ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಲದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ,
ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ..
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅನಂತಶಿಷ್ಯ ಸ್ತೋಮದೊದಗೂಡಿ ಕೈಗೊಂಡರು..
ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು.. ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು.. ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು.. ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು.. ನಾವು ಶಂಕರಾಚಾರ್ಯರಾಗಿ ಇಲ್ಲಿಗೆ… Continue Reading →
ಮಾಣಿ, ನವೆಂಬರ್ 05, 2009: ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಯಕ್ಷಗಾನ ಮೇಳವಾದ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ತನ್ನ 2009 ನೇ ವರ್ಷದ ತಿರುಗಾಟವನ್ನು ಇಂದು ಬಂಟ್ವಾಳ ಮಾಣಿ – ಪೆರಾಜೆಯ ಶ್ರೀಮಠದಲ್ಲಿ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಆರಂಭಿಸಿತು. ಶ್ರೀ ಶ್ರೀಗಳು ಶ್ರೀರಾಮದೇವರ… Continue Reading →
ಬಹುನಿರೀಕ್ಷಿತವಾದ ನಮ್ಮೆಲ್ಲರ E-ಮಠ ‘ಹರೇರಾಮ’ ಬೆಳಕಿನ ಹಬ್ಬದಂದು ಬೆಳಕನ್ನು ಕಂಡಿದೆ.ಇದರೊಂದಿಗೆ ನಿಮ್ಮೆಲ್ಲರೊಡನೆ ಮತ್ತೆ ಮತ್ತೆ ಮಾತನಾಡುವ ನಮ್ಮ ತುಡಿತ ಸಫಲಗೊಂಡಿದೆ.ಎಲ್ಲ ವಿಧದ ದೂರಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೀತಿಗಿದೆ.ಬ್ರಹ್ಮಾಂಡದ ಎರಡು ತುದಿಗಳನ್ನು ಒಂದುಗೂಡಿಸಬಲ್ಲುದು ಪ್ರೀತಿ.ಗುರುಶಿಷ್ಯರ ಪರಸ್ಪರ ಪ್ರೀತಿಯ ಪ್ರಕಟ ರೂಪವೇ ಈ ಅಂತರ್ಜಾಲ ತಾಣ ಅಥವಾ ಅಂತರಂಗ ತಾಣ.ಅಂತರಂಗಗಳನ್ನು ಅಂತರವಿಲ್ಲದಂತೆ ಬೆಸೆಯುವ ತಾಣ.ಇಲ್ಲಿಯವರೆಗೆ ಬಹಿರಂಗದಲ್ಲಿ ದೂರವಿದ್ದಾಗ… Continue Reading →