“ಈ ಶ್ಲೋಕವನ್ನು ಕೇಳದವರು ಯಾರು? ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ | ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೇವಮಾಹ್ನಿಕಮ್ ||” ಗುರು ವಿಶ್ವಾಮಿತ್ರರು, ಪ್ರಭು ~ ಮಗು ಶ್ರೀರಾಮನನ್ನು ಉತ್ಥಾನಗೊಳಿಸಲು ಮಾಡಿದ ಸುಪ್ರಭಾತವಿದು. ಜೀವಮಾನದಲ್ಲಿ ಮೊದಲ ಬಾರಿಗೆ ಎಲೆಯ ಹಾಸಿಗೆಯಲ್ಲಿ ಮಲಗಿರುವ ರಾಮನನ್ನು ಬೆಳಗಿನ ಜಾವ ಎಬ್ಬಿಸ್ತಾರೆ ವಿಶ್ವಾಮಿತ್ರರು.. ಶ್ಲೋಕದ ಸರಳಾರ್ಥ ಹೀಗೆ: ಹೇ… Continue Reading →
ಪ್ರೀತಿ ಇರಬೇಕು, ಮೋಹ ಇರಬಾರದು. ಪ್ರೀತಿ ನಂಟು, ಮೋಹ ಅಂಟು. ಪ್ರೀತಿಯು ಸುಖಪ್ರದ. ಮೋಹ ದುಃಖಪ್ರದ. ಮೋಹ ಅಧರ್ಮ. ಮೋಹದಿಂದ ಕೂಡಿದವನಿಗೆ ಯಾವುದು ಸರಿ , ಯಾವುದು ತಪ್ಪು ಎಂದು ಯೋಚಿಸುವ ವಿವೇಕ ಇರುವುದಿಲ್ಲ. ವಸ್ತು ಅಥವಾ ವ್ಯಕ್ತಿ ಮೇಲೆ ಮೋಹ ಉಂಟಾದಾಗ ಏನಾಗುತ್ತದೆ ಎಂಬುದಕ್ಕೆ ದಶರಥ ಉದಾಹರಣೆ. ರಾಮನ ಮೇಲೆ ಮೋಹ ಬಂದಾಗ ದಶರಥನಿಗೆ… Continue Reading →
ಕಷ್ಟಗಳು ಬರುವಾಗ ಸಾಲುಸಾಲಾಗಿ ಬರುತ್ತವೆ. ಇದು ಕಷ್ಟ ಕಂಡವರ ಮಾತು.. ಯುಕ್ತಿ ಹೇಳುತ್ತದೆ, ಅದು ಸತ್ಯ ಅಂತಾದರೆ ಶ್ರೇಯಸ್ಸೂ ಕೂಡ ಹಾಗೆಯೇ, ಸಾಲುಸಾಲಾಗಿ ಬರುತ್ತವೆ. ನವಮಿ ತಿಥಿ, ಪುನರ್ವಸು ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ – ಶ್ರೀರಾಮ ಪುಷ್ಯ ನಕ್ಷತ್ರ, ಮೀನ ಲಗ್ನದಲ್ಲಿ – ಭರತ ಪಂಚಮದಲ್ಲಿ ಗುರು ಮತ್ತು ಚಂದ್ರ.. ಪಂಚಮ ಅಂದ್ರೆ ಮನಸ್ಸು, ಮನಸಲ್ಲಿ… Continue Reading →
ದೀಪದ ಜ್ವಾಲೆ ಬೇಕು ನಿಜ ಅದರರ್ಥ ಎಣ್ಣೆ, ಬತ್ತಿ, ಪಾತ್ರ ಬೇಡ ಎಂಬುದಲ್ಲ; ಮಸ್ತಿಷ್ಕವೇ ಪ್ರಧಾನ ಎಂಬುದು ನಿಜ, ಆದರೆ ಕಣ್ಣು, ಕೈಕಾಲುಗಳು, ಜಠರ, ಹೃದಯಗಳು ಇಲ್ಲದಿದ್ದರೆ ಮಸ್ತಿಷ್ಕವು ಇಲ್ಲ; ಅವುಗಳಿದ್ದರೆ ಮಾತ್ರ ಮಸ್ತಿಷ್ಕ ಇರುತ್ತದೆ.. ದೇವಸ್ಥಾನದಲ್ಲಿ ದೇವರು ಪ್ರಧಾನ, ಆದರೆ ಪೂಜಾರಿ,ದೀಪಗಳು ಇವೆಲ್ಲ ಅಂಗಗಳು! ಕೇಂದ್ರ ಹೇಗೆ ಮುಖ್ಯವೋ, ಅಂಗಗಳೂ ಅಷ್ಟೇ ಮುಖ್ಯ, ಒಂದಕ್ಕೊಂದು… Continue Reading →
ದಶರಥನ ಪುತ್ರ ಕಾಮೇಷ್ಠಿಯಲ್ಲಿ ಹವಿರ್ಭಾವಕ್ಕಾಗಿ ನೆರೆದರು ದೇವತೆಗಳು ದೇವತೆಗಳೆಂದರೆ ದೇವರ ತುಣುಕುಗಳು, ದೇವರಷ್ಟೇ ವ್ಯಾಪ್ತಿ ಇರುವ ದೇವರ ತುಣುಕುಗಳು, ದೇವರೇ ತುಣುಕು ತುಣುಕುಗಳಾಗಿ ತನನ್ನು ದೇವತೆಗಳಾಗಿ ವಿಂಗಡಿಸಿಕೊಂಡು ಲೋಕವನ್ನು ಪಾಲನೆ ಮಾಡ್ತಿದ್ದಾನೆ. ದೇವತೆಗಳು ಎಂದರೆ ಬೆಳಕು, ದೇವತೆಗಳು ಹೋದಲ್ಲಿ ಕತ್ತಲ ನಿವಾರಣೆ; ದೇವತೆಗಳೆಂದರೆ ಒಳಿತುಗಳು, ಕೆಡುಕುಗಳ ಕಾಟದಿಂದ ಜೀವಗಳ ರಕ್ಷಣೆ ಅವರದೇ; ದೇವತೆಗಳೆಂದರೆ ಚೈತನ್ಯ… ಚೈತನ್ಯ… Continue Reading →
ಬ್ರಹ್ಮಾಂಡದಲ್ಲಿ ಅನಂತ ಕೋಟಿ ಜೀವಗಳು ಬದುಕುತ್ತಿದ್ದಾವೆ, ಆ ಎಲ್ಲ ಜೀವಿಗಳು ಪ್ರತಿಕ್ಷಣವೂ ಒಂದಿಲ್ಲೊಂದನ್ನು ಬಯಸುತ್ತಲೇ ಇರುತ್ತವೆ, ಇಷ್ಟಾರು ಅನಂತ ಕೋಟಿ ಜೀವಗಳ ಬಯಕೆಗಳನ್ನು ಸಂಗ್ರಹಿಸಿ ಹೇಳೋದಾದರೆ, ಕೆಲವು ಇಷ್ಟ ಪ್ರಾಪ್ತಿ, ಕೆಲವು ಕಷ್ಟ ಪರಿಹಾರಗಳು.. ಕೆಲವು ಬೇಕುಗಳು, ಕೆಲವು ಬೇಡಗಳು.. ಈ ಎಲ್ಲ ಬೇಕು,ಬೇಡಗಳ ಈಡೇರಿಕೆಗೆ ಯಾವುದಾದರೂ ಭದ್ರವಾದ ವ್ಯಕ್ತಿ ಅಥವಾ ಶಕ್ತಿಯನ್ನು ಆಶ್ರಯಿಸಬೇಕು. *ಸೂಕ್ತವಾದ… Continue Reading →
ಸೃಷ್ಟಿಯಲ್ಲಿ ಸರಳರೇಖೆಯಾಗಿ ಯಾವುದೂ ಇಲ್ಲ, ಜಡ ಪ್ರಪಂಚ..ಉದಾಹರಣೆಗೆ ಭೂಮಿ, ಸೂರ್ಯ, ನಕ್ಷತ್ರಗಳು, ಮರಗಿಡಗಳು, ಪ್ರಾಣಿ ಪಕ್ಷಿಗಳು, ಕೊನೆಗೆ ಮನುಷ್ಯನೂ ಸರಳ ರೇಖೆಯಲ್ಲ, ಸೀದಾ ಅಲ್ಲ.. ಅಂಕುಡೊಂಕು ಇಲ್ಲದ ಬದುಕೆಲ್ಲಿ, ಕೊರತೆಯಿಲ್ಲದ ಬದುಕೆಲ್ಲಿ. ಇದು ಭೂಮಿಯ ಸಹಜತೆಯೂ ಹೌದು, ವಿಶೇಷವೂ ಹೌದು.. *ಕೊರತೆಯಿಲ್ಲದ ಬದುಕು ಇಲ್ಲವೇ ಇಲ್ಲ, ಇದ್ದರೆ ಅದು ಬದುಕಿನ ಆಚೆಗಿನ ಮುಕ್ತಿ ಮಾತ್ರ ~… Continue Reading →
“ರಾಮಾಯಣವನ್ನು ಕೇಳುವುದರಿಂದ ಏನು ಪ್ರಯೋಜನವೆಂದರೆ, ಕಳೆದುಹೋದ ಅಮೂಲ್ಯವಾದ ಎಲ್ಲಾ ಸ್ವತ್ತಿನ ಪುನಃಪ್ರಾಪ್ತಿ. ರಾಮಾಯಣ ಕಥನ-ಶ್ರವಣದಿಂದ ಕಳೆದುಹೋದ ಅಮೂಲ್ಯ ಸ್ವತ್ತು ಪುನಃಪ್ರಾಪ್ತಿಯಾಗುತ್ತದೆ, ಅದಕ್ಕೆ ಉದಾಹರಣೆ ರಾಮನಿಗೆ ಲವಕುಶರು, ಸೀತೆ ಹಾಗೂ ರಾಜ್ಯದ ಪುನಃಪ್ರಾಪ್ತಿ – ಶ್ರೀಸೂಕ್ತಿ. ~~~~~ ರಾಮನು ಎಲ್ಲಿ ಅವತರಿಸಿದನು? ಎಂಬ ಪ್ರಶ್ನೆಗೆ ಉತ್ತರ ಇದು: ಈ ಭೂಮಂಡಲದ ಮೊದಲು ಯಾರದ್ದಾಗಿತ್ತೋ, ಕಶ್ಯಪ ಪರಂಪರೆಯಿಂದ ಪ್ರಾರಂಭವಾಗಿ,… Continue Reading →
ಮಹತ್ತಾದ ಸಂಗತಿಗಳನ್ನು ನಿರ್ಮಿಸುವವರು ದುರ್ಲಭ, ನಿರ್ಮಾಣವಾದ ಮಹತ್ತನ್ನು ಪ್ರಯೋಗಿಸುವವರು ಇನ್ನೂ ದುರ್ಲಭ. ಮಹತ್ತಾದ ಶಕ್ತಿ ಬೇಕು ಅದಕ್ಕೆ. ಒಬ್ಬರ ಮುಂದೆ ರಾಮಾಯಣವನ್ನು ಹೇಳುವುದು ಅಂದರೆ ಅದೊಂದು ಚಿಕಿತ್ಸೆ; ಜೀವಕ್ಕೆ ಮಾಡುವ ಚಿಕಿತ್ಸೆ! ರಾವಣ, ಶೂರ್ಪಣಖಿಯರ ಗುಣಗಳನ್ನು ಕಳೆದು ರಾಮ ಹಾಗೂ ಅವನ ಬಳಗದ ಗುಣಗಳನ್ನು ಮೈಗೂಡಿಸುತ್ತದೆ! ಸರಿಯಾಗಿ ಅದರ ಪ್ರಯೋಗವಾದಲ್ಲಿ ಜೀವದ ಪಾಪವನ್ನದು ಕಳೆಯುತ್ತದೆ, ಎಲ್ಲೋ… Continue Reading →
ಋಷಿ ಮತ್ತು ಕೃಷಿಗೆ ಒಂದಕ್ಷರದ ವ್ಯತ್ಯಾಸ. ದೇವಲೋಕದ ಋಷಿ ನಾರದರು; ಭೂಲೋಕದಲ್ಲಿ ಕೃಷಿ ಮಾಡಿದರು! ಅಂದು ಅವರು ವಾಲ್ಮೀಕಿಗಳ ಹೃದಯದಲ್ಲಿ ರಾಮಾಯಣದ ಬೀಜವನ್ನು ಬಿತ್ತಿದರು; ಇಂದಿಗೂ ಅದು ಎಲ್ಲರಿಗೂ ಫಲ ನೀಡುತ್ತಿದೆ! ನಮಗೆ ಎಲ್ಲಿಂದಲಾದರೂ ಒಳ್ಳೇಯದಾದರೆ, ಆ ಸ್ಥಾನವನ್ನು ಪೂಜಿಸಬೇಕು. ಅದನ್ನು ಎಂದಿಗೂ ಮರೆಯಬಾರದು. ಮೂಲವನ್ನು ಮರೆಯಬಾರದು; ಯಾವ ವೃಕ್ಷವೂ ಬೇರಿನಿಂದ ಬೇರಾಗಬಾರದು. ಸ್ನಾನಕ್ಕೆ ಹೊರಟವರು… Continue Reading →