ಹೇಗೆ ನೋಡಿದರೂ ಇದೊಂದು ವಿಶ್ವದಾಖಲೆಯೇ. ಬಹುಶಃ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೋಬ್ಬರಿ ಎಂಟು ಕೋಟಿ ಸಹಿ ಸಂಗ್ರಹಿಸಿರುವುದು, ಅದೂ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಭಾರತ ಪರ್ಯಟನೆ ಕೈಗೊಂಡು ಇಂಥ ಸಾಧನೆಯನ್ನು ಮಾಡಿದ್ದು ಭಾರತೀಯ ಸಂತಸಮೂಹಕ್ಕೆ ಮಾತ್ರವಲ್ಲ, ಪ್ರತೀ ಭಾರತೀಯನಿಗೂ ಹೆಮ್ಮೆಯ ಸಂಗತಿ.
ಅಬ್ಬಾ, ಆ ವ್ಯಕ್ತಿಯ…ಅಲ್ಲ ಶಕ್ತಿಯ ಕರ್ತೃತ್ವಪರತೆಯೇ !
ಹೌದು, ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಇವತ್ತು ಕೇವಲ ಒಂದು ಪ್ರದೇಶಕ್ಕೆ, ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗುಳಿದಿಲ್ಲ. ಅಕ್ಷರಶಃ ಅವರಿಂದು ವಿಶ್ವ ಮಾನವ. ಇಡೀ ಮನುಕುಲಕ್ಕೆ ಸೇರಿದವರು. ದೇಸೀ ಗೋತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವಿತಾವಧಿಯನ್ನೇ ಮುಡಿಪಾಗಿಟ್ಟ, ಅದಕ್ಕಾಗಿ ಅತ್ಯಲ್ಪ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂಥ ಆಂದೋಲನವನ್ನು ರೂಪಿಸಿದ, ಆ ಮೂಲಕ ಭಾವ ಜಾಗರಣದ ಹೊಂಗಿರಣ ಮೂಡುವಂತೆ ಮಾಡಿದ ಅವರಂಥ ಇನ್ನೊಬ್ಬ ಸಂತರನ್ನು ನಾನು ಕಂಡಿಲ್ಲ.
ಇತ್ತ…
ಕಡಲ ಒಡಲಲ್ಲಿ ಬಾಯ್ದೆರೆದು ಕಾಯುವುದು ಕಪ್ಪೆ ಚಿಪ್ಪು ಸ್ವಾತಿ ಮಳೆ ಹನಿಯನ್ನು…
ಅತ್ತ…
ಮೋಡದ ಮಡಿಲಿನಿಂದ ಧರೆಗೆ ಧುಮ್ಮಿಕ್ಕುವ ಸ್ವಾತಿ ಮಳೆ ಹನಿ ಹುಡುಕಿಯೇ ಹುಡುಕುವುದು ತನಗಾಗಿ ಮಿಡುಕುವ ಕಪ್ಪೆಚಿಪ್ಪನ್ನು …
ಸ್ವಾತಿಯದಲ್ಲದೆ ಬೇರಾವ ಮಳೆಹನಿ ಕಪ್ಪೆ ಚಿಪ್ಪಿನೊಳ ಹೊಕ್ಕರೂ ಅದು ಕೇವಲ ನೀರು… ನೀರು…
ಸ್ವಾತಿ ಮಳೆಹನಿಯೇ ಆದರೂ ಕಪ್ಪೆ ಚಿಪ್ಪೊಳಗಲ್ಲದೆ ಬೇರೆಲ್ಲಿ ಬಿದ್ದರೂ ಅದು ಕೇವಲ ನೀರು … ನೀರು…
ಕಪ್ಪೆಚಿಪ್ಪಿನ ಹೃದಯಗರ್ಭದೊಳಸೇರಬೇಕು ಸ್ವಾತಿಯ ಜಲಬಿಂದು..
ಅದು ಮುತ್ತಿನ ಅವತಾರ…
ಸ್ವಾತಿ ಮಳೆ ಹನಿಗೆ ಆಗುವುದು ಮುತ್ತಾಗಿ ಪುನರ್ಜನ್ಮ…
ಕಪ್ಪೆ ಚಿಪ್ಪಿನೊಳ ಚೈತನ್ಯದ ಸಂಚಾರ…
ಇದನ್ನು ಹೋಲುವ ಅಪೂರ್ವ ಸಮಾಗಮವೊಂದರ ಫಲವಾಗಿಯೇ ರಾಮಾಯಣವೆಂಬ ಮುತ್ತು ಹುಟ್ಟಿತು…!!
ಕಪ್ಪೆಚಿಪ್ಪಿನ ತೆರದಿ ತೆರೆದ ಮನ ಹೊತ್ತ ವಾಲ್ಮೀಕಿ ಧರೆಯಲ್ಲಿ ಧೀರ್ಘ ಪ್ರತೀಕ್ಷೆಯಲ್ಲಿ ಇರುವಾಗ…
ಸ್ವಾತಿಯ ಸಲಿಲಧಾರೆಯಂತೆ ಮೋಡದ ನಾಡಿನಿಂದ ಇಳಿದು ಬಂದರು ನಾರದರು..!
|| ಹರೇರಾಮ || ಶತಮಾನಗಳ ಹಿಂದಿನ ಮಾತು.. ಇಂದೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತದ ಹೃದಯ ಪ್ರದೇಶವನ್ನು ಆಳುತ್ತಿದ್ದ ಕಾಲ.. ತನ್ನ ನಡೆ ನುಡಿಗಳಿಂದ ಆಕೆ ದೇವತುಲ್ಯಳಾಗಿದ್ದುದರಿಂದಲೋ ಏನೋ ಜನತೆ ಆಕೆಯನ್ನು ‘ದೇವಿ’ ಎಂದೇ ಸಂಬೋಧಿಸುತ್ತಿದ್ದಿತು..! ಆಕೆ ಮಾಡಿದ ಸತ್ಕಾರ್ಯಗಳಿಗೆ ಲೆಖ್ಖವೇ ಇಲ್ಲ..! ಮಾಲೋಜಿರಾವ್ ಆಕೆಯ ಏಕಮಾತ್ರ ಪುತ್ರ… ಆದರೆ ಅವರೀರ್ವರ ಸ್ವಭಾವದಲ್ಲಿ… Continue Reading →
ಹರೇ ರಾಮ ದಿನಾಂಕ:- ೮/೧೨/೨೦೦೯ ಬೆಳಿಗ್ಗೆ ೧೦–೦೦ಗಂಟೆಯಿಂದ ೧೨–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಮಧ್ಯಾನ್ನಃ ೧೨–೦೦ ರಿಂದ ೧–೦೦ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಮಧ್ಯಾನ್ನಃ ೧–೦೦ಗಂಟೆಯಿಂದ ೨–೩೦ಗಂಟೆಯವರೆಗೆ –ಮನೆಯವರ ಭೇಟಿ, ಮತ್ತು ಇತರೆ ಮಧ್ಯಾನ್ನಃ ೨ – ೩೦ ರಿಂದ ೩ – ೩೦ಗಂಟೆಯ ವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಮಧ್ಯಾನ್ನಃ… Continue Reading →
“ಹರೇ ರಾಮ ” ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ಬೆಳಗ್ಗೆ 09.30ಕ್ಕೆ ಶ್ರೀ ರಾಮಾರ್ಚನೆ ಅಭಿಜಿನ್ ಮುಹೂರ್ತದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಮಾಲೂರಿನ ಗೋ ಶಾಲೆ ಲೋಕಾರ್ಪಣೆ. ತದಂತರ ಶ್ರೀಗಳಿಂದ ಗೋವುಗಳ ದರ್ಶನ. ಸಾರ್ವಜನಿಕರಿಗೆ ಮಂತ್ರಾಕ್ಷತೆ. ಅಪರಾಹ್ನ ಶ್ರೀ ರಾಮಾರ್ಚನೆ. ತದನಂತರ ರೈಲಿನ ಮೂಲಕ ಹುಬಳ್ಳಿಗೆ ಪ್ರಯಾಣ…. Continue Reading →