ಕೃಷಿಕ ಶ್ರೀ ರಾಮಮೂರ್ತಿ ಜೋಯ್ಸ್ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರನಾಗಿ 06-11-1967ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಕೊಂಡಿಬೈಲಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಉತ್ತಮೇಶ್ವರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೊಪ್ಪದಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀಶ್ರೀಗಳ ಶ್ರೀಪರಿವಾರದಲ್ಲಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ.
ಪ್ರಥಮ ದರ್ಶನ : ಸುಮಾರು ಹದಿನೇಳು ವರ್ಷಗಳ ಹಿಂದೆ ೨೦.೦೪.೧೯೯೪ರ ಅಪರಾಹ್ನ; ನಾವು ಹಲವು ಸಮಾನ ಮನಸ್ಕರು ಸೇರಿ ಉಕ್ಕಿನಡ್ಕದ ಪರಿಸರದಲ್ಲಿ ಶ್ರಮದಾನ ಮಾಡುತ್ತಿದ್ದ ಸಂದರ್ಭ ಅದಾಗಿತ್ತು. ಆ ನಡುವೆ ಅದೇನೋ ಒಮ್ಮೆಲೆ ಸಂಚಲನವೊದು ಘಟಿಸಿದ ಅನುಭವ. ನಮ್ಮ ಪೀಠದ ಉತ್ತರಾಧಿಕಾರಿ ‘ಶಿಷ್ಯ’ರಾಗಿ ಆಯ್ಕೆಯಾದ ಶ್ರೀ ಶ್ರೀಗಳು ತಮ್ಮ ಪೂರ್ವಾಶ್ರಮದ ಆಪ್ತೇಷ್ಟರ ಕೊನೆಯ ಭೇಟಿಗಾಗಿ ಹೊರಟವರು… Continue Reading →
ಶ್ರೀ ರಾಘವಂ ದಶರಥಾತ್ಮಜಂ ಅಪ್ರಮೇಯಂ | ಸೀತಾಪತಿಂ ರಘುಕುಲಾನ್ವಯ ರತ್ನದೀಪಂ ಆಜಾನುಬಾಹುಂ ಅರವಿಂದದಲಾಯತಾಕ್ಷಂ ರಾಮಂ ನಿಶಾಚರ ವಿನಾಶಕರಂ ನಮಾಮಿ || ಪೂಜ್ಯ ಶ್ರೀಗುರುಗಳ ಚರಣಾರವಿಂದಗಳಿಗೆ ಪ್ರಣಾಮಗಳು ಶ್ರೀಗುರುಗಳ ಅಂತರ್ಜಾಲ ತಾಣದ ಸಮ್ಮುಖ ಅಂಕಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಬರೆಯಬೇಕು. . . . ಆ ರೀತಿಯಿಂದ ಶ್ರೀಗುರುಗಳ ಸಮ್ಮುಖಕ್ಕೆ ಪ್ರತಿಯೊಬ್ಬನೂ ಬರಬೇಕು. . . . ಇದು… Continue Reading →
ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರನ್ನು ನಾನು ಮೊದಲಿಗೆ ನೋಡಿದ್ದು ಅವರ ಸಂನ್ಯಾಸಗ್ರಹಣದ ದಿನ ಬೆಂಗಳೂರಿನ ಗಿರಿನಗರದಲ್ಲಿ. ನಾನಾಗ ಮುಂಬೈಯಲ್ಲಿ ಉದ್ಯೋಗದಲ್ಲಿದ್ದೆ. ಬೆಂಗಳೂರಿಗೆ ಅಂದು ಬಂದಿದ್ದೆ. ಗಿರಿನಗರದ ಶಾಖಾಮಠದಲ್ಲಿ ಅಂದು ವಿಶೇಷ ಕಾರ್ಯಕ್ರಮಿರುವ ವಿಚಾರ ತಿಳಿದು ಸ್ವಲ್ಪ ಹೊತ್ತಿಗೆ ಅಲ್ಲಿಗೆ ಬಂದು ದೂರದಿಂದಲೇ ಅವರನ್ನು ನೋಡಿ, ಮನದಲ್ಲೇ ವಂದಿಸಿ, ಹಿಂತಿರುಗಿದ್ದೆ (ಬಹುಷಃ ಅಂದೇ ಮುಂಬೈಗೆ… Continue Reading →
ಕೇಳಿದ ಸಂದೇಶ ಸಾಲುಗಳನ್ನು ಆಗಾಗ ನಾಲಿಗೆ ಉದ್ಗರಿಸುತ್ತದೆ. ಹೃದಯ ಮೆಲುಕು ಹಾಕುತ್ತದೆ.
ಜೀವನದಲ್ಲಿ ಬರಬಹುದಾದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ದಾಟುವುದಕ್ಕೆ ಸಮರ್ಥವಾದ ಮನೋಧರ್ಮವನ್ನು ಎಲ್ಲರಲ್ಲಿಯೂ ಅಣಿಗೊಳಿಸುವ ಮಹೋದ್ದೇಶ ಶ್ರೀಗಳವರದು.
ಅವರ ಗಂಭೀರವಾದ ಆಶೀರ್ವಚನದ ಜೊತೆಗೆ ಕಚಗುಳಿ ಇಡುವ ಪುಟ್ಟಕತೆ, ಹಾಸ್ಯಮಿಶ್ರಿತ ಹಸಿರು ಚಿಗುರುಗಳೂ ಇವೆ ಎಂಬುದನ್ನೂ ಮರೆಯುವಂತಿಲ್ಲ.
ಹರೇ ರಾಮ………. ನಮಗೆ ಗುರುಗಳಿದ್ದಾರೆ, ನಮಗೆ ಗುರುಮಠವಿದೆ ಎಂಬ ಮಾತನ್ನು ಎಳೆವೆಯಲ್ಲಿದ್ದಾಗಲೇ ನನಗೆ ಕೇಳಿಸಿಕೊಂಡ ನೆನಪಿದೆ. ನನ್ನ ತವರು ಮನೆಯವರು ಗ್ರಾಮ ಗುರಿಕ್ಕಾರರ ಜವಾಬ್ದಾರಿಯುಳ್ಳವರಾಗಿದ್ದರು. ಅವರು ವರ್ಷಕ್ಕೊಂದು ಬಾರಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆಯ ಮಾಣಿ ಮಠಕ್ಕೆ ಹೋಗಿ ಬರುತ್ತಿದ್ದರು. ಈ ನೆಪದಲ್ಲಿ ಒಂದೆರಡು ಸಾರಿ ನಾನು ಮಾಣಿ ಮಠಕ್ಕೆ ಹಿರಿಯರ ಸಂಗಡ ಹೋಗಿದ್ದೆ…. Continue Reading →
ಯಾವ ಮಹಾಮಹಿಮನ ಕೃಪೆಯು ನನ್ನ ಬದುಕಿನ ಎಲ್ಲ ಅಂಗಗಳಲ್ಲಿ ವ್ಯಾಪಿಸಿದೆಯೋ, ಯಾವ ಮಮತಾಮಯಿಯ ಕರುಣೆಯು ವಿಧಿಯಾಟದ ಸುಳಿಯಲ್ಲಿ ಕಳೆದು ಹೋಗುತ್ತಿದ್ದ ಬದುಕನ್ನು ಮೇಲೆತ್ತಿ, ಉದಾತ್ತವಾದುದನ್ನು ಕಿಂಚಿತ್ತಾದರೂ ಅರ್ಥೈಸಿಕೊಳ್ಳಲು ನನ್ನನ್ನು ಪ್ರೇರಿಸಿದೆಯೋ,ಅಂತಹ ಮಹಾತ್ಮನ ಕುರಿತಾಗಿ ನನ್ನ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತಿದ್ದೇನೆ. ಕುರುಡನು ಆನೆಯ ಬಗ್ಗೆ ವರ್ಣಿಸ ಹೊರಟಂತೆ ನಾನೆಷ್ಟೇ ಹೇಳಿದರೂ ಅದು ಆ ವಿರಾಟ್ ವ್ಯಕ್ತಿತ್ವದ ಕಿಂಚಿನ್ಮಾತ್ರವನ್ನೂ ಹೇಳಿದಂತಾಗದೆಂದು ನನಗೆ… Continue Reading →
ನಮ್ಮ ತಂದೆಯವರು ತುಂಬಾ ಬಡತನದಿಂದ ಜೀವನ ಸಾಗಿಸುತ್ತಿದ್ದರು. ಅಮ್ಮನ ಅಕ್ಕನ ಗಂಡ ಆಗಿರುವ ದಿ. ಬಲೇಗಲ್ಲ್ ಚಿದಂಬರಯ್ಯನವರು ನಮ್ಮ ತಂದೆಯವರನ್ನು ಶ್ರೀಮಠದ ಅಂದಿನ ವ್ಯವಸ್ಥಾಪಕರಾದ ಶ್ರೀ ಎ. ಎಸ್. ರಾಮಪ್ಪನವರ ಮುಖಾಂತರ ಜಗದ್ಗುರು ಶಂಕಾರಾಚಾರ್ಯ ಶ್ರೀಮದ್ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಅಪ್ಪಣೆ ಪಡೆದು ಶ್ರೀರಾಮಚಂದ್ರಾಪುರಮಠಕ್ಕೆ ಕರೆತಂದು ಬಿಟ್ಟರು. ತೀರ್ಥರೂಪರು ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ 1981 ರಿಂದ 1997 ಮೇ… Continue Reading →
ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ. ಶ್ರೀ ಮಹಾ ಗಣಪತಿಯು ಕೋಟಿ ಸೂರ್ಯರ ಪ್ರಭೆ ಹೊಂದಿದ್ದಾನಂತೆ. ೧೨ ಜನ ಸೂರ್ಯರಲ್ಲಿ ತಾನು ವಿಷ್ಣು ಎಂದು ಶ್ರೀಮನ್ನಾರಾಯಣನೇ ಹೇಳಿಕೊಂಡಿದ್ದಾನೆ. ವಿಶ್ವಾದಿ ಮೂಲನಾದ ಆ ಮಾಯಾಲೋಲ ವಿಷ್ಣು ಎಂಬ ವಿಚಿತ್ರಕೆ ನಮಿಸಲು ಡಿ.ವಿ. ಗುಂಡಪ್ಪನವರ ಆದೇಶ. ಸೂರ್ಯನನ್ನು ಬಚ್ಚಿಡವುದಕ್ಕಾಗಲೀ, ಮುಚ್ಚಿಡುವುದಕ್ಕಾಗಲೀ ಅಥವಾ ಯಾವುದೇ ರೀತಿಯಿಂದ ಮರೆ ಮಾಚುವುದಕ್ಕಾಗಲೀ… Continue Reading →