ಪೆರಾಜೆ-ಮಾಣಿ ಮಠಃ7.8.2013, ಬುಧವಾರ ಇಂದು ಸುಳ್ಯ, ಗುತ್ತಿಗಾರು ಹಾಗೂ ಕೊಡಗು ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ಶ್ರೀರಾಮಾದಿ ದೇವರುಗಳಿಗೆ ಪೂಜೆ ಸಲ್ಲಿಸಿದ ನಂತರ ಮಾತೆಯರು ಕುಂಕುಮಾರ್ಚನೆ ನಡೆಸಿದರು. ವಲಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ಎಸ್ ಎಮ್ ಶರ್ಮಾ ಸಂಪತ್ತಿಲ, ಶ್ರೀ ಪ್ರದೀಪ ದ ನಾಯಕ್ (ಜಿ.ಪಂ. ಸದಸ್ಯರು ಗೋಕರ್ಣ, ಧರ್ಮದರ್ಶಿಗಳು ಶ್ರೀ… Continue Reading →
ಪೆರಾಜೆ-ಮಾಣಿ ಮಠಃ 6.8.2013, ಮಂಗಳವಾರ ಇಂದು ಸೀತಾಂಗೋಳಿ ಹಾಗೂ ಎಡನಾಡು ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಎರಡೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕ್ಯಾ. ಗಣೇಶ್ ಕಾರ್ಣಿಕ್ ಎಮ್ ಎಲ್ ಸಿ, ಶ್ರೀ ಮುರಳೀ ಕಡೆಕ್ಕಾರ್… Continue Reading →
ಪೆರಾಜೆ-ಮಾಣಿ ಮಠಃ5.8.2013, ಸೋಮವಾರ ಇಂದು ಬೆಳ್ಳಾರೆ, ಚೊಕ್ಕಾಡಿ ಮತ್ತು ಪಂಜ ವಲಯದವರ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀದೇವರುಗಳ ಪೂಜೆಗಳು ನಡೆದ ಮೇಲೆ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಬೆಳ್ಳಾರೆ, ಚೊಕ್ಕಾಡಿ ಹಾಗೂ ಪಂಜ ವಲಯದವರ “ವಲಯ ಸಭೆ”ಯಲ್ಲಿ ವಲಯಗಳ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶ್ರೀ ಬಿ ಜೆ ಶರ್ಮಾ ಬೆಂಗಳೂರು, ಡಾ.ರಾಮಯ್ಯ… Continue Reading →
ಪೆರಾಜೆ-ಮಾಣಿ ಮಠಃ 4-08-2013, ಆದಿತ್ಯವಾರ ವಿಜಯ ಚಾತುರ್ಮಾಸ್ಯದ ಇಂದಿನ ದಿನದ ಗುರುಭಿಕ್ಷಾ ಸೇವೆ ಬಾಯಾರು ಮತ್ತು ಉಡುಪಿ ವಲಯದಿಂದ ನಡೆಯಿತು. ಶ್ರೀಗುರುಗಳ ಶ್ರೀಕರಗಳಿಂದ ಶ್ರೀದೇವರ ಪೂಜೆಗಳು ನೆರವೇರಿದವು. ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಈ ದಿನದ ಭಿಕ್ಷಾ ಸೇವೆಯನ್ನು ವಲಯದ ವತಿಯಿಂದ ಶ್ರೀ ರಾಮಚಂದ್ರ ಭಟ್, ಬಾಯಾರು ವಲಯದವರು ನೆರವೇರಿಸಿದರು. ಈ ದಿನ “ಗುರಿಕ್ಕಾರರ ಸಮಾವೇಶ” ನಡೆಯಿತು. ರಾಮಚಂದ್ರಾಪುರ ಮಂಡಲ,ಸಾಗರ ಮಂಡಲ,… Continue Reading →
ಪೆರಾಜೆ- ಮಾಣಿ ಮಠಃ 3.8.2013, ಶನಿವಾರ ಇಂದಿನ ದಿನ ಮುಂಬೈ -ಪೂನಾ ವಲಯದವರ ಗುರುಭಿಕ್ಷಾ ಸೇವೆ ನಡೆಯಿತು. ಸಪರಿವಾರ ಶ್ರೀರಾಮ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಪೀಠದ ಮುಂಬೈ ಹಾಗೂ ಪೂನಾ ಪ್ರಾಂತ್ಯದ ಶಿಷ್ಯರು ಶ್ರೀಗುರುಗಳಿಗೆ ಫಲಕಾಣಿಕೆಗಳನ್ನಿತ್ತು, ತಮ್ಮ ಮಂಡಲದ ಆಗುಹೋಗುಗಳನ್ನು ಶ್ರೀಚರಣದ ಮುಂದಿಟ್ಟರು. ಇಂದಿನ ದಿನ ಆಂಜನೇಯನಿಗೆ 1008 ಸೀಯಾಳಾಭಿಷೇಕ ಸೇವೆ ನಡೆಯಿತು. ಇಂದು ಆಂಜನೇಯನಿಗೆ ಹಣ್ಣಡಿಕೆ ಕಣಜ ಸೇವೆಯೂ ನಡೆಯಿತು. ಈ ಸಂದರ್ಭದಲ್ಲಿ … Continue Reading →
ಪೆರಾಜೆ-ಮಾಣಿ ಮಠಃ 2.8.2013, ಶುಕ್ರವಾರ ಏಕಾದಶಿಯ ದಿನವಾದ ಇಂದು ಮಹಿಳೆಯರಿಂದ ಕುಂಕುಮಾರ್ಚನೆ ಹಾಗೂ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು. ಯಾಗಶಾಲೆಯಿಂದಃ ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯ ಹವನಗಳು, ಹನುಮನಿಗೆ ಇಂದಿನ ವಿಶೇಷ ಅಲಂಕಾರ – ಬಾಳೆಹಣ್ಣಿನ ಕಣಜ ಸೇವೆ ನಡೆಯಿತು. ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಸಮಗ್ರ ಯಜುರ್ವೇದ ಪಾರಾಯಣ ನಡೆಯಿತು. ~ ಸಂಧ್ಯಾಕಾರ್ಯಕ್ರಮ: ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ… Continue Reading →
ಪೆರಾಜೆ-ಮಾಣಿ ಮಠಃ1.8.2013, ಗುರುವಾರ ಇಂದಿನ ದಿನ ಶ್ರೀ ನಾರಾಯಣ ಭಟ್ ಹಾರಕರೆಯವರ ಗುರುಭಿಕ್ಷಾಸೇವೆಯನ್ನು ನಡೆಸಿದರು. ಶ್ರೀಗುರುಗಳ ಕರಕಮಲಗಳಿಂದ ಸಂಪನ್ನಗೊಂಡ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಕೃಷ್ಣ ಭಟ್ ಮತ್ತು ಪವಿತ್ರ ಗಂಗಾ ಸರವು, ಕೆ ಎಸ್ ಗುರುಮೂರ್ತಿ ಶಿಕಾರಿಪುರ ಶಿವಮೊಗ್ಗ, ಕಲ್ಪನಾಜಿ, ಶ್ರೀ ಗೋಪಿನಾಥ ಶೆಟ್ಟಿ ಹಾಗೂ ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ವೃಂದ ಪುತ್ತೂರು,… Continue Reading →
ಪೆರಾಜೆ- ಮಾಣಿ ಮಠಃ 31.7.2013, ಬುಧವಾರ ವಿಜಯ ಚಾತುರ್ಮಾಸ್ಯದ ಈ ದಿನ ಡಾ. ಶ್ಯಾಮ ಭಟ್, ಬಡೆಕ್ಕಿಲ ಗುರುಭಿಕ್ಷಾಸೇವೆಯನ್ನು ನಡೆಸಿದರು. ಶ್ರೀಕರಾರ್ಚಿತ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ನಳಿನ್ ಕುಮಾರ್ ಕಟೀಲ್ (ಎಮ್ .ಪಿ ಮಂಗಳೂರು), ಶ್ರೀ ನರಸಿಂಹ ಹೆಗಡೆ ಕೆರೆಮನೆ, ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್, ಶ್ರೀ ವಿಶ್ವ ಪುಂಡಿತ್ತೂರು, ಮುರಳೀಕೃಷ್ಣ… Continue Reading →
ಪೆರಾಜೆ-ಮಾಣಿ ಮಠಃ 30.7.2013, ಮಂಗಳವಾರ ವಿಜಯ ಚಾತುರ್ಮಾಸ್ಯದ ಈ ದಿನ ಡಾ. ರಾಧಾಕೃಷ್ಣ ಡಿ ಎಸ್ ಕೆದುಂಬಾಡಿಯವರ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀರಾಮಾದಿಗಳ ಪೂಜೆಗಳ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಈ ದಿನದ ಸಭೆಯಲ್ಲಿ ಗಿರೀಶ್ ಭಾರಧ್ವಾಜ್, ರವಿಶಂಕರ್ ಭಾರಧ್ವಾಜ್ ಸುಳ್ಯ, ಕೆದುಂಬಾಡಿ ಮನೆಯವರು, ಡಾ. ಜಯಗೋವಿಂದ ಬೆಂಗಳೂರು, ಡಿ. ಹೆಚ್ ಪ್ರಕಾಶ್ ರೈ ಪಾಣೆಮಂಗಳೂರು… Continue Reading →
ಪೆರಾಜೆ ಮಾಣಿಮಠಃ 29.7.2013, ಸೋಮವಾರ ಇಂದು ಗೋಕರ್ಣಮಂಡಲದ ಉಪಾಧಿವಂತರ ಗುರುಭಿಕ್ಷಾ ಸೇವೆ ನಡೆಯಿತು. ಮಂಡಲದ ಪರವಾಗಿ ಶ್ರೀ ರಮೇಶ ಪ್ರಸಾದ, ಗೋಕರ್ಣ ಭಿಕ್ಷಾಕಾರ್ಯ ನೆರವೇರಿಸಿದರು. ಗೋಕರ್ಣ ಮಂಡಲದ ಶಿಷ್ಯರು ಗುರುಸೇವೆ ಮಾಡಿ ಕೃತಾರ್ಥರಾದರು. ಶ್ರೀಕರಾರ್ಚಿತ ದೇವರ ಪೂಜೆಗಳು ನಡೆದು, ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಮಹಾಸಭೆಯಲ್ಲಿ ಶ್ರೀ ಶಶಿಧರ ಕೋಟೆ, ಶ್ರೀಮಠದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಾಗಶಾಲೆಯಿಂದಃ… Continue Reading →