Tag ಲೋಕಲೇಖ

ಲವ್ ಜಿಹಾದ್: ಮತಾಂತರದ ಮಾಯಾಪುರುಷನಿಗಾಗಿ ಮಾತಾಪಿತರು~ಮಾತೃಧರ್ಮ~ಮಾತೃಭೂಮಿಗಳ ನಾಶ ಸಲ್ಲದು!

ಪೊಳ್ಳು ಪ್ರೇಮದ ಪೊರೆ ಬಂದು ಕುರುಡಾದ ನಮ್ಮ ಹೆಣ್ಣುಮಕ್ಕಳ ಕಣ್ಣಿಗೆ ಕಾಣುವುದು ‘ಲವ್’ ಮಾತ್ರ; ಅದರ ಹಿಂದಿರುವ ‘ಜಿಹಾದ್’ ಅವರಿಗೆ ಕಾಣಿಸುವುದೇ ಇಲ್ಲ! ಚೆಂದದ ಮುಖದ ಬಣ್ಣದ ಮಾತುಗಳ ಮುಖವಾಡದ ಹಿಂದಿರುವ ಭಯಂಕರ ರಾಕ್ಷಸನ ಕಲ್ಪನೆಯೇ ಅವರಿಗಿರುವುದಿಲ್ಲ! ಮುಂದೆ ಓದಿ>>

ರಾಮಜನ್ಮಸ್ಥಾನದಲ್ಲಿ ಶ್ರೀರಾಮನಿರಲಿ; ಉಜ್ಬೆಕಿಸ್ತಾನದಲ್ಲಿ ಬಾಬರನಿರಲಿ..!

ರಾಮಮಂದಿರದ ನಿರ್ಮಾಣವಾಗಬೇಕು! ಅದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿಯೇ ಆಗಬೇಕು! ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಕೇವಲ ರಾಮಮಂದಿರದ ನಿರ್ಮಾಣ ಮಾತ್ರವೇ ಆಗಬೇಕು! ಅಲ್ಲಿಯವರೆಗೆ ನಮ್ಮ-ನಿಮ್ಮ ರಾಮಭಕ್ತಿಗೂ ಅರ್ಥವಿಲ್ಲ; ಅನುಭವಿಸುತ್ತಿರುವ ಅಧಿಕಾರಕ್ಕೂ ಅರ್ಥವಿಲ್ಲ! ಮುಂದೆ ಓದಿ >>

ಹಸುವನ್ನು ಸಾಕುವುದಲ್ಲ; ಸಾವಿಗೆ ನೂಕುವುದು ಡೈರಿಗಳ ಪರಿ!

ಡೈರಿ ಉದ್ಯಮದ ಕರಾಳ ಮುಖವನ್ನು ಚಿತ್ರಿಸುವ, ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೋಕಲೇಖದ ಮೊದಲ ಅಂಕಣವನ್ನು ಕಳೆದ ವಾರಗಳಲ್ಲಿ ಓದಿದ್ದೇವೆ. ಅದೇ ವಿಷಯದ ಮುಂದಿನ, ಮತ್ತಷ್ಟು ವಿವರಗಳಲ್ಲಿ ಈ ಲೇಖನ.. ಡೈರಿಯ ಕ್ರೌರ್ಯ – ಭಾಗ 1 : ಹಸುವನ್ನು ಸಾಕುವುದಲ್ಲ; ಸಾವಿಗೆ ನೂಕುವುದು ಡೈರಿಗಳ ಪರಿ! ಡೈರಿಯ ಕ್ರೌರ್ಯ – ಭಾಗ 2: || ಮಾತೃದೇವೋ ಭವ || ತಾನು… Continue Reading →

ಮಣಿಕರ್ಣಿಕೇ..! ಭಾರತಮಾತೆಗೆ ನಿನ್ನಂಥ ಮಾತೆಯರು ಬೇಕಂತೆ!

ವೀರಮರಣವನಪ್ಪಿ ನೀನು ಶವವಾದೆಯೇ ಹೊರತು ವೈರಿಗಳ ವಶವಾಗಲಿಲ್ಲ! ನಿನ್ನ ಪುಟ್ಟ ರಾಜ್ಯವು ಬಿಳಿಯರ ಕೈಸೇರಿತು; ಆದರೆ ನೀನು ಅಖಂಡ-ಮುಕ್ತಿಸಾಮ್ರಾಜ್ಯವನ್ನೇ ಸೂರೆಗೊಂಡೆ! ಶತ್ರುಸೇನಾಸಾಗರಸಂತರಣದ ಪರಮಪ್ರಯತ್ನದಲ್ಲಿ ಭವಸಾಗರವನ್ನೇ ದಾಟಿ ಅಮರತ್ವವ ಪಡೆದೆ! ಕೋಟಿ ಕೋಟಿ ದೇಶಭಕ್ತರೆದೆಯ ಶಾಶ್ವತ ಸ್ಫೂರ್ತಿಯಾಗಿ, ಇಲ್ಲಿಯೂ ಅಮರತ್ವವನ್ನೇ ಪಡೆದೆ. ಮುಂದೆ ಓದಿ >>

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 3/3

ಅಂದಂದಿನದನ್ನು ಅಂದೇ, ಅಲ್ಲಲ್ಲಿಯದನ್ನು ಅಲ್ಲೇ ಸೇವಿಸಬೇಕಾದ ಆಹಾರದ್ರವ ಹಾಲು. ಎಷ್ಟು ತಾಜಾ ಸೇವಿಸಿದರೆ ಅದು ಅಷ್ಟು ಒಳ್ಳೆಯದು. ಆಯುರ್ವೇದವಂತೂ ‘ಕರೆಯುವಾಗಲೇ- ಕರೆದ ಕೂಡಲೇ- ಬಿಸಿಯಾರುವ ಮೊದಲೇ ಸೇವಿಸುವುದು ಹಿತ!’ ಎಂದು ಸಾರುತ್ತದೆ. ಮುಂದೆ ಓದಿ >>

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 2

ಹಾಲೆಂಬ ಅಮೃತವನ್ನು ವಿಷದ ಕೂಪವನ್ನಾಗಿಸುವ ಪ್ರಮಾದಗಳನ್ನು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು #ಲೋಕಲೇಖ ಅಂಕಣದ ಮೂಲಕ ನಮ್ಮೆದುರು ಅನುಗ್ರಹಿಸುತ್ತಿದ್ದಾರೆ. ಪ್ರಮಾದಗಳ ಸರಮಾಲೆಯ ಮೊದಲ ತುಣುಕನ್ನು ಕಳೆದ ವಾರದ ಸಂಚಿಕೆಯಲ್ಲಿ ಓದಬಹುದು. ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ? – ಭಾಗ 1 ನಮ್ಮ ದೇಶದಲ್ಲಿ ವ್ಯಾಪಕವಾಗಿ ಹಸುಗಳನ್ನು ಕೊಲ್ಲಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು; ಆದರೆ ಹಾಲನ್ನೂ ಕೊಲ್ಲಲಾಗುತ್ತಿದೆ… Continue Reading →

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 1

ಮನುಷ್ಯನೆಸಗಿದ ಪ್ರಮಾದಗಳ ಪರಂಪರೆಯನ್ನೊಮ್ಮೆ ಅವಲೋಕಿಸಿ, ಬಳಿಕವಷ್ಟೇ ‘ಹಾಲು ಕುಡಿಯಬೇಕೇ, ಬೇಡವೇ?’ ‘ಕುಡಿಯವುದಿದ್ದರೆ ಯಾವ ಹಾಲು ಕುಡಿಯಬೇಕು?’ ಎಂಬ ಬಗ್ಗೆ ನಿರ್ಧರಿಸೋಣ. ಮುಂದೆ ಓದಿ >>

Layoff : ಭಾರತಕ್ಕೆ ಮರಳಲು ಭಾರತೀಯರಿಗೆ ವಿಧಿಯ ಸೂಚನೆಯೇ..!?

ಹಳ್ಳಿಗಳಲ್ಲಿ ಭಾರತವಿದೆ. ಅಲ್ಲಿ ಭಾರತೀಯತೆ ಇನ್ನೂ ಉಸಿರು ಹಿಡಿದುಕೊಂಡಿದೆ! ಆದರೆ ದಿನೇ ದಿನೇ, ಕ್ಷಣೇ ಕ್ಷಣೇ ಭಾರತವು ಕ್ಷೀಣಿಸುತ್ತಿದೆ; ಇಂಡಿಯಾವು ಬಲಕಾಯಿಸುತ್ತಿದೆ. ನಗರಗಳು ಬೆಳೆಯುತ್ತಿವೆ; ಹಳ್ಳಿಗಳು ಕ್ಷಯಿಸುತ್ತಿವೆ! ಹಳ್ಳಿಗಳೆಲ್ಲ ಪೇಟೆಗಳಾಗಿ ಬದಲಾಗುತ್ತಿವೆ. ಮುಂದೆ ಓದಿ >>

ಚಿಟ್ಟಾಣಿ; ಕಲಾತ್ರಿವಿಕ್ರಮನೊಳಗಿನ ವಿನಮ್ರ ವಾಮನ!

ಚಿಟ್ಟಾಣಿಯವರು ಬೀಸಣಿಗೆಯವನ ಬಳಿ ಸಾರಿ ‘ಇತ್ತ ತಾ ಬೀಸಣಿಗೆಯನ್ನು’ ಎಂದು ಪ್ರೇಮಾಧಿಕಾರವಾಣಿಯಲ್ಲಿ ಕೇಳಿಯಾಯಿತು; ಅವನು ನೀಡಲು ಹಿಂದೆ ಮುಂದೆ ನೋಡುವಾಗ, ಪ್ರೇಮಬಲಪ್ರಯೋಗದಲ್ಲಿ ಬೀಸಣಿಗೆಯನ್ನು ಸೆಳೆದು ಕೈವಶಗೈದೂ ಆಯಿತು! ಮುಂದೆ ನರ್ತನಲೋಕದ ನಿತ್ಯಚಕ್ರವರ್ತಿಯಿಂದ ತನ್ನ ಗುರುವಿಗೆ “ಚಾಮರಸೇವಾಂ ಅವಧಾರಯ!”.
ಗುರುವಿಗೋ, ಬೀಸಿ ಬರುವ ಗಾಳಿಯಲ್ಲಿ ಆ ಮಹಾಮೇರುಶೃಂಗದ ವಿನಮ್ರ~ವಿನಯಾನುಭೂತಿ! ಮುಂದೆ ಓದಿ >>

ಭಾರತವು ಕಳೆದುಕೊಂಡ ಭಾರತರತ್ನ; ಲಾಲ್ ಬಹಾದ್ದೂರ್ ಶಾಸ್ತ್ರಿ..!

ದೇಶ-ದೇಶಗಳ ನಡುವೆ ದ್ವೇಷವು ಹೊತ್ತಿ, ಉರಿಯುತ್ತಿರುವ ಸನ್ನಿವೇಶದಲ್ಲಿ, ಸಮಯವಲ್ಲದ ಸಮಯದಲ್ಲಿ, ತಮ್ಮದಲ್ಲದ ದೇಶದಲ್ಲಿ, ಸಹಜವಲ್ಲದ ರೀತಿಯಲ್ಲಿ, ಯಾರೂ ಊಹಿಸಲೂ ಸಾಧ್ಯವಿಲ್ಲದಂತೆ ನಡೆದ ಅವರ ದೇಹಾಂತವು ದೇಶಕ್ಕಾದ ಅತಿ ದೊಡ್ಡ ಅನ್ಯಾಯ! ಭಾರತದ ಸರ್ವೋತ್ತಮ ಪ್ರಧಾನಿಯನ್ನು ದೇಶದ ವೈರಿಗಳು ಮತ್ತು ದೇಶದ್ರೋಹಿಗಳು ಸೇರಿ, ಸಂಚು ಹೂಡಿ, ಮುಗಿಸಿದರೇ ಎಂಬುದು ಇಂದಿಗೂ ದೇಶಭಕ್ತರೆಲ್ಲರ ಹೃದಯವನ್ನು ಕಾಡುವ-ಸುಡುವ ಪ್ರಶ್ನೆ‌. ಮುಂದೆ ಓದಿ >>

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑