ಗೋಕರ್ಣದ ಮಹಾಬಲೇಶ್ವರ ಮಂದಿರದಲ್ಲಿ ನಡೆಯುತ್ತಿರುವ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ಕಾರ್ಯಕ್ರಮ ಇಂದು ಮಧ್ಯಾಹ್ನ ದೇಗುಲದ ಪ್ರಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಭಟ್ಕಳ ಶಾಸಕರಾದ ಜೆ.ಡಿ.ನಾಯಕ್,ಸಂಸದ ಧನಂಜಯ ಕುಮಾರ್, ಗಾಂವ್ಕರ್ ಮೈನ್ಸ್ ನ ಪಿ.ಎಸ್.ಗಾಂವ್ಕರ್ ಮುಂತಾದವರು ಭಾಗವಹಿಸಿದ್ದರು.. ಪ್ರತಿ ಒಂದು ರುದ್ರಾನುಷ್ಠಾನದ ಲೆಕ್ಕದಲ್ಲಿ ಒಂದು ಬಿಲ್ವಪತ್ರದ ಗಿಡವನ್ನು ನೆಡುವುದಾಗಿ ನುಡಿದರು,… Continue Reading →
ಜೀವಲೋಕದ ಇತಿಹಾಸದಲ್ಲಿ ನಡೆದಿರಬಹುದಾದ ಯುದ್ಧಗಳಿಗೆ ಲೆಕ್ಕವಿಲ್ಲ..
ಆದರೆ ರಾಮ – ರಾವಣಸಂಗ್ರಾಮದ ತೆರನಾದ ಸಂಗ್ರಾಮವಿನ್ನೊಂದಿಲ್ಲ..
ಆ ಯುದ್ಧವನ್ನು ಬಣ್ಣಿಸಹೊರಟ ಕವಿಗಳಿಗೆ ಉಪಮೆಯೇ ಸಿಗಲಿಲ್ಲ..!
ಸಾಗರಕ್ಕೆ ಸಾಟಿಯುಂಟೇ..?
ಅಂಬರವನ್ನು ಹೋಲುವ ವಸ್ತು ಇನ್ನೊಂದುಂಟೇ…?
ಸೃಷ್ಟಿಯ ಅನನ್ಯ ಸಂಗತಿಗಳಿವು..!
ರಾಮಾಯಣ ಯುದ್ಧವೂ ಹಾಗೇ..
ವಿವಾಹವಾಗಲೀ, ವಿವಾದವಾಗಲೀ ಸಮಾನರ ಮಧ್ಯೆ ನಡೆಯಬೇಕೆನ್ನುವುದುಂಟು..
ಆದರೆ, ಇಲ್ಲಿಮಾತ್ರ ಹಾಗಲ್ಲ..
ರಾಮ – ರಾವಣರು ಹೊಂದಿದ್ದ ಯುದ್ಧ ಪರಿಕರಗಳಲ್ಲಿ ಮಹದಂತರವಿದೆ..!
ಒಬ್ಬನ ಬಳಿ ಅಗಾಧವಾದ ಯುದ್ಧೋಪಕರಣಗಳು..!
ಇನ್ನೊಬ್ಬನಬಳಿ ಅಲುಗಾಡದ ಅಂತಃಸತ್ವ..!!
ಹಳೇ ಮನೆ ಚನ್ನಾಗಿದ್ದರೂ ಕೂಡಾ ಹೊಸಮನೆ ನಿರ್ಮಿಸುವಾಗ ಹಳೆಮನೆಯನ್ನು ಕೆಡವುತ್ತಾರೆ ಹೊಸತನ್ನು ಹಳೆಯದಕ್ಕಿಂತ ಸುಂದರವಾಗಿ ನಿರ್ಮಿಸುತ್ತಾರೆ. ಹಾಗೆಯೇ ನಮ್ಮ ಸಂಘಟನೆಗೆ ಹೊಸ ರೂಪವನ್ನು ಕೊಟ್ಟು ಮೊದಲಿಗಿಂತಲೂ ಸುಂದರವಾಗಿ ಕಟ್ಟುವ ಉದ್ದೇಶ ದಿಂದ ಮಂಡಲಗಳನ್ನು ರಚನೆಮಾಡುತ್ತಿದ್ದೇವೆ ಎಂದು ಕುಮಟಾದಲ್ಲಿ ಮಂಡಲ ಕಾರ್ಯಾಲಯ ಉದ್ಘಾಟನಾ ಸಂದರ್ಭದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ನುಡಿದರು. ಸುಮಾರು ಎಂಟುಸಾವಿರ ಕಾರ್ಯಕರ್ತರನ್ನು… Continue Reading →