ಏಕಃ ಸ್ವಾದು ನ ಭುಂಜೀತ..!

ಗುರುವಾರ, ಫೆಬ್ರವರಿ 25th, 2010 - - 18 Comments

” ಏಕಃ ಸ್ವಾದು ನ ಭುಂಜೀತ ” ಸಿಹಿ ವಸ್ತುವನ್ನು ಹಂಚಿ ತಿನ್ನಬೇಕು, ಒಬ್ಬನೇ ತಿನ್ನ ಬಾರದು..!

ಶ್ರೀ ವಾಲ್ಮೀಕಿರಾಮಾಯಣವನ್ನು ಅವಲೋಕಿಸುತ್ತಿರುವಾಗ ನಮ್ಮ ಮನದಲ್ಲಿ ಮತ್ತೆ ಮತ್ತೆ ಸುಳಿದಾಡುವ ಆರ್ಯೋಕ್ತಿಯಿದು..!

ಅಕ್ಕರದಬರಹಕ್ಕೆ ಮೊದಲಿಗನದಾರು..?

ಅಕ್ಕರದ ಬರಹಕ್ಕೆ ಮೊದಲಿಗನದಾರು..?

ಅಂತರ್ಮುಖಿಯಾಗಿ ಅನಾದಿನಾಯಕನ ಜೀವನದರ್ಶನ ಮಾಡಿದ ಆದಿಕವಿಯ ಅಂತರಂಗದಲ್ಲಿಯೂ ಇದೇ ಭಾವ ಮೂಡಿರಬೇಕು..!!

ಮಧುರ – ಮಧುರವಾದ ಮಧುರಾಧಿಪತಿಯ ಕಥೆಯನ್ನು ತಾವು ಉಂಡಿದ್ದು ಮಾತ್ರವಲ್ಲ,

ಶ್ರೀರಾಮಾಯಣದ ಮೂಲಕ ಲೋಕಕ್ಕೆ ಉಣಬಡಿಸಿದರು..!

ರುಚಿ – ರುಚಿಯಾದ ಭಕ್ಷ್ಯ – ಭೋಜ್ಯಗಳನ್ನು ಹೊನ್ನ- ಹರಿವಾಣದಲ್ಲಿಟ್ಟು ಬಡಿಸುವುದಿಲ್ಲವೇ..?

ಹಾಗೆಯೇ ರಸಮಯವಾದ ತಮ್ಮ ಭಾವಗಳನ್ನು – ಅನುಭವಗಳನ್ನು ‘ಸು-ವರ್ಣ’ ಪಾತ್ರದಲ್ಲಿಟ್ಟು ಯುಗ – ಯುಗಗಳ ಜನವೃಂದಕ್ಕೆ ಬಡಿಸಿದರು..!!

ಆದರಿಂದು ಸುಸಂಸ್ಕೃತವಾದ ಭಾವಗಳು ವಿರಳವಾಗುತ್ತಿವೆ..!

ಸಂಸ್ಕೃತಭಾಷೆಯೂ ಮರೆಯಾಗುತ್ತಿದೆ.

ಪರಿಣಾಮವಾಗಿ ಇಂದಿನ ಪೀಳಿಗೆಯೇ ಮೂಲ ‘ರಾಮಾಯಣದಿಂದ’ ವಂಚಿತವಾಗುತ್ತಿದೆ..!

ಈ ಹಿನ್ನೆಲೆಯಲ್ಲಿ ಮೂಲವಾಲ್ಮೀಕಿರಾಮಾಯಣದ ಸವಿಯನ್ನು ಸಾಮಾನ್ಯ ಜನತೆಗೆ ಉಣಬಡಿಸುವ ಪ್ರಯತ್ನವಿದು..!

ರಾಮಾಯಣವನ್ನು ಮೊದಲಬಾರಿಗೆ ಸಮಾಜದ ಮುಂದೆ ಪ್ರಸ್ತುತಪಡಿಸಿದ ಲವ – ಕುಶರು ಮಹಾ ಕವಿ ವಾಲ್ಮೀಕಿಯನ್ನು ಕಂಡಿದ್ದರು..!

ಹಾಗೆಯೇ ಮಹಾನಾಯಕ ಶ್ರೀರಾಮನನ್ನೂ ಕಣ್ಣಾರೆ ಕಂಡಿದ್ದರು..!

ಇಂದು ಅವರಿಬ್ಬರೂ ನಮ್ಮ ಚರ್ಮ ಚಕ್ಷುಗಳ ಮುಂದಿಲ್ಲ..!

ನಮ್ಮ ಭಾಗಕ್ಕೆ ಇಂದು ಉಳಿದಿರುವುದು ವಾಲ್ಮೀಕಿಪ್ರಣೀತವಾದ ಶಬ್ದರಾಶಿ ಮಾತ್ರವೇ..!

ವಾಲ್ಮೀಕಿಗಳ ಅಮರ ‘ಪದ’ಗಳ ಮೂಲಕವೇ ಶ್ರೀರಾಮನ ಅಮರ ‘ಪದ’ಗಳನ್ನು ಸೇರಬೇಕಾಗಿದೆ..!!!

ಸಾಗರದಾಳದ, ಹಿಮಾಲಯದೆತ್ತರದ, ಆಗಸದಗಲದ ಶ್ರೀರಾಮನ ವ್ಯಕ್ತಿತ್ವವನ್ನು ವಾಲ್ಮೀಕಿಗಳೂ ಸಂಪೂರ್ಣವಾಗಿ ನೋಡಿರಲಾರರು..!

ಅವರ ಅರಿವಿಗದೆಷ್ಟು ಬಂದಿತೋ, ಅದಷ್ಟನ್ನೂ ಶಬ್ದಗಳಲ್ಲಿ ತರಲು ಅವರಿಗೆ ಸಾಧ್ಯವಾಗಿರಲಾರದು..!

ವಾಲ್ಮೀಕಿಗಳ ಶಬ್ದಗಳಲ್ಲಿ ತುಂಬಿರುವ ಭಾವವೆಲ್ಲವನ್ನೂ ಭಾವಿಸಲು ನಮ್ಮಿಂದ ಸಾಧ್ಯವಾಗಿರಲಾರದು..!

ರಾಮಾಯಣವು ನಮ್ಮಲ್ಲಿ ಮೂಡಿಸಿದ ಭಾವಗಳೆಲ್ಲವೂ ಹೇಗೂ ನಮ್ಮ ಶಬ್ದಗಳಲ್ಲಿ ಬರಲಾರವು..!!

ನಮ್ಮ ಶಬ್ದಗಳಲ್ಲಿ ಹುದುಗಿರಬಹುದಾದ ಭಾವಗಳೆಲ್ಲವೂ ನಿಮ್ಮನ್ನು ತಲುಪಲಾರವು..!

ಓದುಗನ ಹೃದಯವನ್ನು ತಲುಪಿದ ಭಾವಗಳಲ್ಲಿಯೂ ಕೂಡಾ ಎಲ್ಲವೂ ಬದುಕಿನಲ್ಲಿ ಅನುಷ್ಠಾನಕ್ಕೆ ಬರಲಾರವು..!

ಇಷ್ಟೆಲ್ಲ ಮಿತಿಗಳ ಮಧ್ಯದಲ್ಲಿಯೂ ರಾಮಾಯಣದಲ್ಲಿ ನಾವು ಅನುಭವಿಸಿದ ಸವಿಯನ್ನು ಈ ವಾರದಿಂದ ನಿಮ್ಮೊಡನೆ ಹಂಚಿಕೊಳ್ಳಬಯಸುವೆವು….!

ಏಕೆಂದರೆ ‘ಏಕಃ ಸ್ವಾದು ನ ಭುಂಜೀತ’….

  • Raghavendra Narayana

    ಶ್ರೀ ಗುರುಭ್ಯೋ ನಮಃ
    ಗುರುಗಳೇ ಅನ೦ತ ಅನ೦ತ ಧನ್ಯವಾದಗಳು.
    ನಮಗೆ ಗೊತ್ತಿರುವ ರಾಮ, ರಾಮನೆ ಅಲ್ಲ. ರಾಮನನ್ನು ಸೂಪರ್ ಹೀರೊ ಮಾಡಲು ಹೋಗಿ ಕೆಲವರು, ಖಳನಾಯಕ ರಾವಣನನ್ನು ನಾಯಕ ಮಾಡಲು ಹೋಗಿ ಹಲವರು, ಬೇರೆ ಪಾತ್ರಗಳನ್ನು ವಿಜೃ೦ಬಿಸಲು ಹೋಗಿ ಕೆಲವರು – ಕೋದ೦ಡರಾಮನನ್ನು ಕೋಡ೦ಗಿರಾಮನಾಗಿ ಮಾಡಿದ್ದಾರೆ.
    ನಿಜವಾದ ರಾಮನನ್ನು, ನಿಜವಾದ ರಾಮಾಯಣವನ್ನು, ಗುರುಗಳ ಪ್ರವಚನಗಳ ಮೂಲಕ ಅಲ್ಪ ಸ್ವಲ್ಪ ಅರಿತಿದ್ದೇವೆ. ಅಜಗಜಾ೦ತರ.
    ಆತ್ಮಾರಾಮ ನಮ್ಮ ಆತ್ಮದಲ್ಲಿ ನೆಲೆಗೊಳ್ಳಲಿ, ರಾಮ ಆತ್ಮ – ಆತ್ಮ ರಾಮವಾಗಲಿ.. “ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು, ಎಲ್ಲೆಲ್ಲಿ ನೋಡಿದರು.. ರಘುರಾಮ”.
    “ಶ್ರೀರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ……”
    .
    ಸರ್ವ ಶಿವ೦. “..ಲಿ೦ಗ ಮೆಚ್ಚಿ ಅಹುದಹುದೆನಬೇಕು..”

  • nandaja haregoppa

    Hare raama

    idakkintha madhuravada suddi berilla,naavu nijakku

    adrustashaligalu

    pranamagalu

  • govindaraj korikkar

    Hare Raama,Bengalore Chaturmasyagalalli Ramayana Pravachana kelidde.Samsthana eke pravachanavannu likhitha roopadalli tharabaradu,Ramayana hege adbhuthavo,pravachanavoo adbhutha emba bayake manassinalli hadu hogithu.Karuvina kare G
    ovige kelisidanthide

  • chs bhat

    ಶ್ರೀಗಳು ಹರೇರಾಮನನ್ನು ಶಬ್ದ ರೂಪದಲ್ಲಿ ಹರೇರಾಮದಲ್ಲಿ ಅವತರಿಸುವವರಿದ್ದೀರೆಂದು ತಿಳಿದು ತುಂಬಾ ಸಂತೋಷವಾಗುತ್ತಿದೆ. ಶ್ರೀಗಳ ಪ್ರವಚನ ಕೇಳುವ ಭಾಗ್ಯ ಸಿಗದವರಿಗೂ ಈಗ ಮತ್ತೊಂದು ಅವಕಾಶ ಬಂದಿದೆ. ವಾಲ್ಮೀಕಿ ಶ್ರೀಗಳ ಮೂಲಕ ನಮ್ಮನ್ನು ತಲುಪಲಿದ್ದಾರೆ. ಇದೊಂದುಭಾಗ್ಯ. ಹರೇರಾಮ.

  • Sharada Jayagovind

    Samsthana , Ramanama payasa saviyalu kaadiruvevu. Hare Rama

  • RAVINDRA T L BHATT

    ನಿಜ, ಹೇಳಲೇನು? ಗುರೂಜಿ,
    ನಾವೆಲ್ಲ ಪಾಮರರು, ಬಹಳ ಹಸಿದಿದ್ದೇವೆ.
    ನಮ್ಮ ಈ ಹಸಿವನ್ನು ಅರಿತವರು ನೀವೇ.
    ಮಗುವು ತಾಯಿಯ ಕೇಳುವ ಮೊದಲೇ, ವಾತ್ಸಲ್ಯಮಯಿ ಅಮ್ಮ ಉಣ ಬಡಿಸುವಂತೆ,
    ನಮ್ಮೆಲ್ಲರ ಆಂತರ್ಯವ ಅರಿತವರು ನೀವು.
    ರಾಮಾಯಣದ ಸು-ವರ್ಣದ ಸವಿ ಸಿಹಿಯ ಊಟ ನೀಡುವ ಸವಿ ಸುದ್ದಿಯ
    ತಂದ “ಹರೇರಾಮ” ಗೆ ನನ್ನ ನಮನಗಳು,
    ಶ್ರೀಗಳ ಪದಕಮಲಕೆ ನನ್ನ ಹೃತ್ಪೂರ್ವಕ ವಂದನೆಗಳು.

  • Roopa Bhat

    ತುಂಬಾ ಸುಂದರವಾಗಿ ಬಂದಿದೆ ಗುರುಗಳೇ. ನಿಮ್ಮನ್ನು ಪಡೆದ ನಾವು ಧನ್ಯರು

  • Sowmya Anegoli

    Hare Raama Gurugale,
    Tumbaa Tumbaa Khushiyagtha eddu.

  • sree guru

    ಸಂಸ್ಥಾನ,ವಾಲ್ಮೀಕಿ ರಾಮಾಯಣ ಮಧುರ ,ಅದು ನಿಮ್ಮ ಮೂಲಕ ಕೇಳುವುದಾದರೆ ಅತಿಮಧುರ.
    ಈ ಅಮೃತವು ನಮ್ಮೆಲ್ಲರಿಗೂ ಮೂಲರಾಮನ ಪಾದಸ್ಪರ್ಶ ಮಾಡಿಸಲಿ.
    ಹರೇರಾಮ

  • vdaithota

    ಅದ್ಬುತ ನಾಟಕದ ಅಮೃತ ಸಾರವ ಗುರು ಮುಖೇನ ನೀಡಲಿರುವ ಪ್ರಿಯ ರಾಮನಿಗೆ..
    ಉಣಿಸುವ ಶ್ರೀ ಕರಗಳಿಗೆ….
    ಉಣ್ಣುವ ಭಾಗ್ಯ ಪಡೆದ ಈ ಭಕ್ತರಿಂದಾ….
    ಹೃದಯ ಪೂರ್ವಕ ವಂದನೆಗಳು…..

    • Raghavendra Narayana

      ಅದ್ಬುತ

  • Raghavendra Narayana

    ನಾರಾಯಣನ ರಾಮಾಯಣದ ಗ೦ಗೆ ನಮ್ಮೆಲ್ಲರ ಮುದುಡಿರುವ ಮುಖ ಕಮಲಗಳನ್ನು ಅರಳಿಸಲಿ,
    ಹುಚ್ಚ ಬಯಕೆಗಳ ತೀವ್ರತೆಯಿ೦ದ ನಲುಗಿರುವ ಮನಗಳಿಗೆ ಚೈತನ್ಯ ನೀಡಲಿ. ಜೀವನದ ಅರ್ಥ ಅರಿಯುವ೦ತಾಗಲಿ. ಆನ೦ದ ಗ೦ಗೆ ಎಲ್ಲೆಡೆ ಹರಿಯಲಿ – ಶೀತಲ ಅನುಭವ ಎಲ್ಲರಿಗೂ ಆಗಲಿ.
    .
    “ಸಾಗರದಾಳದ, ಹಿಮಾಲಯದೆತ್ತರದ, ಆಗಸದಗಲದ ಶ್ರೀರಾಮನ..”
    ರಾಮ ನಾಮವೆ೦ಬ ಸುಳಿಗೆ ಸಿಕ್ಕುವ ಸೌಭಾಗ್ಯ ಸಿಗಲಿ, ಆಳ ತಿಳಿಯಲಿ.
    ರಾಮ ನಾಮವೆ೦ಬ ಬಾಣ ಹೃದಯವನ್ನು ಆಗಸದಲಿ ಹಾರಾಡಿಸಲಿ, ಅಗಲ ತಿಳಿಯಲಿ.
    ರಾಮ ನಾಮವೆ೦ಬ ಊರುಗೋಲು, ಹಿಮಾಲಯದ ತುತ್ತ ತುದಿಯಲ್ಲಿನ ಶಿವಾಲಯವ ದರ್ಶನ ಮಾಡಿಸಲಿ, ಎತ್ತರ ತಿಳಿಯಲಿ.
    .
    ಮನ ಮತ್ತೆ ಮಗುವಾಗಲಿ, ನಗು ಎಲ್ಲೆಲ್ಲೂ ಇರಲಿ. ಮುಗ್ಧತೆ ಪುರುಷನ ಮೂಲರೂಪವೆ ಸೃಷ್ಟಿಯಲಿ..?
    ಹಲವಾರು ವಿಷಯಗಳಲ್ಲಿ ಶಿವನಲ್ಲೂ ರಾಮನಲ್ಲೂ ಬಹಳ ಹೋಲಿಕೆ ಇರುವ೦ತೆ ತೋರುತ್ತದೆ..?

  • Anuradha Parvathi

    ಖುಷಿಯಿಂದ ಕುಣಿದಾಡುವಂತಾಗಿದೆ.

    • seetharama bhat

      Harerama,

      chathurmasada nenapu marukalisuthide,
      mansige muda needuthide
      navu pravachanakke hajar guruji,

  • Raghava Hegde

    ಹರೇರಾಮ,

    ವಾಲ್ಮೀಕಿ ಗಿರಿ ಸಂಭೂತ ರಾಮ ಸಾಗರ ಗಾಮಿನೀ ಭುನಾದಿ ಭುವನಂ ಪುಣ್ಯಾಂ ರಾಮಾಯಣ ಮಹಾನದೀಂ|

    • Shreekant Hegde

      ಕ್ಷಮಿಸಿ, ಸ್ವಲ್ಪ ಸರಿಮಾಡ್ತೆ…… ಸಂಭೂತಾ,……….. ಪುನಾತಿ (ಭುನಾದಿ)… ಪುಣ್ಯಾ …. .. ನದೀ |

  • Shreekant Hegde

    ಹರೇ ರಾಮ, ಗುರುಗಳೇ

    ಎಕಃ ಸ್ವಾದು ನ ಭುಂಜೀತ……….. ಮುಂದಿನ ಪಾದಗಳನ್ನ ಕಲಿಸಿ ಗುರುಗಳೇ ! ಮತೋಯ್ದು.

    • Shreekant Hegde

      ಮರ್ತು ಹೋಯ್ದು.

Powered By Indic IME