Year 2010

3-1-2010 – ಮಧ್ಯಪ್ರದೇಶದ ಯಾತ್ರೆ – ರತ್ಲಾಮಿನಿಂದ ಇಂದೋರ್

ಜ.೩ – ಇಂದು ಯಾತ್ರೆ ರತ್ಲಾಮಿನಿಂದ ಹೊರಟು ಧಾರ್ (ಧಾರಾ), ಬೇಟ್ಮಾ ಮೂಲಕ ಇಂದೋರನ್ನು ತಲುಪಿತು. ಧಾರ್ – ಧಾರಾನಗರಿ, ಭೋಜರಾಜನ ಆಸ್ಥಾನವಾಗಿದ್ದ ಸ್ಥಳ. ಕಾಲಿದಾಸ ತನ್ನ ಕಾವ್ಯಗಳಿಂದ ರಂಜಿಸಿದ ನಾಡು. ಇದು ವನವಾಸಿ ಕ್ಷೇತ್ರ. ಶ್ರೀ ಮಧುರ ಭಾಯ್ ಕುಲಕರ್ಣಿ ಅವರು ಪ್ರಮುಖ ಭಾಷಣ ಮಾಡಿದರು. ಅವರು ರಾ.ಸ್ವ.ಸೇ.ಸಂ.ದ ರಾಷ್ಟ್ರೀಯ ಸಮಿತಿ ಸದಸ್ಯರು. ಕೋಪನ್… Continue Reading →

ಮರೆಯಾದವರು . . . ಮರೆಯದವರು . . . !!

ಹೇ ಸಕಲ ಜೀವರಾಶಿಗಳ ತ೦ದೇ..!!
ಧ್ವನಿಯನ್ನೆಲ್ಲರಿಗೂ ನೀಡಿದ ನೀನು ಹಾಡನ್ನು ಮಾತ್ರ ಕೆಲವೇ ಕೆಲವರಿಗೇಕೆ ನೀಡಿದೆ..?
ಎಲ್ಲರಿಗೂ ಮುಖವಿತ್ತ ನೀನು ಅಭಿನಯವನ್ನು ಮಾತ್ರ ಕೆಲವೇ ಕೆಲವರಿಗೇಕೆ ಅನುಗ್ರಹಿಸಿದೆ..?
ತಪ್ಪೇನಿಲ್ಲ…….!!!
ಅಡಿಗೆಯನ್ನು ಅಮ್ಮನೊಬ್ಬಳೇ ಮಾಡಿದರೂ ಊಟವನ್ನು ಮನೆಯವರೆಲ್ಲರೂ ಮಾಡುವ೦ತೆ..
ಕಲೆ ಕೆಲವೇ ಕೆಲವರ ಸೊತ್ತಾಗಿದ್ದರೂ ಫಲ ಸಕಲರಿಗೂ ಇದೆ..
ಕೇಳಿ ಆಸ್ವಾದಿಸಲು ಅಶ್ವತ್ಥ್ಥ್ ಗಿರುವ ಕಂಠಸಿರಿಯೇ ಬೇಕೆಂದೇನಿಲ್ಲ ,ನಮ್ಮ ಕಿವಿಗಳೇ ಸಾಕು..!!
ನೋಡಿ ಆನ೦ದಿಸಲು ವಿಷ್ಣುವರ್ಧನನಿಗಿರುವ ಅಭಿನಯ ಕೌಶಲವೇ ಬೇಕೆ೦ದೇನಿಲ್ಲ..
ನಮ್ಮ ಕಣ್ಣುಗಳೇ ಸಾಕು..!!!

Love you dad..

While a man was polishing his new car, his 4 year old daughter picked stone
and scratched lines on the side of the car.

In anger, the man took the child’s hand & hit it many times, not realizing
he was using a wrench.

At the hospital, the child lost all her fingers due to multiple fractures.

When the child saw her father with painful eyes she asked “Dad when will
my fingers grow back?”

Man was so hurt and speechless. He went back to car and kicked it a lot of
times.

Devastated by his own actions sitting in front of that car he looked at the
scratches,

child had written “LOVE YOU DAD”.

2-1-2010 – ರಾಜಸ್ಥಾನದಿಂದ ಮಧ್ಯಪ್ರದೇಶ – ಉದಯಪುರದಿಂದ ರತ್ಲಾಮಿಗೆ ಯಾತ್ರೆ

ಜ.೨ – ಇಂದು ಯಾತ್ರೆ ಉದಯಪುರದಿಂದ ಹೊರಟು ಸಲುಂಬರ್, ಆಶ್ಪುರ್, ಬಾಂಸವಾಡಾ ಮೂಲಕ ರತ್ಲಾಮ್ ನಗರವನ್ನು ಬಂದು ಸೇರಿತು. ಸಲುಂಬರಿನಲ್ಲಿ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ವೇದಿಕೆಯಲ್ಲಿ ಸಂತರಾದ ನಿರಂಜನನಾಥ ಅವಧೂತ ಜೀ, ಪ್ರಕಾಶಾ ಶಾಸ್ತ್ರೀ ಜೀ ಮಹಾರಾಜ್, ಪೂ. ಮೀರಾಮಾತಾ ಜೀ, ಇವರು ದಿವ್ಯ ಉಪಸ್ಥಿತಿ ನೀಡಿದ್ದರು. ಹುಕುಂಚಂದ್ ಸಾವ್ಲಾ ಅವರು ಗೋವಿನ ಭಾವನಾತ್ಮಕ… Continue Reading →

1-1-2010 – ರಾಜಸ್ಥಾನದ ಯಾತ್ರೆ – ಭೀಲ್ವಾಡದಿಂದ ಉದಯಪುರದ ವರೆಗೆ

ಜ.೧ – ಇಂದು ಯಾತ್ರೆ ಭಿಲ್ವಾಡಾದಿಂದ ಸಹಾಡಾ, ರಾಜಸಮಂದ (ಕಂಕ್ರೋಲಿ), ನಾಥದ್ವಾರ – ಉದಯಪುರಕ್ಕೆ ಬಂದು ತಲುಪಿತು. ಸಹಾಡಾದಲ್ಲಿ ಒಳ್ಳೆಯ ಸ್ವಾಗತ ಕಾರ್ಯಕ್ರಮ ನಡೆಯಿತು. ಮುಂದೆ ಕುಂವರಿಯಾದಲ್ಲೂ ಒಳ್ಳೆಯ ರೀತಿಯ ಸ್ವಾಗತ ನಡೆಯಿತು. ಯಾತ್ರೆ ಮುಂದುವರೆದು ರಾಜಸಮುಂದ (ಹಿಂದಿನ ಹೆಸರು ಕಂಕರೋಲಿ)ವನ್ನು ಸೇರಿತು. ನಗರದಲ್ಲಿ 4 ರಿಂದ 5 ಸಾವಿರ ಜನ ಸ್ವಾಗತ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು…. Continue Reading →

ವಿಶ್ವಮಂಗಲ ಗೋಗ್ರಾಮಯಾತ್ರೆಯೂ ಮುಸಲ್ಮಾನರೂ….

ಮೊಹರಂ’ನ ದಿನ ವಿಶ್ವಮಂಗಲ ಗೋಗ್ರಾಮಯಾತ್ರೆಯ ಕಾರ್ಯಕ್ರಮ ರಾಜಸ್ಥಾನದ ಕಿಶನ್ ಗಢದಲ್ಲಿ ನಿಶ್ಚಯವಾಗಿತ್ತು..ಆರಕ್ಷಕರು ಕಾರ್ಯಕ್ರಮಕ್ಕೆ ಅನುಮತಿ ನೀಡಲಿಲ್ಲ..
ಕಾರ್ಯಕ್ರಮ-ಸಂಘಟಕರು ಆರಕ್ಷಕರಿಗೆ ಹೇಳಿದ್ದು ‘ ನೀವು ಮುಸಲ್ಮಾನರನ್ನು ಕೇಳಿ ನಿರ್ಣಯ ಕೊಡಿ ‘ ಎಂಬುದಾಗಿ..ಹೃದಯ ತಟ್ಟುವ ಸಂಗತಿಯಂದರೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲೇಬೇಕೆಂದು ಮುಸಲ್ಮಾನರೇ ಆರಕ್ಷಕರನ್ನು ಆಗ್ರಹಿಸಿದರು..
ಈ ಪ್ರದೇಶದಲ್ಲಿ ಮುಸಲ್ಮಾನರ ಮನೆ-ಮನೆಗಳಲ್ಲಿ ಗೋವುಗಳಿವೆ..ಹಿಂದುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಲ್ಲಿಯೇ ಗೋಪಾಲಕರಿದ್ದಾರೆ..!
ವೇದಿಕೆಯ ಮೇಲೆ ಉಪಸ್ಥಿತನಿದ್ದ ಕೃಷಿಕ ‘ ರಹಮತುಲ್ಲಾ ‘ ಹೇಳಿದ ಮಾತು :
” ನಾವು ನಿಜವಾಗಿ ಹಿಂದುಗಳೇ….ಮುಸಲ್ಮಾನರಾಗಿ ಪರಿವರ್ತನೆಯಾದವರು..ನಮ್ಮ ಪೂರ್ವ ಸಂಸ್ಕಾರವನ್ನು ನಾವು ಮರೆತಿಲ್ಲ..ಮರೆಯುವ ಮನವೂ ಇಲ್ಲ…!! “

Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑