ಪೆರಾಜೆ-ಮಾಣಿ ಮಠಃ 28.7.2013, ಆದಿತ್ಯವಾರ ಚಾತುರ್ಮಾಸ್ಯದ ಈ ಸುದಿನದಂದು ಶ್ರೀರಾಮಾದಿ ದೇವತೆಗಳ ಪೂಜೆಯ ನಂತರ ಶ್ರೀಗಳು ಶ್ರೀಮಠದ ಆವರಣದಲ್ಲಿರುವ ಆಂಜನೇಯ ಸ್ವಾಮಿಗೆ ವಡೆ ಕಣಜ ಮಾಡಿ ವಿಶೇಷ ಪೂಜೆಗೈದರು. ಅಷ್ಟಾವದನ ಸಹಿತವಾಗಿ ಭವ್ಯ ಪೂಜೆ ನೆರವೇರಿತು. ಶ್ರೀಮಠದ ಶಿಷ್ಯರು ಈ ಪುಣ್ಯಸೇವೆಯನ್ನು ಕಣ್ತುಂಬಿಕೊಂಡರು. ಎಂದಿನಂತೆ ಮಹಿಳೆಯರು ಕುಂಕುಮಾರ್ಚನೆ ಸೇವೆ ಸಲ್ಲಿಸಿದರು. ಇಂದಿನ ಭಿಕ್ಷಾಕರ್ತೃಗಳಾದ ಚೆನ್ನೈ ವಲಯದ… Continue Reading →
ಪೆರಾಜೆ-ಮಾಣಿಮಠಃ 27-7-2013, ಶನಿವಾರ ವೇಣೂರು, ಉಜಿರೆ ಮತ್ತು ಉರುವಾಲು ವಲಯಗಳ ಗುರುಭಿಕ್ಷಾಸೇವಾ ಕಾರ್ಯಕ್ರಮ ವಿಜಯ ಚಾತುರ್ಮಾಸ್ಯದ ಈ ಪುಣ್ಯಸಮಯದಲ್ಲಿ ನಡೆಯಿತು. ಶ್ರೀಕರಾರ್ಚಿತ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಮೂರು ವಲಯಗಳ “ವಲಯ ಸಭೆ”ಯಲ್ಲಿ ವಿಷಯಗಳನ್ನು ಶ್ರೀಪೀಠದೆದುರು ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ವಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು … Continue Reading →
ಪೆರಾಜೆ-ಮಾಣಿ ಮಠಃ 26-7-2013, ಶುಕ್ರವಾರ ಇಂದಿನ ಗುರುಭಿಕ್ಷಾಸೇವಾ ಕಾರ್ಯಕ್ರಮ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ ವಲಯದ ಶಿಷ್ಯರಿಂದ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಮೂರೂ ವಲಯಗಳ “ವಲಯ ಸಭೆ”ಯಲ್ಲಿ ವಲಯದ ಆಗು ಹೋಗುಗಳನ್ನು ಪೀಠದ ಮುಂದಿಡಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ… Continue Reading →
ಪೆರಾಜೆ-ಮಾಣಿ ಮಠ: 25-07-2013 ಮಾಣಿ ಮಠದಲ್ಲಿ ವಿಜಯ ಚಾತುರ್ಮಾಸ್ಯದ ನಾಲ್ಕನೇ ದಿನ ಡಾ||ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು– ಇವರಿಂದ ಸರ್ವಸೇವೆ ನಡೆಯಿತು. ಶ್ರೀಮಠದ ಪದಾಧಿಕಾರಿಗಳು, ಶ್ರೀಮತಿ ಉಷಾ ಅಗರ್ ವಾಲ್, ಅಲ್ಕಾ ಪಟೇಲ್ ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಈ ವಿಶೇಷ ದಿನದಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕತೃಗಳಾದ ಶ್ರೀ ಭೀಮೇಶ್ವರ ಜೋಷಿ ಹಾಗೂ ಕುಟುಂಬದವರು ಶ್ರೀ… Continue Reading →
ಪೆರಾಜೆ-ಮಾಣಿಃ 24.7.2013, ಬುಧವಾರ. ವಿಜಯ ಚಾತುರ್ಮಾಸ್ಯದ ಮೂರನೇ ದಿನದ ಗುರುಭಿಕ್ಷಾ ಸೇವೆಯನ್ನು ನಡೆಸಿಕೊಟ್ಟವರು ಮಾಣಿ, ಕಬಕ ಮತ್ತು ಉಪ್ಪಿನಂಗಡಿ ವಲಯದವರು. ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ ನಡೆದು ನಂತರ ಮೂರು ವಲಯಗಳ “ವಲಯ ಸಭೆ” ಜರುಗಿತು. ವಲಯದ ಆಗುಹೋಗುಗಳ ಪಟ್ಟಿ ಪೀಠದ ಮುಂದಿರಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಮಾಣಿ, ಕಬಕ… Continue Reading →
ಗುರುಪೂರ್ಣಿಮೆಯ ದಿನ ನಡೆದ ಕಾರ್ಯಕ್ರಮಗಳುಃ ಪೆರಾಜೆ-ಮಾಣಿ ಮಠಃ 22.7.2013 ಸೋಮವಾರ “ಚಾತುರ್ಮಾಸ್ಯದ ಕಾಲ ಸತತವಾಗಿ ವರ್ಷಧಾರೆ ಸುರಿಯುತ್ತಿದೆ. ಜೀವಸಂಕುಲವು ಮಾರ್ಗವನ್ನೆಲ್ಲಾ ವ್ಯಾಪಿಸಿರುವ ಈ ಕಾಲ ಸಂಚಾರಯೋಗ್ಯವಲ್ಲ. ಅದರಲ್ಲಿಯೂ ವಿಶೇಷವಾಗಿ ಯತಿಗಳಿಗೆ ನಿರಂತರವಾಗಿ ವಸತಿ ಮಾಡತಕ್ಕಂತ ಕಾಲ. ಹಾಗಾಗಿ ಈ ಬಾರಿಯ ಚಾತುರ್ಮಾಸ್ಯದ ವ್ರತವನ್ನು ಶ್ರೀ ಮಠದ ನಿಷ್ಠ ಶಿಷ್ಯಭಕ್ತರೆಂದು ಪ್ರಾಪ್ತವಾಗತಕ್ಕಂತಹ ಮಂಗಳೂರು ಹೋಬಳಿಯ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನಿಮಗೆ ಯಾರಿಗೂ… Continue Reading →
ವಿಜಯ ಚಾತುರ್ಮಾಸ್ಯಕ್ಕಾಗಿ ಶ್ರೀಗುರುಗಳ ಪುರಪ್ರವೇಶ ಪೆರಾಜೆ, ಮಾಣಿ ಮಠ: 20 ಜುಲೈ, 2013 “ಹನುಮನೊಡನೆ ರಾಮನೆಡೆಗೆ” ಎಂಬ ಕರೆಯನ್ನು ಹೊತ್ತ ವಿಜಯ ಸಂವತ್ಸರದ ಚಾತುರ್ಮಾಸ್ಯ ವ್ರತದ ಪ್ರಾರಂಭದ ಹಂತವಾಗಿ ಶ್ರೀಗುರುಗಳ ಪುರಪ್ರವೇಶವು ಅದ್ದೂರಿಯಿಂದ ನಡೆಯಿತು. ಮಾಣಿ ವಲಯದ ಭಾಗವಾಗಿರುವ ಕಲ್ಲಡ್ಕ ಉಮಾಶಿವ ಕ್ಷೇತ್ರದಿಂದ ಶ್ರೀಗುರುಗಳನ್ನು ಮಠದ ಸರ್ವ ಪದಾಧಿಕಾರಿಗಳು ಎದುರುಗೊಂಡು ಭವ್ಯ ಮೆರವಣಿಗೆಯ ಮೂಲಕ ಪೆರಾಜೆಯ… Continue Reading →