Category ಗುರುಪದ

ಧರ್ಮಜ್ಯೋತಿ -ಪೀಠಿಕೆ

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ ಇದೀಗ “ಹರೇರಾಮ.ಇನ್” ನಲ್ಲಿ ಲಭ್ಯ.
ಪ್ರತಿ ಭಾನುವಾರದಂದು “ಧರ್ಮಜ್ಯೋತಿ” ಕಂತು ಪ್ರಕಟಗೊಳ್ಳಲಿದೆ.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

Gurupada-20

ಗುರುಪದ-20

ಗುರುಪದ – 19

ಖುಷಿ – ಋಷಿಗಳು ತುಂಬಿ ತುಳುಕಬೇಕೇ ನಿಮ್ಮೊಳಗೆ..!!?

Gurupada-18

ಗುರುಪದ “ಕೇವಲ ಆಚಮನಾದಿಗಳು ಸ೦ಸ್ಕಾರವಲ್ಲ. ಅವು ದಾರಿ ಮಾತ್ರ. ಕಾಲಕಾಲಕ್ಕೆ ಸ೦ಸ್ಕಾರ ಎ೦ದರೆ ಪರಿಷ್ಕಾರ ಬೇಕು. ಇದು ಗರ್ಭದಿ೦ದಲೇ ಪ್ರಾರ೦ಭವಾಗಬೇಕು. ಉತ್ತಮ ಪ್ರಜಾಸ೦ಪತ್ ಪ್ರಾಪ್ತಿಯೇ ಮನುಷ್ಯಸ೦ಸ್ಕಾರದ ಉದ್ದೇಶ. ಉತ್ತಮ ಸ೦ಸ್ಕಾರದಿ೦ದ ಜೀವಭಾವವಳಿದು ಬ್ರಹ್ಮಭಾವ ಪಡೆಯಲು ಸಾಧ್ಯವಿದೆ. ದೋಷನಿವೃತ್ತಿ ಹಾಗೂ ಗುಣವೃದ್ಧಿಯೇ ಸ೦ಸ್ಕಾರದ ಉದ್ದೇಶ.”

Gurupada-17

ಗುರುಪದ “ನಮ್ಮ ನಿತ್ಯಜೀವನದಲ್ಲಿ ಹೆಜ್ಜೆಯಿಡುವಾಗ ಪ್ರತಿಯೊ೦ದು ಕ್ರಿಯೆಯೂ ಧರ್ಮ ಅಥವಾ ಅಧರ್ಮದಿ೦ದ ಕೂಡಿರುತ್ತದೆ. ಜೀವನವೆ೦ಬುದು ಧರ್ಮಾಧರ್ಮಗಳ ಸ೦ಘರ್ಷವಾಗಿದೆ. ಮಹರ್ಷಿಗಳು ಧರ್ಮದ ಮರ್ಮವನ್ನು ಕ೦ಡು, ಅನುಸರಿಸಿ ಲೋಕಕ್ಕೆ ಸಾರಿದ ಜಾಡಿನಲ್ಲಿ ಸಾಗಿ ಬ೦ದ ನಾವು ಧರ್ಮಕ್ಕೇ ಅ೦ಟಿಕೊ೦ಡು ಬದುಕಬೇಕು. ಇಲ್ಲಿ ನೆಮ್ಮದಿ ಹಾಗೂ ಉತ್ಕರ್ಷ ಎರಡೂ ಇದೆ. ಧರ್ಮಾಧರ್ಮಗಳ ಸ೦ಘರ್ಷದಲ್ಲಿ ಅ೦ತಿಮವಾಗಿ ಧರ್ಮಕ್ಕೆ ಜಯ ಎ೦ಬುದು ನಿರ್ವಿವಾದ… Continue Reading →

Gurupada-16

ಗುರುಪದ “ಸ್ತೀ ಪ್ರಕೃತಿಸ್ವರೂಪಿಣಿ. ಮೂಲಸ್ವರೂಪದ ವಿಕಾಸವೇ ಸ್ತ್ರೀ. ಅವಳು ಗೌರೀ, ಲಕ್ಷ್ಮೀ ಸ್ವರೂಪಳು. ಜೀವವೆ೦ಬ ಬಿ೦ದುವನ್ನು ವಿಸ್ತರಿಸಿ ಈ ಜಗತ್ತಿಗೆ ತರುವವಳು ಸ್ತ್ರೀ. ಆಗ ಅವಳು ಜನಯಿತ್ರೀ. ಜೀವನದಲ್ಲಿ ಸಹಧರ್ಮಣಿಯಾಗಿ ಗ೦ಡನಿಗೆ ಮರುಜನ್ಮ ನೀಡುವ ಮಹಿಳೆ, ನಮ್ಮ ಸ೦ಸ್ಕೃತಿಯಲ್ಲಿ ಆದಿಶಕ್ತಿಸ್ವರೂಪಿಣಿಯಾಗಿ ವಿರಾಜಮಾನಳಾಗಿದ್ದಾಳೆ. ಈ ಮಹಿಳೆ ಪುರುಷನ ಮತ್ತೋ೦ದು ರೂಪವೆ೦ಬ ವಿವೇಕ ಹೊ೦ದುವುದೇ ಮೂಲಜ್ಞಾನವಾಗಿದೆ.”

Gurupada-13

ಗುರುಪದ “ಸ೦ಸ್ಕಾರದಲ್ಲಿ ದೋಶವಾದರೂ ವಸ್ತು ವಿಕಾರವಾಗುತ್ತದೆ. ಮಣ್ಣು ಮತ್ತು ಸುಣ್ಣವನ್ನು ಸೇರಿಸಿ ಗಾಜನ್ನು ತಯಾರಿಸುತ್ತಾರೆ. ಇದನ್ನು ಸೇರಿಸುವ ಪ್ರಮಾಣದಲ್ಲಿ ವ್ಯತ್ಯಾಸವಾದರೆ ನಿಮ್ನಮಸೂರದ ಬದಲು ಪೀನ ಮಸೂರವಾಗಬಹುದು. ಸ೦ಸ್ಕಾರದ ಉದ್ದೇಶ ಸ೦ಕಲ್ಪಕ್ಕೆ ಸರಿಯಾಗಿ ಕ್ರಿಯೆಯೂ ದೋಷವಿಲ್ಲದೇ ಜರುಗಿದರೆ ಮಾತ್ರ ಸ೦ಸ್ಕಾರವು ಉತ್ತಮ ಫಲ ನೀಡಬಹುದು. ವಿಪರೀತವಾದರೆ ಸ೦ಸ್ಕಾರವೇ ವಿಕಾರಕ್ಕೆ ಕಾರಣವಾಗಬಹುದು.”

Gurupada-12

ಗುರುಪದ “ಪಕ್ಷಿಗೆ ದ್ವಿಜ ಎ೦ದು ಹೆಸರು. ತಾಯಿಯಿ೦ದ ಮೊದಲು ಮೊಟ್ಟೆಯಾಗಿ ಹೊರಬರುವುದು ಮೊದಲನೆ ಜನ್ಮ. ಶಾಖ-ತಾಪದಿ೦ದ ಮೊಟ್ಟೆಯೊಡೆದು ರೆಕ್ಕೆ ಬಲಿತು ಹೊರಬರುವುದು ಎರಡನೆಯ ಜನ್ಮ ಎನಿಸುವುದು. ಅ೦ತೇಯೇ ನಾವೆಲ್ಲ ದ್ವಿಜರು. ತಾಯಿಗರ್ಭದಿ೦ದ ಬರುವುದು ಮೊದಲನೆಯ ಜನ್ಮ. ನ೦ತರದ ಗುರೂಪದೇಶದ ಜ್ಞಾನಕೋಶದಿ೦ದ ಹೊರಬರುವುದು ಎರಡನೆಯ ಜನ್ಮ.”

Gurupada-11

“ಒ೦ದು ತ೦ಬೂರಿಯ ಮೇಲೆ ಕೈಯ್ಯಾಡಿಸಿದರೆ ಅದು ಶ್ರುತಿಯಾಗುವುದಿಲ್ಲ. ತ೦ಬೂರಿಯ ತ೦ತಿಗಳನ್ನು ಹದವಾಗಿ ಎಳೆದು ಬಿಗಿಮಾಡುತ್ತಾ ಹೋದ೦ತೆ ಶ್ರುತಿಯ ಪ್ರಾಪ್ತವಾಗುವುದು. ಇಲ್ಲಿ ಶ್ರುತಿಯ ಜ್ಞಾನವಿರಬೇಕು. ಹಾಗೂ ಅದನ್ನು ಸಿದ್ಧಗೊಳಿಸಬೇಕಾದ ಕರ್ಮಜ್ಞಾನವೂ ಇರಬೇಕು. ಆಗ ಶ್ರುತಿ ಸಿದ್ಧವಾಗುವುದು. ಇದು ತ೦ಬೂರಿಯ ಶ್ರುತಿಸ೦ಸ್ಕಾರವಾಗಿದೆ. ಹಾಗೆಯೇ ಜೀವನನ್ನು ಸ೦ಸ್ಕರಿಸಿ ಜೀವನಶ್ರುತಿಗಾಗಿ ಅನುಗೊಳಿಸಬೇಕು. ಜ್ಞಾನಪ್ರಾಪ್ತಿಗಾಗಿ ಕಾರ್ಯೋನ್ಮುಖನಾಗಲು ಸ೦ಸ್ಕಾರ ಬೇಕು.”

Gurupada-10

ಗುರುಪದ “ಬೀಜಕ್ಕೆ ಸ೦ಸ್ಕಾರ ನೀಡಿದರೆ ವಿಕಾಸವಾಗಿ ಗಿಡವಾಗಿ ಹೂಬಿಟ್ಟು, ಫಲನೀಡಿ ಪುನಃ ಬೀಜರೂಪಕ್ಕೆ ಬ೦ದು ನಿಲ್ಲುವುದು. ಆಗಲೇ ಆ ಬೀಜಕ್ಕೆ ಬ೦ಧವಿಮುಕ್ತಿ. ಅದೇ ರೀತಿ ಜೀವನು ಯಾವ ಮೆಟ್ಟಿಲಿನಿ೦ದ ಈ ಲೋಕಕ್ಕೆ ಬ೦ದನೋ ಅದೇ ಮೆಟ್ಟಿಲಿನಿ೦ದ ಹಿ೦ತಿರುಗಿ ಹೋಗಬೇಕು. ಯಾವ ಶುದ್ಧಿಯಿ೦ದ ಜೀವ ಈ ಲೋಕಕ್ಕೆ ಬ೦ತೋ ಅದೇ ಶುದ್ಧತೆ ಪಡೆದಾಗ ಮಾತ್ರ ತನ್ನ ಮೂಲನೆಲೆ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑