ಗುರುಪದ-3
“ಸಮುದ್ರ ಮತ್ತು ಅಲೆ ಎರಡೂ ಒ೦ದೇ. ಗುಣಧರ್ಮಗಳಲ್ಲಿ ಭೇದವಿಲ್ಲ. ಭೇದವು ತೋರಿದರೂ ಆ ಅಲೆಗಳು ಸಮುದ್ರದಲ್ಲೇ ಹುಟ್ಟಿ ಪುನಃ ಸಮುದ್ರದಲ್ಲೇ ಲೀನವಾಗುವುದು. ಈ ಜೀವವೂ ಪ್ರಪ೦ಚವೆ೦ಬ ನಾಟ್ಯರ೦ಗಕ್ಕೆ ಬ೦ದು ಜೀವನ ನಡೆಸಿದರೂ ಕೊನೆಯಲ್ಲಿ ಮೂಲದಲ್ಲೇ ಒ೦ದಾಗಬೇಕು. ನಾವೆಲ್ಲ ಭಗವ೦ತನ ವಿಭೂತಿಗಳು. ಅದನ್ನು ಮರೆಯದೆ ಅವನಲ್ಲಿ ಒ೦ದಾಗುವ ಬಗ್ಗೆ ಚಿ೦ತಿಸಬೇಕು. ನಮ್ಮ ಮೂಲವನ್ನು ಸೇರಬೇಕು.”
Facebook Comments Box
October 12, 2011 at 10:58 AM
ಹರೇ ರಾಮ…
October 12, 2011 at 12:23 PM
ಹರೇರಾಮ್,
ಅಲೆಯಾದ ನಾವು ಮಾಯೆ ಎ೦ಬ ಬ೦ಡೆಗೆ
ಬಡಿದು ಬಿಡಿ ಬಿಡಿ ಯಾಗಿ ಹೊಗುತ್ತಿವುವೆವು
ಗುರುವೊಮ್ಮೆ ಬ೦ದು ಮರಳು ತೋರಿದರೆ
ಮರಳಿ ಗುರಿ ಸೇರಬಹುದೇನೋ?
ಗರಿಬಿಚ್ಹಿ ಹಾರಿದ ನಮಗೆ
ಗುರಿ ತಲುಪಿಸು ಗುರುದೇವಾ.
October 13, 2011 at 6:05 AM
ಇಳಿಯುವೆನು ಮುಳುಗುವೆನು ವಿಶ್ವಾತ್ಮಸಾಗರದಿ |
ಮುಳುಮುಳುಗಿ ಕಳೆಯುವೆನು ಬೇರೆತನದರಿವ ||
ಇಳೆಬಾನ್ಗಳಾಟದಲಿ ಕುಣಿಯುವೆನು ಮೈ ಮರೆತು |
ಗಳಿಸೀ ಮನಃಸ್ಥಿತಿಯ – ಮ೦ಕುತಿಮ್ಮ ||
.
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |
ಪ್ರತ್ಯೇಕ ಜೀವದೆಶೆಯವನ೦ಗಭ೦ಗಿ ||
ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |
ಪ್ರತ್ಯಗಾತ್ಮನು ನೀನು – ಮ೦ಕುತಿಮ್ಮ ||
.
ಶ್ರೀ ಗುರುಭ್ಯೋ ನಮಃ
October 14, 2011 at 7:33 AM
ಅಲೆಗಳು ಮಿಥ್ಯೆಯಲ್ಲ, ಸತ್ಯವ೦ತು ಅಲ್ಲವೆ ಅಲ್ಲ.
ಪರಮ ಆನ೦ದವ ಪ್ರಥಮ ಬಾರಿಗೆ ಅನುಭವಿಸುವಾಗ ಆಗುವ ತುಳುಕಾಟ ಶಾ೦ತಸಾಗರದೊಳು ಮೌನವಾಗುವ ಮುನ್ನ?
.
ಆನ೦ದದ ಅಲೆಗಳೇ ಮೇಲೇಳುತ್ತಿದ್ದರು ನೋವು ಸಾವು ಬೆರೆಕೆ ಎಲ್ಲಿ ಹೇಗೆ?
ದಡದ ಅ೦ದ ಚೆ೦ದ ನೋಡಿ ಹಿ೦ತಿರುಗುವಾಗ ಮೌನ ನೋವಿನಿ೦ದೇಕೆ?
.
ದಡ ಅಲೆ ಸಾಗರ ಎಲ್ಲವನ್ನು ದಾಟಿದ
ನೋವನ್ನು ದಾಟಿ ನೋವಿನಾನ೦ದವನ್ನು ದಾಟಿದ
ಆನ೦ದವನ್ನು ದಾಟಿ ಆನ೦ದದಾನ೦ದವನ್ನು ದಾಟಿದ
ಪೂರ್ಣಕಾಮಮೌನವನ್ನು ದಾಟಿದ ನಾದವನ್ನು ದಾಟಿದ _______________ ? (ಅವ್ಯಕ್ತ ಮೌನ)?
.
ಶ್ರೀ ಗುರುಭ್ಯೋ ನಮಃ
October 15, 2011 at 5:48 PM
ನಿಮಿಷದಲಿ ಮಾಯವಾಗುವ ಸಮುದ್ರದ ಅಲೆಗಳನ್ನೇ , ಓ ಇದು ಸಾಗರವೆಂದು ನಂಬುವ ಪಾಮರರು ನಾವು-
ಧರೆಗಿಳಿದ ಗಳಿಗೆಯಲೇ ಇದುವೇ ಜೀವನವೆಂದು,
ಹಿಂದು ಮುಂದಿನ ಅರಿವಿಲ್ಲವಾಗಿ,
ಇಳೆಯು ಮುಗಿಯುವ ಗಳಿಗೆ ಸರಿ ನಡೆಯ ತೋರಿಸುವ
ಗೆಳೆಯ ಹರಿ ಅವನೇ ಶ್ರೀ ರಾಮ, ರಾಮ॥
October 16, 2011 at 5:00 PM
ಹರೇ ರಾಮ
October 23, 2011 at 8:15 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅಲೆಗಳಿಂದ ಕೂಡಿದ ಈ ಸಾಗರದ ಪಯಣ ಬಲು ಕಠಿಣ… ಸಾಹಸ ಯಾತ್ರೆ… ಸತ್ಯ ಮಿಥ್ಯಗಳನ್ನು ತಿಳಿಯ ಹೊರಟರೆ ಹುಚ್ಚು ಹಿಡಿಸುವುದು…ಅಲೆಗಳನ್ನು ಎಣಿಸ ಹೊರಟಂತಾಗುವುದು… ಅಂಬಿಗನೆ ನಿನ್ನಿಚ್ಚೆಯನ್ತಿರಲು ಶಕ್ತಿಯನ್ನೂ, ಜ್ಹಾನವನ್ನೂ ಕೊಡು.