ಪರಮ ಪೂಜ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅತ್ಯಮೂಲ್ಯ ಪ್ರವಚನದೊಂದಿಗೆ ವಿವಿಧ ದೃಶ್ಯ ಶ್ರಾವ್ಯ ಕಲಾ ಮಾಧ್ಯಮಗಳ ಮೂಲಕ ಶ್ರೀ ಮದ್ವಾಲ್ಮೀಕೀ ರಾಮಾಯಣದ ಪುನರವತರಣದ “ಶ್ರೀ ರಾಮಕಥಾ” ಮಾಲಿಕಾ ಸರಣಿ ಮಂಗಳೂರಿನ ಶ್ರೀ ಭಾರತೀ ಕಾಲೇಜು ಪ್ರಾಂಗಣದಲ್ಲಿ ಜನವರಿ 28 ರ ಸಾಯಂ ಸಂಧ್ಯೆ ಸರಿಯಾದ ಸಮಯಕ್ಕೇ ಆರಂಭಗೊಂಡಿತು. ಶ್ರೀ ಸಂಸ್ಥಾನದೊಂದಿಗೆ… Continue Reading →
ಗೋಕರ್ಣ. ಸೂರ್ಯನಿಂದ ಪ್ರಾರಂಭಗೊಂಡ ಇಕ್ಷ್ವಾಕು ವಂಶದ ರಾಜರೆಲ್ಲ ಗರ್ಭದಿಂದಲೇ ಪರಿಶುದ್ಧರು. ಸೂರ್ಯನಂತೆಯೇ ಪ್ರಖರತೇಜಸ್ವಿಗಳು. ಫಲಸಿದ್ಧಿಯವರೆಗೂ ನಿರಂತರವಾಗಿ ಪರಿಶ್ರಮ ಪಟ್ಟವರು. ಚತುಸ್ಸಮುದ್ರ ಪರ್ಯಂತವಾದ ವಿಶಾಲವಾದ ಭೂಖಂಡಕ್ಕೆ ಒಡೆಯರಾದವರು, ಸಮಯ ಬಂದಾಗ ಸ್ವರ್ಗಕ್ಕೆ ಹೋಗಿ ದೇವತೆಗಳಿಗೂ ಕೂಡಾ ಸಹಾಯ ಮಾಡುತ್ತಿದ್ದ ಪರಾಕ್ರಮಿಗಳು. ಚಂದ್ರನಲ್ಲಿ ಕಳಂಕವಿದೆ. ಆದರೆ ಸೂರ್ಯನಲ್ಲಿ ಅದಿಲ್ಲ. ಅದರಂತೆಯೇ ಈ ವಂಶದವರಲ್ಲಿಯೂ ಎಲ್ಲಿಯೂ ದೋಷದ ಲೇಶವೂ ಇಲ್ಲ…. Continue Reading →
ಗೋಕರ್ಣ- ಮಹಾತ್ಮರು ಎಂದೂ ತಮ್ಮ ಸ್ವಾರ್ಥಕ್ಕಾಗಿ ಬದುಕುವವರಲ್ಲ. ಲೋಕೋಪಕಾರವೇ ಅವರ ಜೀವನೋದ್ದೇಶ. ನಮ್ಮ ಜೀವನದ ಭಾಗ್ಯದಿಂದಾಗಿಯೇ ಅಂತಹ ಮಾರ್ಗದರ್ಶಕ ಗುರು ಸಿಗುತ್ತಾನೆ. ಆಗ ಅವರನ್ನನುಸರಿಸಿದರೆ ಮಾತ್ರ ಬದುಕಿನ ಎಲ್ಲ ಒಳಿತುಗಳನ್ನು ಪಡೆಯಬಹುದು. ಆದರೆ ಸಂತ ಸಮಾಗಮ ಸುಲಭವಲ್ಲ. ಇದಕ್ಕೆ ನಮ್ಮ ನಿರಂತರ ಸಾಧನೆ, ಪರಿಶ್ರಮ, ಕಾತರ ಅಗತ್ಯ. ಪಡೆಯುವ ಅರ್ಹತೆಯೂ ಇರಬೇಕು. ಇಂತಹ ಸನ್ಮಾರ್ಗ ಪ್ರವರ್ತಕರಾದ… Continue Reading →
ಗೋಕರ್ಣ. ರಾಜ್ಯದ ಮಾಜಿ ಶಿಕ್ಷಣ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ ಅವರು ದಿ. 9 ಗುರುವಾರದಂದು ಶ್ರೀಕ್ಷೇತ್ರಗೋಕರ್ಣಕ್ಕೆ ಆಗಮಿಸಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗವನ್ನು ಅರ್ಚಿಸಿದರು. ಈ ಸಂದರ್ಭದಲ್ಲಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ ಶ್ರೀ ಚಂದ್ರಶೇಖರ ಗೋಕರ್ಣ ಪರಶಿವನ ಆತ್ಮಲಿಂಗವನ್ನೇ ಪಡೆದು ಭೂಕೈಲಾಸ ಎಂದು ಪ್ರಸಿದ್ಧವಾದ ದಿವ್ಯಸನ್ನಿಧಿ. ಪ್ರಾಚೀನ ಕಾಲದಿಂದಲೂ ವಿದ್ಯಾ… Continue Reading →
ಮಂಗಳೂರು ಜನವರಿ 02: ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನ ಕಟ್ಟಡ ವಿಸ್ತರಣೆಯ ಶಂಕುಸ್ಥಾಪನೆಯು ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳವರ ಕೃಪಾಶೀರ್ವಾದಗಳೊಂದಿಗೆ ವೈದಿಕ ಕಾರ್ಯಕ್ರಮಗಳ ಸಹಿತ ಇಂದು ನಡೆಯಿತು. ಶಂಕುಸ್ಥಾಪನೆಯನ್ನು ಕಾರ್ಪೋರೇಶನ್ ಬ್ಯಾಂಕಿನ ಉಪಮಹಾಪ್ರಭಂಧಕರಾದ ಶ್ರೀ ಎಂ. ನಾರಾಯಣ ಭಟ್ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಆದರ್ಶ ವ್ಯಕ್ತಿಗಳಾಗಿ ಎಲ್ಲಾ ವಿಚಾರಗಳಲ್ಲಿ… Continue Reading →
ಗೋಕರ್ಣ: ೧೩. ನಮ್ಮ ಈ ಬದುಕು ಭಗವಂತನ ಕೊಡುಗೆ. ಇಲ್ಲಿ ನಾವು ಕೇವಲ ಸಾಧನ ಮಾತ್ರ. ಯಾವ ಕಾರ್ಯದಲ್ಲಿಯೂ ನಮಗೆ ಸ್ವತಂತ್ರಕತೃತ್ವವಿಲ್ಲ. ಎಂದಾದರೂ ಇದು ನಮ್ಮದೇ ಸಾಧನೆಯೆಂಬ ಭಾವ ಬಲಿತರೆ ಅಹಂಕಾರ ಅಮರಿಕೊಂಡರೆ ನಮ್ಮ ಪತನಕ್ಕೆ ಹೆಚ್ಚು ಸಮಯವಿಲ್ಲ ಎಂದೇ ಅರ್ಥ. ಪ್ರಭು ಶ್ರೀರಾಮಚಂದ್ರ ಈ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮವನ್ನು ತುಂಬ ಸುಂದರವಾಗಿ ನಿರೂಪಿಸಿದ್ದಾನೆ. ಇದಕ್ಕೆ… Continue Reading →
ಗೋಕರ್ಣ: ೧೨.ನಾವು ನಮ್ಮ ಬದುಕಿನಲ್ಲಿ ನಾವು, ನಮ್ಮ ಶರೀರ, ಬಳಗ, ನಮ್ಮ ಕುಟುಂಬ ಎಂಬ ಸೀಮಿತವಾದ ಬೇಲಿಯನ್ನು ಹಾಕಿಕೊಂಡು ಜೀವಿಸುತ್ತೇವೆ. ಆದರೆ ಈ ಸೀಮೆಯನ್ನು ದಾಟಿ ಹೋಗಿ ಸಮಾಜದತ್ತ ಕಣ್ಣು ಹೊರಳಿಸಿದರೆ, ನಮ್ಮಾತ್ಮದ ವಿಸ್ತಾರವನ್ನು ಮಾಡಿಕೊಂಡು ವಿಶ್ವಕುಟುಂಬಿಯಾಗುವ ಪ್ರಯತ್ನವನ್ನು ಮಾಡಿದರೆ ಆಗುವ ಅನುಭೂತಿಯೇ ಬೇರೆ. ಎಲ್ಲರನ್ನೂ ನಮ್ಮವರೆಂದುಕೊಂಡು ವ್ಯವಹರಿಸಿದಾಗ ಆಗುವ ಸಂತೋಷ ಅನಿರ್ವಚನೀಯವಾದದ್ದು. ಸೀಮೋಲ್ಲಂಘನವು ಯತಿಗಳಿಗೆ… Continue Reading →
ಗೋಕರ್ಣ:೧೦ ಲೋಕಕ್ಕೇ ಬೆಳಕು ನೀಡುವ ಸೂರ್ಯನಿಂದ ಪ್ರಸಿದ್ಧವಾದ ವಂಶದಲ್ಲಿ ಹುಟ್ಟಿ ಮಾನವರಾಗಿ ಹೇಗೆ ಬಾಳಬೇಕು ಎಂಬುದನ್ನು ವಿಶ್ವಕ್ಕೆ ಆದರ್ಶಮಯವಾದ ತನ್ನ ಜೀವನದ ನಡೆನುಡಿಗಳಿಂದ ತೋರಿಸಿಕೊಟ್ಟವನು ಮರ್ಯಾದಾಪುರುಷೋತ್ತಮನೆಂದೇ ಖ್ಯಾತನಾದ ಪ್ರಭು ಶ್ರೀರಾಮಚಂದ್ರ. ದಿವಿಭುವಿಗಳಿಗೆ ಧರ್ಮದ ಸೇತುವನ್ನು ಕಟ್ಟಿ ಅವತಾರ ಕಾರ್ಯವನ್ನು ಪೂರೈಸಿದ ಆ ಮಹಾತ್ಮನೇ ಆರಾಧ್ಯದೈವವಾದ ನಮ್ಮ ಈ ಮಠದಲ್ಲಿ ಸದಾ ಆತನ ಅರ್ಚನೆ, ಸ್ಮರಣೆ… Continue Reading →