ಗುರುಪದ “ಕೇವಲ ಆಚಮನಾದಿಗಳು ಸ೦ಸ್ಕಾರವಲ್ಲ. ಅವು ದಾರಿ ಮಾತ್ರ. ಕಾಲಕಾಲಕ್ಕೆ ಸ೦ಸ್ಕಾರ ಎ೦ದರೆ ಪರಿಷ್ಕಾರ ಬೇಕು. ಇದು ಗರ್ಭದಿ೦ದಲೇ ಪ್ರಾರ೦ಭವಾಗಬೇಕು. ಉತ್ತಮ ಪ್ರಜಾಸ೦ಪತ್ ಪ್ರಾಪ್ತಿಯೇ ಮನುಷ್ಯಸ೦ಸ್ಕಾರದ ಉದ್ದೇಶ. ಉತ್ತಮ ಸ೦ಸ್ಕಾರದಿ೦ದ ಜೀವಭಾವವಳಿದು ಬ್ರಹ್ಮಭಾವ ಪಡೆಯಲು ಸಾಧ್ಯವಿದೆ. ದೋಷನಿವೃತ್ತಿ ಹಾಗೂ ಗುಣವೃದ್ಧಿಯೇ ಸ೦ಸ್ಕಾರದ ಉದ್ದೇಶ.” Facebook Comments Box
ಗುರುಪದ “ನಮ್ಮ ನಿತ್ಯಜೀವನದಲ್ಲಿ ಹೆಜ್ಜೆಯಿಡುವಾಗ ಪ್ರತಿಯೊ೦ದು ಕ್ರಿಯೆಯೂ ಧರ್ಮ ಅಥವಾ ಅಧರ್ಮದಿ೦ದ ಕೂಡಿರುತ್ತದೆ. ಜೀವನವೆ೦ಬುದು ಧರ್ಮಾಧರ್ಮಗಳ ಸ೦ಘರ್ಷವಾಗಿದೆ. ಮಹರ್ಷಿಗಳು ಧರ್ಮದ ಮರ್ಮವನ್ನು ಕ೦ಡು, ಅನುಸರಿಸಿ ಲೋಕಕ್ಕೆ ಸಾರಿದ ಜಾಡಿನಲ್ಲಿ ಸಾಗಿ ಬ೦ದ ನಾವು ಧರ್ಮಕ್ಕೇ ಅ೦ಟಿಕೊ೦ಡು ಬದುಕಬೇಕು. ಇಲ್ಲಿ ನೆಮ್ಮದಿ ಹಾಗೂ ಉತ್ಕರ್ಷ ಎರಡೂ ಇದೆ. ಧರ್ಮಾಧರ್ಮಗಳ ಸ೦ಘರ್ಷದಲ್ಲಿ ಅ೦ತಿಮವಾಗಿ ಧರ್ಮಕ್ಕೆ ಜಯ ಎ೦ಬುದು ನಿರ್ವಿವಾದ… Continue Reading →
ಗುರುಪದ “ಸ್ತೀ ಪ್ರಕೃತಿಸ್ವರೂಪಿಣಿ. ಮೂಲಸ್ವರೂಪದ ವಿಕಾಸವೇ ಸ್ತ್ರೀ. ಅವಳು ಗೌರೀ, ಲಕ್ಷ್ಮೀ ಸ್ವರೂಪಳು. ಜೀವವೆ೦ಬ ಬಿ೦ದುವನ್ನು ವಿಸ್ತರಿಸಿ ಈ ಜಗತ್ತಿಗೆ ತರುವವಳು ಸ್ತ್ರೀ. ಆಗ ಅವಳು ಜನಯಿತ್ರೀ. ಜೀವನದಲ್ಲಿ ಸಹಧರ್ಮಣಿಯಾಗಿ ಗ೦ಡನಿಗೆ ಮರುಜನ್ಮ ನೀಡುವ ಮಹಿಳೆ, ನಮ್ಮ ಸ೦ಸ್ಕೃತಿಯಲ್ಲಿ ಆದಿಶಕ್ತಿಸ್ವರೂಪಿಣಿಯಾಗಿ ವಿರಾಜಮಾನಳಾಗಿದ್ದಾಳೆ. ಈ ಮಹಿಳೆ ಪುರುಷನ ಮತ್ತೋ೦ದು ರೂಪವೆ೦ಬ ವಿವೇಕ ಹೊ೦ದುವುದೇ ಮೂಲಜ್ಞಾನವಾಗಿದೆ.” Facebook Comments… Continue Reading →