Category ಬ್ಲಾಗ್

Sri Swamiji will blog here with a live and current topic. Blog would be either spiritual or general. Pick your interest.

ಮೃತ್ಯುವಿಂ ಭಯವೇಕೆ?

ಜೀವಿಗೆ ಹುಟ್ಟು ನೈಸರ್ಗಿಕ..

ಹುಟ್ಟಿದ ಮೇಲೆ ಬದುಕು ನೈಸರ್ಗಿಕ..

ಬದುಕಿಗಾಗಿ ಹಸಿವಾದಾಗ ತಿನ್ನುವುದು ನೈಸರ್ಗಿಕ..

ಶರೀರಕ್ಕೆ ಬೇಡವಾದುದ್ದನ್ನು ವಿಸರ್ಜಿಸುವುದು ನೈಸರ್ಗಿಕ ..

ಇವೆಲ್ಲ ಎಷ್ಟು ನೈಸರ್ಗಿಕವೋ..ಸಾವೂ ಕೂಡಾ ಅಷ್ಟೇ ನೈಸರ್ಗಿಕ..

ಆದರೆ ಇವು ಎಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಮನುಷ್ಯನಿಗೆ ಸಾವಿನ ಕುರಿತು ಅದೇಕೆ ಎಲ್ಲಿಲ್ಲದ ಭಯ..?
ನೋಡೋಣ….

ಅಮ್ಮನ ಮಗುವಿಗೆ – ಅಮ್ಮನ ಕುರಿತು..!!

ಓ ಅಮ್ಮನ ಮಗುವೇ………..!

ಪ್ರೀತಿಯ ಪರಾಕಾಷ್ಠೆಯಲ್ಲಿ ಪ್ರೀತಿ ಪಾತ್ರರೊಡನೆ ಒಂದೇ ಎಲೆಯಲ್ಲಿ ಊಟ ಮಾಡಿದ್ದಿರಬಹುದು,
ಆದರೆ ಎಂದಾದರೂ ಒಂದೇ ಬಾಯಲ್ಲಿ ಇಬ್ಬರು ಊಟ ಮಾಡಿದ್ದು೦ಟೇ..?

ನೆನಪಿಸಿಕೋ….
ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ಹಿಂದೆ ತಿರುವಿ ಹಾಕು..
ಹಿಂದು ಹಿಂದಕ್ಕೆ..ಇನ್ನೂ ಹಿಂದಕ್ಕ .. ಶಿಶುತ್ವದವರೆಗೆ..!
ನೆನಪಿನ ವ್ಯಾಪ್ತಿ ಇರುವಷ್ಟು ದೂರವೂ ಹಿಂದಕ್ಕೆ ಹೋಗಿ ನೆನಪಿಸಿಕೋ..
ನೆನಪಾಗಲಿಲ್ಲವೇ..???
ಸರಿ ಬಿಡು, ಬದುಕಿನ ನೆನಪಿರುವ ಭಾಗದಲ್ಲಿರುವ ವಿಷಯವಲ್ಲ ಅದು..!

ಧರ್ಮಕ್ಕಿಂತ ಸಖನು೦ಟೆ..?

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ “ಧರ್ಮ”..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.

ಲವ್ ಜಿಹಾದ್ : ಪ್ರೇಮವೋ ಯುದ್ಧವೋ..??

ಲವ್ ಜಿಹಾದ್….!!!
ಶತಶತಮಾನಗಳ ಕಾಲ ಭರತವರ್ಷದ ಮೇಲೆ ಆಳ್ವಿಕೆ ನಡೆಸಿದ, ದಬ್ಬಾಳಿಕೆ ನಡೆಸಿದ ಎರಡು ದಾಳಿಕೋರ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಎರಡು ಶಬ್ದಗಳವು.!!
ಬ್ರಿಟಿಷರ ಲವ್ ಮತ್ತು ಮೊಘಲರ ಜಿಹಾದ್ ಗಳ ಸಂಕರ ಸಂತಾನವೇ ಲವ್ – ಜಿಹಾದ್…

ಆಧ್ಯಾತ್ಮಕ್ಕಿಂತ ದೊಡ್ಡ ವ್ಯಾಪಾರವುಂಟೇ?

ಬಂಡವಾಳ ಚಿಕ್ಕದು, ಲಾಭ ದೊಡ್ಡದು.
ಇದು ತಾನೇ ಆದರ್ಶ ವ್ಯಾಪಾರ?
ಅಧ್ಯಾತ್ಮವೇನೂ ಇದಕ್ಕೆ ಹೊರತಲ್ಲ. ಹಾಗೆ ನೋಡಿದರೆ, ವ್ಯಾಪಾರದ ವ್ಯಾಖ್ಯಾನ ಚೆನ್ನಾಗಿ ಹೊಂದಿಕೊಳ್ಳುವುದು ಅಧ್ಯಾತ್ಮಕ್ಕೇ ಸರಿ..!
ನಂಬಲಸಾಧ್ಯವೆನಿಸುತ್ತದೆಯೇ?
ನಂಬಲೇಬೇಕಾದ ಬದುಕಿನ ಪರಮಸತ್ಯವಿದು..

ಅ-ಮೃತತಿಥಿ

ಸಾವು ಸರ್ವರಿಗೂ ಸಮಾನ.
ಆದರೆ ಸಾವಿನ ಆಚರಣೆಯಲ್ಲಿ ಮಾತ್ರ ಬಹುವಾಗಿ ಭಿನ್ನತೆಗಳಿವೆ!
ಗೃಹಸ್ಥನೊಬ್ಬನ ದೇಹಾಂತವಾದರೆ ಪಾರ್ಥಿವ ಶರೀರಕ್ಕೆ ದಹನ ಸಂಸ್ಕಾರ ಮಾಡುತ್ತಾರೆ. ಆದರೆ ಸನ್ಯಾಸಿ ತ್ಯಜಿಸಿದ ಶರೀರವನ್ನು ಭೂಮಿಯೊಳಗಿಟ್ಟು ವೃಂದಾವನ ಕಟ್ಟುತ್ತಾರೆ.
ಏನಿದರ ಮರ್ಮ? ಯಾಕೀ ತಾರತಮ್ಯ? ಚಿಂತಿಸೋಣ…

ಒಂದು ಬಾರಿ ಸ್ಮರಣೆ ಸಾಲದೇ?

ಸೀತೆಯ ಚಾರಿತ್ರ್ಯ ದೊಡ್ಡದು. ತನ್ನ ಬಾಲದ ಬೆಂಕಿಯಿಂದ ಸಂಪೂರ್ಣ ಲಂಕೆಯೇ ಹೊತ್ತಿ ಉರಿದರೂ ಅಬಾಧಿತಳಾಗಿಯೇ ಉಳಿದ ಆಕೆಯನ್ನು ಕಂಡು ಹನುಮಂತ ಉದ್ಗರಿಸುತ್ತಾನೆ.. ಅಪಿ ಸಾ ನಿರ್ದಹೇತ್ ಅಗ್ನಿಂ ನ ತಾಂ ಅಗ್ನಿಃ ಪ್ರಧಕ್ಷ್ಯತಿ || (ತನ್ನ ಚಾರಿತ್ರ್ಯ ಬಲದಿಂದ ಸೀತೆಯೇ ಅಗ್ನಿಯನ್ನು ಸುಟ್ಟು ಬಿಡಬಹುದೇ ಹೊರತು, ಅಗ್ನಿ ಸೀತೆಯನ್ನು ಮುಟ್ಟಲಾರ – ವಾಲ್ಮೀಕಿ ರಾಮಾಯಣ) ರಾವಣನ… Continue Reading →

ಇರುವುದೆಲ್ಲವ ಬಿಟ್ಟು. . . !

ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ. . ? ರೋಮ್ ನ  ಚಕ್ರವರ್ತಿ ಜೂಲಿಯಸ್ ಸೀಸರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ, ಅದೇ ’ಜುಲೈ’. ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ. ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು. ಮತ್ತೆ ಬಂದ ‘ಅಗಸ್ಟಸ್ ಸೀಸರ್’ – ತಾನೇನು… Continue Reading →

ಅಬ್ಬಾ!!! ಬೆಳಕಿನ ಸೆಳೆತವೇ…!!

|| ಹರೇ ರಾಮ || ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ.. ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ.. ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು.. ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು… ಬೆಳಗಿನ ಹೊತ್ತು ಬೆಳಕು ಬಿಸಿಲುಗಳು… Continue Reading →

ನಾನು – ನಾವು – ನಾಡು

ಇದು ವ್ಯಕ್ತಿ ಸಂತೋಷವಲ್ಲ. ಇದು ಮನೆಯ ಸಂಭ್ರಮವಲ್ಲ. ಇದು ಊರ ಹಬ್ಬವಲ್ಲ. ಇದು ರಾಜ್ಯೋತ್ಸವ… ಸಮಸ್ತ ಕನ್ನಡ ನಾಡಿನ ಮಹೋತ್ಸವ… ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು. ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ. ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ… ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ… “ನಾನು”ವಿನ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑