ಲೇಖಕರು ಮಂಗಳೂರು ಹೋಬಳಿಯ ಪಟಿಕಲ್ಲಿನವರು ಕುಟುಂಬದವರು. 1976ರಲ್ಲಿ ಗಣಿತ ಸ್ನಾತಕೋತ್ತರ – ಚಿನ್ನದ ಪದಕ / ಪ್ರಥಮ ರೇಂಕ್ ಮೂಲಕ ಗಳಿಸಿದರು. ಹದಿನಾರು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ದಲ್ಲಿ ವಿಜ್ಞಾನಿಯಾಗಿದ್ದು, 1995ರಲ್ಲಿ ಅಮೇರಿಕಾ ದೇಶದಲ್ಲಿ ಸಾಫ್ಟ್-ವೇರ್ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. 2001ರಲ್ಲಿ ಮಂಗಳೂರಿನ ನಂತೂರಿನಲ್ಲಿ ಶ್ರೀ ಭಾರತೀ ಕಾಲೇಜ್ ಆರಂಭವಾದಾಗ ಶ್ರೀಯುತರು ಪ್ರಾಂಶುಪಾಲರಾಗಿ ನಿಯುಕ್ತಿಗೊಂಡರು. 2006ರಲ್ಲಿ ಸ್ವನಿವೃತ್ತಿ ಹೊಂದಿದ ಶ್ರೀಯುತರು ಪ್ರಸ್ತುತ ಬೆಂಗಳೂರಿನ ಕಂಪೆನಿಯೊಂದರಲ್ಲಿ ತಂತ್ರಜ್ಞಾನ ಸಲಹಾಗಾರರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅಗಾಧ ಗುರುಭಕ್ತಿಯನ್ನು ಹೊಂದಿರುವ ಶ್ರೀಯುತರಿಗೆ ಶ್ರೇಯಸ್ಸು ಉಂಟಾಗಲಿ ಎಂಬುದು ನಮ್ಮ ಆಶಯ.

ಸಂ.

ಸಮಾಜದ ವಿದ್ಯಾರ್ಥಿಗಳಿಗೆ ಶ್ರೀಗುರುಗಳ ಅನುಗ್ರಹ ರೂಪವಾಗಿ ಸ್ಥಾಪಿಸಲ್ಪಟ್ಟ ಮಂಗಳೂರಿನ ಶ್ರೀಭಾರತೀ ಕಾಲೇಜು ’ಗುರುಗಳ ಕಂಪ್ಯೂಟರ್ ಕಾಲೇಜು’ ಎಂದೇ ಪ್ರಸಿದ್ಧಿ ಪಡೆದಿರುವುದು ತಮಗೆಲ್ಲಾ ತಿಳಿದ ವಿಚಾರ. ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉತ್ತಮ ಹುದ್ದೆಗಳಲ್ಲಿ ಉದ್ಯೋಗಿಗಳಾಗಿದ್ದು ಭವಿಷ್ಯವನ್ನು ಹೊಂದಿದ್ದಾರೆ. ಪೂರ್ವದ ಜಪಾನ್ ನಿಂದ ಪಶ್ಚಿಮದ ಅಮೇರಿಕಾ ವರೆಗೆ ವಿದೇಶಗಳಲ್ಲೂ ಅತ್ಯುತ್ತಮ ಸ್ಥಾನಮಾನಗಳನ್ನು ಪಡೆದಿರುತ್ತಾರೆ. ಇಂತಹಾ ಪ್ರತಿಷ್ಠಿತ ಕಾಲೇಜಿನ ಪ್ರಥಮ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸುವ ಸುವರ್ಣಾವಕಾಶವನ್ನು ಶ್ರೀಗುರುಗಳು ನನಗೆ ದಯಪಾಲಿಸಿ, ’ಯಶಸ್ಸು ನಿನ್ನದಾಗಲಿ’ ಅಂತ ಆಶೀರ್ವದಿಸಿದಾಗ ನನ್ನ ಸಾಮರ್ಥ್ಯದ ಬಗ್ಗೆ ನನಗೇ ಅನುಮಾನವಿತ್ತು. ಆದರೆ, ಗುರುಗಳ ಅನುಗ್ರಹ ನನ್ನ ಮೇಲೆ ಸದಾ ಇದ್ದುದರಿಂದ ಕಾಲೇಜು ಿನೇ ದಿನೇ ಪ್ರಸಿದ್ಧವಾಗುತ್ತಾ ಬಂತು. ಅಲ್ಲಿ ಕಲಿತು ಜೀವನವನ್ನು ಭದ್ರಪಡಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಅತಿ ದೊಡ್ಡದು.

ಶ್ರೀಯುತ ಪಟಿಕಲ್ಲು ಶಂಕರ ಭಟ್, ಬೆಂಗಳೂರು

ಶ್ರೀಯುತ ಪಟಿಕಲ್ಲು ಶಂಕರ ಭಟ್, ಬೆಂಗಳೂರು

ನನ್ನ ಮೂಲ ಉದ್ಯೋಗವಾದ Software Development ಮತ್ತೆ ನನ್ನನ್ನು ಸೆಳೆಯತೊಡಗಿದಾಗ ಆ ಬಯಕೆಯನ್ನು ಶ್ರೀ ಗುರುಗಳಲ್ಲಿ ಅರಿಕೆ ಮಾಡಿಕೊಂಡೆ. ಆ ದಿನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನರ ಸನ್ನಿಧಿಯಲ್ಲಿ ಗುರುಗಳ ಮೊಕ್ಕಾಂ. ಗುರುಗಳು ಹೇಳಿದ ಮಾತುಗಳು ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೆ ನೆಲೆಸಿವೆ. “ಶಂಕರಾ, ನಿನ್ನ ಭವಿಷ್ಯದ ದೃಷ್ಟಿಯಿಂದ ನೀನು ಹೋಗುವುದಾದರೆ ನಾವು ಅಡ್ಡಿಮಾಡುವುದಿಲ್ಲ. ಆದರೆ, ನಮ್ಮ ಮನಸ್ಸಿನಲ್ಲಿ ಮಾತ್ರ ನೀನು ಪ್ರಾಂಶುಪಾಲನೇ. ನಿನಗೆ ಒಳ್ಳೆಯದಾಗಲಿ’ – ಶ್ರೀಗುರುಗಳ ಅನುಮತಿ ಪಡೆದು ಅವರ ಪಾದಗಳಲ್ಲಿ ನನ್ನ ಹಣೆಯನ್ನಿರಿಸಿ ನಸ್ಕರಿಸಿದೆ. ಆಗ ನನಗಾದ ದಿವ್ಯ ಅನುಭವಗಳನ್ನು ಶಬ್ದಗಳಲ್ಲಿ ವಿವರಿಸಲು ಅಸಾಧ್ಯ.

“ಚರಣಾರವಿಂದಗಳು” ಅಂತ ಯಾಕೆ ಹೇಳುತ್ತಾರೆ ಅಂತ ನನ್ನ ಅನುಭವಕ್ಕೆ ಬಂತು. ಹಾಗೆ ಹಣೆಯ ಮೂಲಕ ನನ್ನ ಹೃದಯಕ್ಕಿಳಿದ ಶ್ರೀಚರಣ ನನ್ನ ಹೃದಯದಲ್ಲಿ ನೆಲೆಸಿದೆ. ನನ್ನ ಕೊನೆಯುಸಿರಿನ ತನಕವೂ ಅಲ್ಲೇ ಇರುತ್ತದೆ. ನನ್ನು ಎಲ್ಲೇ ಇದ್ದರೂ ನನ್ನ ಹೃದಯಸ್ಥವಾಗಿರುವ ಶ್ರೀಚರಣದ ಮೂಲಕಪ್ರತಿ ದಿನವೂ ಅನೇಕ ಬಾರಿ ಶ್ರೀಗುರುಗಳ ದರ್ಶನ ನನಗೆ ಆಗುತ್ತಲೇ ಇರುತ್ತದೆ.

ಇನ್ನು ನನ್ನ ಬಾಳಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರೀಗುರುಗಳು ತೋರಿದ ಮಾತೃವಾತ್ಸಲ್ಯವು ಕೂಡಾ ಮಾತುಗಳಿಗೆ ಮೀರಿದ್ದು.

ಇದು ನನ್ನ ಬಾಳ ಬೆಳಕಾದ ಶ್ರೀಚರಣ ಮಹಿಮೆ.

|| ಹರೇರಾಮ ||

Facebook Comments Box