ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ ೧೯೯೪ರ ಏಪ್ರಿಲ್ ನಲ್ಲಿ ಸಂನ್ಯಾಸದೀಕ್ಷೆ ಪಡೆದರು.
೧೯೯೯ರ ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಅಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ [...]
ರವಿವಾರ, ಸೆಪ್ಟೆಂಬರ 5th, 2010
ಒಂದು ಸಲ ಒಬ್ಬ ಅಮೇರಿಕಾ ದೇಶದವ ಜಗತ್ತಿನ ಎಲ್ಲಾ ಪ್ರಸಿದ್ಧ ಚರ್ಚ್ಗಳ ಬಗ್ಗೆ ಒಂದು ಪುಸ್ತಕ ಬರೀಬೇಕು ಅಂತ ಹೊರಟ. ಎಲ್ಲಾ ದೇಶಗಳ ವೈಶಿಷ್ಟ್ಯಪೂರ್ಣ ಚರ್ಚುಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು ಅಂತ ಒಂದೊಂದೇ ದೇಶಕ್ಕೆ ಭೇಟಿ ಕೊಡತೊಡಗಿದ.
ಮೊದಲು ಚೀನಾ ದೇಶಕ್ಕೆ ಹೋದ.ಅಲ್ಲಿದ್ದ ಪ್ರಸಿದ್ಧ ಚರ್ಚಿಗೆ ಭೇಟಿ ಇತ್ತು ಚರ್ಚಿನ ಫೋಟೋ ತೇಗಿತಾ ಇರಬೇಕಾದ್ರೆ ಅಲ್ಲೊಂದು ಅಚ್ಚರಿ ಕಾಣಿಸ್ತು. ಗೋಡೆ ಒಂದರ ಮೇಲೆ ಬಂಗಾರದ ಫೋನ್ ಒಂದನ್ನು ತೂಗು ಹಾಕಿದ್ರು. ಫೋನ್ ಪಕ್ಕದಲ್ಲೇ ಒಂದು ಬೋರ್ಡ್ನಲ್ಲಿ ’ಒಂದು [...]
Sri Samsthana
3 comments Read this
ಶುಕ್ರವಾರ, ಆಗಸ್ತು 6th, 2010
ಶ್ರೀ ಆರ್. ಎಸ್. ಅಗರವಾಲ್
ಇಮಾಮಿ ಲಿಮಿಟೆಡ್ ಅಧ್ಯಕ್ಷರು
ಶ್ರೀಗಳ ಜೊತೆಗೆ ಅಗರವಾಲ್ ಮತ್ತು ಗೊಯೆಂಕಾ ದಂಪತಿಗಳು.
ಅಲೌಕಿಕ ಶಕ್ತಿಯೊಂದನ್ನು ವರ್ಣಿಸುವುದಾಗಲೀ, ಆ ಶಕ್ತಿಸ್ವರೂಪವನ್ನು ಶಬ್ದಗಳಲ್ಲಿ ಕಟ್ಟುವುದಾಗಲೀ ಸರಳವಲ್ಲ. ಅವರ ಸಾಮೀಪ್ಯದಲ್ಲಿ ಕುಳಿತು ನಾವೇನನ್ನು ಪಡೆದಿದ್ದೇವೆ ಎನ್ನುವುದು ವರ್ಣನೆಗೆ ಮೀರಿದ ಸಂಗತಿ. ಅವರ ರೋಮ ರೊಮಗಳಲ್ಲಿ ಜ್ಞಾನ, ಶಾಂತಿ, ಶಕ್ತಿ, ಪ್ರಕಾಶಗಳು ತುಂಬಿದೆಯೆಂದರೆ; ಅವರಿಂದ ಆನಂದದ ಪ್ರವಾಹವೇ ಹರಿದು ಬರುತ್ತದೆಯೆಂದರೆ; ಆ ಆನಂದ ನಿಮ್ಮನ್ನು ತಲುಪುತ್ತದೆಯೆಂದರೆ; ನಿಮ್ಮನ್ನು ಅದು ಚರಮಾನಂದ, ಬ್ರಹ್ಮಾನಂದ, ಪರಮಾನಂದದ ಸ್ಥಿತಿಗೆ ಏರಿಸುವಷ್ಟು ಆನಂದಮಯಗೊಳಿಸುತ್ತದೆಯೆಂದರೆ ಆ ವ್ಯಕ್ತಿ [...]
Editor@HareRaama.in
7 comments Read this
ಸೋಮವಾರ, ಆಗಸ್ತು 30th, 2010
ರಾಮಚಂದ್ರಾಪುರ ಮಠ ಅಥವಾ ಗುರುಗಳು ಎಂದರೆ ನನಗೆ ಮೊದಲು ನೆನಪಾಗುವುದು ಏನು? ಪೀಠಾರೋಹಣ ಸಮಾರಂಭದಲ್ಲಿ ಮೆರವಣಿಗೆಯಲ್ಲಿ ಕೆಂಪು ಮಡಿ ಹೊದ್ದು ಪುಟ್ಟ ದೇವರ ಮೂರ್ತಿಯಂತೆ ಕೂತಿದ್ದ, ‘ಅದೇ, ಅವ್ರೇ ಹೊಸಾ ಗುರುಗಳು’ ಅಂತ ಅಪ್ಪ ತೋರಿಸಿದ್ದ ಚಿತ್ರ? ಊರ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಬಂದ ಹತ್ತಾರು ಕಾರುಗಳಲ್ಲೊಂದರಲ್ಲಿ ಕೂತಿದ್ದು, ನಮ್ಮನೆ ಎದುರಿಗೆ ನಿಂತಾಗ ಅಪ್ಪ ಹಿಡಿದು ನಿಂತಿದ್ದ ಕಾಯಿ-ಹಣ್ಣುಗಳನ್ನು ಮುಟ್ಟಿ ಮುಗುಳ್ನಕ್ಕ ಕಾವಿ ವಸ್ತ್ರಧಾರಿ? ಸೀಮಾ ಪರಿಷತ್ ಉದ್ಘಾಟನಾ ಸಮಾರಂಭದಲ್ಲಿ, ಸೀಮೆಯ ದೇವಸ್ಥಾನದಲ್ಲಿ ಉದ್ದುದ್ದ ಸರತಿಯ ಸಾಲಲ್ಲಿ ಕಾದು [...]
Editor@HareRaama.in
16 comments Read this
ಶುಕ್ರವಾರ, ಜೂನ್ 25th, 2010
Eye day Invitation
Info@HareRaama.in
0 comment Read this
ಸೋಮವಾರ, ಸೆಪ್ಟೆಂಬರ 28th, 2009
ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಉದ್ದೇಶ ; ಗೋರಕ್ಷೆ,ಗ್ರಾಮರಕ್ಷೆ..
ವ್ಯಾಪ್ತಿ ; ಸಂಪೂರ್ಣ ಭಾರತ ದೇಶ
ದೂರ ; ೨೦,೦೦೦ ಕಿಲೋಮೀಟರ್ ಗಳು
ಪ್ರಾರಂಭ ; ಕುರುಕ್ಷೇತ್ರ
ಸಮಾಪನ ; ನಾಗಪುರ
Vishwamangala gou-gramayaatraa
Sri Samsthana
7 comments Read this
ಶನಿವಾರ, ಏಪ್ರಿಲ್ 21st, 2007
ಜಾಗತಿಕ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆದ ಗೋವುಗಳ ಕುರಿತಾದ ವಿಶ್ವಮಟ್ಟದ ಸಮ್ಮೇಳನ..
ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಕಾಲ ; ೨೦೦೭ ಎಪ್ರಿಲ್ ೨೧ ರಿಂದ ೨೯ರ ವರೆಗೆ..
ದೇಶ ; ಹೊಸನಗರ ಸಮೀಪದ ಶರಾವತೀ ತೀರದ ಶ್ರೀ ರಾಮಚಂದ್ರಾಪುರ ಮಠ..
ಭಾಗವಹಿಸಿದ ಭಾಗ್ಯಶಾಲಿಗಳು ; ೨೦ ದೇಶಗಳ ಸುಮಾರು ೨೫ ಲಕ್ಷ ಗೋಪ್ರೇಮಿಗಳು ಗೋಪ್ರೇಮಿಗಳು ..
ಜಗದೊಳಿತಿಗಾಗಿ ಜಗಜ್ಜನನಿಯ ಜಾಗತಿಕ ಹಬ್ಬ..
Sri Samsthana
2 comments Read this
ಗುರುವಾರ, ಸೆಪ್ಟೆಂಬರ 2nd, 2010
2 ಸೆಪ್ಟೆಂಬರ್ 2010
ವಿಜಯ ಕರ್ನಾಟಕಃ ಸಾತ್ವಿಕ ಸೆಳೆತದ ಕೇಂದ್ರವೇ ಶ್ರೀಕೃಷ್ಣ ಪರಮಾತ್ಮ
Info@HareRaama.in
0 comment Read this
ಗುರುವಾರ, ಸೆಪ್ಟೆಂಬರ 2nd, 2010
2 ಸೆಪ್ಟೆಂಬರ್ 2010
ಸಂಯುಕ್ತ ಕರ್ನಾಟಕಃ ಲೋಕಗುರು ಶ್ರೀಕೃಷ್ಣ
Info@HareRaama.in
0 comment Read this
ಗುರುವಾರ, ಸೆಪ್ಟೆಂಬರ 2nd, 2010
2 ಸೆಪ್ಟೆಂಬರ್ 2010
ಉದಯವಾಣಿಃ ಶ್ರೀಕೃಷ್ಣ ಲೋಕಗುರುಃ ರಾಘವೇಶ್ವರ ಶ್ರೀ
Info@HareRaama.in
0 comment Read this
ಮಂಗಳವಾರ, ದಶಂಬರ 15th, 2009
ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಲದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ,
ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ..
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅನಂತಶಿಷ್ಯ ಸ್ತೋಮದೊದಗೂಡಿ ಕೈಗೊಂಡರು..
KP Edappady
0 comment Read this
ರವಿವಾರ, ನವೆಂಬರ 15th, 2009
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ಸಮಿತಿ:
Info@HareRaama.in
1 comment Read this
ಗುರುವಾರ, ಸೆಪ್ಟೆಂಬರ 2nd, 2010
|| ಹರೇರಾಮ ||
ಅದ್ಭುತಾಕಾರದ ಅಗ್ನಿಗೋಳಗಳು..!
ಅನಂತ ಅಂತರಾಳಗಳು..!
ಬೆಳಕ ಬೀರುವ ತಾರೆಗಳು..!
ಬೆಳಕ ಹೀರುವ ಗ್ರಹಗಳು..!
ಒಂದನ್ನೊಂದು ಬಿಡದಂತೆ ಹಿಡಿದಿಡುವ ಆಶ್ಚರ್ಯಕರ ಸೆಳೆತ..!
ಕ್ಷಣಮಾತ್ರವೂ ನಿಲ್ಲದ ಅವಿಶ್ರಾಂತ ಗತಿ..!
ಒಂದರ ಸುತ್ತ ಇನ್ನೊಂದು ಸುತ್ತುವ ಅನಿರ್ವಚನೀಯ ಪ್ರೀತಿ..!
ಮಾನವ ಮತಿಯ ಸಕಲ ಕಲ್ಪನೆಗಳಿಗೂ ಮೀರಿದ ವಿಸ್ತಾರದ ಅನಂತಕೋಟಿ ಬ್ರಹ್ಮಾಂಡ ಮಂಡಲಗಳ ಮಧ್ಯದಲ್ಲೊಂದು ಪುಟ್ಟ ಭೂಮಂಡಲ..!
ಮೂರ್ತಿ ಕಿರಿದಾದರೂ ಕೀರ್ತಿ ಕಿರಿದಲ್ಲವದರದ್ದು..!
ಬಗೆದು ನೋಡಿದರೆ ಬ್ರಹ್ಮಾಂಡದಲ್ಲೆಲ್ಲ್ಲೂ ಜೀವಗಳ ಸುಳಿವಿಲ್ಲ ..!
ಜೀವಸೆಲೆಯಿರುವುದು ನಮ್ಮ ಹೆಮ್ಮೆಯ ಭೂಮಿಯಲ್ಲಿ ಮಾತ್ರವೇ..!
ಅನಂತ ತೇಜಃಪುಂಜಗಳಿರಬಹುದು ಬ್ರಹ್ಮಾಂಡದಲ್ಲಿ..
ಆದರೆ ಅಸಂಖ್ಯ ಚೇತನಗಳು ಬಗೆಬಗೆಯ ರೂಪದ, ಬಗೆಬಗೆಯ ರೀತಿಯ ಬದುಕು ನಡೆಸುವುದು ಭೂಮಿಯಲ್ಲಿ [...]
Sri Samsthana
23 comments Read this
ರವಿವಾರ, ಆಗಸ್ತು 8th, 2010
|| ಹರೇರಾಮ ||
ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ…
ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ…
ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ…
ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ…
ಅನಂತಶಾಂತಿಯ ಆಶ್ರಮದ ಅಮೃತಪರಿಸರದಲ್ಲಿ ಬ್ರಹ್ಮತೇಜೋನಿಧಿಗಳಾದ ವಸಿಷ್ಠರೊಂದಿಗೆ ಸಂಗಮಿಸಿದನು ಶೌರ್ಯನಿಧಿಯಾದ ಕೌಶಿಕ…
ಉತ್ತರ ದಕ್ಷಿಣ ಧ್ರುವಗಳನ್ನು ನರರು ಸೇರಿಸಲುಂಟೇ…?
ಸಾಕ್ಷಾತ್ ವಿಧಿಯೇ ಏರ್ಪಡಿಸಿರಬೇಕು ಈ ಅಪೂರ್ವ ಸಂಯೋಗವನ್ನು…!
ಅದೆಷ್ಟು ವಿಭಿನ್ನತೆ ಇವರೀರ್ವರ ವ್ಯಕ್ತಿತ್ವಗಳಲ್ಲಿ…!?
ಒಬ್ಬ ಜಯಿಸುವವರಲ್ಲಿ ಶ್ರೇಷ್ಠ…
ಇನ್ನೊಬ್ಬನೋ ಜಪಿಸುವವರಲ್ಲಿ ಶ್ರೇಷ್ಠ..!
ಶಸ್ತ್ರಗಳಿಂದ ಶತ್ರುಗಳನ್ನು ಮೆಟ್ಟಿ ನಿಂತವನೊಬ್ಬ,..
ಶಾಸ್ತ್ರಗಳಿಂದ ಶತ್ರುತ್ವವನ್ನೇ ಮೀರಿ ನಿಂತವನಿನ್ನೊಬ್ಬ..!
ಬಾಹುಬಲದಿಂದ ಬಾಹ್ಯಪ್ರಪಂಚವನ್ನಾಳುವವನೊಬ್ಬ…
ಭಾವಬಲದಿಂದ ಅಂತ:ಪ್ರಪಂಚದಲ್ಲಿ ಬೆಳಗುವವನಿನ್ನೊಬ್ಬ..!
ಬಾಣಗಳಿಂದ ಲಕ್ಷ್ಯಗಳನ್ನು ಭೇದಿಸುವನೊಬ್ಬ…
ಧ್ಯಾನದಿಂದ ಪರಮಲಕ್ಷ್ಯವನ್ನೇ ತಲುಪಿಸುವನಿನ್ನೊಬ್ಬ…!
ರಾಜದಂಡದಿಂದ ಪಾತಕಿಗಳನ್ನು ದಂಡಿಸುವವನೊಬ್ಬ…
ಬ್ರಹ್ಮದಂಡದಿಂದ ಪತಿತರನ್ನುದ್ಧರಿಸುವವನಿನ್ನೊಬ್ಬ…!
ಒಬ್ಬನದು [...]
Sri Samsthana
17 comments Read this
| « Aug |
|
Oct » |
| S | M | T | W | T | F | S |
|---|---|---|---|---|---|---|
| 1 | 2 | 3 | 4 | |||
| 5 | 6 | 7 | 8 | 9 | 10 | 11 |
| 12 | 13 | 14 | 15 | 16 | 17 | 18 |
| 19 | 20 | 21 | 22 | 23 | 24 | 25 |
| 26 | 27 | 28 | 29 | 30 | ||