ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?
ಆದರೆ ಮುನಿಯ ಈ ಪ್ರಶ್ನೆಗೆ ಲಭಿಸಿದ್ದು ಅಂತಿಂಥ ಉತ್ತರವಲ್ಲ…!
ಲೋಕೋತ್ತರವಾದ ರಾಮಾಯಣ…!!!
ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!
|| ಹರೇರಾಮ || ಶತಮಾನಗಳ ಹಿಂದಿನ ಮಾತು.. ಇಂದೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತದ ಹೃದಯ ಪ್ರದೇಶವನ್ನು ಆಳುತ್ತಿದ್ದ ಕಾಲ.. ತನ್ನ ನಡೆ ನುಡಿಗಳಿಂದ ಆಕೆ ದೇವತುಲ್ಯಳಾಗಿದ್ದುದರಿಂದಲೋ ಏನೋ ಜನತೆ ಆಕೆಯನ್ನು ‘ದೇವಿ’ ಎಂದೇ ಸಂಬೋಧಿಸುತ್ತಿದ್ದಿತು..! ಆಕೆ ಮಾಡಿದ ಸತ್ಕಾರ್ಯಗಳಿಗೆ ಲೆಖ್ಖವೇ ಇಲ್ಲ..! ಮಾಲೋಜಿರಾವ್ ಆಕೆಯ ಏಕಮಾತ್ರ ಪುತ್ರ… ಆದರೆ ಅವರೀರ್ವರ ಸ್ವಭಾವದಲ್ಲಿ… Continue Reading →