ಗೋಕರ್ಣದ ಮಹಾಬಲೇಶ್ವರ ಮಂದಿರದಲ್ಲಿ ನಡೆಯುತ್ತಿರುವ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ಕಾರ್ಯಕ್ರಮ ಇಂದು ಮಧ್ಯಾಹ್ನ ದೇಗುಲದ ಪ್ರಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಭಟ್ಕಳ ಶಾಸಕರಾದ ಜೆ.ಡಿ.ನಾಯಕ್,ಸಂಸದ ಧನಂಜಯ ಕುಮಾರ್, ಗಾಂವ್ಕರ್ ಮೈನ್ಸ್ ನ ಪಿ.ಎಸ್.ಗಾಂವ್ಕರ್ ಮುಂತಾದವರು ಭಾಗವಹಿಸಿದ್ದರು.. ಪ್ರತಿ ಒಂದು ರುದ್ರಾನುಷ್ಠಾನದ ಲೆಕ್ಕದಲ್ಲಿ ಒಂದು ಬಿಲ್ವಪತ್ರದ ಗಿಡವನ್ನು ನೆಡುವುದಾಗಿ ನುಡಿದರು,… Continue Reading →
ಹಳೇ ಮನೆ ಚನ್ನಾಗಿದ್ದರೂ ಕೂಡಾ ಹೊಸಮನೆ ನಿರ್ಮಿಸುವಾಗ ಹಳೆಮನೆಯನ್ನು ಕೆಡವುತ್ತಾರೆ ಹೊಸತನ್ನು ಹಳೆಯದಕ್ಕಿಂತ ಸುಂದರವಾಗಿ ನಿರ್ಮಿಸುತ್ತಾರೆ. ಹಾಗೆಯೇ ನಮ್ಮ ಸಂಘಟನೆಗೆ ಹೊಸ ರೂಪವನ್ನು ಕೊಟ್ಟು ಮೊದಲಿಗಿಂತಲೂ ಸುಂದರವಾಗಿ ಕಟ್ಟುವ ಉದ್ದೇಶ ದಿಂದ ಮಂಡಲಗಳನ್ನು ರಚನೆಮಾಡುತ್ತಿದ್ದೇವೆ ಎಂದು ಕುಮಟಾದಲ್ಲಿ ಮಂಡಲ ಕಾರ್ಯಾಲಯ ಉದ್ಘಾಟನಾ ಸಂದರ್ಭದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ನುಡಿದರು. ಸುಮಾರು ಎಂಟುಸಾವಿರ ಕಾರ್ಯಕರ್ತರನ್ನು… Continue Reading →
ಜಗತ್ತಿನ ಅತಿದೊಡ್ಡ ರಥದ ವೀಕ್ಷಣೆ ಹಾಗೂ ಶಿಲ್ಪಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳವರು ದಿವ್ಯಸಾನಿಧ್ಯವಿತ್ತು ರಾಜಶೇಕರ್ ಹೆಬ್ಬಾರ್ ಮತ್ತು ಕುಟುಂಬದವರಿಗೆ ಆಶೀರ್ವದಿಸಿದರು.. ಈ ಬ್ರಹಧೃಥವನ್ನು ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಶತಮಾನೋತ್ಸವಕ್ಕೆ ಶ್ರೀ ಡಿಸೈನ್ ನ ರಾಜಶೇಖರ ಹೆಬ್ಬಾರ್ ರವರು ಕೇವಲ ಐದುತಿಂಗಳಿನಲ್ಲಿ ಸುಮಾರು ೪೫೦೦೦ ಕಿ.ಗ್ರಾಂ ತೂಕವಿರುವ ಜಗತ್ತಿನ ಅತೀ ಎತ್ತರದ (೬೫ ಅಡಿ) ಏಕಾಹ ರಥವನ್ನು… Continue Reading →
ಪ್ರಾತಃ ಪೂಜೆಯನ್ನು ಸಿರೋಇಯಲ್ಲಿ ಪೂರೈಸಿ, ಮಧ್ಯಾಹ್ನ ಪಾಲಿಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯಸಾನಿಧ್ಯ ವಹಿಸಿದ್ದರು.. ಕಾರ್ಯಕ್ರಮದಲ್ಲಿ ಸ್ವಾಮೀ ಅಖಿಲೇಶಾನಂದ ಜಿ, ಶಂಕರಲಾಲ್ ಅಗರ್ವಾಲ್ ಮುಂತಾದವರು ಭಾಗವಹಿಸಿದ್ದರು.. ಅಲ್ಲಿಂದ ಅಪರಾಹ್ನ ರೋಹತ್ ನಲ್ಲಿ ಜರುಗಿದ ಯಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.. ಸಂಜೆ ಜೋಧಪುರ ದಲ್ಲಿ ನೆರವೇರಿದ ವಿಶ್ವಮಂಗಲ ಗೋ ಗ್ರಾಮ… Continue Reading →
ವಡೋಧರ(ಗುಜರಾತ್), ಡಿ. ೧೯: ‘ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಕೆಲ ವಿದ್ರೋಹಿ ಶಕ್ತಿಗಳು ಮಾದ್ಯಮಗಳ ಮೂಲಕ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶಿಷ್ಯ-ಭಕ್ತ ಸಮುದಾಯ ಇದಕ್ಕೆ ಕಿವಿಗೊಡದೇ ಸಂಘಟಿತವಾಗಿ ಮುನ್ನಡೆಯಬೇಕು’ ಎಂದು ಗೋಕರ್ಣ ಮಂಡಲಾಧೀಶ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ. ‘ದೇಶೀಯ ಗೋ ತಳಿಗಳ ಸಂರಕ್ಷಣೆಯ ಮಹಾ ಆಂದೋಲನದ ಮಹತ್ಕಾರ್ಯದ ಅಂಗವಾಗಿ… Continue Reading →
ಶ್ರೀಗಳು ಬೆಳಗಿನ 7 ಗಂಟೆಗೆ ಪ್ರಕಾಶ್ ಹಿಂದುಜಾ (ಹಿಂದುಜಾ ಗ್ರೂಪ್ ಆಫ್ ಕಂಪನೀಸ್) ರವರ ಜುಹೂ ಮನೆಗೆ ತೆರಳಿ ಹಿಂದುಜಾ ಕುಟುಂಬದವರಿಗೆ ಆಶೀರ್ವದಿಸಿದರು.. ಹಾಗೂ ಸಮುದ್ರ ದರ್ಶನ,ಪೂಜೆಗೈದರು.. ಪುನಃ ಮೊಕ್ಕಾಂ ಗೆ ಆಗಮಿಸಿ ಪ್ರಾತಃ ಪೂಜಾ ಹಾಗೂ ಭಿಕ್ಷಾಕೈಗೊಂಡರು.. ನಂತರ ಭಿಕ್ಷಾ ಫಲ ಸಮರ್ಪಣೆ ಹಾಗೂ ಪಾದ ಪೂಜಾ ಮಂಗಳಾರತಿ ಸ್ವೀಕರಿಸಿ.. ಭಿಕ್ಷಾಸೇವೆ ಮಾಡಿದ ಮುಂಬೈ… Continue Reading →
12-12-2009 ರ ಕಾರ್ಯಕ್ರಮಗಳು ಪ್ರಾತಃ ಪೂಜೆ ಯನ್ನು ಪೂನೆಯ ಆನಂದ್ ಭಟ್ ರವರ ಮನೆಯಲ್ಲಿ ಪೂರೈಸಿ ಮಧ್ಯಾಹ್ನ ಪ್ರಕಾಶ್ ಭಟ್ ರವರ ನೂತನ ಫ್ಯಾಕ್ಟರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಟ ಸುರೇಶ ಒಬೆರಾಯ್, ಟಿ ಎನ್ ಸಿಂಗ್ ಮುಂತಾದವರು ಭಾಗವಹಿಸಿದ್ದರು..ಅಲ್ಲಿಂದ ಶ್ರೀಗಳು ಪುನಃ ಪೂನಾದ ಆನಂದ್ ಭಟ್ ರವರಲ್ಲಿಗೆ ಆಗಮಿಸಿ ಪೂಜೆ ಮುಗಿಸಿ ಸಂಜೆ ಪೂನಾದ ಪ್ರತಿಷ್ಠಿತ… Continue Reading →
ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು.. ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು.. ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು.. ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು.. ನಾವು ಶಂಕರಾಚಾರ್ಯರಾಗಿ ಇಲ್ಲಿಗೆ… Continue Reading →
ಶ್ರೀ ಗಳು ಪ್ರಾತಃ ಪೂಜೆಯನ್ನು ಕೊಲ್ಲಾಪುರದ H V ಭಾಸ್ಕರ್ ರವರ ಮನೆಯಲ್ಲಿ ಪೂರೈಸಿ, ಅಲ್ಲಿಂದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದರು ಅಲ್ಲಿ ಮಹಾಲಕ್ಷ್ಮಿಯ ದರ್ಶನ ಪಡೆದು ತಾಯಿಯ ಪಾದಾರವಿಂದಗಳಿಗೆ ನಮಸ್ಕರಿಸಿದರು.. ಅಲ್ಲಿಂದ ಕೊಲ್ಲಾಪುರದಲ್ಲಿರುವ ಕರವೀರ ಶಂಕರ ಪೀಠಕ್ಕೆ ಭೇಟಿ ನೀಡಿ ಸ್ವಾಮಿಗಳೊಂದಿಗೆ ಅಲ್ಲಿಯ ಗೋ ಶಾಲೆ ವೀಕ್ಷಿಸಿದರು.. ತದನ೦ತರ H V ಭಾಸ್ಕರ್ ರವರ… Continue Reading →