ಪ್ರಾತ: ಪೂಜೆ: ಶ್ರೀ ರಾಮದಿ ದೇವತೆಗಳ ಪ್ರಾತ:ಕಾಲದ ಪೂಜೆಯನ್ನು ಶ್ರೀ ಶ್ರೀ ಗಳವರು ಮುಂಬಯಿಯ ಝಂಡು ಅತಿಥಿಗೃಹದಲ್ಲಿ ನೆರವೇರಿಸಿದರು. ಪ್ರಾತ:ಕಾಲದ ಪೂಜೆ ಅದರಲ್ಲೂ ಶ್ರೀ ಶ್ರೀ ಗಳವರು ಸಲ್ಲಿಸುವ ಪೂಜೆ ಎಂದರೆ ಅವಿಸ್ಮರಣೀಯ ಆನಂದದ ಅನುಭೂತಿಯನ್ನು ನೀಡುವದಾಗಿದೆ. ಆ ಮಂದ್ರ ಬೆಳಕು, ಆ ಹಿತವಾದ ಘಂಟಾನಾದ, ಕೂರ್ಮಾಸನಾಸ್ಥಿತ ಶ್ರೀಗಳವರ ಗಂಭೀರ ನೋಟ, ಒಂದೇ.. ಎರಡೇ… ಸಾವಿರಾರು… Continue Reading →
ಧಾರವಾಡ, ಅಕ್ಟೋಬರ್ ೨೫: “ನೀವು ಅಸಹಾಯಕರಲ್ಲ, ಅನಾಥರಲ್ಲ, ಈ ಸಂಕಟದ ಸಮಯದಲ್ಲಿ ನಾಡು ನಿಮ್ಮೊಂದಿಗಿದೆ, ನಾವು ನಿಮ್ಮೊಂದಿಗಿದ್ಡೇವೆ ” ಇದು ನೆರೆಪೀಡಿತರನ್ನು ಕಂಡಾಗ ಶ್ರೀಗಳವರ ಮುಖದಿಂದ ಹೊರಹೊಮ್ಮಿದ ಉದ್ಗಾರ! ಧಾರವಾಡದ ಸಮೀಪದ ನೆರೆಪೀಡಿತ ಕಬ್ಬಾನೂರಿಗೆ ಭೇಟಿಯಿತ್ತಿದ್ದ ಅವರು ಸಂತ್ರಸ್ತರನ್ನುದ್ಡೇಶಿಸಿ ಮಾತನಾಡುತ್ತಿದ್ದರು. ಜಿಲ್ಲೆಯೊಂದನ್ನು ದತ್ತು ತೆಗೆದುಕೊಳ್ಳುವ ಮತ್ತು ಸಂತ್ರಸ್ತರಿಗಾಗಿ ೫೦೦೦ ಮನೆಗಳನ್ನು ದಾನಿಗಳ ಮೂಲಕ ನಿರ್ಮಿಸಿಕೊಡುವ ಅಭಿಪ್ರಾಯವನ್ನು… Continue Reading →
ಅಕ್ಟೋಬರ್ ೨೫, ೨೦೦೯: ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಇಂದಿನ ಪ್ರವಾಸದ ಮುಖ್ಯಾಂಶಗಳು: ಪ್ರವಾಹಪೀಡಿತ ಪ್ರದೇಶಗಳಿಗೆ ಶ್ರೀಗಳವರ ಭೇಟಿ ಸಂತ್ರಸ್ತರಿಗೆ ಅಭಯವಾಣಿ ೫೦೦೦ ಮನೆಗಳ ನಿರ್ಮಾಣದ ಗುರಿ ಗೋವು-ಮೇವುಗಳ ಪೂರೈಕೆ ಅಗತ್ಯವಿರುವಲ್ಲಿ ಗೋಶಾಲೆಗಳ ನಿರ್ಮಾಣ ಗೋಕರ್ಣದಲ್ಲಿ ಅಷ್ಟಬಂಧ -ಕೋಟಿರುದ್ರ ೧ ವರ್ಷ ಮುಂದಕ್ಕೆ ವಿಶ್ವಮಂಗಲ-ಗೋಗ್ರಾಮಯಾತ್ರೆಯ ಕರ್ನಾಟಕ-ಉತ್ತರಪ್ರಾಂತ ಸಭೆಯಲ್ಲಿ ಆಶೀರ್ವಚನ
ಬೆಂಗಳೂರು; ಅಕ್ಟೋಬರ್ ೨೫; ” ಸಂತ್ರಸ್ತರ ಬದುಕು ಹಾಗು ಜಾನುವಾರುಗಳ ಬದುಕು ಸಂಕಟಕ್ಕೆ ಸಿಲುಕಿರುವದಕ್ಕೆ ತಾವು ಅತಿಯಾಗಿ ನೊಂದಿದ್ದೀವೆ. ಅಂತವರು ಬದುಕಿನಲ್ಲಿ ಭರವಸೆ ಹಾಗು ಸಮಾದಾನ ಹೊಂದಿರುವಂತೆ ಮಾಡುವುದು ಉಳ್ಳವರ ಕರ್ತವ್ಯ, ಅದಕ್ಕಾಗಿ ಸಾವಿರ ಕಂಬಳಿ ನೀಡಲು ಯೋಚಿಸಿದ್ದು, ನಾಳೆ ಧಾರವಾಡದ ನೆರೆಪೀಡಿತ ಪ್ರದೇಶಕ್ಕೆ ಹೋಗುತ್ತಿದ್ದೇವೆ. ಉಳ್ಳವರ ಹಾಗು ಉದ್ಯಮಿಗಳ ನೆರವು ಪಡೆದು ಶಕ್ತಿಮೀರಿ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಯೋಜನೆ… Continue Reading →
ಬಹುನಿರೀಕ್ಷಿತವಾದ ನಮ್ಮೆಲ್ಲರ E-ಮಠ ‘ಹರೇರಾಮ’ ಬೆಳಕಿನ ಹಬ್ಬದಂದು ಬೆಳಕನ್ನು ಕಂಡಿದೆ.ಇದರೊಂದಿಗೆ ನಿಮ್ಮೆಲ್ಲರೊಡನೆ ಮತ್ತೆ ಮತ್ತೆ ಮಾತನಾಡುವ ನಮ್ಮ ತುಡಿತ ಸಫಲಗೊಂಡಿದೆ.ಎಲ್ಲ ವಿಧದ ದೂರಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೀತಿಗಿದೆ.ಬ್ರಹ್ಮಾಂಡದ ಎರಡು ತುದಿಗಳನ್ನು ಒಂದುಗೂಡಿಸಬಲ್ಲುದು ಪ್ರೀತಿ.ಗುರುಶಿಷ್ಯರ ಪರಸ್ಪರ ಪ್ರೀತಿಯ ಪ್ರಕಟ ರೂಪವೇ ಈ ಅಂತರ್ಜಾಲ ತಾಣ ಅಥವಾ ಅಂತರಂಗ ತಾಣ.ಅಂತರಂಗಗಳನ್ನು ಅಂತರವಿಲ್ಲದಂತೆ ಬೆಸೆಯುವ ತಾಣ.ಇಲ್ಲಿಯವರೆಗೆ ಬಹಿರಂಗದಲ್ಲಿ ದೂರವಿದ್ದಾಗ… Continue Reading →