ್ಲಿಯೂ ನಡೆಸಿದ ಹತ್ಯೆ ಅದಾಗಿರಲಿಲ್ಲ..!</p>
<p>ಹಿಂಸೆಗಾದರೊಂದು ಸಮಯ ಬೇಡವೇ..?<br />
ಕೊಲ್ಲಲು ಜೋಡಿ ಹಕ್ಕಿಗಳು ಜೊತೆಯಾಗಿ ಅದ್ವೈತದ ನೈಸರ್ಗಿಕ ಆನಂದದಲ್ಲಿ ವಿಹರಿಸುತ್ತಿರುವ ಸಮಯವೇ ಆಗಬೇಕೇ&#8230;?</p>
<p>ಹಿಂಸೆಗಾದರೊಂದು ಸಂದರ್ಭ ಬೇಡವೇ&#8230;?<br />
ಪ್ರೇಮ-ದಯೆಗಳ ಸಾಕಾರರೂಪರಾದ ಮಹರ್ಷಿಗಳ ಕಣ್ಣೆದುರೇ ಇಂತಹ ಘೋರ ಕೃತ್ಯವನ್ನು ನಡೆಸುವುದೇ&#8230;?</p>
<p>ಹಿಂಸೆಗಾದರೊಂದು ಮಿತಿ ಬೇಡವೇ&#8230;?<br />
ಪಕ್ಷಿಯುಗಳದಲ್ಲಿ ಒಂದನ್ನು ಹೊಡೆದು ಇನ್ನೊಂದನ್ನು ಬಿಡುವುದರಲ್ಲಿ,<br />
ಒಂದರ ಮರಣಸಂಕಟ, ಇನ್ನೊಂದರ ವಿಯೋಗವ್ಯಥೆಯನ್ನು<br />
ಒಮ್ಮೆಲೇ ಕಂಡು ಆನಂದಿಸುವ ಕ್ರೂರ ಹಿಂಸಾಸಂತೋಷಪ್ರವೃತ್ತಿಯಲ್ಲವೇ ಆ ಬೇಡನಲ್ಲಿ ಅಡಗಿದ್ದದ್ದು&#8230;!?</p>
<p>ವಿಷಯವೊಂದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಬುದ್ಧಿಗೆ ಉಪಕರಣಗಳು ಬೇಕು..<br />
ಯುಕ್ತಿಗಳು ಬೇಕು..ಸಾಕ್ಷ್ಯಗಳು ಬೇಕು..<br />
ಆದರೆ,<br />
ಮುನಿಯಾದವನಿಗೆ ಅವನ ಪರಿಶುದ್ಧ ಅಂತಃಕರಣವೇ ಸಾಕು..<br />
ಆ ಸಮಯದಲ್ಲಿ ಅವನ ಅಂತರಂಗದಲ್ಲೇಳುವ ಭಾವತರಂಗಗಳೇ ಸಾಕು..<br />
ಅವನ ಆತ್ಮಸಾಕ್ಷಿಯೇ ಸಾಕು..!<br />
ತನ್ನ ಆತ್ಮದಲ್ಲೇ ಜಗತ್ತನ್ನೇ ನೋಡಬಲ್ಲವನಿಗೆ, ಅರಿಯಬಲ್ಲವನಿಗೆ ತಾನೆ, ಮುನಿಯೆಂದು ಹೆಸರು..!</p>
<p>ಬೇಡನ ಬೇಡದ ಕೃತ್ಯದಿಂದಾಗಿ ತನ್ನೊಳಗೆ ಉಂಟಾದ ಶೋಕದಿಂದಲೇ ವಾಲ್ಮೀಕಿಗಳು ನಿರ್ಣಯಿಸಿದರು <strong>ಇಲ್ಲಿ ಧರ್ಮನಾಶವಾಗಿದೆ</strong> ಎಂದು.<br />
ಏಕೆಂದರೆ, ಸತ್ಪುರುಷರಿಗೆ ಶೋಕವುಂಟಾಗುವುದು ಧರ್ಮನಾಶವಾದಾಗ ಮಾತ್ರ&#8230;!</p>
<p><strong>&#8216;ಧರ್ಮೋ ಹಂತಿ ಹತೋ ರಾಜನ್ ಧರ್ಮೋ ರಕ್ಷತಿ ರಕ್ಷಿತಃ..|&#8217;</strong></p>
<p>ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುವುದು..<br />
ಧರ್ಮವನ್ನು ನಾವು ಘಾತಿಸಿದರೆ ಅದು ನಮ್ಮನ್ನು ಘಾತಿಸುವುದೂ ಅಷ್ಟೇ ಸಹಜ&#8230;!<br />
ಬಲ್ಲವರ ವಾಣಿಯಿದು..!</p>
<p>ಬೇಡ ಹೊಡೆದದ್ದು ಕೇವಲ ಪಕ್ಷಿಯನ್ನಲ್ಲ..<br />
ಪಕ್ಷಿಗಳಲ್ಲಿ ಆನಂದದ ರೂಪದಲ್ಲಿ ಪ್ರಕಟವಾಗುತ್ತಿದ್ದ ಪ್ರಾಕೃತಿಕ ಧರ್ಮವನ್ನು&#8230;!<br />
ಆದುದರಿಂದಲೇ ಪಕ್ಷಿಯೊಳಗೆ ಆಹತವಾದ ಧರ್ಮವು ವಾಲ್ಮೀಕಿಗಳೊಳಗಿನಿಂದ ವ್ಯಕ್ತವಾಗಿ &#8211; ಶಾಪವಾಗಿ ಬೇಡನನ್ನು ದಂಡಿಸಿತು&#8230;!<br />
(ಪೂಜ್ಯರಾದ ಎನ್ೆ.ಎಸ್. ರಾಮಭದ್ರಾಚಾರ್ಯರು ನೀಡುತ್ತಿದ್ದ ವಿವರಣೆಯಿದು).</p>
<p>ನೆಲೆ ಸಿಗದಿರಲೆಂಬ ಶಾಪವಾಣಿಯೂ ಅರ್ಥಪೂರ್ಣವಾದುದೇ&#8230;!</p>
<p><strong>ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ&#8230;|<br />
ಧರ್ಮೋ ಧಾರಯತೇ ಪ್ರಜಾಃ&#8230;|</strong></p>
<p>ಜಗತ್ತು ನೆಲೆ ನಿಂತಿರುವುದೇ ಧರ್ಮದ ಮೇಲೆ..<br />
ಸಕಲ ಜೀವಿಗಳನ್ನೂ ಧರಿಸಿರುವ ಸೃಷ್ಟಿಯ ಧಾರಕಶಕ್ತಿಯೇ ಧರ್ಮ..<br />
ಅದನ್ನೇ ಘಾತಿಸಿದ ಮೇಲೆ ಮತ್ತೆ ನೆಲೆಯೆಲ್ಲಿಂದ&#8230;?<br />
ತಾನು ಕುಳಿತ ಕೊಂಬೆಯನ್ನೇ ಕಡಿದಂತಲ್ಲವೇ ಅದು..?</p>
<p><strong>ಶ್ಲೋಕವಾಯಿತು ಶೋಕ..!</strong></p>
<p>ಶೋಕದಲ್ಲಿಯೋ, ರೋಷದಲ್ಲಿಯೋ, ಆವೇಶದಲ್ಲಿಯೋ..ಆಡಿದ ಮಾತುಗಳು ತಾಳ ತಪ್ಪುವುದು ಸಹಜ..<br />
ಆದರೆ ಅದೇನು ವಿಚಿತ್ರವೋ, ಶೋಕವಶರಾದ ವಾಲ್ಮೀಕಿಗಳ ಬಾಯಿಯಿಂದ ಅಪ್ರಯತ್ನವಾಗಿ ಹೊರಹೊಮ್ಮಿದ ಮಾತುಗಳು ಕೇವಲ ಮಾತಾಗಿರದೆ ಸುವ್ಯವಸ್ಥಿತವಾದ ಛಂದೋಬದ್ಧವಾದ ಕವಿತೆಯಾಗಿದ್ದವು&#8230;!</p>
<p>ಸರಿಯಾಗಿ ನಾಲ್ಕು ಚರಣಗಳು..<br />
ಒಂದೊಂದು ಚರಣದಲ್ಲಿಯೂ ಸರಿಯಾಗಿ ಎಂಟೆಂಟು ಅಕ್ಷರಗಳು&#8230;!<br />
ತಂತ್ರೀವಾದ್ಯಗಳೊಡನೆ ಮೇಳೈಸಿ ಸೊಗಸಾಗಿ ಹಾಡಬರುವ ತೆರನಾದ ರಾಗ- ತಾಳ-ಲಯಗಳ ಸಮನ್ವಯ..!<br />
ಇವುಗಳೆಲ್ಲವೂ ಆ ಕವಿತಾರೂಪದ ಶಾಪವಾಕ್ಯದಲ್ಲಿ ತಾನೇತಾನಾಗಿ ಪಡಿಮೂಡಿದ್ದವು..</p>
<p>ಗಿರಿಯಿಂದ ಸಹಜವಾಗಿ ಧುಮ್ಮಿಕ್ಕುವ ಝರಿಯಂತೆ..<br />
ವಾಲ್ಮೀಕಿಗಳ ಯಾವ ಪ್ರಯತ್ನವೂ ಇಲ್ಲದೆಯೇ ಛಂದೋಬದ್ಧವಾಗಿ &#8211; ರಸಭಾವ ಪರಿಪೂರ್ಣವಾಗಿ -<br />
ತಾಳ-ಲಯಸಮನ್ವಿತವಾಗಿ ಆ ಕವಿತೆ ಅವರೊಳಗಿನಿಂದ ಧುಮ್ಮಿಕ್ಕಿತು…!</p>
<p>ಅವು ಕೇವಲ ಅಕ್ಷರಗಳ ಜೋಡಣೆಯಲ್ಲ..<br />
ಅಂತಃಸ್ಪೂರ್ತಿಯ ನೆಲೆಯಲ್ಲಿ ಚಿಮ್ಮಿಬಂದ ಕಾವ್ಯಧಾರೆ..</p>
<p><strong>ಅದು ಈ ಜಗದ ಮೊದಲ ಕವಿತೆ&#8230;!<br />
ಆದಿಕಾವ್ಯದ ಆದಿಮಂಗಳ ಪಂಕ್ತಿಯದು&#8230;!</strong></p>
<p>ಆದಿಕವಿತೆಯು ಮುಂಬರುವ ಅನಂತಕವಿತೆಗಳಿಗೆ ಹೇಳಿದ ಪಾಠವಿದು..<br />
ಕವಿತೆಯೆಂಬುದು ಮುಗಿಲಿನಿಂದ ತಾನೇತಾನಾಗಿ ಇಳಿದು ಬರುವ ಮಳೆಯಂತೆ..<br />
ಗಿರಿಯಿಂದ ಸಹಜವಾಗಿ ಹರಿದು ಬರುವ ಝರಿಯಂತೆ&#8230;<br />
ಭೂಮಿಯ ಒಡಲಿನಿಂದ ನೈಸರ್ಗಿಕವಾಗಿ ಚಿಮ್ಮಿ ಬರುವ ಚಿಲುಮೆಯಂತೆ&#8230;<br />
ಸಹಜವಾದ ಭಾವ ಸೃಷ್ಟಿಯಾಗಿರಬೇಕೇ ಹೊರತು ನಲ್ಲಿಯ ನೀರಿನಂತೆ  ಕೃತ್ರಿಮವಾದ ಬುದ್ಧಿಸೃಷ್ಟಿಯಾಗಿರಬಾರದು..<br />
ಒಂದಿಷ್ಟು ಹಣಕ್ಕಾಗಿಯೋ ಹೆಸರಿಗಾಗಿಯೋ ಮನ ಬಂದಂತೆ ಕೃತ್ರಿಮವಾಗಿ ಹೊಸೆಯುವ ಶಬ್ದಜಾಲಗಳೆಲ್ಲ ಕಾವ್ಯಗಳಲ್ಲ&#8230;!</p>
<p>ಕೆಲವರ ವರ ಹಲವರಿಗೆ ಶಾಪವಾಗುವುದುಂಟು..!<br />
ಉದಾಹರಣೆಗೆ, ರಾವಣನಿಗೂ, ಹಿರಣ್ಯಕಶ್ಯಪುವಿಗೂ ಸಿಕ್ಕಿದ ವರಗಳು ವಿಶ್ವಕಂಟಕವಾಗಿ ಪರಿಣಮಿಸಿದವು&#8230;!<br />
ಆದರೆ ಇಲ್ಲಿ ಹಾಗಲ್ಲ&#8230;<br />
ಬೇಡನಿಗೆ ವಾಲ್ಮೀಕಿಗಳಿತ್ತ ಶಾಪವು ವಿಶ್ವಕ್ಕೆ <strong>ಶ್ರೀರಾಮಾಯಣ</strong> ರೂಪದ ಶಾಶ್ವತ ವರವಾಗಿ ಪರಿಣಮಿಸಿತು&#8230;!<br />
ಅನಂತ ಕಾವ್ಯಗಳ ಅಮೃತಧಾರೆಯ ಪ್ರಥಮಬಿಂದುವಾಯಿತು&#8230;!</p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/%e0%b2%ae%e0%b2%be-%e0%b2%a8%e0%b2%bf%e0%b2%b7%e0%b2%be%e0%b2%a6/feed/</wfw:commentRss>
		<slash:comments>26</slash:comments>
		</item>
		<item>
		<title>ಅಂಬೊಂದು&#8230;.ಹಕ್ಕಿಯೆರಡು&#8230;!</title>
		<link>http://hareraama.in/blog/%e0%b2%85%e0%b2%82%e0%b2%ac%e0%b3%8a%e0%b2%82%e0%b2%a6%e0%b3%81-%e0%b2%b9%e0%b2%95%e0%b3%8d%e0%b2%95%e0%b2%bf%e0%b2%af%e0%b3%86%e0%b2%b0%e0%b2%a1%e0%b3%81/</link>
		<comments>http://hareraama.in/blog/%e0%b2%85%e0%b2%82%e0%b2%ac%e0%b3%8a%e0%b2%82%e0%b2%a6%e0%b3%81-%e0%b2%b9%e0%b2%95%e0%b3%8d%e0%b2%95%e0%b2%bf%e0%b2%af%e0%b3%86%e0%b2%b0%e0%b2%a1%e0%b3%81/#comments</comments>
		<pubDate>Thu, 24 Jun 2010 10:00:22 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4852</guid>
		<description><![CDATA[ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
ಹಿನ್ನೆಲೆಯಲ್ಲಿ ಹರಿಯುವ ಹೊಳೆ..
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ...!]]></description>
			<content:encoded><![CDATA[<p style="text-align: center;"><strong>|| ಹರೇರಾಮ ||</strong></p>
<p>ದೈವೀಸಂಪತ್ತುಗಳು ಹರಿದು ಬರುವ ದ್ವಾರವನ್ನು ಕೃತಜ್ಞತೆಯಿಂದ ಪೂಜಿಸಬೇಕು.<br />
ಹಾಗೆ ಮಾಡದಿದ್ದಾಗ ದ್ವಾರಬಂಧವಾಗಬಹುದು, ಸಂಪತ್ತಿನ ಹರಿವೆಯೇ ನಿಲ್ಲಬಹುದೆಂಬುದು ಬಲ್ಲವರ ಮಾತು..</p>
<p>ಸಂಪೂರ್ಣ ರಾಮಕಥೆಯನ್ನು ಸಂಕ್ಷೇಪವಾಗಿ ಕೇಳಿದ ವಾಲ್ಮೀಕಿಗಳು ನಾರದರನ್ನು ವಿಧಿವತ್ತಾಗಿ ಪೂಜಿಸಿದರು.<br />
ವಾಲ್ಮೀಕಿಗಳ ಪಾಲಿಗೆ ರಾಮದ್ವಾರವಲ್ಲವೇ ನಾರದರು..?<br />
ಯುಗ-ಯುಗಗಳ ಕಾಲ ಭುವಿಯ ಜೀವಿಗಳಿಗೆ ಭವ್ಯ ಬದುಕಿನ ದಾರಿ ತೋರಬಲ್ಲ ಮಹಾಕಾವ್ಯವೊಂದಕ್ಕೆ -<br />
ಅಮೃತಬೀಜವನ್ನು ವಾಲ್ಮೀಕಿಗಳ ಹೃದಯದಲ್ಲಿ ಬಿತ್ತಿದ ನಾರದರು-<br />
&#8216;ಬಂದ ಕಾರ್ಯವಾಯಿತು&#8217; ಎಂಬಂತೆ ಗಗನವನ್ನೇರಿ ಹೊರಟು ಹೋದರು&#8230;</p>
<p>ದಿವಿ ಭುವಿಗಿಳಿದಿತ್ತು..<br />
ಭುವಿಯನ್ನು ದಿವಿಯಾಗಿಸಬಯಸಿತ್ತು..!<br />
ವಾಲ್ಮೀಕಿಗಳ ಹೃದಯವನ್ನು ಹೊಕ್ಕಿತ್ತು..<br />
ಬಹು ದೊಡ್ಡ ರೂಪದಲ್ಲಿ ಪ್ರಕಟಗೊಳ್ಳಲು ಸಮಯ ಕಾಯುತ್ತಿತ್ತು&#8230;<br />
ಸನ್ನಿವೇಶವನ್ನು ಸೃಷ್ಟಿಸತೊಡಗಿತ್ತು..!</p>
<p>ರಾಮಾಯಣದ ಕಥನ-ಕಥಾನಕ-ಕಥಾನಾಯಕರ ಗಾಢ ಪ್ರಭಾವಕ್ಕೊಳಗಾದ ಮಹಾಮುನಿಗಳಿಗೆ ಬಹು ಹೊತ್ತಿನವರೆಗೆ ಬಾಹ್ಯಪ್ರಜ್ಞೆ ಮರಳಲಿಲ್ಲ&#8230;!<br />
ನಡುನೆತ್ತಿಯ ನೇಸರ ತನ್ನ ಕಿರಣಗಳ ಕರಗಳಿಂದ ತಟ್ಟಿ ಎಬ್ಬಿಸಿದಾಗಲೇ ವಾಲ್ಮೀಕಿಗಳಿಗೆ ಎಚ್ಚರವಾದದ್ದು&#8230;!</p>
<p>ಪವಿತ್ರತೆಯಲ್ಲಿ ಗಂಗೆಯ ತಂಗಿಯೇ ಆದ ತಮಸೆಯೆಡೆಗೆ ತೆರಳಿದರು ವಾಲ್ಮೀಕಿಗಳು ಮಾಧ್ಯಾಹ್ನಿಕ ಸ್ನಾನಕ್ಕಾಗಿ.<br />
ಪ್ರಿಯಶಿಷ್ಯನಾದ ಭರದ್ವಾಜನು ಸ್ನಾನವಸ್ತ್ರ ಮತ್ತು ಕಲಶಗಳೊಡನೆ ಅವರನ್ನನುಸರಿಸಿದನು.<br />
ನಿರ್ಮಲಾತ್ಮನ ನೆನಪಿನಲ್ಲಿಯೇ ಇದ್ದ ವಾಲ್ಮೀಕಿಗಳಿಗೆ ಪ್ರತಿನಿತ್ಯ ನೋಡುತ್ತಿದ್ದರೂ ಅಂದೇಕೋ ವಿಶೇಷವಾಗಿ ತೋರಿದಳು ತಮಸೆ..!</p>
<p>ಒಂದಿನಿತೂ ಕಲ್ಮಷವಿಲ್ಲದ, ರಮಣೀಯವಾದ, ಸ್ಫಟಿಕಸದೃಶವಾದ ತಮಸೆಯ ಜಲದಲ್ಲಿ -<br />
ವಾಲ್ಮೀಕಿಗಳಿಗೆ ತೋರಿದ್ದು ಶ್ರೀರಾಮನ ಮನ&#8230;.!<br />
ತಿಳಿದವನಾಗದಿದ್ದರೂ ಚಿಂತೆಯಿಲ್ಲ, ಸನ್ಮನುಷ್ಯನಾಗಬೇಕಿದ್ದರೆ ತಿಳಿಮನದವನಾಗಿರಬೇಕು..!<br />
ಅಂತಹ ಶ್ರೀರಾಮನ ಮನಕ್ಕೆ ನಮನ ಸಲ್ಲಿಸಿ ಸ್ನಾನಕ್ಕೆ ಸಿದ್ಧರಾದ ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.</p>
<p>&#8221; ಮಗೂ.. ಕಲಶವನ್ನಿಲ್ಲಿಯೇ ಇಡು, ಸ್ನಾನವಸ್ತ್ರವನ್ನು ಕೊಡು.<br />
ಹಿತವಾದ ಈ ತಮಸಾ ತೀರ್ಥವನ್ನು ಅವಗಾಹಿಸುವೆ..&#8221;<br />
ಭರದ್ವಾಜನು ವಿನೀತನಾಗಿ ವಾಲ್ಮೀಕಿಗಳ ಆಣತಿಯನ್ನು ಪಾಲಿಸಿದನು.</p>
<p>ಭರದ್ವಾಜನ ಹಸ್ತದಿಂದ ಸ್ನಾನವಸ್ತ್ರವನ್ನು ವಾಲ್ಮೀಕಿಗಳು ತೆಗೆದುಕೊಂಡಿದ್ದೇನೋ ನಿಜ,<br />
ಆದರೆ ತಮಸೆಯ ಅವಗಾಹನವನ್ನು ಅವರು ಮಾಡಲಿಲ್ಲ..!<br />
ಅದಾಗಲೇ ಅವರ ಮನಸ್ಸು ನಿರ್ಮಲತೆಯಲ್ಲಿ ತಮಸೆಯನ್ನೇ ಹೋಲುವ ರಾಮನ ಮನದಲ್ಲಿ ಅವಗಾಹನಗೈದಾಗಿತ್ತು&#8230;!<br />
ಯಾರೋ ಕರೆದವರಂತೆ ತಟ್ಟನೆದ್ದ ವಾಲ್ಮೀಕಿಗಳು ತಮಸಾವನದಲ್ಲಿ ವಿಹರಿಸತೊಡಗಿದರು&#8230;!</p>
<p>ತಮಸೆಯ ತಂಪಿನಿಂದ ಮೇಲೆದ್ದು ಬಂದು, ಹಸಿರಿನ ಸೊಂಪಿನಲ್ಲಿ ವಿಹರಿಸುತ್ತಿದ್ದ ವಾಲ್ಮೀಕಿಗಳನ್ನು-<br />
ಇದ್ದಕ್ಕಿದ್ದಂತೆ ಸೆಳೆಯಿತು ಜೋಡಿಹಕ್ಕಿಗಳ ಹಾಡಿನ ಇಂಪು..!<br />
ಧ್ವನಿ ಬಂದೆಡೆಗೆ ಅಪ್ರಯತ್ನವಾಗಿ ತಿರುಗಿದ ವಾಲ್ಮೀಕಿಗಳ ದೃಷ್ಟಿಗೆ -<br />
ಗೋಚರವಾದವು ಪ್ರೇಮದ ವಿನಿಮಯದಲ್ಲಿ ಮಗ್ನವಾಗಿದ್ದ ಜೋಡಿ ಕ್ರೌಂಚ ಪಕ್ಷಿಗಳು..!</p>
<p>ಅನ್ಯೋನ್ಯ ಪ್ರೇಮಾತಿಶಯದಿಂದಾಗಿ ಒಂದು ಕ್ಷಣವಾದರೂ ಪರಸ್ಪರ ವಿರಹವನ್ನು ಸಹಿಸಲಾರದ,<br />
ಆನಂದಾತಿಶಯದಿಂದಾಗಿ ಅತ್ಯಂತ ಮಧುರವಾಗಿ ನಿನಾದಗೈಯುತ್ತಿದ್ದ ಕ್ರೌಂಚಮಿಥುನವನ್ನು-<br />
ಕಣ್ತುಂಬ ನೋಡಿದಾಗ ವಾಲ್ಮೀಕಿಗಳಿಗೆ ಆದದ್ದು ಪ್ರಕೃತಿ-ಪುರುಷರ ಸಾಕ್ಷಾತ್ಕಾರ&#8230;!</p>
<p>ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!<br />
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!<br />
ಹಿನ್ನೆಲೆಯಲ್ಲಿ ಹರಿಯುವ ಹೊಳೆ..<br />
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!<br />
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ&#8230;!</p>
<p>ಅಯ್ಯೋ&#8230;<br />
ಆಗ ಬಿದ್ದಿತಲ್ಲಿಗೊಂದು <strong>&#8216;ಬೇಡ&#8217;</strong>ದ ದೃಷ್ಟಿ..!<br />
ಸೃಷ್ಟಿ-ದೃಷ್ಟಿಗಳ ಸಮರಸ-ಸೌಖ್ಯವನ್ನು ಚಿರಕಾಲ ಉಳಿಯಲು ವಿಧಿಯದೇಕೆ ಬಿಡದೋ&#8230;!?<br />
ಕೆಂಗಣ್ಣಿನ, ಕೆಡುಮನಸ್ಸಿನ, ಕ್ರೂರವೈರದ, ದಯಾದೂರನಾದ, ದುರುಳ ಬೇಡನೊಬ್ಬನು ದಾಂಗುಡಿಯಿಟ್ಟನಲ್ಲಿ..!</p>
<p>ಒಂದೆಡೆ ಸಕಲ ಜೀವಗಳನ್ನೂ ಸ್ವಾರ್ಥವಿಲ್ಲದೆ ಪ್ರೀತಿಸುವ ವಾಲ್ಮೀಕಿಗಳು-<br />
ಇನ್ನೊಂದೆಡೆ ಸಕಲಜೀವಗಳನ್ನೂ ಅಕಾರಣವಾಗಿ ದ್ವೇಷಿಸುವ ಒಬ್ಬ ಬೇಡ..<br />
ಒಂದೆಡೆ ಜೀವಗಳ ಆನಂದವನ್ನು ಕಂಡು ಆನಂದಿಸುವ ದೈವೀಮನಸ್ಥಿತಿ..<br />
ಇನ್ನೊಂದೆಡೆ ಜೀವಹಿಂಸೆಯಲ್ಲೇ ಆನಂದವನ್ನು ಕಾಣುವ ಆಸುರೀಮನಸ್ಥಿತಿ..<br />
ಎಂಥ ವಿಪರ್ಯಾಸದ ಸಮಾವೇಶವಿದು&#8230;!</p>
<p>ಪಕ್ಷಿಯುಗಳವು ಮೈಮರೆತು ಸುಖಿಸುತ್ತಿರುವಂತೆಯೇ, ಮಹರ್ಷಿ ವಾಲ್ಮೀಕಿಗಳು ನೋಡನೋಡುತ್ತಿರುವಂತೆಯೇ -<br />
ಬೇಡನ ಕೆಡುಮನಸ್ಸು ಕೆಡುಸಂಕಲ್ಪವೊಂದನ್ನು ಮಾಡಿತು..<br />
ಕೆಂಗಣ್ಣು ಗುರಿಯಿಟ್ಟಿತು..<br />
ಕ್ರೂರ ಕೈಗಳು ಕೂರಂಬನ್ನೆಸೆದವು&#8230;!<br />
ನಲ್ಲೆಯ ಒಲವಿನಲ್ಲಿ ಜಗದಿರವನ್ನು, ಹೆಚ್ಚೇಕೆ.. ತನ್ನಿರವನ್ನೇ ಮರೆತಿದ್ದ ಗಂಡುಪಕ್ಷಿಯ ಕೋಮಲ ಹೃದಯವನ್ನು -<br />
ಹೃದಯಶೂನ್ಯನಾದ ಬೇಡನ ಬಾಣವು ಭೇದಿಸಿಯೇಬಿಟ್ಟಿತು..!</p>
<p>ಅಹೋ&#8230;ಬದುಕಿನ ಭಾಗ್ಯದ ವಿಪರ್ಯಯವೇ&#8230;!<br />
ಎಲ್ಲಿಋಷಿಯ ಪಾವನ ದೃಷ್ಟಿಯಿದ್ದಿತೋ..ಅಲ್ಲಿ ಬಿದ್ದಿತು ವ್ಯಾಧನ ಪಾಪದೃಷ್ಟಿ..<br />
ಮಡದಿಗಾಗಿ ಮೀಸಲಿಟ್ಟ ಮೃದು ಹೃದಯದಲ್ಲಿ ಆಯಿತು ಕ್ರೂರ ಶರಪ್ರವೇಶ..<br />
ಶೃಂಗಾರರಸವಳಿದು ಪ್ರಕಟವಾಯಿತು ಕರುಣರಸ&#8230;<br />
ಪ್ರೇಮಧಾರೆಯಾರಿತು, ಚಿಮ್ಮಿತು ರಕ್ತಧಾರೆ..<br />
ಕಲರವ ಕರಗಿತು, ಮಾರ್ದನಿಸಿತು ಚೀತ್ಕಾರ&#8230;!!</p>
<p>ಮುಂಜಾನೆಯ ಮಂಜಿನಲ್ಲಿ ಮಿಂದು ನಳನಳಿಸುವ, ಸೂರ್ಯನನ್ನು ನೋಡಿ ತನ್ನಷ್ಟಕ್ಕೇ ನಗುವ,<br />
ಸುಕೋಮಲ ಕಮಲದ ಮೇಲೆ ಸಿಡಿಲು ಬಿದ್ದಂತೆ..<br />
ಹಿಂದುಮುಂದಿಲ್ಲದ, ಪ್ರಾಣಹರವಾದ ಬಾಣಾಘಾತಕ್ಕೆ ತುತ್ತಾಗಿ ಧರೆಗುರುಳಿದ ಪ್ರೇಮಪಕ್ಷಿ ,<br />
ರಕ್ತದ ಮಡುವಿನಲ್ಲಿ ತನ್ನ ಪ್ರಾಣಗಳಿಗಾಗಿ..ಅಲ್ಲಲ್ಲ..ತನ್ನ ಪ್ರಾಣಪ್ರಿಯಳಿಗಾಗಿ ಚಡಪಡಿಸಿತು&#8230;!</p>
<p>ಒಂದೇ ಕಲ್ಲಿಗೆ ಎರಡು ಹಕ್ಕಿಗಳೆನ್ನುವರಲ್ಲವೇ..<br />
ಇಲ್ಲಿ ಆದದ್ದು ಹಾಗೇ..!<br />
ಒಂದೇ  ಶ್ರುತಿಯ ಎರಡು ವೀಣೆಗಳಲ್ಲಿ ಒಂದನ್ನು ಮೀಟಿದರೆ ಎರಡೂ ಮಿಡಿಯುವಂತೆ -<br />
ಗಂಡುಪಕ್ಷಿಯ ಮರಣವೇದನೆಯ ಕೂಗು ಹೆಣ್ಣುಪಕ್ಷಿಯ ಹೃದಯದಲ್ಲಿ<br />
ಇಮ್ಮಡಿಯಾಗಿ..ಮುಮ್ಮಡಿಯಾಗಿ..ನೂರ್ಮಡಿಯಾಗಿ ಪ್ರತಿಧ್ವನಿಸಿತು..!<br />
ಆಕೆಯ ಕರುಣಾಕ್ರಂದನಕ್ಕೆ ಕರುಳೇಕೆ..ಕಲ್ಲುಬಂಡೆಗಳೇ ಕರಗಿದವು&#8230;!</p>
<p>ತಮಸೆಯ ತಟದಲ್ಲಿ ಹರಿಯತೊಡಗಿತು ಮತ್ತೊಂದು ನದಿ..<br />
ಅದು ಜೀವನದಿ&#8230; ಜೀವನದ ನೋವ ನದಿ..!</p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/%e0%b2%85%e0%b2%82%e0%b2%ac%e0%b3%8a%e0%b2%82%e0%b2%a6%e0%b3%81-%e0%b2%b9%e0%b2%95%e0%b3%8d%e0%b2%95%e0%b2%bf%e0%b2%af%e0%b3%86%e0%b2%b0%e0%b2%a1%e0%b3%81/feed/</wfw:commentRss>
		<slash:comments>14</slash:comments>
		</item>
		<item>
		<title>ಸಿಂಧು ಕಾಣಾ..ಬಿಂದುವಿನೊಳು..!! &#8211; ಭಾಗ 2</title>
		<link>http://hareraama.in/blog/sindhu-kaanaa-bindu2/</link>
		<comments>http://hareraama.in/blog/sindhu-kaanaa-bindu2/#comments</comments>
		<pubDate>Thu, 17 Jun 2010 13:47:18 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4701</guid>
		<description><![CDATA[ದೊಡ್ಡ ವರವನ್ನು ಕೊಡುವಾಗ ಸಣ್ಣ ಸೇವೆಯನ್ನಾದರೂ ಮಾಡಿಸದಿದ್ದರೆ ಕರ್ಮದ ಮರ್ಮವು ಮನಸಿಗೆ ಬರುವುದಾದರೂ ಹೇಗೆ…?

ಅಣ್ಣನಿಂದ ಅಪಹರಿಸಲ್ಪಟ್ಟಿದ್ದ ಅರಸಿಯನ್ನೂ, ಅರಸೊತ್ತಿಗೆಯನ್ನೂ ಸುಗ್ರೀವನಿಗೆ ಮರಳಿ ಕೊಡಿಸಿದ ರಾಮ, ಅವನಿಂದ ಅಪೇಕ್ಷಿಸಿದ್ದು ಸೀತಾನ್ವೇಷಣೆಯ ಸೇವೆಯನ್ನು…!

ತನ್ನ ಮದುವೆಗೆ ಮುನ್ನ ಅಹಲ್ಯಾ-ಗೌತಮರ ಮುರಿದ ಮದುವೆಯನ್ನು ಕೂಡಿಸುವಾಗ….

ಅಪಹೃತಳಾದ ತನ್ನ ಸತಿಯನ್ನು ಮರಳಿ ಪಡೆಯುವ ಮುನ್ನ ಸುಗ್ರೀವನಿಗೆ ಅವನ ಪತ್ನಿಯನ್ನು ಕೊಡಿಸುವಾಗ…

ಅಯೋಧ್ಯೆಯ ಚಕ್ರವರ್ತಿಸಿಂಹಾಸನದಲ್ಲಿ ತಾನು ಮಂಡಿಸುವ ಮುನ್ನ

ಕಿಷ್ಕಿಂಧೆಯ ಸಿಂಹಾಸನದಲ್ಲಿ ಸುಗ್ರೀವನನ್ನೂ…. ಲಂಕೆಯ ಸಿಂಹಾಸನದಲ್ಲಿ ವಿಭೀಷಣನನ್ನೂ ಕುಳ್ಳಿರಿಸುವಾಗ….

ಮರ್ಯಾದಾಪುರುಷೋತ್ತಮ ನಮಗಿತ್ತ “ಉಣಬಡಿಸಿ ಉಣ್ಣು” ಎಂಬ ಸಂದೇಶವನ್ನು ನಾವರಿಯಬೇಕಲ್ಲವೇ….!?]]></description>
			<content:encoded><![CDATA[<p style="text-align: center;"><strong>॥ ಹರೇರಾಮ ॥</strong></p>
<p><strong>ಒಲಿದರೂ ಮಾರಿಯೇ…….!</strong></p>
<p>ಸಾಧನೆಯ ಕೊನೆಯಲ್ಲಿ ಧ್ಯಾನ-ಧ್ಯೇಯಗಳು ಸೇರುವಹಾಗೆ ವನವಾಸದ ಕೊನೆಯ ಚರಣದಲ್ಲಿ<br />
ಮುನಿಕುಲೋತ್ತಮರಾದ ಅಗಸ್ತ್ಯರೊಡನೆ ರಘುಕುಲೋತ್ತಮನಾದ ಶ್ರೀರಾಮನ ಸಮಾಗಮವಾಯಿತು…</p>
<p><strong>ಸಾಧನಗಳೊದಗಬೇಕಾದದ್ದು ಸಾಧನೆಗಳ ಸಮಯದಲ್ಲಿ..</strong></p>
<p>ಕಾರ್ಯಕಾಲವು ಬಂತೆಂಬ ಸೂಚನೆಯೋ ಎಂಬಂತೆ ತನಗೆಂದೇ ಇಂದ್ರನಿರಿಸಿದ್ದ ವರಧನುಸ್ಸನ್ನು ಅಗಸ್ತ್ಯರಂದ ಪರಿಗ್ರಹಿಸಿ,<br />
ನಿರ್ಮಲ ಗೋದಾವರಿಯ ತೀರದಲ್ಲಿ ಪಂಚವಟಿಯ ಶಾಂತ ಪರಿಸರದಲ್ಲಿ ನೆಲೆಸಿರುವಾಗ..<br />
ಶಾಂತ ಸರೋವರವನ್ನು ಕದಡಿ ಕೆಸರಾಗಿಸುವ ಕಾಡೆಮ್ಮೆಯಂತೆ ಶೂರ್ಪನಖಿಯ ಪ್ರವೇಶವಾಯಿತು ಅಲ್ಲಿ…!<br />
ಸುಂದರತೆ-ಸುಕುಮಾರತೆ-ಸುಜನತೆಯ ಸಾಕಾರನ ಮೇಲೆ ..<br />
ಕ್ರೂರಿ -ಕರಾಳಿ…ಕಪಟಿ-ಕುರೂಪಿಯ ಕುದೃಷ್ಟಿಯು ಬಿದ್ದಾಗ ಪ್ರಶಾಂತ ಪಂಚವಟಿಯೇ ರಕ್ತಸಿಕ್ತ ರಣಭೂಮಿಯಾಗಬೇಕಾಯಿತು….!<br />
ಶೂರ್ಪನಖಿಯ ದುರಾಸೆಯನ್ನು ಬೆಂಬಲಿಸಿ ಬಂದ ರಾಕ್ಷಸಕೋಟಿಯನ್ನು<br />
ಅಸಹಾಯಶೂರನಾಗಿ ಅತ್ಯಲ್ಪ ಸಮಯದಲ್ಲಿಯೇ ಧರೆಗುರುಳಿಸುವ ಅದ್ಭುತ ಸಮರವನ್ನು ಶ್ರೀರಾಮನು ನಡೆಸುತ್ತಿದ್ದಾಗ..<br />
ಹರಿದ ರಕ್ತದ ಹೊಳೆ ಗೋದಾವರಿಯನ್ನು ಮೀರಿತು….!</p>
<p>ಪಂಚವಟಿಯಿಂದ ಪಲಾಯನಗೈದ ಶೂರ್ಪನಖಿ ಲಂಕೆಯನ್ನು ಸೇರಿದರೆ,<br />
ಆಕೆಯ ಹೃದಯದಲ್ಲಿ ಹುದುಗಿದ್ದ ದುಷ್ಟಭಾವಗಳು ರಾವಣನ ಹೃದಯವನ್ನು ಸೇರಿದವು….!<br />
ಸೀತಾಪತಿಯನ್ನು ಬಯಸಿದ ತಂಗಿ ಮೂಗು ಕಳೆದುಕೊಂಡರೆ…… ರಾಮಸತಿಯನ್ನು ಬಯಸಿದ ಅಣ್ಣ ತಲೆಯನ್ನೇ ಕಳೆದುಕೊಳ್ಳುವ ಹಾದಿಯಲ್ಲಿ ಹೆಜ್ಜೆಗಳನ್ನಿಟ್ಟ….!</p>
<p><strong>ಮನವಾಯಿತು ಮಾಯಾಮೃಗ..</strong><br />
ದುಷ್ಟನೊಬ್ಬ ಪರಿವರ್ತನೆಗೊಂಡು ಶಿಷ್ಟನಾದರೂ  ಭೂತಕಾಲದ ಭೂತಗಳು ಅಂಥವರನ್ನು ಬೆಂಬಿಡದೆ ಪೀಡಿಸುವುದುಂಟು..<br />
ಹಾಗಾಯಿತು ಮಾರೀಚನ ಸ್ಥಿತಿ….!<br />
ರಾಮನೇನೆಂಬುದನ್ನು ಆತನ ಬಾಣಗಳಿಂದಲೇ ತಿಳಿದುಕೊಂಡಿದ್ದ ಮಾರೀಚ ರಾವಣನಿಗೆ ಅದನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾಗದಾದಾಗ ..<br />
ಒಲ್ಲದ ಮನಸಿನಿಂದಲೇ ಚಿನ್ನದ ಜಿಂಕೆಯ ವೇಷ ಧರಿಸಿ ಸೀತೆಯ ಮುಂದೆ ಸುಳಿದಾಡಿದ….!<br />
ಪಂಚವಟಿಯಲ್ಲಿ ಜಿಂಕೆಗಳಿಗೇನೂ ಕೊರತೆಯಿರಲಿಲ್ಲ…. ಆದರೆ, ನಕಲಿಯ ಸೆಳೆತದ ರೀತಿಯೇ ಬೇರೆ…..!<br />
ಎಂದೂ ಬೇರೇನೂ ಬಯಸದ ಸೀತೆಗೆ ಅಂದು ಮಾಯಾಮೃಗ ಬೇಕೆನಿಸಿತು…!<br />
ಪರಿಣಾಮ..? ಮಾರೀಚನಿಗೆ ಮೋಕ್ಷ……ಸೀತೆಗೆ ಬಂಧನ…..!</p>
<p><strong>ಸುಳ್ಳಿಗೆ ಎಂದೆಂದೂ ಸತ್ಯದ ಭಯವಿದೆ……</strong><br />
ರಾಮನನ್ನು ಕಾಣುವ ಪೂರ್ವದಲ್ಲಿಯೇ ಆತನ ವಿಷಯದಲ್ಲಿ ರಾವಣನದೆಷ್ಟು ಭಯಪಟ್ಟಿದ್ದನೆಂದರೆ,<br />
ನಾರೀಚೌರ್ಯದ ಘನಕಾರ್ಯಕ್ಕಾಗಿ ರಾಮ-ಲಕ್ಷ್ಮಣರಿಲ್ಲದ ವೇಳೆಯನ್ನಾತ ಸಾಧಿಸಬೇಕಾಯಿತು..!<strong><br />
</strong></p>
<p><strong>ಪ್ರಾಣಾರ್ಪಣೆ ನಿನಗೆ  ಪ್ರಭೂ..!</strong><br />
ಇನ್ನೊಬ್ಬರ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತೊಬ್ಬರನ್ನು ಬಲಿ ಕೊಡುವ ರಾವಣನಂಥವರು…<br />
ಇನ್ನೊಬ್ಬರ ಮಾನರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆಯುವ ಜಟಾಯುವಿನಂಥವರು…<br />
ಇವರುಗಳ ಮಧ್ಯೆ ಸಂಘರ್ಷ ಜಗತ್ತು ಇರುವಂದಿನಿಂದಲೂ ಇದೆ…!<br />
ಸೀತೆಯ ಮಾನರಕ್ಷಣೆಗಾಗಿ ವಿಶಾಲವಾದ ಗೃಧ್ರರಾಜ್ಯದ ಒಡೆತನವನ್ನೂ, ಅಸಂಖ್ಯ ಬಂಧು-ಮಿತ್ರರನ್ನೂ, ಹೆಚ್ಚೇಕೆ…?<br />
ತನ್ನ ಪಕ್ಷಗಳನ್ನೂ, ಪಾರ್ಶ್ವಗಳಮ್ನೂ, ಪಾದಗಳನ್ನೂ ಕೊನೆಗೆ ತನ್ನ ಪ್ರಾಣಗಳನ್ನೂ ರಾಮನಡಿಯಲ್ಲಿ ಸಮರ್ಪಿಸಿ ಜಟಾಯು ಅಮರನಾದ…..!<strong> </strong></p>
<p><strong>ಕಾದಿರುವೆನು  ನಿನಗಾಗಿ…!</strong><br />
ಕರ್ಪೂರವು ತಾನುರಿಯುತ್ತಿದ್ದರೂ ಜಗತ್ತಿಗೆ ನೀಡುವುದು ಬೆಳಕನ್ನೇ…!<br />
ಸಂಕಟಗಳ ಮಾಲೆಯನ್ನೇ ಹೃದಯದಲ್ಲಿ ಹೊತ್ತು ಹೊರಟ ಶ್ರೀರಾಮನ ಸೀತಾನ್ವೇಷಣೆಯ ಮಾರ್ಗ,<br />
ಅದು ಶರಣಸಂದೋಹದ ಮುಕ್ತಿಮಾರ್ಗವೇ ಆಗಿತ್ತು…!<br />
“ಕಾಯುವರನ್ನು ಕಾಯುವೆ”ನೆಂಬ ಕರುಣಾಮೂರ್ತಿಯ ಬಿರುದು ಕಬಂಧ-ಶಬರಿ-ಹನುಮಂತರ ವಿಷಯದಲ್ಲಿ ಸಾರ್ಥಕಗೊಂಡಿತು…!</p>
<p><strong>ಅರಸಿ-ಅರಸೊತ್ತಿಗೆಗಳ ಹರಸಿಕೊಟ್ಟವನು…..</strong><br />
ದೊಡ್ಡ ವರವನ್ನು ಕೊಡುವಾಗ ಸಣ್ಣ ಸೇವೆಯನ್ನಾದರೂ ಮಾಡಿಸದಿದ್ದರೆ ಕರ್ಮದ ಮರ್ಮವು ಮನಸಿಗೆ ಬರುವುದಾದರೂ ಹೇಗೆ…?<br />
ಅಣ್ಣನಿಂದ ಅಪಹರಿಸಲ್ಪಟ್ಟಿದ್ದ ಅರಸಿಯನ್ನೂ, ಅರಸೊತ್ತಿಗೆಯನ್ನೂ ಸುಗ್ರೀವನಿಗೆ ಮರಳಿ ಕೊಡಿಸಿದ ರಾಮ, ಅವನಿಂದ ಅಪೇಕ್ಷಿಸಿದ್ದು ಸೀತಾನ್ವೇಷಣೆಯ ಸೇವೆಯನ್ನು…!<br />
ತನ್ನ ಮದುವೆಗೆ ಮುನ್ನ ಅಹಲ್ಯಾ-ಗೌತಮರ ಮುರಿದ ಮದುವೆಯನ್ನು ಕೂಡಿಸುವಾಗ….<br />
ಅಪಹೃತಳಾದ ತನ್ನ ಸತಿಯನ್ನು ಮರಳಿ ಪಡೆಯುವ ಮುನ್ನ ಸುಗ್ರೀವನಿಗೆ ಅವನ ಪತ್ನಿಯನ್ನು ಕೊಡಿಸುವಾಗ…<br />
ಅಯೋಧ್ಯೆಯ ಚಕ್ರವರ್ತಿಸಿಂಹಾಸನದಲ್ಲಿ ತಾನು ಮಂಡಿಸುವ ಮುನ್ನ<br />
ಕಿಷ್ಕಿಂಧೆಯ ಸಿಂಹಾಸನದಲ್ಲಿ ಸುಗ್ರೀವನನ್ನೂ…. ಲಂಕೆಯ ಸಿಂಹಾಸನದಲ್ಲಿ ವಿಭೀಷಣನನ್ನೂ ಕುಳ್ಳಿರಿಸುವಾಗ….<br />
ಮರ್ಯಾದಾಪುರುಷೋತ್ತಮ ನಮಗಿತ್ತ “ಉಣಬಡಿಸಿ ಉಣ್ಣು” ಎಂಬ ಸಂದೇಶವನ್ನು ನಾವರಿಯಬೇಕಲ್ಲವೇ….!?</p>
<p><strong>ಬಿಂದುವಾಯಿತು ಸಿಂಧು-ಬೆಂಕಿಯಾಯಿತು ಲಂಕೆ…!</strong><br />
ಸಾಧಕಕೋಟಿಯಲ್ಲಿ ಸಾಧಿಸುವವನು ಎಲ್ಲೋ ಒಬ್ಬ…<br />
ಸೀತೆಯನ್ನು ಹುಡುಕಿ ಹೊರಟ ವಾನರಕೋಟಿಯಲ್ಲಿ ಆ ವಿಶ್ವಜನನಿಯ ಪದಕಮಲದ ಗಮ್ಯವನ್ನು ತಲುಪಿದವನು ಮಾರುತಿಯೊಬ್ಬನೇ…!<br />
ಸಮುದ್ರವೆಂದರೆ ಬಹಳ ದೊಡ್ಡದು ಆದರೆ,</p>
<p>“<strong>ಮಾತೆಯ ಮಮತೆಯ ಸಾಗರ</strong>”ದ ಮುಂದೆ ಅದೇನು ಮಹಾ…?<br />
ಸೀತಾದರ್ಶನಕ್ಕಾಗಿ ಹಾತೊರೆದ ಆಂಜನೇಯನ ಪಾಲಿಗೆ ಸಿಂಧುವೂ ಬಿಂದುವಾಯಿತು…!<br />
ರಾಕ್ಷಸರೆಂದರೆ ಅಜೇಯ ವೀರರು…..ಲಂಕೆಯೆಂದರೆ ಅಜೇಯ ನಗರಿ….<br />
ಆದರೆ ಭಾವಬಲದ ಮುಂದೆ ಬಾಹುಬಲವೆಷ್ಟರದು…!?<br />
ಅಶೋಕವನದಲ್ಲಿ ಬಂಧಿತಳಾಗಿದ್ದ ಶೋಕಮೂರ್ತಿಯನ್ನು ಕಣ್ಣಾರೆ ಕಂಡು ಕರಗಿದ-ಕೆರಳಿದ,ಆ೦ಜನೇಯನ ರೋಷದ ಮುಂದೆ<br />
ರಾಕ್ಷಸರು ಧೂಲೀಪಟವಾದರು&#8230;ಲಂಕೆ ಬೂದಿಯಾಯಿತು..!</p>
<p><strong>ಸೇತುಬಂಧ…ಇದು ಎಂದೂಮುರಿಯದ ಸಂಬಂಧ…!</strong><br />
ಕತ್ತಲೆಯು ಬೆಳಕಿನೊಳಗೆ ಕಲೆಯುವುದುಂಟೆ….?<br />
ಉತ್ತರ-ದಕ್ಷಿಣಗಳೊಂದಾಗುವುದುಂಟೆ…?<br />
ತಮೋಮಯವಾದ ರಾಕ್ಷಸಕುಲದಲ್ಲಿ ಜನಿಸಿದ ವಿಭೀಷಣನು, ಸೂರ್ಯಕುಲತಿಲಕನಾದ ಶ್ರೀರಾಮನೊಡನೆ ಕಲೆತಾಗ ಕತ್ತಲೆಯು ಬೆಳಕಿನೊಡನೆ ಸೇರಿ ಬೆಳಕೇ ಆಯಿತು….!<br />
ವಾನರವೀರರ ಸೇವೆ-ಸಾಹಸಗಳಲ್ಲಿ ವಿಶ್ವಚರಿತ್ರೆಯ ಏಕೈಕ ಸಮುದ್ರಸೇತು ನಿರ್ಮಾಣಗೊಂಡಿತು…!<br />
ಸೀತಾ-ರಾಮರ ಪ್ರೇಮದ ಮಧುರಸಾಗರದೆದುರು ಲವಣಸಾಗರ ಸೋತಿತು…!<br />
ಸಂಧಿಸಿದವು ಉತ್ತರ-ದಕ್ಷಿಣ ದಿಶೆಗಳು……..!</p>
<p><strong>ದೈತ್ಯಸಂಹಾರಿ…</strong><br />
ಒಳಿತು-ಕೆಡುಕುಗಳು ಕೋಟಿಕೋಟಿ ರೂಪ ತಾಳಿದವು….<br />
ದಕ್ಷಿಣಸಮುದ್ರದ ದಕ್ಷಿಣತೀರದಲ್ಲಿ ದಕ್ಷಿಣದಿಕ್ಪಾಲಕನೂ ಬೆಚ್ಚಿಬೀಳುವಂತೆ ಹೊಡೆದಾಡಿದವು….!<br />
ಸೋಮಸುಂದರ ರಾಮ ರಾವಣನ ಪಾಲಿಗೆ ಯಮಭಯಂಕರನಾದರೆ, ಆತನೊಡನಾಡಿಗಳು ಮತ್ತುಳಿದವರ ಪಾಲಿಗೆ ಯಮಕಿಂಕರರಾದರು..!!<br />
ಕೆಡುಕಿನ ರಾಜಧಾನಿಯಲ್ಲಿ ಒಳಿತಿನ ರಾಜ್ಯಾಭಿಷೇಕವಾಯಿತು….<br />
ದಶಕಂಠನೊಡನೆ ಧರ್ಮದ್ವೇಷವೂ ಅಳಿಯಿತು, ವಿಭೀಷಣನ ಆಳ್ವಿಕೆಯಲ್ಲಿ ಅಸುರರೂ ಸುರಸದೃಶರಾದರು…..!</p>
<p><strong>ಅಗ್ನಿಯಲ್ಲಿಯೂ ಅರಳಿತು  ಸೀತೆಯೆಂಬ ಸುಮ….!</strong><br />
ಸೂರ್ಯರಶ್ಮಿಯು ಮಲಿನವಾಗಲುಂಟೆ.?<br />
ಕಾಮನಬಿಲ್ಲು ಕೆಸರಾಗಲುಂಟೆ…….?<br />
ರಾಮಸೂರ್ಯನ ಸೀತೆಯೆಂಬ ರಶ್ಮಿಗೆ ರಾವಣರಾಹುವಿನ ಗ್ರಹಣ ಉಂಟಾಗಿರಬಹುದೆಂಬ ಲೋಕದ ಭ್ರಮೆಯನ್ನು ಕಳೆಯಲು ಅಗ್ನಿಯು ದ್ವಾರವಾಯಿತು..!<br />
ರಣಭೂಮಿಯಲ್ಲಿ ಪ್ರಕಟವಾದ ರಾಮನ ಭುಜಬಲಕ್ಕಿಂತ-<br />
ಯಜ್ಞೇಶ್ವರನ ನಡುವೆ ಪ್ರಕಟವಾದ ಸೀತೆಯ ಶೀಲವೇನೂ ಕಡಿಮೆ ದೊಡ್ಡದಲ್ಲ….!<br />
ರಾಮಾಯಣವೆಂದರೆ ಪಂಚಭೂತಗಳ ಕಣ್ಣಾಮುಚ್ಚಾಲೆಯಾಟ…<br />
.ಸಂಗಮಿಸುವ ಭುವಿ-ಬಾನುಗಳ ನಡುವೆ ಜಲವೇರ್ಪಡಿಸಿದ ತಡೆಯನ್ನು ಗಾಳಿ-ಬೆಂಕಿಗಳು ಪರಿಹರಿಸಿದವು….!<br />
( ಭುವಿ=ಸೀತೆ&#8211;  ಬಾನು=ರಾಮ&#8211; ಜಲ=ಮಧ್ಯಸಮುದ್ರದ ಲಂಕಾಧಿಪತಿ  ಗಾಳಿ=ಹನುಮಂತ&#8212;  ಬೆಂಕಿ=ಅಗ್ನಿಪರೀಕ್ಷೆ )</p>
<p><strong>ಸಾಕೇತಕೆ ನೀ ದೊರೆಯಾಗಿರೆ…ಸಾಕೇತಕೆ(ಸಾಕು+ಏತಕೆ) ನಾಕ…!?</strong><br />
ಧರ್ಮವುಂಟು-ಅಧರ್ಮವಿಲ್ಲ.<br />
ಸುಖವುಂಟು-ದುಃಖವಿಲ್ಲ…<br />
ಪ್ರೀತಿಯುಂಟು-ದ್ವೇಷವಿಲ್ಲ…<br />
ಸಮೃಧ್ಡಿಯುಂಟು-ದಾರಿದ್ರವಿಲ್ಲ…<br />
ಸತ್ಯವುಂಟು-ಅಸತ್ಯವಿಲ್ಲ…<br />
ಸುಭಿಕ್ಷವುಂಟು-ದುರ್ಭಿಕ್ಷವಿಲ್ಲ…<br />
ಒಳಿತೆಲ್ಲವೂ ಉಂಟು…ಕೆಡುಕಾವುದೂ ಇಲ್ಲ….!!<br />
ಸ್ವರ್ಗಮೋಕ್ಷಗಳು ಇರುವುದು ಹೀಗೇ…<br />
ಧರ್ಮಸಿಂಹಾಸನವನ್ನು ಧರ್ಮಮೂರ್ತಿಯು ಅಲಂಕರಿಸಲು ಧರೆಯಾಯಿತು ಹಾಗೆ….!<br />
ಕಾಲಪ್ರವಾಹದಲ್ಲಿ ರಾಮರಾಜ್ಯ ಮರೆಯಾಗಬಹುದು, ಆದರೆ ಭವಿಷ್ಯತ್ತಿನಲ್ಲಿ ಬರಬಹುದಾದ ಸಕಲ ರಾಜರಿಗೂ &#8211; ಪ್ರಜೆಗಳಿಗೂ ಶಾಶ್ವತ ಸ್ಫೂರ್ತಿಸೆಲೆಯಾಗಿ<br />
ರಾಮರಾಜ್ಯದ ಅಮೃತಬೀಜಗಳು ಅವಿನಾಶಿಯಾದ ರಾಮಾಯಣದಲ್ಲಿ ಎಂದಂದಿಗೂ ಸಿಗುವಂತೆ ಉಳಿದುಕೊಂಡವು…!<br />
&#8220;ಕವಿಗಣ್ಣನ್ನು ತೆರೆದು ನೋಡು ಮಹರ್ಷಿಯೇ..ಇದು ಸೃಷ್ಟಿಯ ಸರ್ವಶ್ರೇಷ್ಠ ಪುರುಷನ ಸಂಕ್ಷಿಪ್ತ ಕಥೆ…&#8221;</p>
<p><strong>ನಾರದರ ಮಾತುಗಳು ನಿಂತವು…</strong></p>
<p><strong>ಆದರೆ ವಾಲ್ಮೀಕಿಗಳ ಮೌನವು ಮುಂದುವರೆಯುತ್ತಲೇ ಇತ್ತು..!</strong></p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/sindhu-kaanaa-bindu2/feed/</wfw:commentRss>
		<slash:comments>11</slash:comments>
		</item>
		<item>
		<title>ಸಿಂಧು ಕಾಣಾ..ಬಿಂದುವಿನೊಳು..!!</title>
		<link>http://hareraama.in/blog/sindhu-bindu/</link>
		<comments>http://hareraama.in/blog/sindhu-bindu/#comments</comments>
		<pubDate>Thu, 10 Jun 2010 05:14:59 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[bindu]]></category>
		<category><![CDATA[sindhu]]></category>

		<guid isPermaLink="false">http://hareraama.in/?p=4520</guid>
		<description><![CDATA[* ಬೆರೆತವು ಭುವಿ-ಬಾನುಗಳು……

ಇತ್ತ…..
ದೇವದೂತನ ದಿವ್ಯಹಸ್ತವನ್ನಲಂಕರಿಸಿದ್ದ ದೇವನಿರ್ಮಿತ ಪಾಯಸದ ಮೂಲಕವಾಗಿ
ದೇವದೇವನು ದಿವಿಯಿಂದ ಧರೆಗಿಳಿದು ದಶರಥನ ಯಜ್ಞಾಗ್ನಿಯ ಮಧ್ಯದಲ್ಲಿ ಪ್ರಕಟಗೊಂಡರೆ…..
ಅತ್ತ…..
ಮಿಥಿಲೆಯ ಯಜ್ಞಭೂಮಿಯಲ್ಲಿ ಯಜ್ಞಾರ್ಥವಾಗಿ ಭೂಮಿಯನ್ನುಳುವ ಜ್ಞಾನಿಗಳ ರಾಜ ಜನಕನ ನೇಗಿಲರೇಖೆಯಲ್ಲಿ ಭುವನದ ಭಾಗ್ಯರೇಖೆಯಾಗಿ ಭೂಗರ್ಭವನ್ನು ಭೇದಿಸಿ ಮೇಲೆದ್ದು ಬಂದಳು ಸೀತೆ…!!!

ಎಂದಿದ್ದರೂ ಬಾನು ಭುವಿಯೆಡೆಗೆ ಬಾಗಲೇಬೇಕಲ್ಲವೇ….!!

ಬದುಕಿನ ಸಮರಸದ ಸಿದ್ಧಿಗಾಗಿ ಅರಸಿಯನ್ನರಸಿ ಅರಸುಗಳರಸನ ಅಭಿಯಾನ ಆರಂಭಗೊಂಡಿತು….
]]></description>
			<content:encoded><![CDATA[<p style="text-align: center;">|<strong>|ಹರೇರಾಮ||</strong></p>
<p>ಹಿರಿದಾದ ಭೂಮಿಯ ಪರಿಚಯವನ್ನು ಕಿರಿದಾದ ಪ್ರತಿಕೃತಿಯ ಮೂಲಕ ಮಾಡಿಕೊಡುವಂತೆ..<br />
ಭೂಮಿ-ಆಗಸಗಳನ್ನು ವ್ಯಾಪಿಸಿ ನಿಂತ ವಿರಾಟ್ ಪುರುಷನ ವಿಶಾಲ ಕಥೆಯನ್ನು ನಾರದರು ವಾಲ್ಮೀಕಿಗಳಿಗೆ ಕೆಲವೇ ಮಾತುಗಳಲ್ಲಿ ಹೇಳಿದರು..</p>
<p><strong>* ಮರುಭೂಮಿಯಲ್ಲಿ ಚಿಲುಮೆಯಾಗಿ..</strong></p>
<p>ಆತನ ಜನ್ಮವೇ ಶೋಕಪರಿಹಾರ..!!<br />
ಬಹುಕಾಲ ಮಕ್ಕಳಿಲ್ಲದ ಕೊರಗಿನಲ್ಲಿ ಸೊರಗಿದ್ದ ದಶರಥ ಚಕ್ರವರ್ತಿಯ ಬದುಕಿನಲ್ಲಿ ….<br />
<script type="text/javascript">// <![CDATA[
D(["mb","ಬರಗಾಲದಲ್ಲಿ ಭರಪೂರ ಸುರಿದ ಮಳೆಯಂತೆ……!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಮರುಭೂಮಿಯಲ್ಲೊಸರುವ ನೀರ ಸೆಲೆಯಂತೆ…..!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅಮಾವಾಸ್ಯೆ ಕಳೆದು ಉದಿಸಿ ಬರುವ ಸೂರ್ಯನಂತೆ…!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e.ಶ್ರೀರಾಮನ ಆವಿರ್ಭಾವವಾಯಿತು…!!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೨.ಬೆರೆತವು ಭುವಿ-ಬಾನುಗಳು……\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಇತ್ತ…..\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eದೇವದೂತನ ದಿವ್ಯ ಹಸ್ತವನ್ನಲಂಕರಿಸಿದ್ದ ದೇವನಿರ್ಮಿತ ಪಾಯಸದ ಮೂಲಕವಾಗಿ\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eದೇವದೇವನು ದಿವಿಯಿಂದ ಧರೆಗಿಳಿದು ದಶರಥನ ಯಜ್ನಾಗ್ನಿಯ ಮಧ್ಯದಲ್ಲಿ ಪ್ರಕಟಗೊಂಡರೆ…..\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅತ್ತ…..\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಮಿಥಿಲೆಯ ಯಜ್ನಭೂಮಿಯಲ್ಲಿ ಯಜ್ನಾರ್ಥವಾಗಿ ಭೂಮಿಯನ್ನುಳುವ ಜ್ನಾನಿಗಳ ರಾಜ ಜನಕನ ನೇಗಿಲ ರೇಖೆಯಲ್ಲಿ ಭುವನದ ಭಾಗ್ಯರೇಖೆಯಾಗಿ ಭೂಗರ್ಭವನ್ನು ಭೇದಿಸಿ ಮೇಲೆದ್ದು ಬಂದಳು ಸೀತೆ…!!!",1]
);
// ]]&gt;</script>ಬರಗಾಲದಲ್ಲಿ ಭರಪೂರ ಸುರಿದ ಮಳೆಯಂತೆ……!!<br />
ಮರುಭೂಮಿಯಲ್ಲೊಸರುವ ನೀರ ಸೆಲೆಯಂತೆ…..!!<br />
ಅಮಾವಾಸ್ಯೆ ಕಳೆದು ಉದಿಸಿ ಬರುವ ಸೂರ್ಯನಂತೆ…!!<br />
ಶ್ರೀರಾಮನ ಆವಿರ್ಭಾವವಾಯಿತು…!!!</p>
<p><strong>* ಬೆರೆತವು ಭುವಿ-ಬಾನುಗಳು……</strong></p>
<p>ಇತ್ತ…..<br />
ದೇವದೂತನ ದಿವ್ಯಹಸ್ತವನ್ನಲಂಕರಿಸಿದ್ದ ದೇವನಿರ್ಮಿತ ಪಾಯಸದ ಮೂಲಕವಾಗಿ<br />
ದೇವದೇವನು ದಿವಿಯಿಂದ ಧರೆಗಿಳಿದು ದಶರಥನ ಯಜ್ಞಾಗ್ನಿಯ ಮಧ್ಯದಲ್ಲಿ ಪ್ರಕಟಗೊಂಡರೆ…..<br />
ಅತ್ತ…..<br />
ಮಿಥಿಲೆಯ ಯಜ್ಞಭೂಮಿಯಲ್ಲಿ ಯಜ್ಞಾರ್ಥವಾಗಿ ಭೂಮಿಯನ್ನುಳುವ ಜ್ಞಾನಿಗಳ ರಾಜ ಜನಕನ ನೇಗಿಲರೇಖೆಯಲ್ಲಿ ಭುವನದ ಭಾಗ್ಯರೇಖೆಯಾಗಿ ಭೂಗರ್ಭವನ್ನು ಭೇದಿಸಿ ಮೇಲೆದ್ದು ಬಂದಳು ಸೀತೆ…!!! <script type="text/javascript">// <![CDATA[
D(["mb","\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಎಂದಿದ್ದರೂ ಬಾನು ಭುವಿಯೆಡೆಗೆ ಬಾಗಲೇಬೇಕಲ್ಲವೇ….!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸಮರಸದ ಸಿದ್ಧಿಗಾಗಿ ಅರಸಿಯನ್ನರಸಿ ಅರಸುಗಳರಸನ ಅಭಿಯಾನ ಆರಂಭಗೊಂಡಿತು….\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಪತ್ನಿಯೆಂದರೆ ಯಜ್ನದ ಸಹಭಾಗಿನಿ..\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಆದುದರಿಂದಲೇ ಇರಬೇಕು, ಸೀತೆಯನ್ನು ಪಡೆಯುವ ಹಾದಿಯಲ್ಲಿ ರಾಮನ ಪ್ರಥಮ ಕಾರ್ಯವೇ ಯಜ್ನರಕ್ಷಣೆ…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸಮರವಿಲ್ಲದೆ ಸಮರಸವೆಲ್ಲಿ…?\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಆದುದರಿಂದಲೇ ತಾಟಕಿ-ಸುಬಾಹು ಮೊದಲಾದವರ ವಧೆ…!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಮದುವೆಗೆ ಮೊದಲು ಮುರಿದ ಮದುವೆಯೊಂದನ್ನು ಕೂಡಿಸುವ ಆದರ್ಶ ಅಹಲ್ಯೋದ್ಧಾರದಲ್ಲಿ…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eರಾಮನಾರಾಯಣನು ಸೀತಾಲಕ್ಷ್ಮಿಯನ್ನು ಪಡೆಯಲು ಮಾಧ್ಯಮವೇ ಶಿವನ ಧನುಸ್ಸು…..!!",1]
);
// ]]&gt;</script></p>
<p>ಎಂದಿದ್ದರೂ ಬಾನು ಭುವಿಯೆಡೆಗೆ ಬಾಗಲೇಬೇಕಲ್ಲವೇ….!!</p>
<p>ಬದುಕಿನ ಸಮರಸದ ಸಿದ್ಧಿಗಾಗಿ ಅರಸಿಯನ್ನರಸಿ ಅರಸುಗಳರಸನ ಅಭಿಯಾನ ಆರಂಭಗೊಂಡಿತು….</p>
<p>ಪತ್ನಿಯೆಂದರೆ ಯಜ್ಞದ ಸಹಭಾಗಿನಿ..<br />
ಆದುದರಿಂದಲೇ ಇರಬೇಕು, ಸೀತೆಯನ್ನು ಪಡೆಯುವ ಹಾದಿಯಲ್ಲಿ ರಾಮನ ಪ್ರಥಮ ಕಾರ್ಯವೇ ಯಜ್ಞರಕ್ಷಣೆ…!!</p>
<p>ಸಮರವಿಲ್ಲದೆ ಸಮರಸವೆಲ್ಲಿ…?<br />
ಆದುದರಿಂದಲೇ ತಾಟಕಿ-ಸುಬಾಹು ಮೊದಲಾದವರ ವಧೆ…!</p>
<p>ತನ್ನ ಮದುವೆಗೆ ಮೊದಲು ಮುರಿದ ಮದುವೆಯೊಂದನ್ನು ಕೂಡಿಸುವ ಆದರ್ಶ ಅಹಲ್ಯೋದ್ಧಾರದಲ್ಲಿ…!!</p>
<p>ರಾಮ<strong>ನಾರಾಯಣ</strong>ನು ಸೀತಾ<strong>ಲಕ್ಷ್ಮಿ</strong>ಯನ್ನು ಪಡೆಯಲು ಮಾಧ್ಯಮವೇ<strong> ಶಿವ</strong>ನ ಧನುಸ್ಸು…..!! <script type="text/javascript">// <![CDATA[
D(["mb","\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸಂಹಾರ ಸಾಧನವನ್ನು ಮುರಿಯುವುದೇ ವಿವಾಹವೆಮ್ಬ ಸೃಷ್ಟಿಕಾರ್ಯದ ಸಿದ್ಧತೆ ….\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eರಾಮ-ಸೀತೆಯರ ವಿವಾಹವಾಗುತ್ತಿದ್ದಂತೆಯೇ ರಾಮ-ರಾಮರ ವಿವಾದ ಪ್ರಾರಂಭ….!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಸೂರ್ಯೋದಯವಾಗುತ್ತಿದ್ದಂತೆಯೇ ಚಂದ್ರ ತೇಜೋವಿಹೀನನಾಗುವಂತೆ ಶ್ರೀರಾಮನ ಆವಿರ್ಭಾವದ ಎದುರು ಕಳೆಯನ್ನು ಕಳೆದುಕೊಂಡನು ಪರಶುರಾಮ….!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eವೈಷ್ಣವ ಶಕ್ತಿಯ ಪ್ರತೀಕವಾದ ವೈಷ್ಣವ ಧನುಸ್ಸು ಶೋಭಿಸಿತು ಲೋಕೈಕ ವೀರನ ಕರಕಮಲಗಳಲ್ಲಿ….!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೩.ಅರಸಿ ಬಂತು ಅರಸೊತ್ತಿಗೆ…!\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eದಶರಥನ ಮಕ್ಕಳಲ್ಲಿ ಆತ ಜ್ಯೇಷ್ಟನೂ ಅಹುದು..ಶ್ರೇಷ್ಟನೂ ಅಹುದು…\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಆತ ದೊರೆಯಾಗಲೇಬೇಕೆಂಬುದು ಹೆತ್ತವರ,ಹತ್ತಿರದವರ,ಮಾತ್ರವಲ್ಲ….\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eನಾಡಿನ ಸರ್ವಪ್ರಜೆಗಳ ಹರಕೆ….ಹಾರೈಕೆ…!!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e",1]
);
// ]]&gt;</script></p>
<p>ಸಂಹಾರ ಸಾಧನವನ್ನು ಮುರಿಯುವುದೇ ವಿವಾಹವೆಂಬ ಸೃಷ್ಟಿಕಾರ್ಯದ ಸಿದ್ಧತೆ ….<br />
ರಾಮ-ಸೀತೆಯರ ವಿವಾಹವಾಗುತ್ತಿದ್ದಂತೆಯೇ ರಾಮ-ರಾಮರ ವಿವಾದ ಪ್ರಾರಂಭ….!!<br />
ಸೂರ್ಯೋದಯವಾಗುತ್ತಿದ್ದಂತೆಯೇ ಚಂದ್ರ ತೇಜೋವಿಹೀನನಾಗುವಂತೆ ಶ್ರೀರಾಮನ ಆವಿರ್ಭಾವದ ಎದುರು ಕಳೆಯನ್ನು ಕಳೆದುಕೊಂಡನು ಪರಶುರಾಮ….!!<br />
ವೈಷ್ಣವ ಶಕ್ತಿಯ ಪ್ರತೀಕವಾದ ವೈಷ್ಣವ ಧನುಸ್ಸು ಶೋಭಿಸಿತು ಲೋಕೈಕವೀರನ ಕರಕಮಲಗಳಲ್ಲಿ….!!</p>
<p><strong>* ಅರಸಿ ಬಂತು ಅರಸೊತ್ತಿಗೆ…!</strong></p>
<p>ದಶರಥನ ಮಕ್ಕಳಲ್ಲಿ ಆತ ಜ್ಯೇಷ್ಠನೂ ಅಹುದು..ಶ್ರೇಷ್ಠನೂ ಅಹುದು…<br />
ಆತ ದೊರೆಯಾಗಲೇಬೇಕೆಂಬುದು ಹೆತ್ತವರ,ಹತ್ತಿರದವರ,ಮಾತ್ರವಲ್ಲ….<br />
ನಾಡಿನ ಸರ್ವಪ್ರಜೆಗಳ ಹರಕೆ….ಹಾರೈಕೆ…!!!<br />
<script type="text/javascript">// <![CDATA[
D(["mb","ಯುಗಕ್ಕೊಮ್ಮೆಯೂ ಸಿಗಲಾರದ ಇಂಥ ಅಸದೃಶ ವ್ಯಕ್ತಿತ್ವವೊಂದನ್ನು ರಾಜ್ಯದ ಮುಕುಟದಿಂದ ಸಿಂಗರಿಸಹೊರಟ ದಶರಥನನ್ನು ಲೋಕವೇ ಅಭಿನಂದಿಸಿತು…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೪.ಕಾಮಿನಿಯ ಕಾರಸ್ಥಾನ….!\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಹಂಡೆಹಾಲು ಹಾಳು ಮಾಡಲು ಹಂಡೆ ಹುಳಿ ಬೇಕೆ..?ಹುಂಡುಹುಳಿ ಸಾಲದೇ…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಮಂಥರೆಯ ದುರ್ಮಂತ್ರದಿಂದ ದೂಷಿತಳಾದ ಕೈಕೇಯಿ ,ತನ್ನ ಸುಖದ ಭ್ರಮೆಗಾಗಿ ಸಾಕೇತದ ಸಕಲರ ನಿಜಸುಖವನ್ನೇ ನಾಶ ಮಾಡಿದಳು…!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಹಿಂದೆಂದೋ ಕೈಕೇಯಿಗೆ ದಶರಥ ಕೊಟ್ಟ ವರ ಇಂದು ಆತನಿಗೇ ಶಾಪವಾಗಿ ಪರಿಣಮಿಸಿತು..!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಪರಿಣಾಮ..? ಆನಂದಾಶ್ರುಗಳೊಡನೆ ರಾಮನ ರಾಜ್ಯಾಭಿಷೇಕವನ್ನು ನೋಡಬಯಸಿದ ಪ್ರಜೆಗಳು…\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅಯೋಧ್ಯೆಯ ಆನಂದವೇ ಅಡವಿಗೆ ನಿರ್ಗಮಿಸುವುದನ್ನು ಕಣ್ಣೀರಿನ ಕಣ್ಣುಗಳಲ್ಲಿ ನೋಡಬೇಕಾಯಿತು…!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಎಂದೆಂದೂ ಬಯಸದ ಭರತನಿಗೆ ದೊರೆತನ ನಿಶ್ಚಯವಾಯಿತು…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e",1]
);
// ]]&gt;</script>ಯುಗಕ್ಕೊಮ್ಮೆಯೂ ಸಿಗಲಾರದ ಇಂಥ ಅಸದೃಶ ವ್ಯಕ್ತಿತ್ವವೊಂದನ್ನು ರಾಜ್ಯದ ಮುಕುಟದಿಂದ ಸಿಂಗರಿಸಹೊರಟ ದಶರಥನನ್ನು ಲೋಕವೇ ಅಭಿನಂದಿಸಿತು…!</p>
<p><strong>* ಕಾಮಿನಿಯ ಕಾರಸ್ಥಾನ….!</strong></p>
<p><strong>ಹಂಡೆಹಾಲು ಹಾಳು ಮಾಡಲು ಹಂಡೆ ಹುಳಿ ಬೇಕೆ..?ಹುಂಡುಹುಳಿ ಸಾಲದೇ…!!</strong></p>
<p>ಮಂಥರೆಯ ದುರ್ಮಂತ್ರದಿಂದ ದೂಷಿತಳಾದ ಕೈಕೇಯಿ ,ತನ್ನ ಸುಖದ ಭ್ರಮೆಗಾಗಿ ಸಾಕೇತದ ಸಕಲರ ನಿಜಸುಖವನ್ನೇ ನಾಶ ಮಾಡಿದಳು…!</p>
<p>ಹಿಂದೆಂದೋ ಕೈಕೇಯಿಗೆ ದಶರಥ ಕೊಟ್ಟ ವರ ಇಂದು ಆತನಿಗೇ ಶಾಪವಾಗಿ ಪರಿಣಮಿಸಿತು..!!<br />
ಪರಿಣಾಮ..? ಆನಂದಾಶ್ರುಗಳೊಡನೆ ರಾಮನ ರಾಜ್ಯಾಭಿಷೇಕವನ್ನು ನೋಡಬಯಸಿದ ಪ್ರಜೆಗಳು…<br />
ಅಯೋಧ್ಯೆಯ ಆನಂದವೇ ಅಡವಿಗೆ ನಿರ್ಗಮಿಸುವುದನ್ನು ಕಣ್ಣೀರಿನ ಕಣ್ಣುಗಳಲ್ಲಿ ನೋಡಬೇಕಾಯಿತು…!!<br />
ಎಂದೆಂದೂ ಬಯಸದ ಭರತನಿಗೆ ದೊರೆತನ ನಿಶ್ಚಯವಾಯಿತು…!!</p>
<p><!-- D(["mb","\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೫.ದೊರೆಯ ದುರಂತ….\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಅರಮನೆಯ ಅಂಗಳದಲ್ಲಿ ತಾಯ್ತಂದೆಯರನ್ನು,\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eತಮಸಿಯ ತೀರದಲ್ಲಿ ಪ್ರೀತಿಯ ಪ್ರಜೆಗಳನ್ನು,\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಗಂಗೆಯ ಗಡಿಯಲ್ಲಿ ಸೂತ ದುಮಂತ್ರನನ್ನು ಬೀಳ್ಕೊಟ್ಟು,\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಪ್ರಿಯಸಖ ಗುಹನಲ್ಲಿ ಮತ್ತು ಪೂಜ್ಯಪಾದ ಭರದ್ವಾಜರಲ್ಲಿ ಒಂದೊಂದು ರಾತ್ರಿ ತಂಗಿ\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅತ್ತ ರಾಮ ಚಿತ್ರಕೂಟದೆಡೆಗೆ ಮುನ್ನಡೆದರೆ…\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಇತ್ತ ಅಯೋಧ್ಯೆಗೆ ಅಯೋಧ್ಯೆಯೇ ರಾಮನಿಗಾಗಿ ರೋಧಿಸಿತು..\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eದಶರಥನ ಪುತ್ರಪ್ರೇಮದ ಪರಾಕಾಷ್ಟೆ ಪುತ್ರಶೋಕದಲ್ಲಿ ಪರ್ಯವಸಾನವಾಯಿತು…\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಕೈಕೇಯಿಯ ಕೊರಳಲ್ಲಿ ಆತ ಬಂಧಿಸಿದ್ಧ ಮಂಗಲಸೂತ್ರ ..ಮಸಣಸೂತ್ರವಾಗಿ …\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e",1] ); // --><strong>* ದೊರೆಯ ದುರಂತ….</strong></p>
<p>ಅರಮನೆಯ ಅಂಗಳದಲ್ಲಿ ತಾಯ್ತಂದೆಯರನ್ನು,<br />
ತಮಸಿಯ ತೀರದಲ್ಲಿ ಪ್ರೀತಿಯ ಪ್ರಜೆಗಳನ್ನು,<br />
ಗಂಗೆಯ ಗಡಿಯಲ್ಲಿ ಸೂತ ಸುಮಂತ್ರನನ್ನು ಬೀಳ್ಕೊಟ್ಟು,<br />
ಪ್ರಿಯಸಖ ಗುಹನಲ್ಲಿ ಮತ್ತು ಪೂಜ್ಯಪಾದ ಭರದ್ವಾಜರಲ್ಲಿ ಒಂದೊಂದು ರಾತ್ರಿ ತಂಗಿ<br />
ಅತ್ತ ರಾಮ ಚಿತ್ರಕೂಟದೆಡೆಗೆ ಮುನ್ನಡೆದರೆ…<br />
ಇತ್ತ ಅಯೋಧ್ಯೆಗೆ ಅಯೋಧ್ಯೆಯೇ ರಾಮನಿಗಾಗಿ ರೋಧಿಸಿತು..</p>
<p>ದಶರಥನ ಪುತ್ರಪ್ರೇಮದ ಪರಾಕಾಷ್ಟೆ ಪುತ್ರಶೋಕದಲ್ಲಿ ಪರ್ಯವಸಾನವಾಯಿತು…</p>
<p>ಕೈಕೇಯಿಯ ಕೊರಳಲ್ಲಿ ಆತ ಬಂಧಿಸಿದ್ಧ ಮಂಗಲಸೂತ್ರ ..ಮಸಣಸೂತ್ರವಾಗಿ …<br />
<script type="text/javascript">// <![CDATA[
D(["mb","ಮರಣಕಾರಕವಾಗಿ ಪರ್ಯವಸಾನವಾಯಿತು….\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಕೈಕೇಯಿಯ ಮೋಹಪಾಶ ಸತ್ಯಪಾಶವಾಗಿ, ಕೊನೆಗೆ ಮೃತ್ಯುಪಾಶವಾಗಿ ಪರ್ಯವಸಾನಗೊಂಡಿತು….!!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಅಯೋಧ್ಯೆ ಅರಾಜಕವಾಯಿತು…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೬.ರಾಜ್ಯಕ್ಕಿಂತ ರಾಮನೇ ಮಿಗಿಲು….!\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಕೇಕಯದ ರಾಜಗೃಹದಿಂದ ರಾಜನಿಲ್ಲದ ,ರಾಮನಿಲ್ಲದ ಅಯೋಧ್ಯೆಗೆ ಮರಳಿದ ಭರತನಿಗೆ..\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅಲ್ಲಿ ಕಂಡದ್ದು “ಭರತ”ವಲ್ಲ…”ಇಳಿತ” ಮಾತ್ರ…\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಆತನ ಪ್ರೇಮಚಕ್ಷುವಿಗೆ ರಾಜ್ಯದ ಪ್ರಭುತ್ವಕ್ಕಿಂತ ರಾಮನ ಪಾದವೇ ಹಿರಿದಾಗಿ ತೋರಿತು…!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಕೈಕೇಯಿಯ ಕಪಟದ ಫಲವಾಗಿ ಬಂದ ಕಿರೀಟವನ್ನು ತಿರಸ್ಕರಿಸಿ ,ಪುರಜನರೊಡಗೂಡಿ ಅಡವಿಯೆಡೆ-ಅಣ್ಣನ ಪಾದಗಳೆಡೆಗೆ ಧಾವಿಸಿದನಾತ…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e",1]
);
// ]]&gt;</script>ಮರಣಕಾರಣವಾಗಿ ಪರ್ಯವಸಾನವಾಯಿತು….</p>
<p>ಕೈಕೇಯಿಯ ಮೋಹಪಾಶ ಸತ್ಯಪಾಶವಾಗಿ, ಕೊನೆಗೆ ಮೃತ್ಯುಪಾಶವಾಗಿ ಪರ್ಯವಸಾನಗೊಂಡಿತು….!!!</p>
<p>ಅಯೋಧ್ಯೆ ಅರಾಜಕವಾಯಿತು…!!</p>
<p><strong>* ರಾಜ್ಯಕ್ಕಿಂತ ರಾಮನೇ ಮಿಗಿಲು….!</strong></p>
<p>ಕೇಕಯದ ರಾಜಗೃಹದಿಂದ ರಾಜನಿಲ್ಲದ ,ರಾಮನಿಲ್ಲದ ಅಯೋಧ್ಯೆಗೆ ಮರಳಿದ ಭರತನಿಗೆ..<br />
ಅಲ್ಲಿ ಕಂಡದ್ದು <strong>“ಭರತ”</strong>ವಲ್ಲ…<strong>”ಇಳಿತ”</strong> ಮಾತ್ರ…</p>
<p>ಆತನ ಪ್ರೇಮಚಕ್ಷುವಿಗೆ ರಾಜ್ಯದ ಪ್ರಭುತ್ವಕ್ಕಿಂತ ರಾಮನ ಪಾದವೇ ಹಿರಿದಾಗಿ ತೋರಿತು…!<br />
ಕೈಕೇಯಿಯ ಕಪಟದ ಫಲವಾಗಿ ಬಂದ ಕಿರೀಟವನ್ನು ತಿರಸ್ಕರಿಸಿ ,ಪುರಜನರೊಡಗೂಡಿ ಅಡವಿಯೆಡೆ-ಅಣ್ಣನ ಪಾದಗಳೆಡೆ ಧಾವಿಸಿದನಾತ…!!</p>
<p><!-- D(["mb","\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೭.ರಾಮನುಂ ಭರತನುಂ ತಬ್ಬಿಕೊಂಡತ್ತಂದು….\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಚಿತ್ರಕೂಟ-ಮಂದಾಕಿನಿಯರ ಸಾಕ್ಷಿಯಲ್ಲಿ ಅಯೋಧ್ಯೆಯ ಅಮರಪ್ರೇಮಿ ಸೋದರರು ಸಂಧಿಸಿದರು..!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಅವರ ತ್ಯಾಗದ ಮುಂದೆ ಚಿತ್ರಕೂಟವೇ ಕುಬ್ಜವೆನಿಸಿತು…!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅವರ ಪ್ರೇಮಾಶ್ರುವಿನ ಮುಂದೆ ಮಂದಾಕಿನಿಯೂ ಕಿರಿದೆನಿಸಿತು…!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eರಾಜ್ಯ ನಿನಗಿರಲಿ-ನಿನಗಿರಲಿ ಎಂಬ ಪ್ರೀತಿ ಸಂವಾದ ಸಮರದಲ್ಲಿ ಸಹೋದರರಿಬ್ಬರೂ ಗೆದ್ದರು..!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಪಿತೃವಾಕ್ಯ ಪರಿಪಾಲನೆಗಾಗಿ ಕಾಡಿನಲ್ಲಿಯೇ ಉಳಿದ, ಪ್ರೇಮಭರಿತವಾದ ರಾಮನ ಮನಸ್ಸು ಮಾತ್ರ ಭರತನನ್ನೇ ಹಿಂಬಾಲಿಸಿಕೊಂಡು ಹೋಯಿತು …..\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅಣ್ಣನ ಪಾದುಕೆಯನ್ನು ಶಿರದಲ್ಲಿ ಹೊತ್ತು ಭರತ ನಂದಿಗ್ರಾಮಕ್ಕೆ ಸಾಗಿದರೂ ಆರ್ದ್ರವಾದ ಆತನ ಅಂತಃಕರಣ ಮಾತ್ರ…\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅಣ್ಣನ ಚರಣವನ್ನು ಬಿಡಲಾರದೆ ಕಾಡಿನಲ್ಲಿಯೇ ಉಳಿದುಕೊಂಡಿತು…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e",1] ); // --><strong>* ರಾಮನುಂ ಭರತನುಂ ತಬ್ಬಿಕೊಂಡತ್ತಂದು….</strong></p>
<p><strong> </strong></p>
<p>ಚಿತ್ರಕೂಟ-ಮಂದಾಕಿನಿಯರ ಸಾಕ್ಷಿಯಲ್ಲಿ ಅಯೋಧ್ಯೆಯ ಅಮರಪ್ರೇಮಿ ಸೋದರರು ಸಂಧಿಸಿದರು..!</p>
<p>ಅವರ ತ್ಯಾಗದ ಮುಂದೆ ಚಿತ್ರಕೂಟವೇ ಕುಬ್ಜವೆನಿಸಿತು…!<br />
ಅವರ ಪ್ರೇಮಾಶ್ರುವಿನ ಮುಂದೆ ಮಂದಾಕಿನಿಯೂ ಕಿರಿದೆನಿಸಿತು…!!<br />
ರಾಜ್ಯ ನಿನಗಿರಲಿ-ನಿನಗಿರಲಿ ಎಂಬ ಪ್ರೀತಿ ಸಂವಾದ ಸಮರದಲ್ಲಿ ಸಹೋದರರಿಬ್ಬರೂ ಗೆದ್ದರು..!!</p>
<p>ಅಣ್ಣನ ಪಾದುಕೆಯನ್ನು ಶಿರದಲ್ಲಿ ಹೊತ್ತು ಭರತ ನಂದಿಗ್ರಾಮಕ್ಕೆ ಸಾಗಿದರೂ ಆರ್ದ್ರವಾದ ಆತನ ಅಂತಃಕರಣ ಮಾತ್ರ…</p>
<p>ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿನಲ್ಲಿಯೇ ಉಳಿದ, ಪ್ರೇಮಭರಿತವಾದ ರಾಮನ ಮನಸ್ಸು ಮಾತ್ರ ಭರತನನ್ನೇ ಹಿಂಬಾಲಿಸಿಕೊಂಡು ಹೋಯಿತು …..<br />
ಅಣ್ಣನ ಚರಣವನ್ನು ಬಿಡಲಾರದೆ ಕಾಡಿನಲ್ಲಿಯೇ ಉಳಿದುಕೊಂಡಿತು…!!</p>
<p><!-- D(["mb","\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೮.ಪಾದುಕೆಯ ಪರಮಾಧಿಕಾರ..\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಪಾದುಕೆಯೊಂದು ರಾಜ್ಯವಾಳಿದ ಇತಿಹಾಸ ಜಗತ್ತಿನ ಇತಿಹಾಸದಲ್ಲಿ ಮತ್ತೆಲ್ಲಿಯೂ ಸಿಗಲಾರದು…!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಆದರೆ ಪ್ರೇಮದಲ್ಲಿ ಅಸಂಭವವಾದುದು ಯಾವುದೂ ಇಲ್ಲ..!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸತ್ಯಕ್ಕಾಗಿ ಸಿಂಹಾಸನವನ್ನೇ ತೊರೆದ ಧರ್ಮಮೂರ್ತಿಯ ಚರಣಭೂಷಣವು ಭರತನ ಶಿರೋಭೂಷಣವಾಯಿತು…!!\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಸೂರ್ಯವಂಶದ ಸಮ್ರಾಟರು ಮಂಡಿಸುವ ಸಿಂಹಾಸನದಲ್ಲಿ ಆ ತ್ಯಾಗಮೂರ್ತಿಯ ಪಾದುಕೆಗಳಿಗೆ ಪಟ್ಟಾಭಿಷೇಕವಾಯಿತು..!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eದೊರೆತನದ ಸಕಲ ಧುರವನ್ನು ಹೊತ್ತರೂ ..ದೊರೆಯಾಗಲಿಲ್ಲ ಭರತ…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸಿಂಹಾಸನದಲ್ಲಿ ವನವಾಸಿಯ ಪಾದುಕೆಗಳು…\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಅವುಗಳ ಪರವಾಗಿ ರಾಜ್ಯಭಾರ ಮಾಡುವವನು ಮುನಿ ವೇಷಧಾರಿಯಾಗಿ ಮುನಿಜೀವನ ನಡೆಸುವ ರಾಜಕುಮಾರ…!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e",1] ); // --><strong>* ಪಾದುಕೆಯ ಪರಮಾಧಿಕಾರ..</strong></p>
<p>ಪಾದುಕೆಯೊಂದು ರಾಜ್ಯವಾಳಿದ ಇತಿಹಾಸ ಜಗತ್ತಿನ ಇತಿಹಾಸದಲ್ಲಿ ಮತ್ತೆಲ್ಲಿಯೂ ಸಿಗಲಾರದು…!!<br />
ಆದರೆ ಪ್ರೇಮದಲ್ಲಿ ಅಸಂಭವವಾದುದು ಯಾವುದೂ ಇಲ್ಲ..!</p>
<p>ಸತ್ಯಕ್ಕಾಗಿ ಸಿಂಹಾಸನವನ್ನೇ ತೊರೆದ ಧರ್ಮಮೂರ್ತಿಯ ಚರಣಭೂಷಣವು ಭರತನ ಶಿರೋಭೂಷಣವಾಯಿತು…!!<br />
ಸೂರ್ಯವಂಶದ ಸಮ್ರಾಟರು ಮಂಡಿಸುವ ಸಿಂಹಾಸನದಲ್ಲಿ  ತ್ಯಾಗಮೂರ್ತಿಯ ಪಾದುಕೆಗಳಿಗೆ ಪಟ್ಟಾಭಿಷೇಕವಾಯಿತು..!!</p>
<p>ದೊರೆತನದ ಸಕಲ ಧುರವನ್ನು ಹೊತ್ತರೂ ..ದೊರೆಯಾಗಲಿಲ್ಲ ಭರತ…!!</p>
<p>ಸಿಂಹಾಸನದಲ್ಲಿ ವನವಾಸಿಯ ಪಾದುಕೆಗಳು…<br />
ಅವುಗಳ ಪರವಾಗಿ ರಾಜ್ಯಭಾರ ಮಾಡುವವನು ಮುನಿ ವೇಷಧಾರಿಯಾಗಿ ಮುನಿಜೀವನ ನಡೆಸುವ ರಾಜಕುಮಾರ…!</p>
<p><script type="text/javascript">// <![CDATA[
D(["mb","ಸಕಲ ಸಂಪತ್ತುಗಳೂ ಪಾದುಕೆಗಳಿಗೆ ಅರ್ಪಣೆ….\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸಕಲ ಕಾರ್ಯಗಳಿಗೂ ಬೇಕು ಪಾದುಕೆಗಳ ಅಪ್ಪಣೆ…!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸಾಟಿಯುಂಟೇ ಭರತನ ಭ್ರಾತೃಪ್ರೇಮಕ್ಕೆ…!!?\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e೯.ಅಯೋಧ್ಯೆಗೆ ನಷ್ಟ…ದಂಡಕೆಗೆ ಲಾಭ…!!\u003c/strong\u003e\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಸೂರ್ಯನಿಗೆಲ್ಲಿಯಾದರೂ ಸಂಪೂರ್ಣವಾದ ಅಸ್ತವುಂಟೆ..?\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಭೂಗೋಳದ ಒಂದು ಪಾರ್ಶ್ವಕ್ಕೆ ಆತ ಮರೆಯಾದರೆ,ಇನ್ನೊಂದು ಪಾರ್ಶ್ವದಲ್ಲಿ ಉದಯವಾಗಲೇಬೇಕಲ್ಲವೆ…?\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಹಾಗೆಯೇ…ಅಯೋಧ್ಯೆಯಲ್ಲಿ ಮರೆಯಾದ ರಾಮನೆಂಬ ತೇಜೋರಾಶಿ ದಂದಕೆಯಲ್ಲಿ ಪ್ರಕಟವಾಗಿ ಸಂಚರಿಸತೊಡಗಿತು …!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003eಮನೆಬಾಗಿಲಿಗೇ ಭಾಗೀರಥಿ ಬಂದಂತೆ ತ್ರಿಭುವನವಾಸಿಯೇ ವನವಾಸಿಯಾಗಿ ಬಳಿಯಲ್ಲಿಯೇ ಸುಳಿದಾಡಿದರೆ…!!?\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:justify\"\u003e",1]
);
// ]]&gt;</script>ಸಕಲ ಸಂಪತ್ತುಗಳೂ ಪಾದುಕೆಗಳಿಗೆ ಅರ್ಪಣೆ….</p>
<p>ಸಕಲ ಕಾರ್ಯಗಳಿಗೂ ಬೇಕು ಪಾದುಕೆಗಳ ಅಪ್ಪಣೆ…!!</p>
<p>ಸಾಟಿಯುಂಟೇ ಭರತನ ಭ್ರಾತೃಪ್ರೇಮಕ್ಕೆ…!!?</p>
<p><strong>* ಅಯೋಧ್ಯೆ</strong><strong>ಯ ನಷ್ಟ…ದಂಡಕೆ</strong><strong>ಯ ಲಾಭ…!!</strong></p>
<p>ಸೂರ್ಯನಿಗೆಲ್ಲಿಯಾದರೂ ಸಂಪೂರ್ಣವಾದ ಅಸ್ತವುಂಟೆ..?<br />
ಭೂಗೋಳದ ಒಂದು ಪಾರ್ಶ್ವಕ್ಕೆ ಆತ ಮರೆಯಾದರೆ,ಇನ್ನೊಂದು ಪಾರ್ಶ್ವದಲ್ಲಿ ಉದಯವಾಗಲೇಬೇಕಲ್ಲವೆ…?<br />
ಹಾಗೆಯೇ…ಅಯೋಧ್ಯೆಯಲ್ಲಿ ಮರೆಯಾದ ರಾಮನೆಂಬ ತೇಜೋರಾಶಿ ದಂಡಕೆಯಲ್ಲಿ ಪ್ರಕಟವಾಗಿ ಸಂಚರಿಸತೊಡಗಿತು …!!</p>
<p>ಮನೆಬಾಗಿಲಿಗೇ ಭಾಗೀರಥಿ ಬಂದಂತೆ&#8230; ತ್ರಿಭುವನವಾಸಿಯೇ ವನವಾಸಿಯಾಗಿ ಬಳಿಯಲ್ಲಿಯೇ ಸುಳಿದಾಡಿದರೆ…!!?</p>
<p><script type="text/javascript">// <![CDATA[
D(["mb","ದಕ್ಢಿಣದ ಕಾನನಗಳ ಗಿರಿ-ಝರಿಗಳು,\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eತರು-ಲತೆಗಳು,\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಮೃಗ-ಪಕ್ಷಿಗಳು,\u003cbr style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003eಮುನಿ-ಜನರನ್ನು ಆವರಿಸಿಕೊಂಡಿತು ರಾಮನೆಂಬ ಆನಂದ….!!!\u003c/p\u003e\u003cp style\u003d\"margin-top:5px;margin-right:5px;margin-bottom:5px;margin-left:5px;padding-top:5px;padding-right:0px;padding-bottom:5px;padding-left:0px;font-family:Arial, Helvetica, sans-serif;font-size:10pt;text-align:center\"\u003e\u003cstrong style\u003d\"margin-top:0px;margin-right:0px;margin-bottom:0px;margin-left:0px;padding-top:0px;padding-right:0px;padding-bottom:0px;padding-left:0px\"\u003e||ಹರೇರಾಮ||\u003c/strong\u003e\u003c/p\u003e\u003cdiv style\u003d\"margin-top:16px;margin-right:0px;margin-bottom:16px;margin-left:0px;padding-top:0px;padding-right:0px;padding-bottom:0px;padding-left:0px\"\u003e\u003c/div\u003e\u003c/span\u003e\u003cdiv\u003e\n\u003cspan style\u003d\"border-collapse:separate;color:rgb(0, 0, 0);font-family:Arial;font-size:medium;font-style:normal;font-variant:normal;font-weight:normal;letter-spacing:normal;line-height:normal;text-align:auto;text-indent:0px;text-transform:none;white-space:normal;word-spacing:0px\"\u003e\u003cspan style\u003d\"border-collapse:separate;color:rgb(0, 0, 0);font-family:Arial;font-size:medium;font-style:normal;font-variant:normal;font-weight:normal;letter-spacing:normal;line-height:normal;text-indent:0px;text-transform:none;white-space:normal;word-spacing:0px\"\u003e\u003cdiv style\u003d\"word-wrap:break-word\"\u003e\u003cdiv\u003e\u003cbr\u003e\u003cbr\u003e\u003c/div\u003e\u003cdiv\u003eHarerama...\u003c/div\u003e\u003cdiv\u003e\u003cbr\u003e\u003c/div\u003e\u003c/div\u003e\u003c/span\u003e\u003cbr\u003e\u003c/span\u003e\u003cbr\u003e\n\u003c/div\u003e\n\u003cbr\u003e\u003c/div\u003e",0]
);
// ]]&gt;</script>ದಕ್ಢಿಣದ ಕಾನನಗಳ ಗಿರಿ-ಝರಿಗಳು,ತರು-ಲತೆಗಳು,ಮೃಗ-ಪಕ್ಷಿಗಳು, ಮುನಿ-ಜನರನ್ನು ಆವರಿಸಿಕೊಂಡಿತು ರಾಮನೆಂಬ ಆನಂದ….!!!</p>
<p style="text-align: center;"><strong> ||ಹರೇರಾಮ||</strong></p>
]]></content:encoded>
			<wfw:commentRss>http://hareraama.in/blog/sindhu-bindu/feed/</wfw:commentRss>
		<slash:comments>9</slash:comments>
		</item>
		<item>
		<title>ಹೇ ರಾಮ..!   ನೀ ಸರ್ವೋತ್ತಮ..!!</title>
		<link>http://hareraama.in/blog/hey-raama-ni-sarvoottama/</link>
		<comments>http://hareraama.in/blog/hey-raama-ni-sarvoottama/#comments</comments>
		<pubDate>Thu, 03 Jun 2010 06:04:24 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4468</guid>
		<description><![CDATA[ಕುಟುಂಬಿಯೊಬ್ಬ ತನ್ನ ಕುಟುಂಬವನ್ನು ಪಾಲಿಸುತ್ತಾನೆ..

ಈತನೋ 'ವಿಶ್ವಕುಟುಂಬಿ'…!!

ತಾನು..

ತನ್ನವರು...

ತನ್ನೂರು...

ತನ್ನ ಜಾತಿ...

ತನ್ನದೇಶ...

ಸಕಲ ಮಾನವಕುಲ….

ಈ ಸೀಮೆಗಳನ್ನೆಲ್ಲ ದಾಟಿ ಸಕಲ ಜೀವಿಗಳ ಸಂರಕ್ಷಕನಾದವನು..

ಇಲ್ಲೊಂದು ಶಂಕೆ...

ಸಕಲ ಜೀವ ಸಂರಕ್ಷಕನೆಂದ ಮೇಲೆ ದುಷ್ಟರಿಗೂ ರಕ್ಷಕನೆಂದಂತಾಗಲಿಲ್ಲವೇ..?

ಖಂಡಿತವಾಗಿಯೂ ಹೌದು..!!

ದುಷ್ಟತನವೆಂಬುದೊಂದು ಖಾಯಿಲೆ…!

ಶಿಕ್ಷೆ ಯೆಂಬ ಚಿಕಿತ್ಸೆಯನ್ನು ಕೊಟ್ಟು ಆ ಖಾಯಿಲೆಯನ್ನು ಗುಣಪಡಿಸಬೇಕಾಗುತ್ತದೆ..

ಗುಣವಾಗದ ದೋಷವಾಗಿದ್ದಾಗ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ..

ಮಿತಿಮೀರಿದ ದೋಷಗಳಿಂದ ಜನ್ಮವೇ ಕಳಂಕಿತವಾದಾಗ ಶಸ್ತ್ರಚಿಕಿತ್ಸೆಯಿಂದ ದೇಹವನ್ನೇ ಕಳೆದು ಜೀವಕ್ಕೆ ಒಳಿತು ಮಾಡುವವನು ಶ್ರೀರಾಮ..!!

ದೇಹ ನಶ್ವರ ಜೀವ ಶಾಶ್ವತ..!]]></description>
			<content:encoded><![CDATA[<p style="text-align: center;"><strong>॥</strong><strong> </strong><strong>ಹರೇರಾಮ</strong><strong> </strong><strong>॥</strong></p>
<p><strong><br />
</strong></p>
<p><strong> </strong><span style="font-family: 'Devanagari MT';"> </span></p>
<div>
<p><strong>ರಕ್ಷಿತಾ</strong><strong> </strong><strong>ಜೀವಲೋಕಸ್ಯ</strong><strong> :-</strong></p>
<p>ಕುಟುಂಬಿಯೊಬ್ಬ ತನ್ನ ಕುಟುಂಬವನ್ನು ಪಾಲಿಸುತ್ತಾನೆ..</p>
<p>ಈತನೋ <strong>&#8216;ವಿಶ್ವಕುಟುಂಬಿ&#8217;</strong>…!!</p>
<p>ತಾನು..</p>
<p>ತನ್ನವರು&#8230;</p>
<p>ತನ್ನೂರು&#8230;</p>
<p>ತನ್ನ ಜಾತಿ&#8230;</p>
<p>ತನ್ನದೇಶ&#8230;</p>
<p>ಸಕಲ ಮಾನವಕುಲ….</p>
<p>ಈ ಸೀಮೆಗಳನ್ನೆಲ್ಲ ದಾಟಿ ಸಕಲ ಜೀವಿಗಳ ಸಂರಕ್ಷಕನಾದವನು..</p>
<p>ಇಲ್ಲೊಂದು ಶಂಕೆ&#8230;</p>
<p>ಸಕಲ ಜೀವ ಸಂರಕ್ಷಕನೆಂದ ಮೇಲೆ ದುಷ್ಟರಿಗೂ ರಕ್ಷಕನೆಂದಂತಾಗಲಿಲ್ಲವೇ..?</p>
<p>ಖಂಡಿತವಾಗಿಯೂ ಹೌದು..!!</p>
<p>ದುಷ್ಟತನವೆಂಬುದೊಂದು ಖಾಯಿಲೆ…!</p>
<p>ಶಿಕ್ಷೆ ಯೆಂಬ ಚಿಕಿತ್ಸೆಯನ್ನು ಕೊಟ್ಟು ಆ  ಖಾಯಿಲೆಯನ್ನು ಗುಣಪಡಿಸಬೇಕಾಗುತ್ತದೆ..</p>
<p>ಗುಣವಾಗದ ದೋಷವಾಗಿದ್ದಾಗ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ..</p>
<p>ಮಿತಿಮೀರಿದ ದೋಷಗಳಿಂದ ಜನ್ಮವೇ ಕಳಂಕಿತವಾದಾಗ ಶಸ್ತ್ರಚಿಕಿತ್ಸೆಯಿಂದ ದೇಹವನ್ನೇ ಕಳೆದು ಜೀವಕ್ಕೆ ಒಳಿತು ಮಾಡಬೇಕಾಗುತ್ತದೆ..!!<br />
ಆ ಶಿಕ್ಷೆ  ಶಿಕ್ಷೆಯಲ್ಲ&#8230;ಅದು <strong>ರಕ್ಷೆ&#8230;</strong></p>
<p>ದೇಹ ನಶ್ವರ ಜೀವ ಶಾಶ್ವತ..!</p>
</div>
<p><strong>ಧರ್ಮಸ್ಯ ಪರಿರಕ್ಷಿತಾ</strong><strong> </strong><strong>ಃ</strong><strong>-</strong></p>
<div>
<div>
<p>ಧರ್ಮವೆಂದರೆ ಧಾರಕ ಶಕ್ತಿ…</p>
<p>ಬದುಕು ನಿಂತಿರುವುದೇ ಧರ್ಮದ ಮೇಲೆ..</p>
<p>ಬ್ರಹ್ಮಾಂಡ ಭವನದ ಮೂಲಾಧಾರ ಶಿಲೆ ಅದು..!!</p>
<p>ಜೀವಿಗಳು ಎಲ್ಲೆಲ್ಲಿ ಸುಖಪಡುವವೋ ಅಲ್ಲಲ್ಲಿ ಹಿನ್ನೆಲೆಯಲ್ಲೆಲ್ಲೋ ಧರ್ಮವಿದ್ದೇ ಇದೆ..!</p>
<p>ಧರ್ಮದ ಉಳಿವಿನಲ್ಲಿಯೇ ಸುಖದ ಉಳಿವು..</p>
<p>ಧರ್ಮದ ಉಳಿವಿನಲ್ಲಿಯೇ ಜೀವಗಳ ಉಳಿವು..</p>
<p>ಧರ್ಮದ ಉಳಿವಿನಲ್ಲಿಯೇ ವಿಶ್ವದ ಉಳಿವು&#8230;</p>
<p>ಧರ್ಮವನ್ನುಳಿಸುವ ಮಹೋನ್ನತ ಉದ್ದೇಶಕ್ಕಾಗಿ ತನ್ನೆಲ್ಲವನ್ನೂ ತೆತ್ತವನವನು..</p>
<p><strong>ರಕ್ಷಿತಾ</strong><strong> </strong><strong>ಸ್ವಸ್ಯ</strong><strong> </strong><strong>ಧರ್ಮಸ್ಯ</strong><strong> </strong><strong>ಃ</strong><strong>-</strong></p>
<p>ಇತರರಿಗೆ ಧರ್ಮವನ್ನು ಹೇಳುವಾಗ ಪಂಡಿತರಲ್ಲದವರಾರು..?</p>
<p>ತಮ್ಮ ಬದುಕಿನಲ್ಲಿಯೇ  ಧರ್ಮವನ್ನು ಅನುಷ್ಠಾನಿಸುವಾಗ ಮಹಾಮುನಿಗಳೂ ಅಜ್ಞಾನಿಗಳಂತಾಗುವುದುಂಟು..</p>
<p>ಆದರೆ ರಾಮ  ಹಾಗಲ್ಲ..</p>
<p>ಆತನು ಯಾವ ಧರ್ಮದ ರಕ್ಷಣೆಯ ಸಂದೇಶವನ್ನು ಜಗತ್ತಿಗೆ ನೀಡಿದನೋ..</p>
<p>ಸಂಕಟಪರಂಪರೆಯ ಮಧ್ಯದಲ್ಲಿಯೂ ತಾನು ಆ ಧರ್ಮವನ್ನು ಬಿಡಲಿಲ್ಲ..</p>
<p><strong>ಸ್ವಜನಸ್ಯ</strong><strong> </strong><strong>ಚ</strong><strong> </strong><strong>ರಕ್ಷಿತಾ</strong><strong> </strong><strong>ಃ</strong><strong>-</strong></p>
<p>ಸಕಲರನ್ನೂ ರಕ್ಷಿಸುವನೆಂದಮೇಲೆ ತನ್ನವರನ್ನು ರಕ್ಷಿಸುವನೆಂದು ಬೇರೆ ಹೇಳಬೇಕೇ..?</p>
<p>ತನ್ನೊಡಲ ಅಂಗಾಂಗಗಳಿಗಿಂತ ಮಿಗಿಲಾದ ಮಮತೆಯಿಂದ ತನ್ನವರನ್ನು ಪೊರೆಯುತ್ತಿದ್ದನವನು..</p>
<p><strong>ವೇದ</strong><strong> </strong><strong>ವೇದಾಂಗ</strong><strong> </strong><strong>ತತ್ವಜ್ಞ</strong><strong> </strong><strong>ಃ</strong><strong>-</strong></p>
<p>ಋಗ್ವೇದ, ಯಜುರ್ವೇದ, ಸಾಮವೇದ , ಅಥರ್ವವೇದ ಎಂಬ ನಾಲ್ಕು ವೇದಗಳು,</p>
<p>ಆಯುರ್ವೇದ,ಧನುರ್ವೇದ, ಗಾಂಧರ್ವವೇದ ಮತ್ತು ಅರ್ಥಶಾಸ್ತ್ರವೆಂಬ ನಾಲ್ಕು ಉಪವೇದಗಳು,</p>
<p>ಶಿಕ್ಷಾ , ವ್ಯಾಕರಣ, ಛಂಧಸ್ಸು, ನಿರುಕ್ತ, ಜ್ಯೌತಿಷ ಮತ್ತು ಕಲ್ಪಗಳೆಂಬ ಆರು ವೇದಾಂಗಗಳು..</p>
<p>ಚಿತ್ರ &#8211; ಶಿಲ್ಪ ಮೊದಲಾದ ಅರವತ್ನಾಲ್ಕು ಕಲೆಗಳು….</p>
<p>ಇವೇ ಮೊದಲಾದ ಆರ್ಷೇಯವಾದ ಸಕಲ ವಿದ್ಯೆಗಳ ಸಾರ-ಮರ್ಮಗಳನ್ನು ಆತನು  ಅರಿತಿದ್ದನು.</p>
<p>.</p>
<p><strong>ಧನುರ್ವೇದೇ</strong><strong> </strong><strong>ಚ</strong><strong> </strong><strong>ನಿಷ್ಠಿತಃ</strong><strong> </strong><strong>ಃ</strong><strong>-</strong></p>
<p>ಎಲ್ಲಾ ವಿದ್ಯೆಗಳನ್ನು ಬಲ್ಲವನಾದರೂ ಕ್ಷಾತ್ರೋಚಿತವಾದ ಧನುರ್ವೇದದಲ್ಲಿ ಆತನಿಗೆ ಅಸಾಧಾರಣವಾದ ಪರಿಣಿತಿ ಇದ್ದಿತು&#8230;</p>
<p>ಓಂಕಾರವೇ ಧನುಸ್ಸು&#8230;</p>
<p>ಜೀವವೇ ಬಾಣ..</p>
<p>ಪರಬ್ರಹ್ಮವೇ ಲಕ್ಷ್ಯ..</p>
<p>ಪ್ರಮಾದವಿಲ್ಲದೆ ಪ್ರಯೋಗಿಸಿದರೆ ಅದು ಕೇವಲ ಬಿಲ್ವಿದ್ಯೆ ಆಗಿರದೇ ಧನುರ್ವೇದವೇ ಆದೀತು..!</p>
<p>ಯುದ್ಧವೂ ಉಪಾಸನೆಯಾದೀತು..!</p>
<p>ಮೃತ್ಯುವೂ ಮೋಕ್ಷವಾದೀತು..!!</p>
<p><strong>ಸರ್ವಶಾಸ್ತ್ರಾರ್ಥ</strong><strong> </strong><strong>ತತ್ವಜ್ಞ</strong><strong> :-</strong></p>
<p>ಈಶ್ವರನ ಶಾಸನಗಳಿಗೆ ಶಾಸ್ತ್ರವೆಂದು ಹೆಸರು ..</p>
</div>
</div>
<p>ಜೀವಿಗಳನ್ನು ಸೃಷ್ಟಿಸಿದಮೇಲೆ ಅವುಗಳು ಚೆನ್ನಾಗಿ ಬದುಕಲೆಂದು,</p>
<div>
<p>ಬದುಕಿನ ಪರಮಗಮ್ಯವನ್ನು ತಲುಪಲೆಂದು.. ಪರಮ ಕಾರುಣಿಕನಾದ ಪ್ರಭುವು ಕೆಲವು ನಿಯಮಗಳನ್ನು ರೂಪಿಸಿ,</p>
<p>ಅವುಗಳನ್ನು ಮನು-ಮುನಿಗಳ ಮುಖದಿಂದ ಹೊರಪಡಿಸಿದನು..</p>
<p>ಅವುಗಳೇ ಶಾಸ್ತ್ರಗಳು..</p>
<p><strong>&#8220;</strong><strong>ಮಾತಾಪಿತೃಸಹಸ್ರೇಭ್ಯೋ</strong><strong> </strong><strong>ವತ್ಸಲತರಂ</strong><strong> </strong><strong>ಶಾಸ್ತ್ರಮ್</strong><strong>&#8221; |</strong></p>
<p>ಶ್ರೀಶಂಕರಾಚಾರ್ಯರು ಹೇಳುವಂತೆ ತಾಯ್ತಂದೆಗಳ ಮಮತೆಯ ಸಹಸ್ರಗುಣ ಮಿಗಿಲಾದ ಮಮತೆ ಶಾಸ್ತ್ರಗಳದ್ದು..!!</p>
<p>ಸೃಷ್ಟಿ ನಿಯಮಗಳ ಅರ್ಥವೇನು..? ತತ್ವವೇನು..? ಎಂಬುದನ್ನು ಶ್ರೀರಾಮನು ಚೆನ್ನಾಗಿತಿಳಿದಿದ್ದನು..!</p>
<p><strong>ಸ್ಮೃತಿಮಾನ್</strong><strong> </strong><strong>ಃ</strong><strong>-</strong></p>
<p>ಜೀವಿ ತನ್ನ ಜೀವನದ ಪ್ರತಿಕ್ಷಣದಲ್ಲಿಯೂ ಬಗೆಬಗೆಯ ಅನುಭವಗಳನ್ನು ಪಡೆದುಕೊಳ್ಳುತ್ತಲೇ ಇರುತ್ತಾನೆ.</p>
<p>ಆದರೆ ಕಾಲವು ಮುಂದೆ ಸರಿದಂತೆ ಅವುಗಳೆಲ್ಲವೂ  ಮರೆವಿನ ಮರೆಯಲ್ಲಿ ಕಳೆದೇ ಹೋಗಿಬಿಡುತ್ತವೆ…!!</p>
<p>ಬದುಕಿನ ಅನೇಕ ಅನುಭವಗಳು ಅಮೂಲ್ಯ ಆಸ್ತಿಗಳು..!</p>
<p>ಜೋಪಾನವಾಗಿ ಕಾಪಿಡಬೇಕಾದ ಭವಿಷ್ಯದ ಸೋಪಾನಗಳು..!</p>
<p>ಅನುಭವಗಳು ಅಳಿಯುವುದಕ್ಕೆ ಹೆಸರು ಮರೆವು….</p>
<p>ಅವು ಉಳಿದರೆ ಅದೇ ನೆನಪು..</p>
<p>ಭವಿಷ್ಯತ್ತಿನ ಭವನಕ್ಕೆ ಭಿತ್ತಿಯಾಗಬಲ್ಲ ಭವ್ಯಭಾವಗಳನ್ನು ಹೃದಯಕೋಶದಲ್ಲಿ ಶಾಶ್ವತವಾಗಿ ಕಾಪಿಡಲು ಬೇಕಾದ ಸ್ಮೃತಿಶಕ್ತಿಯುಳ್ಳವನಾಗಿದ್ದವನು ಶ್ರೀರಾಮ..</p>
<p><strong>ಪ್ರತಿಭಾನವಾನ್</strong><strong> </strong><strong>ಃ</strong><strong>-</strong></p>
<p>ವಿಷಯವು ಅರ್ಥವಾಗುವುದಕ್ಕೆ<strong> </strong>&#8216;<strong>ಗ್ರಹಣ&#8217;</strong>ವೆಂದು ಹೆಸರು….</p>
<p>ಅರ್ಥವಾದ ವಿಷಯವು ಅಂತರಂಗದಲ್ಲಿ   ಉಳಿದುಕೊಳ್ಳುವುದಕ್ಕೆ<strong> &#8216;</strong><strong>ಧಾರಣ</strong><strong>&#8216; </strong>ಎಂದು ಹೆಸರು&#8230;</p>
<p>ಅರ್ಥವಾದುದು ಮತ್ತೆ ವ್ಯಕ್ತವಾಗುವುದಕ್ಕೆ<strong> &#8216;</strong><strong>ಸ್ಮರಣ</strong><strong>&#8216; </strong>ಎಂದು ಹೆಸರು..</p>
</div>
<p>ಕೇಳಿದ, ಕೇಳದ ವಿಷಯಗಳು ಅಗತ್ಯ ಸಮಯದಲ್ಲಿ ಮನಸ್ಸಿಗೆ ಬರುವುದಕ್ಕೆ &#8216;ಪ್ರತಿಭಾನ&#8217;ವೆಂದು<strong> </strong>ಹೆಸರು..!!</p>
<div>
<p>ಇದನ್ನೇ<strong> &#8216;</strong><strong>ಸಮಯಸ್ಫೂರ್ತಿ</strong><strong>&#8216; </strong>ಎಂತಲೂ ಕರೆಯುತ್ತಾರೆ..</p>
<p>ಈ ಗುಣಗಳು ಶ್ರೀರಾಮನಲ್ಲಿ ಧಾರಾಳವಾಗಿದ್ದವು..</p>
<p><strong>ಸರ್ವಲೋಕ</strong><strong> </strong><strong>ಪ್ರಿಯ</strong><strong> </strong><strong>ಃ</strong><strong>-</strong></p>
<p>ಕೆಲವರಿಗೆ ಹಲವು ಕಾಲ ಪ್ರಿಯರಾಗಿರಬಹುದು,</p>
<p>ಹಲವರಿಗೆ ಕೆಲವು ಕಾಲ ಪ್ರಿಯರಾಗಿರಬಹುದು,</p>
<p>ಹಲವರಿಗೆ ಹಲವು ಕಾಲ ಪ್ರಿಯರಾಗಿರುವುದು ಸಾಧಾರಣರಿಗೆ ಸಾಧ್ಯವಲ್ಲ ….!</p>
<p>ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಪ್ರೀತಿಯನ್ನು ಕೊಟ್ಟು ಪ್ರೀತಿಯನ್ನು ತೆಗೆದುಕೊಳ್ಳಬೇಕೆಂದರೆ,</p>
<p>ಅದು ಮನುಷ್ಯಮಾತ್ರರಿಗೆ ಮೀರಿದ ಮಾತು..!</p>
<p>ಪ್ರೀತಿಯೇ ಮನುಷ್ಯಾಕಾರವಾಗಿ ಬಂದರೆ ಅದು ಸಾಧ್ಯವೇನೋ..?</p>
<p>ಹೀಗಿದ್ದನು ಶ್ರೀರಾಮ..!</p>
<p><strong>ಸಾಧುಃ</strong><strong> -</strong></p>
<p>ಭುವಿಗೆ ಹಗಲು &#8211; ರಾತ್ರಿಗಳೆಂಬ ಎರಡು ಪಾಶ್ವ೯ಗಳಿದ್ದಂತೆ&#8230;</p>
<p>ಬೆಂಕಿಗೆ ಬಿಸಿ-ಬೆಳಕುಗಳೆಂಬ ಎರದು ಪರಿಣಾಮಗಳಿದ್ದಂತೆ..</p>
<p>ಬದುಕಿಗೆ ಒಳಿತು &#8211; ಕೆಡುಕುಗಳೆಂಬ ಎರಡು ಮುಖಗಳಿವೆ..</p>
<p>ಮನುಷ್ಯನಲ್ಲಿ ಕೆಡುಕು ಹೆಚ್ಚಾದರೆ ಆತ ನರರಾಕ್ಷಸ..</p>
</div>
<p>ಒಳಿತು &#8211; ಕೆಡುಕುಗಳು ಸಮನಾದರೆ ಹುಲುಮಾನವ&#8230;</p>
<div>
<p>ಒಳಿತೇ ಮಿಗಿಲಾದರೆ ದೇವಮಾನವ…!!</p>
</div>
<p>ವಿಶ್ವದ ಒಳಿತೆಲ್ಲವನ್ನೂ ಒಂದೆಡೆ  ರಾಶಿ ಹಾಕಿದಂತಿದ್ದನು ಶ್ರೀರಾಮ..</p>
<div>
<div>
<p><strong>ಅದೀನಾತ್ಮಾ</strong><strong> </strong><strong>ಃ</strong><strong>-</strong></p>
<p>ಆಪತ್ತುಗಳು ಬಂದಾಗಲೇ ವ್ಯಕ್ತಿಯ ಅಂತಃಸತ್ವವೇನೆಂಬುದು ಪ್ರಕಟವಾಗುವುದು..</p>
<p>ಆಪತ್ತುಗಳ ಆಕ್ರಮಣವಾದಾಗ ಹಲವರು ದೈನ್ಯ ತಾಳುವರು..</p>
<p>ಕೆಲವರು ಧೈರ್ಯ ತಾಳುವರು..</p>
<p>ದೀನನಲ್ಲ …!! ಧೀರರಲ್ಲಿ ಧೀರ  ಶ್ರೀರಾಮ.. !!!</p>
<p><strong>ವಿಚಕ್ಷಣ</strong><strong> :-</strong></p>
<p>ಕ್ಲಿಷ್ಟದಲ್ಲಿ ಕ್ಲಿಷ್ಟವೆನಿಸುವ ಕರ್ಮಗಳನ್ನು ಅತ್ಯಂತ  ಸರಳವಾಗಿ ಮಾಡಿ ಮುಗಿಸಬಲ್ಲ ಕುಶಲತೆಯುಳ್ಳವನು&#8230;</p>
<p>ಸತ್ಪುರುಷರು ನದಿಗಳಂತಾದರೆ ಶ್ರೀರಾಮನು ಸಮುದ್ರದಂತೆ..</p>
<p>ಜಗದ ಎಲ್ಲೆಡೆಗಳಿಂದ ನದಿಗಳು ಸಮುದ್ರವನ್ನೇ ಲಕ್ಷ್ಯವಾಗಿರಿಸಿಕೊಂಡು ನಿರಂತರ ಹರಿಯುವಂತೆ..</p>
<p>ಸತ್ಪುರುಷರೆಲ್ಲರ ಮನೋನದಿಗಳು ಸತತವಾಗಿ ರಾಮಸಮುದ್ರದೆಡೆಗೆ ಹರಿಯುತ್ತಿದ್ದವು..</p>
<p>ಒಳಿತು ಹಿರಿದಾದ ಒಳಿತಿನೆಡೆಗೆ ಆಕರ್ಷಿತವಾಗುವುದು,ಕೆಡುಕು ಕೆಟ್ಟಕೆಡುಕಿನೆಡೆಗೆ ಸೆಳೆಯಲ್ಪಡುವುದು ಸೃಷ್ಟಿಸಹಜ..</p>
<p><strong>ಆರ್ಯ</strong><strong> </strong><strong>ಃ</strong><strong>-</strong></p>
<p>ಸರ್ವಪೂಜ್ಯನಾದವನು&#8230;</p>
<p><strong>ಸರ್ವಸಮ</strong><strong> :-</strong></p>
<p>ಬೆಳಕೀಯುವ ಸೂರ್ಯನಿಗೆ ಜಾತಿ-ವೃತ್ತಿ-ಗುಣಗಳ ತಾರತಮ್ಯವುಂಟೇ..?</p>
<p>ಹಾಗೆಯೇ ಸರ್ವಸಮನವನು..</p>
<p>ನಮ್ಮ ಮನೆಯ ಕಿಟಕಿ ಚಿಕ್ಕದಾಗಿದ್ದರೆ ಅದಕ್ಕೆ ಸೂರ್ಯ ಹೊಣೆಗಾರನಾಗುವುದುಂಟೇ..?</p>
<p>ಪ್ರೇಮ ಕಾರುಣ್ಯಗಳ ಸಾಗರ ಶ್ರೀರಾಮ..</p>
<p>ಅವರವರ ಹೃದಯದ ಪಾತ್ರೆಗಳ ಹಿರಿತನ &#8211; ಕಿರಿತನಗಳಿಗೆ ತಕ್ಕಂತೆ ಜೀವಿಗಳು ಅವನ ಪ್ರೇಮ &#8211; ಕರುಣೆಗಳನ್ನು ಮೊಗೆದರು..</p>
<p><strong>ಸದೈವಪ್ರಿಯದರ್ಶನಃ</strong><strong> :-</strong></p>
<p><strong>&#8220;ತದೇವ ರೂಪಂ ರಮಣೀಯತಾಯಾಃ ಕ್ಷಣೇ ಕ್ಷಣೇ ಯತ್ ನವತಾಂ ಉಪೈತಿ&#8221; ||</strong></p>
<p>ಕ್ಷಣ ಕ್ಷಣವೂ ಯಾವುದು ಹೊಚ್ಚ ಹೊಸದಾಗುತ್ತಲೇ ಇರುವುದೋ ಅದೇ ಅಲ್ಲವೇ ರಮಣೀಯ ರೂಪವೆಂದರೆ..?</p>
<p>ಪೂರ್ಣ ಚಂದ್ರನನ್ನದೆಷ್ಟು ಬಾರಿ ನೋಡಿದರೂ ಬೇಸರ ಬರುವುದುಂಟೇ.?</p>
<p>ಪೂರ್ಣಚಂದ್ರನಿಗಿಂತ ಮಿಗಿಲು ನಮ್ಮ ರಾಮಚಂದ್ರ..!</p>
<p>ಅದೆಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ, ನೋಡಿ…ನೋಡಿ…ನೋಡಿದಷ್ಟೂ</p>
</div>
</div>
<p>ನವನವೀನ ಸುಂದರವಾಗಿಯೇ ತೋರುವ ಅದ್ಭುತ ವಿಸ್ಮಯದರ್ಶನನವನು..!</p>
<p><strong>ಸಮುದ್ರ ಇವ</strong><strong> </strong><strong>ಗಾಂಭೀರ್ಯೇ</strong><strong> :-</strong></p>
<div>
<p>ಸಾಗರದಂತೆ ಗಂಭೀರ..</p>
<p>ಸಾಗರವನ್ನು ನೋಡದವರು ಯಾರೂ ಇಲ್ಲ..</p>
<p>ಸಾಗರದ ಆಳ  &#8211; ಅಗಲಗಳನ್ನು ತಿಳಿದವರೂ ಯಾರೂ ಇಲ್ಲ..!!</p>
<p>ರಾಮನ ಹೆಸರನ್ನು ಕೇಳದವರಾರು..?</p>
<p>ರಾಮನ ಆಳವನ್ನು ಬಲ್ಲವರಾರು..!!?</p>
</div>
<p><strong>ಧೈರ್ಯೇಣ</strong><strong> </strong><strong>ಹಿಮವಾನ್</strong><strong> </strong><strong>ಇವ</strong><strong> :-</strong></p>
<div>
<p>ಧೈರ್ಯದಲ್ಲಿ ಹಿಮಾಲಯದಂತೆ..!</p>
<p>ಬಿರುಗಾಳಿ ಬೀಸಲಿ, ಸಿಡಿಲುಗಳು ಬಡಿಯಲಿ, ಭೂಮಿಯೇ ನಡುಗಲಿ,</p>
<p>ಹಿಮಾಲಯ ಚಲಿಸುವುದಂಟೇ..?</p>
<p>ಇದಲ್ಲವೇ ಧೈರ್ಯವೆಂದರೆ..?</p>
<p>ರಾಮನ ಬದುಕಿನಲ್ಲಿ ಬೀಸಿದ ಬಿರುಗಾಳಿಗಳಿಗೆ ಲೆಖ್ಖವೇ ಇಲ್ಲ ,ಆದರೆ ಆತನೆಂದೂ ತನ್ನ ನೆಲೆ-ನಿಲುವುಗಳಿಂದ ಚಲಿಸಲಿಲ್ಲ..!</p>
<p><strong>ವಿಷ್ಣುವಿನಂತೆ</strong><strong> </strong><strong>ವೀರ</strong><strong> </strong><strong>ಃ</strong><strong>-</strong></p>
<p>ಸಾಟಿಯಿಲ್ಲದ ಪರಾಕ್ರಮ ರಾಮನಲ್ಲಿದ್ದರೂ ಅದು ಎಂದಿಗೂ ದುರುಪಯೋಗವಾಗಲಿಲ್ಲ&#8230;</p>
<p>ಆತ್ಮರಕ್ಷಣೆಗೆ, ಆತ್ಮೀಯರ ರಕ್ಷಣೆಗೆ, ಅತ್ಮಬಂಧುಗಳ ರಕ್ಷಣೆಗೆ ಅದು ವಿನಿಯೋಗವಾಯಿತು..!</p>
<p>ಪರಾಕ್ರಮ ರಾವಣನಲ್ಲಿಯೂ ಇತ್ತು.</p>
<p>ಆದರೆ ಅದು ಬಳಕೆಯಾದದ್ದು ತನ್ನ ಸ್ವಾರ್ಥಕ್ಕಾಗಿ, ವಿಶ್ವವನ್ನು ಹಾಳುಗೆಡವಲು..</p>
<p>ಒಳ್ಳೆಯವರನ್ನು ಗೋಳು ಹೊಯ್ದುಕೊಳ್ಳಲು…!!</p>
</div>
<p><strong>‍</strong><strong>ಕಾಲಾಗ್ನಿ</strong><strong> </strong><strong>ಸದೃಶಃ</strong><strong> </strong><strong>ಕ್ರೋಧೇ</strong><strong> :-</strong></p>
<div>
<p>ಪಂಚಭೂತಗಳು ಪ್ರಪಂಚವನ್ನು ತಾಯಿಯಂತೆ ಪಾಲಿಸುತ್ತವೆ..</p>
<p>ನಮ್ಮೆಲ್ಲರ ಬದುಕಿಗೆ ಆಶ್ರಯವಿತ್ತಿರುವ ಭೂಮಿ- ಅದು ತಾಯಿಯ ಮಡಿಲು..</p>
<p>ನಮ್ಮೆಲ್ಲರ ದಾಹವನ್ನು ತಣಿಸುವ ಜಲ- ಅದು ತಾಯಿಯ ಹಾಲು.</p>
</div>
<p>ಅಮ್ಮನಾಗಿ ಅಡಿಗೆಮನೆಯನ್ನು ಪ್ರವೇಶಿಸಿ ನಮಗಾಗಿ ಬಿಸಿ ಬಿಸಿ ಅನ್ನ ಸಿದ್ಧಪಡಿಸುವ ಅಗ್ನಿ- ಅದು ಅಮ್ಮನ ಬೆಚ್ಚಗಿನ ಅಪ್ಪುಗೆ..</p>
<div>
<p>ಇವುಗಳು ನಮ್ಮನ್ನು ಪಾಲಿಸುತ್ತವೆ &#8211; ಪೋಷಿಸುತ್ತವೆ..</p>
<p>ನಮ್ಮ ತಪ್ಪುಗಳನ್ನು ಮನ್ನಿಸುತ್ತವೆ..</p>
<p>ಆದರೆ ನಮ್ಮ ತಪ್ಪುಗಳು ಮಿತಿಮೀರಿದಾಗ ಕುಪಿತಗೊಂಡು ದಂಡಿಸುತ್ತವೆ..</p>
<p>ಭೂಕಂಪವಾಗುವುದುಂಟು..</p>
<p>ಪ್ರವಾಹವೇರಿ ಬರುವುದುಂಟು..</p>
</div>
<p>ವಿಶ್ವಪ್ರಳಯ ಕಾಲದಲ್ಲಿ ಮಹಾಗ್ನಿಯೊಂದು ಆವಿರ್ಭವಿಸಿ ಸಕಲವನ್ನೂ ಸುಟ್ಟುರುಹುವುದುಂಟು..</p>
<div>
<p>ಪಂಚಭೂತಗಳ ಈ ಸ್ವಭಾವವನ್ನು ಶ್ರೀರಾಮನಲ್ಲಿಯೂ ಕಾಣಬಹುದು&#8230;</p>
<p>ಉಪಕರಿಸುವಲ್ಲಿ-ಉಪಚರಿಸುವಲ್ಲಿ ತಾಯಿಗಿಂತ ಮಿಗಿಲವನು..</p>
<p>ತಪ್ಪು ಮಾಡಿದರೆ ತಾಯಿಯಂತೆ ಮನ್ನಿಸುವನು..</p>
<p>ಸಹಜವಾಗಿಯೇ ಶಾಂತ-ಮಧುರ ಸ್ವಭಾವ ಅವನದು..</p>
</div>
<p>ಅದು ಭಂಗಗೊಳ್ಳುವಂತೆ, ತಪ್ಪಿ ನಡೆದರೆ, ಆತ  ಕ್ರುದ್ಧನಾದನಾದರೆ ಮತ್ತೆ ಪ್ರಳಯಕಾಲದ ಅಗ್ನಿಯೇ ಅವನು..!</p>
<div>
<p>ಮತ್ತೆ ಅವನೆದುರು ನಿಂತವರು ಭಸ್ಮೀಭೂತರಾಗಲು ಬೇಕಾಗುವುದು ಕ್ಷಣಗಳುಮಾತ್ರ..!</p>
<p>ಕ್ರೋಧದಲ್ಲಿ ಕಾಲಾಗ್ನಿ.. ಆದರೆ ಕ್ಷಮಯಾ  ಧರಿತ್ರೀ.!.</p>
</div>
<p>ಕೋಪಿಷ್ಠರು ಕ್ಷಮಾಶೀಲರಾಗಿರುವುದಿಲ್ಲ..</p>
<div>
<p>ಕ್ಷಮಾಶೀಲರನೇಕರಲ್ಲಿ ಕೆಚ್ಚು ಇರುವುದೇ ಇಲ್ಲ..</p>
<p>ರಾಮನೆಂದರೆ ಉತ್ತರ-ದಕ್ಷಿಣ ಧ್ರುವ ಸಂಗಮ..</p>
<p>ಹಿಮ &#8211; ಸಿಡಿಲುಗಳ ಸಮನ್ವಯ..</p>
<p><strong>ತ್ಯಾಗದಲ್ಲಿ</strong><strong> </strong><strong>ಕುಬೇರನಂತೆ</strong><strong> </strong><strong>ಃ</strong><strong>-</strong></p>
<p>ಬ್ರಹ್ಮಾಂಡದಲ್ಲಿರುವ ಸಕಲಸಂಪತ್ತಿಗೂ ಕುಬೇರನೇ ಅಧಿಪತಿ..</p>
</div>
<p>ಹಾಗೆಂದ ಮಾತ್ರಕ್ಕೆ ಆತನೇನೂ ಸಂಪತ್ತೆಲ್ಲವನ್ನೂ ತನ್ನಮನೆಯಲ್ಲಿ ಗುಡ್ಡೆಹಾಕಿಕೊಂಡು ಕುಳಿತುಕೊಂಡಿರುವುದಿಲ್ಲ..</p>
<p>ಎಲ್ಲೆಲ್ಲಿ ಅದರ  ಅಗತ್ಯವಿದೆಯೋ, ಯಾರು ಯಾರಿಗೆ ಅರ್ಹತೆಯಿದೆಯೋ ಅಲ್ಲಲ್ಲಿಗೆ  &#8211; ಅವರವರಿಗೆ ತನ್ನ ಸಂಪತ್ತನ್ನು ಹರಿಬಿಡುವವನವನು..</p>
<p>ಹಾಗಾಗಿ ಆತನನ್ನು ಧನೇಶನೆಂದು ಮಾತ್ರವಲ್ಲ ಧನದನೆಂದೂ ಕರೆದರು..(ಧನೇಶ = ಧನದ ಅಧಿಪತಿ, ಧನದ = ಧನವನ್ನು ವಿತರಿಸುವವನು)</p>
<p>ಸೀತಾಲಕ್ಷ್ಮಿಯ ಅರಸನಲ್ಲಿ ಎಲ್ಲ ಸದ್ಗುಣಗಳಿದ್ದರೂ, ಎಲ್ಲಾಬಗೆಯ ಸಂಪತ್ತುಗಳಿದ್ದರೂ ನಕ್ಷತ್ರಗಳ  ಮಧ್ಯೆ ಚಂದ್ರನ ಹಾಗೆ ಅವುಗಳೆಲ್ಲವನ್ನೂ ಮೀರಿಸುವ ತ್ಯಾಗ ಎಂಬ ಮಹಾಗುಣವಿದ್ದಿತು..</p>
<div>
<p>ತನ್ನ ಬದುಕಿನುದ್ದಕ್ಕೂ ಆಗಾಗ ಆಗಾಗ ಶ್ರೀರಾಮ ವಿರಾಟ್ ಪುರುಷನಾಗಿ ಗೋಚರಿಸುವುದು ತನ್ನ ತ್ಯಾಗದಿಂದಾಗಿ..!</p>
</div>
<p>ಸತ್ಯ &#8211; ಧರ್ಮವೆಂಬ ಎರಡೇ ಎರಡು ಪದಗಳು ಭಾರತೀಯ ಸಂಸ್ಕೃತಿಯ ಸಾರಸರ್ವಸ್ವವನ್ನೂ ಪ್ರತಿಪಾದಿಸುತ್ತದೆ..</p>
<div>
<p>ಸತ್ಯವನ್ನು ಬಿಟ್ಟು ಧರ್ಮವಿರದು.. ಧರ್ಮವನ್ನು ಬಿಟ್ಟು ಸತ್ಯವಿರದು..</p>
<p>ಸತ್ಯವೆಂಬುದು ದೇವರ ಹೆಸರು..</p>
<p><strong>||ಸತ್ಯಂ</strong><strong> </strong><strong>ಶಿವಂ</strong><strong> </strong><strong>ಸುಂದರಮ್</strong><strong> ||</strong></p>
</div>
<p>ಧರ್ಮವೆಂದರೆ ದೇವನನ್ನು ಕಾಣಲು &#8211; ಪಡೆಯಲು ಬೇಕಾದ,ಅನಂತ ಜನ್ಮಗಳ ಸಾಧನೆಯಿಂದ ಮತ್ತು ದೈವಕೃಪೆಯಿಂದ ನಮ್ಮ ಮನೋಬುದ್ಧೀಂದ್ರಿಯ ಶರೀರಗಳಲ್ಲಿ ಏರ್ಪಡುವ ಅಪರೂಪದ ಒಂದುಸ್ಥಿತಿ..</p>
<p>ಸತ್ಯವೆಂದರೆ ಬದುಕಿನ ಗುರಿ..</p>
<div>
<p>ಧರ್ಮವೆಂದರೆ ಅದರ ದಾರಿ..</p>
<p>ಸತ್ಯವೆಂದರೆ ಬದುಕಿನ ತಿರುಳು..</p>
<p>ಧರ್ಮವೆಂದರೆ ಅದರ ಕವಚ..</p>
<p>ಸತ್ಯವೆಂಬುದು ದೇವಸ್ಥಾನ..</p>
<p>ಧರ್ಮವದರ ಸೋಪಾನ..</p>
<p>ಸತ್ಯವೆಂದರೆ ಸುಖದ ತುತ್ತ ತುದಿ..</p>
<p>ಧರ್ಮವೆಂದರೆ ಅದನ್ನು ಪಡೆದುಕೊಳ್ಳಲು ಅಳವಡಿಸಿಕೊಳ್ಳಬೇಕಾದ ಜೀವನ ವಿಧಾನ..</p>
</div>
<p>ಸತ್ಯವೇ <strong>&#8216;</strong><strong>ಜೀವಗಳು ತನ್ನನ್ನು</strong><strong> </strong><strong>ಪಡೆದುಕೊಳ್ಳಲಿ</strong><strong> </strong>&#8216; ಎಂಬ ಕರುಣೆಯಿಂದ ಧರ್ಮವಾಗಿ ಮಾರ್ಪಡುತ್ತದೆ..</p>
<div>
<p>ಧರ್ಮವೇ ನಮ್ಮಿಂದ ಪೂರ್ಣವಾಗಿ ಆಶ್ರಯಿಸಲ್ಪಟ್ಟಾಗ ಇನ್ನೊಂದು ಮೆಟ್ಟಿಲೇರಿ ಸತ್ಯವಾಗಿ ಬೆಳಗುತ್ತದೆ..</p>
<p>ಧರ್ಮವೆಂದರೆ ಅರುಣೋದಯ..</p>
<p>ಸತ್ಯವೆಂದರೆ ಸೂರ್ಯೋದಯ..</p>
</div>
<p>ಬರಿಗಣ್ಣಿಗೆ ಕಾಣದ ಆದರೆ ಅನುಭವಕ್ಕೆ ಬರುವ ಈ ಎರಡು ಜೀವನದ ಮೂಲಾಧಾರ ಶಕ್ತಿಗಳ ಮೂರ್ತರೂಪವೇ ಶ್ರೀರಾಮ..!</p>
<div>
<p>ಕಿನಾರೆಯಲ್ಲಿ ನಿಂತು ಸಾಗರದ ಅಲೆಗಳನ್ನು ಎಣಿಸಿ ಎಣಿಸಿ ಎಣಿಸಿ ಎಣಿಸಿ&#8230;</p>
</div>
<p>ಕೊನೆಗೂ ಎಣೆಕೆ ಮುಗಿಯದೆಯೇ… ಸಾಗರದಲ್ಲಿಯೇ ಇಳಿದು ಬಿಡುವಂತೆ…</p>
<p>ನಾರದರು ಶ್ರೀರಾಮನ  ಗುಣಗಳನ್ನು ಎಣಿಸಿ…ಎಣಿಸಿ…ಎಣಿಸಿ…ಎಣಿಸಿ , ಕೊನೆಗೂ ಎಣಿಕೆ ಮುಗಿಯದೆಯೇ…</p>
<div>
<p>ಆತನ ಕಥೆಯನ್ನು ಹೇಳತೊಡಗಿದರು..</p>
<p><span style="font-family: 'Devanagari MT';"><strong><br />
</strong></span></p>
<p style="text-align: center;"><strong>॥</strong><strong> </strong><strong>ಹರೇರಾಮ</strong><strong> </strong><strong>॥</strong></p>
</div>
]]></content:encoded>
			<wfw:commentRss>http://hareraama.in/blog/hey-raama-ni-sarvoottama/feed/</wfw:commentRss>
		<slash:comments>7</slash:comments>
		</item>
		<item>
		<title>ಗುಣಗಳ ಗಣಿ ಶ್ರೀರಾಮ..!</title>
		<link>http://hareraama.in/blog/%e0%b2%97%e0%b3%81%e0%b2%a3%e0%b2%97%e0%b2%b3-%e0%b2%97%e0%b2%a3%e0%b2%bf-%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae/</link>
		<comments>http://hareraama.in/blog/%e0%b2%97%e0%b3%81%e0%b2%a3%e0%b2%97%e0%b2%b3-%e0%b2%97%e0%b2%a3%e0%b2%bf-%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae/#comments</comments>
		<pubDate>Thu, 27 May 2010 05:45:25 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4414</guid>
		<description><![CDATA[ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣಗಳನ್ನಾದರೂ ಬಿಟ್ಟೇನು…!.
ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು..!!
ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು…!!!
ಆದರೆ…
ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ...!!
]]></description>
			<content:encoded><![CDATA[<div style="text-align: center;">|| ಹರೇರಾಮ ||</div>
<p>ಗುಣವೆಂಬ ಶಬ್ಧಕ್ಕೆ ಸಂಸ್ಕೃತದಲ್ಲಿ ಸೂತ್ರ(ದಾರ)ವೆಂದು ಅರ್ಥವಿದೆ..<br />
ಸದ್ಗುಣಗಳು ಒಡನಾಡಿಗಳನ್ನು ನಮ್ಮೊಡನೆ ಬಂಧಿಸಿಡುವ ಸೂತ್ರಗಳು..!<br />
ಇವು ರಾಮನಲ್ಲಿ ಅನಂತವಾಗಿದ್ದುದರಿಂದಲೇ ಸಕಲ ಜೀವರಾಶಿಗಳೂ ಆತನೊಡನೆ ಬಿಡಲಾರದ ಬಂಧನಕ್ಕೊಳಗಾದವು.!.<br />
ಆದುದರಿಂದಲೇ ಶ್ರೀರಾಮನ ವ್ಯಕ್ತಿತ್ವವನ್ನು ವರ್ಣಿಸಲು ಹೊರಟ ನಾರದರಿಗೆ ಎಲ್ಲಿಂದ ಪ್ರಾರಂಭಿಸಬೇಕು, ಎಲ್ಲಿ ನಿಲ್ಲಿಸಬೇಕು ಎಂಬುದೇ ತಿಳಿಯದಾಯಿತು…!!<br />
ಇದೋ&#8230; ನಾರದರ ಹೃದಯವನ್ನು ಸ್ಪರ್ಶಿಸಿದ ಶ್ರೀರಾಮನ ಇನ್ನಷ್ಟು ಗುಣಗಳು..</p>
<p><strong>ಲಕ್ಷ್ಮೀವಾನ್ :-</strong><br />
ಲಕ್ಷ್ಮವೆಂದರೆ ಗುರುತು.. ಭಗವಂತನ ಗುರುತುಳ್ಳವಳು ಲಕ್ಷ್ಮಿ..<br />
ಲಕ್ಶ್ಮಿಯ ನಾನಾ ರೂಪಗಳು ಭಗವಂತನ  ಕೃಪೆಯ ಚಿಹ್ನೆಗಳು..<br />
ಧನ, ರೂಪ, ವಿದ್ಯೆ, ಬಲ ಮೊದಲಾದ ಸಂಪತ್ತಿನ ವಿವಿಧ ರೂಪಗಳೆಲ್ಲವೂ ಈಶ್ವರನ ಅಭಿವ್ಯಕ್ತಿಗಳೇ ಆಗಿದೆ&#8230;</p>
<p>ಅವೆಲ್ಲವನ್ನೂ ಹೊಂದಿದವನು ಶ್ರೀರಾಮ..</p>
<p><strong>ಪ್ರತಾಪವಾನ್ :-</strong><br />
ಸಮರದ ಮಾತು ಹಾಗಿರಲಿ, ಸ್ಮರಣ ಮಾತ್ರದಿಂದಲೇ ಶತ್ರುವಿನ ಎದೆಯೊಡೆಯುವಂತೆ ಮಾಡುವ ಪೌರುಷವೇ ಪ್ರತಾಪ…<br />
ಅದುಳ್ಳವನು ಶ್ರೀರಾಮ..</p>
<p><strong>ಶುಭಲಕ್ಷಣ :-</strong></p>
<p>ಆತನ ಶರೀರವನ್ನಲಂಕರಿಸಿದ್ದ ಶಂಖ, ಚಕ್ರ, ಪದ್ಮ, ವಜ್ರ, ಮೊದಲಾದ ಚಿಹ್ನೆಗಳು ಸಕಲ ಜಗತ್ತಿಗೆ ಆತನಿಂದ ಉಂಟಾಗಲಿರುವ ಶುಭವನ್ನು ಸಾರಿ ಹೇಳುತ್ತಿದ್ದವು..</p>
<p><strong>ಧರ್ಮಜ್ಞ :-</strong><br />
ಕೇವಲ ಆಚರಣೆಯನ್ನು  ಮಾತ್ರವಲ್ಲ, ಧರ್ಮದ ನಿಗೂಢ ಮರ್ಮವನ್ನೂ ಬಲ್ಲವನು..</p>
<p><strong>ಸತ್ಯ ಸಂಧಃ :</strong>-</p>
<p><strong>&#8216;ಸಂಧಾ&#8217;</strong> ಎಂದರೆ ಪ್ರತಿಜ್ಞೆ…<br />
ಸತ್ಯಸಂಧನೆಂದರೆ ಎಂದೆಂದೂ ಸುಳ್ಳಾಗದ ಪ್ರತಿಜ್ಞೆಯುಳ್ಳವನು..<br />
ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ  ಶ್ರೀರಾಮನೇ ಹೀಗೆ ಹೇಳುತ್ತಾನೆ..</p>
<p>&#8221; ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |<br />
ನ ತು ಪ್ರತಿಜ್ಞಾಂ ಸಂಶ್ರುತ್ಯ  ಬ್ರಾಹ್ಮಣೇಭ್ಯೋ ವಿಶೇಷತಃ ||&#8221;</p>
<p><strong>ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣಗಳನ್ನಾದರೂ ಬಿಟ್ಟೇನು…!.<br />
ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು..!!<br />
ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು…!!!</strong><br />
<strong> ಆದರೆ…<br />
ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ&#8230;!!</strong></p>
<p><strong> </strong><br />
<strong>ಪ್ರಜಾನಾಂ ಚ ಹಿತೇ ರತಃ  ಃ-</strong><br />
ದೂರ್ವೆ ಎಂಬ ಮಂಗಲ ಸಸ್ಯ ಒಂಟಿಯಾಗಿ ಬೆಳೆಯುವುದೇ ಇಲ್ಲ..!<br />
ಅದು ಗುಂಪು ಗುಂಪಾಗಿಯೇ ಬೆಳೆಯುವುದು&#8230;<br />
<strong> &#8220;ದೂರ್ವಾದಲಶ್ಯಾಮ</strong>&#8220;ನಾದ ಮಂಗಲಪುರುಷ  ಶ್ರೀರಾಮನೂ ಹಾಗೆಯೇ…<br />
ತಾನೊಬ್ಬನೇ ಬೆಳೆಯುವುದರಲ್ಲಿ ಆತನಿಗೆ ಅಭಿರುಚಿ ಇರಲಿಲ್ಲ&#8230;<br />
ಸಮಸ್ತ ಪ್ರಜೆಗಳ ಒಳಿತನ್ನಾತ ಬಯಸುತ್ತಿದ್ದ, ಮಾತ್ರವಲ್ಲ, ಪ್ರಜಾಹಿತದಲ್ಲಿಯೇ ಸದಾ ಮಗ್ನನಾಗಿರುತ್ತಿದ್ದ&#8230;!</p>
<p><strong>ಯಶಸ್ವೀ :- </strong> ಕೀರ್ತಿಶಾಲಿ…….<br />
ಸರ್ವದೇಶಗಳಲ್ಲಿ, ಸರ್ವ ಲೋಕಗಳಲ್ಲಿ, ಸರ್ವಕಾಲಗಳಲ್ಲಿ ಹಬ್ಬಿಹರಡಿದ ಕೀರ್ತಿಯುಳ್ಳವನು&#8230;<br />
ರಾಮಾಯಣ ನಡೆದು ಯುಗಗಳೇ ಕಳೆದ ನಂತರವೂ ಇಂದಿಗೂ ಆತನ ಕೀರ್ತಿ ಎಲ್ಲೆಡೆ ಹರಡಿದೆ ಎಂದರೆ…<br />
ಆತನ ವ್ಯಕ್ತಿತ್ವ ಎಂಥದೆಂಬುದನ್ನು ನಾವು ಊಹಿಸಬೇಕು..!</p>
<p><strong>ಜ್ಞಾನ ಸಂಪನ್ನಃ :-</strong> ಪರಿಪೂರ್ಣ ಜ್ಞಾನಿ…..<br />
ವ್ಯವಹಾರ ಜಗತ್ತಿನಲ್ಲಿಯೇ ಆಗಲಿ, ಪರಮಾರ್ಥ ಜಗತ್ತಿನಲ್ಲಿಯೇ ಆಗಲಿ ಆತನ ಅರಿವಿಗೆ ನಿಲುಕದ ವಿಷಯವೆಂಬುದೇ ಇರಲಿಲ್ಲ..!!</p>
<p><strong>ಶುಚಿಃ :</strong>-  ಪರಿಶುದ್ಧನವನು…….<br />
ಶುಚಿಯಾದ ಶರೀರದೊಳಗೊಂದು ಶುಚಿಯಾದ ಮನಸ್ಸು.. ಅಲ್ಲಿ ಶುಚಿಯಾದ ಭಾವಗಳು….!<br />
ಶುಚಿಯಾದ ಮನದೊಂದಿಗೆ ಶುಚಿಯಾದ ಇಂದ್ರಿಯಗಳು..<br />
ಅವುಗಳಮೂಲಕ ನಡೆಯುವ ಶುಚಿಯಾದ ಕರ್ಮಗಳು..!</p>
<p>ಇದು ರಾಮನ ಬದುಕು…!!</p>
<p><strong>ವಶ್ಯಃ :-</strong> ಸುಲಭವಾಗಿ ವಶನಾಗುವವನು….</p>
<p><strong>&#8216;ವಶೀ&#8217;</strong> ಎಂದರೆ ಎಲ್ಲವನ್ನೂ ತನ್ನ ವಶದಲ್ಲಿರಿಸಿಕೊಳ್ಳುವವನು ಎಂದರ್ಥ..<br />
<strong> &#8216;ವಶ್ಯಃ</strong>&#8216; ಎಂದರೆ ಸುಲಭವಾಗಿ ವಶನಾಗುವವನು ಎಂದರ್ಥ..</p>
<p>ಒಂದೇ ಉಸಿರಿನಲ್ಲಿ ರಾಮನ ಕುರಿತಾಗಿ ಈ ಎರಡು ಶಬ್ಧಗಳನ್ನು ನಾರದರು ಉಚ್ಛರಿಸುತ್ತಾರೆ…!!.</p>
<p>ವಿರೋಧಾರ್ಥಕವಾದ ಈ ಎರಡೂ ಪದಗಳೂ ರಾಮನಿಗೆ ಸಲ್ಲುತ್ತವೆ…!!</p>
<p>ರಾಮನ ವ್ಯಕ್ತಿತ್ವದ ಪ್ರಭಾವ ಹೇಗಿತ್ತೆಂದರೆ, ಸಂಪರ್ಕಕ್ಕೆ ಬಂದವರೆಲ್ಲರೂ ಆತನ ವಶವಾಗುತ್ತಿದ್ದರು..!!<br />
ಆದರೆ ಆತನನ್ನೂ ಸುಲಭವಾಗಿ ವಶಪಡಿಸಿಕೊಳ್ಳಲು ಸಾಧ್ಯವಿತ್ತು …<br />
ಅದಕ್ಕಿದ್ದ ಸುಲಭೋಪಾಯವೆಂದರೆ ಪ್ರೀತಿ..!<br />
ಪ್ರೀತಿಯಿಂದ ಯಾರು ಬೇಕಾದರೂ ಆತನನ್ನು ಗೆಲ್ಲಬಹುದಿತ್ತು&#8230;.!<br />
<strong> &#8216;ಪ್ರಭು..! ಪ್ರೇಮ ಪರಾಧೀನ..</strong>!!&#8217;</p>
<p><strong>ಸಮಾಧಿಮಾನ್ :-</strong><br />
ಸಮಾಧಿ ಎಂದರೆ ಏಕಾಗ್ರತೆ &#8211; ತನ್ಮಯತೆ..<br />
ಬದುಕಿನ ಎಲ್ಲ ಬೀಗಗಳನ್ನೂ ತೆಗೆಯುವ ಒಂದೇ ಒಂದು ಕೀಲಿಕೈ ಎಂದರೆ ಇದು..!!<br />
ಓದಿನಲ್ಲಿ ಏಕಾಗ್ರತೆ ಇದ್ದರೆ, ವಿದ್ಯಾರ್ಥಿಯೊಬ್ಬ ಶ್ರೇಷ್ಠ ವಿದ್ಯಾವಂತನಾಗಲು ಸಾಧ್ಯ..<br />
ಕರ್ಮದಲ್ಲಿ ಏಕಾಗ್ರತೆಯಿದ್ದರೆ, ಕಾರ್ಮಿಕನೊಬ್ಬ ಮಹತ್ಕರ್ಮಗಳನ್ನು ಮಾಡಲು ಸಾಧ್ಯ..!<br />
ಸೇವೆಯಲ್ಲಿ ತನ್ಮಯತೆಯಿದ್ದರೆ, ಸೇವಕನೊಬ್ಬ ಸ್ವಾಮಿ ಸಂಪ್ರೀತಿಗೆ ಪಾತ್ರನಾಗಲು ಸಾಧ್ಯ..!<br />
ಪರಮಾತ್ಮನಲ್ಲಿ ತನ್ಮಯತೆ ಇದ್ದರೆ, ಯೋಗಿಯೊಬ್ಬ ಬದುಕಿನ ಪರಮ ಲಕ್ಷ್ಯವನ್ನೇ ತಲುಪಲು ಸಾದ್ಯ..!<br />
ಉಳಿದವರಿಗೆ ಎಷ್ಟು ಅಭ್ಯಾಸ ಮಾಡಿದರೂ ಬಾರದ ಈ ಗುಣ ರಾಮನಲ್ಲಿ ಸಹಜವಾಗಿತ್ತು…!!.</p>
<p><strong>ಪ್ರಜಾಪತಿ ಸಮಃ :-</strong><br />
ವಯಸ್ಸಿನಲ್ಲಿ ಕಿರಿಯನಾದರೂ ಸೃಷ್ಟಿಯಲ್ಲಿಯೇ ಅತಿ ವೃದ್ಧನಾದ ಚತುರ್ಮುಖ ಬ್ರಹ್ಮನಲ್ಲಿರಬಹುದಾದ ಹಿರಿತನ &#8211; ಪ್ರಬುದ್ಧತೆಗಳು ಆತನ ವ್ಯಕ್ತಿತ್ವವನ್ನು ಶೋಭೆಗೊಳಿಸಿದ್ದವು..<br />
ಆದುದರಿಂದಲೇ ಪೂರ್ವ ಪರಿಚಯವಿಲ್ಲದವರೂ ಕೂಡಾ ಆತನನ್ನು ಕಂಡೊಡನೆ ಗೌರವಿಸುವಂತಾಗುತ್ತಿತ್ತು..</p>
<p><strong>ಧಾತಾ :-</strong><br />
ಧಾರಣೆ ಮತ್ತು ಪೋಷಣೆ ಎಂಬರ್ಥದಲ್ಲಿರುವ <strong>&#8221; ಡು ಧಾ ಞ್ </strong>ಎಂಬ ಧಾತುವಿನಿಂದ ನಿಷ್ಪನ್ನವಾದ ಶಬ್ದವಿದು..<br />
ರಾಜನಾಗುವವನಿಗೆ ಸರ್ವ ಪ್ರಜೆಗಳ ಧಾರಣೆ-ಪೋಷಣೆಗೆ ಬೇಕಾದ ಮನೋಭಾವ ಮತ್ತು ಸಾಮಥ್ಯ೯ ವಿರಬೇಕಾಗುತ್ತದೆ..<br />
ಅದುಳ್ಳವನು ಶ್ರೀರಾಮ.. !!</p>
<p><strong>ರಿಪುನಿಷೂದನಃ  ಃ-<br />
</strong></p>
<p><strong>ಸೃಷ್ಟಿಯಲ್ಲಿ ಒಳಿತು ಹೇಗಿದೆಯೋ ಕೆಡುಕೂ ಕೂಡಾ ಹಾಗೇಯೇ ಇದೆ&#8230;</strong></p>
<p><strong> </strong></p>
<p><strong></p>
<div id="_mcePaste">ಸೃಷ್ಟಿಗೆ ಪೂರಕವಾಗಿ ಕಾರ್ಯವೆಸಗುವ ದೈವೀ ಶಕ್ತಿಗಳು ಹೇಗಿವೆಯೋ..ಸೃಷ್ಟಿಯ ವ್ಯವಸ್ಥೆಯನ್ನು ಹಾಳುಗೆಡಹುವ ದುಷ್ಟಶಕ್ತಿಗಳೂ ಹಾಗೆಯೇ ಇವೆ..!</div>
<div id="_mcePaste">ಅಂಥ ಸೃಷ್ಟಿ ಕಂಟಕರ, ಸಮಾಜ ಕಂಟಕರ, ಧರ್ಮಕಂಟಕರ ನಿವಾರಣೆಗೆ ಬದ್ಧಕಂಕಣನಾದವನು..!</div>
<p></strong></p>
<p><strong><br />
</strong></p>
<p style="text-align: center;">|| ಹರೇರಾಮ ||</p>
]]></content:encoded>
			<wfw:commentRss>http://hareraama.in/blog/%e0%b2%97%e0%b3%81%e0%b2%a3%e0%b2%97%e0%b2%b3-%e0%b2%97%e0%b2%a3%e0%b2%bf-%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae/feed/</wfw:commentRss>
		<slash:comments>4</slash:comments>
		</item>
		<item>
		<title>ಗುಡಿಯ ನೋಡಿರಣ್ಣಾ.. ದೇಹದ….!</title>
		<link>http://hareraama.in/blog/%e0%b2%97%e0%b3%81%e0%b2%a1%e0%b2%bf%e0%b2%af-%e0%b2%a8%e0%b3%8b%e0%b2%a1%e0%b2%bf%e0%b2%b0%e0%b2%a3%e0%b3%8d%e0%b2%a3%e0%b2%be-%e0%b2%a6%e0%b3%87%e0%b2%b9%e0%b2%a6%e2%80%a6-2/</link>
		<comments>http://hareraama.in/blog/%e0%b2%97%e0%b3%81%e0%b2%a1%e0%b2%bf%e0%b2%af-%e0%b2%a8%e0%b3%8b%e0%b2%a1%e0%b2%bf%e0%b2%b0%e0%b2%a3%e0%b3%8d%e0%b2%a3%e0%b2%be-%e0%b2%a6%e0%b3%87%e0%b2%b9%e0%b2%a6%e2%80%a6-2/#comments</comments>
		<pubDate>Fri, 21 May 2010 18:19:35 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=4373</guid>
		<description><![CDATA[&#124;&#124; ಹರೇ ರಾಮ &#124;&#124;
ಯುವಕನೊಬ್ಬ ಸಹಾಯಾರ್ಥಿಯಾಗಿ ಊರಿನ ದೊಡ್ಡ ಶ್ರೀಮಂತನ ಬಳಿ ಸಾರಿದ..
&#8221; ನನ್ನದೆಂಬುದಾಗಿ ಬಿಡಿಗಾಸಿನ ಮೌಲ್ಯದವಸ್ತುವೂ ನನ್ನಲ್ಲಿಲ್ಲ. ಏನಾದರೂ ಸಹಾಯ ಮಾಡುವಿರೇ..?&#8221;
&#8220;ಐದು ಲಕ್ಷ ಕೊಡುವೆ. ಆದರೆ, ನಿನ್ನ ಮೂತ್ರಕೋಶವನ್ನು ಕೊಡುವೆಯಾ..?&#8221;
ಗಲಿಬಿಲಿಗೊಂಡ ಯುವಕ ಹೇಳಿದ, &#8221;ಇಲ್ಲ ಕೊಡಲಾರೆ &#8221;
&#8220;ಹತ್ತು ಲಕ್ಷಕೊಡುವೆ, ನಿನ್ನ ಬಲಗೈ ಕೊಡುವೆಯಾ..?&#8221;
ಯುವಕ ಧೃಢಸ್ವರದಲ್ಲಿ ಹೇಳಿದ &#8220;ಖಂಡಿತಾ ಇಲ್ಲ&#8221;..
&#8221; ಹೋಗಲಿ ಬಿಡು ಇಪ್ಪತ್ತು ಲಕ್ಷ ಕೊಡುವೆ. ನಿನ್ನದೊಂದು ಕಣ್ಣು ಕೊಡುವೆಯಾ..?&#8221;
ಆಕ್ರೋಶಭರಿತ ಧ್ವನಿಯಲ್ಲಿ ಯುವಕ ಉತ್ತರಿಸಿದ, &#8221; ಅದು ಹೇಗೆ ಸಾಧ್ಯ?ಇಲ್ಲವೇ ಇಲ್ಲ, ಯಾವುದೇ ಕಾರಣಕ್ಕೂ ಇಲ್ಲ [...]]]></description>
			<content:encoded><![CDATA[<p>|| ಹರೇ ರಾಮ ||</p>
<p>ಯುವಕನೊಬ್ಬ ಸಹಾಯಾರ್ಥಿಯಾಗಿ ಊರಿನ ದೊಡ್ಡ ಶ್ರೀಮಂತನ ಬಳಿ ಸಾರಿದ..<br />
&#8221; ನನ್ನದೆಂಬುದಾಗಿ ಬಿಡಿಗಾಸಿನ ಮೌಲ್ಯದವಸ್ತುವೂ ನನ್ನಲ್ಲಿಲ್ಲ. ಏನಾದರೂ ಸಹಾಯ ಮಾಡುವಿರೇ..?&#8221;<br />
&#8220;ಐದು ಲಕ್ಷ ಕೊಡುವೆ. ಆದರೆ, ನಿನ್ನ ಮೂತ್ರಕೋಶವನ್ನು ಕೊಡುವೆಯಾ..?&#8221;<br />
ಗಲಿಬಿಲಿಗೊಂಡ ಯುವಕ ಹೇಳಿದ, &#8221;ಇಲ್ಲ ಕೊಡಲಾರೆ &#8221;<br />
&#8220;ಹತ್ತು ಲಕ್ಷಕೊಡುವೆ, ನಿನ್ನ ಬಲಗೈ ಕೊಡುವೆಯಾ..?&#8221;<br />
ಯುವಕ ಧೃಢಸ್ವರದಲ್ಲಿ ಹೇಳಿದ &#8220;ಖಂಡಿತಾ ಇಲ್ಲ&#8221;..<br />
&#8221; ಹೋಗಲಿ ಬಿಡು ಇಪ್ಪತ್ತು ಲಕ್ಷ ಕೊಡುವೆ. ನಿನ್ನದೊಂದು ಕಣ್ಣು ಕೊಡುವೆಯಾ..?&#8221;<br />
ಆಕ್ರೋಶಭರಿತ ಧ್ವನಿಯಲ್ಲಿ ಯುವಕ ಉತ್ತರಿಸಿದ, &#8221; ಅದು ಹೇಗೆ ಸಾಧ್ಯ?ಇಲ್ಲವೇ ಇಲ್ಲ, ಯಾವುದೇ ಕಾರಣಕ್ಕೂ ಇಲ್ಲ &#8221;<br />
ಆಗ ಶ್ರೀಮಂತ ಶಾಂತ ಸ್ವರದಲ್ಲಿ ಯುವಕನಿಗೆ ಹೇಳಿದ.  &#8221; ನೋಡು ತಮ್ಮಾ, ಐದು ಲಕ್ಷಕ್ಕೂ ಮೀರಿ ಬೆಲೆಬಾಳುವ ಮೂತ್ರಕೋಶ,<br />
ಹತ್ತು ಲಕ್ಷಕೊಟ್ಟರೂ ಕೊಡಲಾರದ ಬಲಗೈ, ಬೆಲೆ ಕಟ್ಟಲಾಗದ ಕಣ್ಣುಗಳು,<br />
ಇವೆಲ್ಲವನ್ನೂ ಇಟ್ಟುಕೊಂಡ ನೀನು ಬಡವ ಹೇಗಾದೆ..?<br />
ಭುವಿಗೆ ಕಳುಹುವಾಗ ದೇವರು ಪ್ರೀತಿಯಿಂದ ನಮಗಿತ್ತ ಅಮೂಲ್ಯ ಸಂಪತ್ತಿದು ಶರೀರ..!<br />
ಅದನ್ನೇ ಮರೆತು ನಾ ಬಡವನೆನ್ನುವುದು ದೇವರಿಗೆ ಮಾಡುವ ಅಪಚಾರವಲ್ಲವೇ..?&#8221;</p>
<p>ಹಿಂದಿನ ಲೇಖನದ ಕೊನೆಯಲ್ಲಿ ಶ್ರೀರಾಮನನ್ನು &#8216;ಶ್ರೀಮಾನ್&#8217; ಎಂದು ವರ್ಣಿಸಿದೆ..<br />
ಜೀವನದ ಮಧ್ಯೆ ಬಂದು &#8211; ಹೋಗುವ ಬೇರೆ ಸಂಪತ್ತುಗಳ ಮಾತು ಹಾಗಿರಲಿ, ಸಾಟಿಯಿಲ್ಲದ ಶರೀರಶ್ರೀ ಆತನದಾಗಿತ್ತು&#8230;</p>
<p>ಶರೀರವೆಂದರೆ ಆತ್ಮದ ಅಭಿವ್ಯಕ್ತಿ.<br />
ಆತ್ಮವೆಂದರೆ ಚೆನ್ನು&#8230;<br />
ಶರೀರವು ಆತ್ಮದ ಅಭಿವ್ಯಕ್ತಿ ಎಂದಾದಮೇಲೆ ಅದು ಎಲ್ಲೆಲ್ಲೂ ಚನ್ನಾಗಿಯೇ ಇರಬೇಕಲ್ಲವೇ..?<br />
ಆತ್ಮವೇ ಮನಸ್ಸು….<br />
ಆತ್ಮವೇ ಇಂದ್ರಿಯಗಳು…..<br />
ಆತ್ಮವೇ ಶರೀರ.. ಅಂದ ಮೇಲೆ ಆತ್ಮದ ಹಾಗೆ ಇವೆಲ್ಲವೂ ಆನಂದಮಯವಾಗಿ, ತೇಜೋಮಯವಾಗಿ, ಚೆಲುಚೆಲುವಾಗಿಯೇ ಇರಬೇಕಲ್ಲವೇ..?<br />
ಪಾಪದೋಷಗಳು ಮಧ್ಯೆ ಬಾರದಿದ್ದರೆ ನಮ್ಮೆಲ್ಲರ ಶರೀರಗಳು ಹಾಗೆಯೇ ಇರುತ್ತಿದ್ದವು&#8230;.!!!<br />
ಆದರೆ ಅಂತಹ ಮಾನವ ಪ್ರಕೃತಿಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ……!</p>
<p>ಬಹುಶಃ ಮಾನವರಿಗೆ &#8216;ಅವರ ಶರೀರ, ಮನಸ್ಸು, ಜೀವನಗಳು ಹೇಗಿರಲು ಸಾಧ್ಯ?&#8217; ಎಂಬುದನ್ನು ಪ್ರತ್ಯಕ್ಷ ತೋರಿಸಬೇಕೆಂದು ದೇವರಿಗೇ ಅನಿಸಿರಬೇಕು..!<br />
ಶ್ರೀರಾಮನ ರೂಪದಲ್ಲಿ ಮಾನವರ ಮಧ್ಯೆ ದೇವರ ಆಗಮನವಾಯಿತು&#8230;</p>
<p>ನಾರದರ ಪರಿಶುದ್ಧ ದೃಷ್ಟಿಗೆ ಗೋಚರವಾದ ರಾಮನ ರೂಪವಿದು..<br />
ಅತಿ ಎತ್ತರವೂ ಅಲ್ಲದ &#8211; ಅತಿ ಕುಬ್ಜವೂ ಅಲ್ಲದ,<br />
ಅತಿ ಸ್ಥೂಲವೂ ಅಲ್ಲದ &#8211; ಅತಿ ಕೃಶವೂ ಅಲ್ಲದ,<br />
ಅತಿ ಬಿಳಿಯೂ ಅಲ್ಲದ &#8211; ಅತಿ ಕಪ್ಪೂ ಅಲ್ಲದ,<br />
ಸಮಶರೀರವವನದು&#8230;</p>
<p>ವೀರ ಕ್ಷತ್ರಿಯನಾತನಾದುದರಿಂದ, ಯಾವುದೇ ಶತ್ರುವಿನ ಎಂತಹಾ ಆಘಾತವನ್ನಾದರೂ ಸಹಿಸಲು ಬೇಕಾದ..<br />
ಎಂತಹಾ ಶತ್ರುವನ್ನಾದರೂ ಮಣಿಸುವಂತೆ ಪ್ರಹರಿಸಲು ಬೇಕಾದ.. ಶರೀರಸೌಷ್ಠವ ಆತನದಾಗಿತ್ತು..!<br />
ಅತ್ಯಾಶ್ಚರ್ಯವೆಂದರೆ, ಇಷ್ಟಾದರೂ ಕುಸುಮಸುಕುಮಾರ ಶರೀರವವನದು..!</p>
<p>ಮಳೆಮೋಡವನ್ನು ಹೋಲುವ, ನುಣುಪಾದ, ಹೊಳಪಾದ, ಸೊಗಸಾದ ವರ್ಣದವನವನು..<br />
ನಾರದರು ಆತನನ್ನು ಸ್ನಿಗ್ಧವರ್ಣನೆಂದೇ ಬಣ್ಣಿಸುತ್ತಾರೆ…<br />
ಸ್ನಿಗ್ಧವೆಂದರೆ ಸ್ನೇಹಯುಕ್ತವೆಂದರ್ಥ..<br />
ಭೌತಿಕವಾಗಿ ಹೇಳಬೇಕೆಂದರೆ, ಪದಾರ್ಥದಲ್ಲಿರುವ ಜಿಡ್ಡಿನ ಅಂಶಕ್ಕೆ ಸ್ನೇಹವೆಂದು ಹೆಸರು.<br />
ಭಾವುಕವಾಗಿ ಹೇಳಬೇಕೆಂದರೆ, ಅಂತರಂಗವು ದ್ರವಿಸುವಂತೆ ಮಾಡುವ ಪ್ರೀತಿಗೆ ಸ್ನೇಹವೆಂದು ಹೆಸರು..</p>
<p>(ನೇತ್ರಸ್ನೇಹೇನ ಸೌಭಾಗ್ಯo ದಂತಸ್ನೇಹೇನ ಭೋಜನಮ್ |<br />
ತ್ವಚ: ಸ್ನೇಹೇನ ಶಯ್ಯಾ ಚ ಪಾದಸ್ನೇಹೇನ ವಾಹನಮ್ || &#8211; ವರರುಚಿ)</p>
<p>ಶುಷ್ಕವಲ್ಲದ ಮೈ-ಮನಗಳು ಅವನವು..<br />
ಆತನ ಸ್ನಿಗ್ಧವರ್ಣ &#8211; ಸ್ನಿಗ್ಧ ಮನಸ್ಸುಗಳು ಲೋಕದ ಕಣ್ಮನಗಳನ್ನು ತಣಿಸಿದವು..</p>
<p>ಇತಿಹಾಸದಲ್ಲಿ ಧನುರ್ಧಾರಿಗಳೆಷ್ಟಿಲ್ಲ..?<br />
ಆದರೆ ಕೋದಂಡರಾಮನೆನ್ನುವುದು ಆತನಿಗೆ ಮಾತ್ರ..!<br />
ಸಾಮಾನ್ಯವೀರರ ಅಳವಿಗೆ ನಿಲುಕದ ಮಹಾಕೋದಂಡವನ್ನು ಧರಿಸಲು ಬೇಕಾದ ಶರೀರ &#8211; ಸಾಮಥ್ಯ೯ಗಳುಳ್ಳವನವನು..</p>
<p>ಆತನ ಶರೀರದಲ್ಲಿ ಅವಯವಗಳು ಸಮವಾಗಿ ವಿಭಾಗಿಸಲ್ಪಟ್ಟಿದ್ದವು.<br />
ಎತ್ತರಕ್ಕೆ ತಕ್ಕ ಅಗಲ,<br />
ಶರೀರಕ್ಕೆ ಒಪ್ಪುವಂಥ ಶಿರಸ್ಸು,<br />
ಶಿರಸ್ಸಿಗೆ ತಕ್ಕಂತೆಯೇ ಇರುವ ವಕ್ಷಸ್ಥಲ,<br />
ವಕ್ಷಸ್ಥಲಕ್ಕೊಪ್ಪುವ ಭುಜಗಳು,<br />
ಹೀಗೆ ಒಂದಕ್ಕೊಂದು ಹೊಂದಿಕೊಳ್ಳುವ ಅವಯವಗಳು..<br />
ಕಿವಿಗಳು, ಕಣ್ಣುಗಳು, ಕೈಗಳು ಮೊದಲಾದ ಜೋಡಿ ಅವಯವಗಳು ಒಂದಕ್ಕೊಂದು ಸಮವಾಗಿದ್ದವು..<br />
ರಾಜ ಲಕ್ಷಣವಿದು..<br />
ಭ್ರುವೌ ನಾಸಾಪುಟೇ ನೇತ್ರೇ ಕರ್ಣಾವೋಷ್ಠೌ ಚ  ಚೂಚುಕೇ |<br />
ಕೂರ್ಪರೌ  ಮಣಿಬಂಧೌ ಚ ಜಾನುನೀ ವೃಷಣೌ ಕಟೀ |<br />
ಕರೌ ಪಾದೌ ಸ್ಫಿಜೌ ಯಸ್ಯ ಸಮೌ ಜ್ಞೇಯಃ ಸಃ ಭೂಪತಿಃ || -ಸಾಮುದ್ರಿಕ)</p>
<p>ಸಮವೃತ್ತವಾದ, ಛತ್ರದಂತೆ ಕ್ರಮವಾಗಿ ಇಳಿಯುವ, ಶೋಭನವಾದ ಶಿರಸ್ಸು ಅವನದು..<br />
(ಏಕಚ್ಛತ್ರಾಧಿಪತಿಯ ಲಕ್ಷಣವಿದು- ಸಮವೃತ್ತ ಶಿರಾಶ್ಚೈವ ಛತ್ರಾಕಾರಶಿರಾಸ್ತಥಾ |<br />
ಏಕಛತ್ರಾಂ ಮಹೀ ಭುಂಕ್ತೇ  ದೀರ್ಘಮಾಯುಶ್ಚ ವಿಂದತಿ || &#8211; ನಾರದ )</p>
<p>ಅರ್ಧಚಂದ್ರಾಕಾರದ, ಉನ್ನತವಾದ, ಅನೇಕ ರೇಖೆಗಳಿಂದ ಕೂಡಿರುವ ವಿಶಾಲವಾದ ಹಣೆ ಅವನದು&#8230;<br />
( ರಾಜಲಕ್ಷಣವಿದು :- ಅರ್ಧಚಂದ್ರನಿಭಂ ತುಂಗಂ ಲಲಾಟಂ ಯಸ್ಯ ಸ ಪ್ರಭುಃ -ಸಾಮುದ್ರಿಕ)</p>
<p>ಕಮಲದಳದಂತೆ  ವಿಶಾಲವಾದ, ಕಡೆಗೆಂಪಾದ ಅವನ ಕಣ್ಣುಗಳು..<br />
ಸಮಸ್ತ ಜೀವಗಳೆಡೆಗೆ ಪ್ರೇಮ ಪ್ರವಾಹವನ್ನೇ ಹರಿಸುವ ಮಹಾದ್ವಾರಗಳು&#8230;!<br />
( ರಕ್ತಾಂತೈಃ ಪದ್ಮಪತ್ರಾಭೈಃ ಲೋಚನೈಃ ಸುಖಭಾಗಿನಃ &#8211; ಸಾಮುದ್ರಿಕ )</p>
<p>ಪುಷ್ಟವಾದ, ಉನ್ನತವಾದ ಕಪೋಲಗಳ ಮೇಲ್ಭಾಗ ಅವನದು&#8230;<br />
(ಇದೂ ರಾಜಲಕ್ಷಣವೇ :- ಪೂರ್ಣಮಾಂಸಲಹನುಸ್ತು ಭೂಪತಿಃ &#8211; ಸಾಮುದ್ರಿಕ )</p>
<p>ಶಂಖದಂತೆ ನುಣುಪಾದ ಆತನ ಕೊರಳಲ್ಲಿ ಮೂರು ರೇಖೆಗಳಿದ್ದವು.<br />
ಸಮೀಚೀನವಾಗಿ ಹೊರಹೊಮ್ಮಿಸಲ್ಪಟ್ಟ ಶಂಖಧ್ವನಿಯು ಪ್ರಣವವನ್ನೇ ಪ್ರತಿಧ್ವನಿಸುತ್ತಾ, ಕೇಳುಗರ ಮೇಲೆ ಪರಮಸಾತ್ವಿಕವಾದ ಪರಿಣಾಮವನ್ನುಂಟುಮಾಡುತ್ತದೆ..<br />
ಶಂಖದ ಶಾರೀರ ಶ್ರೀರಾಮನದು..</p>
<p>&#8220;ಜಗದ ಸಕಲ ಜೀವರಾಶಿಗಳ ಜೀವದ ಭಾರವ ಹೊರಲು ನಾ ಬಂದಿರುವೆ&#8221; ಎನ್ನುವಂತೆ ಮಾಂಸಲವಾದ, ಉನ್ನತವಾದ ಹೆಗಲುಗಳು&#8230;<br />
(ಮಹಾಪುರುಷ ಲಕ್ಷಣವಿದು..:- ಉನ್ನತ ಸ್ಕಂಧವತ್ತ್ವಂ ಮಹಾಪುರುಷ ಲಕ್ಷಣಮ್ &#8211; ಸಾಮುದ್ರಿಕ)</p>
<p>ವಕ್ಷಸ್ಥಲ ಮತ್ತು ಭುಜಗಳ ಮಧ್ಯೆ ಇರುವ ಮೂಳೆಗೆ ಜತ್ರುವೆಂದು ಹೆಸರು.<br />
ತುಂಬಿಕೊಂಡ ಭುಜ-ಎದೆಗಳಿಂದಾಗಿ, ಉನ್ನತವಾಗಿದ್ದರೂ ಆತನ ಜತ್ರುವು ತೋರುತ್ತಲೇ ಇರಲಿಲ್ಲ&#8230;!!<br />
( ವಿಷಮೈ: ಜತ್ರುಭಿಃ ನಿಸ್ಸ್ವಾಃ ಅತಿಸೂಕ್ಷ್ಮೈಶ್ಚ ಮಾನವಾಃ |<br />
ಉನ್ನತೈಃ ಭೋಗಿನಃ ನಿಮ್ನೈಃ ನಿಸ್ಸ್ವಾಃಪೀನೈ ನರಾಧಿಪಾಃ || &#8211; ಸಾಮುದ್ರಿಕ )</p>
<p>ದುಂಡಾದ, ತುಂಬಿದ, ಆತನ ತೋಳುಗಳು ನೇರನಿಲುವಿನಲ್ಲಿಯೂ ಮೊಣಕಾಲಿಗೆ ತಗಲುವಷ್ಟು ದೀರ್ಘವಾಗಿದ್ದವು.<br />
( ಆಜಾನುಲಂಬಿನೌ ಬಾಹೂ ವೃತ್ತಪೀನೌ  ಮಹೀಶ್ವರೇ  &#8211; ಸಾಮುದ್ರಿಕ )<br />
ಮಹತ್ಕಾರ್ಯಗಳನ್ನು ಸಾಧಿಸುವ, ಮಹಾಸಂಗ್ರಾಮಗಳನ್ನು ಗೆಲ್ಲುವ, ಮಹಾಯೋಗ್ಯತೆಯನ್ನು ಸಾರಿ ಹೇಳುವಂತಿದ್ದವು ಅವು…!!<br />
ತನ್ನೊಲವಿನ ಜೀವಗಳು ಅದೆಷ್ಟೇ ದೂರ ದೂರ ಸಾಗಿದರೂ ಮರಳಿ ತನ್ನೆಡೆಗೆ ಬರಸೆಳೆದುಕೊಳ್ಳುವಂತಿದ್ದವು..<br />
( ದೀರ್ಘ-ಭ್ರೂ-ಬಾಹು-ಮುಷ್ಕಶ್ಚ ಚಿರಂಜೀವೀ ಧನೀ ನರ:)</p>
<p>ಶತ್ರುಮರ್ದನವನ್ನು ಸೂಚಿಸುವ &#8216;ಅರಿಂದಮಾ&#8217; ಎಂಬ ವಿಶಿಷ್ಟರೇಖೆಯೊಂದು ಆತನ ಶರೀರವನ್ನಲಂಕರಿಸಿತ್ತು&#8230;!</p>
<p>ಹಿಮಾಲಯದಂತೆ ಸ್ಥಿರವಾದ, ಮಹಾಸಾಗರದಂತೆ ವಿಶಾಲವಾದ,<br />
ವಜ್ರದಂತೆ ಕಠೋರವಾದ, ಅಂಬರದಂತೆ ಉನ್ನತವಾದ&#8230; ಸುಪುಷ್ಠವಾದ, ಸಮವಾದ ವಕ್ಷಸ್ಥಲ ಆತನದಾಗಿತ್ತು..<br />
ಅಲ್ಲಿ ಅವರಿವರೆನ್ನದೆ ಸಕಲರಿಗೂ ಆಶ್ರಯವಿತ್ತು..!<br />
( ಸ್ಥಿರಂ ವಿಶಾಲಂ ಕಠಿಣಂ ಉನ್ನತಂ ಮಾಂಸಲಂ ಸಮಂ |<br />
ವಕ್ಷೋ ಯಸ್ಯ ಮಹೀಪಾಲಸ್ತತ್ಸಮೋ ವಾ ಭವೇನ್ನರಃ || &#8211; ಸಾಮುದ್ರಿಕ )</p>
<p>ಗಜರಾಜನನ್ನೋ, ಮೃಗರಾಜನನ್ನೋ ಹೋಲುವ ಧೀರ &#8211; ಗಂಭೀರ ನಡಿಗೆಯವನದು&#8230;<br />
ದಾರಿ ತಪ್ಪದ,ಗುರಿ ಮರೆಯದ,ಋಜುವಾದ ಆತನ ನಡೆತೆಯೂ ನಡಿಗೆಯಂತೆಯೇ ಸರಿ..<br />
( ಸಿಂಹರ್ಷಭ ಗಜವ್ಯಾಘ್ರಗತಯೋ ಮನುಜಾ ಮುನೇ |<br />
ಸರ್ವತ್ರ ಸುಖಮೇಧಂತೇ ಸರ್ವತ್ರ ಜಯಿನಃ ಸದಾ || &#8211; ಜಗದ್ವಲ್ಲಭಾ)<br />
ಮನೋಹರವಾದ ಫಲದೊಳಗಿರುವ ಮಧುರ ರಸದಂತೆ&#8230;.<br />
ಭವ್ಯ ಶರೀರದೊಳಗೊಂದು ದಿವ್ಯಚೇತನ&#8230;<br />
ಇದು ಶ್ರೀರಾಮಚಂದ್ರನ ಲಕ್ಷಣ…..!</p>
<p>|| ಹರೇ ರಾಮ ||</p>
]]></content:encoded>
			<wfw:commentRss>http://hareraama.in/blog/%e0%b2%97%e0%b3%81%e0%b2%a1%e0%b2%bf%e0%b2%af-%e0%b2%a8%e0%b3%8b%e0%b2%a1%e0%b2%bf%e0%b2%b0%e0%b2%a3%e0%b3%8d%e0%b2%a3%e0%b2%be-%e0%b2%a6%e0%b3%87%e0%b2%b9%e0%b2%a6%e2%80%a6-2/feed/</wfw:commentRss>
		<slash:comments>3</slash:comments>
		</item>
	</channel>
</rss>
