ಸಂಸ್ಕೃತದಲ್ಲಿ “ನವ” ಅಂದರೆ ಹೊಸತು. “ಭರ” ಎಂದರೆ ತುಂಬಿಕೊಳ್ಳುವುದು. ನವಂ-ಭರ ಎಂದರೆ ಹೊಸತನ್ನು ತುಂಬಿಕೊಳ್ಳುವುದು ಎಂದರ್ಥ. ತಾತ್ವಿಕ-ವಿಷಯಗಳ ಕುರಿತಾದ ಶ್ರೀಗಳವರ ಬ್ಲಾಗ್ ‘ರಾಮ’ ಈಗಾಗಲೇ ಪ್ರಾರಂಭವಾಗಿದ್ದನ್ನು ನೀವು ಗಮನಿಸಿದ್ದೀರಿ. ಇಂದು ನಾಡಹಬ್ಬದ ಬಗೆಗಿನ ಬರಹದ ಮೂಲಕ ಶ್ರೀಗಳವರು ಬದುಕಿನ ಬಾಹ್ಯ ಮುಖದ ಕುರಿತಾದ ” ರಾಜ್ಯ ” ಬ್ಲಾಗನ್ನೂ ಪ್ರಾರಂಭಿಸಿದ್ದಾರೆ. ಶ್ರೀಗಳವರ ಬಳಗಕ್ಕೆ ಇದು ಇನ್ನೊಂದು… Continue Reading →
ಇದು ವ್ಯಕ್ತಿ ಸಂತೋಷವಲ್ಲ. ಇದು ಮನೆಯ ಸಂಭ್ರಮವಲ್ಲ. ಇದು ಊರ ಹಬ್ಬವಲ್ಲ. ಇದು ರಾಜ್ಯೋತ್ಸವ… ಸಮಸ್ತ ಕನ್ನಡ ನಾಡಿನ ಮಹೋತ್ಸವ… ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು. ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ. ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ… ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ… “ನಾನು”ವಿನ… Continue Reading →
ದಬ್ಬಾಳಿಕೆಯ ಆದಿ ಯಾವುದು..? ವಿನಾಶದ ಪ್ರಾರಂಭ ಎಲ್ಲಿಂದ..? ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಕಲಹಗಳು.. ಸಮೃದ್ಧ ಕುಟುಂಬಗಳಲ್ಲಿ ವಿರಸ-ವಿಚ್ಛೇದನಗಳು.. ದೇಶ-ದೇಶಗಳ ಮಧ್ಯೆ ಸಂಗ್ರಾಮಗಳು..ಹೀಗೇಕೆ..? ಉತ್ತರವನ್ನು ನಾವಿಲ್ಲಿ ಕಂಡೆವು….. ಒಂದಾನೊಂದು ಊರು, ಆ ಊರಿಗೊಬ್ಬ ಜಮೀನ್ದಾರ, ಊರಿಗೆ ಆತ ತುಂಡರಸನಂತಿದ್ದ, ಆತನ ಅಪ್ಪಣೆಯಿಲ್ಲದೆ ಆ ಊರಿನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವನ್ತಿರಲಿಲ್ಲ.. ಕಾಲದ ಮಹಿಮೆಯಿಂದಾಗಿ ಆತನನ್ನು ವಿಚಿತ್ರ ಕಾಯಿಲೆಯೊಂದು ಆವರಿಸಿಕೊಂಡಿತು.. ಪರೀಕ್ಷಿಸಿದ… Continue Reading →
ವಸತಿ – ಸವದತ್ತಿಯ ಶಾಸಕ ವಿಶ್ವನಾಥ ಮಾಮನಿಯವರ ಸ್ವಗೃಹ,ಸವದತ್ತಿ ೫೦೦ಕ್ಕೂ ಮಿಕ್ಕಿದ ಭಕ್ತರಿಂದ ಆಶೀರ್ಮಂತ್ರಾಕ್ಷತೆ ಸ್ವೀಕಾರ ನೆರೆ ಪೀಡಿತರಿಗೆ ಕಂಬಳಿ ವಿತರಣೆ ಫೆಬ್ರವರಿಯಲ್ಲಿ ಸವದತ್ತಿಯಲ್ಲಿ ರೈತರಿಗೆ ಉಚಿತವಾಗಿ ಗೋವುಗಳ ವಿತರಣೆಯ ಚಿಂತನೆ ಶಾಸಕರು ಮತ್ತು ರಾಜಣ್ಣ ಮಾಮನಿಯವರಿಂದ ಎಲ್ಲಮ್ಮನಿಗೆ ಬಿಟ್ಟ ೨೦೦ ಕ್ಕೂ ಅಧಿಕ ಗೋವುಗಳನ್ನು ಮಠದ ಗೋಶಾಲೆಗೆ ವಹಿಸಿಕೊಡುವ ಪ್ರಸ್ತಾಪ ಸವದತ್ತಿ ಶಂಕರ ಮಠಕ್ಕೆ… Continue Reading →
ಬಹುನಿರೀಕ್ಷಿತವಾದ ನಮ್ಮೆಲ್ಲರ E-ಮಠ ‘ಹರೇರಾಮ’ ಬೆಳಕಿನ ಹಬ್ಬದಂದು ಬೆಳಕನ್ನು ಕಂಡಿದೆ.ಇದರೊಂದಿಗೆ ನಿಮ್ಮೆಲ್ಲರೊಡನೆ ಮತ್ತೆ ಮತ್ತೆ ಮಾತನಾಡುವ ನಮ್ಮ ತುಡಿತ ಸಫಲಗೊಂಡಿದೆ.ಎಲ್ಲ ವಿಧದ ದೂರಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೀತಿಗಿದೆ.ಬ್ರಹ್ಮಾಂಡದ ಎರಡು ತುದಿಗಳನ್ನು ಒಂದುಗೂಡಿಸಬಲ್ಲುದು ಪ್ರೀತಿ.ಗುರುಶಿಷ್ಯರ ಪರಸ್ಪರ ಪ್ರೀತಿಯ ಪ್ರಕಟ ರೂಪವೇ ಈ ಅಂತರ್ಜಾಲ ತಾಣ ಅಥವಾ ಅಂತರಂಗ ತಾಣ.ಅಂತರಂಗಗಳನ್ನು ಅಂತರವಿಲ್ಲದಂತೆ ಬೆಸೆಯುವ ತಾಣ.ಇಲ್ಲಿಯವರೆಗೆ ಬಹಿರಂಗದಲ್ಲಿ ದೂರವಿದ್ದಾಗ… Continue Reading →
ಜಾಗತಿಕ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆದ ಗೋವುಗಳ ಕುರಿತಾದ ವಿಶ್ವಮಟ್ಟದ ಸಮ್ಮೇಳನ.. ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.. ಕಾಲ ; ೨೦೦೭ ಎಪ್ರಿಲ್ ೨೧ ರಿಂದ ೨೯ರ ವರೆಗೆ.. ದೇಶ ; ಹೊಸನಗರ ಸಮೀಪದ ಶರಾವತೀ ತೀರದ ಶ್ರೀ ರಾಮಚಂದ್ರಾಪುರ ಮಠ.. ಭಾಗವಹಿಸಿದ ಭಾಗ್ಯಶಾಲಿಗಳು ; ೨೦ ದೇಶಗಳ ಸುಮಾರು… Continue Reading →