॥ಶ್ರೀ ಹನುಮಾನ್ ಪಂಚರತ್ನಮ್ ॥
॥ಹರೇರಾಮ॥
ಶ್ರೀರಾಮಚಂದ್ರಾಪುರ ಮಠ ಪೆರಾಜೆ-ಮಾಣಿಯಲ್ಲಿ “ವಿಜಯ ಚಾತುರ್ಮಾಸ್ಯ” ಪುಣ್ಯಕಾಲದ ಮುಖ್ಯಕೇಂದ್ರಬಿಂದು ಶ್ರೀಮಠದಲ್ಲಿ ಸಂಚಾರದಲ್ಲಿರುವ ಆಂಜನೇಯ. ಅಂಜನೇಯನನ್ನು ಚಾತುರ್ಮಾಸ್ಯದ ಎಲ್ಲಾ ದಿನಗಳಲ್ಲಿಯೂ, ನಾನಾ ರೂಪದಲ್ಲಿ, ನಾನಾ ವಿಧದಲ್ಲಿ ಸ್ತುತಿಸುತ್ತಾ ಚಾತುರ್ಮಾಸ್ಯವನ್ನು ಹನುಮಮಯ ಮಾಡಬೇಕಾಗಿದೆ. ಆ ಪ್ರಯುಕ್ತ ಶ್ರೀ ಪೀಠದ ಎಲ್ಲಾ ಶಿಷ್ಯವರ್ಗ ನಮ್ಮ ಪೀಠದ ಸಂಸ್ಥಾಪಕರಾದ ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ “ಶ್ರೀ ಹನುಮಾನ್ ಪಂಚರತ್ನಮ್” ವನ್ನು ಪಠಿಸಿ, ಆಂಜನೇಯನ ಕೃಪೆಗೆ ಪಾತ್ರರಾಗಿ, “ಹನುಮನೊಡನೆ ರಾಮನೆಡೆಗೆ” ಸಾಗಬೇಕಾಗಿದೆ.
~
ಧ್ವನಿಃ ಸಾಕೇತ ಶರ್ಮಾ, ಬೆಂಗಳೂರು
ರಚನೆಃಶ್ರೀ ಶಂಕರಾಚಾರ್ಯ ಭಗವತ್ಪಾದರು
॥ಶ್ರೀ ಹನುಮಾನ್ ಪಂಚರತ್ನಮ್ ॥
ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಂ
ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಮ್ ||೧॥
ವಿಷಯಸುಖಗಳ ಬಯಕೆಯನ್ನೆಲ್ಲ ತ್ಯಜಿಸಿದ, ಸಂತಸದ ಕಣ್ಣೀರಿನಿಂದ ಪುಳಕಿತನಾದ, ಅತ್ಯಂತ ಪರಿಶುದ್ಧನಾದ, ಜಾನಕೀರಮಣನ ಮೊಟ್ಟಮೊದಲ ದೂತನಾದ, ಸುಂದರನಾದ, ವಾಯುಪುತ್ರ ಆಂಜನೇಯನನ್ನು ಇಂದು ಭಾವಿಸುತ್ತೇನೆ.
ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಂ
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಮ್ ||೨॥
ಬಾಲಾರುಣನಂತೆ ಕಾಂತಿಯುಕ್ತವಾದ ಮುಖಕಮಲವುಳ್ಳ, ದಯಾರಸಪ್ರವಾಹದಿಂದ ತುಂಬಿದ ಕಡೆಗಣ್ಣುಳ್ಳ, ಜೀವದಾತನಾದ, ಮನೋಜ್ಞ ಮಹಿಮೆಯುಳ್ಳ, ಅಂಜನಾದೇವಿಯ ಪಾಲಿಗೆ ಭಾಗ್ಯವಾದ ಹನುಮಂತನನ್ನು ಸ್ತುತಿಸುತ್ತೇನೆ.
ಶಂಬರವೈರಿಶರಾತಿಗಮಂಬುಜದಲವಿಪುಲಲೋಚನೋದಾರಂ
ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮವಲಂಬೇ ||೩॥
ಮನ್ಮಥನ ಬಾಣವನ್ನು ದೂರೀಕರಿಸಿದ, ತಾವರೆಯ ದಳದಂತೆ ವಿಶಾಲವಾದ ಕಣ್ಣಿನಿಂದ ಉದಾರನಾದ, ಶಂಖದಂತೆ ಕೊರಳುಳ್ಳ, ವಾಯುದೇವನಿಗೆ ಭಾಗ್ಯವಾದ, ತೊಂಡೆಹಣ್ಣಿನಂತೆ ಕಾಂತಿಯುಕ್ತವಾದ ತುಟಿಯುಳ್ಳ ಆಂಜನೇಯನೊಬ್ಬನನ್ನೇ ನಾನು ಆಶ್ರಯಿಸುತ್ತೇನೆ.
ದೂರೀಕೃತಸೀತಾರ್ತಿಃಪ್ರಕಟೀಕೃತರಾಮವೈಭವಸ್ಫೂರ್ತಿಃ
ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನೂಮತೋ ಮೂರ್ತಿಃ ||೪॥
ಜಾನಕೀದೇವಿಯ ದುಃಖವನ್ನು ದೂರಮಾಡಿದ, ಶ್ರೀರಾಮಚಂದ್ರನವೈಭವದ ಸ್ಪೂರ್ತಿಯನ್ನು ಪ್ರಕಟಪಡಿಸಿದ, ದಶಮುಖ ರಾವಣನ ಕೀರ್ತಿಯನ್ನು ನಾಶಗೊಳಿಸಿದ ಹನುಮಂತನ ಮೂರ್ತಿಯು ಸದಾ ನನ್ನೆದುರಿಗೆ ಶೋಭಿಸಲಿ.
ವಾನರನಿಕರಾಧ್ಯಕ್ಷಂ ದಾನವಕುಮುದಕುಲರವಿಕರಸದೃಕ್ಷಂ
ದೀನಜನಾವನದೀಕ್ಷಂ ಪವನತಪಃಪಾಕಪುಂಜಮದ್ರಾಕ್ಷಮ್ ||೫॥
ವಾನರ ಸೈನ್ಯಕ್ಕೆ ನಾಯಕನಾದ, ದೈತ್ಯಕುಲವೆಂಬ ನೈದಿಲೆಗಳನ್ನು ಸೂರ್ಯನಕಿರಣವಾಗಿ ನಾಶಗೊಳಿಸಿದ, ದೀನಜನರನ್ನು ರಕ್ಷಿಸುವುದರಲ್ಲಿ ದೀಕ್ಷಾಬದ್ಧನಾದ, ವಾಯುದೇವನ ತಪಸ್ಸಿನ ಸಿದ್ಧಗಳ ಸಮೂಹನಾದ, ಹನುಮಂತನನ್ನು ನಾನು ದರ್ಶನ ಮಾಡಿದೆನು.
ಫಲಶ್ರುತಿಃ
ಏತತ್ಪವನಸುತಸ್ಯ ಸ್ತೋತ್ರಂ ಯಃ ಪಠತಿ ಪಂಚರತ್ನಾಖ್ಯಂ ।
ಚಿರಮಿಹ ನಿಖಿಲಾನ್ಭೋಗಾನ್ಫುಂಕ್ತ್ವಾ ಶ್ರೀರಾಮಭಕ್ತಿಭಾಗ್ಭವತಿ ॥೬॥
ಈ ಹನುಮಾನ್ ಪಂಚರತ್ನ ಸ್ತೋತ್ರವನ್ನು ಯಾರು ಪಠಿಸುತ್ತಾರೋ ಅವರು ಬಹುಕಾಲ ಈ ಲೋಕದ ಭೋಗಭಾಗ್ಯಗಳನ್ನು ಅನುಭವಿಸಿ ಶ್ರೀರಾಮಚಂದ್ರನ ಭಕ್ತಿಗೆ ಪಾತ್ರನಾಗುತ್ತಾರೆ.
~*~
“ಬನ್ನಿ, ಹನುಮನಾಗುವ ಮೂಲಕ ರಾಮಸೇವಕರಾಗೋಣ”
~*~
July 23, 2013 at 7:26 AM
harerama
hanumanaguva moolaka ramasevakaraguva bhagya karunisida tamagido vandanegalu.
hareraama.
July 26, 2013 at 7:05 PM
hanumanatha seve maduva manasu, bhakti,shraddhay,hanuman pancharatnna pathisuvadrinda namagella sigali
namaskaraglu.
July 30, 2013 at 11:52 AM
JAI SREE RAM
namasthe to all.
Sree ramabhautharige bayavilla eake endhare
sree ramanu. karunamayanu endhigu bakthara rudhayadhelle vasumaduthare.bakthara rudhayave sree ramana devalaya.
Sree rama baktharige kastavilla dhukkavilla ellavu VIJAYAVEE.eake endhare elli sree ramano alle sree hanumanu.
JAI HANUMAN endhu BHAKTHI indha smarisidhare saku ellavu JAYAM.
By ram
JAI SREE RAM
July 30, 2013 at 11:56 AM
JAI SREE RAM
bagavanthana asirvadhadhindha ellarigu subavagali.
JAI SREE RAM
JAI MARUTHI
August 7, 2013 at 2:36 PM
Anjanaanandanam veeram
Jaanaki shoka naashanam |
Kapeesham Aksha hanthaaram
Vande Lanka bhayankaram ||
September 5, 2013 at 9:08 AM
hare raama
October 27, 2013 at 6:33 PM
jai hanumaaa
dhanyavadagalu,,,
nithya idannu patisuthiddaruu bhaavartha thildiralilla,,,
thilisida hareraamakke ,, dhanyavadagalu
October 11, 2015 at 8:44 AM
Please publish in pdf format