Category Blog/Loka~Lekha

Sri Swamiji will blog here on the general and social topics.

ಮೃತ್ಯುವಿಂ ಭಯವೇಕೆ?

ಜೀವಿಗೆ ಹುಟ್ಟು ನೈಸರ್ಗಿಕ..

ಹುಟ್ಟಿದ ಮೇಲೆ ಬದುಕು ನೈಸರ್ಗಿಕ..

ಬದುಕಿಗಾಗಿ ಹಸಿವಾದಾಗ ತಿನ್ನುವುದು ನೈಸರ್ಗಿಕ..

ಶರೀರಕ್ಕೆ ಬೇಡವಾದುದ್ದನ್ನು ವಿಸರ್ಜಿಸುವುದು ನೈಸರ್ಗಿಕ ..

ಇವೆಲ್ಲ ಎಷ್ಟು ನೈಸರ್ಗಿಕವೋ..ಸಾವೂ ಕೂಡಾ ಅಷ್ಟೇ ನೈಸರ್ಗಿಕ..

ಆದರೆ ಇವು ಎಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಮನುಷ್ಯನಿಗೆ ಸಾವಿನ ಕುರಿತು ಅದೇಕೆ ಎಲ್ಲಿಲ್ಲದ ಭಯ..?
ನೋಡೋಣ….

ಅಮ್ಮನ ಮಗುವಿಗೆ – ಅಮ್ಮನ ಕುರಿತು..!!

ಓ ಅಮ್ಮನ ಮಗುವೇ………..!

ಪ್ರೀತಿಯ ಪರಾಕಾಷ್ಠೆಯಲ್ಲಿ ಪ್ರೀತಿ ಪಾತ್ರರೊಡನೆ ಒಂದೇ ಎಲೆಯಲ್ಲಿ ಊಟ ಮಾಡಿದ್ದಿರಬಹುದು,
ಆದರೆ ಎಂದಾದರೂ ಒಂದೇ ಬಾಯಲ್ಲಿ ಇಬ್ಬರು ಊಟ ಮಾಡಿದ್ದು೦ಟೇ..?

ನೆನಪಿಸಿಕೋ….
ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ಹಿಂದೆ ತಿರುವಿ ಹಾಕು..
ಹಿಂದು ಹಿಂದಕ್ಕೆ..ಇನ್ನೂ ಹಿಂದಕ್ಕ .. ಶಿಶುತ್ವದವರೆಗೆ..!
ನೆನಪಿನ ವ್ಯಾಪ್ತಿ ಇರುವಷ್ಟು ದೂರವೂ ಹಿಂದಕ್ಕೆ ಹೋಗಿ ನೆನಪಿಸಿಕೋ..
ನೆನಪಾಗಲಿಲ್ಲವೇ..???
ಸರಿ ಬಿಡು, ಬದುಕಿನ ನೆನಪಿರುವ ಭಾಗದಲ್ಲಿರುವ ವಿಷಯವಲ್ಲ ಅದು..!

ಧರ್ಮಕ್ಕಿಂತ ಸಖನು೦ಟೆ..?

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ “ಧರ್ಮ”..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.

ಲವ್ ಜಿಹಾದ್ : ಪ್ರೇಮವೋ ಯುದ್ಧವೋ..??

ಲವ್ ಜಿಹಾದ್….!!!
ಶತಶತಮಾನಗಳ ಕಾಲ ಭರತವರ್ಷದ ಮೇಲೆ ಆಳ್ವಿಕೆ ನಡೆಸಿದ, ದಬ್ಬಾಳಿಕೆ ನಡೆಸಿದ ಎರಡು ದಾಳಿಕೋರ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಎರಡು ಶಬ್ದಗಳವು.!!
ಬ್ರಿಟಿಷರ ಲವ್ ಮತ್ತು ಮೊಘಲರ ಜಿಹಾದ್ ಗಳ ಸಂಕರ ಸಂತಾನವೇ ಲವ್ – ಜಿಹಾದ್…

ಅ-ಮೃತತಿಥಿ

ಸಾವು ಸರ್ವರಿಗೂ ಸಮಾನ.
ಆದರೆ ಸಾವಿನ ಆಚರಣೆಯಲ್ಲಿ ಮಾತ್ರ ಬಹುವಾಗಿ ಭಿನ್ನತೆಗಳಿವೆ!
ಗೃಹಸ್ಥನೊಬ್ಬನ ದೇಹಾಂತವಾದರೆ ಪಾರ್ಥಿವ ಶರೀರಕ್ಕೆ ದಹನ ಸಂಸ್ಕಾರ ಮಾಡುತ್ತಾರೆ. ಆದರೆ ಸನ್ಯಾಸಿ ತ್ಯಜಿಸಿದ ಶರೀರವನ್ನು ಭೂಮಿಯೊಳಗಿಟ್ಟು ವೃಂದಾವನ ಕಟ್ಟುತ್ತಾರೆ.
ಏನಿದರ ಮರ್ಮ? ಯಾಕೀ ತಾರತಮ್ಯ? ಚಿಂತಿಸೋಣ…

ಇರುವುದೆಲ್ಲವ ಬಿಟ್ಟು. . . !

ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ. . ? ರೋಮ್ ನ  ಚಕ್ರವರ್ತಿ ಜೂಲಿಯಸ್ ಸೀಸರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ, ಅದೇ ’ಜುಲೈ’. ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ. ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು. ಮತ್ತೆ ಬಂದ ‘ಅಗಸ್ಟಸ್ ಸೀಸರ್’ – ತಾನೇನು… Continue Reading →

ಅಬ್ಬಾ!!! ಬೆಳಕಿನ ಸೆಳೆತವೇ…!!

|| ಹರೇ ರಾಮ || ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ.. ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ.. ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು.. ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು… ಬೆಳಗಿನ ಹೊತ್ತು ಬೆಳಕು ಬಿಸಿಲುಗಳು… Continue Reading →

ನಾನು – ನಾವು – ನಾಡು

ಇದು ವ್ಯಕ್ತಿ ಸಂತೋಷವಲ್ಲ. ಇದು ಮನೆಯ ಸಂಭ್ರಮವಲ್ಲ. ಇದು ಊರ ಹಬ್ಬವಲ್ಲ. ಇದು ರಾಜ್ಯೋತ್ಸವ… ಸಮಸ್ತ ಕನ್ನಡ ನಾಡಿನ ಮಹೋತ್ಸವ… ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು. ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ. ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ… ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ… “ನಾನು”ವಿನ… Continue Reading →

ಕಣ್ತೆರೆದನೇ ಕಡಲಶಯನ !!

ಕಣ್ಮುಚ್ಚಿ ಕಲ್ಪಿಸಿಕೊಳ್ಳಿ. ವಿಮಾನವೊಂದರಲ್ಲಿ ನೀವು ಪ್ರಯಾಣಿಸುತ್ತಿದ್ದೀರಿ. ಒಂದು ವೇಳೆ ವಿಮಾನವನ್ನು ನಡೆಸುವಾತ ದೀರ್ಘ ನಿದ್ರೆಗೆಳಿದರೆ ಪರಿಣಾಮವೇನಾದೀತು? ದೇಶವನ್ನು ಕಾಯುವ ಸೈನಿಕ ಮೈಮರೆತು ಮಲಗಿದರೆ ಪ್ರಜೆಗಳ ಪಾಡೇನು? ಒಂದಡಿ ಮುಂದಿಟ್ಟು ಕಲ್ಪಿಸಿಕೊಳ್ಳಿ. ಬ್ರಹ್ಮಾಂಡವನ್ನು ನಡೆಸುವಾತ/ಕಾಯುವಾತ ನಾಲ್ಕುತಿಂಗಳುಗಳ ಕಾಲ ನಿದ್ರಿಸಿದರೆ…? ಹೀಗೂ ಉಂಟೇ?

ತಿದ್ದಿಕೊಳೋ ನಿನ್ನ ನೀ.. ಜಗವ ತಿದ್ದುವುದಿರಲಿ……

ದಬ್ಬಾಳಿಕೆಯ ಆದಿ ಯಾವುದು..? ವಿನಾಶದ ಪ್ರಾರಂಭ ಎಲ್ಲಿಂದ..? ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಕಲಹಗಳು.. ಸಮೃದ್ಧ ಕುಟುಂಬಗಳಲ್ಲಿ ವಿರಸ-ವಿಚ್ಛೇದನಗಳು.. ದೇಶ-ದೇಶಗಳ ಮಧ್ಯೆ ಸಂಗ್ರಾಮಗಳು..ಹೀಗೇಕೆ..? ಉತ್ತರವನ್ನು ನಾವಿಲ್ಲಿ ಕಂಡೆವು….. ಒಂದಾನೊಂದು ಊರು, ಆ ಊರಿಗೊಬ್ಬ ಜಮೀನ್ದಾರ, ಊರಿಗೆ ಆತ ತುಂಡರಸನಂತಿದ್ದ, ಆತನ ಅಪ್ಪಣೆಯಿಲ್ಲದೆ ಆ ಊರಿನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವನ್ತಿರಲಿಲ್ಲ.. ಕಾಲದ ಮಹಿಮೆಯಿಂದಾಗಿ ಆತನನ್ನು ವಿಚಿತ್ರ ಕಾಯಿಲೆಯೊಂದು ಆವರಿಸಿಕೊಂಡಿತು.. ಪರೀಕ್ಷಿಸಿದ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑