Author Sri Samyojaka

26- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಹೊನ್ನಾವರ, ಹೊಸಾಕುಳಿ, ಕಡ್ಳೆ ಹಾಗೂ ಕರ್ಕಿ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 26.8.2013, ಸೋಮವಾರ ಇಂದು ಹೊನ್ನಾವರ ಮಂಡಲದ ಹೊನ್ನಾವರ, ಹೊಸಾಕುಳಿ, ಕಡ್ಳೆ ಹಾಗೂ ಕರ್ಕಿ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀ ಗುರುಗಳು ಶ್ರೀಕರಾರ್ಚಿತ ದೇವರುಗಳ ಪೂಜೆ ಮಾಡಿದ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಗೋವಿಂದ ಗಣಪತಿ ಜೋಶಿ ಕರ್ಕಿ ವಲಯದವರು ಗುರುಭಿಕ್ಷಾ ಸೇವೆಯನ್ನು ವಲಯಗಳ ಪರವಾಗಿ ನೆರವೇರಿಸಿದರು. ಶ್ರೀ ಪ್ರಮೋದ್ ರೈ ಪೂರ್ವ… Continue Reading →

25- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಗೇರುಸೊಪ್ಪ, ಅಪ್ಸರಕೊಂಡ, ಧಾರವಾಡ, ಹುಬ್ಬಳ್ಳಿ ಹಾಗೂ ಹಾವೇರಿ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 25.8.2013, ಆದಿತ್ಯವಾರ ಇಂದು ಹೊನ್ನಾವರ-ಭಾರತ ಮಂಡಲದ ಗೇರುಸೊಪ್ಪ, ಅಪ್ಸರಕೊಂಡ, ಧಾರವಾಡ, ಹುಬ್ಬಳ್ಳಿ ಹಾಗೂ ಹಾವೇರಿ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಪುರಂದರ ಹೆಗಡೆ ಹುಬ್ಬಳ್ಳಿ ಇಂದಿನ ಸೇವಾಕರ್ತೃತ್ವವನ್ನು ವಹಿಸಿದ್ದರು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಆಂಜನೇಯನಿಗೆ… Continue Reading →

24- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಶ್ರೀಮತಿ ಸರ್ಪಂಗಳ ಗಂಗಮ್ಮ ಮತ್ತು ಮಕ್ಕಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 24.8.2013, ಶನಿವಾರ ಇಂದು ಶ್ರೀಮತಿ ಸರ್ಪಂಗಳ ಗಂಗಮ್ಮ ಮತ್ತು ಮಕ್ಕಳು ಗುರುಭಿಕ್ಷಾಸೇವೆ ನಡೆಸಿದರು. ಶ್ರೀಗುರುಗಳ ರಾಮಾದಿ ಪೂಜೆಗಳ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಸರ್ಪಂಗಳ ಕುಟುಂಬದವರು, ಶ್ರೀ ಎಸ್ ವೆಂಕಟೇಶ ರೆಡ್ಡಿ ಬೆಂಗಳೂರು, ಶ್ರೀ ಎಮ್ ರಾಮಮೂರ್ತಿ ಬೆಂಗಳೂರು ಶ್ರೀಗುರುಗಳಿಂದ ಆಶೀರ್ವಾದವನ್ನು ಪಡೆದರು. ~ ಯಾಗಶಾಲೆಯಿಂದಃ ಗಣಪತಿ ಅಥರ್ವ ಶೀರ್ಷಹೋಮ, ಭಿಕ್ಷಾಂಗ ಆಂಜನೇಯ ಹವನ,… Continue Reading →

23- ಅಗೋಸ್ತು-2013: ಉಪ್ಪಿನಪಟ್ಟಣ, ಮಿರ್ಜಾನ, ಕಾರವಾರ-ಅಂಕೋಲ ಹಾಗೂ ಗೋವಾ ವಲಯದವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ23.8.2013, ಶುಕ್ರವಾರ ಇಂದು ಕುಮಟಾ ಮಂಡಲದ ಉಪ್ಪಿನಪಟ್ಟಣ, ಮಿರ್ಜಾನ, ಕಾರವಾರ-ಅಂಕೋಲ ಹಾಗೂ ಗೋವಾ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಕಾಂತ ಭಾಸ್ಕರ ಹೆಗಡೆಯವರು ಭಿಕ್ಷಾಂಗ ಕಾರ್ಯಗಳನ್ನು ನೆರವೇರಿಸಿದರು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟು ಶ್ರೀಗುರುಗಳಿಂದ ಮಾರ್ಗದರ್ಶನ ಪಡೆದರು. ~ ಯಾಗಶಾಲೆಯಿಂದಃ… Continue Reading →

22- ಅಗೋಸ್ತು-2013: ಕುಮಟಾ, ವಾಲಗಳ್ಳಿ, ಮೂರೂರು ಹಾಗೂ ಹೆಗಡೆ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ22.8.2013, ಗುರುವಾರ ಕುಮಟಾ ಮಂಡಲದ ಕುಮಟಾ, ವಾಲಗಳ್ಳಿ, ಮೂರೂರು ಹಾಗೂ ಹೆಗಡೆ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಶ್ರೀರಾಮಾದಿ ದೇವರುಗಳ ಪೂಜೆಯ  ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ವಲಯ ಸಭೆಯಲ್ಲಿ ವಲಯಗಳ ಕೆಲಸಕಾರ್ಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ~ ಯಾಗಶಾಲೆಯಿಂದಃ ಆಂಜನೇಯ ಹವನ, ಗಣಪತಿ ಹವನ ನವಗ್ರಹ ಶಾಂತಿ ಬೃಹಸ್ಪತಿ ಶಾಂತಿ, ವಿದ್ಯಾಗಣಪತಿ… Continue Reading →

21- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಕೆಕ್ಕಾರು, ಧಾರೇಶ್ವರ, ಗುಡೆಯಂಗಡಿ, ಚಂದಾವರ ವಲಯದವರ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ21.8.2013, ಬುಧವಾರ ಇಂದು ಕುಮಟಾ ಮಂಡಲದ ಕೆಕ್ಕಾರು, ಧಾರೇಶ್ವರ, ಗುಡೆಯಂಗಡಿ, ಚಂದಾವರ ವಲಯದವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಶ್ರೀರಾಮದೇವರ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.  ಕುಮಟಾ ವಲಯದವರ ಪರವಾಗಿ  ಶ್ರೀಪಾದ ನಾರಾಯಣ ಹೆಗಡೆ ಹೊಲನಗದ್ದೆ ನೇತೃತ್ವ ವಹಿಸಿದ್ದರು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಎದುರು ಇಡಲಾಯಿತು. ಡಾ. ಶ್ವೇತಾ… Continue Reading →

20- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಮಾತೃಶಾಖಾ ವತಿಯಿಂದ ಸರ್ವಸೇವೆ “ಮಾತೃ ಸಮಾವೇಶ “

ಪೆರಾಜೆ-ಮಾಣಿ ಮಠಃ20.8.2013, ಮಂಗಳವಾರ. ಇಂದು ಮಾತೃಸಮಾವೇಶ. ಮಾತೃಶಾಖಾ ವತಿಯಿಂದ ಸರ್ವಸೇವೆ ನಡೆಯಿತು.  ಈಶ್ವರೀ ಶ್ಯಾಮ ಭಟ್ ಬೇರ್ಕಡವು ದಂಪತಿ ಭಿಕ್ಷಾಂಗ ಕಾರ್ಯಕ್ರಮಗಳನ್ನು ನೆರವೇರಿಸಿದರು. ಎರಡು ಸಾವಿರಕ್ಕೂ ಮಿಕ್ಕಿ ಮಾತೆಯರು ಇಂದಿನ ಸಮಾವೇಶದಲ್ಲಿ ಪಾಲ್ಗೊಂಡರು. ಶ್ರೀಗುರುಗಳ ರಾಮಾದಿ ದೇವರುಗಳ ಪೂಜೆಯ ಬಳಿಕ 510 ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀಗುರುಗಳು ಅಮ್ಮಂದಿರ ದಿನವನ್ನು ಗೀತಗಾಯನ, ಚಿತ್ರ, ವ್ಯಾಖ್ಯಾನಗಳ ಮೂಲಕ ಗೌರವದ… Continue Reading →

19- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಸಾಗರ ಮಂಡಲದ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ19.8.2013, ಸೋಮವಾರ ಇಂದು ಸಾಗರ ಮಂಡಲದ ಕೆಳದಿ, ಆವಿನಹಳ್ಳಿ, ಕ್ಯಾಸನೂರು, ಮರಗುಡಿ, ಉಳವಿ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ಶ್ರೀರಾಮಾದಿ ದೇವರುಗಳ ಪೂಜೆಯನ್ನು ಮಾಡಿದ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ವಲಯಗಳ ಪರವಾಗಿ ಶ್ರೀ ಗಣಪತಿ ಬಿ ಆರ್ ಬಂದಗದ್ದೆ ಕೆಳದಿ ವಲಯದವರು ಗುರುಭಿಕ್ಷಾ ಸೇವೆ ನಡೆಸಿದರು. ಐದು ವಲಯಗಳ ವಲಯ ಸಭೆಯಲ್ಲಿ ವಲಯಗಳ… Continue Reading →

18- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಸಾಗರ ಮಂಡಲದ ಐದು ವಲಯಗಳ ಗುರುಭಿಕ್ಷಾಸೇವೆ; ಕನ್ಯಾ ಸಮಾವೇಶ

ಪೆರಾಜೆ-ಮಾಣಿ ಮಠಃ18.8.2013, ಆದಿತ್ಯವಾರ ಇಂದು ಸಾಗರ ಮಂಡಲದ ಐದು ವಲಯ- ಸಾಗರ ನಗರ ಪೂರ್ವ – ಪಶ್ಚಿಮ, ಇಕ್ಕೇರಿ, ಕೊಗೋಡು ಮತ್ತು ಗೋಳಗೋಡು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಸಾಗರ ವಲಯಗಳ ಪರವಾಗಿ ಸಾಗರ ನಗರ ಪೂರ್ವದ ಶ್ರೀ ಶೇಷಗಿರಿ ಶ್ರೀಗುರುಗಳಿಗೆ ಭಿಕ್ಷಾಸೇವೆ ನಿರ್ವಹಿಸಿದರು. ನಂತರ ನಡೆದ ವಲಯಗಳ… Continue Reading →

17- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಏಕಾದಶೀ

ಪೆರಾಜೆ-ಮಾಣಿ ಮಠಃ 17.8.2013, ಶನಿವಾರ ಇಂದು ಏಕಾದಶೀ. ಶ್ರೀಗುರುಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಶ್ರೀ ನಳಿನ್ ಕುಮಾರ್ ಕಟೀಲ್ ಎಂ ಪಿ ಮಂಗಳೂರು, ಶ್ರೀಮಠದ ಪದಾಧಿಕಾರಿಗಳು ಶ್ರೀಗುರುಗಳ ಅನುಗ್ರಹ ಪಡೆದರು. ~ ಯಾಗಶಾಲೆಯಿಂದಃ ಗಣಪತಿ ಹವನ, ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ,… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑