ಬೀಜವನ್ನು ಮರುಭೂಮಿಯಲ್ಲಿ ಹಾಕಬಾರದು; ಯಾಕೆಂದರೆ ಮರುಭೂಮಿಯಲ್ಲಿ ಹಾಕಿದರೆ ಬೀಜ ಸುಟ್ಟು ಹೋಗುತ್ತದೆ; ಸತ್ತು ಹೋಗುತ್ತದೆ. ಅದರಿಂದ ಗಿಡ ಬರುವುದಿಲ್ಲ; ಬೆಳೆ ಬೆಳೆಯುವುದಿಲ್ಲ. ಆದರೆ ಒಳ್ಳೆ ಫಲವತ್ತಾದ ಭೂಮಿಯಲ್ಲಿ ಹಾಕಿದರೆ ಸಮೃದ್ಧವಾಗಿ ಬೆಳೆದು; ಒಳ್ಳೆಯ ಬೆಳೆಯನ್ನು, ಒಳ್ಳೆಯ ಫಲವನ್ನು ಕೊಡುತ್ತದೆ. ನೀವೆಲ್ಲಾ ಮರುಭೂಮಿಯ ಥರ ಇಲ್ಲ; ನೀವೆಲ್ಲಾ ಫಲವತ್ತಾದ ಭೂಮಿಯ ಥರ ಇದ್ದೀರಿ. ಹಾಗಾಗಿ ವಿದ್ಯೆಯ ಬೀಜಗಳನ್ನು;… Continue Reading →
ಕಣ್ಮುಚ್ಚಿ ಭಗವಂತನನ್ನೊಮ್ಮೆ ಭಾವಿಸಿ. ಏಕೆಂದರೆ ತತ್ತ್ವವನ್ನು ಅವನೇ ತೆರೆದುಕೊಡಬೇಕು. ತಾನ್ಯಾರು ಎಂಬುದನ್ನು ಅವನೇ ನಮಗೆ ತಿಳಿಸಿಕೊಡಬೇಕು. ಅದಿಲ್ಲದಿದ್ದರೆ ಎಷ್ಟು ಹೇಳಿದರೂ, ಎಷ್ಟು ಕೇಳಿದರೂ ಅದು ಅರ್ಥವಾಗುವುದಿಲ್ಲ. ಮನಸ್ಸಿಗದು ಮುಟ್ಟುವುದಿಲ್ಲ. ಹಾಗಾಗಿ ಒಮ್ಮೆ ಕಣ್ಮುಚ್ಚಿ ಒಳಗಿರುವ ಆ ಪರಮಾತ್ಮನನ್ನು ಭಾವಿಸಿ, ನಿನ್ನ ಗುಟ್ಟನ್ನು ನೀನೇ ಬಿಚ್ಚಿಕೊಡು ಎಂದು ಪ್ರಾರ್ಥಿಸಿ ಆ ಬಳಿಕ ಮುಂದುವರೆಯೋಣ. ನಿನ್ನೆಯ ಪ್ರವಚನದಲ್ಲಿ ಕೆಲವು… Continue Reading →
ನಮೋ ಬ್ರಹ್ಮಾದಿಭ್ಯೋಬ್ರಹ್ಮ ವಿದ್ಯಾ ಸಂಪ್ರದಾಯ ಕರ್ತೃಭ್ಯೋವಂಶ ಋಷಭ್ಯೋನಮೋ ಗುರುಭ್ಯ:|| ನಮ್ಮ ಗುರುಕುಲದ ಅರಿವಿನ ಕುಡಿಗಳಿಗೆ ಶುಭಾಶೀರ್ವಾದಗಳು ಹಾಗೂ ಶುಭಾಶಂಸೆಗಳು. ಬರುವ ಒಂದು ವಿದ್ಯಾವರ್ಷ ನಿಮ್ಮೆಲ್ಲರಿಗೂ ಅಗಣಿತ ಪ್ರಮಾಣದಲ್ಲಿ ಜ್ಞಾನ ಸಂಪತ್ತು ಹಾಗೂ ವಿದ್ಯಾ ಸಂಪತ್ತನ್ನು ತಂದುಕೊಡಲಿ. ನಿಮ್ಮೆಲ್ಲರ ಬದುಕು ಈ ಒಂದು ವರ್ಷದಲ್ಲಿ ಸಮೃದ್ಧವಾಗಿ ತುಂಬಿಕೊಂಡಿರಲಿ. ಮನೆ ಶ್ರೀಮಂತವಾಗುವುದಕ್ಕಿಂತ ಮೊದಲು ಮನಸ್ಸು ಅಂದರೆ ಅಂತರಂಗ ಶ್ರೀಮಂತವಾಗಲಿ… Continue Reading →