Category ಸುದ್ದಿ

Get tuned to the latest news related to Sri Swamiji

4-1-2010 – ಮಧ್ಯಪ್ರದೇಶದ ಯಾತ್ರೆ – ಇಂದೋರಿನಿಂದ ಬ್ಯಾವರಾ

ಜ.೪ – ಇಂದು ಯಾತ್ರೆ ಇಂದೋರಿನಿಂದ ಹೊರಟು ದೇವಸ್, ಉಜ್ಜೈನಿ, ಶಾಜಾಪುರ ಮೂಲಕ ಬ್ಯಾವರಾ ನಗರವನ್ನು ತಲುಪಿತು. ದೇವಸ್ (ದೇವಾವಾಸ) ನಗರ ಮಾತಾ ಚಾಮುಂಡಾ ದೇವಿಯ ಆವಾಸವಿರುವ ಪ್ರಸಿದ್ಧ ಸ್ಥಳ. ಮೈಸೂರಿನ ಚಾಮುಂಡೀ ಬೆಟ್ಟದಂತೆ, ಊರಮಧ್ಯೆಯಲ್ಲಿ ಬೆಟ್ಟ ಮೇಲೆ ಚಾಮುಂಡಾ ಮಂದಿರವಿದೆ. ವೇದಿಕೆಯನ್ನು ದೇವಗಿರಿಯ ಮುಂಭಾಗದಲ್ಲಿ ಶಿವಾಜಿ ಪ್ರತಿಮೆ ಇರುವ ಪ್ರಸಿದ್ಧ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದರು…. Continue Reading →

3-1-2010 – ಮಧ್ಯಪ್ರದೇಶದ ಯಾತ್ರೆ – ರತ್ಲಾಮಿನಿಂದ ಇಂದೋರ್

ಜ.೩ – ಇಂದು ಯಾತ್ರೆ ರತ್ಲಾಮಿನಿಂದ ಹೊರಟು ಧಾರ್ (ಧಾರಾ), ಬೇಟ್ಮಾ ಮೂಲಕ ಇಂದೋರನ್ನು ತಲುಪಿತು. ಧಾರ್ – ಧಾರಾನಗರಿ, ಭೋಜರಾಜನ ಆಸ್ಥಾನವಾಗಿದ್ದ ಸ್ಥಳ. ಕಾಲಿದಾಸ ತನ್ನ ಕಾವ್ಯಗಳಿಂದ ರಂಜಿಸಿದ ನಾಡು. ಇದು ವನವಾಸಿ ಕ್ಷೇತ್ರ. ಶ್ರೀ ಮಧುರ ಭಾಯ್ ಕುಲಕರ್ಣಿ ಅವರು ಪ್ರಮುಖ ಭಾಷಣ ಮಾಡಿದರು. ಅವರು ರಾ.ಸ್ವ.ಸೇ.ಸಂ.ದ ರಾಷ್ಟ್ರೀಯ ಸಮಿತಿ ಸದಸ್ಯರು. ಕೋಪನ್… Continue Reading →

2-1-2010 – ರಾಜಸ್ಥಾನದಿಂದ ಮಧ್ಯಪ್ರದೇಶ – ಉದಯಪುರದಿಂದ ರತ್ಲಾಮಿಗೆ ಯಾತ್ರೆ

ಜ.೨ – ಇಂದು ಯಾತ್ರೆ ಉದಯಪುರದಿಂದ ಹೊರಟು ಸಲುಂಬರ್, ಆಶ್ಪುರ್, ಬಾಂಸವಾಡಾ ಮೂಲಕ ರತ್ಲಾಮ್ ನಗರವನ್ನು ಬಂದು ಸೇರಿತು. ಸಲುಂಬರಿನಲ್ಲಿ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ವೇದಿಕೆಯಲ್ಲಿ ಸಂತರಾದ ನಿರಂಜನನಾಥ ಅವಧೂತ ಜೀ, ಪ್ರಕಾಶಾ ಶಾಸ್ತ್ರೀ ಜೀ ಮಹಾರಾಜ್, ಪೂ. ಮೀರಾಮಾತಾ ಜೀ, ಇವರು ದಿವ್ಯ ಉಪಸ್ಥಿತಿ ನೀಡಿದ್ದರು. ಹುಕುಂಚಂದ್ ಸಾವ್ಲಾ ಅವರು ಗೋವಿನ ಭಾವನಾತ್ಮಕ… Continue Reading →

1-1-2010 – ರಾಜಸ್ಥಾನದ ಯಾತ್ರೆ – ಭೀಲ್ವಾಡದಿಂದ ಉದಯಪುರದ ವರೆಗೆ

ಜ.೧ – ಇಂದು ಯಾತ್ರೆ ಭಿಲ್ವಾಡಾದಿಂದ ಸಹಾಡಾ, ರಾಜಸಮಂದ (ಕಂಕ್ರೋಲಿ), ನಾಥದ್ವಾರ – ಉದಯಪುರಕ್ಕೆ ಬಂದು ತಲುಪಿತು. ಸಹಾಡಾದಲ್ಲಿ ಒಳ್ಳೆಯ ಸ್ವಾಗತ ಕಾರ್ಯಕ್ರಮ ನಡೆಯಿತು. ಮುಂದೆ ಕುಂವರಿಯಾದಲ್ಲೂ ಒಳ್ಳೆಯ ರೀತಿಯ ಸ್ವಾಗತ ನಡೆಯಿತು. ಯಾತ್ರೆ ಮುಂದುವರೆದು ರಾಜಸಮುಂದ (ಹಿಂದಿನ ಹೆಸರು ಕಂಕರೋಲಿ)ವನ್ನು ಸೇರಿತು. ನಗರದಲ್ಲಿ 4 ರಿಂದ 5 ಸಾವಿರ ಜನ ಸ್ವಾಗತ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು…. Continue Reading →

ಡಿ.೩೧ – ರಾಜಸ್ಥಾನದ ಯಾತ್ರೆ – ಕೋಟಾದಿಂದ ಭೀಲವಾಡಾಕ್ಕೆ

ಡಿ.೩೧ – ಕ್ರಿಸ್ತಶಕ ೨೦೦೯ರ ಕೊನೆಯ ದಿನ ಇಂದು ರಾತ್ರಿ ಚಂದ್ರಗ್ರಹಣವೂ ಇರುವುದೊಂದು ವಿಶೇಷ. ಹೊಸವರ್ಷ ಪ್ರಾರಂಭವಾದ ಕೂಡಲೇ ಗ್ರಹಣ ಸಮಾಧಾನವೆಂದರೆ ಹೊಸವರ್ಷದ ಸೂರ್ಯೋದಯವಾಗುವಾಗ ಚಂದ್ರ ಗ್ರಹಣ ಮುಕ್ತನಾಗಿರುತ್ತಾನೆ. ಇಂದು ಯಾತ್ರೆ ಕೋಟಾ ನಗರದಿಂದ ಹೊರಟು ಡಾಬೀ, ಬಿಜೋಲಿಯಾ, ಚಿತ್ತೋಡಗಢದ ಮೂಲಕ ಭೀಲವಾಡಾ ನಗರವನ್ನು ಪ್ರವೇಶಿಸಿತು. ಬಿಜೋಲಿಯಾದಲ್ಲಿ ಅಂದಾಜು ೨೦೦೦ ಜನರು ಮಧ್ಯಾಹ್ನದ ಬಿಸಿಲಿನಲ್ಲೂ ಸಭೆಯಲ್ಲಿ… Continue Reading →

ಡಿ.೩೦ – ರಾಜಸ್ಥಾನ – ಜಯಪುರದಿಂದ ಕೋಟಾಕ್ಕೆ ಯಾತ್ರೆ

ಡಿ.೩೦ – ಇಂದು ಯಾತ್ರೆ ತನ್ನ ಪರಿಭ್ರಮಣದ ೯೧ನೆಯ ದಿನ ಜಯಪುರದಿಂದ ಹೊರಟು ಟೊಂಕ್, ದೇವಲಿ, ಬೂಂದೀ ಮಾರ್ಗವಾಗಿ ಕೋಟ ಪಟ್ಟಣವನ್ನು ಪ್ರವೇಶಿಸಿತು. ಮೊದಲಿಗೆ ದಾರಿಯಲ್ಲಿ ಚಾಕಸೂ ಮತ್ತು ನಿವಾಯಿಗಳಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ನಿವಾಯಿಯಲ್ಲಿ ಒಂದು ಉತ್ತಮ ಗೋಶಾಲೆಯನ್ನು ಯಾತ್ರೆ ಸಂದರ್ಶಿಸಿತು. ಆ ಗೋಶಾಲೆಯ ಸಾಂಪ್ರದಾಯಿಕ ಉದ್ಘಾಟನೆಯೂ ಇಂದೇ ನಡೆಯಿತು ಎಂದೂ ತಿಳಿಯಿತು. ಅಂದಾಜು… Continue Reading →

ಡಿ.೨೯ – ರಾಜಸ್ಥಾನದಲ್ಲಿ ಯಾತ್ರೆ – ಅಲ್ವರಿನಿಂದ ಜೈಪುರ

ಡಿ.೨೯ – ಇಂದು ಯಾತ್ರೆ ಅಲ್ವರಿನಿಂದ ಹೊರಟು, ರಾಜಗಢ, ಬಾಂದೀ, ಕುಂಯೀ, ದೌಸಾ ಮಾರ್ಗವಾಗಿ ರಾಜಸ್ಥಾನದ ರಾಜಧಾನಿ ಜೈಪುರವನ್ನು ತಲುಪಿತು. ರಾಜಗಢದಲ್ಲಿ ಸಂತ ಹರಿಹರಾನಂದ ಜೀ ಬ್ರಹ್ಮಚಾರಿ, ಪೂ. ರಾಮಭಾರತೀ ಮಹಾರಾಜ್ ಮತ್ತು ಪೂ. ನಿರಂಜನನಾಥ ಅವಧೂತ ಜೀ ಇವರು ವೇದಿಕೆಯಲ್ಲಿ ದಿವ್ಯ ಉಪಸ್ಥಿತಿ ನೀಡಿದ್ದರು. ಮೂಲತಃ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು, ಭಾರತದ… Continue Reading →

ಡಿ.೨೮ – ದೆಹಲಿಯಿಂದ ಅಲ್ವರಿಗೆ ಯಾತ್ರೆ

ಡಿ.೨೮ – ಇಂದು ಪುತ್ರತಾ ಏಕಾದಶೀ ತಿಥಿ, ಇಂದು ಗೋಸೇವೆ ಮಾಡಿ ಭಗವಂತನ ’ಉಪವಾಸ’ (ಸಮೀಪವಾಸ) ಮಾಡಿದಲ್ಲಿ ಪುತ್ರ ಪ್ರಾಪ್ತಿ ನಿಶ್ಚಿತವೆಂಬುದು ಸಂತರ ನುಡಿ. ಇಂದು ಯಾತ್ರೆ ದಿಲ್ಲಿ ಮಹಾನಗರಿಯಿಂದ ಬೀಳ್ಕೊಂಡು, ಹರಿಯಾಣದ ಗುರುಗಾಂ, ರಾಜಸ್ಥಾನದ ಭಿವಾಡಿ, ಕಿಶನ್ ಗಢ್ ಮೂಲಕ ಅಲ್ವರ್ ಜಿಲ್ಲಾ ಕೇಂದ್ರವನ್ನು ಪ್ರವೇಶಿಸಿತು. ಗುರುಗಾಂ (ಗುರುಗ್ರಾಮ) ನೇರವಾಗಿ ನಮ್ಮ ಯಾತ್ರೆಯ ಜತೆಗೆ… Continue Reading →

ಇಂದು ದೆಹಲಿಯ ನತ್ಮಲ್ ಲಾಲ್ ಕೇಜರಿವಾಲ್ ರವರ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ನೆರವೇರಿತು..

ಶ್ರೀ ಗಳು ಪ್ರತಿನಿತ್ಯ ಮಾಡುತ್ತಿದ್ದ ರಾಮಾಯಣ ಪಾರಾಯಣದ ಸಮಾರೋಪದ ಅಂಗವಾಗಿ ಶ್ರೀ ಕರಾರ್ಚಿತ ಸೀತಾರಾಮಚಂದ್ರ ದೇವರಿಗೆ ಶ್ರೀಗಳವರು ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದರು..

23-12-2009 ರ ಕಾರ್ಯಕ್ರಮಗಳು..

ಪ್ರಾತಃ ಪೂಜೆಯನ್ನು ಸಿರೋಇಯಲ್ಲಿ ಪೂರೈಸಿ, ಮಧ್ಯಾಹ್ನ ಪಾಲಿಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯಸಾನಿಧ್ಯ ವಹಿಸಿದ್ದರು.. ಕಾರ್ಯಕ್ರಮದಲ್ಲಿ ಸ್ವಾಮೀ ಅಖಿಲೇಶಾನಂದ ಜಿ, ಶಂಕರಲಾಲ್ ಅಗರ್ವಾಲ್ ಮುಂತಾದವರು ಭಾಗವಹಿಸಿದ್ದರು.. ಅಲ್ಲಿಂದ ಅಪರಾಹ್ನ ರೋಹತ್ ನಲ್ಲಿ ಜರುಗಿದ ಯಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.. ಸಂಜೆ ಜೋಧಪುರ ದಲ್ಲಿ ನೆರವೇರಿದ ವಿಶ್ವಮಂಗಲ ಗೋ ಗ್ರಾಮ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑