By : ಡಾ| ಗಜಾನನ ಶರ್ಮಾ ಬಹುತೇಕ ನಮ್ಮ ಮನೆಗಳಲ್ಲಿ ಈ ಸಲದ ದೀಪಾವಳಿ ಅಂತಹ ಆನಂದದ ವಾತಾವರಣದಲ್ಲಿ ನಡೆಯುತ್ತಿಲ್ಲ. ಪ್ರಾಯಶಃ ಹಲವರು ಕಾಟಾಚಾರಕ್ಕೆ ಹಬ್ಬ ಮಾಡಿದರೆ , ಇನ್ನು ಕೆಲವರು “ಅಯ್ಯೋ ಮಕ್ಕಳು ಮರಿ ಇದ್ದಾವಲ್ಲ ,ಬಿಡುವ ಹಾಗಿಲ್ಲವಲ್ಲ “ಎಂದು ಆಚರಿಸುತ್ತಿದ್ದಾರೆ. ಬಹುತೇಕ ಮಂದಿ ಈ ಹಬ್ಬ ಯಾಕಾದರೂ ಬಂದಿದೆಯೋ ಎಂದು ಕೊಳ್ಳುತ್ತಿದ್ದಾರೆ !… Continue Reading →
ಹೆಣ್ಣನ್ನು ಕ್ಷಮಯಾ ಧರಿತ್ರಿ, ಸಹನಾ ಶೀಲಳು ಎನ್ನುತ್ತಾರೆ ಆದರೆ ಪುರಾಣದಲ್ಲಾಗಲೀ, ಇತಿಹಾಸದಲ್ಲಾಗಲೀ ಹೆಣ್ಣಿನ ಶೀಲಕ್ಕೆ ಧಕ್ಕೆ ಬಂದಾಗ ಯಾವ ಹೆಣ್ಣೂ ಅದನ್ನು ಸಹಿಸಿಕೊಂಡಿಲ್ಲ, ಸಿಡಿದೆದ್ದಿದ್ದಾಳೆ. ಆದರೆ, ಶೋಷಿತ ಹಾಗೂ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುವ ಸಹಾಯ ಸವಲತ್ತುಗಳನ್ನು ನೀವು ಉಪಯೋಗಿಸಿಕೊಂಡು ಒಬ್ಬ ಶುದ್ಧ, ಸಾತ್ವಿಕ ಹಾಗೂ ಸಮಾಜದ ಏಳಿಗೆಗಾಗಿ ಮತ್ತು ಗೋವುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯವರಿಗೆ ತೊಂದರೆ ಕೊಡುತ್ತಿದ್ದೀರಲ್ಲಾ..! ಇಲ್ಲಿ ನಿಜವಾಗಿಯೂ ಶೋಷಣೆಗೆ ಒಳಗಾಗಿರುವವರು ಸ್ವಾಮೀಜಿಯವರೇ ವಿನಃ ನೀವಲ್ಲ. ನಿಮ್ಮ ಆತ್ಮ ಸಾಕ್ಷಿಯನ್ನು ನೀವೇ ಒಮ್ಮೆ ಕೇಳಿಕೊಳ್ಳಿ ನೀವು ಮಾಡುತ್ತಿರುವುದು ಸರಿಯೇ ಎಂದು. ಇದೇ ನನಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ರೀತಿಯ ಗೊಂದಲ ಎಷ್ಟು ಜನರನ್ನು ಕಾಡುತ್ತಿದೆಯೋ ನನಗೆ ಗೊತ್ತಿಲ್ಲ.
ಹಿರಿಯ ಪತ್ರಿಕಾ ವರದಿಗಾರರೂ, ಯಶಸ್ವೀ ಉದ್ಯಮಿಗಳೂ ಆದ ಹಿರಿಯರಾದ ಶ್ರೀ ನಾಗರಾಜ ಭಟ್ ಕೆಕ್ಕಾರು ಇವರು ಶಿಷ್ಯಕೋಟಿಗೆ ತಲುಪಿಸುವುದಕ್ಕಾಗಿ ನಿವೇದನ ಪತ್ರವೊಂದನ್ನು ಬರೆದಿದ್ದಾರೆ. ಗುರು ಭಕ್ತರೆಲ್ಲರಿಗೆ ತಲುಪಿಸುವ ಸಲುವಾಗಿ ಹರೇರಾಮ.ಇನ್ ನಲ್ಲಿ ಸಮ್ಮುಖರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಕೆಕ್ಕಾರಿನ ಗುರುಮನೆ ವಾಸಿಗಳಾದ ಶ್ರೀಯುತರಿಗೆ ಗುರುದೇವರು ಅನುಗ್ರಹಿಸಲಿ ಎಂಬುದು ನಮ್ಮ ಹಾರೈಕೆ.
“ಗುರುಗಳೇ ನಮ್ಮ ಸಮುದಾಯಕ್ಕೆ ಯಾರೂ ಗುರುಗಳಿಲ್ಲ – ಹತ್ತಾರು ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುವ ತಾವು ನಮಗೂ ಸ್ವಾಮಿಗಳಾಗಬೇಕು .. ಆದರೆ”.. ಮತ್ತೆ ಮತ್ತೆ ತಡವರಿಸಿದರು “…ಆದರೆ ನಾವು ಹರಿಜನರ ಪಂಗಡ ಸ್ವಾಮಿ” -.. ಕೃತ್ರಿಮವಲ್ಲದ ಪ್ರಾಮಾಣಿಕ ಪ್ರಾರ್ಥನೆ ಆಗಿತ್ತು ಅದು .. ತಡವರಿಸಿದ್ದು ತಡೆದದ್ದು ಎಲ್ಲ ಆ ನನ್ನ ಬಾಂಧವರು.
ನಮ್ಮ ಸಂಸ್ಥಾನ ತಡೆಯಲೂ ಇಲ್ಲ ತಡವರಿಸಲೂ ಇಲ್ಲ – ಮತ್ತದೇ ಆತ್ಮೀಯತೆಯೊಂದಿಗೆ ತಕ್ಷಣ ಹೇಳಿಯೇ ಬಿಟ್ಟರು – ನೀವು ಇಂದಿನಿಂದ “ಕೇವಲ ಹರಿಜನರು ಮಾತ್ರವಲ್ಲ ಗುರು ಜನರೂ ಹೌದು”! ..