Author Sri Samyojaka

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 6

ಪಶ್ಚಿಮೋ ಮಾರ್ಗಃ ಆ ಮಾರ್ಗ ತುಂಬಾ ಚೆನ್ನಾಗಿದೆಯಂತೆ. ಮಾರ್ಗದ ತುಂಬಾ ರತ್ನ ಗೃಹಗಳಿವೆ, ರತ್ನ ಮಂದಿರಗಳಿವೆ, ಯಮನ ಆಸ್ಥಾನವನ್ನು ಸೇರುವ ಪಶ್ಚಿಮದ್ವಾರದಲ್ಲಿನ ರತ್ನಗೃಹಗಳಲ್ಲಿ ಯಮನ ಆಸ್ಥಾನಕ್ಕೆ ಹೋಗುವವರು ವಿಶ್ರಾಂತಿಯನ್ನು ಪಡೆಯಬಹುದು. ಹಾಗೆ ಮಧ್ಯದಲ್ಲಿ, ಇಡೀ ವರ್ಷವೂ ಅಮೃತರಸದಿಂದ ತುಂಬಿರುವಂತಹ ಸರೋವರಗಳಿಂದ ವಿರಾಜಿತವಾಗಿದೆ. ಐರಾವತದ ಕುಲದಲ್ಲಿ ಉದ್ಭವಿಸಿರುವಂತಹ ಆನೆಗಳಿವೆ. ಉಚ್ಚೈಶ್ರವಸ್ಸುವಿನ ವಂಶದಲ್ಲಿ ಹುಟ್ಟಿದ ಶ್ರೇಷ್ಠವಾದ ಅಶ್ವಗಳು. ಇಂತಹ… Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 5

ಎಲ್ಲಿದ್ದೆವು ನಾವು?! ಯಮನ ಸಭೆಯಲ್ಲಿ. ಯಮನ ಸಭೆಗೆ ಹೋಗಬೇಕಾದರೆ ಭಾರಿ ಯೋಗ, ಪುಣ್ಯ ಬೇಕು. ಯಮನೇ ನಚಿಕೇತನಿಗೆ ಹೇಳುತ್ತಾನೆ.ಇಂತಹದ್ದೊಂದು ಪ್ರಶ್ನೆ ಹುಟ್ಟುವುದು ಕೂಡಾ ಒಂದು ಪುಣ್ಯದಿಂದ. ಅದು ಹುಟ್ಟುವುದೇ ಒಂದು ಆಶ್ಚರ್ಯ!. ಆಮೇಲೆ ಆ ಪ್ರಶ್ನೆಗೆ ಉತ್ತರ ಹೇಳುವವನು ಸಿಕ್ಕುವುದು ಕೂಡಾ ಆಶ್ಚರ್ಯ. ಹೇಳಿದ ಉತ್ತರವನ್ನು ಕೇಳಿ ಪಾಲನೆ ಮಾಡುವುದು ಕೂಡಾ ದೊಡ್ಡ ಆಶ್ಚರ್ಯ. ಇಂತಹ… Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ-1: ಪ್ರವಚನಮಾಲಿಕೆ – 4

ನಚಿಕೇತ ಮತ್ತು ಯಮರಾಜನ ಭೇಟಿ. ಭೂಮಿಯ ಚಿಕ್ಕ ಬಾಲಕ ಮತ್ತು ಯಮಲೋಕದ ಪ್ರಭು. ಪರ್ವತ ಮತ್ತು ಪರಮಾಣುಗಳ ಭೇಟಿಯಾದಂತಿದೆ. ಅಂತಹದ್ದೊಂದು ಭೇಟಿ. ಲೋಕಕ್ಕೆಲ್ಲಾ ಪ್ರಾಯಶ್ಚಿತ್ತವನ್ನು ವಿಧಿಸುವ, ಲೋಕದ ಜೀವಿಗಳೆಲ್ಲಾ ತಪ್ಪು ಮಾಡಿದಾಗ ದಂಡನೆ ವಿಧಿಸುವ ಯಮ, ಆತನೇ ಪ್ರಾಯಶ್ಚಿತ ಮಾಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿದ್ದಾನೆ. ನಚಿಕೇತನಿಗೆ ಆತಿಥ್ಯ ಮಾಡದ ಕಾರಣ, ಆತನು ಮೂರು ದಿವಸ ಉಪವಾಸವಿದ್ದ ಕಾರಣ ಬಂದ… Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ಪ್ರವಚನಮಾಲಿಕೆ – 3

ಬೀಜವನ್ನು ಮರುಭೂಮಿಯಲ್ಲಿ ಹಾಕಬಾರದು; ಯಾಕೆಂದರೆ ಮರುಭೂಮಿಯಲ್ಲಿ ಹಾಕಿದರೆ ಬೀಜ ಸುಟ್ಟು ಹೋಗುತ್ತದೆ; ಸತ್ತು ಹೋಗುತ್ತದೆ. ಅದರಿಂದ ಗಿಡ ಬರುವುದಿಲ್ಲ; ಬೆಳೆ ಬೆಳೆಯುವುದಿಲ್ಲ. ಆದರೆ ಒಳ್ಳೆ ಫಲವತ್ತಾದ ಭೂಮಿಯಲ್ಲಿ ಹಾಕಿದರೆ ಸಮೃದ್ಧವಾಗಿ ಬೆಳೆದು; ಒಳ್ಳೆಯ ಬೆಳೆಯನ್ನು, ಒಳ್ಳೆಯ ಫಲವನ್ನು ಕೊಡುತ್ತದೆ. ನೀವೆಲ್ಲಾ ಮರುಭೂಮಿಯ ಥರ ಇಲ್ಲ; ನೀವೆಲ್ಲಾ ಫಲವತ್ತಾದ ಭೂಮಿಯ ಥರ ಇದ್ದೀರಿ. ಹಾಗಾಗಿ ವಿದ್ಯೆಯ ಬೀಜಗಳನ್ನು;… Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 2

ಕಣ್ಮುಚ್ಚಿ ಭಗವಂತನನ್ನೊಮ್ಮೆ ಭಾವಿಸಿ. ಏಕೆಂದರೆ ತತ್ತ್ವವನ್ನು ಅವನೇ ತೆರೆದುಕೊಡಬೇಕು. ತಾನ್ಯಾರು ಎಂಬುದನ್ನು ಅವನೇ ನಮಗೆ ತಿಳಿಸಿಕೊಡಬೇಕು. ಅದಿಲ್ಲದಿದ್ದರೆ ಎಷ್ಟು ಹೇಳಿದರೂ, ಎಷ್ಟು ಕೇಳಿದರೂ ಅದು ಅರ್ಥವಾಗುವುದಿಲ್ಲ. ಮನಸ್ಸಿಗದು ಮುಟ್ಟುವುದಿಲ್ಲ. ಹಾಗಾಗಿ ಒಮ್ಮೆ ಕಣ್ಮುಚ್ಚಿ ಒಳಗಿರುವ ಆ ಪರಮಾತ್ಮನನ್ನು ಭಾವಿಸಿ, ನಿನ್ನ ಗುಟ್ಟನ್ನು ನೀನೇ ಬಿಚ್ಚಿಕೊಡು ಎಂದು ಪ್ರಾರ್ಥಿಸಿ ಆ ಬಳಿಕ ಮುಂದುವರೆಯೋಣ. ನಿನ್ನೆಯ ಪ್ರವಚನದಲ್ಲಿ ಕೆಲವು… Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ಪ್ರವಚನಮಾಲಿಕೆ – 1

ನಮೋ ಬ್ರಹ್ಮಾದಿಭ್ಯೋಬ್ರಹ್ಮ ವಿದ್ಯಾ ಸಂಪ್ರದಾಯ ಕರ್ತೃಭ್ಯೋವಂಶ ಋಷಭ್ಯೋನಮೋ ಗುರುಭ್ಯ:|| ನಮ್ಮ ಗುರುಕುಲದ ಅರಿವಿನ ಕುಡಿಗಳಿಗೆ ಶುಭಾಶೀರ್ವಾದಗಳು ಹಾಗೂ ಶುಭಾಶಂಸೆಗಳು. ಬರುವ ಒಂದು ವಿದ್ಯಾವರ್ಷ ನಿಮ್ಮೆಲ್ಲರಿಗೂ ಅಗಣಿತ ಪ್ರಮಾಣದಲ್ಲಿ ಜ್ಞಾನ ಸಂಪತ್ತು ಹಾಗೂ ವಿದ್ಯಾ ಸಂಪತ್ತನ್ನು ತಂದುಕೊಡಲಿ. ನಿಮ್ಮೆಲ್ಲರ ಬದುಕು ಈ ಒಂದು ವರ್ಷದಲ್ಲಿ ಸಮೃದ್ಧವಾಗಿ ತುಂಬಿಕೊಂಡಿರಲಿ. ಮನೆ ಶ್ರೀಮಂತವಾಗುವುದಕ್ಕಿಂತ ಮೊದಲು ಮನಸ್ಸು ಅಂದರೆ ಅಂತರಂಗ ಶ್ರೀಮಂತವಾಗಲಿ… Continue Reading →

ಕೇಳಿದವನು ಬಾಳಿಯಾನು!

ವಾಲ್ಮೀಕಿ ರಾಮಾಯಣ – ಪಾಠ 44

ವಾಲ್ಮೀಕಿ ರಾಮಾಯಣ: ಭಾಗ – 43 ಧರ್ಮ – ಅಧರ್ಮ ~ ಸರಿ – ತಪ್ಪು : ಜೀವನ ಪಾಠವಿದು!

ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ರಾಮಾಯಣದಲ್ಲಿ ರಾಮ ಹುಟ್ಟುವ ಮೊದಲು ಅಯೋಧ್ಯೆ ಹೇಗಿತ್ತು? ಅಯೋಧ್ಯೆಯ ಪ್ರಜೆಗಳು ಹೇಗಿದ್ದರು? ಎಂಬ ವರ್ಣನೆ. ಆ ವರ್ಣನೆಯಲ್ಲಿ ಮೊದಲನೆಯದು “ಹೃಷ್ಟಾಃ”, ಅಯೋಧ್ಯೆಯಲ್ಲಿ ಎಲ್ಲರೂ ಸಂತೋಷವಾಗಿದ್ದರು ಎಂದು. ಎರಡನೆಯದು “ಧರ್ಮಾತ್ಮಾನಃ”…. Continue Reading →

ವಾಲ್ಮೀಕಿ ರಾಮಾಯಣ: ಭಾಗ – 42 ಸುಖ ಬರುವ ದಾರಿ

ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ಸುಖ: ಪ್ರತಿ ಜೀವದ ಅಪೇಕ್ಷೆ ಸುಖವು ಜೀವನದಲ್ಲಿ ತುಂಬ ಮುಖ್ಯವಾದುದು ಎಂಬ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಂದು ಜೀವದ ಅಪೇಕ್ಷೆಯೂ,”ಸುಖಂ ಮೇ ಭೂಯಾತ್.. ಸುಖಂ ಮೇ ಭೂಯಾತ್… Continue Reading →

ವಾಲ್ಮೀಕಿ ರಾಮಾಯಣ: ಭಾಗ – 41 ಸಂತೋಷ ಮತ್ತು ಅದು ಬರುವ ದಾರಿ

ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ವಾಲ್ಮೀಕಿ ರಾಮಾಯಣದ ಬಾಲಕಾಂಡದ ಅತ್ಯಂತ ಆರಂಭದಲ್ಲಿ ಬರುವ ಪ್ರಜಾವರ್ಣನೆ; ಅಯೋಧ್ಯೆಯ ಪ್ರಜೆಗಳು ಹೇಗಿದ್ದರು ಎಂದು ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ. “ತಸ್ಮಿನ್ ಪುರವರೇ ಹೃಷ್ಟಾಃ”, ನಗರಗಳ ಪೈಕಿಯಲ್ಲಿ ಆ ಕಾಲದಲ್ಲಿ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑